ಕರ್ಣ ಪರ್ವ
Contents
Toggle೫೦
ಕರ್ಣನ ವಧೆಗಾಗಿ ಕೃಷ್ಣಾರ್ಜುನರು ರಣಭೂಮಿಗೆ ಪ್ರಸ್ಥಾನಗೊಂಡಿದುದು
ಕೃಷ್ಣನ ಸೂಚನೆಯಂತೆ ಅರ್ಜುನನು ಯುಧಿಷ್ಠಿರನ ಪಾದಗಳಿಗೆರೆಗಿ ಕ್ಷಮೆಯನ್ನು ಯಾಚಿಸಿದುದು (೧-೧೪). ಕರ್ಣನನ್ನು ಸಂಹರಿಸು ಎಂದು ಹೇಳಿ ಯುಧಿಷ್ಠಿರನು ಅರ್ಜುನನನ್ನು ಯುದ್ಧಕ್ಕೆ ಬೀಳ್ಕೊಂಡಿದುದು (೧೫-೩೪). ಕೃಷ್ಣಾರ್ಜುನರು ರಣಭೂಮಿಗೆ ಪ್ರಯಾಣಮಾಡುತ್ತಿದ್ದಾಗ ಆದ ಶಕುನಗಳು (೩೫-೪೭). ಅರ್ಜುನನ ಪರಾಕ್ರಮಗಳನ್ನು ವರ್ಣಿಸುತ್ತಾ ಕೃಷ್ಣನು ಯುದ್ಧದಲ್ಲಿ ಕರ್ಣನನ್ನು ಸಂಹರಿಸಲು ಅರ್ಜುನನಿಗೆ ಹೇಳಿದುದು (೪೮-೬೫).
08050001 ಸಂಜಯ ಉವಾಚ|
08050001a ಇತಿ ಸ್ಮ ಕೃಷ್ಣವಚನಾತ್ಪ್ರತ್ಯುಚ್ಚಾರ್ಯ ಯುಧಿಷ್ಠಿರಂ|
08050001c ಬಭೂವ ವಿಮನಾಃ ಪಾರ್ಥಃ ಕಿಂ ಚಿತ್ಕೃತ್ವೇವ ಪಾತಕಂ||
ಸಂಜಯನು ಹೇಳಿದನು: “ಹೀಗೆ ಕೃಷ್ಣನ ಮಾತಿನಂತೆ ಯುಧಿಷ್ಠಿರನನ್ನು ನಿಂದಿಸಿ ಮಾತನಾಡಿದ ಪಾರ್ಥನು ಏನೋ ಪಾತಕವನ್ನು ಮಾಡಿದ್ದೇನೆಂದು ವಿಮನಸ್ಕನಾದನು.
08050002a ತತೋಽಬ್ರವೀದ್ವಾಸುದೇವಃ ಪ್ರಹಸನ್ನಿವ ಪಾಂಡವಂ|
08050002c ಕಥಂ ನಾಮ ಭವೇದೇತದ್ಯದಿ ತ್ವಂ ಪಾರ್ಥ ಧರ್ಮಜಂ|
08050002e ಅಸಿನಾ ತೀಕ್ಷ್ಣಧಾರೇಣ ಹನ್ಯಾ ಧರ್ಮೇ ವ್ಯವಸ್ಥಿತಂ||
ಆಗ ವಾಸುದೇವನು ನಗುತ್ತಿರುವನೋ ಎನ್ನುವಂತೆ ಪಾಂಡವನಿಗೆ ಹೇಳಿದನು: “ಪಾರ್ಥ! ಒಂದುವೇಳೆ ನೀನು ಹರಿತವಾಗಿರುವ ಖಡ್ಗದಿಂದ ಧರ್ಮದಲ್ಲಿ ವ್ಯವಸ್ಥಿತನಾದ ಧರ್ಮಜನನ್ನು ಕೊಂದಿದ್ದರೆ ನಿನ್ನ ಸ್ಥಿತಿಯು ಏನಾಗುತ್ತಿತ್ತು?
08050003a ತ್ವಮಿತ್ಯುಕ್ತ್ವೈವ ರಾಜಾನಮೇವಂ ಕಶ್ಮಲಮಾವಿಶಃ|
08050003c ಹತ್ವಾ ತು ನೃಪತಿಂ ಪಾರ್ಥ ಅಕರಿಷ್ಯಃ ಕಿಮುತ್ತರಂ|
08050003e ಏವಂ ಸುದುರ್ವಿದೋ ಧರ್ಮೋ ಮಂದಪ್ರಜ್ಞೈರ್ವಿಶೇಷತಃ||
ರಾಜನನ್ನು ನೀನು ಎಂದು ಕರೆದುದರಿಂದಲೇ ಇಷ್ಟೊಂದು ದುಃಖಿತನಾಗಿರುವೆ. ಆದರೆ ಪಾರ್ಥ! ನೃಪತಿಯನ್ನು ನೀನು ಸಂಹರಿಸಿದ್ದೇ ಆದರೆ ಅನಂತರ ನೀನು ಏನು ಮಾಡುತ್ತಿದ್ದೆ? ವಿಶೇಷವಾಗಿ ಮಂದಪ್ರಜ್ಞರಿಗೆ ಧರ್ಮವನ್ನು ತಿಳಿಯುವುದು ಕಷ್ಟಸಾಧ್ಯವಾದುದು.
