ಪರಶುರಾಮ

ಪರಶುರಾಮ ಪರಶುರಾಮನ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ತೀರ್ಥಯಾತ್ರಾ ಪರ್ವ (ಅಧ್ಯಾಯ ೧೧೫-೧೧೭) ದಲ್ಲಿ ಬರುತ್ತದೆ. ಯುಧಿಷ್ಠಿರನ ತೀರ್ಥಯಾತ್ರಾ ಸಮಯದಲ್ಲಿ ಈ ಕಥೆಯನ್ನು ರಾಜರ್ಷಿ ಅಕೃತವ್ರಣನು ಯುಧಿಷ್ಠಿರನಿಗೆ ಹೇಳಿದನು. ಕನ್ಯಕುಬ್ಜದಲ್ಲಿ ಗಾಧಿ ಎಂದು ಲೋಕದಲ್ಲಿ ವಿಶ್ರುತನಾದ ಮಹಾಬಲಿ ಮಹಾ ರಾಜನಿದ್ದನು. ಅವನು ವನವಾಸಕ್ಕೆ ಹೋದನು. ವನದಲ್ಲಿ ವಾಸಿಸುತ್ತಿರುವಾಗ ಅವನಿಗೆ ಅಪ್ಸರೆಯಂತಿರುವ ಕನ್ಯೆಯು ಜನಿಸಿದಳು. ಭಾರ್ಗವ ಋಚೀಕನು ಅವಳನ್ನು ವರಿಸಿದನು. ಆಗ ರಾಜನು ಆ ಸಂಶಿತವ್ರತ ಬ್ರಾಹ್ಮಣನಿಗೆ ಹೇಳಿದನು:…

Continue reading

ಋಷ್ಯಶೃಂಗ

ಋಷ್ಯಶೃಂಗ ಋಷ್ಯಶೃಂಗನ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ತೀರ್ಥಯಾತ್ರಾ ಪರ್ವ (ಅಧ್ಯಾಯ ೧೧೦-೧೧೩) ದಲ್ಲಿ ಬರುತ್ತದೆ. ಯುಧಿಷ್ಠಿರನ ತೀರ್ಥಯಾತ್ರಾ ಸಮಯದಲ್ಲಿ ಈ ಕಥೆಯನ್ನು ಋಷಿ ಲೋಮಶನು ಯುಧಿಷ್ಠಿರನಿಗೆ ಹೇಳಿದನು. ಬ್ರಹ್ಮರ್ಷಿ, ತಪಸ್ಸಿನಿಂದ ಆತ್ಮವನ್ನು ಅನುಭವಿಸಿದ ಅಮೋಘವೀರ್ಯ, ಸತ್ಯವಂತ, ಪ್ರಜಾಪತಿಯಂತೆ  ಬೆಳಗುವ ವಿಭಾಂಡಕನಲ್ಲಿ ಪ್ರತಾಪಿ, ಮಹಾಹೃದ, ಮಹಾತೇಜಸ್ವಿ, ಸ್ಥವಿರಸಂಹಿತ ಬಾಲಕ ಋಷ್ಯಶೃಂಗನು ಮಗನಾಗಿ ಜನಿಸಿದನು. ಕಾಶ್ಯಪ ವಿಭಾಂಡಕನು ಕೌಶಿಕೀ ನದಿಯನ್ನು ಸೇರಿ ಅಲ್ಲಿ ದೀರ್ಘಕಾಲ ಪರಿಶ್ರಮಿಸಿ ಋಷಿ-ದೇವತೆಗಳಿಂದ ಗೌರವಿಸಲ್ಪಟ್ಟು…

Continue reading

ಭಗೀರಥ

ಭಗೀರಥ ಭಗೀರಥನು ಗಂಗೆಯನ್ನು ಭೂಮಿಗೆ ತಂದು ಬರಿದಾದ ಸಾಗರಗಳನ್ನು ತುಂಬಿಸಿದ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ತೀರ್ಥಯಾತ್ರಾ ಪರ್ವ (ಅಧ್ಯಾಯ ೧೦೪-೧೦೮) ದಲ್ಲಿ ಬರುತ್ತದೆ. ಯುಧಿಷ್ಠಿರನ ತೀರ್ಥಯಾತ್ರಾ ಸಮಯದಲ್ಲಿ ಈ ಕಥೆಯನ್ನು ಋಷಿ ಲೋಮಶನು ಯುಧಿಷ್ಠಿರನಿಗೆ ಹೇಳಿದನು. ಇಕ್ಷ್ವಾಕುಗಳ ಕುಲದಲ್ಲಿ ಸಗರ ಎಂಬ ಹೆಸರಿನ ರೂಪ, ಸಂಪತ್ತು ಮತ್ತು ಬಲಾನ್ವಿತ ರಾಜನು ಜನಿಸಿದನು. ಆ ಪ್ರತಾಪವಂತನಿಗೆ ಪುತ್ರರಿರಲಿಲ್ಲ. ಅವನು ಹೈಹಯರನ್ನು ಹೊರಹೊಟ್ಟು, ತಾಲಜಂಘರನ್ನು ಮತ್ತು ಇತರ ರಾಜರನ್ನು…

