ತೀರ್ಥಯಾತ್ರಾ ಮಹಾತ್ಮೆ: ಪುಲಸ್ತ್ಯ-ಭೀಷ್ಮರ ಸಂವಾದ

ತೀರ್ಥಯಾತ್ರಾ ಮಹಾತ್ಮೆ: ಪುಲಸ್ತ್ಯ-ಭೀಷ್ಮರ ಸಂವಾದ ಹಿಂದೆ ಧಾರ್ಮಿಕರಲ್ಲಿ ಶ್ರೇಷ್ಠ, ಮಹಾತೇಜಸ್ವಿ ಭೀಷ್ಮನು ಪಿತೃ ವ್ರತವನ್ನು ಪಾಲಿಸುತ್ತಾ ದೇವಗಂಧರ್ವರಿಂದ, ದೇವರ್ಷಿಗಳಿಂದ ಸೇವಿಸಲ್ಪಟ್ಟ ಸುಂದರ ಪ್ರದೇಶ, ಪುಣ್ಯಪ್ರದೇಶ ಗಂಗಾತಟದಲ್ಲಿ ಮುನಿಯಂತೆ ವಾಸಿಸುತ್ತಿದ್ದನು. ಆ ಪರಮದ್ಯುತಿಯು ಪಿತೃ ದೇವ ಮತ್ತು ಋಷಿ ತರ್ಪಣಗಳನ್ನಿತ್ತು ಅವರನ್ನು ವಿಧಿವತ್ತಾದ ಕರ್ಮಗಳಿಂದ ತೃಪ್ತಿಗೊಳಿಸುತ್ತಿದ್ದನು. ಕೆಲವು ಸಮಯದ ನಂತರ ಜಪದಲ್ಲಿ ನಿರತನಾಗಿದ್ದ ಆ ಮಹಾತಪಸ್ವಿಯು ಅದ್ಭುತಸಂಕಾಶ ಋಷಿಸತ್ತಮ ಪುಲಸ್ತ್ಯನನ್ನು ಕಂಡನು. ತೇಜಸ್ಸಿನಿಂದ ಬೆಳಗುತ್ತಿರುವ ಆ ಉಗ್ರತಪಸ್ವಿಯನ್ನು ನೋಡಿ ಅವನು ಅತುಲ…

Continue reading

ಧೌಮ್ಯನು ಯುಧಿಷ್ಠಿರನಿಗೆ ತೀರ್ಥಯಾತ್ರಾ ಕ್ಷೇತ್ರಗಳನ್ನು ವರ್ಣಿಸಿದುದು

ಧೌಮ್ಯನು ಯುಧಿಷ್ಠಿರನಿಗೆ ತೀರ್ಥಯಾತ್ರಾ ಕ್ಷೇತ್ರಗಳನ್ನು ವರ್ಣಿಸಿದುದು ಪೂರ್ವ ತೀರ್ಥಕ್ಷೇತ್ರಗಳ ಕೀರ್ತನೆ ಬೇಸರದಿಂದಿದ್ದ ಪಾಂಡವರು ಎಲ್ಲರೂ ತೀರ್ಥಯಾತ್ರೆಗೆ ಹೊರಡಲು ಉತ್ಸುಕರಾಗಿದ್ದುದನ್ನು ಕಂಡು ಬೃಹಸ್ಪತಿಯ ಸಮನಾಗಿದ್ದ ಧೌಮ್ಯನು ಅವರಿಗೆ ಆಶ್ವಾಸನೆಯನ್ನು ನೀಡುತ್ತಾ ಹೇಳಿದನು: “ಭರತರ್ಷಭ! ಬ್ರಾಹ್ಮಣರು ಅನುಮತಿ ನೀಡುವ, ಬೇರೆ ಬೇರೆ ದಿಕ್ಕುಗಳಲ್ಲಿರುವ ಪುಣ್ಯಾಶ್ರಮ, ತೀರ್ಥ, ಮತ್ತು ಪರ್ವತಗಳ ಕುರಿತು ಹೇಳುತ್ತೇನೆ. ಕೇಳು. ಮೊದಲು ಪಶ್ಚಿಮ ದಿಕ್ಕಿನಲ್ಲಿರುವ ರಾಜರ್ಷಿಗಣ ಸೇವಿತ ರಮ್ಯ ತೀರ್ಥಗಳ ಕುರಿತು ಸ್ಮೃತಿಗಳಲ್ಲಿ ಹೇಳಿರುವ ಹಾಗೆ ಹೇಳುತ್ತೇನೆ. ಅಲ್ಲಿ ದೇವರ್ಷಿಗಳು…

