ಶಕ್ರದೇವ

ಶಕ್ರದೇವ ಕಲಿಂಗ ದೇಶದ ರಾಜಕುಮಾರ. ಮಹಾಭಾರತ ಯುದ್ಧದ ಎರಡನೇ ದಿನ ಭೀಮಸೇನನಿಂದ ವಧಿಸಲ್ಪಟ್ಟನು (ಭೀಷ್ಮ ಪರ್ವ, ಅಧ್ಯಾಯ ೫). ಆ ಯುದ್ಧದ ವರ್ಣನೆಯು ಈ ರೀತಿಯಿದೆ: ಕಲಿಂಗಸ್ತು ಮಹೇಷ್ವಾಸಃ ಪುತ್ರಶ್ಚಾಸ್ಯ ಮಹಾರಥಃ| ಶಕ್ರದೇವ ಇತಿ ಖ್ಯಾತೋ ಜಘ್ನತುಃ ಪಾಂಡವಂ ಶರೈಃ|| ತತೋ ಭೀಮೋ ಮಹಾಬಾಹುರ್ವಿಧುನ್ವನ್ರುಚಿರಂ ಧನುಃ| ಯೋಧಯಾಮಾಸ ಕಾಲಿಂಗಾನ್ಸ್ವಬಾಹುಬಲಮಾಶ್ರಿತಃ|| ಶಕ್ರದೇವಸ್ತು ಸಮರೇ ವಿಸೃಜನ್ಸಾಯಕಾನ್ಬಹೂನ್| ಅಶ್ವಾಂ ಜಘಾನ ಸಮರೇ ಭೀಮಸೇನಸ್ಯ ಸಾಯಕೈಃ| ವವರ್ಷ ಶರವರ್ಷಾಣಿ ತಪಾಂತೇ ಜಲದೋ ಯಥಾ|| ಹತಾಶ್ವೇ ತು…

Continue reading

ಶುಕ

ಶುಕ ಶುಕನು ವ್ಯಾಸನ ಮಗ. ಮಹಾಭಾರತದ ರಚನೆಯಾದ ನಂತರ ಮೊಟ್ಟಮೊದಲನೆಯದಾಗಿ ವ್ಯಾಸನು ಅದನ್ನು ತನ್ನ ಮಗ ಶುಕನಿಗೆ ಉಪದೇಶಿಸಿದನು. ಶುಕನು ಮಹಾಭಾರತ ಕಥೆಯನ್ನು ಯಕ್ಷ-ಗಂಧರ್ವ-ರಾಕ್ಷಸರಿಗೆ ಹೇಳಿದನು.  

Continue reading

ಶೌನಕ

ಶೌನಕ ಶೌನಕನು ಭಾರ್ಗವ ವಂಶದ ಓರ್ವ ಋಷಿಯು.  ಮಹರ್ಷಿ ಭೃಗುವು ಪುಲೋಮೆಯಲ್ಲಿ ಚ್ಯವನನನ್ನು ಪಡೆದನು. ಭಾರ್ಗವ ಚ್ಯವನನು ಸುಕನ್ಯೆಯಿಂದ ಪ್ರಮತಿ ಎನ್ನುವ ಸುತನನ್ನು ಪಡೆದನು. ಪ್ರಮತಿಯು ಘೃತಾಚಿಯಲ್ಲಿ ರುರು ಎಂಬ ಹೆಸರಿನ ಮಗನನ್ನು ಪಡೆದನು. ರುರುವು ಪ್ರಮದ್ವರೆಯಲ್ಲಿ ಶುನಕನನ್ನು ಪಡೆದನು. ಶುನಕನ ಮಗನೇ ಶೌನಕ. ಶೌನಕನು ನೈಮಿಷಾರಣ್ಯದಲ್ಲಿ ಒಂದು ದೀರ್ಘ ಸತ್ರದಲ್ಲಿ ತೊಡಗಿದ್ದಾಗ ಸೂತ ಪೌರಾಣಿಕ ಉಗ್ರಶ್ರವನು ವ್ಯಾಸನ ಮಹಾಭಾರತವನ್ನು ಹೇಳಿದನು.  

Continue reading