ಉದ್ಯೋಗ ಪರ್ವ: ಯಾನಸಂಧಿ ಪರ್ವ
೫೬
ಪಾಂಡವರ ಸೇನೆಯಲ್ಲಿ ಯಾರ್ಯಾರನ್ನು ನೀನು ನೋಡಿದೆ ಎಂದು ಧೃತರಾಷ್ಟ್ರನು ಕೇಳಲು ಸಂಜಯನು ಪಾಂಡವರ ಸೇನೆಯಲ್ಲಿರುವ ಪ್ರಮುಖರ ಕುರಿತು ಹೇಳಿ (೧-೧೧) ಅವರಿಲ್ಲಿರುವ ಯಾರು ಕುರುಸೇನೆಯ ಯಾರನ್ನು ಗುರಿಯನ್ನಾಗಿಟ್ಟುಕೊಂಡಿದ್ದಾರೆಂದು (೧೨-೨೫) ಹೇಳಿದುದು. ಅದನ್ನು ಕೇಳಿ ಧೃತರಾಷ್ಟ್ರನು ಯುದ್ಧಕ್ಕೆ ಹೆದರಿ ತನ್ನ ಮಾತುಗಳನ್ನು ಕೇಳದೇ ಮಕ್ಕಳು ಯುದ್ಧಮಾಡಬಯಸುತ್ತಾರೆಂದು ವಿಷಾದಿಸುವುದು (೨೬-೩೫). ದುರ್ಯೋಧನನು ಧೃತರಾಷ್ಟ್ರನಿಗೆ ಭರವಸೆಯನ್ನಿತ್ತರೂ (೩೬-೪೨), ಧೃತರಾಷ್ಟ್ರನು ಪುನಃ ಸಂಜಯನನ್ನು ಪಾಂಡವರ ಕುರಿತು ಪ್ರಶ್ನಿಸುವುದು (೪೩-೪೬). ಆಗ ಸಂಜಯನು ಧೃಷ್ಟದ್ಯುಮ್ನನ ಸಂದೇಶವನ್ನು ಸಭೆಯಲ್ಲಿ ಹೇಳುವುದು (೪೭-೬೦).
05056001 ಧೃತರಾಷ್ಟ್ರ ಉವಾಚ|
05056001a ಕಾಂಸ್ತತ್ರ ಸಂಜಯಾಪಶ್ಯಃ ಪ್ರತ್ಯರ್ಥೇನ ಸಮಾಗತಾನ್|
05056001c ಯೇ ಯೋತ್ಸ್ಯಂತೇ ಪಾಂಡವಾರ್ಥೇ ಪುತ್ರಸ್ಯ ಮಮ ವಾಹಿನೀಂ||
ಧೃತರಾಷ್ಟ್ರನು ಹೇಳಿದನು: “ಸಂಜಯ! ಅಲ್ಲಿ. ಬೇರೆ ಬೇರೆ ಕಾರಣಗಳಿಂದ ಪಾಂಡವರಿಗಾಗಿ ನನ್ನ ಸೇನೆಯೊಡನೆ ಯುದ್ಧಮಾಡಲು ಸೇರಿರುವ ಯಾರ್ಯಾರನ್ನು ನೀನು ನೋಡಿದೆ?”
05056002 ಸಂಜಯ ಉವಾಚ|
05056002a ಮುಖ್ಯಮಂಧಕವೃಷ್ಣೀನಾಮಪಶ್ಯಂ ಕೃಷ್ಣಮಾಗತಂ|
05056002c ಚೇಕಿತಾನಂ ಚ ತತ್ರೈವ ಯುಯುಧಾನಂ ಚ ಸಾತ್ಯಕಿಂ||
ಸಂಜಯನು ಹೇಳಿದನು: “ಅಂಧಕ-ವೃಷ್ಣಿಯರ ಮುಖ್ಯ ಕೃಷ್ಣನು ಬಂದಿರುವುದನ್ನು ನೋಡಿದೆ. ಚೇಕಿತಾನ ಮತ್ತು ಯುಯುಧಾನ ಸಾತ್ಯಕಿಯೂ ಅಲ್ಲಿದ್ದರು.
05056003a ಪೃಥಗಕ್ಷೌಹಿಣೀಭ್ಯಾಂ ತೌ ಪಾಂಡವಾನಭಿಸಂಶ್ರಿತೌ|
05056003c ಮಹಾರಥೌ ಸಮಾಖ್ಯಾತಾವುಭೌ ಪುರುಷಮಾನಿನೌ||
ಪುರುಷಮಾನಿಗಳಾದ ಅವರಿಬ್ಬರು ಮಹಾರಥಿಗಳೂ ಒಂದೊಂದು ಅಕ್ಷೌಹಿಣೀಗಳೊಂದಿಗೆ ಪಾಂಡವನನ್ನು ಸೇರಿರುವರು.
05056004a ಅಕ್ಷೌಹಿಣ್ಯಾಥ ಪಾಂಚಾಲ್ಯೋ ದಶಭಿಸ್ತನಯೈರ್ವೃತಃ|
05056004c ಸತ್ಯಜಿತ್ಪ್ರಮುಖೈರ್ವೀರೈರ್ಧೃಷ್ಟದ್ಯುಮ್ನಪುರೋಗಮೈಃ||
05056005a ದ್ರುಪದೋ ವರ್ಧಯನ್ಮಾನಂ ಶಿಖಂಡಿಪರಿಪಾಲಿತಃ|
05056005c ಉಪಾಯಾತ್ಸರ್ವಸೈನ್ಯಾನಾಂ ಪ್ರತಿಚ್ಚಾದ್ಯ ತದಾ ವಪುಃ||
ಪಾಂಚಾಲ್ಯ ದ್ರುಪದನು ಅವರ ಮಾನವನ್ನು ಹೆಚ್ಚಿಸಲು ತನ್ನ ಹತ್ತು ಮಕ್ಕಳಿಂದ ಆವೃತವಾಗಿರುವ, ಸತ್ಯಜಿತನೇ ಮೊದಲಾದ ಪ್ರಮುಖ ವೀರರಿಂದ ಕೂಡಿದ, ವೀರ ಧೃಷ್ಟದ್ಯುಮ್ನನ ನಾಯಕತ್ವದಲ್ಲಿರುವ, ಶಿಖಂಡಿಯಿಂದ ರಕ್ಷಿತವಾಗಿರುವ, ಅಕ್ಷೌಹಿಣಿಯನ್ನು ತಂದಿದ್ದಾನೆ. ಅವನ ಸೇನೆಯೆಲ್ಲವಕ್ಕೂ ಉಡುಪಿನ ವ್ಯವಸ್ಥೆಯಿದೆ.
