Shalya Parva: Chapter 52

ಶಲ್ಯಪರ್ವ: ಸಾರಸ್ವತಪರ್ವ

೫೨

ಕುರುಕ್ಷೇತ್ರ ಮಹಾತ್ಮೆ (೧-೨೧).

09052001 ಋಷಯ ಊಚುಃ

09052001a ಪ್ರಜಾಪತೇರುತ್ತರವೇದಿರುಚ್ಯತೇ

        ಸನಾತನಾ ರಾಮ ಸಮಂತಪಂಚಕ|

09052001c ಸಮೀಜಿರೇ ಯತ್ರ ಪುರಾ ದಿವೌಕಸೋ

        ವರೇಣ ಸತ್ರೇಣ ಮಹಾವರಪ್ರದಾಃ||

ಋಷಿಗಳು ಹೇಳಿದರು: “ರಾಮ! ಸನಾತನ ಸಮಂತಪಂಚಕವನ್ನು ಪ್ರಜಾಪತಿಯ ಉತ್ತರವೇದಿಯೆಂದು ಕರೆಯುತ್ತಾರೆ. ಮಹಾವರಪ್ರದ ದಿವೌಕಸರೇ ಹಿಂದೆ ಇಲ್ಲಿ ಶ್ರೇಷ್ಠ ಸತ್ರಗಳನ್ನು ಯಾಜಿಸಿದ್ದರು.

09052002a ಪುರಾ ಚ ರಾಜರ್ಷಿವರೇಣ ಧೀಮತಾ

        ಬಹೂನಿ ವರ್ಷಾಣ್ಯಮಿತೇನ ತೇಜಸಾ|

09052002c ಪ್ರಕೃಷ್ಟಮೇತತ್ಕುರುಣಾ ಮಹಾತ್ಮನಾ

        ತತಃ ಕುರುಕ್ಷೇತ್ರಮಿತೀಹ ಪಪ್ರಥೇ||

ಹಿಂದೆ ರಾಜರ್ಷಿಶ್ರೇಷ್ಠ ಧೀಮತ ಅಮಿತ ತೇಜಸ್ವಿ ಮಹಾತ್ಮ ಕುರುವು ಅನೇಕ ವರ್ಷಗಳು ಹೂಳುತ್ತಿದ್ದುದರಿಂದ ಈ ಪ್ರದೇಶವು ಕುರುಕ್ಷೇತ್ರವೆಂದು ಪ್ರಸಿದ್ಧವಾಯಿತು.”

09052003 ರಾಮ ಉವಾಚ

09052003a ಕಿಮರ್ಥಂ ಕುರುಣಾ ಕೃಷ್ಟಂ ಕ್ಷೇತ್ರಮೇತನ್ಮಹಾತ್ಮನಾ|

09052003c ಏತದಿಚ್ಚಾಮ್ಯಹಂ ಶ್ರೋತುಂ ಕಥ್ಯಮಾನಂ ತಪೋಧನಾಃ||

ರಾಮನು ಹೇಳಿದನು: “ಮಹಾತ್ಮ ಕುರುವು ಈ ಪ್ರದೇಶವನ್ನು ಏಕೆ ಹೂಳಿದನು? ಇದನ್ನು ಕೇಳಲು ಬಯಸುತ್ತೇನೆ. ತಪೋಧನರು ಹೇಳಬೇಕು!”

09052004 ಋಷಯ ಊಚುಃ

09052004a ಪುರಾ ಕಿಲ ಕುರುಂ ರಾಮ ಕೃಷಂತಂ ಸತತೋತ್ಥಿತಂ|

09052004c ಅಭ್ಯೇತ್ಯ ಶಕ್ರಸ್ತ್ರಿದಿವಾತ್ಪರ್ಯಪೃಚ್ಚತ ಕಾರಣಂ||

ಋಷಿಗಳು ಹೇಳಿದರು: “ರಾಮ! ಹಿಂದೆ ಸತತವೂ ನಿಂತು ಉಳುತ್ತಿದ್ದ ಕುರುವನ್ನು ಶಕ್ರನು ತ್ರಿದಿವದಿಂದ ಬಂದು ಭೇಟಿಮಾಡಿ ಇದರ ಕಾರಣವನ್ನು ಕೇಳಿದ್ದನು:

09052005a ಕಿಮಿದಂ ವರ್ತತೇ ರಾಜನ್ಪ್ರಯತ್ನೇನ ಪರೇಣ ಚ|

09052005c ರಾಜರ್ಷೇ ಕಿಮಭಿಪ್ರೇತಂ ಯೇನೇಯಂ ಕೃಷ್ಯತೇ ಕ್ಷಿತಿಃ||

“ರಾಜನ್! ಯಾವ ಕಾರಣದಿಂದ ಈ ಮಹಾಪ್ರಯತ್ನವನ್ನು ಮಾಡುತ್ತಿದ್ದೀಯೆ? ರಾಜರ್ಷೇ! ಈ ಭೂಮಿಯನ್ನು ಸತತವಾಗಿ ಉಳುತ್ತಿರುವ ಉದ್ದೇಶವಾದರೂ ಏನು?”

