ಶಾಂತಿ ಪರ್ವ: ಮೋಕ್ಷಧರ್ಮ ಪರ್ವ
೨೪೯
ಮಹಾದೇವನ ಪ್ರಾರ್ಥನೆಯಂತೆ ಬ್ರಹ್ಮನ ರೋಷಾಗ್ನಿಯ ಉಪಸಂಹಾರ; ಮೃತ್ಯುವಿನ ಉತ್ಪತ್ತಿ (1-22).
12249001 ಸ್ಥಾಣುರುವಾಚ|
12249001a ಪ್ರಜಾಸರ್ಗನಿಮಿತ್ತಂ ಮೇ ಕಾರ್ಯವತ್ತಾಮಿಮಾಂ ಪ್ರಭೋ|
12249001c ವಿದ್ಧಿ ಸೃಷ್ಟಾಸ್ತ್ವಯಾ ಹೀಮಾ ಮಾ ಕುಪ್ಯಾಸಾಂ ಪಿತಾಮಹ||
ಸ್ಥಾಣುವು ಹೇಳಿದನು: “ಪ್ರಭೋ! ಪಿತಾಮಹ! ನನ್ನ ಈ ಕಾರ್ಯವು ಪ್ರಜೆಗಳ ಸೃಷ್ಟಿಯ ಕುರಿತಾಗಿಯೇ ಇದೆ. ನೀನೇ ಸೃಷ್ಟಿಸಿರುವ ಇವರ ಮೇಲೆ ಕುಪಿತನಾಗಬಾರದು.
12249002a ತವ ತೇಜೋಗ್ನಿನಾ ದೇವ ಪ್ರಜಾ ದಹ್ಯಂತಿ ಸರ್ವಶಃ|
12249002c ತಾ ದೃಷ್ಟ್ವಾ ಮಮ ಕಾರುಣ್ಯಂ ಮಾ ಕುಪ್ಯಾಸಾಂ ಜಗತ್ಪ್ರಭೋ||
ದೇವ! ಜಗತ್ಪ್ರಭೋ! ನಿನ್ನ ತೇಜೋಗ್ನಿಯಿಂದ ಪ್ರಜೆಗಳು ಎಲ್ಲೆಲ್ಲಿಯೂ ಸುಟ್ಟುಹೋಗುತ್ತಿದ್ದಾರೆ. ಅವರನ್ನು ನೋಡಿ ನನ್ನಲ್ಲಿ ಕಾರುಣ್ಯವುಂಟಾಗಿದೆ. ಅವರ ಮೇಲೆ ಕುಪಿತನಾಗಬೇಡ.”
12249003 ಪ್ರಜಾಪತಿರುವಾಚ|
12249003a ನ ಕುಪ್ಯೇ ನ ಚ ಮೇ ಕಾಮೋ ನ ಭವೇರನ್ ಪ್ರಜಾ ಇತಿ|
12249003c ಲಾಘವಾರ್ಥಂ ಧರಣ್ಯಾಸ್ತು ತತಃ ಸಂಹಾರ ಇಷ್ಯತೇ||
ಪ್ರಜಾಪತಿಯು ಹೇಳಿದನು: “ನಾನು ಅವರ ಮೇಲೆ ಕುಪಿತನಾಗಿಲ್ಲ. ಅವರೆಲ್ಲರೂ ಇರಬಾರದೆಂಬ ಬಯಕೆಯೂ ನನ್ನದಲ್ಲ. ಭೂಮಿಯ ಭಾರವನ್ನು ಹಗುರಗೊಳಿಸಲು ಅವರ ಸಂಹಾರವನ್ನು ಬಯಸುತ್ತೇನೆ.
