Shalya Parva: Chapter 40

ಶಲ್ಯಪರ್ವ: ಸಾರಸ್ವತಪರ್ವ

೪೦

ದಾಲ್ಭ್ಯ ಬಕನ ಚರಿತ್ರೆ(೧-೩೫).

09040001 ವೈಶಂಪಾಯನ ಉವಾಚ

09040001a ಬ್ರಹ್ಮಯೋನಿಭಿರಾಕೀರ್ಣಂ ಜಗಾಮ ಯದುನಂದನಃ|

09040001c ಯತ್ರ ದಾಲ್ಭ್ಯೋ ಬಕೋ ರಾಜನ್ಪಶ್ವರ್ಥಂ ಸುಮಹಾತಪಾಃ||

09040001e ಜುಹಾವ ಧೃತರಾಷ್ಟ್ರಸ್ಯ ರಾಷ್ಟ್ರಂ ವೈಚಿತ್ರವೀರ್ಯಿಣಃ||

ವೈಶಂಪಾಯನನು ಹೇಳಿದನು: “ಬ್ರಹ್ಮಯೋನಿಯಿಂದ ಯದುನಂದನನು ಆಕೀರ್ಣಕ್ಕೆ ಹೋದನು. ರಾಜನ್! ಅಲ್ಲಿ ಪಶುಗೋಸ್ಕರವಾಗಿ ಮಹಾತಪಸ್ವಿ ದಾಲ್ಭ್ಯ ಬಕನು ವಿಚಿತ್ರವೀರ್ಯನ ಮಗ ಧೃತರಾಷ್ಟ್ರನ ರಾಷ್ಟ್ರವನ್ನೇ ಹೋಮಮಾಡಿದನು.

09040002a ತಪಸಾ ಘೋರರೂಪೇಣ ಕರ್ಶಯನ್ದೇಹಮಾತ್ಮನಃ|

09040002c ಕ್ರೋಧೇನ ಮಹತಾವಿಷ್ಟೋ ಧರ್ಮಾತ್ಮಾ ವೈ ಪ್ರತಾಪವಾನ್||

ಅವನು ಘೋರರೂಪದ ತಪಸ್ಸಿನಿಂದ ತನ್ನ ದೇಹವನ್ನು ಕೃಶಗೊಳಿಸಿದ್ದನು. ಆದರೆ ಆ ಧರ್ಮಾತ್ಮ ಪ್ರತಾಪವಾನನು ಮಹಾಕ್ರೋಧಿಷ್ಟನಾಗಿದ್ದನು.

09040003a ಪುರಾ ಹಿ ನೈಮಿಷೇಯಾಣಾಂ ಸತ್ರೇ ದ್ವಾದಶವಾರ್ಷಿಕೇ|

09040003c ವೃತ್ತೇ ವಿಶ್ವಜಿತೋಽಮ್ತೇ ವೈ ಪಾಂಚಾಲಾನೃಷಯೋಽಗಮನ್||

ಹಿಂದೆ ನೈಮಿಷವಾಸಿಗಳ ಹನ್ನೆರಡು ವರ್ಷಗಳ ಸತ್ರವು ನಡೆಯುತ್ತಿರಲು ವಿಶ್ವಜಿತು ಯಾಗವು ಸಂಪೂರ್ಣಗೊಳ್ಳಲು ಋಷಿಗಳು ಪಾಂಚಾಲರಲ್ಲಿಗೆ ಹೋದರು.

09040004a ತತ್ರೇಶ್ವರಮಯಾಚಂತ ದಕ್ಷಿಣಾರ್ಥಂ ಮನೀಷಿಣಃ|

09040004c ಬಲಾನ್ವಿತಾನ್ವತ್ಸತರಾನ್ನಿರ್ವ್ಯಾಧೀನೇಕವಿಂಶತಿಂ||

ಅಲ್ಲಿಗೆ ಹೋಗಿ ರಾಜನಿಂದ ದಕ್ಷಿಣೆಯನ್ನು ಕೇಳಿ ಆ ಮುನಿಗಳು ಬಲಾನ್ವಿತ, ರೋಗರಹಿತ ಇಪ್ಪತ್ತೊಂದು ಹೋರಿಕರುಗಳನ್ನು ಪಡೆದರು.

