ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ
೨೭೨
ಇಂದ್ರಜಿತು ಕಾಳಗ
ರಾವಣನ ಮಗ ಇಂದ್ರಜಿತುವಿನೊಡನೆ ಲಕ್ಷ್ಮಣ ಮತ್ತು ಅಂಗದರ ಯುದ್ಧ; ಇಂದ್ರಜಿತುವು ಅಂತರ್ಧಾನನಾದುದು (೧-೧೯). ರಾಮ- ಲಕ್ಷ್ಮಣರನ್ನು ಇಂದ್ರಜಿತುವು ಹೊಡೆದು ಕೆಳಗುರುಳಿಸಿದುದು (೨೦-೨೬).
03272001 ಮಾರ್ಕಂಡೇಯ ಉವಾಚ|
03272001a ತತಃ ಶ್ರುತ್ವಾ ಹತಂ ಸಂಖ್ಯೇ ಕುಂಭಕರ್ಣಂ ಸಹಾನುಗಂ|
03272001c ಪ್ರಹಸ್ತಂ ಚ ಮಹೇಷ್ವಾಸಂ ಧೂಮ್ರಾಕ್ಷಂ ಚಾತಿತೇಜಸಂ||
03272002a ಪುತ್ರಮಿಂದ್ರಜಿತಂ ಶೂರಂ ರಾವಣಃ ಪ್ರತ್ಯಭಾಷತ|
03272002c ಜಹಿ ರಾಮಮಮಿತ್ರಘ್ನ ಸುಗ್ರೀವಂ ಚ ಸಲಕ್ಷ್ಮಣಂ||
ಮಾರ್ಕಂಡೇಯನು ಹೇಳಿದನು: “ಆಗ ಅನುಯಾಯಿಗಳಾದ ಮಹೇಷ್ವಾಸ ಪ್ರಹಸ್ತ ಮತ್ತು ಅತಿತೇಜಸ ಧೂಮ್ರಾಕ್ಷರೊಂದಿಗೆ ಕುಂಭಕರ್ಣನು ರಣದಲ್ಲಿ ಹತನಾದುದನ್ನು ಕೇಳಿ ರಾವಣನು ಶೂರ, ಪುತ್ರ ಇಂದ್ರಜಿತುವಿಗೆ ಹೇಳಿದನು: “ಅಮಿತ್ರಘ್ನ! ಸುಗ್ರೀವ-ಸೌಮಿತ್ರಿಯರೊಂದಿಗೆ ರಾಮನನ್ನು ಕೊಲ್ಲು!
03272003a ತ್ವಯಾ ಹಿ ಮಮ ಸತ್ಪುತ್ರ ಯಶೋ ದೀಪ್ತಮುಪಾರ್ಜಿತಂ|
03272003c ಜಿತ್ವಾ ವಜ್ರಧರಂ ಸಂಖ್ಯೇ ಸಹಸ್ರಾಕ್ಷಂ ಶಚೀಪತಿಂ||
ಶಚೀಪತಿ ಸಹಸ್ರಾಕ್ಷ ವಜ್ರಧರನನ್ನು ರಣದಲ್ಲಿ ಗೆದ್ದು ಬೆಳಗುವ ಯಶಸ್ಸನ್ನು ಗಳಿಸಿರುವ ನೀನೇ ನನ್ನ ಸತ್ಪುತ್ರ!
03272004a ಅಂತರ್ಹಿತಃ ಪ್ರಕಾಶೋ ವಾ ದಿವ್ಯೈರ್ದತ್ತವರೈಃ ಶರೈಃ|
03272004c ಜಹಿ ಶತ್ರೂನಮಿತ್ರಘ್ನ ಮಮ ಶಸ್ತ್ರಭೃತಾಂ ವರ||
ಅಮಿತ್ರಘ್ನ! ಶಸ್ತ್ರಭೃತರಲ್ಲಿ ಶ್ರೇಷ್ಠ! ಅದೃಶ್ಯನಾಗಿ ಅಥವಾ ದೃಶ್ಯನಾಗಿ ಪಡೆದಿರುವ ದಿವ್ಯವಾದ ಶ್ರೇಷ್ಠ ಶರಗಳಿಂದ ನನ್ನ ಶತ್ರುಗಳನ್ನು ಕೊಲ್ಲು.
