Shalya Parva: Chapter 39

ಶಲ್ಯಪರ್ವ: ಸಾರಸ್ವತಪರ್ವ

೩೯

ಸಿಂಧುದ್ವೀಪದಲ್ಲಿ ಆರ್ಷ್ಟಿಷೇಣನು ಸಿದ್ಧನಾದ ಕಥೆ (೧-೯). ಬ್ರಹ್ಮಯೋನಿಯಲ್ಲಿ ವಿಶ್ವಾಮಿತ್ರನಿಗೆ ಬ್ರಾಹ್ಮಣತ್ವ ಪ್ರಾಪ್ತಿ (೧೦-೩೨).

09039001 ಜನಮೇಜಯ ಉವಾಚ

09039001a ಕಥಮಾರ್ಷ್ಟಿಷೇಣೋ ಭಗವಾನ್ವಿಪುಲಂ ತಪ್ತವಾಂಸ್ತಪಃ|

09039001c ಸಿಂಧುದ್ವೀಪಃ ಕಥಂ ಚಾಪಿ ಬ್ರಾಹ್ಮಣ್ಯಂ ಲಬ್ಧವಾಂಸ್ತದಾ||

ಜನಮೇಜಯನು ಹೇಳಿದನು: “ಭಗವಾನ್ ಆರ್ಷ್ಟಿಷೇಣನು ಹೇಗೆ ವಿಪುಲ ತಪಸ್ಸನ್ನು ತಪಿಸಿದನು? ಸಿಂಧುದ್ವೀಪನೂ ಕೂಡ ಹೇಗೆ ಬ್ರಾಹ್ಮಣ್ಯವನ್ನು ಪಡೆದನು?

09039002a ದೇವಾಪಿಶ್ಚ ಕಥಂ ಬ್ರಹ್ಮನ್ವಿಶ್ವಾಮಿತ್ರಶ್ಚ ಸತ್ತಮ|

09039002c ತನ್ಮಮಾಚಕ್ಷ್ವ ಭಗವನ್ಪರಂ ಕೌತೂಹಲಂ ಹಿ ಮೇ||

ಬ್ರಹ್ಮನ್! ಸತ್ತಮ! ಹೇಗೆ ದೇವಾಪಿ ಮತ್ತು ವಿಶ್ವಾಮಿತ್ರರು ಬ್ರಾಹ್ಮಣ್ಯವನ್ನು ಪಡೆದರು? ಭಗವನ್! ಅದರಕುರಿತು ನನಗೆ ಹೇಳು. ಅತ್ಯಂತ ಕುತೂಹಲವಾಗುತ್ತಿದೆ.”

09039003 ವೈಶಂಪಾಯನ ಉವಾಚ

09039003a ಪುರಾ ಕೃತಯುಗೇ ರಾಜನ್ನಾರ್ಷ್ಟಿಷೇಣೋ ದ್ವಿಜೋತ್ತಮಃ|

09039003c ವಸನ್ಗುರುಕುಲೇ ನಿತ್ಯಂ ನಿತ್ಯಮಧ್ಯಯನೇ ರತಃ||

ವೈಶಂಪಾಯನನು ಹೇಳಿದನು: “ರಾಜನ್! ಹಿಂದೆ ಕೃತಯುಗದಲ್ಲಿ ದ್ವಿಜೋತ್ತಮ ಆರ್ಷ್ಟಿಷೇಣನು ಗುರುಕುಲದಲ್ಲಿ ವಾಸಿಸಿಕೊಂಡು ನಿತ್ಯವೂ ಅಧ್ಯಯನದಲ್ಲಿ ತೊಡಗುತ್ತಿದ್ದನು.

