ಶಾಂತಿ ಪರ್ವ: ಮೋಕ್ಷಧರ್ಮ ಪರ್ವ
೨೦೨
ವರಾಹರೂಪ
ಭಗವಾನ್ ವಿಷ್ಣುವು ವರಾಹ ರೂಪವನ್ನು ತಾಳಿ ದಾನವರನ್ನು ನಾಶಗೊಳಿಸಿ ದೇವತೆಗಳನ್ನು ರಕ್ಷಿಸುವುದು (೧-೩೩).
12202001 ಯುಧಿಷ್ಠಿರ ಉವಾಚ|
12202001a ಪಿತಾಮಹ ಮಹಾಪ್ರಾಜ್ಞ ಯುಧಿ ಸತ್ಯಪರಾಕ್ರಮ|
12202001c ಶ್ರೋತುಮಿಚ್ಚಾಮಿ ಕಾರ್ತ್ಸ್ನ್ಯೇನ ಕೃಷ್ಣಮವ್ಯಯಮೀಶ್ವರಮ್||
ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಹಾಪ್ರಾಜ್ಞ! ಯುದ್ಧದಲ್ಲಿ ಸತ್ಯಪರಾಕ್ರಮಿಯೇ! ಅವ್ಯಯ ಈಶ್ವರ ಕೃಷ್ಣನ ಕುರಿತು ಸಂಪೂರ್ಣವಾಗಿ ಕೇಳಬಯಸುತ್ತೇನೆ.
12202002a ಯಚ್ಚಾಸ್ಯ ತೇಜಃ ಸುಮಹದ್ಯಚ್ಚ ಕರ್ಮ ಪುರಾತನಮ್|
12202002c ತನ್ಮೇ ಸರ್ವಂ ಯಥಾತತ್ತ್ವಂ ಪ್ರಬ್ರೂಹಿ ಭರತರ್ಷಭ||
ಭರತರ್ಷಭ! ಇವನ ತೇಜಸ್ಸು ಎಂಥಹುದು ಮತ್ತು ಇವನ ಪುರಾತನ ಮಹಾಕರ್ಮಗಳ್ಯಾವುವು ಎನ್ನುವುದೆಲ್ಲವನ್ನೂ ಯಥಾವತ್ತಾಗಿ ಹೇಳು.
12202003a ತಿರ್ಯಗ್ಯೋನಿಗತಂ ರೂಪಂ ಕಥಂ ಧಾರಿತವಾನ್ ಹರಿಃ|
12202003c ಕೇನ ಕಾರ್ಯವಿಸರ್ಗೇಣ ತನ್ಮೇ ಬ್ರೂಹಿ ಪಿತಾಮಹ||
ಹರಿಯು ಹೇಗೆ ಮತ್ತು ಯಾವ ಕಾರ್ಯೋದ್ದೇಶದಿಂದ ತಿರ್ಯಗ್ಯೋನಿಯಲ್ಲಿ ರೂಪವನ್ನು ಧರಿಸಿದನು?”
12202004 ಭೀಷ್ಮ ಉವಾಚ|
12202004a ಪುರಾಹಂ ಮೃಗಯಾಂ ಯಾತೋ ಮಾರ್ಕಂಡೇಯಾಶ್ರಮೇ ಸ್ಥಿತಃ|
12202004c ತತ್ರಾಪಶ್ಯಂ ಮುನಿಗಣಾನ್ಸಮಾಸೀನಾನ್ಸಹಸ್ರಶಃ||
ಭೀಷ್ಮನು ಹೇಳಿದನು: “ಹಿಂದೆ ನಾನು ಬೇಟೆಗೆಂದು ಹೋದಾಗ ಮಾರ್ಕಂಡೇಯನ ಆಶ್ರಮಕ್ಕೆ ಹೋದೆ. ಅಲ್ಲಿ ಸಹಸ್ರಾರು ಮುನಿಗಣಗಳು ಸೇರಿದ್ದುದನ್ನು ನೋಡಿದೆ.
