ಸುದರ್ಶನೋಪಾಖ್ಯಾನ

ಸುದರ್ಶನೋಪಾಖ್ಯಾನ “ಗೃಹಸ್ಥಧರ್ಮವನ್ನು ಆಶ್ರಯಿಸಿ ಮೃತ್ಯುವನ್ನು ಗೆದ್ದವರ್ಯಾರು?” ಎಂಬ ಯುಧಿಷ್ಠಿರನ ಪ್ರಶ್ನೆಗೆ ಉತ್ತರವಾಗಿ ಭೀಷ್ಮನು ಉದಾಹರಿಸಿದ ಅಗ್ನಿಪುತ್ರ ಸುದರ್ಶನನ ಈ ಉಪಾಖ್ಯಾನವು ಅನುಶಾಸನಪರ್ವದ ದಾನಧರ್ಮಪರ್ವದ ಅಧ್ಯಾಯ 2ರಲ್ಲಿ ಬರುತ್ತದೆ. ಪ್ರಜಾಪತಿ ಮನುವಿಗೆ ಇಕ್ಷ್ವಾಕುವು ಸುತನಾದನು. ಆ ನೃಪತಿಗೆ ಸೂರ್ಯವರ್ಚಸ ನೂರು ಪುತ್ರರು ಜನಿಸಿದರು. ಭಾರತ! ಅವರಲ್ಲಿ ಹತ್ತನೆಯ ಪುತ್ರನು ದಶಾಶ್ವ ಎಂಬ ಹೆಸರಿನವನು. ಆ ಧರ್ಮಾತ್ಮಾ ಸತ್ಯವಿಕ್ರಮನು ಮಾಹಿಷ್ಮತಿಗೆ ರಾಜನಾದನು. ದಶಾಶ್ವನ ಮಗನು ಪರಮಧಾರ್ಮಿಕ ರಾಜನಾಗಿದ್ದನು. ನಿತ್ಯವೂ ಅವನ ಮನಸ್ಸು ಸತ್ಯ,…

Continue reading

ನೃಗೋಪಾಽಖ್ಯಾನ

ನೃಗೋಪಾಽಖ್ಯಾನ ನೃಗ ಮಹಾರಾಜನ ಈ ಕಥೆಯು ವ್ಯಾಸ ಮಹಾಭಾರತದ ಅನುಶಾಸನ ಪರ್ವ (ಅಧ್ಯಾಯ ೬೯) ದಲ್ಲಿ ಬರುತ್ತದೆ. ಈ ಕಥೆಯನ್ನು ಭೀಷ್ಮನು ಯುಧಿಷ್ಠಿರನಿಗೆ ಹೇಳುತ್ತಾನೆ. ಈ ಕಥೆಯು ಬ್ರಾಹ್ಮಣನ ಧನವನ್ನು ಅಪಹರಿಸುವುದರಿಂದ ಉಂಟಾಗುವ ಹಾನಿಯ ವಿಷಯದ ದೃಷ್ಟಾಂತ ರೂಪಕ. ಹಿಂದೆ ದ್ವಾರಾವತಿಯ ನಿರ್ಮಾಣಕಾರ್ಯವು ನಡೆಯುತ್ತಿದ್ದಾಗ ಹುಲ್ಲು-ಬಳ್ಳಿಗಳಿಂದ ಮುಚ್ಚಿದ್ದ ಒಂದು ಮಹಾ ಬಾವಿಯು ಕಾಣಿಸಿತೆಂದು ಕೇಳಿದ್ದೇವೆ. ಜಲಾರ್ಥಿಗಳು ಮಹಾ ಶ್ರಮದಿಂದ ಆ ಬಾವಿಯನ್ನು ಮುಚ್ಚಿದ್ದ ಕಸವನ್ನು ತೆಗೆಯತೊಡಗಿದರು. ಆಗ ಅವರು ಅದರೊಳಗಿದ್ದ…