09039004a ತಸ್ಯ ರಾಜನ್ಗುರುಕುಲೇ ವಸತೋ ನಿತ್ಯಮೇವ ಹ|

09039004c ಸಮಾಪ್ತಿಂ ನಾಗಮದ್ವಿದ್ಯಾ ನಾಪಿ ವೇದಾ ವಿಶಾಂ ಪತೇ||

ರಾಜನ್! ವಿಶಾಂಪತೇ! ನಿತ್ಯವೂ ಗುರುಕುಲದಲ್ಲಿ ವಾಸಿಸಿಕೊಂಡಿದ್ದರೂ ಅವನ ವೇದ-ಆಗಮಗಳ ವಿದ್ಯೆಯು ಸಂಪೂರ್ಣವಾಗಲೇ ಇಲ್ಲ.

09039005a ಸ ನಿರ್ವಿಣ್ಣಸ್ತತೋ ರಾಜಂಸ್ತಪಸ್ತೇಪೇ ಮಹಾತಪಾಃ|

09039005c ತತೋ ವೈ ತಪಸಾ ತೇನ ಪ್ರಾಪ್ಯ ವೇದಾನನುತ್ತಮಾನ್||

ರಾಜನ್! ನಿರ್ವಿಣ್ಣನಾದ ಅವನು ಮಹಾತಪಸ್ಸನ್ನು ತಪಿಸಿದನು. ಅವನ ಆ ತಪಸ್ಸಿನಿಂದ ಅವನಿಗೆ ಅನುತ್ತಮ ವೇದಗಳು ಪ್ರಾಪ್ತವಾದವು.

09039006a ಸ ವಿದ್ವಾನ್ವೇದಯುಕ್ತಶ್ಚ ಸಿದ್ಧಶ್ಚಾಪ್ಯ ಋಷಿಸತ್ತಮಃ|

09039006c ತತ್ರ ತೀರ್ಥೇ ವರಾನ್ಪ್ರಾದಾತ್ತ್ರೀನೇವ ಸುಮಹಾತಪಾಃ||

ಆ ಋಷಿಸತ್ತಮನು ವಿದ್ವಾಂಸನೂ, ವೇದಯುಕ್ತನೂ ಸಿದ್ಧನೂ ಆದನು. ಅಲ್ಲಿದ್ದ ತೀರ್ಥಕ್ಕೆ ಆ ಸುಮಹಾತಪಸ್ವಿಯು ಈ ಮೂರು ವರಗಳನ್ನಿತ್ತನು:

09039007a ಅಸ್ಮಿಂಸ್ತೀರ್ಥೇ ಮಹಾನದ್ಯಾ ಅದ್ಯಪ್ರಭೃತಿ ಮಾನವಃ|

09039007c ಆಪ್ಲುತೋ ವಾಜಿಮೇಧಸ್ಯ ಫಲಂ ಪ್ರಾಪ್ನೋತಿ ಪುಷ್ಕಲಂ||

“ಇಂದಿನಿಂದ ಮಹಾನದಿಯ ಈ ತೀರ್ಥದಲ್ಲಿ ಸ್ನಾನಮಾಡುವ ಮನುಷ್ಯನು ಅಶ್ವಮೇಧದ ಪುಷ್ಕಲ ಫಲವನ್ನು ಪಡೆಯುತ್ತಾನೆ.

09039008a ಅದ್ಯಪ್ರಭೃತಿ ನೈವಾತ್ರ ಭಯಂ ವ್ಯಾಲಾದ್ಭವಿಷ್ಯತಿ|

09039008c ಅಪಿ ಚಾಲ್ಪೇನ ಯತ್ನೇನ ಫಲಂ ಪ್ರಾಪ್ಸ್ಯತಿ ಪುಷ್ಕಲಂ||

ಇಂದಿನಿಂದ ಇಲ್ಲಿ ಸರ್ಪಭಯವು ಇರುವುದಿಲ್ಲ. ಮತ್ತು ಅಲ್ಪ ಯತ್ನದಿಂದಲೇ ಪುಷ್ಕಲ ಫಲವು ಪ್ರಾಪ್ತವಾಗುತ್ತದೆ.”