03272005a ರಾಮಲಕ್ಷ್ಮಣಸುಗ್ರೀವಾಃ ಶರಸ್ಪರ್ಶಂ ನ ತೇಽನಘ|
03272005c ಸಮರ್ಥಾಃ ಪ್ರತಿಸಂಸೋಢುಂ ಕುತಸ್ತದನುಯಾಯಿನಃ||
ಅನಘ! ರಾಮ, ಲಕ್ಷ್ಮಣ, ಸುಗ್ರೀವರು ನಿನ್ನ ಬಾಣಗಳ ಸ್ಪರ್ಷವನ್ನು ಸಹಿಸಲು ಅಸಮರ್ಥರು. ಇನ್ನು ಅವರ ಅನುಯಾಯಿಗಳನ್ನು ಬಿಡು!
03272006a ಅಕೃತಾ ಯಾ ಪ್ರಹಸ್ತೇನ ಕುಂಭಕರ್ಣೇನ ಚಾನಘ|
03272006c ಖರಸ್ಯಾಪಚಿತಿಃ ಸಂಖ್ಯೇ ತಾಂ ಗಚ್ಚಸ್ವ ಮಹಾಭುಜ||
ಅನಘ! ಮಹಾಭುಜ! ಪ್ರಹಸ್ತ-ಕುಂಭಕರ್ಣರು ಮಾಡಲಿಕ್ಕಾಗದೇ ಇದ್ದ ಖರನ ಪ್ರತೀಕಾರವನ್ನು ರಣದಲ್ಲಿ ನೀನೇ ಪೂರೈಸಬೇಕು. ಹೋಗು!
03272007a ತ್ವಮದ್ಯ ನಿಶಿತೈರ್ಬಾಣೈರ್ಹತ್ವಾ ಶತ್ರೂನ್ಸಸೈನಿಕಾನ್|
03272007c ಪ್ರತಿನಂದಯ ಮಾಂ ಪುತ್ರ ಪುರಾ ಬದ್ಧ್ವೇವ ವಾಸವಂ||
ಹಿಂದೆ ವಾಸವನನ್ನು ಸೆರೆಹಿಡಿದಂತೆ ಇಂದು ನೀನು ಹರಿತ ಬಾಣಗಳಿಂದ ಸೈನಿಕರೊಂದಿಗೆ ಶತ್ರುಗಳನ್ನು ಕೊಂದು ನನ್ನನ್ನು ಸಂತೋಷಗೊಳಿಸು.”
03272008a ಇತ್ಯುಕ್ತಃ ಸ ತಥೇತ್ಯುಕ್ತ್ವಾ ರಥಮಾಸ್ಥಾಯ ದಂಶಿತಃ|
03272008c ಪ್ರಯಯಾವಿಂದ್ರಜಿದ್ರಾಜಂಸ್ತೂರ್ಣಮಾಯೋಧನಂ ಪ್ರತಿ||
ರಾಜನ್! ಈ ಮಾತುಗಳಿಗೆ ಹಾಗೆಯೇ ಆಗಲೆಂದು ಹೇಳಿ ಇಂದ್ರಜಿತುವು ಸಂಪೂರ್ಣಕವಚಗಳನ್ನು ಧರಿಸಿ, ರಥವನ್ನೇರಿ, ರಣರಂಗದೆಡೆಗೆ ಹೊರಟನು.
03272009a ತತ್ರ ವಿಶ್ರಾವ್ಯ ವಿಸ್ಪಷ್ಟಂ ನಾಮ ರಾಕ್ಷಸಪುಂಗವಃ|
03272009c ಆಹ್ವಯಾಮಾಸ ಸಮರೇ ಲಕ್ಷ್ಮಣಂ ಶುಭಲಕ್ಷಣಂ||
ಅಲ್ಲಿ ಆ ರಾಕ್ಷಸ ಪುಂಗವನು ತನ್ನ ಹೆಸರನ್ನು ಜೋರಾಗಿ ಗರ್ಜಿಸಿ ಸಮರದಲ್ಲಿ ಶುಭಲಕ್ಷಣ ಲಕ್ಷ್ಮಣನನ್ನು ಆಹ್ವಾನಿಸಿದನು.
