|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ
೨೪೮
ಕಾಮ್ಯಕವನದಲ್ಲಿರುವಾಗ ಒಂದುದಿನ ದ್ರೌಪದಿಯನ್ನು ಆಶ್ರಮದಲ್ಲಿರಿಸಿ ಬೇಟೆಯಾಡಲು ಪಾಂಡವರು ಹೋದುದು (೧-೫). ಅದೇ ಸಮಯದಲ್ಲಿ ವಿವಾಹಕ್ಕಾಗಿ ಬಹು ರಾಜರೊಂದಿಗೆ ಮತ್ತು ಸೇನೆಯೊಂದಿಗೆ ಶಾಲ್ವದ ಕಡೆ ಪ್ರಯಾಣಿಸುತ್ತಿದ್ದ ಜಯದ್ರಥನು ದ್ರೌಪದಿಯನ್ನು ನೋಡಿ, ಕಾಮಮೋಹಿತನಾಗಿ, ಅವಳ್ಯಾರೆಂದು ಕಂಡುಕೊಂಡು ಬಾ ಎಂದು ಮಿತ್ರ ಕೋಟಿಕಾಶ್ಯನನ್ನು ಕಳುಹಿಸಿದುದು (೬-೧೭).
03248001 ವೈಶಂಪಾಯನ ಉವಾಚ|
03248001a ತಸ್ಮಿನ್ಬಹುಮೃಗೇಽರಣ್ಯೇ ರಮಮಾಣಾ ಮಹಾರಥಾಃ|
03248001c ಕಾಮ್ಯಕೇ ಭರತಶ್ರೇಷ್ಠಾ ವಿಜಹ್ರುಸ್ತೇ ಯಥಾಮರಾಃ||
ವೈಶಂಪಾಯನನು ಹೇಳಿದನು: “ಮಹಾರಥಿ ಭರತಶ್ರೇಷ್ಠರು ಆ ಬಹುಮೃಗಗಳಿದ್ದ ಕಾಮ್ಯಕ ಅರಣ್ಯದಲ್ಲಿ ಅಮರರಂತೆ ವಿಹರಿಸುತ್ತಾ ರಮಿಸಿದರು.
03248002a ಪ್ರೇಕ್ಷಮಾಣಾ ಬಹುವಿಧಾನ್ವನೋದ್ದೇಶಾನ್ಸಮಂತತಃ|
03248002c ಯಥರ್ತುಕಾಲರಮ್ಯಾಶ್ಚ ವನರಾಜೀಃ ಸುಪುಷ್ಪಿತಾಃ||
ಅವರು ಋತುಕಾಲವನ್ನು ಸೂಚಿಸುವ ಸುಪುಷ್ಪಿತವಾಗಿದ್ದ ವನರಾಜಿಗಳನ್ನೂ, ಸುತ್ತಲೂ ಇದ್ದ ಬಹುವಿಧದ ವನಪ್ರದೇಶಗಳನ್ನು ನೋಡುತ್ತಿದ್ದರು.
03248003a ಪಾಂಡವಾ ಮೃಗಯಾಶೀಲಾಶ್ಚರಂತಸ್ತನ್ಮಹಾವನಂ|
03248003c ವಿಜಹ್ರುರಿಂದ್ರಪ್ರತಿಮಾಃ ಕಂ ಚಿತ್ಕಾಲಮರಿಂದಮಾಃ||
ಆ ಮಹಾವನದಲ್ಲಿ ಬೇಟೆಯಾಡುತ್ತಾ ಇಂದ್ರನ ಸರಿಸಮಾನರಂತೆ ಆ ಅರಿಂದಮ ಪಾಂಡವರು ಸ್ವಲ್ಪಸಮಯವನ್ನು ಕಳೆದರು.