08050004a ಸ ಭವಾನ್ಧರ್ಮಭೀರುತ್ವಾದ್ಧ್ರುವಮೈಷ್ಯನ್ಮಹತ್ತಮಃ|
08050004c ನರಕಂ ಘೋರರೂಪಂ ಚ ಭ್ರಾತುರ್ಜ್ಯೇಷ್ಠಸ್ಯ ವೈ ವಧಾತ್||
ಧರ್ಮಭೀರುವಾಗಿರುವ ನಿನ್ನ ಜ್ಯೇಷ್ಠಭ್ರಾತನನ್ನು ವಧಿಸಿದ್ದರೆ ಖಂಡಿತವಾಗಿಯೂ ನೀನು ಘೋರರೂಪದ ಮಹಾನರಕವನ್ನು ಪಡೆಯುತ್ತಿದ್ದೆ!
08050005a ಸ ತ್ವಂ ಧರ್ಮಭೃತಾಂ ಶ್ರೇಷ್ಠಂ ರಾಜಾನಂ ಧರ್ಮಸಂಹಿತಂ|
08050005c ಪ್ರಸಾದಯ ಕುರುಶ್ರೇಷ್ಠಮೇತದತ್ರ ಮತಂ ಮಮ||
ನೀನು ಈಗ ಕುರುಶ್ರೇಷ್ಠ, ಧರ್ಮಸಂಹಿತ, ಧರ್ಮಭೃತರಲ್ಲಿ ಶ್ರೇಷ್ಠ ರಾಜನನ್ನು ಪ್ರಸನ್ನಗೊಳಿಸಬೇಕು ಎನ್ನುವುದು ನನ್ನ ಅಭಿಪ್ರಾಯ.
08050006a ಪ್ರಸಾದ್ಯ ಭಕ್ತ್ಯಾ ರಾಜಾನಂ ಪ್ರೀತಂ ಚೈವ ಯುಧಿಷ್ಠಿರಂ|
08050006c ಪ್ರಯಾಮಸ್ತ್ವರಿತಾ ಯೋದ್ಧುಂ ಸೂತಪುತ್ರರಥಂ ಪ್ರತಿ||
ಭಕ್ತಿ-ಪ್ರೀತಿಗಳಿಂದ ಯುಧಿಷ್ಠಿರನನ್ನು ಪ್ರಸನ್ನಗೊಳಿಸಿ ನಾವು ತ್ವರೆಮಾಡಿ ಯುದ್ಧಮಾಡಲು ಸೂತಪುತ್ರನ ರಥದ ಕಡೆ ಹೋಗೋಣ!
08050007a ಹತ್ವಾ ಸುದುರ್ಜಯಂ ಕರ್ಣಂ ತ್ವಮದ್ಯ ನಿಶಿತೈಃ ಶರೈಃ|
08050007c ವಿಪುಲಾಂ ಪ್ರೀತಿಮಾಧತ್ಸ್ವ ಧರ್ಮಪುತ್ರಸ್ಯ ಮಾನದ||
ಮಾನದ! ಸುದುರ್ಜಯ ಕರ್ಣನನ್ನು ಇಂದು ನಿಶಿತ ಶರಗಳಿಂದ ಸಂಹರಿಸಿ ಧರ್ಮಪುತ್ರನಿಗೆ ವಿಪುಲ ಸಂತೋಷವನ್ನು ನೀಡುವೆಯಂತೆ!
08050008a ಏತದತ್ರ ಮಹಾಬಾಹೋ ಪ್ರಾಪ್ತಕಾಲಂ ಮತಂ ಮಮ|
08050008c ಏವಂ ಕೃತೇ ಕೃತಂ ಚೈವ ತವ ಕಾರ್ಯಂ ಭವಿಷ್ಯತಿ||
ಮಹಾಬಾಹೋ! ಇದಕ್ಕೆ ಕಾಲವು ಪ್ರಾಪ್ತವಾಗಿದೆ ಎಂದು ನನಗನ್ನಿಸುತ್ತಿದೆ. ಹೀಗೆ ನೀನು ಮಾಡಿದರೆ ನಿನ್ನ ಕಾರ್ಯವು ಸಿದ್ಧಿಯಾಗುತ್ತದೆ.”
