ಸಂಜಯ

ಸಂಜಯ

ಧೃತರಾಷ್ಟ್ರನ ಸೂತ ಮತ್ತು ಸ್ನೇಹಿತ;

ಆಗಾಗ ಧೃತರಾಷ್ಟ್ರನಿಗೆ ಸಲಹೆಯನ್ನು ನೀಡಿದವ;

ಧೃತರಾಷ್ಟ್ರನ ಅಪ್ಪಣೆಯಂತೆ ಕೌರವರ ರಾಯಭಾರಿಯಾಗಿ ಪಾಂಡವರಲ್ಲಿಗೆ ಹೋದವನು;

ವ್ಯಾಸನಿಂದ ದಿವ್ಯ ದೃಷ್ಟಿಯನ್ನು ಪಡೆದು, ಮಹಾಭಾರತ ಯುದ್ಧದಲ್ಲಿ ಭಾಗವಹಿಸಿ, ಧೃತರಾಷ್ಟ್ರನಿಗೆ ಹತ್ತನೇ ದಿನದ ರಾತ್ರಿ, ಹದಿನೈದನೇ ದಿನದ ರಾತ್ರಿ, ಹದಿನೇಳನೇ ದಿನದ ರಾತ್ರಿ ಮತ್ತು ಹತ್ತೊಂಭತ್ತನೇ ದಿನದ ಬೆಳಿಗ್ಗೆ ಆ ಹದಿನೆಂಟು ದಿನಗಳ ಮಹಾಭಾರತ ಯುದ್ಧವನ್ನು ನಾಲ್ಕು ಭಾಗಗಳಲ್ಲಿ ವರ್ಣಿಸಿದವನು;

ಧೃತರಾಷ್ಟ್ರನನ್ನು ಅನುಸರಿಸಿ ವನಕ್ಕೆ ಹೋಗಿ, ಧೃತರಾಷ್ಟ್ರ-ಗಾಂಧಾರಿ-ಕುಂತಿಯರು ಕಾಡ್ಗಿಚ್ಚಿನಲ್ಲಿ ಸುಟ್ಟುಹೋದ ನಂತರ ತಪಸ್ಸಿಗೆ ತೆರಳಿದವನು.

Comments are closed.