03248004a ತತಸ್ತೇ ಯೌಗಪದ್ಯೇನ ಯಯುಃ ಸರ್ವೇ ಚತುರ್ದಿಶಂ|
03248004c ಮೃಗಯಾಂ ಪುರುಷವ್ಯಾಘ್ರಾ ಬ್ರಾಹ್ಮಣಾರ್ಥೇ ಪರಂತಪಾಃ||
03248005a ದ್ರೌಪದೀಮಾಶ್ರಮೇ ನ್ಯಸ್ಯ ತೃಣಬಿಂದೋರನುಜ್ಞಯಾ|
03248005c ಮಹರ್ಷೇರ್ದೀಪ್ತತಪಸೋ ಧೌಮ್ಯಸ್ಯ ಚ ಪುರೋಧಸಃ||
ಆಗ ಒಂದು ದಿನ ಯೋಗವೋ ಎಂಬಂತೆ ಬ್ರಾಹ್ಮಣರಿಗೋಸ್ಕರ ಬೇಟೆಯಾಡಲು ಆ ಪರಂತಪ ಪುರುಷವ್ಯಾಘ್ರರೆಲ್ಲರೂ, ದ್ರೌಪದಿಯನ್ನು ತೃಣಬಿಂದುವಿನ ಆಶ್ರಮದಲ್ಲಿರಿಸಿ, ಮಹರ್ಷಿ, ದೀಪ್ತತಪಸ್ವಿ, ಪುರೋಹಿತ ಧೌಮ್ಯನ ಅಪ್ಪಣೆಯನ್ನು ಪಡೆದು, ನಾಲ್ಕು ದಿಕ್ಕುಗಳಲ್ಲಿ ಹೋದರು.
03248006a ತತಸ್ತು ರಾಜಾ ಸಿಂಧೂನಾಂ ವಾರ್ದ್ಧಕ್ಷತ್ರಿರ್ಮಹಾಯಶಾಃ|
03248006c ವಿವಾಹಕಾಮಃ ಶಾಲ್ವೇಯಾನ್ಪ್ರಯಾತಃ ಸೋಽಭವತ್ತದಾ||
ಅದೇ ಸಮಯದಲ್ಲಿ ವೃದ್ಧಕ್ಷತ್ರನ ಮಗ ಮಹಾಯಶಸ್ವಿ ಸಿಂಧುರಾಜನು ವಿವಾಹಾರ್ಥವಾಗಿ ಶಾಲ್ವದ ಕಡೆ ಪ್ರಯಾಣಮಾಡುತ್ತಿದ್ದನು.
03248007a ಮಹತಾ ಪರಿಬರ್ಹೇಣ ರಾಜಯೋಗ್ಯೇನ ಸಂವೃತಃ|
03248007c ರಾಜಭಿರ್ಬಹುಭಿಃ ಸಾರ್ಧಮುಪಾಯಾತ್ಕಾಮ್ಯಕಂ ಚ ಸಃ||
ರಾಜನಿಗೆ ಯೋಗ್ಯವಾದಂತೆ ಅತಿದೊಡ್ಡ ಪರಿಚಾರಕ ಗಣಗಳಿಂದ ಸುತ್ತುವರೆಯಲ್ಪಟ್ಟು ಬಹಳ ರಾಜರುಗಳೊಂದಿಗೆ ಹೋಗುತ್ತಿದ್ದ ಅವನು ಕಾಮ್ಯಕವನ್ನು ತಲುಪಿದನು.
03248008a ತತ್ರಾಪಶ್ಯತ್ಪ್ರಿಯಾಂ ಭಾರ್ಯಾಂ ಪಾಂಡವಾನಾಂ ಯಶಸ್ವಿನೀಂ|
03248008c ತಿಷ್ಠಂತೀಮಾಶ್ರಮದ್ವಾರಿ ದ್ರೌಪದೀಂ ನಿರ್ಜನೇ ವನೇ||
ಅಲ್ಲಿ ಅವನು ಆ ನಿರ್ಜನ ವನದಲ್ಲಿ ಆಶ್ರಮದ್ವಾರದಲ್ಲಿ ನಿಂತಿದ್ದ ಪಾಂಡವರ ಪ್ರಿಯ ಭಾರ್ಯೆ ಯಶಸ್ವಿನಿ ದ್ರೌಪದಿಯನ್ನು ನೋಡಿದನು.