09052006 ಕುರುರುವಾಚ

09052006a ಇಹ ಯೇ ಪುರುಷಾಃ ಕ್ಷೇತ್ರೇ ಮರಿಷ್ಯಂತಿ ಶತಕ್ರತೋ|

09052006c ತೇ ಗಮಿಷ್ಯಂತಿ ಸುಕೃತಾಽಲ್ಲೋಕಾನ್ಪಾಪವಿವರ್ಜಿತಾನ್||

ಕುರುವು ಹೇಳಿದನು: “ಶತಕ್ರತೋ! ಈ ಕ್ಷೇತ್ರದಲ್ಲಿ ಯಾರು ಮರಣಹೊಂದುತ್ತಾರೋ ಅವರು ಪಾಪಗಳನ್ನು ಕಳೆದುಕೊಂಡು ಸುಕೃತ ಲೋಕಗಳಿಗೆ ಹೋಗುತ್ತಾರೆ.”

09052007a ಅವಹಸ್ಯ ತತಃ ಶಕ್ರೋ ಜಗಾಮ ತ್ರಿದಿವಂ ಪ್ರಭುಃ|

09052007c ರಾಜರ್ಷಿರಪ್ಯನಿರ್ವಿಣ್ಣಃ ಕರ್ಷತ್ಯೇವ ವಸುಂಧರಾಂ||

ಆಗ ಪ್ರಭು ಶಕ್ರನು ಅಪಹಾಸ್ಯಮಾಡಿ ತ್ರಿದಿವಕ್ಕೆ ತೆರಳಿದನು. ರಾಜರ್ಷಿಯಾದರೋ ಸ್ವಲ್ಪವೂ ನಿರ್ವಿಣ್ಣನಾಗದೇ ಭೂಮಿಯನ್ನು ಉಳುತ್ತಲೇ ಇದ್ದನು.

09052008a ಆಗಮ್ಯಾಗಮ್ಯ ಚೈವೈನಂ ಭೂಯೋ ಭೂಯೋಽವಹಸ್ಯ ಚ|

09052008c ಶತಕ್ರತುರನಿರ್ವಿಣ್ಣಂ ಪೃಷ್ಟ್ವಾ ಪೃಷ್ಟ್ವಾ ಜಗಾಮ ಹ||

ಶತಕ್ರತುವು ಪುನಃ ಪುನಃ ಬಂದು ಅವನನ್ನು ಅಪಹಾಸ್ಯಮಾಡಿ ಕೇಳುತ್ತಿದ್ದನು. ಅವನು ನಿರ್ವಿಣ್ಣನಾಗದೇ ಮತ್ತೆ ಮತ್ತೆ ಅದೇ ಉತ್ತರವನ್ನು ನೀಡುತ್ತಿದ್ದನು.

09052009a ಯದಾ ತು ತಪಸೋಗ್ರೇಣ ಚಕರ್ಷ ವಸುಧಾಂ ನೃಪಃ|

09052009c ತತಃ ಶಕ್ರೋಽಬ್ರವೀದ್ದೇವಾನ್ರಾಜರ್ಷೇರ್ಯಚ್ಚಿಕೀರ್ಷಿತಂ||

ನೃಪನಾದರೋ ಉಗ್ರ ತಪಸ್ಸಿನಂತೆ ಭೂಮಿಯನ್ನು ಉಳುತ್ತಿದ್ದನು. ಆಗ ಶಕ್ರನು ರಾಜರ್ಷಿಯ ಉದ್ದೇಶವನ್ನು ದೇವತೆಗಳಿಗೆ ತಿಳಿಸಿದನು.