Continue reading

ಮುದ್ಗಲ

ಮುದ್ಗಲ ಕುರುಕ್ಷೇತ್ರದಲ್ಲಿ ಅಕ್ಕಿಕುಟ್ಟುವ ವೃತ್ತಿಯಲ್ಲಿ ನಿರತನಾದ ಮುದ್ಗಲನೆನ್ನುವ ಧರ್ಮಾತ್ಮ, ಸಂಶಿತವ್ರತನಿದ್ದನು. ಪಾರಿವಾಳದಂತೆ ಜೀವಿಸುತ್ತಿದ್ದ ಅವನು ಅತಿಥಿಗಳನ್ನು ಸತ್ಕರಿಸುತ್ತಿದ್ದನು. ಆ ಮಹಾತಪಸ್ವಿಯು ಇಷ್ಟೀಕೃತ ಎಂಬ ಹೆಸರಿನ ಸತ್ರವನ್ನು ಕೈಗೊಂಡನು. ಅವನು ಪತ್ನಿ ಪುತ್ರರೊಂದಿಗೆ ಒಂದು ಪಕ್ಷ ತಿನ್ನುತ್ತಿದ್ದನು. ಮತ್ತು ಇನ್ನೊಂದು ಪಕ್ಷದಲ್ಲಿ ಪಾರಿವಾಳದಂತೆ ಒಂದು ಅಳತೆ ಭತ್ತವನ್ನು ಸುಲಿದು ತಿನ್ನುತ್ತಿದ್ದನು. ದರ್ಶ ಮತ್ತು ಪೌರ್ಣಮಾಸಗಳನ್ನು ಆಚರಿಸುವ ಆ ವಿಗತಮತ್ಸರನು ದೇವತೆಗಳು ಮತ್ತು ಅತಿಥಿಗಳು ತಿಂದು ಉಳಿದುದರಿಂದ ದೇಹಧರ್ಮವನ್ನು ಪಾಲಿಸುತ್ತಿದ್ದನು. ಸಾಕ್ಷಾತ್ ತ್ರಿಭುವನೇಶ್ವರ…

Continue reading

ಸೌಭವಧೋಽಪಾಖ್ಯಾನ

ಸೌಭವಧೋಽಪಾಖ್ಯಾನ ಸೌಭವಧೆಯ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ಕೈರಾತ ಪರ್ವ (ಅಧ್ಯಾಯ ೧೫-೨೩) ದಲ್ಲಿ ಬರುತ್ತದೆ. ದ್ಯೂತದ ಸಮಯದಲ್ಲಿ ಕೃಷ್ಣನು ದ್ವಾರಕೆಯಲ್ಲಿ ಏಕೆ ಇರಲಿಲ್ಲ ಎಂದು ಯುಧಿಷ್ಠಿರನು ಕಾಮ್ಯಕ ವನದಲ್ಲಿ ಕೇಳಿದಾಗ ಕೃಷ್ಣನು ಈ ಕಥೆಯನ್ನು ಹೇಳಿದನು. ಮಹಾಬಾಹು ನೃಪ ಶ್ರೌತಶ್ರವ ಶಿಶುಪಾಲನು ಕೃಷ್ಣನಿಂದ ಹತನಾದನು ಎಂದು ಕೇಳಿ ಶಾಲ್ವನು ಉಪಾಯದಿಂದ ದ್ವಾರವತೀ ಪುರಕ್ಕೆ ಧಾಳಿಯಿಟ್ಟನು. ಆ ಸುದುಷ್ಟಾತ್ಮ ಶಾಲ್ವನು ಎಲ್ಲ ಕಡೆಯಿಂದಲೂ ಮತ್ತು ಆಕಾಶದಿಂದಲೂ ತನ್ನ…