08050009a ತತೋಽರ್ಜುನೋ ಮಹಾರಾಜ ಲಜ್ಜಯಾ ವೈ ಸಮನ್ವಿತಃ|
08050009c ಧರ್ಮರಾಜಸ್ಯ ಚರಣೌ ಪ್ರಪೇದೇ ಶಿರಸಾನಘ||
ಮಹಾರಾಜ! ಅನಘ! ಆಗ ಅರ್ಜುನನು ಲಜ್ಜಾಸಮನ್ವಿತನಾಗಿ ಧರ್ಮರಾಜನ ಚರಣಗಳಲ್ಲಿ ಶಿರವನ್ನಿಟ್ಟು ನಮಸ್ಕರಿಸಿದನು.
08050010a ಉವಾಚ ಭರತಶ್ರೇಷ್ಠ ಪ್ರಸೀದೇತಿ ಪುನಃ ಪುನಃ|
08050010c ಕ್ಷಮಸ್ವ ರಾಜನ್ಯತ್ಪ್ರೋಕ್ತಂ ಧರ್ಮಕಾಮೇನ ಭೀರುಣಾ||
ಆ ಭರತಶ್ರೇಷ್ಠನು ಪುನಃ ಪುನಃ “ರಾಜನ್! ಧರ್ಮಕಾಮದಿಂದ ಭೀರುವಾದ ನಾನು ಹೇಳಿದುದನ್ನು ಕ್ಷಮಿಸಿ ಪ್ರಸೀದನಾಗು!” ಎಂದು ಹೇಳಿದನು.
08050011a ಪಾದಯೋಃ ಪತಿತಂ ದೃಷ್ಟ್ವಾ ಧರ್ಮರಾಜೋ ಯುಧಿಷ್ಠಿರಃ|
08050011c ಧನಂಜಯಮಮಿತ್ರಘ್ನಂ ರುದಂತಂ ಭರತರ್ಷಭ||
08050012a ಉತ್ಥಾಪ್ಯ ಭ್ರಾತರಂ ರಾಜಾ ಧರ್ಮರಾಜೋ ಧನಂಜಯಂ|
08050012c ಸಮಾಶ್ಲಿಷ್ಯ ಚ ಸಸ್ನೇಹಂ ಪ್ರರುರೋದ ಮಹೀಪತಿಃ||
ಪಾದಗಳಮೇಲೆ ಬಿದ್ದು ಅಳುತ್ತಿದ್ದ ಅಮಿತ್ರಘ್ನ ಧನಂಜಯನನ್ನು ನೋಡಿ ಭರತರ್ಷಭ ಧರ್ಮರಾಜ ಯುಧಿಷ್ಠಿರನು ತಮ್ಮ ಧನಂಜಯನನ್ನು ಮೇಲೆಬ್ಬಿಸಿದನು. ಮಹೀಪತಿ ರಾಜಾ ಧರ್ಮರಾಜನು ಅವನನ್ನು ಸ್ನೇಹಪೂರ್ವಕ ಆಲಂಗಿಸಿ ಅವನೊಡನೆ ರೋದಿಸಿದನು.
08050013a ರುದಿತ್ವಾ ತು ಚಿರಂ ಕಾಲಂ ಭ್ರಾತರೌ ಸುಮಹಾದ್ಯುತೀ|
08050013c ಕೃತಶೌಚೌ ನರವ್ಯಾಘ್ರೌ ಪ್ರೀತಿಮಂತೌ ಬಭೂವತುಃ||
ಬಹಳ ಹೊತ್ತು ರೋದಿಸಿ ಆ ಇಬ್ಬರು ಮಹಾದ್ಯುತಿ ನರವ್ಯಾಘ್ರ ಸಹೋದರರೂ ಶುಚಿಮಾಡಿಕೊಂಡು ಹರ್ಷಿತರಾದರು.