05056006a ವಿರಾಟಃ ಸಹ ಪುತ್ರಾಭ್ಯಾಂ ಶಂಖೇನೈವೋತ್ತರೇಣ ಚ|
05056006c ಸೂರ್ಯದತ್ತಾದಿಭಿರ್ವೀರೈರ್ಮದಿರಾಶ್ವಪುರೋಗಮೈಃ||
05056007a ಸಹಿತಃ ಪೃಥಿವೀಪಾಲೋ ಭ್ರಾತೃಭಿಸ್ತನಯೈಸ್ತಥಾ|
05056007c ಅಕ್ಷೌಹಿಣ್ಯೈವ ಸೈನ್ಯಸ್ಯ ವೃತಃ ಪಾರ್ಥಂ ಸಮಾಶ್ರಿತಃ||
ಪೃಥಿವೀಪಾಲ ವಿರಾಟನು ಶಂಖ ಮತ್ತು ಉತ್ತರ ಈ ಇಬ್ಬರು ಪುತ್ರರೊಂದಿಗೆ, ಸೂರ್ಯದತ್ತನೇ ಮೊದಲಾದ ವೀರರೊಂದಿಗೆ, ಮದಿರಾಶ್ವನ ನಾಯಕತ್ವದಲ್ಲಿ, ಸಹೋದರರು ಮಕ್ಕಳೊಂದಿಗೆ ಅಕ್ಷೌಹಿಣೀ ಸೇನೆಯೊಂದಿಗೆ ಪಾರ್ಥನನ್ನು ಸೇರಿದ್ದಾನೆ.
05056008a ಜಾರಾಸಂಧಿರ್ಮಾಗಧಶ್ಚ ಧೃಷ್ಟಕೇತುಶ್ಚ ಚೇದಿರಾಟ್|
05056008c ಪೃಥಕ್ ಪೃಥಗನುಪ್ರಾಪ್ತೌ ಪೃಥಗಕ್ಷೌಹಿಣೀವೃತೌ||
ಮಾಗಧಿ ಜರಾಸಂಧನ ಮಗ ಮತ್ತು ಚೇದಿರಾಜ ಧೃಷ್ಟಕೇತು ಇಬ್ಬರೂ ಒಂದೊಂದು ಅಕ್ಷೌಹಿಣೀ ಸೇನೆಯೊಂದಿಗೆ ಬಂದಿದ್ದಾರೆ.
05056009a ಕೇಕಯಾ ಭ್ರಾತರಃ ಪಂಚ ಸರ್ವೇ ಲೋಹಿತಕಧ್ವಜಾಃ|
05056009c ಅಕ್ಷೌಹಿಣೀಪರಿವೃತಾಃ ಪಾಂಡವಾನಭಿಸಂಶ್ರಿತಾಃ||
ಐವರು ಕೇಕಯ ಸಹೋದರರೆಲ್ಲರೂ ಅವರ ಕೆಂಪುಧ್ವಜಗಳನ್ನು ಹಾರಿಸಿ, ಒಂದು ಅಕ್ಷೌಹಿಣಿಯಿಂದ ಪರಿವೃತರಾಗಿ ಪಾಂಡವರನ್ನು ಸೇರಿದ್ದಾರೆ.
05056010a ಏತಾನೇತಾವತಸ್ತತ್ರ ಯಾನಪಶ್ಯಂ ಸಮಾಗತಾನ್|
05056010c ಯೇ ಪಾಂಡವಾರ್ಥೇ ಯೋತ್ಸ್ಯಂತಿ ಧಾರ್ತರಾಷ್ಟ್ರಸ್ಯ ವಾಹಿನೀಂ||
ಇವರೆಲ್ಲ ಅಲ್ಲಿ ಪಾಂಡವರಿಗಾಗಿ ಧಾರ್ತರಾಷ್ಟ್ರನ ಸೇನೆಯನ್ನು ಎದುರಿಸಲು ಬಂದು ಸೇರಿರುವುದನ್ನು ನಾನು ನೋಡಿದ್ದೇನೆ.
05056011a ಯೋ ವೇದ ಮಾನುಷಂ ವ್ಯೂಹಂ ದೈವಂ ಗಾಂಧರ್ವಮಾಸುರಂ|
05056011c ಸ ತಸ್ಯ ಸೇನಾಪ್ರಮುಖೇ ಧೃಷ್ಟದ್ಯುಮ್ನೋ ಮಹಾಮನಾಃ||
ಮಾನುಷ, ದೇವ, ಗಂಧರ್ವ, ಅಸುರ ವ್ಯೂಹಗಳನ್ನು ತಿಳಿದಿರುವ ಮಹಾಮನಸ್ವಿ ಧೃಷ್ಟದ್ಯುಮ್ನನು ಅವನ ಆ ಸೇನೆಯ ಪ್ರಮುಖನು.
05056012a ಭೀಷ್ಮಃ ಶಾಂತನವೋ ರಾಜನ್ಭಾಗಃ ಕ್ಲುಪ್ತಃ ಶಿಖಂಡಿನಃ|
05056012c ತಂ ವಿರಾಟೋಽನು ಸಮ್ಯಾತಾ ಸಹ ಮತ್ಸ್ಯೈಃ ಪ್ರಹಾರಿಭಿಃ||
ರಾಜನ್! ಭೀಷ್ಮ ಶಾಂತನವನನ್ನು ಶಿಖಂಡಿಯ ಪಾಲಿಗೆ ಬಿಟ್ಟುಕೊಟ್ಟಿದ್ದಾರೆ. ಸೈನಿಕ ಅಮಾತ್ಯರೊಂದಿಗೆ ಮತ್ಸ್ಯ ವಿರಾಟನು ಅವನಿಗೆ ಸಹಾಯ ಮಾಡುತ್ತಾನೆ.
05056013a ಜ್ಯೇಷ್ಠಸ್ಯ ಪಾಂಡುಪುತ್ರಸ್ಯ ಭಾಗೋ ಮದ್ರಾಧಿಪೋ ಬಲೀ|
05056013c ತೌ ತು ತತ್ರಾಬ್ರುವನ್ಕೇ ಚಿದ್ವಿಷಮೌ ನೋ ಮತಾವಿತಿ||
ಬಲಶಾಲೀ ಮದ್ರಾಧಿಪನು ಹಿರಿಯ ಪಾಂಡುಪುತ್ರನ ಪಾಲಿಗೆ ಹೋಗಿದ್ದಾನೆ. ಅಲ್ಲಿದ್ದ ಕೆಲವರು ಅವರಿಬ್ಬರೂ ವಿಷಮರು ಎಂದೂ ಅಭಿಪ್ರಾಯ ಪಟ್ಟಿದ್ದಾರೆ.