09052010a ತಚ್ಚ್ರುತ್ವಾ ಚಾಬ್ರುವನ್ದೇವಾಃ ಸಹಸ್ರಾಕ್ಷಮಿದಂ ವಚಃ|

09052010c ವರೇಣ ಚ್ಚಂದ್ಯತಾಂ ಶಕ್ರ ರಾಜರ್ಷಿರ್ಯದಿ ಶಕ್ಯತೇ||

ಅದನ್ನು ಕೇಳಿ ದೇವತೆಗಳು ಸಹಸ್ರಾಕ್ಷನಿಗೆ ಈ ಮಾತನ್ನಾಡಿದರು: “ಶಕ್ರ! ಸಾಧ್ಯವಾದರೆ ರಾಜರ್ಷಿಗೆ ವರದಾನವನ್ನಿತ್ತು ಅವನನ್ನು ಒಲಿಸಿಕೋ!

09052011a ಯದಿ ಹ್ಯತ್ರ ಪ್ರಮೀತಾ ವೈ ಸ್ವರ್ಗಂ ಗಚ್ಚಂತಿ ಮಾನವಾಃ|

09052011c ಅಸ್ಮಾನನಿಷ್ಟ್ವಾ ಕ್ರತುಭಿರ್ಭಾಗೋ ನೋ ನ ಭವಿಷ್ಯತಿ||

ಒಂದುವೇಳೆ ಮಾನವರು ಇಲ್ಲಿ ಮರಣಹೊಂದಿ ಸ್ವರ್ಗಕ್ಕೆ ಹೋಗುತ್ತಾರೆಂದಾದರೆ ನಮಗೆ ಕ್ರತುಗಳಲ್ಲಿ ಭಾಗವು ದೊರೆಯದಂತಾಗುತ್ತದೆ.”

09052012a ಆಗಮ್ಯ ಚ ತತಃ ಶಕ್ರಸ್ತದಾ ರಾಜರ್ಷಿಮಬ್ರವೀತ್|

09052012c ಅಲಂ ಖೇದೇನ ಭವತಃ ಕ್ರಿಯತಾಂ ವಚನಂ ಮಮ||

ಆಗ ಶಕ್ರನು ರಾಜರ್ಷಿಯಲ್ಲಿಗೆ ಬಂದು ಹೇಳಿದನು: “ಇನ್ನು ನೀನು ಕಷ್ಟಪಡಬೇಡ! ನನ್ನ ಮಾತಿನಂತೆ ಮಾಡು!

09052013a ಮಾನವಾ ಯೇ ನಿರಾಹಾರಾ ದೇಹಂ ತ್ಯಕ್ಷ್ಯಂತ್ಯತಂದ್ರಿತಾಃ|

09052013c ಯುಧಿ ವಾ ನಿಹತಾಃ ಸಮ್ಯಗಪಿ ತಿರ್ಯಗ್ಗತಾ ನೃಪ||

ನೃಪ! ಇಲ್ಲಿ ಯಾವ ಮಾನವರು ನಿರಾಹಾರರಾಗಿ ಅತಂದ್ರಿತರಾಗಿ ದೇಹತ್ಯಾಗಮಾಡುತ್ತಾರೋ ಅಥವಾ ಯುದ್ಧದಲ್ಲಿ ಹತರಾಗುತ್ತಾರೋ ಅವರೆಲ್ಲರೂ ಸ್ವರ್ಗಕ್ಕೆ ಹೋಗುತ್ತಾರೆ.

09052014a ತೇ ಸ್ವರ್ಗಭಾಜೋ ರಾಜೇಂದ್ರ ಭವಂತ್ವಿತಿ ಮಹಾಮತೇ|

09052014c ತಥಾಸ್ತ್ವಿತಿ ತತೋ ರಾಜಾ ಕುರುಃ ಶಕ್ರಮುವಾಚ ಹ||

ರಾಜೇಂದ್ರ! ಮಹಾಮತೇ! ಅವರೆಲ್ಲರೂ ಸ್ವರ್ಗಕ್ಕೆ ಭಾಗಿಗಳಾಗುತ್ತಾರೆ.” ಅನಂತರ ಹಾಗೆಯೇ ಆಗಲೆಂದು ರಾಜ ಕುರುವು ಶಕ್ರನಿಗೆ ಹೇಳಿದನು.

09052015a ತತಸ್ತಮಭ್ಯನುಜ್ಞಾಪ್ಯ ಪ್ರಹೃಷ್ಟೇನಾಂತರಾತ್ಮನಾ|

09052015c ಜಗಾಮ ತ್ರಿದಿವಂ ಭೂಯಃ ಕ್ಷಿಪ್ರಂ ಬಲನಿಷೂದನಃ||

ಆಗ ಅವನಿಂದ ಅನುಮತಿಯನ್ನು ಪಡೆದು ಒಳಗಿಂದೊಳಗೇ ಪ್ರಹೃಷ್ಟನಾಗಿ ಬಲನಿಷೂದನನು ಬೇಗನೆ ತ್ರಿದಿವಕ್ಕೆ ತೆರಳಿದನು.