08050014a ತತ ಆಶ್ಲಿಷ್ಯ ಸ ಪ್ರೇಮ್ಣಾ ಮೂರ್ಧ್ನಿ ಚಾಘ್ರಾಯ ಪಾಂಡವಂ|
08050014c ಪ್ರೀತ್ಯಾ ಪರಮಯಾ ಯುಕ್ತಃ ಪ್ರಸ್ಮಯಂಶ್ಚಾಬ್ರವೀಜ್ಜಯಂ||
ಅನಂತರ ಪಾಂಡವನನ್ನು ಪ್ರೀತಿಯಿಂದ ಆಲಂಗಿಸಿ ನೆತ್ತಿಯನ್ನು ಆಘ್ರಾಣಿಸಿ ಪರಮ ಸಂತೋಷಯುಕ್ತನಾಗಿ ಮತ್ತು ವಿಸ್ಮಯನಾಗಿ ಜಯನಿಗೆ ಹೇಳಿದನು:
08050015a ಕರ್ಣೇನ ಮೇ ಮಹಾಬಾಹೋ ಸರ್ವಸೈನ್ಯಸ್ಯ ಪಶ್ಯತಃ|
08050015c ಕವಚಂ ಚ ಧ್ವಜಶ್ಚೈವ ಧನುಃ ಶಕ್ತಿರ್ಹಯಾ ಗದಾ|
08050015e ಶರೈಃ ಕೃತ್ತಾ ಮಹೇಷ್ವಾಸ ಯತಮಾನಸ್ಯ ಸಂಯುಗೇ||
“ಮಹಾಬಾಹೋ! ಸರ್ವಸೈನ್ಯವೂ ನೋಡುತ್ತಿದ್ದಂತೆಯೇ ರಣದಲ್ಲಿ ಪ್ರಯತ್ನಪಟ್ಟು ಯುದ್ಧಮಾಡುತ್ತಿದ್ದ ಮಹೇಷ್ವಾಸ ಕರ್ಣನು ಶರಗಳಿಂದ ನನ್ನ ಕವಚ, ಧ್ವಜ, ಧನುಸ್ಸು, ಶಕ್ತಿ, ಕುದುರೆ, ಮತ್ತು ಗದೆಗಳನ್ನು ಕತ್ತರಿಸಿದನು.
08050016a ಸೋಽಹಂ ಜ್ಞಾತ್ವಾ ರಣೇ ತಸ್ಯ ಕರ್ಮ ದೃಷ್ಟ್ವಾ ಚ ಫಲ್ಗುನ|
08050016c ವ್ಯವಸೀದಾಮಿ ದುಃಖೇನ ನ ಚ ಮೇ ಜೀವಿತಂ ಪ್ರಿಯಂ||
ಫಲ್ಗುನ! ಅವನನ್ನು ಮನಗಂಡು ಮತ್ತು ರಣದಲ್ಲಿ ಅವನ ಕರ್ಮವನ್ನು ನೋಡಿ ನಾನು ದುಃಖದಿಂದ ಕೃಶನಾಗುತ್ತಿದ್ದೇನೆ. ಜೀವಿತವಾಗಿರಲೂ ಇಷ್ಟವಾಗುತ್ತಿಲ್ಲ!
08050017a ತಮದ್ಯ ಯದಿ ವೈ ವೀರ ನ ಹನಿಷ್ಯಸಿ ಸೂತಜಂ|
08050017c ಪ್ರಾಣಾನೇವ ಪರಿತ್ಯಕ್ಷ್ಯೇ ಜೀವಿತಾರ್ಥೋ ಹಿ ಕೋ ಮಮ||
ವೀರ! ಒಂದು ವೇಳೆ ಇಂದು ನೀನು ಸೂತಜನನ್ನು ಸಂಹರಿಸದೇ ಇದ್ದರೆ ನಾನು ನನ್ನ ಪ್ರಾಣಗಳನ್ನೇ ಪರಿತ್ಯಜಿಸುತ್ತೇನೆ. ಮುಂದೆ ನಾನು ಜೀವಂತವಾಗಿರುವುದರ ಅರ್ಥವಾದರೂ ಏನಿದೆ?”
08050018a ಏವಮುಕ್ತಃ ಪ್ರತ್ಯುವಾಚ ವಿಜಯೋ ಭರತರ್ಷಭ|
08050018c ಸತ್ಯೇನ ತೇ ಶಪೇ ರಾಜನ್ಪ್ರಸಾದೇನ ತವೈವ ಚ|
08050018e ಭೀಮೇನ ಚ ನರಶ್ರೇಷ್ಠ ಯಮಾಭ್ಯಾಂ ಚ ಮಹೀಪತೇ||
ಭರತರ್ಷಭ! ಹೀಗೆ ಹೇಳಲು ವಿಜಯನು ಉತ್ತರಿಸಿದನು: “ರಾಜನ್! ನರಶ್ರೇಷ್ಠ! ಮಹೀಪತೇ! ಸತ್ಯ, ನಿನ್ನ ಪ್ರಸಾದ, ಭೀಮ ಮತ್ತು ಯಮಳರ ಮೇಲೆ ಆಣೆಯಿಟ್ಟು ಶಪಥಮಾಡುತ್ತಿದ್ದೇನೆ!