09040005a ತಾನಬ್ರವೀದ್ಬಕೋ ವೃದ್ಧೋ ವಿಭಜಧ್ವಂ ಪಶೂನಿತಿ|

09040005c ಪಶೂನೇತಾನಹಂ ತ್ಯಕ್ತ್ವಾ ಭಿಕ್ಷಿಷ್ಯೇ ರಾಜಸತ್ತಮಂ||

ಆಗ ವೃದ್ಧ ಬಕನು ಅವರಿಗೆ “ಪಶುಗಳನ್ನು ನೀವೇ ಹಂಚಿಕೊಳ್ಳಿರಿ. ನನ್ನ ಪಾಲಿನ ಪಶುವನ್ನು ನಿಮಗೇ ಬಿಟ್ಟುಕೊಟ್ಟು ನಾನು ಇನ್ನೊಬ್ಬ ರಾಜಸತ್ತಮನಲ್ಲಿ ಭಿಕ್ಷೆಯಾಗಿ ಪಡೆಯುತ್ತೇನೆ!”

09040006a ಏವಮುಕ್ತ್ವಾ ತತೋ ರಾಜನೃಷೀನ್ಸರ್ವಾನ್ಪ್ರತಾಪವಾನ್|

09040006c ಜಗಾಮ ಧೃತರಾಷ್ಟ್ರಸ್ಯ ಭವನಂ ಬ್ರಾಹ್ಮಣೋತ್ತಮಃ||

ರಾಜನ್! ಹೀಗೆ ಆ ಋಷಿಗಳೆಲ್ಲರಿಗೆ ಹೇಳಿ ಆ ಪ್ರತಾಪವಾನ್ ಬ್ರಾಹ್ಮಣೋತ್ತಮನು ಧೃತರಾಷ್ಟ್ರನ ಭವನಕ್ಕೆ ಹೋದನು.

09040007a ಸ ಸಮೀಪಗತೋ ಭೂತ್ವಾ ಧೃತರಾಷ್ಟ್ರಂ ಜನೇಶ್ವರಂ|

09040007c ಅಯಾಚತ ಪಶೂನ್ದಾಲ್ಭ್ಯಃ ಸ ಚೈನಂ ರುಷಿತೋಽಬ್ರವೀತ್||

ಜನೇಶ್ವರ ಧೃತರಾಷ್ಟ್ರನ ಸಮೀಪ ಹೋಗಿ ದಾಲ್ಭ್ಯನು ಪಶುಗಳನ್ನು ಯಾಚಿಸಿದನು. ಆಗ ರಾಜನು ರೋಷಗೊಂಡು ಅವನೊಂದಿಗೆ ಮಾತನಾಡಿದನು.

09040008a ಯದೃಚ್ಚಯಾ ಮೃತಾ ದೃಷ್ಟ್ವಾ ಗಾಸ್ತದಾ ನೃಪಸತ್ತಮ|

09040008c ಏತಾನ್ಪಶೂನ್ನಯ ಕ್ಷಿಪ್ರಂ ಬ್ರಹ್ಮಬಂಧೋ ಯದೀಚ್ಚಸಿ||

ಆ ನೃಪಸತ್ತಮನು ದೈವೇಚ್ಛೆಯಿಂದ ಮೃತಗೊಂಡಿದ್ದ ಗೋವುಗಳನ್ನು ನೋಡಿ “ಬ್ರಹ್ಮಬಂಧುವೇ! ನಿನಗೆ ಇಷ್ಟವಾದರೆ ಈ ಪಶುಗಳನ್ನು ಬೇಗನೇ ಕೊಂಡೊಯ್ಯಿ!” ಎಂದನು.

09040009a ಋಷಿಸ್ತ್ವಥ ವಚಃ ಶ್ರುತ್ವಾ ಚಿಂತಯಾಮಾಸ ಧರ್ಮವಿತ್|

09040009c ಅಹೋ ಬತ ನೃಶಂಸಂ ವೈ ವಾಕ್ಯಮುಕ್ತೋಽಸ್ಮಿ ಸಂಸದಿ||

ಆ ಮಾತನ್ನು ಕೇಳಿ ಧರ್ಮವಿದು ಋಷಿಯು “ಅಯ್ಯೋ! ಸಂಸದಿಯಲ್ಲಿ ಇಂತಹ ಕಠೋರ ಮಾತುಗಳನ್ನು ಕೇಳಬೇಕಾಯಿತಲ್ಲ!” ಎಂದು ಚಿಂತಿಸಿದನು.

