Shalya Parva: Chapter 51

ಶಲ್ಯಪರ್ವ: ಸಾರಸ್ವತಪರ್ವ

೫೧

ವೃದ್ಧಕನ್ಯೆಯ ಚರಿತ್ರೆ (೧-೨೬).

09051001 ಜನಮೇಜಯ ಉವಾಚ

09051001a ಕಥಂ ಕುಮಾರೀ ಭಗವಂಸ್ತಪೋಯುಕ್ತಾ ಹ್ಯಭೂತ್ಪುರಾ|

09051001c ಕಿಮರ್ಥಂ ಚ ತಪಸ್ತೇಪೇ ಕೋ ವಾಸ್ಯಾ ನಿಯಮೋಽಭವತ್||

ಜನಮೇಜಯನು ಹೇಳಿದನು: “ಭಗವನ್! ಹಿಂದೆ ಕುಮಾರಿಯಾದವಳು ಏಕೆ ತಪಸ್ಸನ್ನಾಚರಿಸುತ್ತಿದ್ದಳು? ಯಾವ ಉದ್ದೇಶದಿಂದ ಅವಳು ತಪಸ್ಸನ್ನಾಚರಿಸುತ್ತಿದ್ದಳು ಮತ್ತು ಅವಳ ನಿಯಮಗಳೇನಿದ್ದವು?

09051002a ಸುದುಷ್ಕರಮಿದಂ ಬ್ರಹ್ಮಂಸ್ತ್ವತ್ತಃ ಶ್ರುತಮನುತ್ತಮಂ|

09051002c ಆಖ್ಯಾಹಿ ತತ್ತ್ವಮಖಿಲಂ ಯಥಾ ತಪಸಿ ಸಾ ಸ್ಥಿತಾ||

ಬ್ರಹ್ಮನ್! ಸುದುಷ್ಕರವಾದ ಮತ್ತು ಅನುತ್ತಮವಾದ ಇದರ ಕುರಿತು ನಾನು ನಿನ್ನಲ್ಲಿ ಕೇಳಿದ್ದೇನೆ. ಅವಳು ಹೇಗೆ ತಪಸ್ಸಿನಲ್ಲಿ ನಿರತಳಾಗಿದ್ದಳು ಎನ್ನುವುದರ ಸಂಪೂರ್ಣ ತತ್ತ್ವವನ್ನು ಹೇಳಬೇಕು.”

09051003 ವೈಶಂಪಾಯನ ಉವಾಚ

09051003a ಋಷಿರಾಸೀನ್ಮಹಾವೀರ್ಯಃ ಕುಣಿರ್ಗಾರ್ಗ್ಯೋ ಮಹಾಯಶಾಃ|

09051003c ಸ ತಪ್ತ್ವಾ ವಿಪುಲಂ ರಾಜಂಸ್ತಪೋ ವೈ ತಪತಾಂ ವರಃ||

09051003e ಮಾನಸೀಂ ಸ ಸುತಾಂ ಸುಭ್ರೂಂ ಸಮುತ್ಪಾದಿತವಾನ್ವಿಭುಃ||

ವೈಶಂಪಾಯನು ಹೇಳಿದನು: “ರಾಜನ್! ಮಹಾವೀರ್ಯನಾದ ಮಹಾಯಶಸ್ವಿಯಾದ ಕುಣಿರ್ಗಾಗ್ಯ ಎಂಬ ಋಷಿಯಿದ್ದನು. ತಪಸ್ವಿಗಳಲ್ಲಿ ಶ್ರೇಷ್ಠನಾದ ಆ ವಿಭುವು ವಿಪುಲ ತಪಸ್ಸನ್ನು ತಪಿಸಿ ಸುಂದರ ಹುಬ್ಬಿನ ಮಗಳೋರ್ವಳನ್ನು ಮನಸ್ಸಿನಿಂದಲೇ ಸೃಷ್ಟಿಸಿದನು.

