ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ
೨೭೧
ಕುಂಭಕರ್ಣನ ವಧೆ
ಲಕ್ಷ್ಮಣನು ಬ್ರಹ್ಮಾಸ್ತ್ರದಿಂದ ಕುಂಭಕರ್ಣನನ್ನು ವಧಿಸಿದುದು (೧-೧೮). ದೂಷಣನ ತಮ್ಮಂದಿರಾದ ವಜ್ರವೇಗ-ಪಮಥಿಯರನ್ನು ಹನುಮಂತ-ನಳರು ವಧಿಸಿದುದು (೧೯-೨೭).
03271001a ತತೋ ವಿನಿರ್ಯಾಯ ಪುರಾತ್ಕುಂಭಕರ್ಣಃ ಸಹಾನುಗಃ|
03271001c ಅಪಶ್ಯತ್ಕಪಿಸೈನ್ಯಂ ತಜ್ಜಿತಕಾಶ್ಯಗ್ರತಃ ಸ್ಥಿತಂ||
ಮಾರ್ಕಂಡೇಯನು ಹೇಳಿದನು: “ಆಗ ಅನುಯಾಯಿಗಳೊಂದಿಗೆ ಪುರದಿಂದ ಹೊರಟ ಕುಂಭಕರ್ಣನು ವಿಜಯದಿಂದ ಸೊಕ್ಕು ನಿಂತಿದ್ದ ಕಪಿಸೇನೆಯನ್ನು ಕಂಡನು.
03271002a ತಮಭ್ಯೇತ್ಯಾಶು ಹರಯಃ ಪರಿವಾರ್ಯ ಸಮಂತತಃ|
03271002c ಅಭ್ಯಘ್ನಂಶ್ಚ ಮಹಾಕಾಯೈರ್ಬಹುಭಿರ್ಜಗತೀರುಹೈಃ||
03271002e ಕರಜೈರತುದಂಶ್ಚಾನ್ಯೇ ವಿಹಾಯ ಭಯಮುತ್ತಮಂ||
ಕಪಿಗಳು ಅವನೆಡೆಗೆ ಓಡಿ ಬಂದು, ಎಲ್ಲಕಡೆಯಿಂದಲೂ ಸುತ್ತುವರೆದು, ಆ ಮಹಾಕಾಯನನ್ನು ಹಲವಾರು ದೊಡ್ಡ ಮರಗಳಿಂದ ಹೊಡೆದರು ಮತ್ತು ಉತ್ತಮ ಭಯವನ್ನು ತೊರೆದು ಕೈಬೆರಳಿನ ಉಗುರುಗಳಿಂದ ಕೆರೆದು ಗಾಯಗೊಳಿಸಿದರು.
03271003a ಬಹುಧಾ ಯುಧ್ಯಮಾನಾಸ್ತೇ ಯುದ್ಧಮಾರ್ಗೈಃ ಪ್ಲವಂಗಮಾಃ|
03271003c ನಾನಾಪ್ರಹರಣೈರ್ಭೀಮಂ ರಾಕ್ಷಸೇಂದ್ರಮತಾಡಯನ್||
ಯುದ್ಧಮಾರ್ಗದಲ್ಲಿ ಬಹುರೀತಿಯಲ್ಲಿ ಯುದ್ಧಮಾಡುತ್ತಿದ್ದ ವಾನರರು ಆ ಭಯಂಕರ ರಾಕ್ಷಸನನ್ನು ನಾನಾ ಆಯುಧಗಳಿಂದ ಹೊಡೆದರು.
03271004a ಸ ತಾಡ್ಯಮಾನಃ ಪ್ರಹಸನ್ಭಕ್ಷಯಾಮಾಸ ವಾನರಾನ್|
03271004c ಪನಸಂ ಚ ಗವಾಕ್ಷಂ ಚ ವಜ್ರಬಾಹುಂ ಚ ವಾನರಂ||
ಹೀಗೆ ಹೊಡೆಯುತ್ತಿರಲು ಅವನು ಜೋರಾಗಿ ನಗುತ್ತಾ ಪನಸ, ಗವಾಕ್ಷ, ವಜ್ರಬಾಹುವೇ ಮೊದಲಾದ ವಾನರರನ್ನು ಭಕ್ಷಿಸತೊಡಗಿದನು.