09040010a ಚಿಂತಯಿತ್ವಾ ಮುಹೂರ್ತಂ ಚ ರೋಷಾವಿಷ್ಟೋ ದ್ವಿಜೋತ್ತಮಃ|

09040010c ಮತಿಂ ಚಕ್ರೇ ವಿನಾಶಾಯ ಧೃತರಾಷ್ಟ್ರಸ್ಯ ಭೂಪತೇಃ||

ಮುಹೂರ್ತಕಾಲ ಚಿಂತಿಸಿ ರೋಷಾವಿಷ್ಟನಾದ ಆ ದ್ವಿಜೋತ್ತಮನು ಭೂಪತಿ ಧೃತರಾಷ್ಟ್ರನ ವಿನಾಶದ ಕುರಿತು ನಿಶ್ಚಯಿಸಿದನು.

09040011a ಸ ಉತ್ಕೃತ್ಯ ಮೃತಾನಾಂ ವೈ ಮಾಂಸಾನಿ ದ್ವಿಜಸತ್ತಮಃ|

09040011c ಜುಹಾವ ಧೃತರಾಷ್ಟ್ರಸ್ಯ ರಾಷ್ಟ್ರಂ ನರಪತೇಃ ಪುರಾ||

ಆ ದ್ವಿಜಸತ್ತಮನು ಮೃತ ಪಶುಗಳನ್ನೆತ್ತಿಕೊಂಡು ಹೋಗಿ ನರಪತಿ ಧೃತರಾಷ್ಟ್ರನ ರಾಜ್ಯವನ್ನು ಹೋಮಮಾಡಿದನು.

09040012a ಅವಕೀರ್ಣೇ ಸರಸ್ವತ್ಯಾಸ್ತೀರ್ಥೇ ಪ್ರಜ್ವಾಲ್ಯ ಪಾವಕಂ|

09040012c ಬಕೋ ದಾಲ್ಭ್ಯೋ ಮಹಾರಾಜ ನಿಯಮಂ ಪರಮಾಸ್ಥಿತಃ||

09040012e ಸ ತೈರೇವ ಜುಹಾವಾಸ್ಯ ರಾಷ್ಟ್ರಂ ಮಾಂಸೈರ್ಮಹಾತಪಾಃ||

ಮಹಾರಾಜ! ಮಹಾತಪಸ್ವಿ ದಾಲ್ಭ್ಯ ಬಕನು ನಿಯಮಾಸ್ಥಿತನಾಗಿದ್ದುಕೊಂಡು ಸರಸ್ವತಿಯ ಅವಕೀರ್ಣ ತೀರ್ಥದಲ್ಲಿ ಯಜ್ಞೇಶ್ವರನನ್ನು ಪ್ರಜ್ವಲಿಸಿ ಅದರಲ್ಲಿಯೇ ಮಾಂಸಗಳಿಂದ ರಾಷ್ಟ್ರವನ್ನು ಆಹುತಿಯಾಗಿತ್ತನು.

09040013a ತಸ್ಮಿಂಸ್ತು ವಿಧಿವತ್ಸತ್ರೇ ಸಂಪ್ರವೃತ್ತೇ ಸುದಾರುಣೇ|

09040013c ಅಕ್ಷೀಯತ ತತೋ ರಾಷ್ಟ್ರಂ ಧೃತರಾಷ್ಟ್ರಸ್ಯ ಪಾರ್ಥಿವ||

ಪಾರ್ಥಿವ! ಆ ಸುದಾರುಣ ಸತ್ರವು ವಿಧಿವತ್ತಾಗಿ ಮುಂದುವರೆಯುತ್ತಿದ್ದ ಹಾಗೇ ಧೃತರಾಷ್ಟ್ರನ ರಾಷ್ಟ್ರವು ಕ್ಷೀಣಿಸುತ್ತಾ ಬಂದಿತು.

09040014a ಚಿದ್ಯಮಾನಂ ಯಥಾನಂತಂ ವನಂ ಪರಶುನಾ ವಿಭೋ|

09040014c ಬಭೂವಾಪಹತಂ ತಚ್ಚಾಪ್ಯವಕೀರ್ಣಮಚೇತನಂ||

ವಿಭೋ! ಕೊಡಲಿಯಿಂದ ಕತ್ತರಿಸಲ್ಪಡುತ್ತಾ ಅರಣ್ಯವು ಕ್ಷೀಣಗೊಳ್ಳುವಂತೆ ಧೃತರಾಷ್ಟ್ರನ ರಾಷ್ಟ್ರವು ಕ್ಷೀಣಿಸುತ್ತಾ ಬಂದಿತು.