09051004a ತಾಂ ಚ ದೃಷ್ಟ್ವಾ ಭೃಶಂ ಪ್ರೀತಃ ಕುಣಿರ್ಗಾರ್ಗ್ಯೋ ಮಹಾಯಶಾಃ|

09051004c ಜಗಾಮ ತ್ರಿದಿವಂ ರಾಜನ್ಸಂತ್ಯಜ್ಯೇಹ ಕಲೇವರಂ||

ಅವಳನ್ನು ನೋಡಿ ಮಹಾಯಶಸ್ವಿ ಕುಣಿರ್ಗಾಗ್ಯನು ಪರಮ ಪ್ರೀತನಾದನು. ದೇಹವನ್ನು ತ್ಯಜಿಸಿ ಅವನು ಸ್ವರ್ಗಕ್ಕೆ ತೆರಳಿದನು.

09051005a ಸುಭ್ರೂಃ ಸಾ ಹ್ಯಥ ಕಲ್ಯಾಣೀ ಪುಂಡರೀಕನಿಭೇಕ್ಷಣಾ|

09051005c ಮಹತಾ ತಪಸೋಗ್ರೇಣ ಕೃತ್ವಾಶ್ರಮಮನಿಂದಿತಾ||

ಸುಂದರ ಹುಬ್ಬಿನ, ಕಮಲದ ಎಸಳುಗಳಂತಹ ಕಣ್ಣುಗಳಿದ್ದ ಆ ಕಲ್ಯಾಣೀ ಅನಿಂದಿತೆಯು ಒಂದು ಆಶ್ರಮವನ್ನು ಮಾಡಿಕೊಂಡು ಉಗ್ರ ತಪಸ್ಸಿನಲ್ಲಿ ತೊಡಗಿದಳು.

09051006a ಉಪವಾಸೈಃ ಪೂಜಯಂತೀ ಪಿತೄನ್ದೇವಾಂಶ್ಚ ಸಾ ಪುರಾ|

09051006c ತಸ್ಯಾಸ್ತು ತಪಸೋಗ್ರೇಣ ಮಹಾನ್ಕಾಲೋಽತ್ಯಗಾನ್ನೃಪ||

ಮೊದಲು ಅವಳು ಉಪವಾಸಾದಿಗಳಿಂದ ಪಿತೃಗಳನ್ನೂ ದೇವತೆಗಳನ್ನೂ ಪೂಜಿಸಿದಳು. ನೃಪ! ಅವಳ ಉಗ್ರ ತಪಸ್ಸು ದೀರ್ಘ ಕಾಲದವರೆಗೆ ನಡೆಯಿತು.

09051007a ಸಾ ಪಿತ್ರಾ ದೀಯಮಾನಾಪಿ ಭರ್ತ್ರೇ ನೈಚ್ಚದನಿಂದಿತಾ|

09051007c ಆತ್ಮನಃ ಸದೃಶಂ ಸಾ ತು ಭರ್ತಾರಂ ನಾನ್ವಪಶ್ಯತ||

ಅವಳ ತಂದೆಯು ಕೊಡಲು ಬಯಸಿದ್ದರೂ ಆ ಅನಿಂದಿತೆಯು ಯಾರನ್ನೂ ಗಂಡನನ್ನಾಗಿ ಇಚ್ಛಿಸಿರಲಿಲ್ಲ. ತನ್ನ ಸದೃಶ ಪತಿಯನ್ನು ಅವಳು ಕಂಡಿರಲಿಲ್ಲ.

09051008a ತತಃ ಸಾ ತಪಸೋಗ್ರೇಣ ಪೀಡಯಿತ್ವಾತ್ಮನಸ್ತನುಂ|

09051008c ಪಿತೃದೇವಾರ್ಚನರತಾ ಬಭೂವ ವಿಜನೇ ವನೇ||

ಹೀಗೆ ನಿರ್ಜನ ವನದಲ್ಲಿ ಪಿತೃ-ದೇವತೆಗಳ ಅರ್ಚನೆಯಲ್ಲಿ ನಿರತಳಾಗಿ ಆ ಉಗ್ರ ತಪಸ್ಸಿನಿಂದ ತನ್ನ ದೇಹವನ್ನು ಪೀಡಿಸಿಕೊಂಡಿರುತ್ತಿದ್ದಳು.