Continue reading

ಅಗಸ್ತ್ಯೋಪಾಽಖ್ಯಾನ

ಅಗಸ್ತ್ಯೋಪಾಽಖ್ಯಾನ ಅಗಸ್ತ್ಯನ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ತೀರ್ಥಯಾತ್ರಾ ಪರ್ವ (ಅಧ್ಯಾಯ ೯೪-೧೦೩) ದಲ್ಲಿ ಬರುತ್ತದೆ. ಯುಧಿಷ್ಠಿರನ ತೀರ್ಥಯಾತ್ರಾ ಸಮಯದಲ್ಲಿ ಈ ಕಥೆಯನ್ನು ಋಷಿ ಲೋಮಶನು ಯುಧಿಷ್ಠಿರನಿಗೆ ಹೇಳಿದನು. ಅಗಸ್ತ್ಯನಿಂದ ಇಲ್ವಲನ ಸಂಹಾರ ಹಿಂದೆ ಮಣಿಮತಿ ಪುರದಲ್ಲಿ ಇಲ್ವಲ ಎಂಬ ಹೆಸರಿನ ದೈತ್ಯನಿದ್ದನು. ವಾತಾಪಿಯು ಅವನ ಅನುಜ. ಆ ದಿತಿನಂದನನು ಒಮ್ಮೆ ತಪೋಯುಕ್ತನಾದ ಓರ್ವ ಬ್ರಾಹ್ಮಣನಲ್ಲಿ ಕೇಳಿಕೊಂಡನು: “ಭಗವನ್! ನನಗೆ ಇಂದ್ರನಿಗೆ ಸಮಾನ ಪುತ್ರನೋರ್ವನನ್ನು ಪರಿಪಾಲಿಸು.” ವಾಸವನ…

Continue reading

ಗಾಲವ ಚರಿತೆ

ಗಾಲವ ಚರಿತೆ ವಿಶ್ವಾಮಿತ್ರನ ಶಿಷ್ಯ ಗಾಲವನ ಈ ಕಥೆಯು ವ್ಯಾಸ ಮಹಾಭಾರತದ ಉದ್ಯೋಗಪರ್ವದ ಭಗವದ್ಯಾನ ಪರ್ವ (ಅಧ್ಯಾಯ ೧೦೪-೧೨೧) ದಲ್ಲಿ ಬರುತ್ತದೆ. ಶ್ರೀಕೃಷ್ಣನು ಸಂಧಿಗೆಂದು ಕುರುಸಭೆಗೆ ಹೋದಾಗ ಅಲ್ಲಿ ದೇವರ್ಷಿ ನಾರದನು ಹಠವು ಒಳ್ಳೆಯದಲ್ಲ ಎಂದು ಸಾರುವ ಈ ಕಥೆಯನ್ನು ದುರ್ಯೋಧನನಿಗೆ ಹೇಳಿದನು. ಹಿಂದೆ ತಪಸ್ಸಿನಲ್ಲಿದ್ದ ವಿಶ್ವಾಮಿತ್ರನನ್ನು ಪರೀಕ್ಷಿಸಲೋಸುಗ ಸ್ವಯಂ ಧರ್ಮನು ಭಗವಾನ್ ಋಷಿ ವಸಿಷ್ಠನಾಗಿ ಬಂದನು. ಸಪ್ತರ್ಷಿಗಳಲ್ಲೊಬ್ಬನ ವೇಷವನ್ನು ತಾಳಿ ಹಸಿದು ಊಟಮಾಡಲು ಕೌಶಿಕನ ಆಶ್ರಮಕ್ಕೆ ಬಂದನು. ಆಗ…