09040015a ದೃಷ್ಟ್ವಾ ತದವಕೀರ್ಣಂ ತು ರಾಷ್ಟ್ರಂ ಸ ಮನುಜಾಧಿಪಃ|

09040015c ಬಭೂವ ದುರ್ಮನಾ ರಾಜಂಶ್ಚಿಂತಯಾಮಾಸ ಚ ಪ್ರಭುಃ||

ರಾಜನ್! ತನ್ನ ರಾಷ್ಟ್ರವು ಕ್ಷೀಣಿಸುತ್ತಿರುವುದನ್ನು ನೋಡಿದ ಪ್ರಭು ಮನುಜಾಧಿಪನು ಚಿಂತಿಸಿ ದುಃಖಿತನಾದನು.

09040016a ಮೋಕ್ಷಾರ್ಥಮಕರೋದ್ಯತ್ನಂ ಬ್ರಾಹ್ಮಣೈಃ ಸಹಿತಃ ಪುರಾ|

09040016c ಅಥಾಸೌ ಪಾರ್ಥಿವಃ ಖಿನ್ನಸ್ತೇ ಚ ವಿಪ್ರಾಸ್ತದಾ ನೃಪ||

ಸಂಕಟ ವಿಮೋಚನೆಗಾಗಿ ಬ್ರಾಹ್ಮಣರೊಂದಿಗೆ ಪ್ರಯತ್ನಪಟ್ಟನು. ನೃಪ! ಆದರೂ ಪಾರ್ಥಿವ ಮತ್ತು ವಿಪ್ರರು ಖಿನ್ನರಾಗಿಯೇ ಇದ್ದರು.

09040017a ಯದಾ ಚಾಪಿ ನ ಶಕ್ನೋತಿ ರಾಷ್ಟ್ರಂ ಮೋಚಯಿತುಂ ನೃಪ|

09040017c ಅಥ ವೈಪ್ರಾಶ್ನಿಕಾಂಸ್ತತ್ರ ಪಪ್ರಚ್ಚ ಜನಮೇಜಯ||

ಜನಮೇಜಯ! ನೃಪ! ರಾಷ್ಟ್ರವನ್ನು ಆ ಸಂಕಟದಿಂದ ಮುಕ್ತಗೊಳಿಸಲು ಸಾಧ್ಯವಿಲ್ಲದಾದಾಗ ಅವನು ವೈಪ್ರಾಶ್ನಿಕರನ್ನು ಕೇಳಿದನು.

09040018a ತತೋ ವೈಪ್ರಾಶ್ನಿಕಾಃ ಪ್ರಾಹುಃ ಪಶುವಿಪ್ರಕೃತಸ್ತ್ವಯಾ|

09040018c ಮಾಂಸೈರಭಿಜುಹೋತೀತಿ ತವ ರಾಷ್ಟ್ರಂ ಮುನಿರ್ಬಕಃ||

ಆಗ ವೈಪ್ರಾಶ್ನಿಕರು ಹೇಳಿದರು: “ನೀನು ವಿಪ್ರನಿಗೆ ನೀಡಿದ ಪಶುಗಳ ಮಾಂಸಗಳಿಂದ ಮುನಿ ಬಕನು ನಿನ್ನ ರಾಷ್ಟ್ರವನ್ನು ಆಹುತಿಯನ್ನಾಗಿ ಕೊಟ್ಟು ಹೋಮಿಸುತ್ತಿದ್ದಾನೆ.