09051009a ಸಾತ್ಮಾನಂ ಮನ್ಯಮಾನಾಪಿ ಕೃತಕೃತ್ಯಂ ಶ್ರಮಾನ್ವಿತಾ|

09051009c ವಾರ್ದ್ಧಕೇನ ಚ ರಾಜೇಂದ್ರ ತಪಸಾ ಚೈವ ಕರ್ಶಿತಾ||

ರಾಜೇಂದ್ರ! ತನ್ನನ್ನು ಕೃತಕೃತ್ಯಳೆಂದು ಭಾವಿಸಿದ್ದರೂ ಶ್ರಮಾನ್ವಿತಳಾದ ಅವಳು ತಪಸ್ಸಿನಿಂದ ಮತ್ತು ವೃದ್ಧಾಪ್ಯದಿಂದ ಕೃಶಳಾದಳು.

09051010a ಸಾ ನಾಶಕದ್ಯದಾ ಗಂತುಂ ಪದಾತ್ಪದಮಪಿ ಸ್ವಯಂ|

09051010c ಚಕಾರ ಗಮನೇ ಬುದ್ಧಿಂ ಪರಲೋಕಾಯ ವೈ ತದಾ||

ಅವಳಿಗೆ ತಾನಾಗಿಯೇ ಹೆಜ್ಜೆ-ಹೆಜ್ಜೆ ಮುಂದೆಹೋಗಲೂ ಸಾಧ್ಯವಾಗುತ್ತಿರಲಿಲ್ಲ. ಆಗ ಅವಳು ಪರಲೋಕಕ್ಕೆ ಹೋಗಲು ಮನಸ್ಸುಮಾಡಿದಳು.

09051011a ಮೋಕ್ತುಕಾಮಾಂ ತು ತಾಂ ದೃಷ್ಟ್ವಾ ಶರೀರಂ ನಾರದೋಽಬ್ರವೀತ್|

09051011c ಅಸಂಸ್ಕೃತಾಯಾಃ ಕನ್ಯಾಯಾಃ ಕುತೋ ಲೋಕಾಸ್ತವಾನಘೇ||

ದೇಹತ್ಯಾಗಮಾಡಲು ಬಯಸಿದ ಅವಳನ್ನು ನೋಡಿ ನಾರದನು ಹೇಳಿದನು: “ಅನಘೇ! ಅಸಂಸ್ಕೃತೆಯಾದ[1] ಕನ್ಯೆಯು ಹೇಗೆ ತಾನೇ ಪುಣ್ಯಲೋಕಗಳನ್ನು ಪಡೆಯುವಳು?

09051012a ಏವಂ ಹಿ ಶ್ರುತಮಸ್ಮಾಭಿರ್ದೇವಲೋಕೇ ಮಹಾವ್ರತೇ|

09051012c ತಪಃ ಪರಮಕಂ ಪ್ರಾಪ್ತಂ ನ ತು ಲೋಕಾಸ್ತ್ವಯಾ ಜಿತಾಃ||

ಮಹಾವ್ರತೇ! ನೀನು ಪರಮ ತಪಸ್ಸನ್ನು ಸಾಧಿಸಿದ್ದೀಯೆ ಎಂದು ನಾವು ದೇವಲೋಕದಲ್ಲಿ ಕೇಳಿದ್ದೇವೆ. ಆದರೆ ನಿನಗೆ ಪುಣ್ಯಲೋಕಗಳು ದೊರೆಯಲಾರವು!”

