ಶಾಂತಿ ಪರ್ವ: ಮೋಕ್ಷಧರ್ಮ ಪರ್ವ
೨೬೮
ಮಾಂಡವ್ಯ-ಜನಕ ಸಂವಾದ
ತೃಷ್ಣೆಯನ್ನು ತ್ಯಜಿಸುವ ವಿಷಯದಲ್ಲಿ ಮಾಂಡವ್ಯ ಮುನಿ-ಜನಕರ ನಡುವಿನ ಸಂವಾದ (1-20).
12268001 ಯುಧಿಷ್ಠಿರ ಉವಾಚ|
12268001a ಭ್ರಾತರಃ ಪಿತರಃ ಪುತ್ರಾ ಜ್ಞಾತಯಃ ಸುಹೃದಸ್ತಥಾ|
12268001c ಅರ್ಥಹೇತೋರ್ಹತಾಃ ಕ್ರೂರೈರಸ್ಮಾಭಿಃ ಪಾಪಬುದ್ಧಿಭಿಃ||
ಯುಧಿಷ್ಠಿರನು ಹೇಳಿದನು: “ಸಂಪತ್ತಿಗಾಗಿ ನಮ್ಮ ಕ್ರೂರತನದಿಂದ ಮತ್ತು ಪಾಪಬುದ್ಧಿಯಿಂದ ಸಹೋದರರು, ಪಿತರು, ಪುತ್ರರು, ಬಂಧುಗಳು ಮತ್ತು ಸುಹೃದಯರು ಹತರಾದರು.
12268002a ಯೇಯಮರ್ಥೋದ್ಭವಾ ತೃಷ್ಣಾ ಕಥಮೇತಾಂ ಪಿತಾಮಹ|
12268002c ನಿವರ್ತಯೇಮ ಪಾಪಂ ಹಿ ತೃಷ್ಣಯಾ ಕಾರಿತಾ ವಯಮ್||
ಪಿತಾಮಹ! ಈ ತೃಷ್ಣೆಯು ಸಂಪತ್ತಿಗಾಗಿಯೇ ಹುಟ್ಟಿಕೊಂಡಿತು. ತೃಷ್ಣೆಯಿಂದ ನಾವು ಮಾಡಿದ ಈ ಪಾಪವನ್ನು ಹೇಗೆ ಕಳೆದುಕೊಳ್ಳಬಹುದು?”
12268003 ಭೀಷ್ಮ ಉವಾಚ|
12268003a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|
12268003c ಗೀತಂ ವಿದೇಹರಾಜೇನ ಮಾಂಡವ್ಯಾಯಾನುಪೃಚ್ಚತೇ||
ಭೀಷ್ಮನು ಹೇಳಿದನು: “ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಮಾಂಡವ್ಯನ ಪ್ರಶ್ನೆಗೆ ಉತ್ತರವಾದ ವಿದೇಹರಾಜನ ಗೀತೆಯನ್ನು ಉದಾಹರಿಸುತ್ತಾರೆ.
12268004a ಸುಸುಖಂ ಬತ ಜೀವಾಮಿ ಯಸ್ಯ ಮೇ ನಾಸ್ತಿ ಕಿಂ ಚನ|
12268004c ಮಿಥಿಲಾಯಾಂ ಪ್ರದೀಪ್ತಾಯಾಂ ನ ಮೇ ದಹ್ಯತಿ ಕಿಂ ಚನ||
“ನನ್ನದೆನ್ನುವುದು ಯಾವುದೂ ಇಲ್ಲ. ಆದರೂ ನಾನು ಅತ್ಯಂತ ಸುಖದಿಂದ ಜೀವಿಸುತ್ತಿದ್ದೇನೆ. ಮಿಥೆಲೆಯು ಹತ್ತಿಕೊಂಡು ಉರಿಯುತ್ತಿದ್ದರೂ ನನ್ನದ್ಯಾವುದೂ ಸುಟ್ಟುಹೋಗುತ್ತಿಲ್ಲ.
12268005a ಅರ್ಥಾಃ ಖಲು ಸಮೃದ್ಧಾ ಹಿ ಬಾಢಂ ದುಃಖಂ ವಿಜಾನತಾಮ್|
12268005c ಅಸಮೃದ್ಧಾಸ್ತ್ವಪಿ ಸದಾ ಮೋಹಯಂತ್ಯವಿಚಕ್ಷಣಾನ್||
ಸಂಪತ್ತು ಸಮೃದ್ಧಿಯನ್ನು ತರುವುದೇನೋ ಸರಿ. ಆದರೆ ತಿಳಿದವರು ಇದು ದುಃಖಕ್ಕೆ ಕಾರಣವೆಂದು ತಿಳಿದಿದ್ದಾರೆ. ತಿಳಿಯದೇ ಇರುವವರನ್ನು ಸಂಪತ್ತು, ಸಮೃದ್ಧಿಯನ್ನು ತರದಿದ್ದರೂ, ಮೋಹಿಸುತ್ತದೆ.