09040019a ತೇನ ತೇ ಹೂಯಮಾನಸ್ಯ ರಾಷ್ಟ್ರಸ್ಯಾಸ್ಯ ಕ್ಷಯೋ ಮಹಾನ್|

09040019c ತಸ್ಯೈತತ್ತಪಸಃ ಕರ್ಮ ಯೇನ ತೇ ಹ್ಯನಯೋ ಮಹಾನ್||

09040019e ಅಪಾಂ ಕುಂಜೇ ಸರಸ್ವತ್ಯಾಸ್ತಂ ಪ್ರಸಾದಯ ಪಾರ್ಥಿವ||

ಅವನು ಹಾಗೆ ಹೋಮ ಮಾಡುತ್ತಿರುವುದರಿಂದ ನಿನ್ನ ಮಹಾ ರಾಷ್ಟ್ರವು ಕ್ಷಯವಾಗುತ್ತಿದೆ. ಆ ತಪಸ್ವಿಯ ಕರ್ಮದಿಂದಲೇ ನಿನಗೆ ಈ ಮಹಾ ನಷ್ಟವುಂಟಾಗುತ್ತಿದೆ. ಪಾರ್ಥಿವ! ಸರಸ್ವತೀ ನದಿಯ ತೀರದ ಕುಂಜಗಳಲ್ಲಿರುವ ಅವನನ್ನು ಪ್ರಸನ್ನಗೊಳಿಸು!”

09040020a ಸರಸ್ವತೀಂ ತತೋ ಗತ್ವಾ ಸ ರಾಜಾ ಬಕಮಬ್ರವೀತ್|

09040020c ನಿಪತ್ಯ ಶಿರಸಾ ಭೂಮೌ ಪ್ರಾಂಜಲಿರ್ಭರತರ್ಷಭ||

ಭರತರ್ಷಭ! ಅನಂತರ ರಾಜನು ಸರಸ್ವತೀ ತೀರಕ್ಕೆ ಹೋಗಿ ಭೂಮಿಯ ಮೇಲೆ ಶಿರಸಾ ಬಿದ್ದು ಕೈಮುಗಿದು ಬಕನಿಗೆ ಹೇಳಿದನು:

09040021a ಪ್ರಸಾದಯೇ ತ್ವಾ ಭಗವನ್ನಪರಾಧಂ ಕ್ಷಮಸ್ವ ಮೇ|

09040021c ಮಮ ದೀನಸ್ಯ ಲುಬ್ಧಸ್ಯ ಮೌರ್ಖ್ಯೇಣ ಹತಚೇತಸಃ||

09040021e ತ್ವಂ ಗತಿಸ್ತ್ವಂ ಚ ಮೇ ನಾಥಃ ಪ್ರಸಾದಂ ಕರ್ತುಮರ್ಹಸಿ||

“ಭಗವನ್! ನೀನು ಪ್ರಸನ್ನನಾಗು. ಈ ದೀನ-ಲುಬ್ಧನು ಮೂರ್ಖತನದಿಂದಾಗಿ ಚೇತನವನ್ನೇ ಕಳೆದುಕೊಂಡು ಮಾಡಿದ್ದ ಅಪರಾಧವನ್ನು ಕ್ಷಮಿಸು. ನಾಥ! ನನಗೆ ನೀನೇ ಗತಿ! ನನ್ನ ಮೇಲೆ ಪ್ರಸನ್ನನಾಗಬೇಕು!”

09040022a ತಂ ತಥಾ ವಿಲಪಂತಂ ತು ಶೋಕೋಪಹತಚೇತಸಂ|

09040022c ದೃಷ್ಟ್ವಾ ತಸ್ಯ ಕೃಪಾ ಜಜ್ಞೇ ರಾಷ್ಟ್ರಂ ತಚ್ಚ ವ್ಯಮೋಚಯತ್||

ಶೋಕೋಪಹತಚೇತಸನಾಗಿ ಹಾಗೆ ವಿಲಪಿಸುತ್ತಿರುವ ಅವನನ್ನು ನೋಡಿ ಬಕನಲ್ಲಿ ಕೃಪೆಯುಂಟಾಯಿತು. ಅವನ ರಾಷ್ಟ್ರವನ್ನು ಮುಕ್ತಗೊಳಿಸಿದನು.

09040023a ಋಷಿಃ ಪ್ರಸನ್ನಸ್ತಸ್ಯಾಭೂತ್ಸಂರಂಭಂ ಚ ವಿಹಾಯ ಸಃ|

09040023c ಮೋಕ್ಷಾರ್ಥಂ ತಸ್ಯ ರಾಷ್ಟ್ರಸ್ಯ ಜುಹಾವ ಪುನರಾಹುತಿಂ||

ಋಷಿಯು ಕೋಪವನ್ನು ತೊರೆದು ಪ್ರಸನ್ನನಾದನು. ಅವನ ರಾಜ್ಯದ ವಿಮೋಚನೆಗಾಗಿ ಪುನಃ ಆಹುತಿಯನ್ನು ಹೋಮಿಸಿದನು.