12202005a ತತಸ್ತೇ ಮಧುಪರ್ಕೇಣ ಪೂಜಾಂ ಚಕ್ರುರಥೋ ಮಯಿ|
12202005c ಪ್ರತಿಗೃಹ್ಯ ಚ ತಾಂ ಪೂಜಾಂ ಪ್ರತ್ಯನಂದಮೃಷೀನಹಮ್||
ಆಗ ಅವರು ಮಧುಪರ್ಕದಿಂದ ನನ್ನನ್ನು ಪೂಜಿಸಿದರು. ಅವರ ಆ ಪೂಜೆಯನ್ನು ಸ್ವೀಕರಿಸಿ ನಾನು ಆ ಋಷಿಗಳನ್ನು ಪ್ರತಿನಂದಿಸಿದೆನು.
12202006a ಕಥೈಷಾ ಕಥಿತಾ ತತ್ರ ಕಶ್ಯಪೇನ ಮಹರ್ಷಿಣಾ|
12202006c ಮನಃಪ್ರಹ್ಲಾದಿನೀಂ ದಿವ್ಯಾಂ ತಾಮಿಹೈಕಮನಾಃ ಶೃಣು||
ಅಲ್ಲಿ ಮಹರ್ಷಿ ಕಶ್ಯಪನು ಹೇಳಿದ ಮನಸ್ಸನ್ನು ಆಹ್ಲಾದಿಸುವ ದಿವ್ಯಕಥೆಯನ್ನು ಹೇಳುತ್ತೇನೆ. ಏಕಮನಸ್ಕನಾಗಿ ಕೇಳು.
12202007a ಪುರಾ ದಾನವಮುಖ್ಯಾ ಹಿ ಕ್ರೋಧಲೋಭಸಮನ್ವಿತಾಃ|
12202007c ಬಲೇನ ಮತ್ತಾಃ ಶತಶೋ ನರಕಾದ್ಯಾ ಮಹಾಸುರಾಃ||
ಹಿಂದೆ ನರಕಾದಿ ನೂರಾರು ಮಹಾಸುರರು ಮತ್ತು ದಾನವ ಮುಖ್ಯರು ಬಲಮತ್ತರಾಗಿ ಕ್ರೋಧಲೋಭಸಮನ್ವಿತರಾಗಿದ್ದರು.
12202008a ತಥೈವ ಚಾನ್ಯೇ ಬಹವೋ ದಾನವಾ ಯುದ್ಧದುರ್ಮದಾಃ|
12202008c ನ ಸಹಂತೇ ಸ್ಮ ದೇವಾನಾಂ ಸಮೃದ್ಧಿಂ ತಾಮನುತ್ತಮಾಮ್||
ಇವರಲ್ಲದೇ ಇನ್ನೂ ಇತರ ಅನೇಕ ಯುದ್ಧದುರ್ಮದ ದಾನವರು ಅನುತ್ತಮ ದೇವತೆಗಳ ಸಮೃದ್ಧಿಯನ್ನು ಸಹಿಸಿಕೊಂಡಿರಲಿಲ್ಲ.
12202009a ದಾನವೈರರ್ದ್ಯಮಾನಾಸ್ತು ದೇವಾ ದೇವರ್ಷಯಸ್ತಥಾ|
12202009c ನ ಶರ್ಮ ಲೇಭಿರೇ ರಾಜನ್ವಿಶಮಾನಾಸ್ತತಸ್ತತಃ||
ರಾಜನ್! ದಾನವರಿಂದ ಆಕ್ರಮಣಿಸಲ್ಪಟ್ಟ ದೇವತೆಗಳು ಮತ್ತು ದೇವರ್ಷಿಗಳು ಅಲ್ಲಿಂದಲ್ಲಿಗೆ ಓಡುತ್ತಾ ನೆಲೆಯೇ ಇಲ್ಲದಂತಾದರು.
12202010a ಪೃಥಿವೀಂ ಚಾರ್ತರೂಪಾಂ ತೇ ಸಮಪಶ್ಯನ್ದಿವೌಕಸಃ|
12202010c ದಾನವೈರಭಿಸಂಕೀರ್ಣಾಂ ಘೋರರೂಪೈರ್ಮಹಾಬಲೈಃ|
12202010e ಭಾರಾರ್ತಾಮಪಕೃಷ್ಟಾಂ ಚ ದುಃಖಿತಾಂ ಸಂನಿಮಜ್ಜತೀಮ್||
ಘೋರರೂಪದ ಮಹಾಬಲಶಾಲೀ ದಾನವರ ಗುಂಪುಗಳಿಂದ ತುಂಬಿಹೋಗಿ ಭಾರದಿಂದ ಬಳಲಿ ಸೋತು ದುಃಖಾರ್ತಳಾಗಿ ಮುಳುಗಿಹೋಗುತ್ತಿದ್ದ ಆರ್ತರೂಪೀ ಪೃಥ್ವಿಯನ್ನು ದಿವೌಕಸರು ನೋಡಿದರು.
