ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ

ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ ಈ ಕಥೆಯನ್ನು ವೈಶಂಪಾಯನನು ಜನಮೇಜಯನಿಗೆ ಶಲ್ಯ ಪರ್ವದ ಸಾರಸ್ವತಪರ್ವದ ಅಧ್ಯಾಯ 50ರಲ್ಲಿ ಹೇಳುತ್ತಾನೆ. ಸೋಮತೀರ್ಥದಲ್ಲಿ ಉಡುಪತೀ ಚಂದ್ರನು ರಾಜಸೂಯವನ್ನು ನಡೆಸಿದ್ದನು. ಅಲ್ಲಿ ಹಿಂದೆ ಸಾರಸ್ವತ ಮುನಿಯು ಹನ್ನೆರಡು ವರ್ಷಗಳ ಅನಾವೃಷ್ಟಿಯಿಂದ ಪೀಡಿತರಾಗಿದ್ದ ದ್ವಿಜೋತ್ತಮರಿಗೆ ವೇದಾಧ್ಯಯವನ್ನು ಮಾಡಿಸಿದ್ದನು. ಹಿಂದೆ ದಧೀಚ ಎಂದು ವಿಖ್ಯಾತನಾದ ಬ್ರಹ್ಮಚಾರೀ ಜಿತೇಂದ್ರಿಯ ಮಹಾತಪಸ್ವಿ ಧೀಮಾನ್ ಮುನಿಯಿದ್ದನು. ಅವನ ತಪಸ್ಸಿನಿಂದ ಶಕ್ರನು ಸತತವೂ ಭಯಪಡುತ್ತಿದ್ದನು. ಬಹುವಿಧದ ಫಲಗಳಿಂದಲೂ ಅವನನ್ನು ಲೋಭಗೊಳಿಸಲು ಶಕ್ಯವಾಗಲಿಲ್ಲ.…

Continue reading

ಅಸಿತದೇವಲ-ಜೈಗೀಷವ್ಯರ ಕಥೆ

ಅಸಿತದೇವಲ-ಜೈಗೀಷವ್ಯರ ಕಥೆ ಈ ಕಥೆಯನ್ನು ವೈಶಂಪಾಯನನು ಜನಮೇಜಯನಿಗೆ ಶಲ್ಯ ಪರ್ವದ ಸಾರಸ್ವತಪರ್ವದ ಅಧ್ಯಾಯ 49ರಲ್ಲಿ ಹೇಳುತ್ತಾನೆ. ಆದಿತ್ಯತೀರ್ಥದಲ್ಲಿ ಹಿಂದೆ ಧರ್ಮಾತ್ಮ ತಪೋಧನ ಅಸಿತದೇವಲನು ಗೃಹಸ್ಥಾಶ್ರಮ ಧರ್ಮವನ್ನು ಆಶ್ರಯಿಸಿ ವಾಸಿಸುತ್ತಿದ್ದನು. ಆ ಧರ್ಮನಿತ್ಯ-ಶುಚಿ-ದಾಂತ-ಮಹಾತಪಸ್ವಿಯು ಯಾರನ್ನೂ ಹಿಂಸಿಸದೇ ಕರ್ಮ-ಮನಸ್ಸು-ಮಾತುಗಳಲ್ಲಿ ಸರ್ವ ಜೀವಿಗಳೊಂದಿಗೆ ಸಮನಾಗಿ ನಡೆದುಕೊಂಡಿದ್ದನು. ಅಕ್ರೋಧನನಾದ ಆ ಮಹಾತಪಸ್ವಿಯು ಪ್ರಿಯ-ಅಪ್ರಿಯ ನಿಂದನೆಗಳನ್ನು ಮತ್ತು ಕಾಂಚನ-ಕಲ್ಲುಗಳನ್ನು ಒಂದೇ ಸಮನಾಗಿ ಕಾಣುತ್ತಿದ್ದನು. ದ್ವಿಜರೊಂದಿಗೆ ನಿತ್ಯವೂ ದೇವತೆ-ಅತಿಥಿಗಳನ್ನು ಪೂಜಿಸುತ್ತಿದ್ದನು ಮತ್ತು ಆ ಧರ್ಮಪರಾಯಣನು ನಿತ್ಯವೂ ಬ್ರಹ್ಮಚರ್ಯದಲ್ಲಿ ನಿರತನಾಗಿದ್ದನು.…