Continue reading

ಮಾತಲಿ ವರಾನ್ವೇಷಣೆ

ಮಾತಲಿ ವರಾನ್ವೇಷಣೆ ಮಾತಲಿಯು ತನ್ನ ಮಗಳಿಗೆ ವರನನ್ನು ಹುಡುಕಿದ ಈ ಕಥೆಯು ವ್ಯಾಸ ಮಹಾಭಾರತದ ಉದ್ಯೋಗಪರ್ವದ ಭಗವದ್ಯಾನ ಪರ್ವ (ಅಧ್ಯಾಯ ೯೫-೧೦೩) ದಲ್ಲಿ ಬರುತ್ತದೆ. ಶ್ರೀಕೃಷ್ಣನು ಸಂಧಿಗೆಂದು ಕುರುಸಭೆಗೆ ಹೋದಾಗ ಅಲ್ಲಿ ಋಷಿ ಕಣ್ವನು ವಿಷ್ಣುವಿನ ಘನತೆಯನ್ನು ಸಾರುವ ಈ ಕಥೆಯನ್ನು ದುರ್ಯೋಧನನಿಗೆ ಹೇಳಿದನು. ತ್ರೈಲೋಕ್ಯರಾಜ ಇಂದ್ರನ ಸಾರಥಿಯ ಹೆಸರು ಮಾತಲಿ. ಅವನ ಕುಲದಲ್ಲಿ ರೂಪದಲ್ಲಿ ಲೋಕವಿಶ್ರುತ ಒಬ್ಬಳೇ ಕನ್ಯೆಯಿದ್ದಳು. ಗುಣಕೇಶೀ ಎಂಬ ಹೆಸರಿನಿಂದ ವಿಖ್ಯಾತಳಾಗಿ ಆ ದೇವರೂಪಿಣಿಯು ಕಾಂತಿ-ಸೌಂದರ್ಯಗಳಲ್ಲಿ…

Continue reading

ದಂಭೋಧ್ಭವ

ದಂಭೋಧ್ಭವ ದಂಭೋದ್ಭವನ ಈ ಕಥೆಯು ವ್ಯಾಸ ಮಹಾಭಾರತದ ಉದ್ಯೋಗಪರ್ವದ ಭಗವದ್ಯಾನ ಪರ್ವ (ಅಧ್ಯಾಯ ೯೪) ದಲ್ಲಿ ಬರುತ್ತದೆ. ಶ್ರೀಕೃಷ್ಣನು ಸಂಧಿಗೆಂದು ಕುರುಸಭೆಗೆ ಹೋದಾಗ ಅಲ್ಲಿ ಪರಶುರಾಮನು ದುರ್ಯೋಧನನಿಗೆ ನರ-ನಾರಾಯಣರ ಮಹಾತ್ಮೆಯನ್ನು ಸಾರುವ ಈ ಕಥೆಯನ್ನು ಹೇಳಿದನು. ಹಿಂದೆ ದಂಭೋದ್ಭವನೆಂಬ ಹೆಸರಿನ ಸಾರ್ವಭೌಮನಿದ್ದನು. ಅವನು ಅಖಿಲ ಪೃಥ್ವಿಯಲ್ಲಿಯ ಎಲ್ಲವನ್ನೂ ಭೋಗಿಸುತ್ತಿದ್ದನು. ಆ ಮಹಾರಥಿ ವೀರ್ಯವಂತನು ನಿತ್ಯವೂ ರಾತ್ರಿಕಳೆದು ಪ್ರಾತಃಕಾಲದಲ್ಲೆದ್ದು ಬ್ರಾಹ್ಮಣರನ್ನೂ ಕ್ಷತ್ರಿಯರನ್ನೂ ಕೇಳುತ್ತಿದ್ದನು: “ಶೂದ್ರನಾಗಲೀ, ವೈಶ್ಯನಾಗಲೀ, ಕ್ಷತ್ರಿಯನಾಗಲೀ ಅಥವಾ ಬ್ರಾಹ್ಮಣನಾಗಲೀ ಯುದ್ಧದಲ್ಲಿ…

