ಆರಣ್ಯಕ ಪರ್ವ: ದ್ರೌಪದೀಹರಣ ಪರ್ವ
೨೫೦
ದ್ರೌಪದಿಯು ತನ್ನ ಪರಿಚಯ ಹೇಳಿಕೊಂಡು, ಬೇಟೆಯಾಡಲು ಹೋದ ಪತಿ ಪಾಂಡವರು ಹಿಂದಿರುಗುವ ಸಮಯವಾಗಿದೆಯೆಂದೂ, ಅವರ ಆತಿಥ್ಯವನ್ನು ಸ್ವೀಕರಿಸಿ ಹೋಗಬೇಕೆಂದೂ ಹೇಳುವುದು (೧-೯).
03250001 ವೈಶಂಪಾಯನ ಉವಾಚ|
03250001a ಅಥಾಬ್ರವೀದ್ದ್ರೌಪದೀ ರಾಜಪುತ್ರೀ|
ಪೃಷ್ಟಾ ಶಿಬೀನಾಂ ಪ್ರವರೇಣ ತೇನ|
03250001c ಅವೇಕ್ಷ್ಯ ಮಂದಂ ಪ್ರವಿಮುಚ್ಯ ಶಾಖಾಂ|
ಸಂಗೃಹ್ಣತೀ ಕೌಶಿಕಮುತ್ತರೀಯಂ||
ವೈಶಂಪಾಯನನು ಹೇಳಿದನು: “ಆಗ ರಾಜಪುತ್ರಿ ದ್ರೌಪದಿಯು ನಿಧಾನವಾಗಿ ಅವನನ್ನು ನೋಡುತ್ತಾ, ಶಾಖೆಯನ್ನು ಬಿಟ್ಟು, ತನ್ನ ಕೌಶಿಕದ ಉತ್ತರೀಯವನ್ನು ಒಟ್ಟುಮಾಡಿಕೊಂಡು ಆ ಶಿಬಿಗಳ ಪ್ರವರನು ಕೇಳಿದುದಕ್ಕೆ ಹೇಳಿದಳು.
03250002a ಬುದ್ಧ್ಯಾಭಿಜಾನಾಮಿ ನರೇಂದ್ರಪುತ್ರ|
ನ ಮಾದೃಶೀ ತ್ವಾಮಭಿಭಾಷ್ಟುಮರ್ಹಾ|
03250002c ನ ತ್ವೇಹ ವಕ್ತಾಸ್ತಿ ತವೇಹ ವಾಕ್ಯಂ|
ಅನ್ಯೋ ನರೋ ವಾಪ್ಯಥ ವಾಪಿ ನಾರೀ||
“ನರೇಂದ್ರಪುತ್ರ! ನನ್ನಂಥವಳು ಉತ್ತರಿಸಬಾರದೆಂದು ನಾನು ಬುದ್ಧಿಯಿಂದ ತಿಳಿದುಕೊಂಡಿದ್ದೇನೆ. ಆದರೆ ಇಲ್ಲಿ ನಿನ್ನ ಪ್ರಶ್ನೆಗಳಿಗೆ ಉತ್ತರಿಸುವ - ನರನಾಗಲೀ ನಾರಿಯಾಗಲೀ - ಬೇರೆ ಯಾರೂ ಇಲ್ಲ.
03250003a ಏಕಾ ಹ್ಯಹಂ ಸಂಪ್ರತಿ ತೇನ ವಾಚಂ|
ದದಾನಿ ವೈ ಭದ್ರ ನಿಬೋಧ ಚೇದಂ|
03250003c ಅಹಂ ಹ್ಯರಣ್ಯೇ ಕಥಮೇಕಮೇಕಾ|
ತ್ವಾಮಾಲಪೇಯಂ ನಿರತಾ ಸ್ವಧರ್ಮೇ||
ಭದ್ರ! ನಾನೊಬ್ಬಳೇ ಇಲ್ಲಿ ಇರುವುದರಿಂದ ನಾನೇ ನಿನಗೆ ಉತ್ತರವನ್ನು ಕೊಡುತ್ತಿದ್ದೇನೆ. ತಿಳಿದುಕೋ. ಅರಣ್ಯದಲ್ಲಿ ನಾನೊಬ್ಬಳೇ ಇರುವಾಗ, ಸ್ವಧರ್ಮದಲ್ಲಿ ನಿರತಳಾಗಿರುವ ನಾನು ನಿನ್ನೊಡನೆ ಹೇಗೆ ತಾನೇ ಸಂಭಾಷಿಸಲಿ?