12249004a ಇಯಂ ಹಿ ಮಾಂ ಸದಾ ದೇವೀ ಭಾರಾರ್ತಾ ಸಮಚೋದಯತ್|
12249004c ಸಂಹಾರಾರ್ಥಂ ಮಹಾದೇವ ಭಾರೇಣಾಪ್ಸು ನಿಮಜ್ಜತಿ||
ಭಾರದಿಂದ ಆರ್ತಳಾಗಿದ್ದ ಈ ದೇವಿಯೇ ಪ್ರಜೆಗಳ ಸಂಹಾರಕ್ಕಾಗಿ ನನ್ನನ್ನು ಪ್ರಚೋದಿಸಿದಳು. ಮಹಾದೇವ! ಭಾರದಿಂದ ಇವಳು ನೀರಿನಲ್ಲಿ ಮುಳುಗಿಹೋಗುವುದರಲ್ಲಿದ್ದಳು.
12249005a ಯದಾಹಂ ನಾಧಿಗಚ್ಚಾಮಿ ಬುದ್ಧ್ಯಾ ಬಹು ವಿಚಾರಯನ್|
12249005c ಸಂಹಾರಮಾಸಾಂ ವೃದ್ಧಾನಾಂ ತತೋ ಮಾಂ ಕ್ರೋಧ ಆವಿಶತ್||
ಬಹುಪ್ರಕಾರವಾಗಿ ವಿಚಾರಿಸಿದರೂ ನನ್ನ ಬುದ್ಧಿಗೆ ವೃದ್ಧಿಯಾಗುತ್ತಿರುವ ಇವರನ್ನು ಸಂಹರಿಸುವ ಉಪಾಯವು ಹೊಳೆಯಲಿಲ್ಲ. ಆಗ ಕ್ರೋಧವು ನನ್ನನ್ನು ಆವರಿಸಿತು.”
12249006 ಸ್ಥಾಣುರುವಾಚ|
12249006a ಸಂಹಾರಾಂತಂ ಪ್ರಸೀದಸ್ವ ಮಾ ಕ್ರುಧಸ್ತ್ರಿದಶೇಶ್ವರ|
12249006c ಮಾ ಪ್ರಜಾಃ ಸ್ಥಾವರಂ ವೈಚ ಜಂಗಮಂ ಚ ವಿನೀನಶಃ||
ಸ್ಥಾಣುವು ಹೇಳಿದನು: “ತ್ರಿದಶೇಶ್ವರ! ಈ ಸಂಹಾರದಿಂದ ಪ್ರಸೀದನಾಗು. ಕ್ರೋಧಿತನಾಗಬೇಡ. ಈ ಸ್ಥಾವರ-ಜಂಗಮ ಪ್ರಜೆಗಳನ್ನು ವಿನಾಶಗೊಳಿಸಬೇಡ.
12249007a ಪಲ್ವಲಾನಿ ಚ ಸರ್ವಾಣಿ ಸರ್ವಂ ಚೈವ ತೃಣೋಲಪಮ್|
12249007c ಸ್ಥಾವರಂ ಜಂಗಮಂ ಚೈವ ಭೂತಗ್ರಾಮಂ ಚತುರ್ವಿಧಮ್||
ಜಲಾಶಯಗಳು, ಹುಲ್ಲಿನ ಮೆದೆಗಳು, ಸ್ಥಾವರಗಳು ಮತ್ತು ಜಂಗಮಗಳೆಂಬ ನಾಲ್ಕು ವಿಧದ ಭೂತಗ್ರಾಮಗಳಿವೆ.
12249008a ತದೇತದ್ಭಸ್ಮಸಾದ್ಭೂತಂ ಜಗತ್ಸರ್ವಮುಪಪ್ಲುತಮ್|
12249008c ಪ್ರಸೀದ ಭಗವನ್ಸಾಧೋ ವರ ಏಷ ವೃತೋ ಮಯಾ||
ಅವೆಲ್ಲವೂ ಭಸ್ಮೀಭೂತವಾಗುತ್ತಿವೆ. ಜಗತ್ತೆಲ್ಲವೂ ಮುಳುಗಿಹೋಗುತ್ತಿದೆ. ಭಗವನ್! ಪ್ರಸೀದನಾಗು. ಇದೇ ನಾನು ಕೇಳುವ ವರವು.