09039009a ಏವಮುಕ್ತ್ವಾ ಮಹಾತೇಜಾ ಜಗಾಮ ತ್ರಿದಿವಂ ಮುನಿಃ|

09039009c ಏವಂ ಸಿದ್ಧಃ ಸ ಭಗವಾನಾರ್ಷ್ಟಿಷೇಣಃ ಪ್ರತಾಪವಾನ್||

ಹೀಗೆ ಹೇಳಿ ಆ ಮಹಾತೇಜಸ್ವಿ ಮುನಿಯು ತ್ರಿದಿವಕ್ಕೆ ತೆರಳಿದನು. ಹೀಗೆ ಆ ಭಗವಾನ್ ಪ್ರತಾಪವಾನ್ ಆರ್ಷ್ಟಿಷೇಣನು ಸಿದ್ಧನಾದನು.

09039010a ತಸ್ಮಿನ್ನೇವ ತದಾ ತೀರ್ಥೇ ಸಿಂಧುದ್ವೀಪಃ ಪ್ರತಾಪವಾನ್|

09039010c ದೇವಾಪಿಶ್ಚ ಮಹಾರಾಜ ಬ್ರಾಹ್ಮಣ್ಯಂ ಪ್ರಾಪತುರ್ಮಹತ್||

ಮಹಾರಾಜ! ಅದೇ ತೀರ್ಥದಲ್ಲಿ ಪ್ರತಾಪವಾನ್ ಸಿಂಧುದ್ವೀಪ ಮತ್ತು ದೇವಾಪಿಗಳು ಮಹಾ ಬ್ರಾಹ್ಮಣ್ಯವನ್ನು ಪಡೆದರು.

09039011a ತಥಾ ಚ ಕೌಶಿಕಸ್ತಾತ ತಪೋನಿತ್ಯೋ ಜಿತೇಂದ್ರಿಯಃ|

09039011c ತಪಸಾ ವೈ ಸುತಪ್ತೇನ ಬ್ರಾಹ್ಮಣತ್ವಮವಾಪ್ತವಾನ್||

ಮಗೂ! ಅಲ್ಲಿಯೇ ಜಿತೇಂದ್ರಿಯ ಕೌಶಿಕನೂ ಕೂಡ ತಪೋನಿರತನಾಗಿದ್ದು, ಉತ್ತಮವಾಗಿ ತಪಿಸಿದ ತಪಸ್ಸಿನಿಂದ ಬ್ರಾಹ್ಮಣತ್ವವನ್ನು ಪಡೆದುಕೊಂಡನು.

09039012a ಗಾಧಿರ್ನಾಮ ಮಹಾನಾಸೀತ್ ಕ್ಷತ್ರಿಯಃ ಪ್ರಥಿತೋ ಭುವಿ|

09039012c ತಸ್ಯ ಪುತ್ರೋಽಭವದ್ರಾಜನ್ವಿಶ್ವಾಮಿತ್ರಃ ಪ್ರತಾಪವಾನ್||

ರಾಜನ್! ಭೂಮಿಯ ಮೇಲೆ ಗಾಧಿ ಎಂಬ ಹೆಸರಿನ ಪ್ರಸಿದ್ಧ ಕ್ಷತ್ರಿಯನಿದ್ದನು. ಅವನ ಪುತ್ರನೇ ಪ್ರತಾಪವಾನ್ ವಿಶ್ವಾಮಿತ್ರನಾಗಿದ್ದನು.