03250004a ಜಾನಾಮಿ ಚ ತ್ವಾಂ ಸುರಥಸ್ಯ ಪುತ್ರಂ|
ಯಂ ಕೋಟಿಕಾಶ್ಯೇತಿ ವಿದುರ್ಮನುಷ್ಯಾಃ|
03250004c ತಸ್ಮಾದಹಂ ಶೈಬ್ಯ ತಥೈವ ತುಭ್ಯಂ|
ಆಖ್ಯಾಮಿ ಬಂಧೂನ್ಪ್ರತಿ ತನ್ನಿಬೋಧ||
ನೀನು ಸುರಥನ ಪುತ್ರನೆಂದೂ ಮತ್ತು ಜನರು ನಿನ್ನನ್ನು ಕೋಟಿಕಾಶ್ಯನೆಂದು ಕರೆಯುತ್ತಾರೆಂದೂ ನಾನು ಬಲ್ಲೆ. ಶೈಬ್ಯ! ಆದುದರಿಂದ ನಾನು ಹಾಗೆಯೇ ನನ್ನ ಬಂಧುಗಳ ಕುರಿತೂ ಹೇಳುತ್ತೇನೆ.
03250005a ಅಪತ್ಯಮಸ್ಮಿ ದ್ರುಪದಸ್ಯ ರಾಜ್ಞಃ|
ಕೃಷ್ಣೇತಿ ಮಾಂ ಶೈಬ್ಯ ವಿದುರ್ಮನುಷ್ಯಾಃ|
03250005c ಸಾಹಂ ವೃಣೇ ಪಂಚ ಜನಾನ್ಪತಿತ್ವೇ|
ಯೇ ಖಾಂಡವಪ್ರಸ್ಥಗತಾಃ ಶ್ರುತಾಸ್ತೇ||
ಶೈಬ್ಯ! ರಾಜ ದ್ರುಪದನ ಮಗಳು ನಾನು ಮತ್ತು ಕೃಷ್ಣೆಯೆಂದು ಜನರು ನನ್ನನ್ನು ತಿಳಿದಿದ್ದಾರೆ. ನಾನು ಐವರನ್ನು ಪತಿಗಳನ್ನಾಗಿ ವರಿಸಿದ್ದೇನೆ. ಅವರು ಖಾಂಡವಪ್ರಸ್ಥದವರು. ನೀನು ಕೇಳಿರಬಹುದು.
03250006a ಯುಧಿಷ್ಠಿರೋ ಭೀಮಸೇನಾರ್ಜುನೌ ಚ|
ಮಾದ್ರ್ಯಾಶ್ಚ ಪುತ್ರೌ ಪುರುಷಪ್ರವೀರೌ|
03250006c ತೇ ಮಾಂ ನಿವೇಶ್ಯೇಹ ದಿಶಶ್ಚತಸ್ರೋ|
ವಿಭಜ್ಯ ಪಾರ್ಥಾ ಮೃಗಯಾಂ ಪ್ರಯಾತಾಃ||
ಯುಧಿಷ್ಠಿರ, ಭೀಮಸೇನ, ಅರ್ಜುನ, ಮತ್ತು ಮಾದ್ರಿಯ ಪುರುಷಪ್ರವೀರರಾದ ಇಬ್ಬರು ಮಕ್ಕಳು. ಆ ಪಾರ್ಥರು ನನ್ನನ್ನು ಇಲ್ಲಿಯೇ ಇರಿಸಿ ನಾಲ್ಕು ದಿಕ್ಕುಗಳಲ್ಲಿ ವಿಭಜನೆಗೊಂಡು ಬೇಟೆಗೆಂದು ಹೋಗಿದ್ದಾರೆ.