12249009a ನಷ್ಟಾ ನ ಪುನರೇಷ್ಯಂತಿ ಪ್ರಜಾ ಹ್ಯೇತಾಃ ಕಥಂ ಚನ|
12249009c ತಸ್ಮಾನ್ನಿವರ್ತ್ಯತಾಮೇತತ್ತೇಜಃ ಸ್ವೇನೈವ ತೇಜಸಾ||
ನಷ್ಟವಾದ ಈ ಪ್ರಜೆಗಳು ಪುನಃ ಯಾವಕಾರಣಕ್ಕೂ ಹುಟ್ಟುವುದಿಲ್ಲ. ಆದುದರಿಂದ ಈ ತೇಜಸ್ಸನ್ನು ನಿನ್ನದೇ ತೇಜಸ್ಸಿನಿಂದ ಹಿಂತೆಗೆದುಕೋ.
12249010a ಉಪಾಯಮನ್ಯಂ ಸಂಪಶ್ಯ ಪ್ರಜಾನಾಂ ಹಿತಕಾಮ್ಯಯಾ|
12249010c ಯಥೇಮೇ ಜಂತವಃ ಸರ್ವೇ ನಿವರ್ತೇರನ್ಪರಂತಪ||
12249011a ಅಭಾವಮಭಿಗಚ್ಚೇಯುರುತ್ಸನ್ನಪ್ರಜನಾಃ ಪ್ರಜಾಃ|
12249011c ಅಧಿದೈವನಿಯುಕ್ತೋಽಸ್ಮಿ ತ್ವಯಾ ಲೋಕೇಷ್ವಿಹೇಶ್ವರ||
ಪರಂತಪ! ಪ್ರಜೆಗಳ ಹಿತವನ್ನು ಬಯಸಿ, ಪುನಃ ಇವರು ನಾಶವಾಗದಂತೆ ಮತ್ತು ಇವರ ಸಂಹಾರ ಕಾರ್ಯವು ವ್ಯವಸ್ಥಿತರೀತಿಯಲ್ಲಿ ನಡೆಯುವಂತೆ ಅನ್ಯ ಉಪಾಯವನ್ನು ನೀನೇ ಯೋಚಿಸು. ಲೋಕೇಶ್ವರೇಶ್ವರ! ಅಧಿದೈವನಾಗಿ ನಿನ್ನಿಂದ ನಿಯುಕ್ತಗೊಳಿಸಲ್ಪಟ್ಟಿದ್ದೇನೆ.
12249012a ತ್ವದ್ಭವಂ ಹಿ ಜಗನ್ನಾಥ ಜಗತ್ ಸ್ಥಾವರಜಂಗಮಮ್|
12249012c ಪ್ರಸಾದ್ಯ ತ್ವಾಂ ಮಹಾದೇವ ಯಾಚಾಮ್ಯಾವೃತ್ತಿಜಾಃ ಪ್ರಜಾಃ||
ಜಗನ್ನಾಥ! ಮಹಾದೇವ! ಸ್ಥಾವರ-ಜಂಗಮ ಜಗತ್ತೆಲ್ಲವೂ ನಿನ್ನಿಂದಲೇ ಹುಟ್ಟಿದೆ. ನಿನ್ನ ಪ್ರಸಾದದಿಂದ ಪ್ರಜೆಗಳು ಸತ್ತು ಪುನಃ ಹುಟ್ಟುವಂತಾಗಲಿ.””
12249013 ನಾರದ ಉವಾಚ|
12249013a ಶ್ರುತ್ವಾ ತು ವಚನಂ ದೇವಃ ಸ್ಥಾಣೋರ್ನಿಯತವಾಙ್ಮನಾಃ|
12249013c ತೇಜಸ್ತತ್ಸ್ವಂ ನಿಜಗ್ರಾಹ ಪುನರೇವಾಂತರಾತ್ಮನಾ||
ನಾರದನು ಹೇಳಿದನು: “ನಿಯತ ಮಾತು-ಮನಸ್ಸುಗಳುಳ್ಳ ಬ್ರಹ್ಮದೇವನು ಸ್ಥಾಣುವಿನ ಮಾತನ್ನು ಕೇಳಿ ತೇಜಸ್ಸನ್ನು ಹಿಂತೆಗೆದುಕೊಂಡು ಪುನಃ ಅದನ್ನು ತನ್ನಲ್ಲಿಯೇ ಲೀನಗೊಳಿಸಿದನು.