03272010a ತಂ ಲಕ್ಷ್ಮಣೋಽಪ್ಯಭ್ಯಧಾವತ್ಪ್ರಗೃಹ್ಯ ಸಶರಂ ಧನುಃ|
03272010c ತ್ರಾಸಯಂಸ್ತಲಘೋಷೇಣ ಸಿಂಹಃ ಕ್ಷುದ್ರಮೃಗಂ ಯಥಾ||
ಲಕ್ಷ್ಮಣನು ಶರದೊಂದಿಗೆ ಧನುವನ್ನು ಹಿಡಿದು ಚಪ್ಪಾಳೆಯ ಘೋಷದೊಂದಿಗೆ ಕ್ಷುದ್ರಮೃಗವನ್ನು ಸಿಂಹವು ಬೆದರಿಸುವಂತೆ ಓಡಿಬಂದನು.
03272011a ತಯೋಃ ಸಮಭವದ್ಯುದ್ಧಂ ಸುಮಹಜ್ಜಯಗೃದ್ಧಿನೋಃ|
03272011c ದಿವ್ಯಾಸ್ತ್ರವಿದುಷೋಸ್ತೀವ್ರಮನ್ಯೋನ್ಯಸ್ಪರ್ಧಿನೋಸ್ತದಾ||
ವಿಜಯಾಕಾಂಕ್ಷಿಗಳಾಗಿದ್ದ, ದಿವ್ಯಾಸ್ತ್ರಕೋವಿದರಾಗಿದ್ದ, ಅನ್ಯೋನ್ಯರೊಂದಿಗೆ ಸ್ಪರ್ಧಿಸುತ್ತಿದ್ದ ಅವರಿಬ್ಬರ ನಡುವೆ ಮಹಾ ಯುದ್ಧವು ನಡೆಯಿತು.
03272012a ರಾವಣಿಸ್ತು ಯದಾ ನೈನಂ ವಿಶೇಷಯತಿ ಸಾಯಕೈಃ|
03272012c ತತೋ ಗುರುತರಂ ಯತ್ನಮಾತಿಷ್ಠದ್ಬಲಿನಾಂ ವರಃ||
ತನ್ನ ಬಾಣಗಳ ಯುದ್ಧವು ಏನೂ ವಿಶೇಷವಾಗಿಲ್ಲವೆಂದಾಗ ಬಲಿಗಳಲ್ಲಿ ಶ್ರೇಷ್ಠ ರಾವಣಿಯು ಇನ್ನೂ ಗುರುತರ ಪ್ರಯತ್ನವನ್ನು ಮಾಡಿದನು.
03272013a ತತ ಏನಂ ಮಹಾವೇಗೈರರ್ದಯಾಮಾಸ ತೋಮರೈಃ|
03272013c ತಾನಾಗತಾನ್ಸ ಚಿಚ್ಚೇದ ಸೌಮಿತ್ರಿರ್ನಿಶಿತೈಃ ಶರೈಃ|
ಅವನು ಮಹಾವೇಗದ ತೋಮರಗಳಿಂದ ಅವನನ್ನು ಹೊಡೆದನು. ಆದರೆ ಸೌಮಿತ್ರಿಯು ಬರುತ್ತಿರುವವುಗಳನ್ನು ನಿಶಿತ ಶರಗಳಿಂದ ಕತ್ತರಿಸಿದನು.
03272013e ತೇ ನಿಕೃತ್ತಾಃ ಶರೈಸ್ತೀಕ್ಷ್ಣೈರ್ನ್ಯಪತನ್ವಸುಧಾತಲೇ||
03272014a ತಮಂಗದೋ ವಾಲಿಸುತಃ ಶ್ರೀಮಾನುದ್ಯಮ್ಯ ಪಾದಪಂ|
03272014c ಅಭಿದ್ರುತ್ಯ ಮಹಾವೇಗಸ್ತಾಡಯಾಮಾಸ ಮೂರ್ಧನಿ||
ಹರಿತ ಶರಗಳಿಂದ ತುಂಡರಿಸಲ್ಪಟ್ಟು ಅವು ಭೂಮಿಯ ಮೇಲೆ ಬಿದ್ದವು. ಆಗ ವಾಲಿಸುತ ಶ್ರೀಮಾನ್ ಅಂಗದನು ವೃಕ್ಷವನ್ನು ಕಿತ್ತು ಹಿಡಿದು ಓಡಿ ಬಂದು ಮಹಾವೇಗದಲ್ಲಿ ಅವನ ನೆತ್ತಿಯಮೇಲೆ ಹೊಡೆದನು.