08050019a ಯಥಾದ್ಯ ಸಮರೇ ಕರ್ಣಂ ಹನಿಷ್ಯಾಮಿ ಹತೋಽಥ ವಾ|
08050019c ಮಹೀತಲೇ ಪತಿಷ್ಯಾಮಿ ಸತ್ಯೇನಾಯುಧಮಾಲಭೇ||
ಆಯುಧದ ಮೇಲೆ ಆಣೆಯಿಟ್ಟು ಹೇಳುತ್ತೇನೆ! ಇಂದು ಸಮರದಲ್ಲಿ ಕರ್ಣನನ್ನು ಕೊಲ್ಲುತ್ತೇನೆ ಅಥವಾ ಹತನಾಗಿ ಮಹೀತಲದಲ್ಲಿ ಬೀಳುತ್ತೇನೆ!”
08050020a ಏವಮಾಭಾಷ್ಯ ರಾಜಾನಮಬ್ರವೀನ್ಮಾಧವಂ ವಚಃ|
08050020c ಅದ್ಯ ಕರ್ಣಂ ರಣೇ ಕೃಷ್ಣ ಸೂದಯಿಷ್ಯೇ ನ ಸಂಶಯಃ|
08050020e ತದನುಧ್ಯಾಹಿ ಭದ್ರಂ ತೇ ವಧಂ ತಸ್ಯ ದುರಾತ್ಮನಃ||
ರಾಜನಿಗೆ ಹೀಗೆ ಹೇಳಿ ಅವನು ಮಾಧವನಿಗೆ ಈ ಮಾತನ್ನಾಡಿದನು: “ಕೃಷ್ಣ! ಇಂದು ರಣದಲ್ಲಿ ಕರ್ಣನನ್ನು ಸಂಹರಿಸುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ. ನಿನಗೆ ಮಂಗಳವಾಗಲಿ! ಆ ದುರಾತ್ಮನ ವಧೆಯನ್ನು ನೀನೂ ಕೂಡ ನಿರ್ಧರಿಸಿರುವಂತಿದೆ!”
08050021a ಏವಮುಕ್ತೋಽಬ್ರವೀತ್್ಪಾರ್ಥಂ ಕೇಶವೋ ರಾಜಸತ್ತಮ|
08050021c ಶಕ್ತೋಽಸ್ಮಿ ಭರತಶ್ರೇಷ್ಠ ಯತ್ನಂ ಕರ್ತುಂ ಯಥಾಬಲಂ||
ರಾಜಸತ್ತಮ! ಇದನ್ನು ಕೇಳಿದ ಕೇಶವನು ಪಾರ್ಥನಿಗೆ ಹೇಳಿದನು: “ಭರತಶ್ರೇಷ್ಠ! ಯಥಾಬಲ ಪ್ರಯತ್ನ ಮಾಡಲು ನೀನು ಶಕ್ತನಾಗಿರುವೆ!
08050022a ಏವಂ ಚಾಪಿ ಹಿ ಮೇ ಕಾಮೋ ನಿತ್ಯಮೇವ ಮಹಾರಥ|
08050022c ಕಥಂ ಭವಾನ್ರಣೇ ಕರ್ಣಂ ನಿಹನ್ಯಾದಿತಿ ಮೇ ಮತಿಃ||
ಮಹಾರಥ! ಇದೇ ನನ್ನ ನಿತ್ಯದ ಮನೋಕಾಮನೆಯೂ ಆಗಿದೆ. ನೀನು ರಣದಲ್ಲಿ ಹೇಗೆ ಕರ್ಣನನ್ನು ಕೊಲ್ಲುತ್ತೀಯೆ ಎನ್ನುವುದೂ ನನ್ನ ಅನುದಿನದ ಚಿಂತೆಯಾಗಿದೆ.”
08050023a ಭೂಯಶ್ಚೋವಾಚ ಮತಿಮಾನ್ಮಾಧವೋ ಧರ್ಮನಂದನಂ|
08050023c ಯುಧಿಷ್ಠಿರೇಮಂ ಬೀಭತ್ಸುಂ ತ್ವಂ ಸಾಂತ್ವಯಿತುಮರ್ಹಸಿ|
08050023e ಅನುಜ್ಞಾತುಂ ಚ ಕರ್ಣಸ್ಯ ವಧಾಯಾದ್ಯ ದುರಾತ್ಮನಃ||
ಮತಿಮಾನ್ ಮಾಧವನು ಧರ್ಮನಂದನನಿಗೆ ಪುನಃ ಇದನ್ನು ಹೇಳಿದನು: “ಯುಧಿಷ್ಠಿರ! ಈ ಬೀಭತ್ಸುವನ್ನು ನೀನು ಸಂತವಿಸಬೇಕಾಗಿದೆ. ದುರಾತ್ಮ ಕರ್ಣನ ವಧೆಗೆ ಇಂದು ಆಜ್ಞೆಯನ್ನೂ ನೀಡಬೇಕು!