09039013a ಸ ರಾಜಾ ಕೌಶಿಕಸ್ತಾತ ಮಹಾಯೋಗ್ಯಭವತ್ಕಿಲ|

09039013c ಸ ಪುತ್ರಮಭಿಷಿಚ್ಯಾಥ ವಿಶ್ವಾಮಿತ್ರಂ ಮಹಾತಪಾಃ||

ಮಹಾತಪಸ್ವಿಯೂ ಮಹಾಯೋಗಿಯೂ ಆಗಿದ್ದ ಆ ಕೌಶಿಕ ರಾಜನು ಮಗ ವಿಶ್ವಾಮಿತ್ರನನ್ನು ಅಭಿಷೇಕಿಸಿದನು.

09039014a ದೇಹನ್ಯಾಸೇ ಮನಶ್ಚಕ್ರೇ ತಂ ಊಚುಃ ಪ್ರಣತಾಃ ಪ್ರಜಾಃ|

09039014c ನ ಗಂತವ್ಯಂ ಮಹಾಪ್ರಾಜ್ಞ ತ್ರಾಹಿ ಚಾಸ್ಮಾನ್ಮಹಾಭಯಾತ್||

ದೇಹನ್ಯಾಸದ ಮನಸ್ಸು ಮಾಡಿದ್ದ ಅವನಿಗೆ ಪ್ರೀತಿಯಿಂದ ಪ್ರಜೆಗಳು ಹೇಳಿದರು: “ಮಹಾಪ್ರಾಜ್ಞ! ಹೋಗಬೇಡ! ಮಹಾಭಯದಿಂದ ನಮ್ಮನ್ನು ಕಾಪಾಡು!”

09039015a ಏವಮುಕ್ತಃ ಪ್ರತ್ಯುವಾಚ ತತೋ ಗಾಧಿಃ ಪ್ರಜಾಸ್ತದಾ|

09039015c ವಿಶ್ವಸ್ಯ ಜಗತೋ ಗೋಪ್ತಾ ಭವಿಷ್ಯತಿ ಸುತೋ ಮಮ||

ಅದಕ್ಕೆ ಪ್ರತಿಯಾಗಿ ಗಾಧಿಯು ಪ್ರಜೆಗಳಿಗೆ ಹೇಳಿದನು: “ನನ್ನ ಮಗನು ವಿಶ್ವದ ರಕ್ಷಕನಾಗುತ್ತಾನೆ!”

09039016a ಇತ್ಯುಕ್ತ್ವಾ ತು ತತೋ ಗಾಧಿರ್ವಿಶ್ವಾಮಿತ್ರಂ ನಿವೇಶ್ಯ ಚ|

09039016c ಜಗಾಮ ತ್ರಿದಿವಂ ರಾಜನ್ವಿಶ್ವಾಮಿತ್ರೋಽಭವನ್ನೃಪಃ||

09039016e ನ ಚ ಶಕ್ನೋತಿ ಪೃಥಿವೀಂ ಯತ್ನವಾನಪಿ ರಕ್ಷಿತುಂ||

ಹೀಗೆ ಹೇಳಿ ಗಾಧಿಯು ವಿಶ್ವಾಮಿತ್ರನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ ತ್ರಿದಿವಕ್ಕೆ ಹೊರಟುಹೋದನು. ರಾಜನ್! ಆಗ ವಿಶ್ವಾಮಿತ್ರನು ರಾಜನಾದನು. ಆದರೆ ಪ್ರಯತ್ನಪಟ್ಟರೂ ಅವನಿಗೆ ಪೃಥ್ವಿಯನ್ನು ರಕ್ಷಿಸಲು ಆಗಲಿಲ್ಲ.

09039017a ತತಃ ಶುಶ್ರಾವ ರಾಜಾ ಸ ರಾಕ್ಷಸೇಭ್ಯೋ ಮಹಾಭಯಂ|

09039017c ನಿರ್ಯಯೌ ನಗರಾಚ್ಚಾಪಿ ಚತುರಂಗಬಲಾನ್ವಿತಃ||

ಒಮ್ಮೆ ಆ ರಾಜನು ರಾಕ್ಷಸರ ಮಹಾಭಯದ ಕುರಿತು ಕೇಳಿ, ಚತುರಂಗಬಲಾನ್ವಿತನಾಗಿ ನಗರದಿಂದ ಹೊರಟನು.