12249014a ತತೋಽಗ್ನಿಮುಪಸಂಗೃಹ್ಯ ಭಗವಾಽಲ್ಲೋಕಪೂಜಿತಃ|
12249014c ಪ್ರವೃತ್ತಿಂ ಚ ನಿವೃತ್ತಿಂ ಚ ಕಲ್ಪಯಾಮಾಸ ವೈ ಪ್ರಭುಃ||
ಆಗ ಲೋಕಪೂಜಿತ ಪ್ರಭು ಭಗವಾನನು ಅಗ್ನಿಯನ್ನು ಉಪಸಂಹರಿಸಿ ಪ್ರವೃತ್ತಿ-ನಿವೃತ್ತಿಗಳನ್ನು ಕಲ್ಪಿಸಿದನು.
12249015a ಉಪಸಂಹರತಸ್ತಸ್ಯ ತಮಗ್ನಿಂ ರೋಷಜಂ ತದಾ|
12249015c ಪ್ರಾದುರ್ಬಭೂವ ವಿಶ್ವೇಭ್ಯಃ ಖೇಭ್ಯೋ ನಾರೀ ಮಹಾತ್ಮನಃ||
ರೋಷದಿಂದ ಉಂಟಾದ ಆ ಅಗ್ನಿಯನ್ನು ಅವನು ಉಪಸಂಹರಿಸಲು ಆ ಮಹಾತ್ಮನ ಎಲ್ಲ ಅವಯವಗಳಿಂದ ಒಂದು ಶಕ್ತಿಯು ಹೊರಟು ನಾರಿಯಾಗಿ ಪ್ರಾದುರ್ಭವಿಸಿತು.
12249016a ಕೃಷ್ಣಾ ರಕ್ತಾಂಬರಧರಾ ರಕ್ತನೇತ್ರತಲಾಂತರಾ|
12249016c ದಿವ್ಯಕುಂಡಲಸಂಪನ್ನಾ ದಿವ್ಯಾಭರಣಭೂಷಿತಾ||
ಕಪ್ಪು ಮತ್ತು ಕೆಂಪು ವಸ್ತ್ರಗಳನ್ನುಟ್ಟಿದ್ದ, ಗುಳಿಬಿದ್ದ ರಕ್ತನೇತ್ರಳಾಗಿದ್ದ ಅವಳು ದಿವ್ಯಕುಂಡಲಸಂಪನ್ನಳಾಗಿ ದಿವ್ಯಾಭರಣಭೂಷಿತಳಾಗಿದ್ದಳು.
12249017a ಸಾ ವಿನಿಃಸೃತ್ಯ ವೈ ಖೇಭ್ಯೋ ದಕ್ಷಿಣಾಮಾಶ್ರಿತಾ ದಿಶಮ್|
12249017c ದದೃಶಾತೇಽಥ ತೌ ಕನ್ಯಾಂ ದೇವೌ ವಿಶ್ವೇಶ್ವರಾವುಭೌ||
ಅವನ ಅವಯವಗಳಿಂದ ಹೊರಟು ದಕ್ಷಿಣ ದಿಕ್ಕಿನಲ್ಲಿ ಹೋಗುತ್ತಿದ್ದ ಆ ಕನ್ಯೆಯನ್ನು ಇಬ್ಬರು ವಿಶ್ವೇಶ್ವರ ದೇವರೂ ನೋಡಿದರು.
12249018a ತಾಮಾಹೂಯ ತದಾ ದೇವೋ ಲೋಕಾನಾಮಾದಿರೀಶ್ವರಃ|
12249018c ಮೃತ್ಯೋ ಇತಿ ಮಹೀಪಾಲ ಜಹಿ ಚೇಮಾಃ ಪ್ರಜಾ ಇತಿ||
ಮಹೀಪಾಲ! ಆಗ ಲೋಕಗಳ ಆದಿ ಈಶ್ವರನು ಅವಳನ್ನು ಮೃತ್ಯುವೆಂದು ಕರೆದು ಈ ಪ್ರಜೆಗಳನ್ನು ಸಂಹರಿಸು ಎಂದನು.