Continue reading

ಸಾರಸ್ವತೋಪಾಖ್ಯಾನ

ಸಾರಸ್ವತೋಪಾಖ್ಯಾನ ಹಿಂದೆ ಕೃತಯುಗದಲ್ಲಿ ನೈಮಿಷಾರಣ್ಯದ ತಪಸ್ವಿಗಳು ದ್ವಾದಶವಾರ್ಷಿಕದ ಅತಿ ದೊಡ್ಡ ಸತ್ರದಲ್ಲಿ ತೊಡಗಿರಲು ಅಲ್ಲಿ ಅನೇಕ ಋಷಿಗಳು ಭಾಗವಹಿಸಿದ್ದರು. ಆ ಸತ್ರದಲ್ಲಿ ಯಥಾವಿಧಿಯಾಗಿ ಉಳಿದುಕೊಂಡ ಆ ಮಹಾಭಾಗರು ನೈಮಿಷಾರಣ್ಯದಲ್ಲಿ ಸತ್ರದ ಹನ್ನೆರಡು ವರ್ಷಗಳೂ ಉಳಿದುಕೊಂಡಿದ್ದರು. ಅನೇಕ ಋಷಿಗಳು ತೀರ್ಥಕಾರಣದಿಂದ ಅಲ್ಲಿ ಆಗಮಿಸಿದ್ದರು. ಅನೇಕ ಋಷಿಗಳಿಂದ ಕೂಡಿದ್ದ ಸರಸ್ವತಿಯ ಆ ದಕ್ಷಿಣ ತೀರ್ಥಸಮೂಹಗಳು ನಗರಗಳಂತೆ ತೋರುತ್ತಿದ್ದವು. ತೀರ್ಥಲೋಭರಾದ ಆ ದ್ವಿಜಸತ್ತಮರು ಸರಸ್ವತೀ ತೀರದಲ್ಲಿ ಸಮಂತಪಂಚಕದವರೆಗೆ ವಾಸಮಾಡಿಕೊಂಡಿದ್ದರು. ಹವನಗೈಯುತ್ತಿದ್ದ ಆ ಭಾವಿತಾತ್ಮ ಮುನಿಗಳ…

Continue reading

ಮಂಕಣಕ

ಮಂಕಣಕ ಹಿಂದೆ ಸಿದ್ಧ ಮಂಕಣಕನು ದರ್ಭೆಯ ಅಗ್ರಭಾಗವು ಕೈಗೆ ಚುಚ್ಚಿ ಗಾಯಗೊಂಡಾಗ ಅಲ್ಲಿಂದ ಶಾಕರಸವು ಸುರಿಯಿತು ಎಂದು ಕೇಳಿದ್ದೇವೆ. ಆ ಶಾಕರಸವನ್ನು ನೋಡಿದ ಮಂಕಣಕನು ಹರ್ಷಾವಿಷ್ಟನಾಗಿ ಕುಣಿದಾಡತೊಡಗಿದನು. ಅವನು ಕುಣಿಯುತ್ತಿದ್ದಾಗ ಅವನ ತೇಜಸ್ಸಿನಿಂದ ಮೋಹಗೊಂಡ ಸ್ಥಾವರ-ಜಂಗಮಗಳೆರಡೂ ಕುಣಿಯತೊಡಗಿದವು. ಬ್ರಹ್ಮನೇ ಮೊದಲ್ಗೊಂಡು ಸುರರು, ಶುಷಿಗಳು ಮತ್ತು ತಪೋಧನರು ಆ ಋಷಿಯ ಕುರಿತು ಮಹಾದೇವನಲ್ಲಿ “ದೇವ! ಇವನು ಕುಣಿಯದಂತೆ ಏನಾದರೂ ಮಾಡಬೇಕು!” ಎಂದು ವಿಜ್ಞಾಪಿಸಿಕೊಂಡರು. ಸುರರ ಹಿತವನ್ನು ಬಯಸಿದ ದೇವ ಮಹಾದೇವನು ಅತೀವ…