09039018a ಸ ಗತ್ವಾ ದೂರಮಧ್ವಾನಂ ವಸಿಷ್ಠಾಶ್ರಮಮಭ್ಯಯಾತ್|

09039018c ತಸ್ಯ ತೇ ಸೈನಿಕಾ ರಾಜಂಶ್ಚಕ್ರುಸ್ತತ್ರಾನಯಾನ್ಬಹೂನ್||

ಬಹಳ ದೂರ ಗಮಿಸಿ ಅವನು ವಸಿಷ್ಠನ ಆಶ್ರಮದ ಬಳಿ ಹೋದನು. ರಾಜನ್! ಅಲ್ಲಿ ಅವನ ಸೈನಿಕರು ಅನೀತಿಯಿಂದ ಅನೇಕ ಅಪಚಾರಗಳನ್ನೆಸಗಿದರು.

09039019a ತತಸ್ತು ಭಗವಾನ್ವಿಪ್ರೋ ವಸಿಷ್ಠೋಽಶ್ರಮಮಭ್ಯಯಾತ್|

09039019c ದದೃಶೇ ಚ ತತಃ ಸರ್ವಂ ಭಜ್ಯಮಾನಂ ಮಹಾವನಂ||

ಭಗವಾನ್ ವಿಪ್ರ ವಸಿಷ್ಠನು ಆಶ್ರಮಕ್ಕೆ ಹಿಂದಿರುಗಲು ಅಲ್ಲಿ ಮಹಾವನವೆಲ್ಲವೂ ಧ್ವಂಸವಾದುದನ್ನು ನೋಡಿದನು.

09039020a ತಸ್ಯ ಕ್ರುದ್ಧೋ ಮಹಾರಾಜ ವಸಿಷ್ಠೋ ಮುನಿಸತ್ತಮಃ|

09039020c ಸೃಜಸ್ವ ಶಬರಾನ್ಘೋರಾನಿತಿ ಸ್ವಾಂ ಗಾಮುವಾಚ ಹ||

ಮಹಾರಾಜ! ಅದರಿಂದ ಕ್ರುದ್ಧನಾದ ಮುನಿಸತ್ತಮ ವಸಿಷ್ಠನು “ಘೋರ ಶಬರರನ್ನು ಸೃಷ್ಟಿಸು!” ಎಂದು ತನ್ನ ಗೋವಿಗೆ ಹೇಳಿದನು.

09039021a ತಥೋಕ್ತಾ ಸಾಸೃಜದ್ಧೇನುಃ ಪುರುಷಾನ್ಘೋರದರ್ಶನಾನ್|

09039021c ತೇ ಚ ತದ್ಬಲಮಾಸಾದ್ಯ ಬಭಂಜುಃ ಸರ್ವತೋದಿಶಂ||

ಹಾಗೆ ಹೇಳಲು ಆ ಹಸುವು ಘೋರರಾಗಿ ಕಾಣುತ್ತಿದ್ದ ಪುರುಷರನ್ನು ಸೃಷ್ಟಿಸಿದಳು. ಅವರು ವಿಶ್ವಾಮಿತ್ರನ ಸೇನೆಯನ್ನು ಎಲ್ಲಕಡೆಗಳಿಂದ ಆಕ್ರಮಣಿಸಿ ನಾಶಪಡಿಸಿದರು.