Continue reading

ವಿದುಲೋಪಾಽಖ್ಯಾನ

ವಿದುಲೋಪಾಽಖ್ಯಾನ ವಿದುಲೆ ಮತ್ತು ಅವಳ ಮಗನ ನಡುವೆ ನಡೆದ ಸಂವಾದದ ಈ ಕಥೆಯು ವ್ಯಾಸ ಮಹಾಭಾರತದ ಉದ್ಯೋಗಪರ್ವದ ಭಗವದ್ಯಾನ ಪರ್ವ (ಅಧ್ಯಾಯ ೧೩೧-೧೩೪) ದಲ್ಲಿ ಬರುತ್ತದೆ. ಸಂಧಿ ಮುರಿದು ಯುದ್ಧವೇ ನಿಶ್ಚಯವಾದಾಗ ಕುಂತಿಯು ಈ ಕಥೆಯನ್ನು ತನ್ನ ಮಕ್ಕಳಿಗೆ ಶ್ರೀಕೃಷ್ಣನ ಮೂಲಕ ಹೇಳಿ ಕಳುಹಿಸಿದಳು. ಯಶಸ್ವಿನೀ, ಕೋಪಿಷ್ಟ, ಸತ್ಕುಲದಲ್ಲಿ ಜನಿಸಿದ್ದ, ಮಾನಿಷ್ಠೆ, ಕ್ಷತ್ರಧರ್ಮನಿರತೆ, ಧನ್ಯೆ, ದೀರ್ಘದರ್ಶಿನಿ, ರಾಜಸಂಸದಿಗಳಲ್ಲಿ ವಿಶ್ರುತಳಾದ, ಉಪದೇಶಿತಳಾಗಿದ್ದ, ವಿಖ್ಯಾತಳಾಗಿದ್ದ ವಿದುರಾ ಎಂಬ ಹೆಸರಿನ ಸತಿಯು ಸಿಂಧುರಾಜನಿಂದ ಸೋತು…

Continue reading

ಪರಶುರಾಮನು ಅಸ್ತ್ರಗಳನ್ನು ಪಡೆದುದು

ಪರಶುರಾಮನು ಅಸ್ತ್ರಗಳನ್ನು ಪಡೆದುದು ಪರಶುರಾಮನು ಅಸ್ತ್ರಗಳನ್ನು ಪಡೆದ ಈ ಕಥೆಯು ವ್ಯಾಸ ಮಹಾಭಾರತದ ಕರ್ಣಪರ್ವ (ಅಧ್ಯಾಯ ೨೪) ದಲ್ಲಿ ಬರುತ್ತದೆ. ಪರಶುರಾಮನ ಶಿಷ್ಯನಾದ ಕರ್ಣನ ಮಹತ್ತನ್ನು ಹೇಳುತ್ತಾ ಈ ಕಥೆಯನ್ನು ದುರ್ಯೋಧನನು ಶಲ್ಯನಿಗೆ ಹೇಳಿದನು. ಭಾರ್ಗವರ ಕುಲದಲ್ಲಿ ಮಹಾತಪಸ್ವಿ ಜಮದಗ್ನಿಯು ಜನಿಸಿದನು. ಅವನ ತೇಜೋಗುಣಾನ್ವಿತ ಮಗನು ರಾಮನೆಂದು ವಿಖ್ಯಾತನಾದನು. ಅಸ್ತ್ರಗಳಿಗೋಸ್ಕರವಾಗಿ ಅವನು ಪ್ರಸನ್ನಾತ್ಮನಾಗಿ, ನಿಯತಾತ್ಮನಾಗಿ ಮತ್ತು ಇಂದ್ರಿಯಗಳನ್ನು ಸಂಯಮದಲ್ಲಿರಿಸಿಕೊಂಡು ತೀವ್ರ ತಪಸ್ಸನ್ನಾಚರಿಸಿ ಅವನು ಭವನನ್ನು ತೃಪ್ತಿಗೊಳಿಸಿದನು. ಅವನ ಭಕ್ತಿ ಮತ್ತು…