03272015a ತಸ್ಯೇಂದ್ರಜಿದಸಂಭ್ರಾಂತಃ ಪ್ರಾಸೇನೋರಸಿ ವೀರ್ಯವಾನ್|
03272015c ಪ್ರಹರ್ತುಮೈಚ್ಚತ್ತಂ ಚಾಸ್ಯ ಪ್ರಾಸಂ ಚಿಚ್ಚೇದ ಲಕ್ಷ್ಮಣಃ||
ಸಂಭ್ರಾಂತನಾಗದೇ ವೀರ್ಯವಂತ ಇಂದ್ರಜಿತುವು ಪ್ರಾಸವೊಂದನ್ನು ಅವನ ಎದೆಗೆ ಎಸೆಯಲು, ಲಕ್ಷ್ಮಣನು ಆ ಪ್ರಾಸವನ್ನೂ ಕೂಡ ತುಂಡರಿಸಿದನು.
03272016a ತಮಭ್ಯಾಶಗತಂ ವೀರಮಂಗದಂ ರಾವಣಾತ್ಮಜಃ|
03272016c ಗದಯಾತಾಡಯತ್ಸವ್ಯೇ ಪಾರ್ಶ್ವೇ ವಾನರಪುಂಗವಂ||
ಸಮೀಪಕ್ಕೆ ಬಂದಿದ್ದ ವೀರ ವಾನರಪುಂಗವ ಅಂಗದನ ಎಡಕ್ಕೆ ರಾವಣಾತ್ಮಜನು ಗದೆಯಿಂದ ಹೊಡೆದನು.
03272017a ತಮಚಿಂತ್ಯ ಪ್ರಹಾರಂ ಸ ಬಲವಾನ್ವಾಲಿನಃ ಸುತಃ|
03272017c ಸಸರ್ಜೇಂದ್ರಜಿತಃ ಕ್ರೋಧಾಚ್ಚಾಲಸ್ಕಂಧಮಮಿತ್ರಜಿತ್||
ಆದರೆ ಬಲವಾನ್ ವಾಲಿಸುತನು ಆ ಪ್ರಹಾರಕ್ಕೆ ಮನಗೊಡಲಿಲ್ಲ. ಆ ಅಮಿತ್ರಜಿತುವು ಕ್ರೋಧದಿಂದ ಶಾಲವೃಕ್ಷದ ಕಾಂಡವನ್ನು ಇಂದ್ರಜಿತುವಿನೆಡೆಗೆ ಎಸೆದನು.
03272018a ಸೋಽಂಗದೇನ ರುಷೋತ್ಸೃಷ್ಟೋ ವಧಾಯೇಂದ್ರಜಿತಸ್ತರುಃ|
03272018c ಜಘಾನೇಂದ್ರಜಿತಃ ಪಾರ್ಥ ರಥಂ ಸಾಶ್ವಂ ಸಸಾರಥಿಂ||
ಪಾರ್ಥ! ಇಂದ್ರಜಿತುವನ್ನು ಕೊಲ್ಲಲು ಕ್ರೋಧದಿಂದ ಅಂಗದನು ಬಿಸುಟ ಆ ವೃಕ್ಷವು ಕುದುರೆಗಳು ಮತ್ತು ಸಾರಥಿಗಳೊಂದಿಗೆ ಇಂದ್ರಜಿತುವಿನ ರಥವನ್ನು ಧ್ವಂಸಮಾಡಿತು.
03272019a ತತೋ ಹತಾಶ್ವಾತ್ಪ್ರಸ್ಕಂದ್ಯ ರಥಾತ್ಸ ಹತಸಾರಥಿಃ|
03272019c ತತ್ರೈವಾಂತರ್ದಧೇ ರಾಜನ್ಮಾಯಯಾ ರಾವಣಾತ್ಮಜಃ||
ರಾಜನ್! ಅಶ್ವ-ಸಾರಥಿಗಳು ಹತರಾಗಲು ರಾವಣಾತ್ಮಜನು ಮಾಯೆಯಿಂದ ಆ ರಥದಿಂದ ಅಲ್ಲಿಯೇ ಅಂತರ್ಧಾನನಾದನು.
03272020a ಅಂತರ್ಹಿತಂ ವಿದಿತ್ವಾ ತಂ ಬಹುಮಾಯಂ ಚ ರಾಕ್ಷಸಂ|
03272020c ರಾಮಸ್ತಂ ದೇಶಮಾಗಮ್ಯ ತತ್ಸೈನ್ಯಂ ಪರ್ಯರಕ್ಷತ||
ಆ ಬಹುಮಾಯಿ ರಾಕ್ಷಸನು ಅಂತರ್ಧಾನನಾದುದನ್ನು ತಿಳಿದ ರಾಮನು ಅಲ್ಲಿಗೆ ಬಂದು ಆ ಸೇನೆಯನ್ನು ರಕ್ಷಿಸಿದನು.