08050024a ಶ್ರುತ್ವಾ ಹ್ಯಯಮಹಂ ಚೈವ ತ್ವಾಂ ಕರ್ಣಶರಪೀಡಿತಂ|
08050024c ಪ್ರವೃತ್ತಿಂ ಜ್ಞಾತುಮಾಯಾತಾವಿಹ ಪಾಂಡವನಂದನ||
ಪಾಂಡವನಂದನ! ನೀನು ಕರ್ಣನ ಶರಗಳಿಂದ ಪೀಡಿತನಾದೆ ಎಂದು ಕೇಳಿದ ಇವನು ಮತ್ತು ನಾನು ನೀನು ಹೇಗಿರುವೆಯೆಂದು ತಿಳಿದುಕೊಳ್ಳಲು ಇಲ್ಲಿಗೆ ಬಂದಿದ್ದೆವು.
08050025a ದಿಷ್ಟ್ಯಾಸಿ ರಾಜನ್ನಿರುಜೋ ದಿಷ್ಟ್ಯಾ ನ ಗ್ರಹಣಂ ಗತಃ|
08050025c ಪರಿಸಾಂತ್ವಯ ಬೀಭತ್ಸುಂ ಜಯಮಾಶಾಧಿ ಚಾನಘ||
ರಾಜನ್! ಅದೃಷ್ಟವಶಾತ್ ನೀನು ಅವನಿಂದ ಹತನಾಗಲಿಲ್ಲ. ಅದೃಷ್ಟವಶಾತ್ ನೀನು ಅವನ ಬಂಧಿಯಾಗಲಿಲ್ಲ. ಅನಘ! ಬೀಭತ್ಸುವನ್ನು ಸಂತವಿಸು ಮತ್ತು ಜಯದ ಆಶೀರ್ವಾದವನ್ನು ನೀಡು!”
08050026 ಯುಧಿಷ್ಠಿರ ಉವಾಚ|
08050026a ಏಹ್ಯೇಹಿ ಪಾರ್ಥ ಬೀಭತ್ಸೋ ಮಾಂ ಪರಿಷ್ವಜ ಪಾಂಡವ|
08050026c ವಕ್ತವ್ಯಮುಕ್ತೋಽಸ್ಮ್ಯಹಿತಂ ತ್ವಯಾ ಕ್ಷಾಂತಂ ಚ ತನ್ಮಯಾ||
ಯುಧಿಷ್ಠಿರನು ಹೇಳಿದನು: “ಬಾ ಪಾರ್ಥ ಬಾ! ಬೀಭತ್ಸೋ ಪಾಂಡವ! ನನ್ನನ್ನು ತಬ್ಬಿಕೋ! ನಿಂದ್ಯವಾದರೂ ಹಿತಕರವಾದ ಮಾತನ್ನೇ ನೀನು ಆಡಿರುವೆ. ನಾನು ಅವೆಲ್ಲವನ್ನೂ ಕ್ಷಮಿಸಿದ್ದೇನೆ!
08050027a ಅಹಂ ತ್ವಾಮನುಜಾನಾಮಿ ಜಹಿ ಕರ್ಣಂ ಧನಂಜಯ|
08050027c ಮನ್ಯುಂ ಚ ಮಾ ಕೃಥಾಃ ಪಾರ್ಥ ಯನ್ಮಯೋಕ್ತೋಽಸಿ ದಾರುಣಂ||
ನಾನು ನಿನಗೆ ಆಜ್ಞೆಮಾಡುತ್ತಿದ್ದೇನೆ! ಧನಂಜಯ! ಕರ್ಣನನ್ನು ಸಂಹರಿಸು! ಪಾರ್ಥ! ನಾನು ಹೇಳಿದ ದಾರುಣ ಮಾತುಗಳಿಂದ ಕೋಪಿಸಿಕೊಳ್ಳಬೇಡ!””
08050028 ಸಂಜಯ ಉವಾಚ|
08050028a ತತೋ ಧನಂಜಯೋ ರಾಜಂ ಶಿರಸಾ ಪ್ರಣತಸ್ತದಾ|
08050028c ಪಾದೌ ಜಗ್ರಾಹ ಪಾಣಿಭ್ಯಾಂ ಭ್ರಾತುರ್ಜ್ಯೇಷ್ಠಸ್ಯ ಮಾರಿಷ||
ಸಂಜಯನು ಹೇಳಿದನು: “ರಾಜನ್! ಮಾರಿಷ! ಆಗ ಧನಂಜಯನು ಜ್ಯೇಷ್ಠ ಭ್ರಾತನ ಪಾದಗಳನ್ನು ಕೈಗಳಿಂದ ಹಿಡಿದು ಶಿರಸಾ ಸಮಸ್ಕರಿಸಿದನು.