03271005a ತದ್ದೃಷ್ಟ್ವಾ ವ್ಯಥನಂ ಕರ್ಮ ಕುಂಭಕರ್ಣಸ್ಯ ರಕ್ಷಸಃ|
03271005c ಉದಕ್ರೋಶನ್ಪರಿತ್ರಸ್ತಾಸ್ತಾರಪ್ರಭೃತಯಸ್ತದಾ||
ರಾಕ್ಷಸ ಕುಂಭಕರ್ಣನ ಆ ದುಃಖಕರ ಕೃತ್ಯವನ್ನು ನೋಡಿ ತಾರನೇ ಮೊದಲಾದವರು ಕಷ್ಟದಲ್ಲಿ ಕಿರುಚಿಕೊಂಡರು.
03271006a ತಂ ತಾರಮುಚ್ಚೈಃ ಕ್ರೋಶಂತಮನ್ಯಾಂಶ್ಚ ಹರಿಯೂಥಪಾನ್|
03271006c ಅಭಿದುದ್ರಾವ ಸುಗ್ರೀವಃ ಕುಂಭಕರ್ಣಮಪೇತಭೀಃ||
ಜೋರಾಗಿ ಕಿರುಚಿಕೊಳ್ಳುತ್ತಿರುವ ತಾರ ಮತ್ತು ಇತರ ಕಪಿಗುಂಪುಗಳ ಬಳಿ ಕುಂಭಕರ್ಣನ ಎದುರಿಗೆ ಸುಗ್ರೀವನು ಭಯವಿಲ್ಲದೇ ಓಡಿ ಬಂದನು.
03271007a ತತೋಽಭಿಪತ್ಯ ವೇಗೇನ ಕುಂಭಕರ್ಣಂ ಮಹಾಮನಾಃ|
03271007c ಶಾಲೇನ ಜಘ್ನಿವಾನ್ಮೂರ್ಧ್ನಿ ಬಲೇನ ಕಪಿಕುಂಜರಃ||
ಆ ಮಹಾಮನಸ್ವಿ ಕಪಿಕುಂಜರನು ವೇಗದಿಂದ ಶಾಲವೃಕ್ಷವನ್ನು ಕುಂಭಕರ್ಣನ ತಲೆಗೆ ಬಲವತ್ತಾಗಿ ಬಡಿದನು.
03271008a ಸ ಮಹಾತ್ಮಾ ಮಹಾವೇಗಃ ಕುಂಭಕರ್ಣಸ್ಯ ಮೂರ್ಧನಿ|
03271008c ಬಿಭೇದ ಶಾಲಂ ಸುಗ್ರೀವೋ ನ ಚೈವಾವ್ಯಥಯತ್ಕಪಿಃ||
ಆ ಮಹಾತ್ಮ ಮಹಾವೇಗ ಸುಗ್ರೀವನು ಕುಂಭಕರ್ಣನ ನೆತ್ತಿಯಮೇಲೆ ಹೊಡೆದ ಶಾಲವೃಕ್ಷವು ಪುಡಿಪುಡಿಯಾಯಿತೇ ವಿನಃ ಅವನನ್ನು ಹಂದಾಡಿಸಲೂ ಆಗಲಿಲ್ಲ.
03271009a ತತೋ ವಿನದ್ಯ ಪ್ರಹಸಂ ಶಾಲಸ್ಪರ್ಶವಿಬೋಧಿತಃ|
03271009c ದೋರ್ಭ್ಯಾಮಾದಾಯ ಸುಗ್ರೀವಂ ಕುಂಭಕರ್ಣೋಽಹರದ್ಬಲಾತ್||
ಶಾಲವು ತಾಗಿದುದರಿಂದ ಸಂಪೂರ್ಣವಾಗಿ ಎಚ್ಚೆತ್ತ ಕುಂಭಕರ್ಣನು ಸುಗ್ರೀವನ ತೋಳುಗಳನ್ನು ಬಿಡಿದು ಬಲವಾಗಿ ಎಳೆದನು.