12202011a ಅಥಾದಿತೇಯಾಃ ಸಂತ್ರಸ್ತಾ ಬ್ರಹ್ಮಾಣಮಿದಮಬ್ರುವನ್|
12202011c ಕಥಂ ಶಕ್ಯಾಮಹೇ ಬ್ರಹ್ಮನ್ದಾನವೈರುಪಮರ್ದನಮ್||
ಆಗ ಸಂತ್ರಸ್ತರಾದ ಅದಿತಿಯ ಪುತ್ರರು ಬ್ರಹ್ಮನಿಗೆ “ಬ್ರಹ್ಮನ್! ದಾನವರ ಈ ಉಪಟಳವನ್ನು ನಾವು ಹೇಗೆ ಸಹಿಸಿಕೊಳ್ಳಬಲ್ಲೆವು?” ಎಂದು ಕೇಳಿದರು.
12202012a ಸ್ವಯಂಭೂಸ್ತಾನುವಾಚೇದಂ ನಿಸೃಷ್ಟೋಽತ್ರ ವಿಧಿರ್ಮಯಾ|
12202012c ತೇ ವರೇಣಾಭಿಸಂಮತ್ತಾ ಬಲೇನ ಚ ಮದೇನ ಚ||
ಸ್ವಯಂಭುವು ಅವರಿಗೆ ಹೇಳಿದನು: “ಈ ವಿಪತ್ತಿಯನ್ನು ದೂರಮಾಡಲು ನಾನು ಒಂದು ಉಪಾಯವನ್ನು ಮಾಡಿದ್ದೇನೆ.
[1]12202013a ನಾವಭೋತ್ಸ್ಯಂತಿ ಸಂಮೂಢಾ ವಿಷ್ಣುಮವ್ಯಕ್ತದರ್ಶನಮ್|
12202013c ವರಾಹರೂಪಿಣಂ ದೇವಮಧೃಷ್ಯಮಮರೈರಪಿ||
ಆ ಸಮ್ಮೂಢರು ಅವ್ಯಕ್ತದರ್ಶನ ವಿಷ್ಣುವನ್ನು ಅರಿತಿಲ್ಲ. ಅಮರರಿಗೂ ದುರ್ಧರ್ಷನಾದ ಆ ದೇವನು ವರಾಹ ರೂಪವನ್ನು ಧರಿಸಿದ್ದಾನೆ.
12202014a ಏಷ ವೇಗೇನ ಗತ್ವಾ ಹಿ ಯತ್ರ ತೇ ದಾನವಾಧಮಾಃ|
12202014c ಅಂತರ್ಭೂಮಿಗತಾ ಘೋರಾ ನಿವಸಂತಿ ಸಹಸ್ರಶಃ|
12202014e ಶಮಯಿಷ್ಯತಿ ಶ್ರುತ್ವಾ ತೇ ಜಹೃಷುಃ ಸುರಸತ್ತಮಾಃ||
ಅವನು ವೇಗವಾಗಿ ಹೋಗಿ ಭೂಮಿಯ ಅಂತರ್ಗತರಾಗಿ ವಾಸಿಸುತ್ತಿರುವ ಸಹಸ್ರಾರು ಘೋರ ದಾನವಾಧಮರನ್ನು ಸಂಹರಿಸುತ್ತಾನೆ!” ಇದನ್ನು ಕೇಳಿ ಸುರಸತ್ತಮರು ಹರ್ಷಿತರಾದರು.