03250007a ಪ್ರಾಚೀಂ ರಾಜಾ ದಕ್ಷಿಣಾಂ ಭೀಮಸೇನೋ|
ಜಯಃ ಪ್ರತೀಚೀಂ ಯಮಜಾವುದೀಚೀಂ|
03250007c ಮನ್ಯೇ ತು ತೇಷಾಂ ರಥಸತ್ತಮಾನಾಂ|
ಕಾಲೋಽಭಿತಃ ಪ್ರಾಪ್ತ ಇಹೋಪಯಾತುಂ||
ಉತ್ತರಕ್ಕೆ ರಾಜ, ದಕ್ಷಿಣಕ್ಕೆ ಭೀಮಸೇನ, ಪೂರ್ವಕ್ಕೆ ಜಯ ಮತ್ತು ಪಶ್ಚಿಮಕ್ಕೆ ಯಮಳರು ಹೋಗಿದ್ದಾರೆ. ಆ ರಥಸತ್ತಮರು ಹಿಂದಿರುಗಿ ಇಲ್ಲಿಗೆ ಬರುವ ಸಮಯವಾಯಿತೆಂದು ನನಗನ್ನಿಸುತ್ತದೆ.
03250008a ಸಮ್ಮಾನಿತಾ ಯಾಸ್ಯಥ ತೈರ್ಯಥೇಷ್ಟಂ|
ವಿಮುಚ್ಯ ವಾಹಾನವಗಾಹಯಧ್ವಂ|
03250008c ಪ್ರಿಯಾತಿಥಿರ್ಧರ್ಮಸುತೋ ಮಹಾತ್ಮಾ|
ಪ್ರೀತೋ ಭವಿಷ್ಯತ್ಯಭಿವೀಕ್ಷ್ಯ ಯುಷ್ಮಾನ್||
ಅವರು ನಿಮ್ಮನ್ನು ಸಮ್ಮಾನಿಸಿದ ನಂತರ ನಿಮಗಿಷ್ಟಬಂದಲ್ಲಿಗೆ ಹೋಗಿ. ವಾಹನಗಳನ್ನು ಬಿಚ್ಚಿ ಕೆಳಗಿಳಿಯಿರಿ. ಮಹಾತ್ಮ ಧರ್ಮಸುತನು ಅತಿಥಿಗಳನ್ನು ಬಯಸುತ್ತಾನೆ. ನಿಮ್ಮನ್ನು ಇಲ್ಲಿ ನೋಡಿ ಅವನು ಸಂತೋಷಪಡುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.”
03250009a ಏತಾವದುಕ್ತ್ವಾ ದ್ರುಪದಾತ್ಮಜಾ ಸಾ|
ಶೈಬ್ಯಾತ್ಮಜಂ ಚಂದ್ರಮುಖೀ ಪ್ರತೀತಾ|
03250009c ವಿವೇಶ ತಾಂ ಪರ್ಣಕುಟೀಂ ಪ್ರಶಸ್ತಾಂ|
ಸಂಚಿಂತ್ಯ ತೇಷಾಮತಿಥಿಸ್ವಧರ್ಮಂ||
ಈ ರೀತಿ ಶೈಭ್ಯಾತ್ಮಜನನ್ನು ನಂಬಿ ಚಂದ್ರಮುಖಿ ದ್ರುಪದಾತ್ಮಜೆಯು ಹೇಳಿದಳು. ಈ ಅತಿಥಿಗಳಿಗೆ ಸ್ವಧರ್ಮದಂತೆ ಸತ್ಕರಿಸುವ ಕುರಿತು ಯೋಚಿಸುತ್ತಾ ಅವಳು ಆ ಪುಣ್ಯ ಪರ್ಣಕುಟೀರವನ್ನು ಪ್ರವೇಶಿಸಿದಳು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ದ್ರೌಪದೀಹರಣಪರ್ವಣಿ ದ್ರೌಪದೀವಾಕ್ಯೇ ಪಂಚದಧಿಕದ್ವಿಶತತಮೋಽಧ್ಯಾಯ:|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ದ್ರೌಪದೀಹರಣಪರ್ವದಲ್ಲಿ ದ್ರೌಪದೀವಾಕ್ಯದಲ್ಲಿ ಇನ್ನೂರಾಐವತ್ತನೆಯ ಅಧ್ಯಾಯವು.