03271010a ಹ್ರಿಯಮಾಣಂ ತು ಸುಗ್ರೀವಂ ಕುಂಭಕರ್ಣೇನ ರಕ್ಷಸಾ|
03271010c ಅವೇಕ್ಷ್ಯಾಭ್ಯದ್ರವದ್ವೀರಃ ಸೌಮಿತ್ರಿರ್ಮಿತ್ರನಂದನಃ||
ರಾಕ್ಷಸ ಕುಂಭಕರ್ಣನಿಂದ ಎತ್ತಿಕೊಂಡು ಹೋಗಲ್ಪಟ್ಟ ಸುಗ್ರೀವನನ್ನು ನೋಡಿ ಮಿತ್ರನಂದನ, ವೀರ ಸೌಮಿತ್ರಿಯು ಅವನಲ್ಲಿಗೆ ಧಾವಿಸಿ ಬಂದನು.
03271011a ಸೋಽಭಿಪತ್ಯ ಮಹಾವೇಗಂ ರುಕ್ಮಪುಂಖಂ ಮಹಾಶರಂ|
03271011c ಪ್ರಾಹಿಣೋತ್ಕುಂಭಕರ್ಣಾಯ ಲಕ್ಷ್ಮಣಃ ಪರವೀರಹಾ||
ಪರವೀರಹ ಲಕ್ಷ್ಮಣನು ಉದ್ದವಾದ ಮಹಾವೇಗದ ಬಂಗಾರದ ರೆಕ್ಕೆಗಳನ್ನುಳ್ಳ ಮಹಾಶರವನ್ನು ಕುಂಭಕರ್ಣನ ಮೇಲೆ ಪ್ರಯೋಗಿಸಿದನು.
03271012a ಸ ತಸ್ಯ ದೇಹಾವರಣಂ ಭಿತ್ತ್ವಾ ದೇಹಂ ಚ ಸಾಯಕಃ|
03271012c ಜಗಾಮ ದಾರಯನ್ಭೂಮಿಂ ರುಧಿರೇಣ ಸಮುಕ್ಷಿತಃ||
ಅದು ಅವನ ದೇಹಾವರಣವನ್ನು ಬಿರಿದು, ದೇಹವನ್ನು ಹೊಕ್ಕು, ರಕ್ತದಿಂದ ತೋಯ್ದು ಹಿಂದಿನಿಂದ ಬಂದು ನೆಲವನ್ನು ಹೊಕ್ಕಿತು.
03271013a ತಥಾ ಸ ಭಿನ್ನಹೃದಯಃ ಸಮುತ್ಸೃಜ್ಯ ಕಪೀಶ್ವರಂ|
03271013c ಕುಂಭಕರ್ಣೋ ಮಹೇಷ್ವಾಸಃ ಪ್ರಗೃಹೀತಶಿಲಾಯುಧಃ|
03271013e ಅಭಿದುದ್ರಾವ ಸೌಮಿತ್ರಿಮುದ್ಯಮ್ಯ ಮಹತೀಂ ಶಿಲಾಂ||
ಅವನ ಹೃದಯವು ಸೀಳಿಹೋಗಲು ಮಹೇಷ್ವಾಸ ಕುಂಭಕರ್ಣನು ಕಪೀಶ್ವರನನ್ನು ಬಿಸುಟು, ಶಿಲಾಯುಧವನ್ನು ಹಿಡಿದು ಆ ಮಹಾಶಿಲವನ್ನು ಎತ್ತಿ ಸೌಮಿತ್ರಿಯ ಮೇಲೆ ಎರಗಿದನು.