09051013a ತನ್ನಾರದವಚಃ ಶ್ರುತ್ವಾ ಸಾಬ್ರವೀದೃಷಿಸಂಸದಿ|

09051013c ತಪಸೋಽರ್ಧಂ ಪ್ರಯಚ್ಚಾಮಿ ಪಾಣಿಗ್ರಾಹಸ್ಯ ಸತ್ತಮಾಃ||

ನಾರದನ ಆ ಮಾತನ್ನು ಕೇಳಿ ಅವಳು ಋಷಿಸಂಸದಿಯಲ್ಲಿ “ಸತ್ತಮರೇ! ನನ್ನ ಪಾಣಿಗ್ರಹಣಮಾಡಿಕೊಳ್ಳುವವನಿಗೆ ತಪಸ್ಸಿನ ಅರ್ಧಭಾಗವನ್ನು ಕೊಡುತ್ತೇನೆ” ಎಂದಳು.

09051014a ಇತ್ಯುಕ್ತೇ ಚಾಸ್ಯಾ ಜಗ್ರಾಹ ಪಾಣಿಂ ಗಾಲವಸಂಭವಃ|

09051014c ಋಷಿಃ ಪ್ರಾಕ್ ಶೃಂಗವಾನ್ನಾಮ ಸಮಯಂ ಚೇದಮಬ್ರವೀತ್||

ಅವಳು ಹೀಗೆ ಹೇಳಲು ಗಾಲವನಲ್ಲಿ ಹುಟ್ಟಿದ್ದ ಶೃಂಗವಾನ್ ಎಂಬ ಹೆಸರಿನ ಋಷಿಯು ಅವಳ ಪಾಣಿಗ್ರಹಣ ಮಾಡಿ ಕರಾರಾಗಿ ಈ ಮಾತನ್ನಾಡಿದನು:

09051015a ಸಮಯೇನ ತವಾದ್ಯಾಹಂ ಪಾಣಿಂ ಸ್ಪ್ರಕ್ಷ್ಯಾಮಿ ಶೋಭನೇ|

09051015c ಯದ್ಯೇಕರಾತ್ರಂ ವಸ್ತವ್ಯಂ ತ್ವಯಾ ಸಹ ಮಯೇತಿ ಹ||

“ಶೋಭನೇ! ಒಂದು ಒಪ್ಪಂದದ ಮೇರೆಗೆ ನಾನು ನಿನ್ನ ಪಾಣಿಗ್ರಹಣ ಮಾಡಿಕೊಳ್ಳುತ್ತೇನೆ. ನೀನು ನನ್ನೊಡನೆ ಒಂದೇ ಒಂದು ರಾತ್ರಿಯನ್ನು ಕಳೆಯಬೇಕು.”

09051016a ತಥೇತಿ ಸಾ ಪ್ರತಿಶ್ರುತ್ಯ ತಸ್ಮೈ ಪಾಣಿಂ ದದೌ ತದಾ|

09051016c ಚಕ್ರೇ ಚ ಪಾಣಿಗ್ರಹಣಂ ತಸ್ಯೋದ್ವಾಹಂ ಚ ಗಾಲವಿಃ||

ಹಾಗೆಯೇ ಆಗಲೆಂದು ಹೇಳಲು ಅವಳು ಅವನಿಗೆ ತನ್ನ ಕೈಯನ್ನಿತ್ತಳು. ಗಾಲವಿಯೂ ಕೂಡ ಅವಳ ಕೈಯನ್ನು ಹಿಡಿದುಕೊಂಡನು.

09051017a ಸಾ ರಾತ್ರಾವಭವದ್ರಾಜಂಸ್ತರುಣೀ ದೇವವರ್ಣಿನೀ|

09051017c ದಿವ್ಯಾಭರಣವಸ್ತ್ರಾ ಚ ದಿವ್ಯಸ್ರಗನುಲೇಪನಾ||

ರಾಜನ್! ರಾತ್ರಿಯಲ್ಲಿ ಅವಳು ದಿವ್ಯಾಭರಣ ವಸ್ತ್ರಗಳನ್ನು ಧರಿಸಿ, ದಿವ್ಯ ಗಂಧಗಳನ್ನು ಲೇಪಿಸಿಕೊಂಡು ತರುಣಿಯೂ, ದೇವವರ್ಣಿನಿಯೂ ಆದಳು.