12202015a ತತೋ ವಿಷ್ಣುರ್ಮಹಾತೇಜಾ ವಾರಾಹಂ ರೂಪಮಾಶ್ರಿತಃ|
12202015c ಅಂತರ್ಭೂಮಿಂ ಸಂಪ್ರವಿಶ್ಯ ಜಗಾಮ ದಿತಿಜಾನ್ ಪ್ರತಿ||
ಆಗ ಮಹಾತೇಜಸ್ವೀ ವಿಷ್ಣುವು ವಾರಾಹರೂಪವನ್ನು ತಾಳಿ ಭೂಮಿಯನ್ನು ಪ್ರವೇಶಿಸಿ ದೈತ್ಯರ ಕಡೆ ಹೋದನು.
12202016a ದೃಷ್ಟ್ವಾ ಚ ಸಹಿತಾಃ ಸರ್ವೇ ದೈತ್ಯಾಃ ಸತ್ತ್ವಮಮಾನುಷಮ್|
12202016c ಪ್ರಸಹ್ಯ ಸಹಸಾ ಸರ್ವೇ ಸಂತಸ್ಥುಃ ಕಾಲಮೋಹಿತಾಃ||
ಆ ಅಮಾನುಷ ಸತ್ತ್ವವನ್ನು ನೋಡಿ ಕಾಲಮೋಹಿತರಾದ ದೈತ್ಯರೆಲ್ಲರೂ ಒಂದಾಗಿ ಒಮ್ಮೆಲೇ ಅವನನ್ನು ಆಕ್ರಮಣಿಸಿದರು.
12202017a ಸರ್ವೇ ಚ ಸಮಭಿದ್ರುತ್ಯ ವರಾಹಂ ಜಗೃಹುಃ ಸಮಮ್|
12202017c ಸಂಕ್ರುದ್ಧಾಶ್ಚ ವರಾಹಂ ತಂ ವ್ಯಕರ್ಷಂತ ಸಮಂತತಃ||
ಅವರೆಲ್ಲರೂ ಧಾವಿಸಿ ಬಂದು ವರಾಹವನ್ನು ಚೆನ್ನಾಗಿ ಹಿಡಿದುಕೊಂಡರು ಮತ್ತು ಸಂಕ್ರುದ್ಧರಾಗಿ ಆ ವರಾಹವನ್ನು ಎಲ್ಲಕಡೆಗಳಿಂದ ಎಳೆಯತೊಡಗಿದರು.
12202018a ದಾನವೇಂದ್ರಾ ಮಹಾಕಾಯಾ ಮಹಾವೀರ್ಯಾ ಬಲೋಚ್ಚ್ರಿತಾಃ|
12202018c ನಾಶಕ್ನುವಂಶ್ಚ ಕಿಂ ಚಿತ್ತೇ ತಸ್ಯ ಕರ್ತುಂ ತದಾ ವಿಭೋ||
ವಿಭೋ! ಆಗ ಆ ಬಲೋಚ್ಛ್ರಿತ ಮಹಾವೀರ್ಯ ಮಹಾಕಾಯ ದಾನವೇಂದ್ರರು ಅವನಿಗೆ ಏನನ್ನು ಮಾಡಲೂ ಅಸಮರ್ಥರಾದರು.
12202019a ತತೋಽಗಮನ್ವಿಸ್ಮಯಂ ತೇ ದಾನವೇಂದ್ರಾ ಭಯಾತ್ತದಾ|
12202019c ಸಂಶಯಂ ಗತಮಾತ್ಮಾನಂ ಮೇನಿರೇ ಚ ಸಹಸ್ರಶಃ||
ಆಗ ದಾನವೇಂದ್ರರು ವಿಸ್ಮಿತರಾದರು ಮತ್ತು ಭಯಗ್ರಸ್ತರಾದರು. ಆ ಸಹಸ್ರಾರು ದಾನವರು ತಮ್ಮ ಕೊನೆಯೇ ಬಂದಿದೆಯೆಂದು ಸಂಶಯತಾಳಿದರು.