05056014a ದುರ್ಯೋಧನಃ ಸಹಸುತಃ ಸಾರ್ಧಂ ಭ್ರಾತೃಶತೇನ ಚ|
05056014c ಪ್ರಾಚ್ಯಾಶ್ಚ ದಾಕ್ಷಿಣಾತ್ಯಾಶ್ಚ ಭೀಮಸೇನಸ್ಯ ಭಾಗತಃ||
ಮಗನೊಂದಿಗೆ ದುರ್ಯೋಧನ ಮತ್ತು ಜೊತೆಯಲ್ಲಿ ಅವನ ನೂರು ತಮ್ಮಂದಿರು, ಹಾಗೆಯೇ ಪೂರ್ವ ಮತ್ತು ದಕ್ಷಿಣದ ರಾಜರು ಭೀಮಸೇನನ ಪಾಲಿಗೆ ಹೋಗಿದ್ದಾರೆ.
05056015a ಅರ್ಜುನಸ್ಯ ತು ಭಾಗೇನ ಕರ್ಣೋ ವೈಕರ್ತನೋ ಮತಃ|
05056015c ಅಶ್ವತ್ಥಾಮಾ ವಿಕರ್ಣಶ್ಚ ಸೈಂಧವಶ್ಚ ಜಯದ್ರಥಃ||
ಅರ್ಜುನನ ಪಾಲಿಗೆ ಕರ್ಣ ವೈಕರ್ತನ, ಅಶ್ವತ್ಥಾಮ, ವಿಕರ್ಣ ಮತ್ತು ಸೈಂಧವ ಜಯದ್ರಥರು ಬರುತ್ತಾರೆ.
05056016a ಅಶಕ್ಯಾಶ್ಚೈವ ಯೇ ಕೇ ಚಿತ್ಪೃಥಿವ್ಯಾಂ ಶೂರಮಾನಿನಃ|
05056016c ಸರ್ವಾಂಸ್ತಾನರ್ಜುನಃ ಪಾರ್ಥಃ ಕಲ್ಪಯಾಮಾಸ ಭಾಗತಃ||
ಭೂಮಿಯಲ್ಲಿಯೇ ಶೂರರೆಂದು ತಿಳಿದಿರುವ ಇತರ ಗೆಲ್ಲಲಸಾಧ್ಯರೆಲ್ಲರೂ ಪಾರ್ಥ ಅರ್ಜುನನ ಪಾಲಿಗೆಂದೂ ಯೋಚಿಸಲಾಗಿದೆ.
05056017a ಮಹೇಷ್ವಾಸಾ ರಾಜಪುತ್ರಾ ಭ್ರಾತರಃ ಪಂಚ ಕೇಕಯಾಃ|
05056017c ಕೇಕಯಾನೇವ ಭಾಗೇನ ಕೃತ್ವಾ ಯೋತ್ಸ್ಯಂತಿ ಸಂಯುಗೇ||
ಐವರು ಮಹೇಷ್ವಾಸ ರಾಜಪುತ್ರ ಕೇಕಯ ಸಹೋದರರು ಯುದ್ಧದಲ್ಲಿ ಕೇಕಯರನ್ನು ತಮ್ಮ ಪಾಲಿಗಿರಿಸಿಕೊಂಡು ಯುದ್ಧಮಾಡುವರು.
05056018a ತೇಷಾಮೇವ ಕೃತೋ ಭಾಗೋ ಮಾಲವಾಃ ಶಾಲ್ವಕೇಕಯಾಃ|
05056018c ತ್ರಿಗರ್ತಾನಾಂ ಚ ದ್ವೌ ಮುಖ್ಯೌ ಯೌ ತೌ ಸಂಶಪ್ತಕಾವಿತಿ||
ಅವರು ತಮ್ಮ ಪಾಲಿಗೆ ಮಾಲವರು, ಶಾಲ್ವರು, ಕೇಕಯರು, ಮತ್ತು ತ್ರಿಗರ್ಥರ ಇಬ್ಬರು ಪ್ರಮುಖರಾದ ಸಂಶಪ್ತಕರನ್ನು ಮಾಡಿಕೊಂಡಿದ್ದಾರೆ.
05056019a ದುರ್ಯೋಧನಸುತಾಃ ಸರ್ವೇ ತಥಾ ದುಃಶಾಸನಸ್ಯ ಚ|
05056019c ಸೌಭದ್ರೇಣ ಕೃತೋ ಭಾಗೋ ರಾಜಾ ಚೈವ ಬೃಹದ್ಬಲಃ||
ದುರ್ಯೋಧನ ಮತ್ತು ದುಃಶಾಸನನ ಮಕ್ಕಳು ಹಾಗೂ ರಾಜಾ ಬೃಹದ್ಬಲನನ್ನು ಸೌಭದ್ರಿಯು ತನ್ನ ಪಾಲಿಗೆ ಮಾಡಿಕೊಂಡಿದ್ದಾನೆ.
05056020a ದ್ರೌಪದೇಯಾ ಮಹೇಷ್ವಾಸಾಃ ಸುವರ್ಣವಿಕೃತಧ್ವಜಾಃ|
05056020c ಧೃಷ್ಟದ್ಯುಮ್ನಮುಖಾ ದ್ರೋಣಮಭಿಯಾಸ್ಯಂತಿ ಭಾರತ||
ಭಾರತ! ಸುವರ್ಣದಿಂದ ಮಾಡಲ್ಪಟ್ಟ ಧ್ವಜಗಳನ್ನು ಹೊಂದಿದ ಮಹೇಷ್ವಾಸ ದ್ರೌಪದೇಯರು ಧೃಷ್ಟದ್ಯುಮ್ನನ ನೇತೃತ್ವದಲ್ಲಿ ದ್ರೋಣನನ್ನು ಎದುರಿಸುತ್ತಾರೆ.
05056021a ಚೇಕಿತಾನಃ ಸೋಮದತ್ತಂ ದ್ವೈರಥೇ ಯೋದ್ಧುಮಿಚ್ಚತಿ|
05056021c ಭೋಜಂ ತು ಕೃತವರ್ಮಾಣಂ ಯುಯುಧಾನೋ ಯುಯುತ್ಸತಿ||
ಚೇಕಿತಾನನು ಸೋಮದತ್ತನೊಡನೆ ದ್ವಂದ್ವರಥ ಯುದ್ಧಮಾಡಲು ಬಯಸುತ್ತಾನೆ. ಯುಯುಧಾನನು ಭೋಜ ಕೃತವರ್ಮನೊಡನೆ ಯುದ್ಧ ಮಾಡುತ್ತಾನೆ.
05056022a ಸಹದೇವಸ್ತು ಮಾದ್ರೇಯಃ ಶೂರಃ ಸಂಕ್ರಂದನೋ ಯುಧಿ|
05056022c ಸ್ವಮಂಶಂ ಕಲ್ಪಯಾಮಾಸ ಶ್ಯಾಲಂ ತೇ ಸುಬಲಾತ್ಮಜಂ||
ಯುದ್ಧದಲ್ಲಿ ಆಕ್ರಂದನಗೈಯುವ ಶೂರ ಮಾದ್ರೇಯ ಸಹದೇವನು ನಿನ್ನ ಬಾವ ಸುಬಲಾತ್ಮಜನು ತನಗೆಂದು ಯೋಚಿಸಿದ್ದಾನೆ.