09051018a ತಾಂ ದೃಷ್ಟ್ವಾ ಗಾಲವಿಃ ಪ್ರೀತೋ ದೀಪಯಂತೀಮಿವಾತ್ಮನಾ|

09051018c ಉವಾಸ ಚ ಕ್ಷಪಾಮೇಕಾಂ ಪ್ರಭಾತೇ ಸಾಬ್ರವೀಚ್ಚ ತಂ||

ತನ್ನನ್ನೇ ಬೆಳಗಿಸುವಂತಿದ್ದ ಅವಳನ್ನು ನೋಡಿ ಗಾಲವಿಯು ಪ್ರೀತನಾಗಿ ಅವಳೊಂದಿಗೆ ಏಕಾಂತ ವಾಸವನ್ನು ಮಾಡಿದನು. ಬೆಳಗಾಗುತ್ತಲೇ ಅವಳು ಅವನಿಗೆ ಹೇಳಿದಳು:

09051019a ಯಸ್ತ್ವಯಾ ಸಮಯೋ ವಿಪ್ರ ಕೃತೋ ಮೇ ತಪತಾಂ ವರ|

09051019c ತೇನೋಷಿತಾಸ್ಮಿ ಭದ್ರಂ ತೇ ಸ್ವಸ್ತಿ ತೇಽಸ್ತು ವ್ರಜಾಮ್ಯಹಂ||

“ವಿಪ್ರ! ತಪಸ್ವಿಗಳಲ್ಲಿ ಶ್ರೇಷ್ಠ! ನೀನೇ ಮಾಡಿಕೊಂಡ ಒಪ್ಪಂದದಂತೆ ನಾನು ನಿನ್ನೊಡನೆ ವಾಸಿಸಿದ್ದೇನೆ. ನಿನಗೆ ಮಂಗಳವಾಗಲಿ. ನಾನಿನ್ನು ಹೊರಡುತ್ತೇನೆ.”

09051020a ಸಾನುಜ್ಞಾತಾಬ್ರವೀದ್ಭೂಯೋ ಯೋಽಸ್ಮಿಂಸ್ತೀರ್ಥೇ ಸಮಾಹಿತಃ|

09051020c ವತ್ಸ್ಯತೇ ರಜನೀಮೇಕಾಂ ತರ್ಪಯಿತ್ವಾ ದಿವೌಕಸಃ||

09051021a ಚತ್ವಾರಿಂಶತಮಷ್ಟೌ ಚ ದ್ವೇ ಚಾಷ್ಟೌ ಸಮ್ಯಗಾಚರೇತ್|

09051021c ಯೋ ಬ್ರಹ್ಮಚರ್ಯಂ ವರ್ಷಾಣಿ ಫಲಂ ತಸ್ಯ ಲಭೇತ ಸಃ|

09051021e ಏವಮುಕ್ತ್ವಾ ತತಃ ಸಾಧ್ವೀ ದೇಹಂ ತ್ಯಕ್ತ್ವಾ ದಿವಂ ಗತಾ||

ಬೀಳ್ಕೊಂಡ ಅವಳು ಪುನಃ ಹೇಳಿದಳು: “ಈ ತೀರ್ಥದಲ್ಲಿ ಸಮಾಹಿತರಾಗಿ ದಿವೌಕಸರಿಗೆ ತರ್ಪಣಗಳನ್ನಿತ್ತು ಒಂದು ರಾತ್ರಿ ವಾಸಿಸುವವರಿಗೆ ಐವತ್ತೆಂಟು ವರ್ಷಗಳವರೆಗೆ ಬ್ರಹ್ಮಚರ್ಯವನ್ನು ಪಾಲಿಸಿದ ಫಲವು ದೊರೆಯುತ್ತದೆ.” ಹೀಗೆ ಹೇಳಿ ಆ ಸಾಧ್ವಿಯು ದೇಹವನ್ನು ತ್ಯಜಿಸಿ ಸ್ವರ್ಗಕ್ಕೆ ಹೋದಳು.