12202020a ತತೋ ದೇವಾದಿದೇವಃ ಸ ಯೋಗಾತ್ಮಾ ಯೋಗಸಾರಥಿಃ|
12202020c ಯೋಗಮಾಸ್ಥಾಯ ಭಗವಾಂಸ್ತದಾ ಭರತಸತ್ತಮ||
12202021a ವಿನನಾದ ಮಹಾನಾದಂ ಕ್ಷೋಭಯನ್ದೈತ್ಯದಾನವಾನ್|
12202021c ಸಂನಾದಿತಾ ಯೇನ ಲೋಕಾಃ ಸರ್ವಾಶ್ಚೈವ ದಿಶೋ ದಶ||
ಭರತಸತ್ತಮ! ಆಗ ದೇವಾದಿದೇವ ಯೋಗಾತ್ಮಾ ಯೋಗಸಾರಥಿ ಭಗವಂತನು ಯೋಗವನ್ನು ಆಶ್ರಯಿಸಿ ದೈತ್ಯದಾನವರನ್ನು ಕ್ಷೋಭೆಗೊಳಿಸುತ್ತಾ ಮಹಾನಾದವನ್ನು ಗರ್ಜಿಸಿದನು. ಅವನ ಆ ಗರ್ಜನೆಯಿಂದ ಸರ್ವಲೋಕಗಳೂ ಹತ್ತು ದಿಕ್ಕುಗಳೂ ಕ್ಷೋಭೆಗೊಂಡವು.
12202022a ತೇನ ಸಂನಾದಶಬ್ದೇನ ಲೋಕಾಃ ಸಂಕ್ಷೋಭಮಾಗಮನ್|
12202022c ಸಂಭ್ರಾಂತಾಶ್ಚ ದಿಶಃ ಸರ್ವಾ ದೇವಾಃ ಶಕ್ರಪುರೋಗಮಾಃ||
ಅವನ ಆ ಸಂನಾದಶಬ್ದದಿಂದ ಲೋಕಗಳಲ್ಲೆ ಕ್ಷೋಭೆಯುಂಟಾಯಿತು. ಶಕ್ರನೇ ಮೊದಲಾದ ದೇವತೆಗಳೆಲ್ಲರೂ ಮತ್ತು ಎಲ್ಲ ದಿಕ್ಕುಗಳೂ ಸಂಭ್ರಾಂತಗೊಂಡವು.
12202023a ನಿರ್ವಿಚೇಷ್ಟಂ ಜಗಚ್ಚಾಪಿ ಬಭೂವಾತಿಭೃಶಂ ತದಾ|
12202023c ಸ್ಥಾವರಂ ಜಂಗಮಂ ಚೈವ ತೇನ ನಾದೇನ ಮೋಹಿತಮ್||
ಅವನ ಆ ನಾದದಿಂದ ಮೋಹಿತಗೊಂಡ ಸ್ಥಾವರ ಜಂಗಮಗಳೊಂದಿಗೆ ಜಗತ್ತೇ ಅತ್ಯಂತ ನಿರ್ವಿಚೇಷ್ಟವಾಯಿತು.
12202024a ತತಸ್ತೇ ದಾನವಾಃ ಸರ್ವೇ ತೇನ ಶಬ್ದೇನ ಭೀಷಿತಾಃ|
12202024c ಪೇತುರ್ಗತಾಸವಶ್ಚೈವ ವಿಷ್ಣುತೇಜೋವಿಮೋಹಿತಾಃ||
ಆಗ ಅವನ ಶಬ್ದದಿಂದ ಭೀಷಿತರಾಗಿ ವಿಷ್ಣುವಿನ ತೇಜಸ್ಸಿನಿಂದ ವಿಮೋಹಿತರಾಗಿ ಸರ್ವ ದಾನವರೂ ಪ್ರಾಣತೊರೆದು ಬಿದ್ದರು.
12202025a ರಸಾತಲಗತಾಂಶ್ಚೈವ ವರಾಹಸ್ತ್ರಿದಶದ್ವಿಷಃ|
12202025c ಖುರೈಃ ಸಂದಾರಯಾಮಾಸ ಮಾಂಸಮೇದೋಸ್ಥಿಸಂಚಯಮ್||
ರಸಾತಲಕ್ಕೂ ಹೋಗಿ ವರಾಹನು ತನ್ನ ಖುರಗಳಿಂದ ಸುರದ್ವೇಷಿಗಳನ್ನು ಸೀಳಿ ಅವರ ಮಾಂಸ-ಮೇದ-ಅಸ್ತಿಗಳ ರಾಶಿಯನ್ನೇ ಮಾಡಿದನು.