08050029a ಸಮುತ್ಥಾಪ್ಯ ತತೋ ರಾಜಾ ಪರಿಷ್ವಜ್ಯ ಚ ಪೀಡಿತಂ|
08050029c ಮೂರ್ಧ್ನ್ಯುಪಾಘ್ರಾಯ ಚೈವೈನಮಿದಂ ಪುನರುವಾಚ ಹ||
ಆಗ ರಾಜನು ಪೀಡಿತನಾಗಿದ್ದ ಅರ್ಜುನನನ್ನು ಮೇಲೆತ್ತಿ ನೆತ್ತಿಯನ್ನು ಆಘ್ರಾಣಿಸಿ ಪುನಃ ಇದನ್ನು ಹೇಳಿದನು:
08050030a ಧನಂಜಯ ಮಹಾಬಾಹೋ ಮಾನಿತೋಽಸ್ಮಿ ದೃಢಂ ತ್ವಯಾ|
08050030c ಮಾಹಾತ್ಮ್ಯಂ ವಿಜಯಂ ಚೈವ ಭೂಯಃ ಪ್ರಾಪ್ನುಹಿ ಶಾಶ್ವತಂ||
“ಧನಂಜಯ! ಮಹಾಬಾಹೋ! ನಿನ್ನ ದೃಢತೆಯಿಂದ ನನ್ನನ್ನು ಗೌರವಿಸಿರುವೆ! ಶಾಶ್ವತವಾದ ಮಹಾತ್ಮೆಯನ್ನೂ ವಿಜಯನ್ನೂ ಪಡೆಯುತ್ತೀಯೆ!”
08050031 ಅರ್ಜುನ ಉವಾಚ|
08050031a ಅದ್ಯ ತಂ ಪಾಪಕರ್ಮಾಣಂ ಸಾನುಬಂದಂ ರಣೇ ಶರೈಃ|
08050031c ನಯಾಂಯಂತಂ ಸಮಾಸಾದ್ಯ ರಾಧೇಯಂ ಬಲಗರ್ವಿತಂ||
ಅರ್ಜುನನು ಹೇಳಿದನು: “ಇಂದು ಆ ಪಾಪಕರ್ಮಿ ಬಲಗರ್ವಿತ ರಾಧೇಯನನ್ನು ರಣದಲ್ಲಿ ಎದುರಿಸಿ ಶರಗಳಿಂದ ಅವನನ್ನೂ ಅನುಯಾಯಿಗಳನ್ನೂ ಕಡೆಗಾಣಿಸುತ್ತೇನೆ!
08050032a ಯೇನ ತ್ವಂ ಪೀಡಿತೋ ಬಾಣೈರ್ದೃಢಮಾಯಮ್ಯ ಕಾರ್ಮುಕಂ|
08050032c ತಸ್ಯಾದ್ಯ ಕರ್ಮಣಃ ಕರ್ಣಃ ಫಲಂ ಪ್ರಾಪ್ಸ್ಯತಿ ದಾರುಣಂ||
ಕಾರ್ಮುಕವನ್ನು ದೃಢವಾಗಿ ಬಗ್ಗಿಸಿ ಬಾಣಗಳಿಂದ ನಿನ್ನನ್ನು ಪೀಡಿಸಿದ ಆ ಕರ್ಣನು ತನ್ನ ಕರ್ಮಗಳ ಧಾರುಣ ಫಲವನ್ನು ಇಂದು ಪಡೆಯುತ್ತಾನೆ.
08050033a ಅದ್ಯ ತ್ವಾಮಹಮೇಷ್ಯಾಮಿ ಕರ್ಣಂ ಹತ್ವಾ ಮಹೀಪತೇ|
08050033c ಸಭಾಜಯಿತುಮಾಕ್ರಂದಾದಿತಿ ಸತ್ಯಂ ಬ್ರವೀಮಿ ತೇ||
ಮಹೀಪತೇ! ಇಂದು ನಾನು ಕರ್ಣನನ್ನು ಕೊಂದೇ ನಿನ್ನ ಬಳಿ ಬರುತ್ತೇನೆ! ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ!
08050034a ನಾಹತ್ವಾ ವಿನಿವರ್ತೇಽಹಂ ಕರ್ಣಮದ್ಯ ರಣಾಜಿರಾತ್|
08050034c ಇತಿ ಸತ್ಯೇನ ತೇ ಪಾದೌ ಸ್ಪೃಶಾಮಿ ಜಗತೀಪತೇ||
ಜಗತೀಪತೇ! ಇಂದು ಕರ್ಣನನ್ನು ಸಂಹರಿಸದೇ ನಾನು ರಣರಂಗದಿಂದ ಹಿಂದಿರುಗುವುದಿಲ್ಲ. ನಿನ್ನ ಪಾದಗಳನ್ನು ಸ್ಪರ್ಷಿಸಿ ಆಣೆಯಿಟ್ಟು ಹೇಳುತ್ತೇನೆ!””