09039022a ತದ್ದೃಷ್ಟ್ವಾ ವಿದ್ರುತಂ ಸೈನ್ಯಂ ವಿಶ್ವಾಮಿತ್ರಸ್ತು ಗಾಧಿಜಃ|

09039022c ತಪಃ ಪರಂ ಮನ್ಯಮಾನಸ್ತಪಸ್ಯೇವ ಮನೋ ದಧೇ||

ಪಲಾಯನಮಾಡುತ್ತಿದ್ದ ತನ್ನ ಸೇನೆಯನ್ನು ನೋಡಿ ಗಾಧಿಯ ಮಗ ವಿಶ್ವಾಮಿತ್ರನು ತಪೋಬಲವೇ ಹೆಚ್ಚಿನದೆಂದು ತಿಳಿದು ತಪಸ್ಸನ್ನಾಚರಿಸಲು ಮನಸ್ಸುಮಾಡಿದನು.

09039023a ಸೋಽಸ್ಮಿಂಸ್ತೀರ್ಥವರೇ ರಾಜನ್ಸರಸ್ವತ್ಯಾಃ ಸಮಾಹಿತಃ|

09039023c ನಿಯಮೈಶ್ಚೋಪವಾಸೈಶ್ಚ ಕರ್ಶಯನ್ದೇಹಮಾತ್ಮನಃ||

ರಾಜನ್! ಅವನು ಸರಸ್ವತಿಯ ಆ ಶ್ರೇಷ್ಠ ತೀರ್ಥಕ್ಕೆ ಹೋಗಿ ಅಲ್ಲಿ ಉಪವಾಸ ನಿಯಮಗಳಿಂದ ತನ್ನ ದೇಹವನ್ನು ಕೃಶಗೊಳಿಸಿದನು.

09039024a ಜಲಾಹಾರೋ ವಾಯುಭಕ್ಷಃ ಪರ್ಣಾಹಾರಶ್ಚ ಸೋಽಭವತ್|

09039024c ತಥಾ ಸ್ಥಂಡಿಲಶಾಯೀ ಚ ಯೇ ಚಾನ್ಯೇ ನಿಯಮಾಃ ಪೃಥಕ್||

ಜಲಾಹಾರಿಯಾಗಿ, ವಾಯುಭಕ್ಷಕನಾಗಿ, ಪರ್ಣಾಹಾರಿಯಾಗಿದ್ದನು. ಹಾಗೆಯೇ ನೆಲದ ಮೇಲೆಯೇ ಮಲಗುವುದು ಮುಂತಾದ ಅನ್ಯ ಅನೇಕ ನಿಯಮಗಳನ್ನೂ ಆಚರಿಸಿದನು.

09039025a ಅಸಕೃತ್ತಸ್ಯ ದೇವಾಸ್ತು ವ್ರತವಿಘ್ನಂ ಪ್ರಚಕ್ರಿರೇ|

09039025c ನ ಚಾಸ್ಯ ನಿಯಮಾದ್ಬುದ್ಧಿರಪಯಾತಿ ಮಹಾತ್ಮನಃ||

ದೇವತೆಗಳಾದರೋ ಅವನ ವ್ರತವಿಘ್ನವನ್ನುಂಟು ಮಾಡಲು ಬಹಳವಾಗಿ ಪ್ರಯತ್ನಿಸಿದರು. ಆದರೂ ಆ ಮಹಾತ್ಮನ ಬುದ್ಧಿಯು ನಿಯಮಗಳಿಂದ ವಿಚಲಿತಗೊಳ್ಳಲಿಲ್ಲ.

09039026a ತತಃ ಪರೇಣ ಯತ್ನೇನ ತಪ್ತ್ವಾ ಬಹುವಿಧಂ ತಪಃ|

09039026c ತೇಜಸಾ ಭಾಸ್ಕರಾಕಾರೋ ಗಾಧಿಜಃ ಸಮಪದ್ಯತ||

ಆಗ ಪರಮ ಪ್ರಯತ್ನದಿಂದ ಬಹುವಿಧದ ತಪಸ್ಸನ್ನು ತಪಿಸಿ ಗಾಧಿಜನು ತೇಜಸ್ಸಿನಲ್ಲಿ ಭಾಸ್ಕರಾಕಾರನಾಗಿ ಬೆಳೆದನು.