12202026a ನಾದೇನ ತೇನ ಮಹತಾ ಸನಾತನ ಇತಿ ಸ್ಮೃತಃ|
12202026c ಪದ್ಮನಾಭೋ ಮಹಾಯೋಗೀ ಭೂತಾಚಾರ್ಯಃ ಸ ಭೂತರಾಟ್||
ಅವನ ಆ ಮಹಾ ನಾದದಿಂದ ಪದ್ಮನಾಭ ಮಹಾಯೋಗೀ ಭೂತಾಚಾರ್ಯ ಭೂತರಾಟ್ ವಿಷ್ಣುವು “ಸನಾತನ” ಎಂದಾದನು.
12202027a ತತೋ ದೇವಗಣಾಃ ಸರ್ವೇ ಪಿತಾಮಹಮುಪಾಬ್ರುವನ್|
12202027c ನಾದೋಽಯಂ ಕೀದೃಶೋ ದೇವ ನೈನಂ ವಿದ್ಮ ವಯಂ ವಿಭೋ|
12202027e ಕೋಽಸೌ ಹಿ ಕಸ್ಯ ವಾ ನಾದೋ ಯೇನ ವಿಹ್ವಲಿತಂ ಜಗತ್||
ಆಗ ಸರ್ವ ದೇವಗಣಗಳೂ ಪಿತಾಮಹನಿಗೆ ಹೇಳಿದವು: “ದೇವ! ಇದು ಎಂತಹ ನಾದವು? ವಿಭೋ! ನಾವು ಇದನ್ನು ತಿಳಿಯಲಾರೆವು. ಅವನು ಯಾರು ಮತ್ತು ಇದು ಯಾರ ಗರ್ಜನೆ? ಇದರಿಂದ ಜಗತ್ತೇ ವಿಹ್ವಲಿತವಾಗಿಬಿಟ್ಟಿದೆ!”
12202028a ಏತಸ್ಮಿನ್ನಂತರೇ ವಿಷ್ಣುರ್ವಾರಾಹಂ ರೂಪಮಾಸ್ಥಿತಃ|
12202028c ಉದತಿಷ್ಠನ್ಮಹಾದೇವಃ ಸ್ತೂಯಮಾನೋ ಮಹರ್ಷಿಭಿಃ||
ಈ ಮಧ್ಯದಲ್ಲಿ ವಾರಾಹರೂಪವನ್ನು ಧರಿಸಿದ್ದ ಮಹಾದೇವ ವಿಷ್ಣುವು ಮಹರ್ಷಿಗಳು ಸ್ತುತಿಸುತ್ತಿರಲು ಮೇಲಕ್ಕೆದ್ದನು.
12202029a ನಿಹತ್ಯ ದಾನವಪತೀನ್ಮಹಾವರ್ಷ್ಮಾ ಮಹಾಬಲಃ|
12202029c ಏಷ ದೇವೋ ಮಹಾಯೋಗೀ ಭೂತಾತ್ಮಾ ಭೂತಭಾವನಃ||
12202030a ಸರ್ವಭೂತೇಶ್ವರೋ ಯೋಗೀ ಯೋನಿರಾತ್ಮಾ ತಥಾತ್ಮನಃ|
12202030c ಸ್ಥಿರೀಭವತ ಕೃಷ್ಣೋಽಯಂ ಸರ್ವಪಾಪಪ್ರಣಾಶನಃ||
ಪಿತಾಮಹನು ಹೇಳಿದನು: “ದಾನವಪತಿಗಳನ್ನು ಸಂಹರಿಸಿ ಬರುತ್ತಿರುವ ಈ ಮಹಾಕಾಯ ಮಹಾಬಲ ಮಹಾಯೋಗೀ ಭೂತಾತ್ಮಾ ಭೂತಭಾವನನು ದೇವ ಕೃಷ್ಣನು. ಇವನೇ ಸರ್ವಭೂತೇಶ್ವರನು. ಯೋಗಿಯು. ಆತ್ಮಯೋನಿಯು. ಸರ್ವಪಾಪಗಳನ್ನು ಕಳೆಯುವ ಪರಮಾತ್ಮನು. ಆದುದರಿಂದ ನೀವು ಧೈರ್ಯತಾಳಿರಿ.