09051022a ಋಷಿರಪ್ಯಭವದ್ದೀನಸ್ತಸ್ಯಾ ರೂಪಂ ವಿಚಿಂತಯನ್|

09051022c ಸಮಯೇನ ತಪೋಽರ್ಧಂ ಚ ಕೃಚ್ಚ್ರಾತ್ಪ್ರತಿಗೃಹೀತವಾನ್||

ಋಷಿಯಾದರೋ ಅವಳ ರೂಪವನ್ನೇ ಸ್ಮರಿಸಿಕೊಳ್ಳುತ್ತಾ ದೀನನಾದನು. ಒಪ್ಪಂದದಂತೆ ಬಹಳ ಕಷ್ಟದಿಂದ ಅವಳ ತಪಸ್ಸಿನ ಅರ್ಧಫಲವನ್ನು ಸ್ವೀಕರಿಸಿದನು.

09051023a ಸಾಧಯಿತ್ವಾ ತದಾತ್ಮಾನಂ ತಸ್ಯಾಃ ಸ ಗತಿಮನ್ವಯಾತ್|

09051023c ದುಃಖಿತೋ ಭರತಶ್ರೇಷ್ಠ ತಸ್ಯಾ ರೂಪಬಲಾತ್ಕೃತಃ|

09051023e ಏತತ್ತೇ ವೃದ್ಧಕನ್ಯಾಯಾ ವ್ಯಾಖ್ಯಾತಂ ಚರಿತಂ ಮಹತ್||

ಭರತಶ್ರೇಷ್ಠ! ಅವಳ ರೂಪಬಲ ಮತ್ತು ಆಕರ್ಷಣೆಯ ದುಃಖದಿಂದ ಅವನು ತನ್ನನ್ನು ಕೂಡ ಸಾಧನೆಗೆ ತೊಡಗಿಸಿಕೊಂಡು ಅವಳ ದಾರಿಯಲ್ಲಿಯೇ ಹೋದನು. ಆ ವೃದ್ಧಕನ್ಯೆಯ ಈ ಮಹಾಚರಿತ್ರೆಯನ್ನು ನಾನು ಹೇಳಿದ್ದೇನೆ.

09051024a ತತ್ರಸ್ಥಶ್ಚಾಪಿ ಶುಶ್ರಾವ ಹತಂ ಶಲ್ಯಂ ಹಲಾಯುಧಃ|

09051024c ತತ್ರಾಪಿ ದತ್ತ್ವಾ ದಾನಾನಿ ದ್ವಿಜಾತಿಭ್ಯಃ ಪರಂತಪ||

09051024e ಶುಶೋಚ ಶಲ್ಯಂ ಸಂಗ್ರಾಮೇ ನಿಹತಂ ಪಾಂಡವೈಸ್ತದಾ||

ಅಲ್ಲಿರುವಾಗಲೇ ಹಲಾಯುಧನು ಶಲ್ಯನು ಹತನಾದುದನ್ನು ಕೇಳಿದ್ದನು. ಅಲ್ಲಿ ಕೂಡ ಪರಂತಪನು ದ್ವಿಜಾತಿಗಳಿಗೆ ದಾನಗಳನ್ನಿತ್ತನು. ಪಾಂಡವರಿಂದ ಸಂಗ್ರಾಮದಲ್ಲಿ ಹತನಾದ ಶಲ್ಯನ ಕುರಿತು ಶೋಕಿಸಿದನು.