Continue reading

ಯುಧಿಷ್ಠಿರ-ಮಾರ್ಕಂಡೇಯ ಸಂವಾದ

ಯುಧಿಷ್ಠಿರ-ಮಾರ್ಕಂಡೇಯ ಸಂವಾದ ಶುಭಾಶುಭ ಕರ್ಮಫಲ ಮಹಾಮುನಿ ಮಾರ್ಕಂಡೇಯನು ಹೇಳಲು ಸಿದ್ಧನಾಗಿದ್ದಾನೆಂದು ನೋಡಿ ಕುರುರಾಜ ಪಾಂಡವನು ಕಥೆಗಳನ್ನು ಪ್ರಾರಂಭಿಸಲು ಒತ್ತಾಯಿಸಿದನು: “ನೀನು ಸನಾತನ ದೇವ, ದೈತ್ಯರ ಮತ್ತು ಮಹಾತ್ಮ ಋಷಿಗಳ ಮತ್ತು ರಾಜರ್ಷಿಗಳ ಚರಿತ್ರೆಗಳನ್ನು ಎಲ್ಲವನ್ನೂ ತಿಳಿದಿದ್ದೀಯೆ. ತುಂಬಾ ಸಮಯದಿಂದ ನಾವು ಸೇವೆ ಮತ್ತು ಪೂಜೆಗಳಿಗೆ ಮಾನ್ಯನಾದ ನಿನ್ನ ಬರವನ್ನು ಕಾಯುತ್ತಿದ್ದೆವು. ಈಗ ದೇವಕೀಪುತ್ರನೂ ನಮ್ಮನ್ನು ನೋಡಲು ಇಲ್ಲಿಗೆ ಬಂದಿದ್ದಾನೆ. ನಾನು ಸುಖವನ್ನು ಕಳೆದುಕೊಂಡಿರುವುದನ್ನು ಮತ್ತು ದುರ್ವೃತ್ತ ಧಾರ್ತರಾಷ್ಟ್ರರು ಉನ್ನತಿಹೊಂದಿದುದನ್ನು ನೋಡಿದರೆ…

Continue reading

ಸರಸ್ವತೀ ಗೀತೆ

ಸರಸ್ವತೀ ಗೀತೆ ಧೀಮಂತ ತಾರ್ಕ್ಷ್ಯ ಮುನಿಯು ಸರಸ್ವತಿಯಲ್ಲಿ ಕೇಳಿದನು: “ಭದ್ರೇ! ಇಲ್ಲಿ ಪುರುಷರಿಗೆ ಯಾವುದು ಶ್ರೇಯಸ್ಸು? ಸ್ವಧರ್ಮದಿಂದ ಚ್ಯುತಿಹೊಂದದಿರಲು ಏನನ್ನು ಮಾಡಬೇಕು? ನನಗೆ ಎಲ್ಲವನ್ನೂ ಹೇಳು. ನಿನ್ನಿಂದ ಉಪದೇಶಿಸಲ್ಪಟ್ಟ ನಾನು ಸ್ವಧರ್ಮದಿಂದ ಚ್ಯುತನಾಗುವುದಿಲ್ಲ. ಧರ್ಮವು ನಷ್ಟವಾಗದ ರೀತಿಯಲ್ಲಿ ಹೇಗೆ ಮತ್ತು ಯಾವಾಗ ಅಗ್ನಿಯನ್ನು ಪೂಜಿಸಬೇಕು ಮತ್ತು ಅವನಲ್ಲಿ ಆಹುತಿಯನ್ನು ನೀಡಬೇಕು? ಇವೆಲ್ಲವನ್ನೂ ಹೇಳು. ಇದರಿಂದ ನಾನು ಲೋಕಗಳಲ್ಲಿ ವಿರಜನಾಗಿ ಸಂಚರಿಸಬಲ್ಲೆ.” ಪ್ರೀತಿಯುಕ್ತನಾದ ಅವನು ಹೀಗೆ ಕೇಳಲು ಅವನ ಉತ್ತಮ ಬುದ್ಧಿಯನ್ನು…