05056023a ಉಲೂಕಂ ಚಾಪಿ ಕೈತವ್ಯಂ ಯೇ ಚ ಸಾರಸ್ವತಾ ಗಣಾಃ|
05056023c ನಕುಲಃ ಕಲ್ಪಯಾಮಾಸ ಭಾಗಂ ಮಾದ್ರವತೀಸುತಃ||
ಉಲೂಕ ಕೈತವ್ಯ ಮತ್ತು ಸಾರಸ್ವತ ಗಣಗಳು ಮಾದ್ರವತೀಸುತ ನಕುಲನ ಪಾಲಿಗೆಂದು ಯೋಚಿಸಿದ್ದಾರೆ.
05056024a ಯೇ ಚಾನ್ಯೇ ಪಾರ್ಥಿವಾ ರಾಜನ್ಪ್ರತ್ಯುದ್ಯಾಸ್ಯಂತಿ ಸಂಯುಗೇ|
05056024c ಸಮಾಹ್ವಾನೇನ ತಾಂಶ್ಚಾಪಿ ಪಾಂಡುಪುತ್ರಾ ಅಕಲ್ಪಯನ್||
ರಾಜನ್! ಇತರ ಪಾರ್ಥಿವರನ್ನು ಪಾಂಡುಪುತ್ರರು ಯುದ್ಧದಲ್ಲಿ ಯಾರು ಯಾರನ್ನು ಎದುರಿಸುವರೋ ಅದರಂತೆ ಪಾಲುಹಂಚುತ್ತಾರೆ.
05056025a ಏವಮೇಷಾಮನೀಕಾನಿ ಪ್ರವಿಭಕ್ತಾನಿ ಭಾಗಶಃ|
05056025c ಯತ್ತೇ ಕಾರ್ಯಂ ಸಪುತ್ರಸ್ಯ ಕ್ರಿಯತಾಂ ತದಕಾಲಿಕಂ||
ಈ ರೀತಿಯಲ್ಲಿ ಸೇನೆಗಳು ಭಾಗ ಭಾಗಗಳಾಗಿ ಹಂಚಲ್ಪಟ್ಟಿವೆ. ಈಗ ನೀನು ಮತ್ತು ನಿನ್ನ ಮಗನು ಕಾರ್ಯವೆಸಗುವುದರಲ್ಲಿ ವಿಳಂಬ ಮಾಡಬಾರದು.”
05056026 ಧೃತರಾಷ್ಟ್ರ ಉವಾಚ|
05056026a ನ ಸಂತಿ ಸರ್ವೇ ಪುತ್ರಾ ಮೇ ಮೂಢಾ ದುರ್ದ್ಯೂತದೇವಿನಃ|
05056026c ಯೇಷಾಂ ಯುದ್ಧಂ ಬಲವತಾ ಭೀಮೇನ ರಣಮೂರ್ಧನಿ||
ಧೃತರಾಷ್ಟ್ರನು ಹೇಳಿದನು: “ಕೆಟ್ಟ ದ್ಯೂತವನ್ನಾಡಿದ ಜೂಜುಗಾರ ಮೂಢ ನನ್ನ ಮಕ್ಕಳು ಜೋರಾಗಿ ನಡೆಯುವ ರಣದಲ್ಲಿ ಬಲವಂತ ಭೀಮನೊಡನೆ ಯುದ್ಧಮಾಡಿ ಇಲ್ಲವಾಗುತ್ತಾರೆ.
05056027a ರಾಜಾನಃ ಪಾರ್ಥಿವಾಃ ಸರ್ವೇ ಪ್ರೋಕ್ಷಿತಾಃ ಕಾಲಧರ್ಮಣಾ|
05056027c ಗಾಂಡೀವಾಗ್ನಿಂ ಪ್ರವೇಕ್ಷ್ಯಂತಿ ಪತಂಗಾ ಇವ ಪಾವಕಂ||
ಕಾಲಧರ್ಮದಿಂದ ಪ್ರೋಕ್ಷಿತರಾದ ಪಾರ್ಥಿವ ರಾಜರೆಲ್ಲರೂ ಬೆಂಕಿಗೆ ಬೀಳುವ ಪತಂಗಗಳಂತೆ ಗಾಂಡೀವಾಗ್ನಿಯನ್ನು ಪ್ರವೇಶಿಸುತ್ತಾರೆ.
05056028a ವಿದ್ರುತಾಂ ವಾಹಿನೀಂ ಮನ್ಯೇ ಕೃತವೈರೈರ್ಮಹಾತ್ಮಭಿಃ|
05056028c ತಾಂ ರಣೇ ಕೇಽನುಯಾಸ್ಯಂತಿ ಪ್ರಭಗ್ನಾಂ ಪಾಂಡವೈರ್ಯುಧಿ||
ಆ ಮಹಾತ್ಮರ ವೈರಸಾಧನೆಯಿಂದ ನನ್ನ ಸೇನೆಯು ನಾಶವಾದುದನ್ನು ಈಗಲೇ ಕಾಣುತ್ತಿದ್ದೇನೆ. ರಣದಲ್ಲಿ ಪಾಂಡವರೊಂದಿಗೆ ಯುದ್ಧಮಾಡಿ ಪುಡಿಯಾಗಿರುವ ಸೇನೆಯನ್ನು ಯಾರುತಾನೇ ಅನುಸರಿಸುತ್ತಾರೆ?