03271014a ತಸ್ಯಾಭಿದ್ರವತಸ್ತೂರ್ಣಂ ಕ್ಷುರಾಭ್ಯಾಮುಚ್ಚ್ರಿತೌ ಕರೌ|
03271014c ಚಿಚ್ಚೇದ ನಿಶಿತಾಗ್ರಾಭ್ಯಾಂ ಸ ಬಭೂವ ಚತುರ್ಭುಜಃ||
ತನ್ನ ಕಡೆ ಧಾವಿಸಿ ಬರುತ್ತಿದ್ದ ಅವನ ಎತ್ತಿದ ತೋಳುಗಳನ್ನು ಎರಡು ಕೋಡುಗಳಿರುವ ಹರಿತ ಬಾಣಗಳಿಂದ ಕತ್ತರಿಸಿದನು. ಆಗ ಅವನು ಚತುರ್ಭುಜನಾದನು.
03271015a ತಾನಪ್ಯಸ್ಯ ಭುಜಾನ್ಸರ್ವಾನ್ಪ್ರಗೃಹೀತಶಿಲಾಯುಧಾನ್|
03271015c ಕ್ಷುರೈಶ್ಚಿಚ್ಚೇದ ಲಘ್ವಸ್ತ್ರಂ ಸೌಮಿತ್ರಿಃ ಪ್ರತಿದರ್ಶಯನ್||
ಆಗ ಶಿಲಾಯುಧಗಳನ್ನು ಹಿಡಿದಿರುವ ಎಲ್ಲ ಭುಜಗಳನ್ನೂ ಹರಿತ ಬಾಣಗಳಿಂದ ಕತ್ತರಿಸಿ ಸೌಮಿತ್ರಿಯು ತನ್ನ ಅಸ್ತ್ರ ಲಘುತ್ವವನ್ನು ಪ್ರದರ್ಶಿಸಿದನು.
03271016a ಸ ಬಭೂವಾತಿಕಾಯಶ್ಚ ಬಹುಪಾದಶಿರೋಭುಜಃ|
03271016c ತಂ ಬ್ರಹ್ಮಾಸ್ತ್ರೇಣ ಸೌಮಿತ್ರಿರ್ದದಾಹಾದ್ರಿಚಯೋಪಮಂ||
ಆಗ ಅವನು ಬಹುಪಾದಶಿರೋಭುಜಗಳ ಅತಿಕಾಯನಾಗಿ ಬೆಳೆಯಲು, ಪರ್ವತಗಳ ರಾಶಿಯಂತಿದ್ದ ಅವನನ್ನು ಸೌಮಿತ್ರಿಯು ಬ್ರಹ್ಮಾಸ್ತ್ರದಿಂದ ಸುಟ್ಟುಹಾಕಿದನು.
03271017a ಸ ಪಪಾತ ಮಹಾವೀರ್ಯೋ ದಿವ್ಯಾಸ್ತ್ರಾಭಿಹತೋ ರಣೇ|
03271017c ಮಹಾಶನಿವಿನಿರ್ದಗ್ಧಃ ಪಾದಪೋಽಂಕುರವಾನಿವ||
ದಿವ್ಯಾಸ್ತ್ರದಿಂದ ಹೊಡೆಯಲ್ಪಟ್ಟ ಆ ಮಹಾವೀರನು ರಣದಲ್ಲಿ ಚಿಗುರಿದ ಮರವು ಮಹಾಮಿಂಚಿನ ಹೊಡೆತಕ್ಕೆ ಸಿಕ್ಕಿ ಸುಟ್ಟು ಬೀಳುವಂತೆ ಬಿದ್ದನು.
03271018a ತಂ ದೃಷ್ಟ್ವಾ ವೃತ್ರಸಂಕಾಶಂ ಕುಂಭಕರ್ಣಂ ತರಸ್ವಿನಂ|
03271018c ಗತಾಸುಂ ಪತಿತಂ ಭೂಮೌ ರಾಕ್ಷಸಾಃ ಪ್ರಾದ್ರವನ್ಭಯಾತ್||
ಆ ವೃತ್ರಸಂಕಾಶ ತರಸ್ವಿ ಕುಂಭಕರ್ಣನು ನೆಲದ ಮೇಲೆ ಬಿದ್ದು ಅಸುನೀಗಿದುದನ್ನು ಕಂಡು ರಾಕ್ಷಸರು ಹೆದರಿ ಓಡಿ ಹೋದರು.