09052016a ಏವಮೇತದ್ಯದುಶ್ರೇಷ್ಠ ಕೃಷ್ಟಂ ರಾಜರ್ಷಿಣಾ ಪುರಾ|

09052016c ಶಕ್ರೇಣ ಚಾಪ್ಯನುಜ್ಞಾತಂ ಪುಣ್ಯಂ ಪ್ರಾಣಾನ್ವಿಮುಂಚತಾಂ||

ಯದುಶ್ರೇಷ್ಠ! ಹೀಗೆ ಹಿಂದೆ ಉಳುತ್ತಿದ್ದ ರಾಜರ್ಷಿಯು ಶಕ್ರನಿಂದ ಅನುಜ್ಞಾತನಾಗಿ ಪುಣ್ಯ ಪ್ರಾಣಗಳನ್ನು ತೊರೆದನು.

09052017a ಅಪಿ ಚಾತ್ರ ಸ್ವಯಂ ಶಕ್ರೋ ಜಗೌ ಗಾಥಾಂ ಸುರಾಧಿಪಃ|

09052017c ಕುರುಕ್ಷೇತ್ರೇ ನಿಬದ್ಧಾಂ ವೈ ತಾಂ ಶೃಣುಷ್ವ ಹಲಾಯುಧ||

ಹಲಾಯುಧ! ಕುರುಕ್ಷೇತ್ರಕ್ಕೆ ಸಂಬಂಧಿಸಿದಂತೆ ಸ್ವಯಂ ಸುರಾಧಿಪನೇ ಹಾಡಿದ ಈ ಶ್ಲೋಕಗಳನ್ನು ಕೇಳು!

09052018a ಪಾಂಸವೋಽಪಿ ಕುರುಕ್ಷೇತ್ರಾದ್ವಾಯುನಾ ಸಮುದೀರಿತಾಃ|

09052018c ಅಪಿ ದುಷ್ಕೃತಕರ್ಮಾಣಂ ನಯಂತಿ ಪರಮಾಂ ಗತಿಂ||

“ಗಾಳಿಯಿಂದ ತೂರಿಕೊಂಡೊಯ್ಯಲ್ಪಟ್ಟ ಕುರುಕ್ಷೇತ್ರದ ಧೂಳು ಕೂಡ ದುಷ್ಕರ್ಮಿಗಳಾಗಿದ್ದವರನ್ನು ಪರಮ ಗತಿಗೆ ಕೊಂಡೊಯ್ಯುತ್ತದೆ.

09052019a ಸುರರ್ಷಭಾ ಬ್ರಾಹ್ಮಣಸತ್ತಮಾಶ್ಚ

        ತಥಾ ನೃಗಾದ್ಯಾ ನರದೇವಮುಖ್ಯಾಃ|

09052019c ಇಷ್ಟ್ವಾ ಮಹಾರ್ಹೈಃ ಕ್ರತುಭಿರ್ನೃಸಿಂಹ

        ಸಂನ್ಯಸ್ಯ ದೇಹಾನ್ಸುಗತಿಂ ಪ್ರಪನ್ನಾಃ||

ಸುರರ್ಷಭರೇ! ನರಸಿಂಹರಾದ ಬ್ರಾಹ್ಮಣಸತ್ತಮರೂ ಮತ್ತು ನೃಗಾದಿ ನರದೇವಮುಖ್ಯರೂ ಮಹಾವೆಚ್ಚದ ಇಷ್ಟಿ-ಕ್ರತುಗಳನ್ನು ಮಾಡಿ ದೇಹಗಳನ್ನು ತೊರೆದು ಸರ್ಗವನ್ನು ಪಡೆದರು.

09052020a ತರಂತುಕಾರಂತುಕಯೋರ್ಯದಂತರಂ

        ರಾಮಹ್ರದಾನಾಂ ಚ ಮಚಕ್ರುಕಸ್ಯ|

09052020c ಏತತ್ಕುರುಕ್ಷೇತ್ರಸಮಂತಪಂಚಕಂ

        ಪ್ರಜಾಪತೇರುತ್ತರವೇದಿರುಚ್ಯತೇ||

ತರಂತುಕ, ಕಾರಂತುಕ, ರಾಮಹ್ರದ ಮತ್ತು ಮಚಕ್ರುಕಗಳ ಮಧ್ಯದಲ್ಲಿರುವ ಇದೇ ಕುರುಕ್ಷೇತ್ರ ಸಮಂತಪಂಚಕವನ್ನು ಪ್ರಜಾಪತಿಯ ಉತ್ತರವೇದಿ ಎಂದು ಕರೆಯಲ್ಪಡುತ್ತದೆ.