12249019a ತ್ವಂ ಹಿ ಸಂಹಾರಬುದ್ಧ್ಯಾ ಮೇ ಚಿಂತಿತಾ ರುಷಿತೇನ ಚ|
12249019c ತಸ್ಮಾತ್ಸಂಹರ ಸರ್ವಾಸ್ತ್ವಂ ಪ್ರಜಾಃ ಸಜಡಪಂಡಿತಾಃ||
“ಸಂಹಾರಬುದ್ಧಿಯಿಂದ ರೋಷಗೊಂಡು ನಿನ್ನನ್ನು ಚಿಂತಿಸಿದೆನು. ಆದುದರಿಂದ ನೀನು ಪಂಡಿತರು-ಮೂರ್ಖರು ಎನ್ನುವ ಭೇದಭಾವವಿಲ್ಲದೇ ಎಲ್ಲರನ್ನೂ ಸಂಹರಿಸು.
12249020a ಅವಿಶೇಷೇಣ ಚೈವ ತ್ವಂ ಪ್ರಜಾಃ ಸಂಹರ ಭಾಮಿನಿ|
12249020c ಮಮ ತ್ವಂ ಹಿ ನಿಯೋಗೇನ ಶ್ರೇಯಃ ಪರಮವಾಪ್ಸ್ಯಸಿ||
ಭಾಮಿನಿ! ನೀನು ಯಾರನ್ನೂ ಬಿಡದೇ ಪ್ರಜೆಗಳನ್ನು ಸಂಹರಿಸು. ನನ್ನ ನಿಯೋಗದಿಂದ ನೀನು ಪರಮ ಶ್ರೇಯಸ್ಸನ್ನು ಪಡೆಯುತ್ತೀಯೆ.”
12249021a ಏವಮುಕ್ತಾ ತು ಸಾ ದೇವೀ ಮೃತ್ಯುಃ ಕಮಲಮಾಲಿನೀ|
12249021c ಪ್ರದಧ್ಯೌ ದುಃಖಿತಾ ಬಾಲಾ ಸಾಶ್ರುಪಾತಮತೀವ ಹಿ||
ಅವನು ಹೀಗೆ ಹೇಳಲು ಕಮಲಮಾಲಿನೀ ಬಾಲಕಿ ದೇವೀ ಮೃತ್ಯುವು ಕಣ್ಣೀರು ಸುರಿಸುತ್ತಾ ದುಃಖಿತಳಾಗಿ ಚಿಂತಾಮಗ್ನಳಾದಳು.
12249022a ಪಾಣಿಭ್ಯಾಂ ಚೈವ ಜಗ್ರಾಹ ತಾನ್ಯಶ್ರೂಣಿ ಜನೇಶ್ವರಃ|
12249022c ಮಾನವಾನಾಂ ಹಿತಾರ್ಥಾಯ ಯಯಾಚೇ ಪುನರೇವ ಚ||
ಮಾನವರ ಹಿತಾರ್ಥಕ್ಕಾಗಿ ಜನೇಶ್ವರ ಬ್ರಹ್ಮನು ಅವಳ ಕಣ್ಣುಗಳಿಂದ ಉದುರುತ್ತಿದ್ದ ಅಶ್ರುಬಿಂದುಗಳನ್ನು ಕೆಳಕ್ಕೆ ಬೀಳಲು ಬಿಡದೇ ತನ್ನ ಅಂಜಲಿಯಲ್ಲಿಯೇ ಹಿಡಿದುಕೊಂಡನು. ಆಗ ಅವಳು ಪುನಃ ಪ್ರಾರ್ಥಿಸಿದಳು.”
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಮೃತ್ಯುಪ್ರಜಾಪತಿಸಂವಾದೇ ಎಕೋನಪಂಚಾಶದಧಿಕದ್ವಿಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಮೃತ್ಯುಪ್ರಜಾಪತಿಸಂವಾದ ಎನ್ನುವ ಇನ್ನೂರಾನಲ್ವತ್ತೊಂಭತ್ತನೇ ಅಧ್ಯಾಯವು.