Continue reading

ಇಂದ್ರವಿಜಯೋಽಪಖ್ಯಾನ

ಇಂದ್ರವಿಜಯೋಽಪಖ್ಯಾನ ಇಂದ್ರವಿಜಯದ ಈ ಕಥೆಯು ವ್ಯಾಸ ಮಹಾಭಾರತದ ಉದ್ಯೋಗಪರ್ವದ ಸೇನೋಽದ್ಯೋಗಪರ್ವ (ಅಧ್ಯಾಯ ೯-೧೮) ದಲ್ಲಿ ಬರುತ್ತದೆ. ಈ ಕಥೆಯನ್ನು ಮೋಸಗೊಂಡು ದುರ್ಯೋಧನನ ಪಕ್ಷವನ್ನು ಸೇರಿದ ಶಲ್ಯನು ಯುಧಿಷ್ಠಿರನಿಗೆ ಹೇಳಿದನು. ದೇವಶ್ರೇಷ್ಠ ಮಹಾತಪಸ್ವಿ ತ್ವಷ್ಟನು ಪ್ರಜಾಪತಿಯಾಗಿದ್ದಾಗ ಅವನು ಇಂದ್ರದ್ರೋಹದಿಂದ ತ್ರಿಶಿರನೆನ್ನುವ ಪುತ್ರನನ್ನು ಸೃಷ್ಟಿಸಿದನು. ಆ ವಿಶ್ವರೂಪೀ ಮಹಾದ್ಯುತಿಯು ಇಂದ್ರನ ಸ್ಥಾನವನ್ನು ಬಯಸಿದನು. ಸೂರ್ಯ, ಚಂದ್ರ ಮತ್ತು ಅಗ್ನಿಗಳಂತಿದ್ದ ಆ ಮೂರು ಘೋರ ಮುಖಗಳವನು ಒಂದರಿಂದ ವೇದಗಳನ್ನು ಪಠಿಸುತ್ತಿದ್ದನು, ಒಂದರಿಂದ ಸುರೆಯನ್ನು ಕುಡಿಯುತ್ತಿದ್ದನು…

Continue reading

ತ್ರಿಪುರವಧೋಪಾಖ್ಯಾನ

ತ್ರಿಪುರವಧೋಪಾಽಖ್ಯಾನ ತ್ರಿಪುರವಧೆಯ ಈ ಕಥೆಯು ವ್ಯಾಸ ಮಹಾಭಾರತದ ಕರ್ಣಪರ್ವ (ಅಧ್ಯಾಯ ೨೪) ದಲ್ಲಿ ಬರುತ್ತದೆ. ಬ್ರಹ್ಮನು ಶಿವನ ಸಾರಥಿಯಾದಂತೆ ಶಲ್ಯನೂ ಕರ್ಣನ ಸಾರಥಿಯಾಗಬೇಕೆಂದು ಕೇಳಿಕೊಳ್ಳುವಾಗ ಈ ಕಥೆಯನ್ನು ದುರ್ಯೋಧನನು ಶಲ್ಯನಿಗೆ ಹೇಳಿದನು. ದೇವತೆಗಳ ಅಸುರರ ಮಹಾ ಸಮಾಗಮವಾಗಿತ್ತು. ಪ್ರಥಮವಾಗಿ ತಾರಕಾಮಯ ಸಂಗ್ರಾಮವು ನಡೆಯಿತು. ದೇವತೆಗಳಿಂದ ದೈತ್ಯರು ಸೋತರೆಂದು ನಾವು ಕೇಳಿದ್ದೇವೆ. ದೈತ್ಯರು ಸೋಲಲು ತಾರಕನ ಮೂವರು ಮಕ್ಕಳು – ತಾರಾಕ್ಷ, ಕಮಲಾಕ್ಷ ಮತ್ತು ವಿದ್ಯುನ್ಮಾಲೀ- ಇವರು ಉಗ್ರವಾದ ತಪಸ್ಸನ್ನು ಕೈಗೊಂಡು…

Continue reading

ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ

ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ ಸತ್ಯವಾನ-ಸಾವಿತ್ರಿಯರ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ದ್ರೌಪದೀಹರಣ ಪರ್ವ (ಅಧ್ಯಾಯ ೨೭೭-೨೮೩) ದಲ್ಲಿ ಬರುತ್ತದೆ. ಈ ಕಥೆಯನ್ನು ಋಷಿ ಮಾರ್ಕಂಡೇಯನು ಯುಧಿಷ್ಠಿರನಿಗೆ ಹೇಳಿದನು. ಜಯದ್ರಥನನ್ನು ಸೋಲಿಸಿ, ದ್ರೌಪದಿಯನ್ನು ಹಿಂದೆ ಪಡೆದ ಯುಧಿಷ್ಠಿರನು ದ್ರೌಪದೀಹರಣದ ಪ್ರಕರಣದಿಂದ ಅತ್ಯಂತ ದುಃಖಿತನಾಗಿ ಮಾರ್ಕಂಡೇಯನನ್ನು ಪ್ರಶ್ನಿಸಿದನು: “ಮಹಾಮುನೇ! ದ್ರುಪದಾತ್ಮಜೆಯ ಕುರಿತು ನಾನು ಎಷ್ಟು ಶೋಕಿಸುತ್ತಿದ್ದೇನೋ ಅಷ್ಟು ನನ್ನ ಕುರಿತಾಗಲೀ, ನನ್ನ ಈ ಭ್ರಾತೃಗಳ ಕುರಿತಾಗಲೀ ಅಥವಾ ಕಳೆದು ಹೋದ…

Continue reading