Continue reading

ಕಪಾಲಮೋಚನ ತೀರ್ಥ ಮಹಾತ್ಮೆ

ಕಪಾಲಮೋಚನ ತೀರ್ಥ ಮಹಾತ್ಮೆ ಹಿಂದೆ ಮಹಾತ್ಮ ರಾಘವನು ದಂಡಕಾರಣ್ಯದಲ್ಲಿ ವಾಸಿಸುತ್ತಿದ್ದಾಗ ಅಲ್ಲಿ ರಾಕ್ಷಸರನ್ನು ಸಂಹರಿಸಿದನು. ಜನಸ್ಥಾನದಲ್ಲಿ ದುರಾತ್ಮ ರಾಕ್ಷಸನ ಶಿರವನ್ನು ಕ್ಷುರದ ಶಿತಧಾರೆಯಿಂದ ಕತ್ತರಿಸಲ್ಪಡಲು ಅದು ಮಹಾವನದಲ್ಲಿ ಬಿದ್ದಿತು. ದೈವಯೋಗದಿಂದ ಅದು ಅಲ್ಲಿ ಸಂಚರಿಸುತ್ತಿದ್ದ ಮಹೋದರನ ಮೊಣಕಾಲನ್ನು ಸೀಳಿ ಅಲ್ಲಿಯೇ ಅಂಟಿಕೊಂಡಿತು. ಅದು ಅವನಿಗೆ ಅಂಟಿಕೊಂಡಿದ್ದುದರಿಂದ ಆ ಬ್ರಾಹ್ಮಣ ಮಹಾಪ್ರಾಜ್ಞನು ತೀರ್ಥ-ದೇವಾಲಯಗಳಿಗೆ ಹೋಗಲು ಅಸಮರ್ಥನಾದನು. ಕೀವು ಹರಿದು ವೇದನೆಯಿಂದ ಆರ್ತನಾಗಿದ್ದ ಆ ಮಹಾಮುನಿಯು ಭೂಮಿಯ ಸರ್ವತೀರ್ಥಗಳಿಗೆ ಹೋದನು. ಆ ಮಹಾತಪಸ್ವಿಯು…

Continue reading

ವಿಶ್ವಾಮಿತ್ರ

ವಿಶ್ವಾಮಿತ್ರ ಭೂಮಿಯ ಮೇಲೆ ಗಾಧಿ ಎಂಬ ಹೆಸರಿನ ಪ್ರಸಿದ್ಧ ಕ್ಷತ್ರಿಯನಿದ್ದನು. ಅವನ ಪುತ್ರನೇ ಪ್ರತಾಪವಾನ್ ವಿಶ್ವಾಮಿತ್ರನಾಗಿದ್ದನು. ಮಹಾತಪಸ್ವಿಯೂ ಮಹಾಯೋಗಿಯೂ ಆಗಿದ್ದ ಆ ಕೌಶಿಕ ರಾಜನು ಮಗ ವಿಶ್ವಾಮಿತ್ರನನ್ನು ಅಭಿಷೇಕಿಸಿದನು. ದೇಹನ್ಯಾಸದ ಮನಸ್ಸು ಮಾಡಿದ್ದ ಅವನಿಗೆ ಪ್ರೀತಿಯಿಂದ ಪ್ರಜೆಗಳು ಹೇಳಿದರು: “ಮಹಾಪ್ರಾಜ್ಞ! ಹೋಗಬೇಡ! ಮಹಾಭಯದಿಂದ ನಮ್ಮನ್ನು ಕಾಪಾಡು!” ಅದಕ್ಕೆ ಪ್ರತಿಯಾಗಿ ಗಾಧಿಯು ಪ್ರಜೆಗಳಿಗೆ ಹೇಳಿದನು: “ನನ್ನ ಮಗನು ವಿಶ್ವದ ರಕ್ಷಕನಾಗುತ್ತಾನೆ!” ಹೀಗೆ ಹೇಳಿ ಗಾಧಿಯು ವಿಶ್ವಾಮಿತ್ರನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ ತ್ರಿದಿವಕ್ಕೆ ಹೊರಟುಹೋದನು.…