09039027a ತಪಸಾ ತು ತಥಾ ಯುಕ್ತಂ ವಿಶ್ವಾಮಿತ್ರಂ ಪಿತಾಮಹಃ|

09039027c ಅಮನ್ಯತ ಮಹಾತೇಜಾ ವರದೋ ವರಮಸ್ಯ ತತ್||

ಹಾಗೆ ತಪಸ್ಸಿನಲ್ಲಿ ಯುಕ್ತನಾಗಿದ್ದ ವಿಶ್ವಾಮಿತ್ರನಿಗೆ ಮಹಾತೇಜಸ್ವಿ ವರದ ಪಿತಾಮಹನು ವರವನ್ನೀಯಲು ನಿಶ್ಚಯಿಸಿದನು.

09039028a ಸ ತು ವವ್ರೇ ವರಂ ರಾಜನ್ಸ್ಯಾಮಹಂ ಬ್ರಾಹ್ಮಣಸ್ತ್ವಿತಿ|

09039028c ತಥೇತಿ ಚಾಬ್ರವೀದ್ಬ್ರಹ್ಮ ಸರ್ವಲೋಕಪಿತಾಮಹಃ||

ರಾಜನ್! “ನಾನು ಬ್ರಾಹ್ಮಣನಾಗಬೇಕು!” ಎಂದು ಅವನು ವರವನ್ನು ಕೇಳಿಕೊಳ್ಳಲು ಸರ್ವಲೋಕಪಿತಾಮಹ ಬ್ರಹ್ಮನು “ಹಾಗೆಯೇ ಆಗಲಿ!” ಎಂದನು.

09039029a ಸ ಲಬ್ಧ್ವಾ ತಪಸೋಗ್ರೇಣ ಬ್ರಾಹ್ಮಣತ್ವಂ ಮಹಾಯಶಾಃ|

09039029c ವಿಚಚಾರ ಮಹೀಂ ಕೃತ್ಸ್ನಾಂ ಕೃತಕಾಮಃ ಸುರೋಪಮಃ||

ಉಗ್ರತಪಸ್ಸಿನಿಂದ ಬಾಹ್ಮಣತ್ವವನ್ನು ಪಡೆದು ಆ ಮಹಾಯಶಸ್ವಿಯು ಸುರರಂತೆ ಆಸೆಯನ್ನೀಡೇರಿಸಿಕೊಂಡು ಇಡೀ ಪೃಥ್ವಿಯಲ್ಲಿ ಸಂಚರಿಸಿದನು.

09039030a ತಸ್ಮಿಂಸ್ತೀರ್ಥವರೇ ರಾಮಃ ಪ್ರದಾಯ ವಿವಿಧಂ ವಸು|

09039030c ಪಯಸ್ವಿನೀಸ್ತಥಾ ಧೇನೂರ್ಯಾನಾನಿ ಶಯನಾನಿ ಚ||

ಆ ಶ್ರೇಷ್ಠ ತೀರ್ಥದಲ್ಲಿ ರಾಮನು ವಿವಿಧ ಸಂಪತ್ತುಗಳನ್ನು ಹಾಲುನೀಡುವ ಹಸುಗಳನ್ನೂ, ವಾಹನಗಳನ್ನೂ, ಹಾಸಿಗೆಗಳನ್ನೂ, ದಾನವನ್ನಾಗಿತ್ತನು.

09039031a ತಥಾ ವಸ್ತ್ರಾಣ್ಯಲಂಕಾರಂ ಭಕ್ಷ್ಯಂ ಪೇಯಂ ಚ ಶೋಭನಂ|

09039031c ಅದದಾನ್ಮುದಿತೋ ರಾಜನ್ಪೂಜಯಿತ್ವಾ ದ್ವಿಜೋತ್ತಮಾನ್||

ರಾಜನ್! ಹಾಗೆಯೇ ದ್ವಿಜೋತ್ತಮರನ್ನು ಪೂಜಿಸಿ ಅವನು ಶೋಭಿಸುವ ವಸ್ತ್ರಾಲಂಕಾರಗಳನ್ನೂ, ಭಕ್ಷ್ಯ-ಪಾನೀಯಗಳನ್ನೂ ಸಂತೋಷದಿಂದ ದಾನವಿತ್ತನು.