09040024a ಮೋಕ್ಷಯಿತ್ವಾ ತತೋ ರಾಷ್ಟ್ರಂ ಪ್ರತಿಗೃಹ್ಯ ಪಶೂನ್ಬಹೂನ್|

09040024c ಹೃಷ್ಟಾತ್ಮಾ ನೈಮಿಷಾರಣ್ಯಂ ಜಗಾಮ ಪುನರೇವ ಹಿ||

ರಾಷ್ಟ್ರವನ್ನು ಮುಕ್ತಗೊಳಿಸಿ, ಅನೇಕ ಪಶುಗಳನ್ನು ಸ್ವೀಕರಿಸಿ, ಹೃಷ್ಟಾತ್ಮನಾಗಿ ಮುನಿಯು ಪುನಃ ನೈಮಿಷಾರಣ್ಯಕ್ಕೆ ತೆರಳಿದನು.

09040025a ಧೃತರಾಷ್ಟ್ರೋಽಪಿ ಧರ್ಮಾತ್ಮಾ ಸ್ವಸ್ಥಚೇತಾ ಮಹಾಮನಾಃ|

09040025c ಸ್ವಮೇವ ನಗರಂ ರಾಜಾ ಪ್ರತಿಪೇದೇ ಮಹರ್ದ್ಧಿಮತ್||

ಧರ್ಮಾತ್ಮಾ ಮಹಾಮನಸ್ವಿ ರಾಜಾ ಧೃತರಾಷ್ಟ್ರನೂ ಕೂಡ ತನ್ನ ಸಮೃದ್ಧ ನಗರಕ್ಕೆ ಪ್ರಯಾಣಿಸಿದನು.

09040026a ತತ್ರ ತೀರ್ಥೇ ಮಹಾರಾಜ ಬೃಹಸ್ಪತಿರುದಾರಧೀಃ|

09040026c ಅಸುರಾಣಾಮಭಾವಾಯ ಭಾವಾಯ ಚ ದಿವೌಕಸಾಂ||

09040027a ಮಾಂಸೈರಪಿ ಜುಹಾವೇಷ್ಟಿಮಕ್ಷೀಯಂತ ತತೋಽಸುರಾಃ|

09040027c ದೈವತೈರಪಿ ಸಂಭಗ್ನಾ ಜಿತಕಾಶಿಭಿರಾಹವೇ||

ಮಹಾರಾಜ! ಅದೇ ತೀರ್ಥದಲ್ಲಿ ಉದಾರಬುದ್ಧಿ ಬೃಹಸ್ಪತಿಯು ಅಸುರರ ವಿನಾಶಕ್ಕಾಗಿ ಮತ್ತು ದಿವೌಕಸರ ವೃದ್ಧಿಗಾಗಿ ಮಾಂಸವನ್ನು ಆಹುತಿಯನ್ನಾಗಿತ್ತು ಹೋಮಿಸಿದನು. ಆಗ ಅಸುರರು ಕ್ಷೀಣಿಸಿದರು ಮತ್ತು ಯುದ್ಧದಲ್ಲಿ ವಿಜಯೋಲ್ಲಸಿತ ದೇವತೆಗಳಿಂದ ಭಗ್ನರಾದರು.

09040028a ತತ್ರಾಪಿ ವಿಧಿವದ್ದತ್ತ್ವಾ ಬ್ರಾಹ್ಮಣೇಭ್ಯೋ ಮಹಾಯಶಾಃ|

09040028c ವಾಜಿನಃ ಕುಂಜರಾಂಶ್ಚೈವ ರಥಾಂಶ್ಚಾಶ್ವತರೀಯುತಾನ್||

09040029a ರತ್ನಾನಿ ಚ ಮಹಾರ್ಹಾಣಿ ಧನಂ ಧಾನ್ಯಂ ಚ ಪುಷ್ಕಲಂ|

09040029c ಯಯೌ ತೀರ್ಥಂ ಮಹಾಬಾಹುರ್ಯಾಯಾತಂ ಪೃಥಿವೀಪತೇ||

ಪೃಥಿವೀಪತೇ! ಅಲ್ಲಿ ಕೂಡ ವಿಧಿವತ್ತಾಗಿ ಮಹಾಯಶಸ್ವೀ ಬಹಾಬಾಹು ಬಲರಾಮನು ಬ್ರಾಹ್ಮಣರಿಗೆ ಕುದುರೆ-ಆನೆ-ಹೇಸರಗತ್ತೆಗಳ ರಥ-ಬೆಲೆಬಾಳುವ ರತ್ನ-ಧನ-ದಾನ್ಯಗಳನ್ನು ಹೇರಳವಾಗಿತ್ತು ಯಾಯಾತ ತೀರ್ಥಕ್ಕೆ ಹೋದನು.