Continue reading

ಬಕ ದಾಲ್ಭ್ಯನ ಚರಿತ್ರೆ

ಬಕ ದಾಲ್ಭ್ಯನ ಚರಿತ್ರೆ ಈ ಕಥೆಯನ್ನು ವೈಶಂಪಾಯನನು ಜನಮೇಜಯನಿಗೆ ಶಲ್ಯ ಪರ್ವದ ಸಾರಸ್ವತಪರ್ವದ ಅಧ್ಯಾಯ 40ರಲ್ಲಿ ಹೇಳುತ್ತಾನೆ. ದಾಲ್ಭ್ಯ ಬಕನು ಘೋರರೂಪದ ತಪಸ್ಸಿನಿಂದ ತನ್ನ ದೇಹವನ್ನು ಕೃಶಗೊಳಿಸಿದ್ದನು. ಆದರೆ ಆ ಧರ್ಮಾತ್ಮ ಪ್ರತಾಪವಾನನು ಮಹಾಕ್ರೋಧಿಷ್ಟನಾಗಿದ್ದನು. ಹಿಂದೆ ನೈಮಿಷವಾಸಿಗಳ ಹನ್ನೆರಡು ವರ್ಷಗಳ ಸತ್ರವು ನಡೆಯುತ್ತಿರಲು ವಿಶ್ವಜಿತು ಯಾಗವು ಸಂಪೂರ್ಣಗೊಳ್ಳಲು ಋಷಿಗಳು ಪಾಂಚಾಲರಲ್ಲಿಗೆ ಹೋದರು. ಅಲ್ಲಿಗೆ ಹೋಗಿ ರಾಜನಿಂದ ದಕ್ಷಿಣೆಯನ್ನು ಕೇಳಿ ಆ ಮುನಿಗಳು ಬಲಾನ್ವಿತ, ರೋಗರಹಿತ ಇಪ್ಪತ್ತೊಂದು ಹೋರಿಕರುಗಳನ್ನು ಪಡೆದರು. ಆಗ…

Continue reading

ವಸಿಷ್ಠಾಪವಾಹ ಚರಿತ್ರೆ

ವಸಿಷ್ಠಾಪವಾಹ ಚರಿತ್ರೆ ಈ ಕಥೆಯನ್ನು ವೈಶಂಪಾಯನನು ಜನಮೇಜಯನಿಗೆ ಶಲ್ಯ ಪರ್ವದ ಸಾರಸ್ವತಪರ್ವದ ಅಧ್ಯಾಯ 41ರಲ್ಲಿ ಹೇಳುತ್ತಾನೆ. ತಪಸ್ಸಿನಲ್ಲಿ ಪರಸ್ಪರರ ಸ್ಪರ್ಧೆಯುಂಟಾದುದರಿಂದ ವಿಶ್ವಾಮಿತ್ರ ಮತ್ತು ಋಷಿ ವಸಿಷ್ಠರಲ್ಲಿ ತುಂಬಾ ವೈರವು ಬೆಳೆಯಿತು. ಸರಸ್ವತಿಯ ಪೂರ್ವದಿಕ್ಕಿನ ಸ್ಥಾಣುತೀರ್ಥವು ವಸಿಷ್ಠನ ಮಹಾ ಆಶ್ರಮವಾಗಿತ್ತು. ನದಿಯ ಪಶ್ಚಿಮದಲ್ಲಿ ಧೀಮತ ವಿಶ್ವಾಮಿತ್ರನ ಆಶ್ರಮವಿತ್ತು. ಅಲ್ಲಿಯೇ ಸ್ಥಾಣುವು ಮಹಾತಪಸ್ಸನ್ನು ತಪಿಸಿದ್ದನು. ಅಲ್ಲಿ ಅವನು ಘೋರ ತಪಸ್ಸಿನಲ್ಲಿ ತೊಡಗಿದ್ದನು. ಭಗವಾನ್ ಸ್ಥಾಣುವು ಸರಸ್ವತಿಯನ್ನು ಪೂಜಿಸಿ ಅಲ್ಲಿ ಸ್ಥಾಪಿಸಿದುದರಿಂದ ಆ ತೀರ್ಥವು…