12268006a ಯಚ್ಚ ಕಾಮಸುಖಂ ಲೋಕೇ ಯಚ್ಚ ದಿವ್ಯಂ ಮಹತ್ಸುಖಮ್|
12268006c ತೃಷ್ಣಾಕ್ಷಯಸುಖಸ್ಯೈತೇ ನಾರ್ಹತಃ ಷೋಡಶೀಂ ಕಲಾಮ್||
ಈ ಲೋಕದ ಕಾಮಸುಖ ಮತ್ತು ಸ್ವರ್ಗಲೋಕದ ಮಹಾಸುಖ ಇವೆರಡೂ ತೃಷ್ಣಾಕ್ಷಯ ಸುಖದ ಹದಿನಾರನೇ ಒಂದು ಅಂಶಕ್ಕೂ ಸಮನಾಗಿಲ್ಲ.
12268007a ಯಥೈವ ಶೃಂಗಂ ಗೋಃ ಕಾಲೇ ವರ್ಧಮಾನಸ್ಯ ವರ್ಧತೇ|
12268007c ತಥೈವ ತೃಷ್ಣಾ ವಿತ್ತೇನ ವರ್ಧಮಾನೇನ ವರ್ಧತೇ||
ಕಾಲಕ್ಕೆ ತಕ್ಕಂತೆ ಗೋವು ಬೆಳೆಯುತ್ತಾ ಬಂದಂತೆ ಅದರ ಕೊಂಬೂ ಬೆಳೆಯುತ್ತದೆ. ಅದೇ ರೀತಿ ಸಂಪತ್ತು ಹೆಚ್ಚಾಗುತ್ತಾ ಬಂದಂತೆ ತೃಷ್ಣೆಯೂ ಹೆಚ್ಚಾಗುತ್ತದೆ.
12268008a ಕಿಂ ಚಿದೇವ ಮಮತ್ವೇನ ಯದಾ ಭವತಿ ಕಲ್ಪಿತಮ್|
12268008c ತದೇವ ಪರಿತಾಪಾಯ ನಾಶೇ ಸಂಪದ್ಯತೇ ಪುನಃ||
ಯಾವ ವಸ್ತುವಿನ ಮೇಲಾದರೂ ಮಮತ್ವವೆನ್ನುವನ್ನು ಕಲ್ಪಿಸಿಕೊಂಡರೆ ಅದು ನಾಶವಾದಾಗ ಪುನಃ ಪರಿತಾಪವುಂಟಾಗುತ್ತದೆ.
12268009a ನ ಕಾಮಾನನುರುಧ್ಯೇತ ದುಃಖಂ ಕಾಮೇಷು ವೈ ರತಿಃ|
12268009c ಪ್ರಾಪ್ಯಾರ್ಥಮುಪಯುಂಜೀತ ಧರ್ಮೇ ಕಾಮಂ ವಿವರ್ಜಯೇತ್||
ಕಾಮನೆಗಳನ್ನು ಅನುಸರಿಸಿಕೊಂಡು ಹೋಗಬಾರದು. ಕಾಮನೆಗಳಲ್ಲಿಯ ಆಸಕ್ತಿಯು ದುಃಖವನ್ನು ತರುತ್ತದೆ. ಧನಪ್ರಾಪ್ತಿಯಾದರೂ ಅದನ್ನು ಧರ್ಮಕ್ಕೆ ಬಳಸಬೇಕು. ಕಾಮವನ್ನು ವರ್ಜಿಸಬೇಕು.
12268010a ವಿದ್ವಾನ್ಸರ್ವೇಷು ಭೂತೇಷು ವ್ಯಾಘ್ರಮಾಂಸೋಪಮೋ[1] ಭವೇತ್|
12268010c ಕೃತಕೃತ್ಯೋ ವಿಶುದ್ಧಾತ್ಮಾ ಸರ್ವಂ ತ್ಯಜತಿ ವೈ ಸಹ||
ವಿದ್ವಾಂಸನು ಸರ್ವಭೂತಗಳಲ್ಲಿಯೂ – ಹುಲಿ ಮತ್ತು ಮಾಂಸದ ಮುದ್ದೆ – ಎನ್ನುವಂತೆ ಸಮನಾಗಿರಬೇಕು. ವಿಶುದ್ಧಾತ್ಮನಾಗಿ ಕೃತಕೃತ್ಯನಾದವನು ಎಲ್ಲವನ್ನೂ ತ್ಯಜಿಸುತ್ತಾನೆ.