09040030a ಯತ್ರ ಯಜ್ಞೇ ಯಯಾತೇಸ್ತು ಮಹಾರಾಜ ಸರಸ್ವತೀ|

09040030c ಸರ್ಪಿಃ ಪಯಶ್ಚ ಸುಸ್ರಾವ ನಾಹುಷಸ್ಯ ಮಹಾತ್ಮನಃ||

ಮಹಾರಾಜ! ಅಲ್ಲಿ ನಹುಷನ ಮಗ ಮಹಾತ್ಮ ಯಯಾತಿಯು ಯಜ್ಞಮಾಡಿದಾಗ ಸರಸ್ವತಿಯು ಹಾಲು ತುಪ್ಪಗಳನ್ನು ನೀರಾಗಿ ಹರಿಸಿದ್ದಳು.

09040031a ತತ್ರೇಷ್ಟ್ವಾ ಪುರುಷವ್ಯಾಘ್ರೋ ಯಯಾತಿಃ ಪೃಥಿವೀಪತಿಃ|

09040031c ಆಕ್ರಾಮದೂರ್ಧ್ವಂ ಮುದಿತೋ ಲೇಭೇ ಲೋಕಾಂಶ್ಚ ಪುಷ್ಕಲಾನ್||

ಅಲ್ಲಿಯೇ ಯಾಗಮಾಡಿ ಪುರುಷವ್ಯಾಘ್ರ ಪೃಥಿವೀಪತಿ ಯಯಾತಿಯು ಪುಷ್ಕಲ ಲೋಕಗಳನ್ನು ಪಡೆದು ಮುದಿತನಾಗಿ ಮೇಲೆ ಏರಿದನು.

09040032a ಯಯಾತೇರ್ಯಜಮಾನಸ್ಯ ಯತ್ರ ರಾಜನ್ಸರಸ್ವತೀ|

09040032c ಪ್ರಸೃತಾ ಪ್ರದದೌ ಕಾಮಾನ್ಬ್ರಾಹ್ಮಣಾನಾಂ ಮಹಾತ್ಮನಾಂ||

ರಾಜನ್! ಯಯಾತಿಯು ಯಜಮಾನನಾಗಿದ್ದಾಗ ಅಲ್ಲಿ ಸರಸ್ವತಿಯು ಮಹಾತ್ಮ ಬ್ರಾಹ್ಮಣರು ಬಯಸಿದುದೆಲ್ಲವನ್ನೂ ಒದಗಿಸಿಕೊಟ್ಟಳು.

09040033a ಯತ್ರ ಯತ್ರ ಹಿ ಯೋ ವಿಪ್ರೋ ಯಾನ್ಯಾನ್ ಕಾಮಾನಭೀಪ್ಸತಿ|

09040033c ತತ್ರ ತತ್ರ ಸರಿಚ್ಚ್ರೇಷ್ಠಾ ಸಸರ್ಜ ಸುಬಹೂನ್ ರಸಾನ್||

ಎಲ್ಲೆಲ್ಲಿ ವಿಪ್ರರು ಯಾವ್ಯಾವ ಆಸೆಗಳನ್ನು ಬಯಸಿದರೋ ಅಲ್ಲಲ್ಲಿ ಆ ಸರಿತಶ್ರೇಷ್ಠೆಯು ಅನೇಕ ರಸಗಳನ್ನು ಸೃಷ್ಟಿಸಿದಳು.