05056029a ಸರ್ವೇ ಹ್ಯತಿರಥಾಃ ಶೂರಾಃ ಕೀರ್ತಿಮಂತಃ ಪ್ರತಾಪಿನಃ|
05056029c ಸೂರ್ಯಪಾವಕಯೋಸ್ತುಲ್ಯಾಸ್ತೇಜಸಾ ಸಮಿತಿಂಜಯಾಃ||
05056030a ಯೇಷಾಂ ಯುಧಿಷ್ಠಿರೋ ನೇತಾ ಗೋಪ್ತಾ ಚ ಮಧುಸೂದನಃ|
05056030c ಯೋಧೌ ಚ ಪಾಂಡವೌ ವೀರೌ ಸವ್ಯಸಾಚಿವೃಕೋದರೌ||
05056031a ನಕುಲಃ ಸಹದೇವಶ್ಚ ಧೃಷ್ಟದ್ಯುಮ್ನಶ್ಚ ಪಾರ್ಷತಃ|
05056031c ಸಾತ್ಯಕಿರ್ದ್ರುಪದಶ್ಚೈವ ಧೃಷ್ಟದ್ಯುಮ್ನಸ್ಯ ಚಾತ್ಮಜಃ||
05056032a ಉತ್ತಮೌಜಾಶ್ಚ ಪಾಂಚಾಲ್ಯೋ ಯುಧಾಮನ್ಯುಶ್ಚ ದುರ್ಜಯಃ|
05056032c ಶಿಖಂಡೀ ಕ್ಷತ್ರದೇವಶ್ಚ ತಥಾ ವೈರಾಟಿರುತ್ತರಃ||
05056033a ಕಾಶಯಶ್ಚೇದಯಶ್ಚೈವ ಮತ್ಸ್ಯಾಃ ಸರ್ವೇ ಚ ಸೃಂಜಯಾಃ|
05056033c ವಿರಾಟಪುತ್ರೋ ಬಭ್ರೂಶ್ಚ ಪಾಂಚಾಲಾಶ್ಚ ಪ್ರಭದ್ರಕಾಃ||
ಯುಧಿಷ್ಠಿರನ ನೇತೃತ್ವದಲ್ಲಿರುವ ಮತ್ತು ಮಧುಸೂದನನ ರಕ್ಷಣೆಯಲ್ಲಿರುವ ಇವರೆಲ್ಲರೂ - ಇಬ್ಬರು ಪಾಂಡವ ವೀರ ಯೋಧರಾದ ಸವ್ಯಸಾಚಿ-ವೃಕೋದರರು. ನಕುಲ-ಸಹದೇವರು, ಪಾರ್ಷತ ಧೃಷ್ಟದ್ಯುಮ್ನ, ಸಾತ್ಯಕಿ, ದ್ರುಪದ, ಧೃಷ್ಟದ್ಯುಮ್ನನ ಮಗ, ಉತ್ತಮೌಜ ಪಾಂಚಾಲ್ಯ, ಯುಧಾಮನ್ಯು ದುರ್ಜಯ, ಶಿಖಂಡಿ, ಕ್ಷತ್ರದೇವ, ವೈರಾಟೀ ಉತ್ತರ, ಕಾಶಿರಾಜ, ಚೇದಿರಾಜ, ಮತ್ಸ್ಯರು, ಸರ್ವ ಸೃಂಜಯರು, ವಿರಾಟಪುತ್ರ ಬಭ್ರು, ಪಾಂಚಾಲ ಪ್ರಭದ್ರಕ - ಎಲ್ಲರೂ ಅತಿರಥರು, ಶೂರರು, ಕೀರ್ತಿಮಂತರು, ಪ್ರತಾಪಿಗಳು, ತೇಜಸ್ಸಿನಲ್ಲಿ ಸೂರ್ಯ-ಪಾವಕರ ಸಮಾನರು ಮತ್ತು ಯುದ್ಧಗಳಲ್ಲಿ ಜಯಗಳಿಸಿದವರು.
05056034a ಯೇಷಾಮಿಂದ್ರೋಽಪ್ಯಕಾಮಾನಾಂ ನ ಹರೇತ್ಪೃಥಿವೀಮಿಮಾಂ|
05056034c ವೀರಾಣಾಂ ರಣಧೀರಾಣಾಂ ಯೇ ಭಿಂದ್ಯುಃ ಪರ್ವತಾನಪಿ||
ಇವರು ಬಯಸದಿದ್ದರೆ ಇಂದ್ರನೂ ಕೂಡ ಇವರಿಂದ ಈ ಭೂಮಿಯನ್ನು ಕಸಿದುಕೊಳ್ಳಲಾರ. ಈ ವೀರರು, ರಣಧೀರರು ಪರ್ವತವನ್ನೂ ಪುಡಿಮಾಡಿಯಾರು!
05056035a ತಾನ್ಸರ್ವಾನ್ಗುಣಸಂಪನ್ನಾನಮನುಷ್ಯಪ್ರತಾಪಿನಃ|
05056035c ಕ್ರೋಶತೋ ಮಮ ದುಷ್ಪುತ್ರೋ ಯೋದ್ಧುಮಿಚ್ಚತಿ ಸಂಜಯ||
ಆ ಎಲ್ಲ ಗುಣಸಂಪನ್ನರನ್ನೂ, ಅಮನುಷ್ಯರನ್ನೂ, ಪ್ರತಾಪಿಗಳನ್ನೂ, ನಾನು ಕೂಗಿ ಅಳುತ್ತಿದ್ದರೂ, ನನ್ನ ದುಷ್ಪುತ್ರರು ಯುದ್ಧಮಾಡಬಯಸುತ್ತಾರೆ ಸಂಜಯ!”
05056036 ದುರ್ಯೋಧನ ಉವಾಚ|
05056036a ಉಭೌ ಸ್ವ ಏಕಜಾತೀಯೌ ತಥೋಭೌ ಭೂಮಿಗೋಚರೌ|
05056036c ಅಥ ಕಸ್ಮಾತ್ಪಾಂಡವಾನಾಮೇಕತೋ ಮನ್ಯಸೇ ಜಯಂ||
ದುರ್ಯೋಧನನು ಹೇಳಿದನು: “ನಾವಿಬ್ಬರೂ ಒಂದೇ ಜಾತಿಯವರು. ಹಾಗೆಯೇ ಇಬ್ಬರೂ ಭೂಮಿಯ ಮೇಲೇ ನಡೆಯುವವರು. ಹಾಗಿರುವಾಗ ಪಾಂಡವರಿಗೆ ಮಾತ್ರ ಜಯವೆಂದು ನೀನು ಹೇಗೆ ಹೇಳುತ್ತೀಯೆ?
05056037a ಪಿತಾಮಹಂ ಚ ದ್ರೋಣಂ ಚ ಕೃಪಂ ಕರ್ಣಂ ಚ ದುರ್ಜಯಂ|
05056037c ಜಯದ್ರಥಂ ಸೋಮದತ್ತಮಶ್ವತ್ಥಾಮಾನಮೇವ ಚ||
05056038a ಸುಚೇತಸೋ ಮಹೇಷ್ವಾಸಾನಿಂದ್ರೋಽಪಿ ಸಹಿತೋಽಮರೈಃ|
05056038c ಅಶಕ್ತಃ ಸಮರೇ ಜೇತುಂ ಕಿಂ ಪುನಸ್ತಾತ ಪಾಂಡವಾಃ||
ಪಿತಾಮಹ, ದ್ರೋಣ, ಕೃಪ, ದುರ್ಜಯ ಕರ್ಣ, ಜಯದ್ರಥ, ಸೋಮದತ್ತ, ಅಶ್ವತ್ಥಾಮ ಇವರೂ ಕೂಡ ಸುಚೇತಸರು, ಮಹೇಷ್ವಾಸರು, ಮತ್ತು ಸಮರದಲ್ಲಿ ಅವರನ್ನು ದೇವತೆಗಳ ಸಹಿತ ಇಂದ್ರನೂ ಗೆಲ್ಲಲು ಅಶಕ್ತನಾಗಿರುವಾಗ ಇನ್ನು ಪಾಂಡವರು ಯಾವ ಲೆಖ್ಕಕ್ಕೆ?