03271019a ತಥಾ ತಾನ್ದ್ರವತೋ ಯೋಧಾನ್ದೃಷ್ಟ್ವಾ ತೌ ದೂಷಣಾನುಜೌ|
03271019c ಅವಸ್ಥಾಪ್ಯಾಥ ಸೌಮಿತ್ರಿಂ ಸಂಕ್ರುದ್ಧಾವಭ್ಯಧಾವತಾಂ||
ಹಾಗೆ ಓಡಿ ಹೋಗುತ್ತಿರುವ ಯೋಧರನ್ನು ನೋಡಿ ದೂಷಣನ ತಮ್ಮಂದಿರೀರ್ವರು ಸಂಕೃದ್ಧರಾಗಿ ಓಡಿಬಂದು ಸೌಮಿತ್ರಿಯನ್ನು ಎದುರಿಸಿದರು.
03271020a ತಾವಾದ್ರವಂತೌ ಸಂಕ್ರುದ್ಧೌ ವಜ್ರವೇಗಪ್ರಮಾಥಿನೌ|
03271020c ಪ್ರತಿಜಗ್ರಾಹ ಸೌಮಿತ್ರಿರ್ವಿನದ್ಯೋಭೌ ಪತತ್ರಿಭಿಃ||
ಸೌಮಿತ್ರಿಯು ಸಂಕೃದ್ಧರಾಗಿದ್ದ ವಜ್ರವೇಗ ಮತ್ತು ಪ್ರಮಥಿಯರೀರ್ವರನ್ನೂ ರೆಕ್ಕೆಗಳುಳ್ಳ ಬಾಣಗಳಿಂದ ಬರಮಾಡಿಕೊಂಡನು.
03271021a ತತಃ ಸುತುಮುಲಂ ಯುದ್ಧಮಭವಲ್ಲೋಮಹರ್ಷಣಂ|
03271021c ದೂಷಣಾನುಜಯೋಃ ಪಾರ್ಥ ಲಕ್ಷ್ಮಣಸ್ಯ ಚ ಧೀಮತಃ||
ಪಾರ್ಥ! ಆಗ ದೂಷಣನ ತಮ್ಮಂದಿರ ಮತ್ತು ದೀಮತ ಲಕ್ಷ್ಮಣನ ನಡುವೆ ಲೋಮಹರ್ಷಣ ತುಮುಲ ಯುದ್ಧವು ನಡೆಯಿತು.
03271022a ಮಹತಾ ಶರವರ್ಷೇಣ ರಾಕ್ಷಸೌ ಸೋಽಭ್ಯವರ್ಷತ|
03271022c ತೌ ಚಾಪಿ ವೀರೌ ಸಂಕ್ರುದ್ಧಾವುಭೌ ತೌ ಸಮವರ್ಷತಾಂ||
ಅವನು ರಾಕ್ಷಸರ ಮೇಲೆ ಮಹಾಶರಗಳ ಮಳೆಯನ್ನು ಸುರಿಸಿದನು. ಸಂಕೃದ್ದರಾದ ಆ ವೀರರಿಬ್ಬರೂ ಕೂಡ ಅವನ ಮೇಲೆ ಶರಗಳ ಮಳೆಯನ್ನು ಸುರಿಸಿದರು.