03272021a ಸ ರಾಮಮುದ್ದಿಶ್ಯ ಶರೈಸ್ತತೋ ದತ್ತವರೈಸ್ತದಾ|
03272021c ವಿವ್ಯಾಧ ಸರ್ವಗಾತ್ರೇಷು ಲಕ್ಷ್ಮಣಂ ಚ ಮಹಾರಥಂ||
ಆಗ ವರದಿಂದ ಪಡೆದ ಶರಗಳಿಂದ ಅವನು ರಾಮ ಮತ್ತು ಮಹಾರಥಿ ಲಕ್ಷ್ಮಣರ ಅಂಗಾಂಗಗಳಿಗೆ ಗುರಿಯಿಟ್ಟು ಹೊಡೆದನು.
03272022a ತಮದೃಶ್ಯಂ ಶರೈಃ ಶೂರೌ ಮಾಯಯಾಂತರ್ಹಿತಂ ತದಾ|
03272022c ಯೋಧಯಾಮಾಸತುರುಭೌ ರಾವಣಿಂ ರಾಮಲಕ್ಷ್ಮಣೌ||
ಮಾಯೆಯಿಂದ ಅಂತರ್ಧಾನನಾಗಿ ಅದೃಶ್ಯನಾಗಿ ಹೋರಾಡುತ್ತಿರುವ ರಾವಣಿಯನ್ನು ಶೂರರಾದ ರಾಮ-ಲಕ್ಷ್ಮಣರು ಶರಗಳಿಂದ ಹೋರಾಡಿದರು.
03272023a ಸ ರುಷಾ ಸರ್ವಗಾತ್ರೇಷು ತಯೋಃ ಪುರುಷಸಿಂಹಯೋಃ|
03272023c ವ್ಯಸೃಜತ್ಸಾಯಕಾನ್ಭೂಯಃ ಶತಶೋಽಥ ಸಹಸ್ರಶಃ||
ಅವನು ರೋಷದಿಂದ ಆ ಪುರುಷಸಿಂಹರ ಎಲ್ಲ ಅಂಗಾಂಗಗಳ ಮೇಲೂ ನೂರಾರು ಸಹಸ್ರಾರು ಬಾಣಗಳಿಂದ ಹೊಡೆದನು.
03272024a ತಮದೃಶ್ಯಂ ವಿಚಿನ್ವಂತಃ ಸೃಜಂತಮನಿಶಂ ಶರಾನ್|
03272024c ಹರಯೋ ವಿವಿಶುರ್ವ್ಯೋಮ ಪ್ರಗೃಹ್ಯ ಮಹತೀಃ ಶಿಲಾಃ||
ಬಿಡುವಿಲ್ಲದೇ ಬಾಣಗಳನ್ನು ಬಿಡುತ್ತಿದ್ದ ಅದೃಶ್ಯನಾದ ಅವನನ್ನು ಹುಡುಕುತ್ತಾ ಕಪಿಗಳು ಮಹಾಶಿಲೆಗಳನ್ನು ಹಿಡಿದು ಆಕಾಶವನ್ನೇರಿದರು.
03272025a ತಾಂಶ್ಚ ತೌ ಚಾಪ್ಯದೃಶ್ಯಃ ಸ ಶರೈರ್ವಿವ್ಯಾಧ ರಾಕ್ಷಸಃ|
03272025c ಸ ಭೃಶಂ ತಾಡಯನ್ವೀರೋ ರಾವಣಿರ್ಮಾಯಯಾವೃತಃ||
ಆದರೆ ಅದೃಶ್ಯನಾಗಿದ್ದ ಆ ವೀರ ರಾವಣಿ ರಾಕ್ಷಸನು ಮಾಯೆಯಿಂದ ಅವರನ್ನು ಆವರಿಸಿ ಬಾಣಗಳಿಂದ ಹೊಡೆದುರುಳಿಸಿದನು.