12268011a ಉಭೇ ಸತ್ಯಾನೃತೇ ತ್ಯಕ್ತ್ವಾ ಶೋಕಾನಂದೌ ಪ್ರಿಯಾಪ್ರಿಯೇ|
12268011c ಭಯಾಭಯೇ ಚ ಸಂತ್ಯಜ್ಯ ಸಂಪ್ರಶಾಂತೋ ನಿರಾಮಯಃ||
ಸತ್ಯ-ಸುಳ್ಳು, ಶೋಕ-ಆನಂದ, ಪ್ರಿಯ-ಅಪ್ರಿಯ, ಭಯ-ಅಭಯ ಈ ದ್ವಂದ್ವಗಳನ್ನು ತ್ಯಜಿಸಿದವನು ಪ್ರಶಾಂತನೂ ನಿರಾಮಯನೂ ಆಗುತ್ತಾನೆ.
12268012a ಯಾ ದುಸ್ತ್ಯಜಾ ದುರ್ಮತಿಭಿರ್ಯಾ ನ ಜೀರ್ಯತಿ ಜೀರ್ಯತಃ|
12268012c ಯೋಽಸೌ ಪ್ರಾಣಾಂತಿಕೋ ರೋಗಸ್ತಾಂ ತೃಷ್ಣಾಂ ತ್ಯಜತಃ ಸುಖಮ್||
ದುರ್ಮತಿಗಳಿಗೆ ಇದನ್ನು ತ್ಯಜಿಸುವುದು ಕಷ್ಟವು. ದೇಹವು ಜೀರ್ಣವಾದರೂ ಅದು ಜೀರ್ಣವಾಗುವುದಿಲ್ಲ. ಇದು ಪ್ರಾಣಾಂತಿಕ ರೋಗದಂತಿರುತ್ತದೆ. ತೃಷ್ಣೆಯನ್ನು ತ್ಯಜಿಸಿದರೆ ಸುಖವುಂಟಾಗುತ್ತದೆ.
12268013a ಚಾರಿತ್ರಮಾತ್ಮನಃ ಪಶ್ಯಂಶ್ಚಂದ್ರಶುದ್ಧಮನಾಮಯಮ್|
12268013c ಧರ್ಮಾತ್ಮಾ ಲಭತೇ ಕೀರ್ತಿಂ ಪ್ರೇತ್ಯ ಚೇಹ ಯಥಾಸುಖಮ್||
ಆತ್ಮನಲ್ಲಿ ಧರ್ಮವಿರುವವನು ಶುದ್ಧ ಚಂದ್ರನಂತೆ ತನ್ನ ನಿರ್ಮಲ ಆತ್ಮನನ್ನು ಕಾಣುತ್ತಾನೆ. ಅವನು ಇಲ್ಲಿ ಕೀರ್ತಿಯನ್ನೂ ಮತ್ತು ಮರಣಾನಂತರ ಯಥಾಸುಖವನ್ನೂ ಪಡೆಯುತ್ತಾನೆ.”
12268014a ರಾಜ್ಞಸ್ತದ್ವಚನಂ ಶ್ರುತ್ವಾ ಪ್ರೀತಿಮಾನಭವದ್ದ್ವಿಜಃ|
12268014c ಪೂಜಯಿತ್ವಾ ಚ ತದ್ವಾಕ್ಯಂ ಮಾಂಡವ್ಯೋ ಮೋಕ್ಷಮಾಶ್ರಿತಃ||
ರಾಜನ ಮಾತನ್ನು ಕೇಳಿ ದ್ವಿಜನು ಪ್ರೀತನಾದನು. ಆ ಮಾತನ್ನು ಪೂಜಿಸಿ ಮಾಂಡವ್ಯನು ಮೋಕ್ಷಮಾರ್ಗವನ್ನಾಶ್ರಯಿಸಿದನು.”
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಮಾಂಡವ್ಯಜನಕಸಂವಾದೇ ಅಷ್ಟಷಷ್ಟ್ಯಧಿಕದ್ವಿಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಮಾಂಡವ್ಯಜನಕಸಂವಾದ ಎನ್ನುವ ಇನ್ನೂರಾಅರವತ್ತೆಂಟನೇ ಅಧ್ಯಾಯವು.
[1] ಆತ್ಮನಾ ಸೋಪಮೋ (ಭಾರತ ದರ್ಶನ).