09052021a ಶಿವಂ ಮಹತ್ಪುಣ್ಯಮಿದಂ ದಿವೌಕಸಾಂ

        ಸುಸಮ್ಮತಂ ಸ್ವರ್ಗಗುಣೈಃ ಸಮನ್ವಿತಂ|

09052021c ಅತಶ್ಚ ಸರ್ವೇಽಪಿ ವಸುಂಧರಾಧಿಪಾ

        ಹತಾ ಗಮಿಷ್ಯಂತಿ ಮಹಾತ್ಮನಾಂ ಗತಿಂ||

ಮಹಾಪುಣ್ಯವೂ ಮಂಗಳಕರವೂ ಆಗಿರುವ ಇದು ಸ್ವರ್ಗದ ಗುಣಗಳನ್ನು ಹೊಂದಿದ್ದು ದಿವೌಕಸರಿಗೆ ಸುಸಮ್ಮತವಾಗಿದೆ. ಆದುದರಿಂದ ಅಲ್ಲಿ ಹತರಾದ ಸರ್ವ ರಾಜರೂ ಮಹಾತ್ಮರ ಗತಿಯನ್ನು ಹೊಂದುತ್ತಾರೆ.””

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಬಲದೇವತೀರ್ಥಯಾತ್ರಾಯಾಂ ಕುರುಕ್ಷೇತ್ರಕಥನೇ ದ್ವಿಪಂಚಾಶತ್ತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಬಲದೇವತೀರ್ಥಯಾತ್ರಾಯಾಂ ಕುರುಕ್ಷೇತ್ರಕಥನ ಎನ್ನುವ ಐವತ್ತೆರಡನೇ ಅಧ್ಯಾಯವು.

ಸಾರಸ್ವತ ಪರ್ವದ ಇತರ ಅಧ್ಯಾಯಗಳು:

  1. ಪಾಂಡವಾನಾಂ ಸರೋವರಾಗಮನ
  2. ಸುಯೋಧನಯುಧಿಷ್ಠಿರಸಂವಾದ
  3. ಸುಯೋಧನಯುಧಿಷ್ಠಿರಸಂವಾದ
  4. ಭೀಮಸೇನದುರ್ಯೋಧನಸಂವಾದ
  5. ಬಲದೇವಾಗಮನ
  6. ಬಲದೇವತೀರ್ಥಯಾತ್ರಾಯಾಂ ಪ್ರಭಾಸೋತ್ಪತ್ತಿಕಥನ
  7. ಬಲದೇವತೀರ್ಥಯಾತ್ರಾಯಾಂ ತ್ರಿತಾಖ್ಯಾನ
  8. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  9. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  10. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  11. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  12. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  13. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  14. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  15. ಬಲದೇವತೀರ್ಥಯಾತ್ರಾಯಾಂ ಕುಮಾರಾಭಿಷೇಕಕ್ರಮ
  16. ಬಲದೇವತೀರ್ಥಯಾತ್ರಾಯಾಂ ಸ್ಕಂದಾಭಿಷೇಕ
  17. ಬಲದೇವತೀರ್ಥಯಾತ್ರಾಯಾಂ ತಾರಕವಧ
  18. ಬಲದೇವತೀರ್ಥಯಾತ್ರಾ
  19. ಬಲದೇವತೀರ್ಥಯಾತ್ರಾಯಾಂ ಬದರಪಾಚನತೀರ್ಥಕಥನ
  20. ಬಲದೇವತೀರ್ಥಯಾತ್ರಾ
  21. ಬಲದೇವತೀರ್ಥಯಾತ್ರಾ
  22. ಬಲದೇವತೀರ್ಥಯಾತ್ರಾ
  23. ಬಲದೇವತೀರ್ಥಯಾತ್ರಾ
  24. ಬಲದೇವತೀರ್ಥಯಾತ್ರಾಯಾಂ ಕುರುಕ್ಷೇತ್ರಕಥನ
  25. ಬಲದೇವತೀರ್ಥಯಾತ್ರಾ

Comments are closed.