05056039a ಸರ್ವಾ ಚ ಪೃಥಿವೀ ಸೃಷ್ಟಾ ಮದರ್ಥೇ ತಾತ ಪಾಂಡವಾನ್|
05056039c ಆರ್ಯಾನ್ಧೃತಿಮತಃ ಶೂರಾನಗ್ನಿಕಲ್ಪಾನ್ಪ್ರಬಾಧಿತುಂ||
ಅಪ್ಪಾ! ಈ ಭೂಮಿಯೆಲ್ಲವೂ ನನಗಾಗಿಯೇ ಸೃಷ್ಟಿಯಾಗಿದೆ - ಆರ್ಯರಾದ, ಧೃತಿಮತರಾದ, ಅಗ್ನಿಯಂತೆ ಶೂರರಾದ ಪಾಂಡವರನ್ನು ಕಾಡಿಸಲು.
05056040a ನ ಮಾಮಕಾನ್ಪಾಂಡವಾಸ್ತೇ ಸಮರ್ಥಾಃ ಪ್ರತಿವೀಕ್ಷಿತುಂ|
05056040c ಪರಾಕ್ರಾಂತೋ ಹ್ಯಹಂ ಪಾಂಡೂನ್ಸಪುತ್ರಾನ್ಯೋದ್ಧುಮಾಹವೇ||
ನನ್ನವರನ್ನು ನಿನ್ನ ಪಾಂಡವರು ತಿರುಗಿ ನೋಡಲೂ ಅಸಮರ್ಥರು. ಪಾರಾಕ್ರಾಂತರಾದ ಇವರು ಪಾಂಡವರನ್ನು ಅವರ ಮಕ್ಕಳೊಂದಿಗೆ ಯುದ್ಧದಲ್ಲಿ ಹೋರಾಡುತ್ತಾರೆ.
05056041a ಮತ್ಪ್ರಿಯಂ ಪಾರ್ಥಿವಾಃ ಸರ್ವೇ ಯೇ ಚಿಕೀರ್ಷಂತಿ ಭಾರತ|
05056041c ತೇ ತಾನಾವಾರಯಿಷ್ಯಂತಿ ಐಣೇಯಾನಿವ ತಂತುನಾ||
ಭಾರತ! ನನ್ನ ಈ ಪ್ರಿಯ ಪಾರ್ಥಿವರೆಲ್ಲರೂ ಬಲೆಯನ್ನು ಬೀಸಿ ಜಿಂಕೆಗಳನ್ನು ತಡೆಯುವಂತೆ ಅವರನ್ನು ತಡೆಯಲು ಬಯಸುತ್ತಾರೆ.
05056042a ಮಹತಾ ರಥವಂಶೇನ ಶರಜಾಲೈಶ್ಚ ಮಾಮಕೈಃ|
05056042c ಅಭಿದ್ರುತಾ ಭವಿಷ್ಯಂತಿ ಪಾಂಚಾಲಾಃ ಪಾಂಡವೈಃ ಸಹ||
ನನ್ನವರ ಮಹಾ ರಥಸಮೂಹಗಳಿಂದ ಮತ್ತು ಶರಜಾಲಗಳಿಂದ ಪಾಂಚಾಲರೊಂದಿಗೆ ಪಾಂಡವರು ಇಲ್ಲವಾಗುತ್ತಾರೆ.”
05056043 ಧೃತರಾಷ್ಟ್ರ ಉವಾಚ|
05056043a ಉನ್ಮತ್ತ ಇವ ಮೇ ಪುತ್ರೋ ವಿಲಪತ್ಯೇಷ ಸಂಜಯ|
05056043c ನ ಹಿ ಶಕ್ತೋ ಯುಧಾ ಜೇತುಂ ಧರ್ಮರಾಜಂ ಯುಧಿಷ್ಠಿರಂ||
ಧೃತರಾಷ್ಟ್ರನು ಹೇಳಿದನು: “ಸಂಜಯ! ಹುಚ್ಚುಹಿಡಿದವನಂತೆ ನನ್ನ ಮಗನು ವಿಲಪಿಸುತ್ತಿದ್ದಾನೆ. ಧರ್ಮರಾಜ ಯುಧಿಷ್ಠಿರನನ್ನು ಯುದ್ಧದಲ್ಲಿ ಗೆಲ್ಲುವುದಕ್ಕೆ ಇವನು ಶಕ್ತನಿಲ್ಲ.
05056044a ಜಾನಾತಿ ಹಿ ಸದಾ ಭೀಷ್ಮಃ ಪಾಂಡವಾನಾಂ ಯಶಸ್ವಿನಾಂ|
05056044c ಬಲವತ್ತಾಂ ಸಪುತ್ರಾಣಾಂ ಧರ್ಮಜ್ಞಾನಾಂ ಮಹಾತ್ಮನಾಂ||
ಸುಪುತ್ರರಾದ, ಬಲವತ್ತರಾಗಿರುವ, ಧರ್ಮಜ್ಞರಾದ, ಮಹಾತ್ಮ, ಯಶಸ್ವಿ ಪಾಂಡವರ ಕುರಿತು ಭೀಷ್ಮನಿಗೆ ಸದಾ ತಿಳಿದಿದೆ.
05056045a ಯತೋ ನಾರೋಚಯಮಹಂ ವಿಗ್ರಹಂ ತೈರ್ಮಹಾತ್ಮಭಿಃ|
05056045c ಕಿಂ ತು ಸಂಜಯ ಮೇ ಬ್ರೂಹಿ ಪುನಸ್ತೇಷಾಂ ವಿಚೇಷ್ಟಿತಂ||
ಅವನು ಆ ಮಹಾತ್ಮರೊಡನೆ ಯುದ್ಧಮಾಡಲು ಇಷ್ಟಪಡುವುದಿಲ್ಲ. ಸಂಜಯ! ನನಗೆ ಇನ್ನೂ ಪುನಃ ಅವರು ಏನುಮಾಡುತ್ತಿದ್ದಾರೆ ಎನ್ನುವುದನ್ನು ಹೇಳು.
05056046a ಕಸ್ತಾಂಸ್ತರಸ್ವಿನೋ ಭೂಯಃ ಸಂದೀಪಯತಿ ಪಾಂಡವಾನ್|
05056046c ಅರ್ಚಿಷ್ಮತೋ ಮಹೇಷ್ವಾಸಾನ್ ಹವಿಷಾ ಪಾವಕಾನಿವ||
ಯಾವ ತರಸ್ವಿಯು ಮಹೇಷ್ವಾಸ ಪಾಂಡವರನ್ನು ಪುನಃ ಪುನಃ, ಯಾಜ್ಞಿಕರು ತುಪ್ಪದ ಆಹುತಿಯನ್ನು ಅಗ್ನಿಯಲ್ಲಿ ಹಾಗಿ ಉರಿಸುವಂತೆ ಉರಿಸುತ್ತಿದ್ದಾನೆ?”