Continue reading

ಕುಮಾರನ ಪ್ರಭಾವ-ಅಭಿಷೇಕ

ಕುಮಾರನ ಪ್ರಭಾವ-ಅಭಿಷೇಕ ಈ ಕಥೆಯನ್ನು ವೈಶಂಪಾಯನನು ಜನಮೇಜಯನಿಗೆ ಶಲ್ಯ ಪರ್ವದ ಸಾರಸ್ವತಪರ್ವದ ಅಧ್ಯಾಯ 43-45ರಲ್ಲಿ ಹೇಳುತ್ತಾನೆ. ಹಿಂದೆ ಮಹೇಶ್ವರನ ವೀರ್ಯವು ಸ್ಖಲನವಾಗಿ ಅಗ್ನಿಯಲ್ಲಿ ಬಿದ್ದಿತು. ಸರ್ವಭಕ್ಷಕನಾಗಿದ್ದರೂ ಭಗವಾನ್ ಅಗ್ನಿಯು ಆ ಅಕ್ಷಯ ತೇಜಸ್ಸನ್ನು ದಹಿಸಲು ಸಮರ್ಥನಾಗಲಿಲ್ಲ. ಅದರಿಂದಾಗಿ ಹವ್ಯವಾಹನನು ತೇಜಸ್ವಿಯೂ ದೀಪ್ತಮಾನನೂ ಆದನು. ಆದರೆ ಅವನಿಗೆ ಆ ತೇಜೋಮಯ ಗರ್ಭವನ್ನು ಧರಿಸಲಾಗಲಿಲ್ಲ. ಪ್ರಭು ಬ್ರಹ್ಮನ ನಿಯೋಗದಂತೆ ಆ ದಿವ್ಯ ಭಾಸ್ಕರತೇಜಸ್ಸುಳ್ಳ ಗರ್ಭವನ್ನು ಗಂಗಾನದಿಗೆ ಹೋಗಿ ಅಲ್ಲಿ ಹಾಕಿಬಿಟ್ಟನು. ಗಂಗೆಯೂ ಕೂಡ…

Continue reading

ಬದರಿಪಾಚನ ತೀರ್ಥ

ಬದರಿಪಾಚನ ತೀರ್ಥ ಈ ಕಥೆಯನ್ನು ವೈಶಂಪಾಯನನು ಜನಮೇಜಯನಿಗೆ ಶಲ್ಯ ಪರ್ವದ ಸಾರಸ್ವತಪರ್ವದ ಅಧ್ಯಾಯ 47ರಲ್ಲಿ ಹೇಳುತ್ತಾನೆ. ವಿಶಾಲಾಕ್ಷೀ ಅಪ್ಸರೆ ಘೃತಾಚಿಯು ಬರುತ್ತಿರುವುದನ್ನು ನೋಡಿದ ಮಹಾತ್ಮ ವಿಪ್ರರ್ಷಿ ಭಾರದ್ವಾಜನ ವೀರ್ಯ ಸ್ಖಲನವಾಯಿತು. ಜಪಿಗಳಲ್ಲಿ ಶ್ರೇಷ್ಠನು ಆ ರೇತಸ್ಸನ್ನು ತನ್ನ ಕರಗಳಲ್ಲಿ ಹಿಡಿದನು. ಆದರೆ ಅದು ಎಲೆಯ ದೊನ್ನೆಯಲ್ಲಿ ಬಿದ್ದಿತು. ಅಲ್ಲಿಯೇ ಓರ್ವ ಶುಭೆಯು ಹುಟ್ಟಿದಳು. ತಪೋಧನನು ಜಾತಕರ್ಮಾದಿ ಎಲ್ಲ ಕರ್ಮಗಳನ್ನೂ ಅವಳಿಗೆ ಮಾಡಿಸಿದನು. ಮಹಾಮುನಿ ಭಾರದ್ವಾಜನು ಅವಳಿಗೆ ಹೆಸರನ್ನೂ ಇಟ್ಟನು. ದೇವರ್ಷಗಣ…

Continue reading