12202031a ಕೃತ್ವಾ ಕರ್ಮಾತಿಸಾಧ್ವೇತದಶಕ್ಯಮಮಿತಪ್ರಭಃ|
12202031c ಸಮಾಯಾತಃ ಸ್ವಮಾತ್ಮಾನಂ ಮಹಾಭಾಗೋ ಮಹಾದ್ಯುತಿಃ|
12202031e ಪದ್ಮನಾಭೋ ಮಹಾಯೋಗೀ ಭೂತಾತ್ಮಾ ಭೂತಭಾವನಃ||
ಈ ಅಮಿತಪ್ರಭ ಮಹಾಭಾಗ ಮಹಾದ್ಯುತಿ ಮಹಾಯೋಗೀ ಭೂತಾತ್ಮಾ ಭೂತಭಾವನ ಪದ್ಮನಾಭನು ಇನ್ನೊಬ್ಬರಿಂದ ಮಾಡಲು ಅಶಕ್ಯವಾದ ಅತಿ ಕರ್ಮವನ್ನು ಮಾಡಿ ಪೂರೈಸಿ ಬರುತ್ತಿದ್ದಾನೆ.
12202032a ನ ಸಂತಾಪೋ ನ ಭೀಃ ಕಾರ್ಯಾ ಶೋಕೋ ವಾ ಸುರಸತ್ತಮಾಃ|
12202032c ವಿಧಿರೇಷ ಪ್ರಭಾವಶ್ಚ ಕಾಲಃ ಸಂಕ್ಷಯಕಾರಕಃ|
12202032e ಲೋಕಾನ್ಧಾರಯತಾನೇನ ನಾದೋ ಮುಕ್ತೋ ಮಹಾತ್ಮನಾ||
ಸುರಸತ್ತಮರೇ! ಸಂತಾಪಪಡಬೇಡಿರಿ! ಭಯಪಡಬೇಡಿ! ಶೋಕಿಸಬೇಡಿ. ಇವನೇ ವಿಧಿ. ಪ್ರಭಾವ. ಮತ್ತು ಸಂಕ್ಷಯಕಾರಕ ಕಾಲನು. ಈ ಮಹಾತ್ಮನು ಲೋಕಗಳನ್ನು ಉದ್ಧರಿಸುವ ಸಲುವಾಗಿ ಈ ಮಹಾನಾದವನ್ನು ಗರ್ಜಿಸಿದನು.
12202033a ಸ ಏವ ಹಿ ಮಹಾಭಾಗಃ ಸರ್ವಲೋಕನಮಸ್ಕೃತಃ|
12202033c ಅಚ್ಯುತಃ ಪುಂಡರೀಕಾಕ್ಷಃ ಸರ್ವಭೂತಸಮುದ್ಭವಃ[2]||
ಅವನೇ ಮಹಾಭಾಗ. ಸರ್ವಲೋಕನಮಸ್ಕೃತ. ಅಚ್ಯುತ. ಪುಂಡರೀಕಾಕ್ಷ ಮತ್ತು ಸರ್ವಭೂತಸಮುದ್ಭವನು.”
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಅಂತರ್ಭೂಮಿವಿಕ್ರೀಡಿನಂ ನಾಮ ದ್ವ್ಯಾಧಿಕದ್ವಿಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಅಂತರ್ಭೂಮಿವಿಕ್ರೀಡಿನ ಎನ್ನುವ ಇನ್ನೂರಾಎರಡನೇ ಅಧ್ಯಾಯವು.
[1] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ತೇ ವರೇಣಾಭಿಸಂಪನ್ನಾ ಬಲೇನ ಚ ಮದೇನ ಚ| (ಗೀತಾ ಪ್ರೆಸ್).
[2] ಇದರ ನಂತರ ಗೀತಾ ಪ್ರೆಸ್ ನಲ್ಲಿ ನಾರದನಿಗೆ ಅನುಸ್ಮೃತಿಸ್ತೋತ್ರದ ಉಪದೇಶ ಮತ್ತು ನಾರದನ ಸ್ತುತಿಗಳನ್ನು ಒಳಗೂಡಿದ ದಕ್ಷಿಣಾತ್ಯ ಪಾಠದ ೮೬.೫ ಅಧಿಕ ಶ್ಲೋಕಗಳಿವೆ. ಇವುಗಳನ್ನು ಪರಿಶಿಷ್ಠದಲ್ಲಿ ಕೊಡಲಾಗಿದೆ.