09051025a ಸಮಂತಪಂಚಕದ್ವಾರಾತ್ತತೋ ನಿಷ್ಕ್ರಮ್ಯ ಮಾಧವಃ|

09051025c ಪಪ್ರಚ್ಚರ್ಷಿಗಣಾನ್ರಾಮಃ ಕುರುಕ್ಷೇತ್ರಸ್ಯ ಯತ್ಫಲಂ||

ಅನಂತರ ಸಮಂತಪಂಚಕ ದ್ವಾರದಿಂದ ಹೊರಟು ಮಾಧವ ರಾಮನು ಕುರುಕ್ಷೇತ್ರದ ಫಲಗಳ ಕುರಿತು ಋಷಿಗಣಗಳನ್ನು ಪ್ರಶ್ನಿಸಿದನು.

09051026a ತೇ ಪೃಷ್ಟಾ ಯದುಸಿಂಹೇನ ಕುರುಕ್ಷೇತ್ರಫಲಂ ವಿಭೋ|

09051026c ಸಮಾಚಖ್ಯುರ್ಮಹಾತ್ಮಾನಸ್ತಸ್ಮೈ ಸರ್ವಂ ಯಥಾತಥಂ||

ವಿಭೋ! ಯದುಸಿಂಹನು ಕುರುಕ್ಷೇತ್ರಫಲದ ಕುರಿತು ಕೇಳಲು ಆ ಮಹಾತ್ಮರು ಅವನಿಗೆ ಯಥಾವತ್ತಾಗಿ ಎಲ್ಲವನ್ನೂ ತಿಳಿಸಿಹೇಳಿದರು.

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಬಲದೇವತೀರ್ಥಯಾತ್ರಾಯಾಂ ಏಕಪಂಚಾಶತ್ತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಬಲದೇವತೀರ್ಥಯಾತ್ರಾ ಎನ್ನುವ ಐವತ್ತೊಂದನೇ ಅಧ್ಯಾಯವು.

[1] ಅವಿವಾಹಿತೆಯಾದ

ಸಾರಸ್ವತ ಪರ್ವದ ಇತರ ಅಧ್ಯಾಯಗಳು:

  1. ಪಾಂಡವಾನಾಂ ಸರೋವರಾಗಮನ
  2. ಸುಯೋಧನಯುಧಿಷ್ಠಿರಸಂವಾದ
  3. ಸುಯೋಧನಯುಧಿಷ್ಠಿರಸಂವಾದ
  4. ಭೀಮಸೇನದುರ್ಯೋಧನಸಂವಾದ
  5. ಬಲದೇವಾಗಮನ
  6. ಬಲದೇವತೀರ್ಥಯಾತ್ರಾಯಾಂ ಪ್ರಭಾಸೋತ್ಪತ್ತಿಕಥನ
  7. ಬಲದೇವತೀರ್ಥಯಾತ್ರಾಯಾಂ ತ್ರಿತಾಖ್ಯಾನ
  8. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  9. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  10. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  11. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  12. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  13. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  14. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  15. ಬಲದೇವತೀರ್ಥಯಾತ್ರಾಯಾಂ ಕುಮಾರಾಭಿಷೇಕಕ್ರಮ
  16. ಬಲದೇವತೀರ್ಥಯಾತ್ರಾಯಾಂ ಸ್ಕಂದಾಭಿಷೇಕ
  17. ಬಲದೇವತೀರ್ಥಯಾತ್ರಾಯಾಂ ತಾರಕವಧ
  18. ಬಲದೇವತೀರ್ಥಯಾತ್ರಾ
  19. ಬಲದೇವತೀರ್ಥಯಾತ್ರಾಯಾಂ ಬದರಪಾಚನತೀರ್ಥಕಥನ
  20. ಬಲದೇವತೀರ್ಥಯಾತ್ರಾ
  21. ಬಲದೇವತೀರ್ಥಯಾತ್ರಾ
  22. ಬಲದೇವತೀರ್ಥಯಾತ್ರಾ
  23. ಬಲದೇವತೀರ್ಥಯಾತ್ರಾ
  24. ಬಲದೇವತೀರ್ಥಯಾತ್ರಾಯಾಂ ಕುರುಕ್ಷೇತ್ರಕಥನ
  25. ಬಲದೇವತೀರ್ಥಯಾತ್ರಾ

Comments are closed.