05056047 ಸಂಜಯ ಉವಾಚ|
05056047a ಧೃಷ್ಟದ್ಯುಮ್ನಃ ಸದೈವೈತಾನ್ಸಂದೀಪಯತಿ ಭಾರತ|
05056047c ಯುಧ್ಯಧ್ವಮಿತಿ ಮಾ ಭೈಷ್ಟ ಯುದ್ಧಾದ್ಭರತಸತ್ತಮಾಃ||
ಸಂಜಯನು ಹೇಳಿದನು: “ಭಾರತ! “ಯುದ್ಧಮಾಡಿ! ಯುದ್ಧಕ್ಕೆ ಹೆದರಬೇಡಿ!” ಎಂದು ಧೃಷ್ಟದ್ಯುಮ್ನನು ಸದಾ ಆ ಭರತಸತ್ತಮರನ್ನು ಉರಿಸುತ್ತಿದ್ದಾನೆ.
05056048a ಯೇ ಕೇ ಚಿತ್ಪಾರ್ಥಿವಾಸ್ತತ್ರ ಧಾರ್ತರಾಷ್ಟ್ರೇಣ ಸಂವೃತಾಃ|
05056048c ಯುದ್ಧೇ ಸಮಾಗಮಿಷ್ಯಂತಿ ತುಮುಲೇ ಕವಚಹ್ರದೇ||
“ಧಾರ್ತರಾಷ್ಟ್ರನನ್ನು ಸುತ್ತುವರೆದಿರುವ ಆ ಕೆಲವು ಪಾರ್ಥಿವರು ಯುದ್ಧದ ಹೋರಾಟದಲ್ಲಿ ಆಯುಧಗಳ ಹೊಡೆತವನ್ನು ಎದುರಿಸುವವರಿದ್ದಾರೆ.
05056049a ತಾನ್ಸರ್ವಾನಾಹವೇ ಕ್ರುದ್ಧಾನ್ಸಾನುಬಂಧಾನ್ಸಮಾಗತಾನ್|
05056049c ಅಹಮೇಕಃ ಸಮಾದಾಸ್ಯೇ ತಿಮಿರ್ಮತ್ಸ್ಯಾನಿವೌದಕಾನ್||
ತಿಮಿಂಗಿಲವು ನೀರಿನಲ್ಲಿರುವ ಮೀನುಗಳನ್ನು ಹೇಗೋ ಹಾಗೆ ನಾನೊಬ್ಬನೇ ಕೃದ್ಧರಾಗಿ ಬಂಧುಗಳೊಂದಿಗೆ ಸೇರಿರುವ ಎಲ್ಲರನ್ನೂ ಯುದ್ಧದಲ್ಲಿ ನಾಶಗೊಳಿಸುತ್ತೇನೆ.
05056050a ಭೀಷ್ಮಂ ದ್ರೋಣಂ ಕೃಪಂ ಕರ್ಣಂ ದ್ರೌಣಿಂ ಶಲ್ಯಂ ಸುಯೋಧನಂ|
05056050c ಏತಾಂಶ್ಚಾಪಿ ನಿರೋತ್ಸ್ಯಾಮಿ ವೇಲೇವ ಮಕರಾಲಯಂ||
ಭೀಷ್ಮ, ದ್ರೋಣ, ಕೃಪ, ಕರ್ಣ, ದ್ರೌಣಿ, ಶಲ್ಯ, ಸುಯೋಧನ ಇವರನ್ನೂ ಕೂಡ ಸಮುದ್ರದ ದಡವು ಅಲೆಗಳನ್ನು ತಡೆಯುವಂತೆ ತಡೆಯುತ್ತೇನೆ.”
05056051a ತಥಾ ಬ್ರುವಾಣಂ ಧರ್ಮಾತ್ಮಾ ಪ್ರಾಹ ರಾಜಾ ಯುಧಿಷ್ಠಿರಃ|
05056051c ತವ ಧೈರ್ಯಂ ಚ ವೀರ್ಯಂ ಚ ಪಾಂಚಾಲಾಃ ಪಾಂಡವೈಃ ಸಹ|
05056051e ಸರ್ವೇ ಸಮಧಿರೂಢಾಃ ಸ್ಮ ಸಂಗ್ರಾಮಾನ್ನಃ ಸಮುದ್ಧರ||
ಹಾಗೆ ಹೇಳುತ್ತಿದ್ದ ಅವನಿಗೆ ಧರ್ಮಾತ್ಮ ರಾಜಾ ಯುಧಿಷ್ಠಿರನು ಹೇಳಿದನು: “ಪಾಂಚಾಲರೊಂದಿಗೆ ಪಾಂಡವರು ಎಲ್ಲರೂ ನಿನ್ನ ಧೈರ್ಯ, ವೀರ್ಯಗಳನ್ನು ಅವಲಂಬಿಸಿದ್ದಾರೆ. ಈ ಸಂಗ್ರಾಮದಿಂದ ನಮ್ಮನ್ನು ರಕ್ಷಿಸಿ ಉದ್ಧರಿಸು.
05056052a ಜಾನಾಮಿ ತ್ವಾಂ ಮಹಾಬಾಹೋ ಕ್ಷತ್ರಧರ್ಮೇ ವ್ಯವಸ್ಥಿತಂ|
05056052c ಸಮರ್ಥಮೇಕಂ ಪರ್ಯಾಪ್ತಂ ಕೌರವಾಣಾಂ ಯುಯುತ್ಸತಾಂ||
ಮಹಾಬಾಹೋ! ನೀನು ಕ್ಷತ್ರಧರ್ಮದಲ್ಲಿ ವ್ಯವಸ್ಥಿತನಾಗಿದ್ದೀಯೆ ಎಂದು ತಿಳಿದಿದ್ದೇನೆ. ಕೌರವರೊಂದಿಗೆ ಯುದ್ಧಮಾಡಲು ನೀನೊಬ್ಬನೇ ಸಮರ್ಥನಾಗಿದ್ದೀಯೆ.
05056052e ಭವತಾ ಯದ್ವಿಧಾತವ್ಯಂ ತನ್ನಃ ಶ್ರೇಯಃ ಪರಂತಪ||
05056053a ಸಂಗ್ರಾಮಾದಪಯಾತಾನಾಂ ಭಗ್ನಾನಾಂ ಶರಣೈಷಿಣಾಂ|
ಪರಂತಪ! ಸಂಗ್ರಾಮಕ್ಕೆ ಸಿದ್ಧರಾಗಿ ಅವರು ನಮ್ಮ ಎದಿರು ಬಂದಾಗ ನೀನು ರಚಿಸುವ ವ್ಯೂಹವು ನಮಗೆ ಶ್ರೇಯಸ್ಕರವಾಗಿರುತ್ತದೆ.