03271023a ಮುಹೂರ್ತಮೇವಮಭವದ್ವಜ್ರವೇಗಪ್ರಮಾಥಿನೋಃ|
03271023c ಸೌಮಿತ್ರೇಶ್ಚ ಮಹಾಬಾಹೋಃ ಸಂಪ್ರಹಾರಃ ಸುದಾರುಣಃ||
ವಜ್ರವೇಗ-ಪ್ರಮಥಿಯರ ಮತ್ತು ಸಂಪ್ರಹಾರ ಮಹಾಬಾಹು ಸೌಮಿತ್ರಿಯ ನಡುವಿನ ಈ ದಾರುಣ ಯುದ್ಧವು ಸ್ವಲ್ಪ ಕಾಲ ನಡೆಯಿತು.
03271024a ಅಥಾದ್ರಿಶೃಂಗಮಾದಾಯ ಹನೂಮಾನ್ಮಾರುತಾತ್ಮಜಃ|
03271024c ಅಭಿದ್ರುತ್ಯಾದದೇ ಪ್ರಾಣಾನ್ವಜ್ರವೇಗಸ್ಯ ರಕ್ಷಸಃ||
ಆಗ ಮಾರುತಾತ್ಮಜ ಹನೂಮಂತನು ಗಿರಿಯ ಶಿಖರವನ್ನು ಹಿಡಿದು, ಅಕ್ರಮಣ ಮಾಡಿ ರಾಕ್ಷಸ ವಜ್ರವೇಗನ ಪ್ರಾಣವನ್ನು ತೆಗೆದುಕೊಂಡನು.
03271025a ನೀಲಶ್ಚ ಮಹತಾ ಗ್ರಾವ್ಣಾ ದೂಷಣಾವರಜಂ ಹರಿಃ|
03271025c ಪ್ರಮಾಥಿನಮಭಿದ್ರುತ್ಯ ಪ್ರಮಮಾಥ ಮಹಾಬಲಃ||
ಮಹಾಬಲಿ ಕಪಿ ನೀಲನು ದೊಡ್ಡ ಬಂಡೆಯೊಂದಿಗೆ ದೂಷಣನ ತಮ್ಮ ಪ್ರಮಾಥಿಯನ್ನು ಆಕ್ರಮಣ ಮಾಡಿ ಜಜ್ಜಿದನು.
03271026a ತತಃ ಪ್ರಾವರ್ತತ ಪುನಃ ಸಂಗ್ರಾಮಃ ಕಟುಕೋದಯಃ|
03271026c ರಾಮರಾವಣಸೈನ್ಯಾನಾಮನ್ಯೋನ್ಯಮಭಿಧಾವತಾಂ||
ಆಗ ರಾಮ-ರಾವಣರ ಸೇನೆಗಳ ನಡುವೆ ಅನ್ಯೋನ್ಯರನ್ನು ಕೊಲ್ಲುವ ಕಟುಕ ಸಂಗ್ರಾಮವು ಪುನಃ ಪ್ರಾರಂಭವಾಯಿತು.
03271027a ಶತಶೋ ನೈರೃತಾನ್ವನ್ಯಾ ಜಘ್ನುರ್ವನ್ಯಾಂಶ್ಚ ನೈರೃತಾಃ|
03271027c ನೈರೃತಾಸ್ತತ್ರ ವಧ್ಯಂತೇ ಪ್ರಾಯಶೋ ನ ತು ವಾನರಾಃ||
ಆ ವನವಾಸಿಗಳು ನೂರಾರು ಸಂಖ್ಯೆಗಳಲ್ಲಿ ರಾಕ್ಷಸರನ್ನು ಕೊಂದರು, ರಾಕ್ಷಸರೂ ವನವಾಸಿಗಳನ್ನು ಕೊಂದರು. ಆದರೆ ಅಲ್ಲಿ ಸತ್ತ ರಾಕ್ಷಸರ ಸಂಖ್ಯೆ ವಾನರರಕ್ಕಿಂತಲೂ ಪ್ರಾಯಶಃ ಅಧಿಕವಾಗಿತ್ತು.”