Continue reading

ಸಾರಂಗಗಳು

ಸಾರಂಗಗಳು ಸಾರಂಗಗಳ ಈ ಕಥೆಯು ವ್ಯಾಸ ಮಹಾಭಾರತದ ಆದಿ ಪರ್ವದ ಖಾಂಡವದಾಹ ಪರ್ವ (ಅಧ್ಯಾಯ ೨೨೦-೨೨೫) ದಲ್ಲಿ ಬರುತ್ತದೆ. ಖಾಂಡವ ದಹನದಲ್ಲಿ ಸುಟ್ಟುಹೋಗದೇ ಉಳಿದ ನಾಲ್ಕು ಸಾರಂಗಗಳ ಕುರಿತು ಜನಮೇಜಯನು ಕೇಳಿದಾಗ ಈ ಕಥೆಯನ್ನು ಮುನಿ ವೈಶಂಪಾಯನನು ಹೇಳಿದನು. ಮಂದಪಾಲನೆಂದು ಪ್ರಸಿದ್ಧ ಧರ್ಮಜ್ಞರಲ್ಲಿ ಮುಖ್ಯತಮ ಸಂಶಿತವ್ರತ ತಪಸ್ವಿ ಮಹರ್ಷಿಯಿದ್ದನು. ಊರ್ಧ್ವರೇತಸ ಋಷಿಗಳ ಮಾರ್ಗವನ್ನು ಹಿಡಿದಿದ್ದ ಆ ವಿಜಿತೇಂದ್ರಿಯ ತಪಸ್ವಿಯು ಧರ್ಮರತನಾಗಿ ಸ್ವಾಧ್ಯಾಯದಲ್ಲಿ ನಿರತನಾಗಿದ್ದನು. ತಪಸ್ಸಿನ ಪರಾಕಾಷ್ಟೆಯನ್ನು ತಲುಪಿದ ಅವನು ದೇಹವನ್ನು…

Continue reading

ಜಾಮದಗ್ನೇಯೋಽಪಖ್ಯಾನ

ಜಾಮದಗ್ನೇಯೋಽಪಖ್ಯಾನ ಜಹ್ನುವೆನ್ನುವ ರಾಜನಿದ್ದನು. ಅವನ ಮಗನೇ ಅಜ. ಬಲ್ಲವನು ಅಜನ ಮಗನಾಗಿದ್ದನು. ಮಹೀಪತಿ ಬಲ್ಲವನಿಗೆ ಕುಶಿಕ ಎಂಬ ಹೆಸರಿನ ಧರ್ಮಜ್ಞ ಮಗನಿದ್ದನು. ಭುವಿಯಲ್ಲಿ ಸಹಸ್ರಾಕ್ಷನಂತಿದ್ದ ಆ ಕುಶಿಕನು ಅಪರಾಜಿತನಾದ ತ್ರಿಲೋಕಗಳಿಗೂ ಈಶ್ವರನಾಗುವ ಮಗನನ್ನು ಪಡೆಯಲೋಸುಗ ಉಗ್ರವಾದ ತಪಸ್ಸನ್ನು ಆಚರಿಸಿದನು. ಅವನ ಆ ಉಗ್ರತಪಸ್ಸನ್ನು ನೋಡಿ ಸಹಸ್ರಾಕ್ಷ ಪುರಂದರನು, ಕುಶಿಕನು ಬಯಸಿದ ಪುತ್ರನನ್ನು ಪಡೆಯಲು ಸಮರ್ಥನೆಂದು ತಿಳಿದು, ತಾನೇ ಅವನ ಮಗನಾಗಿ ಹುಟ್ಟಿದನು. ಲೋಕೇಶ್ವರ ಈಶ್ವರ ಪಾಕಶಾಸನನು ಗಾದಿ ಎಂಬ ಹೆಸರಿನಲ್ಲಿ…