Continue reading

ಕೌಶಿಕ-ಪತಿವ್ರತೆ-ಧರ್ಮವ್ಯಾಧ

ಕೌಶಿಕ-ಪತಿವ್ರತೆ-ಧರ್ಮವ್ಯಾಧ ಓರ್ವ ದ್ವಿಜಾತಿಪ್ರವರ, ವೇದಧ್ಯಾಯೀ, ತಪೋಧನ, ಧರ್ಮಶೀಲ ಕೌಶಿಕ ಎಂಬ ಹೆಸರಿನ ತಪಸ್ವಿಯಿದ್ದನು. ಆ ದ್ವಿಜಸತ್ತಮನು ಉಪನಿಷತ್ತುಗಳೊಂದಿಗೆ ವೇದಗಳನ್ನು ತಿಳಿದುಕೊಂಡಿದ್ದನು. ಒಮ್ಮೆ ಅವನು ಒಂದು ಮರದ ಕೆಳಗೆ ವೇದಗಳನ್ನು ಉಚ್ಚರಿಸುತ್ತಾ ನಿಂತಿದ್ದನು. ಆ ವೃಕ್ಷದ ಮೇಲೆ ಒಂದು ಹೆಣ್ಣು ಬಲಾಕಾ ಪಕ್ಷಿಯು ಕುಳಿತಿತ್ತು. ಅದು ಬ್ರಾಹ್ಮಣನ ಮೇಲೆ ಪಿಷ್ಟವನ್ನು ಹಾಕಿತು. ಆಗ ಕೃದ್ಧನಾದ ದ್ವಿಜನು ಅದನ್ನು ನೋಡಿ, ಆ ಬಲಾಕದ ಮೇಲೆ ಕ್ರೋಧಯುಕ್ತವಾದ ಯೋಚನೆಯನ್ನು ಪ್ರಯೋಗಿಸಿದನು. ವಿಪ್ರನ ಆ ಯೋಚನೆಯ…

Continue reading

ವಿದುರ ನೀತಿ

ವಿದುರ ನೀತಿ ಸೂತ ಸಂಜಯನು ಪಾಂಡವರಲ್ಲಿಗೆ ಕೌರವ ರಾಯಭಾರಿಯಾಗಿ ಹೋಗಿ ಮರಳಿದ ರಾತ್ರಿ ಧೃತರಾಷ್ಟ್ರನು ನಿದ್ದೆಬಾರದೇ ಎಚ್ಚೆತ್ತಿದ್ದಾಗ ವಿದುರನನ್ನು ಕರೆಯಿಸಿ ಅವನಿಂದ ಅನೇಕ ನೀತಿಮಾತುಗಳನ್ನು ಕೇಳಿದನು. ಧೃತರಾಷ್ಟ್ರನು ಹೇಳಿದನು: “ವಿದುರ! ಸಂಜಯನು ಬಂದು ನನಗೆ ಬೈದು ಹೋಗಿದ್ದಾನೆ. ನಾಳೆ ಅವನು ಸಭಾಮಧ್ಯದಲ್ಲಿ ಅಜಾತಶತ್ರುವಿನ ಸಂದೇಶವನ್ನು ಹೇಳುವವನಿದ್ದಾನೆ. ಕುರುವೀರನ ಸಂದೇಶವೇನೆಂದು ಇಂದು ನನಗೆ ತಿಳಿಯಲಿಕ್ಕಾಗಲಿಲ್ಲ. ಆದುದರಿಂದ ನನ್ನ ದೇಹವು ಸುಡುತ್ತಿದೆ. ನಿದ್ದೆಬರುತ್ತಿಲ್ಲ. ಸುಡುತ್ತಿರುವ ಮತ್ತು ನಿದ್ದೆಮಾಡಲಿಕ್ಕಾಗದೇ ಇರುವವನಿಗೆ ಒಳ್ಳೆಯದು ಏನಾದರೂ ಇದೆಯೇ…