03272026a ತೌ ಶರೈರಾಚಿತೌ ವೀರೌ ಭ್ರಾತರೌ ರಾಮಲಕ್ಷ್ಮಣೌ|
03272026c ಪೇತತುರ್ಗಗನಾದ್ಭೂಮಿಂ ಸೂರ್ಯಾಚಂದ್ರಮಸಾವಿವ||
ಆ ಶರಗಳಿಂದ ಮುಚ್ಚಲ್ಪಟ್ಟ ವೀರ ಸಹೋದರ ರಾಮಲಕ್ಷ್ಮಣರು ಸೂರ್ಯ ಚಂದ್ರರಂತೆ ಗಗನದಿಂದ ಭೂಮಿಯ ಮೇಲೆ ಬಿದ್ದರು.”
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ಇಂದ್ರಜಿದ್ಯುದ್ದೇ ದ್ವಿಸಪ್ತತ್ಯಧಿಕದ್ವಿಶತತಮೋಽಧ್ಯಾಯ:|
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ಇಂದ್ರಜಿತು ಯುದ್ಧದಲ್ಲಿ ಇನ್ನೂರಾಎಪ್ಪತ್ತೆರಡನೆಯ ಅಧ್ಯಾಯವು.
Kannada translation of Draupadiharana Parva, by Chapter:
- ಜಯದ್ರಥಾಗಮನ
- ಕೋಟಿಕಾಸ್ಯಪ್ರಶ್ನಃ
- ದ್ರೌಪದೀವಾಕ್ಯ
- ಜಯದ್ರಥದ್ರೌಪದೀಸಂವಾದ
- ದ್ರೌಪದೀಹರಣ
- ಪಾರ್ಥಾಗಮನ
- ದ್ರೌಪದೀವಾಕ್ಯ
- ಜಯದ್ರಥಪಲಾಯನ
- ಜಯದ್ರಥವಿಮೋಕ್ಷಣ
- ರಾಮೋಪಾಖ್ಯಾನ-ಯುಧಿಷ್ಠಿರಪ್ರಶ್ನಃ
- ರಾಮೋಪಾಖ್ಯಾನ-ರಾಮರಾವಣಯೋರ್ಜನ್ಮಕಥನ
- ರಾಮೋಪಾಖ್ಯಾನ-ರಾವಣಾದಿವರಪ್ರಾಪ್ತಿಃ
- ರಾಮೋಪಾಖ್ಯಾನ-ವಾನರಾದ್ಯುತ್ಪತ್ತಿಃ
- ರಾಮೋಪಾಖ್ಯಾನ-ರಾಮವನಾಭಿಗಮನ
- ರಾಮೋಪಾಖ್ಯಾನ-ಮಾರೀಚವಧ-ಸೀತಾಪಹರಣ
- ರಾಮೋಪಾಖ್ಯಾನ-ಕಬಂಧಹನನ
- ರಾಮೋಪಾಖ್ಯಾನ-ತ್ರಿಜಟಾಕೃತಸೀತಾಸಂವಾದಃ
- ರಾಮೋಪಾಖ್ಯಾನ-ಸೀತಾರಾವಣಸಂವಾದಃ
- ರಾಮೋಪಾಖ್ಯಾನ-ಹನುಮಪ್ರತ್ಯಾಗಮನ
- ರಾಮೋಪಾಖ್ಯಾನ-ಸೇತುಬಂಧನ
- ರಾಮೋಪಾಖ್ಯಾನ-ಲಂಕಾಪ್ರವೇಶ
- ರಾಮೋಪಾಖ್ಯಾನ-ರಾಮರಾವಣದ್ವಂದ್ವಯುದ್ಧಃ
- ರಾಮೋಪಾಖ್ಯಾನ-ಕುಂಭಕರ್ಣನಿರ್ಗಮನ
- ರಾಮೋಪಾಖ್ಯಾನ-ಕುಂಬಕರ್ಣಾದಿವಧಃ
- ರಾಮೋಪಾಖ್ಯಾನ-ಇಂದ್ರಜಿದ್ಯುದ್ಧಃ
- ರಾಮೋಪಾಖ್ಯಾನ-ಇಂದ್ರಜಿದ್ವಧಃ
- ರಾಮೋಪಾಖ್ಯಾನ-ರಾವಣವಧಃ
- ರಾಮೋಪಾಖ್ಯಾನ-ಶ್ರೀರಾಮಾಭಿಷೇಕ
- ರಾಮೋಪಾಖ್ಯಾನ-ಯುಧಿಷ್ಠಿರಾಶ್ವಾಸನ
- ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೧
- ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೨
- ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೩
- ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೪
- ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೫
- ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೬
- ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೭