09040034a ತತ್ರ ದೇವಾಃ ಸಗಂಧರ್ವಾಃ ಪ್ರೀತಾ ಯಜ್ಞಸ್ಯ ಸಂಪದಾ|

09040034c ವಿಸ್ಮಿತಾ ಮಾನುಷಾಶ್ಚಾಸನ್ದೃಷ್ಟ್ವಾ ತಾಂ ಯಜ್ಞಸಂಪದಂ||

ಗಂಧರ್ವರೊಂದಿಗೆ ದೇವತೆಗಳೂ ಕೂಡ ಆ ಯಜ್ಞದ ವೈಭವವನ್ನು ಕಂಡು ಪ್ರೀತರಾದರು. ಆ ಯಜ್ಞಸಂಪದವನ್ನು ನೋಡಿ ಮನುಷ್ಯರು ವಿಸ್ಮಿತರಾದರು.

09040035a ತತಸ್ತಾಲಕೇತುರ್ಮಹಾಧರ್ಮಸೇತುರ್

         ಮಹಾತ್ಮಾ ಕೃತಾತ್ಮಾ ಮಹಾದಾನನಿತ್ಯಃ|

09040035c ವಸಿಷ್ಠಾಪವಾಹಂ ಮಹಾಭೀಮವೇಗಂ

         ಧೃತಾತ್ಮಾ ಜಿತಾತ್ಮಾ ಸಮಭ್ಯಾಜಗಾಮ||

ಅನಂತರ ತಾಲಕೇತು-ಮಹಾಧರ್ಮಸೇತು-ಮಹಾತ್ಮಾ-ಕೃತಾತ್ಮಾ-ಧೃತಾತ್ಮಾ-ಜಿತಾತ್ಮ-ನಿತ್ಯವೂ ಮಹಾದಾನಗಳನ್ನು ನೀಡುವ ಬಲರಾಮನು ಮಹಾಭಯಂಕರ ವೇಗದಿಂದ ಹರಿಯುವ ವಸಿಷ್ಠಾಪವಾಹ ತೀರ್ಥಕ್ಕೆ ಹೋದನು.”

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಬಲದೇವತಿರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನೇ ಚತ್ವಾರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ ಎನ್ನುವ ನಲ್ವತ್ತನೇ ಅಧ್ಯಾಯವು.

ಸಾರಸ್ವತ ಪರ್ವದ ಇತರ ಅಧ್ಯಾಯಗಳು:

  1. ಪಾಂಡವಾನಾಂ ಸರೋವರಾಗಮನ
  2. ಸುಯೋಧನಯುಧಿಷ್ಠಿರಸಂವಾದ
  3. ಸುಯೋಧನಯುಧಿಷ್ಠಿರಸಂವಾದ
  4. ಭೀಮಸೇನದುರ್ಯೋಧನಸಂವಾದ
  5. ಬಲದೇವಾಗಮನ
  6. ಬಲದೇವತೀರ್ಥಯಾತ್ರಾಯಾಂ ಪ್ರಭಾಸೋತ್ಪತ್ತಿಕಥನ
  7. ಬಲದೇವತೀರ್ಥಯಾತ್ರಾಯಾಂ ತ್ರಿತಾಖ್ಯಾನ
  8. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  9. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  10. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  11. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  12. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  13. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  14. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  15. ಬಲದೇವತೀರ್ಥಯಾತ್ರಾಯಾಂ ಕುಮಾರಾಭಿಷೇಕಕ್ರಮ
  16. ಬಲದೇವತೀರ್ಥಯಾತ್ರಾಯಾಂ ಸ್ಕಂದಾಭಿಷೇಕ
  17. ಬಲದೇವತೀರ್ಥಯಾತ್ರಾಯಾಂ ತಾರಕವಧ
  18. ಬಲದೇವತೀರ್ಥಯಾತ್ರಾ
  19. ಬಲದೇವತೀರ್ಥಯಾತ್ರಾಯಾಂ ಬದರಪಾಚನತೀರ್ಥಕಥನ
  20. ಬಲದೇವತೀರ್ಥಯಾತ್ರಾ
  21. ಬಲದೇವತೀರ್ಥಯಾತ್ರಾ
  22. ಬಲದೇವತೀರ್ಥಯಾತ್ರಾ
  23. ಬಲದೇವತೀರ್ಥಯಾತ್ರಾ
  24. ಬಲದೇವತೀರ್ಥಯಾತ್ರಾಯಾಂ ಕುರುಕ್ಷೇತ್ರಕಥನ
  25. ಬಲದೇವತೀರ್ಥಯಾತ್ರಾ

Comments are closed.