09039032a ಯಯೌ ರಾಜಂಸ್ತತೋ ರಾಮೋ ಬಕಸ್ಯಾಶ್ರಮಮಂತಿಕಾತ್|

09039032c ಯತ್ರ ತೇಪೇ ತಪಸ್ತೀವ್ರಂ ದಾಲ್ಭ್ಯೋ ಬಕ ಇತಿ ಶ್ರುತಿಃ||

ರಾಜನ್! ಅನಂತರ ರಾಮನು ಬಕನ ಆಶ್ರಮದ ಬಳಿ ಬಂದನು. ಅಲ್ಲಿ ದಾಲ್ಭ್ಯ ಬಕನು ತೀವ್ರ ತಪಸ್ಸನ್ನಾಚರಿಸಿದನು ಎಂದು ಕೇಳಿದ್ದೇವೆ.”

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಬಲದೇವತಿರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನೇ ಏಕೋನಚತ್ವಾರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ ಎನ್ನುವ ಮೂವತ್ತೊಂಭತ್ತನೇ ಅಧ್ಯಾಯವು.

ಸಾರಸ್ವತ ಪರ್ವದ ಇತರ ಅಧ್ಯಾಯಗಳು:

  1. ಪಾಂಡವಾನಾಂ ಸರೋವರಾಗಮನ
  2. ಸುಯೋಧನಯುಧಿಷ್ಠಿರಸಂವಾದ
  3. ಸುಯೋಧನಯುಧಿಷ್ಠಿರಸಂವಾದ
  4. ಭೀಮಸೇನದುರ್ಯೋಧನಸಂವಾದ
  5. ಬಲದೇವಾಗಮನ
  6. ಬಲದೇವತೀರ್ಥಯಾತ್ರಾಯಾಂ ಪ್ರಭಾಸೋತ್ಪತ್ತಿಕಥನ
  7. ಬಲದೇವತೀರ್ಥಯಾತ್ರಾಯಾಂ ತ್ರಿತಾಖ್ಯಾನ
  8. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  9. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  10. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  11. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  12. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  13. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  14. ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
  15. ಬಲದೇವತೀರ್ಥಯಾತ್ರಾಯಾಂ ಕುಮಾರಾಭಿಷೇಕಕ್ರಮ
  16. ಬಲದೇವತೀರ್ಥಯಾತ್ರಾಯಾಂ ಸ್ಕಂದಾಭಿಷೇಕ
  17. ಬಲದೇವತೀರ್ಥಯಾತ್ರಾಯಾಂ ತಾರಕವಧ
  18. ಬಲದೇವತೀರ್ಥಯಾತ್ರಾ
  19. ಬಲದೇವತೀರ್ಥಯಾತ್ರಾಯಾಂ ಬದರಪಾಚನತೀರ್ಥಕಥನ
  20. ಬಲದೇವತೀರ್ಥಯಾತ್ರಾ
  21. ಬಲದೇವತೀರ್ಥಯಾತ್ರಾ
  22. ಬಲದೇವತೀರ್ಥಯಾತ್ರಾ
  23. ಬಲದೇವತೀರ್ಥಯಾತ್ರಾ
  24. ಬಲದೇವತೀರ್ಥಯಾತ್ರಾಯಾಂ ಕುರುಕ್ಷೇತ್ರಕಥನ
  25. ಬಲದೇವತೀರ್ಥಯಾತ್ರಾ

Comments are closed.