05056053c ಪೌರುಷಂ ದರ್ಶಯಂ ಶೂರೋ ಯಸ್ತಿಷ್ಠೇದಗ್ರತಃ ಪುಮಾನ್||
05056053e ಕ್ರೀಣೀಯಾತ್ತಂ ಸಹಸ್ರೇಣ ನೀತಿಮನ್ನಾಮ ತತ್ಪದಂ||
ಪೌರುಷವನ್ನು ತೋರಿಸಿದ ಶೂರನು ಸೈನಿಕರನ್ನು ಮುಂದೆ ನಿಲ್ಲಿಸಿಕೊಂಡು ಹೋರಾಡುವವನನ್ನು ಸಹಸ್ರವನ್ನು ಕೊಟ್ಟಾದರೂ ಪಡೆಯಬೇಕೆಂದು ನೀತಿಯನ್ನು ತಿಳಿದವರು ಹೇಳುತ್ತಾರೆ.
05056054a ಸ ತ್ವಂ ಶೂರಶ್ಚ ವೀರಶ್ಚ ವಿಕ್ರಾಂತಶ್ಚ ನರರ್ಷಭ|
05056054c ಭಯಾರ್ತಾನಾಂ ಪರಿತ್ರಾತಾ ಸಮ್ಯುಗೇಷು ನ ಸಂಶಯಃ||
ನರರ್ಷಭ! ನೀನು ಶೂರ, ವೀರ ಮತ್ತು ವಿಕ್ರಾಂತ. ಯುದ್ಧದಲ್ಲಿ ಭಯಾರ್ತರ ಪರಿತ್ರಾತಾ ಎನ್ನುವುದರಲ್ಲಿ ಸಂಶಯವಿಲ್ಲ.”
05056055a ಏವಂ ಬ್ರುವತಿ ಕೌಂತೇಯೇ ಧರ್ಮಾತ್ಮನಿ ಯುಧಿಷ್ಠಿರೇ|
05056055c ಧೃಷ್ಟದ್ಯುಮ್ನ ಉವಾಚೇದಂ ಮಾಂ ವಚೋ ಗತಸಾಧ್ವಸಃ||
ಧರ್ಮಾತ್ಮ ಕೌಂತೇಯ ಯುಧಿಷ್ಠಿರನು ಈ ರೀತಿ ಹೇಳಲು ಧೃಷ್ಟದ್ಯುಮ್ನನು, ಭಯವಿಲ್ಲದೇ, ನನಗೆ ಈ ಮಾತುಗಳನ್ನು ಹೇಳಿದನು:
05056056a ಸರ್ವಾಂ ಜನಪದಾನ್ನ್ಸೂ ಯೋಧಾ ದುರ್ಯೋಧನಸ್ಯ ಯೇ|
05056056c ಸಬಾಹ್ಲೀಕಾನ್ಕುರೂನ್ಬ್ರೂಯಾಃ ಪ್ರಾತಿಪೇಯಾಂ ಶರದ್ವತಃ||
05056057a ಸೂತಪುತ್ರಂ ತಥಾ ದ್ರೋಣಂ ಸಹಪುತ್ರಂ ಜಯದ್ರಥಂ|
05056057c ದುಃಶಾಸನಂ ವಿಕರ್ಣಂ ಚ ತಥಾ ದುರ್ಯೋಧನಂ ನೃಪಂ||
“ಸೂತ! ದುರ್ಯೋಧನನಲ್ಲಿರುವ ಎಲ್ಲ ಜನಪದ ಯೋಧರಿಗೆ, ಬಾಹ್ಲೀಕನೇ ಮೊದಲಾದ ಪ್ರಾತಿಪೇಯ ಕುರುಗಳಿಗೆ, ಶರದ್ವತ, ಸೂತಪುತ್ರ, ದ್ರೋಣ, ಅವನ ಮಗ, ಜಯದ್ರಥ, ದುಃಶಾಸನ, ವಿಕರ್ಣ ಮತ್ತು ನೃಪ ದುರ್ಯೋಧನನಿಗೆ ಹೇಳು.
05056058a ಭೀಷ್ಮಂ ಚೈವ ಬ್ರೂಹಿ ಗತ್ವಾ ತ್ವಮಾಶು
ಯುಧಿಷ್ಠಿರಂ ಸಾಧುನೈವಾಭ್ಯುಪೇತ|
05056058c ಮಾ ವೋ ವಧೀದರ್ಜುನೋ ದೇವಗುಪ್ತಃ
ಕ್ಷಿಪ್ರಂ ಯಾಚಧ್ವಂ ಪಾಂಡವಂ ಲೋಕವೀರಂ||
ಭೀಷ್ಮನಿಗೆ ಕೂಡ ಹೋಗಿ ಹೇಳು. “ಯುಧಿಷ್ಠಿರನೊಂದಿಗೆ ಒಳ್ಳೆಯದಾಗಿ ನಡೆದುಕೊಳ್ಳಿ. ದೇವತೆಗಳಿಂದ ರಕ್ಷಿಸಲ್ಪಟ್ಟಿರುವ ಅರ್ಜುನನಿಂದ ವಧೆಗೊಳ್ಳಬೇಡಿ. ಬೇಗನೇ ಲೋಕವೀರ ಪಾಂಡವನನ್ನು ಬೇಡಿಕೊಳ್ಳಿ.
05056059a ನೈತಾದೃಶೋ ಹಿ ಯೋಧೋಽಸ್ತಿ ಪೃಥಿವ್ಯಾಮಿಹ ಕಶ್ಚನ|
05056059c ಯಥಾವಿಧಃ ಸವ್ಯಸಾಚೀ ಪಾಂಡವಃ ಶಸ್ತ್ರವಿತ್ತಮಃ||
ಶಸ್ತ್ರವಿತ್ತಮ ಪಾಂಡವ ಸವ್ಯಸಾಚಿಯಿರುವ ಹಾಗೆ ಬೇರೆ ಯಾವ ಯೋಧನೂ ಈ ಭೂಮಿಯ ಮೇಲೆ ಇಲ್ಲ.
05056060a ದೇವೈರ್ಹಿ ಸಂಭೃತೋ ದಿವ್ಯೋ ರಥೋ ಗಾಂಡೀವಧನ್ವನಃ|
05056060c ನ ಸ ಜೇಯೋ ಮನುಷ್ಯೇಣ ಮಾ ಸ್ಮ ಕೃಧ್ವಂ ಮನೋ ಯುಧಿ||
ಗಾಂಡೀವಧನ್ವಿಯ ದಿವ್ಯ ರಥವು ದೇವತೆಗಳಿಂದಲೇ ರಕ್ಷಿತವಾಗಿದೆ. ಮನುಷ್ಯರಿಂದ ಅವನನ್ನು ಗೆಲ್ಲಲಿಕ್ಕಾಗುವುದಿಲ್ಲ. ಆದುದರರಿಂದ ಯುದ್ಧಕ್ಕೆ ಮನಸ್ಸು ಮಾಡಬೇಡಿ!””
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಸಂಜಯವಾಕ್ಯೇ ಷಟ್ಪಂಚಾಶತ್ತಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಸಂಜಯವಾಕ್ಯದಲ್ಲಿ ಐವತ್ತಾರನೆಯ ಅಧ್ಯಾಯವು.