03248009a ವಿಭ್ರಾಜಮಾನಾಂ ವಪುಷಾ ಬಿಭ್ರತೀಂ ರೂಪಮುತ್ತಮಂ|
03248009c ಭ್ರಾಜಯಂತೀಂ ವನೋದ್ದೇಶಂ ನೀಲಾಭ್ರಮಿವ ವಿದ್ಯುತಂ||
03248010a ಅಪ್ಸರಾ ದೇವಕನ್ಯಾ ವಾ ಮಾಯಾ ವಾ ದೇವನಿರ್ಮಿತಾ|
03248010c ಇತಿ ಕೃತ್ವಾಂಜಲಿಂ ಸರ್ವೇ ದದೃಶುಸ್ತಾಮನಿಂದಿತಾಂ||
ಉತ್ತಮ ರೂಪದಿಂದ ಮತ್ತು ವಿಭ್ರಾಜಮಾನ ಶರೀರದಿಂದ ಬೆಳಗುತ್ತಿದ್ದ, ಕಪ್ಪುಮೋಡಗಳಿಂದ ಬಂದ ವಿದ್ಯುತ್ತಿನಂತೆ ವನೋದ್ದೇಶವನ್ನು ಬೆಳಗುತ್ತಿದ್ದ, ಅಪ್ಸರೆಯೋ, ದೇವಕನ್ಯೆಯೋ ಅಥವಾ ದೇವನಿರ್ಮಿತ ಮಾಯೆಯೋ ಎಂಬಂತಿದ್ದ, ಕೈಮುಗಿದು ನಿಂತಿದ್ದ ಆ ಅನಿಂದಿತೆಯನ್ನು ಎಲ್ಲರೂ ನೋಡಿದರು.
03248011a ತತಃ ಸ ರಾಜಾ ಸಿಂಧೂನಾಂ ವಾರ್ದ್ಧಕ್ಷತ್ರಿರ್ಜಯದ್ರಥಃ|
03248011c ವಿಸ್ಮಿತಸ್ತಾಮನಿಂದ್ಯಾಂಗೀಂ ದೃಷ್ಟ್ವಾಸೀದ್ಧೃಷ್ಟಮಾನಸಃ|
ಆಗ ವಾರ್ಧಕ್ಷತ್ರಿ ಸಿಂಧುರಾಜ ಜಯದ್ರಥನು ಆ ಅನವದ್ಯಾಂಗಿಯನ್ನು ನೋಡಿ ವಿಸ್ಮಿತನಾಗಿ ಸಂತೋಷಗೊಂಡನು.
03248012a ಸ ಕೋಟಿಕಾಶ್ಯಂ ರಾಜಾನಮಬ್ರವೀತ್ಕಾಮಮೋಹಿತಃ|
03248012c ಕಸ್ಯ ತ್ವೇಷಾನವದ್ಯಾಂಗೀ ಯದಿ ವಾಪಿ ನ ಮಾನುಷೀ||
ಕಾಮಮೋಹಿತನಾದ ಅವನು ಕೋಟಿಕಾಶ್ಯ ರಾಜನಿಗೆ ಹೇಳಿದನು: “ಮನುಷ್ಯಳೇ ಆಗಿದ್ದರೆ ಈ ಅನವದ್ಯಾಂಗಿಯು ಯಾರಾಗಿರಬಹುದು?
03248013a ವಿವಾಹಾರ್ಥೋ ನ ಮೇ ಕಶ್ಚಿದಿಮಾಂ ದೃಷ್ಟ್ವಾತಿಸುಂದರೀಂ|
03248013c ಏತಾಮೇವಾಹಮಾದಾಯ ಗಮಿಷ್ಯಾಮಿ ಸ್ವಮಾಲಯಂ||
ಈ ಅತಿಸುಂದರಿಯನ್ನು ನೋಡಿದ ನಂತರ ನನಗೆ ವಿವಾಹದಲ್ಲಿ ಅರ್ಥವಿಲ್ಲ. ಇವಳನ್ನೇ ಕರೆದುಕೊಂಡು ನನ್ನ ಮನೆಗೆ ಹಿಂದಿರುಗುತ್ತೇನೆ.