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ರಾಮೋಪಾಖ್ಯಾನೇ ಕುಂಭಕರ್ಣಾದಿವಧೇ ಏಕಸಪ್ತತ್ಯಧಿಕದ್ವಿಶತತಮೋಽಧ್ಯಾಯ:|
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ರಾಮೋಪಾಖ್ಯಾನದಲ್ಲಿ ಕುಂಭಕರ್ಣಾದಿವಧೆಯಲ್ಲಿ ಇನ್ನೂರಾಎಪ್ಪತ್ತೊಂದನೆಯ ಅಧ್ಯಾಯವು.
Kannada translation of Draupadiharana Parva, by Chapter:
- ಜಯದ್ರಥಾಗಮನ
- ಕೋಟಿಕಾಸ್ಯಪ್ರಶ್ನಃ
- ದ್ರೌಪದೀವಾಕ್ಯ
- ಜಯದ್ರಥದ್ರೌಪದೀಸಂವಾದ
- ದ್ರೌಪದೀಹರಣ
- ಪಾರ್ಥಾಗಮನ
- ದ್ರೌಪದೀವಾಕ್ಯ
- ಜಯದ್ರಥಪಲಾಯನ
- ಜಯದ್ರಥವಿಮೋಕ್ಷಣ
- ರಾಮೋಪಾಖ್ಯಾನ-ಯುಧಿಷ್ಠಿರಪ್ರಶ್ನಃ
- ರಾಮೋಪಾಖ್ಯಾನ-ರಾಮರಾವಣಯೋರ್ಜನ್ಮಕಥನ
- ರಾಮೋಪಾಖ್ಯಾನ-ರಾವಣಾದಿವರಪ್ರಾಪ್ತಿಃ
- ರಾಮೋಪಾಖ್ಯಾನ-ವಾನರಾದ್ಯುತ್ಪತ್ತಿಃ
- ರಾಮೋಪಾಖ್ಯಾನ-ರಾಮವನಾಭಿಗಮನ
- ರಾಮೋಪಾಖ್ಯಾನ-ಮಾರೀಚವಧ-ಸೀತಾಪಹರಣ
- ರಾಮೋಪಾಖ್ಯಾನ-ಕಬಂಧಹನನ
- ರಾಮೋಪಾಖ್ಯಾನ-ತ್ರಿಜಟಾಕೃತಸೀತಾಸಂವಾದಃ
- ರಾಮೋಪಾಖ್ಯಾನ-ಸೀತಾರಾವಣಸಂವಾದಃ
- ರಾಮೋಪಾಖ್ಯಾನ-ಹನುಮಪ್ರತ್ಯಾಗಮನ
- ರಾಮೋಪಾಖ್ಯಾನ-ಸೇತುಬಂಧನ
- ರಾಮೋಪಾಖ್ಯಾನ-ಲಂಕಾಪ್ರವೇಶ
- ರಾಮೋಪಾಖ್ಯಾನ-ರಾಮರಾವಣದ್ವಂದ್ವಯುದ್ಧಃ
- ರಾಮೋಪಾಖ್ಯಾನ-ಕುಂಭಕರ್ಣನಿರ್ಗಮನ
- ರಾಮೋಪಾಖ್ಯಾನ-ಕುಂಬಕರ್ಣಾದಿವಧಃ
- ರಾಮೋಪಾಖ್ಯಾನ-ಇಂದ್ರಜಿದ್ಯುದ್ಧಃ
- ರಾಮೋಪಾಖ್ಯಾನ-ಇಂದ್ರಜಿದ್ವಧಃ
- ರಾಮೋಪಾಖ್ಯಾನ-ರಾವಣವಧಃ
- ರಾಮೋಪಾಖ್ಯಾನ-ಶ್ರೀರಾಮಾಭಿಷೇಕ
- ರಾಮೋಪಾಖ್ಯಾನ-ಯುಧಿಷ್ಠಿರಾಶ್ವಾಸನ
- ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೧
- ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೨
- ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೩
- ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೪
- ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೫
- ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೬
- ಪತಿವ್ರತಾಮಹಾತ್ಮ್ಯ-ಸಾವಿತ್ರ್ಯುಪಾಖ್ಯಾನ-೭