Continue reading

ಸನತ್ಸುಜಾತೀಯ

ಸನತ್ಸುಜಾತೀಯ ಮನೀಷೀ ರಾಜಾ ಧೃತರಾಷ್ಟ್ರನು ವಿದುರನ ಮಾತನ್ನು ಗೌರವಿಸಿ, ಪರಮ ಬುದ್ಧಿಯನ್ನು ಪಡೆಯಲೋಸುಗ, ಮಹಾತ್ಮ ಸನತ್ಸುಜಾತನಿಗೆ ರಹಸ್ಯದಲ್ಲಿ ಕೇಳಿದನು: “ಸನತ್ಸುಜಾತ! ಮೃತ್ಯುವೇ ಇಲ್ಲವೆಂದು ನಿನ್ನ ಉಪದೇಶವೆಂದು ನಾನು ಕೇಳಿದ್ದೇನೆ. ಆದರೂ ದೇವಾಸುರರು ಬ್ರಹ್ಮಚರ್ಯವನ್ನು ಆಚರಿಸಿ ಅಮೃತತ್ವವನ್ನು ಪಡೆದರು. ಇವುಗಳಲ್ಲಿ ಯಾವುದು ಸತ್ಯ?” ಸನತ್ಸುಜಾತನು ಹೇಳಿದನು: “ಮೃತ್ಯುವು ಕರ್ಮಗಳಿಂದಾಗುತ್ತದೆಯೆಂದು ಕೆಲವರು ಹೇಳಿದರೆ ಮೃತ್ಯುವೇ ಇಲ್ಲವೆಂದು ಇತರರು ಹೇಳುತ್ತಾರೆ. ರಾಜನ್! ಈಗ ನಾನು ಹೇಳುವುದನ್ನು ಕೇಳು. ಇದರಿಂದ ನಿನ್ನಲ್ಲಿ ಶಂಕೆಗಳು ಉಳಿಯುವುದಿಲ್ಲ. ಇವೆರಡು…

Continue reading

ಭೌಮಗುಣಕಥನ

ಭೌಮಗುಣಕಥನ ಇಲ್ಲಿ ಇರುವವುಗಳು ಎರಡು ರೀತಿಯವು: ಚಲಿಸುವವು ಮತ್ತು ಚಲಿಸದೇ ಇರುವವು. ಚಲಿಸುವವುಗಳಲ್ಲಿ ಮೂರು ವಿಧಗಳವು – ಯೋನಿಯಿಂದ ಜನಿಸುವವು, ಅಂಡದಿಂದ ಜನಿಸುವವು ಮತ್ತು ಉಷ್ಣ-ತೇವಗಳಿಂದ ಜನಿಸುವವು. ಚಲಿಸುವವುಗಳಲ್ಲಿ ಎಲ್ಲರಿಗಿಂತಲೂ ಶ್ರೇಷ್ಠವಾದವು ಯೋನಿಯಿಂದ ಹುಟ್ಟಿದವು. ಯೋನಿಜನ್ಮರಲ್ಲಿ ಪ್ರಮುಖರಾದವರು ಮಾನವರು ಮತ್ತು ಪಶುಗಳು. ನಾನಾರೂಪಗಳಲ್ಲಿರುವ ಇವುಗಳಲ್ಲಿ ಹದಿನಾಲ್ಕು ಭೇದಗಳಿವೆ. ಅವುಗಳಲ್ಲಿ ಏಳು ಅರಣ್ಯಗಳಲ್ಲಿ ವಾಸಿಸುವಂಥವು (ವನ್ಯ) ಮತ್ತು ಇನ್ನೊಂದು ಏಳು ಗ್ರಾಮವಾಸಿಗಳು. ಸಿಂಹ, ಹುಲಿ, ಹಂದಿ, ಕಾಡೆಮ್ಮೆ, ಆನೆ, ಕರಡಿ, ಮತ್ತು…