03248014a ಗಚ್ಚ ಜಾನೀಹಿ ಸೌಮ್ಯೈನಾಂ ಕಸ್ಯ ಕಾ ಚ ಕುತೋಽಪಿ ವಾ|
03248014c ಕಿಮರ್ಥಮಾಗತಾ ಸುಭ್ರೂರಿದಂ ಕಂಟಕಿತಂ ವನಂ||
ಸೌಮ್ಯ! ಹೋಗಿ ಇವಳು ಯಾರವಳು? ಯಾರು ಮತ್ತು ಎಲ್ಲಿಂದ ಬಂದಿದ್ದಾಳೆಂದು ತಿಳಿದುಕೋ. ಯಾವ ಕಾರಣಕ್ಕಾಗಿ ಈ ಸುಂದರ ಹುಬ್ಬಿನವಳು ಮುಳ್ಳಿನ ಈ ವನಕ್ಕೆ ಬಂದಿದ್ದಾಳೆ?
03248015a ಅಪಿ ನಾಮ ವರಾರೋಹಾ ಮಾಮೇಷಾ ಲೋಕಸುಂದರೀ|
03248015c ಭಜೇದದ್ಯಾಯತಾಪಾಂಗೀ ಸುದತೀ ತನುಮಧ್ಯಮಾ|
ಇಂದು ಈ ವರಾರೋಹೆ, ಲೋಕಸುಂದರಿ, ಆಯತಪಾಂಗೀ, ಸುಂದರ ಹಲ್ಲಿನ ತನುಮಧ್ಯಮೆಯು ನನ್ನ ಪ್ರೀತಿಯಲ್ಲಿ ಪಾಲ್ಗೊಳ್ಳುತ್ತಾಳೆಯೇ?
03248016a ಅಪ್ಯಹಂ ಕೃತಕಾಮಃ ಸ್ಯಾಮಿಮಾಂ ಪ್ರಾಪ್ಯ ವರಸ್ತ್ರಿಯಂ|
03248016c ಗಚ್ಚ ಜಾನೀಹಿ ಕೋ ನ್ವಸ್ಯಾ ನಾಥ ಇತ್ಯೇವ ಕೋಟಿಕ||
ಈ ವರಸ್ತ್ರೀಯನ್ನು ಪಡೆದು ಇಂದು ನಾನು ನನ್ನ ಕಾಮವನ್ನು ಪೂರೈಸಿಕೊಳ್ಳಬಹುದೇ? ಕೋಟಿಕ! ಇವಳ ರಕ್ಷಕರು ಯಾರು ಎನ್ನುವುದನ್ನೂ ಕೇಳಿಕೊಂಡು ಬಾ.”
03248017a ಸ ಕೋಟಿಕಾಶ್ಯಸ್ತಚ್ಚ್ರುತ್ವಾ ರಥಾತ್ಪ್ರಸ್ಕಂದ್ಯ ಕುಂಡಲೀ|
03248017c ಉಪೇತ್ಯ ಪಪ್ರಚ್ಚ ತದಾ ಕ್ರೋಷ್ಟಾ ವ್ಯಾಘ್ರವಧೂಮಿವ||
ಇದನ್ನು ಕೇಳಿದ ಕುಂಡಲಗಳನ್ನು ಧರಿಸಿದ್ದ ಕೋಟಿಕನು ರಥದಿಂದ ಹಾರಿ ನರಿಯು ವ್ಯಾಘ್ರದ ಬಳಿಸಾರುವಂತೆ ಅವಳ ಹತ್ತಿರ ಬಂದು ಕೇಳಿದನು.
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ದ್ರೌಪದೀಹರಣಪರ್ವಣಿ ಜಯದ್ರಥಾಗಮನೇ ಅಷ್ಟಚತ್ವಾರಿಂಶದಧಿಕದ್ವಿಶತತಮೋಽಧ್ಯಾಯ:|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ದ್ರೌಪದೀಹರಣಪರ್ವದಲ್ಲಿ ಜಯದ್ರಥಾಗಮನದಲ್ಲಿ ಇನ್ನೂರಾನಲ್ವತ್ತೆಂಟನೆಯ ಅಧ್ಯಾಯವು.