Continue reading

ಷೋಡಶ-ರಾಜಕೀಯೋಽಪಖ್ಯಾನ

ಷೋಡಶ-ರಾಜಕೀಯೋಽಪಖ್ಯಾನ ನಾರದ-ಪರ್ವತರು ಋಷಿಗಳಾದ ನಾರದ-ಪರ್ವತರು ಲೋಕಪೂಜಿತರು. ಹಿಂದೊಮ್ಮೆ ಆ ಸೋದರಮಾವ-ಸೋದರಳಿಯಂದಿರು ಮನುಷ್ಯಲೋಕದಲ್ಲಿ ಸಂಚರಿಸಬೇಕೆಂದು ಬಯಸಿ ದೇವಲೋಕದಿಂದ ಇಲ್ಲಿಗಿಳಿದರು. ತಾಪಸಿಗಳಾಗಿದ್ದ ಸೋದರಮಾವ ನಾರದ ಮತ್ತು ಸೋದರಳಿಯ ಪರ್ವತರು ಪವಿತ್ರವಾದ ಹವಿಸ್ಸನ್ನೂ, ದೇವಭೋಜನಕ್ಕೆ ಯೋಗ್ಯವಾದ ಆಹಾರಪದಾರ್ಥಗಳನ್ನೂ ತಿನ್ನುತ್ತಾ, ಮನುಷ್ಯರ ಭೋಗಗಳನ್ನು ಭೋಗಿಸುತ್ತಾ ಸ್ವೇಚ್ಛೆಯಿಂದ ಭೂಮಿಯಲ್ಲಿ ಸಂಚರಿಸುತ್ತಿದ್ದರು. ಪರಸ್ಪರ ಪ್ರೀತಿಪಾತ್ರರಾಗಿದ್ದ ಅವರು ತಮ್ಮ-ತಮ್ಮಲ್ಲಿಯೇ ಒಂದು ಒಪ್ಪಂದವನ್ನು ಮಾಡಿಕೊಂಡರು: “ಯಾರೊಬ್ಬರಲ್ಲಿ ಯಾವುದೇ ಶುಭ ಅಥವಾ ಅಶುಭ ಸಂಕಲ್ಪವು ಮೂಡಿಕೊಂಡರೂ ಅದನ್ನು ಅನ್ಯೋನ್ಯರಲ್ಲಿ ಹೇಳಿಕೊಳ್ಳಬೇಕು. ಅದನ್ನು ಹೇಳಿಕೊಳ್ಳದೇ…

Continue reading

ಶಂಖ-ಲಿಖಿತೋಽಪಖ್ಯಾನ

ಶಂಖ-ಲಿಖಿತೋಽಪಖ್ಯಾನ ಸಂಯತವ್ರತರಾಗಿದ್ದ ಶಂಖ ಮತ್ತು ಲಿಖಿತ ಎನ್ನುವ ಸಹೋದರರಿದ್ದರು. ಅವರಿಗೆ ಬಾಹುದಾನದಿಯ ತೀರದಲ್ಲಿ ನಿತ್ಯಪುಷ್ಪ-ಫಲಗಳ ವೃಕ್ಷಗಳಿಂದ ತುಂಬಿದ್ದ ರಮಣೀಯವಾದ ಪ್ರತ್ಯೇಕ ಆಶ್ರಮಗಳಿದ್ದವು. ಹೀಗಿರಲು ಒಮ್ಮೆ ಲಿಖಿತನು ಶಂಖನ ಆಶ್ರಮಕ್ಕೆ ಬಂದನು. ಅಕಸ್ಮಾತ್ತಾಗಿ ಅದೇ ಸಮದಲ್ಲಿ ಶಂಖನು ಆಶ್ರಮದ ಹೊರಗೆ ಹೋಗಿದ್ದನು. ಅಣ್ಣ ಶಂಖನ ಆಶ್ರಮಕ್ಕೆ ಬಂದು ಲಿಖಿತನು ಅಲ್ಲಿ ಚೆನ್ನಾಗಿ ಹಣ್ಣಾಗಿದ್ದ ಫಲಗಳನ್ನು ವೃಕ್ಷದಿಂದ ಕೆಳಕ್ಕೆ ಬೀಳಿಸಿದನು. ಅವುಗಳನ್ನು ಒಟ್ಟುಹಾಕಿ ಒಂದೆಡೆಯಲ್ಲಿ ಕುಳಿದು ಆ ದ್ವಿಜನು ನಿಶ್ಚಿಂತೆಯಿಂದ ತಿನ್ನುತ್ತಿದ್ದನು. ಅವುಗಳನ್ನು…

Continue reading