Continue reading

ಶ್ರೀಮದ್ಭಗವದ್ಗೀತಾ

ಶ್ರೀಮದ್ಭಗವದ್ಗೀತಾ ಅರ್ಜುನವಿಷಾದ ಯೋಗ ಧೃತರಾಷ್ಟ್ರನು ಹೇಳಿದನು: “ಸಂಜಯ! ಧರ್ಮಕ್ಷೇತ್ರ ಕುರುಕ್ಷೇತ್ರದಲ್ಲಿ ಯುದ್ಧಮಾಡಲು ಉತ್ಸುಕರಾಗಿ ಸೇರಿದ್ದ ನನ್ನವರು ಮತ್ತು ಪಾಂಡವರು ಏನು ಮಾಡಿದರು?” ಸಂಜಯನು ಹೇಳಿದನು: “ಪಾಂಡವ ಸೇನೆಯು ಯುದ್ಧವ್ಯೂಹದಲ್ಲಿ ರಚಿಸಿಕೊಂಡಿದ್ದುದನ್ನು ನೋಡಿದ ರಾಜಾ ದುರ್ಯೋಧನನು ಆಚಾರ್ಯನ ಬಳಿಬಂದು ಹೇಳಿದನು: “ಆಚಾರ್ಯ! ಪಾಂಡುಪುತ್ರರ ಈ ಮಹಾ ಸೇನೆಯನ್ನು ಬುದ್ಧಿವಂತಿಕೆಯಿಂದ ನಿನ್ನ ಶಿಷ್ಯ ದ್ರುಪದಪುತ್ರನು ವ್ಯೂಹದಲ್ಲಿ ರಚಿಸಿದುದನ್ನು ನೋಡು! ಅಲ್ಲಿ ಯುದ್ಧದಲ್ಲಿ ಶೂರರಾದ ಮಹೇಷ್ವಾಸ ಭೀಮಾರ್ಜುನರಿದ್ದಾರೆ, ಯುಯುಧಾನ, ವಿರಾಟ, ದ್ರುಪದ, ಧೃಷ್ಟಕೇತು, ಚೇಕಿತಾನ,…

Continue reading

ಇಂದ್ರ ಮತ್ತು ತಾಪಸಿಗಳ ಸಂವಾದ: ಗೃಹಸ್ಥಾಶ್ರಮದ ಪ್ರತಿಪಾದನೆ

ಇಂದ್ರ ಮತ್ತು ತಾಪಸಿಗಳ ಸಂವಾದ: ಗೃಹಸ್ಥಾಶ್ರಮದ ಪ್ರತಿಪಾದನೆ ಯುದ್ಧಾನಂತರ ಯುಧಿಷ್ಠಿರನು ಅಡವಿಗೆ ತೆರಳಲು ಸಿದ್ಧನಾದಾಗ ಅರ್ಜುನನು ಪಕ್ಷಿರೂಪಧಾರೀ ಇಂದ್ರ ಮತ್ತು ಋಷಿಬಾಲಕರ ಸಂವಾದವನ್ನು ಉಲ್ಲೇಖಿಸುತ್ತಾ ಗೃಹಸ್ಥ ಧರ್ಮ ಪಾಲನೆಯ ಕುರಿತು ಹೇಳಿದ ಈ ಕಥೆಯು ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅಧ್ಯಾಯ 11ರಲ್ಲಿ ಋಷಿ-ಶಕುನಿ ಸಂವಾದ ಕಥನ ಎಂದು ಬರುತ್ತದೆ. *** ಹಿಂದೊಮ್ಮೆ ಉತ್ತಮ ಕುಲಗಳಲ್ಲಿ ಹುಟ್ಟಿದ್ದ, ಇನ್ನೂ ಗಡ್ಡ-ಮೀಸೆಗಳು ಹುಟ್ಟಿರದ ಮಂದಬುದ್ಧಿಯ ದ್ವಿಜರು ಮನೆಗಳನ್ನು ತೊರೆದು ವನದ ಕಡೆ ನಡೆದರು. ಮನೆ,…

Continue reading