08050035 ಸಂಜಯ ಉವಾಚ|
08050035a ಪ್ರಸಾದ್ಯ ಧರ್ಮರಾಜಾನಂ ಪ್ರಹೃಷ್ಟೇನಾಂತರಾತ್ಮನಾ|
08050035c ಪಾರ್ಥಃ ಪ್ರೋವಾಚ ಗೋವಿಂದಂ ಸೂತಪುತ್ರವಧೋದ್ಯತಃ||
ಸಂಜಯನು ಹೇಳಿದನು: “ಧರ್ಮರಾಜನನ್ನು ಹೀಗೆ ಪ್ರಸನ್ನಗೊಳಿಸಿ ಒಳಗಿಂದೊಳಗೇ ಪ್ರಹೃಷ್ಟನಾಗಿ ಸೂತಪುತ್ರನ ವಧೆಗೆ ಸಿದ್ಧನಾದ ಪಾರ್ಥನು ಗೋವಿಂದನಿಗೆ ಹೇಳಿದನು:
08050036a ಕಲ್ಪ್ಯತಾಂ ಚ ರಥೋ ಭೂಯೋ ಯುಜ್ಯಂತಾಂ ಚ ಹಯೋತ್ತಮಾಃ|
08050036c ಆಯುಧಾನಿ ಚ ಸರ್ವಾಣಿ ಸಜ್ಜ್ಯಂತಾಂ ವೈ ಮಹಾರಥೇ||
“ಪುನಃ ರಥವು ಸಿದ್ಧವಾಗಲಿ. ಉತ್ತಮ ಹಯಗಳನ್ನು ಹೂಡಲಿ. ಸರ್ವ ಆಯುಧಗಳೂ ಮಹಾರಥದಲ್ಲಿ ಸಜ್ಜಾಗಿ ಇಡಲ್ಪಡಲಿ!
08050037a ಉಪಾವೃತ್ತಾಶ್ಚ ತುರಗಾಃ ಶಿಕ್ಷಿತಾಶ್ಚಾಶ್ವಸಾದಿನಃ|
08050037c ರಥೋಪಕರಣೈಃ ಸರ್ವೈರುಪಾಯಾಂತು ತ್ವರಾನ್ವಿತಾಃ||
ಕುದುರೆಸವಾರರಿಂದ ಪಳಗಿಸಲ್ಪಟ್ಟ ಮತ್ತು ತಿರುಗಾಡಿಸಲ್ಪಟ್ಟ ಕುದುರೆಗಳು ಸರ್ವ ರಥೋಪಕರಣಗಳೊಡನೆ ಬೇಗನೇ ಸಜ್ಜಾಗಲಿ!”
08050038a ಏವಮುಕ್ತೇ ಮಹಾರಾಜ ಫಲ್ಗುನೇನ ಮಹಾತ್ಮನಾ|
08050038c ಉವಾಚ ದಾರುಕಂ ಕೃಷ್ಣಃ ಕುರು ಸರ್ವಂ ಯಥಾಬ್ರವೀತ್|
08050038e ಅರ್ಜುನೋ ಭರತಶ್ರೇಷ್ಠಃ ಶ್ರೇಷ್ಠಃ ಸರ್ವಧನುಷ್ಮತಾಂ||
ಮಹಾರಾಜ! ಮಹಾತ್ಮ ಫಲ್ಗುನನು ಹೀಗೆ ಹೇಳಲು ಕೃಷ್ಣನು ದಾರುಕನಿಗೆ “ಸರ್ವಧನುಷ್ಮತರಲ್ಲಿ ಶ್ರೇಷ್ಠ ಭರತಶ್ರೇಷ್ಠ ಅರ್ಜುನನು ಹೇಳಿದಂತೆ ಎಲ್ಲವನ್ನೂ ಮಾಡು!” ಎಂದನು.
08050039a ಆಜ್ಞಪ್ತಸ್ತ್ವಥ ಕೃಷ್ಣೇನ ದಾರುಕೋ ರಾಜಸತ್ತಮ|
08050039c ಯೋಜಯಾಮಾಸ ಸ ರಥಂ ವೈಯಾಘ್ರಂ ಶತ್ರುತಾಪನಂ||
ರಾಜಸತ್ತಮ! ಕೃಷ್ಣನಿಂದ ಆಜ್ಞಾಪಿತನಾದ ದಾರುಕನು ವ್ಯಾಘ್ರಚರ್ಮದಿಂದ ಆಚ್ಛಾದಿತವಾದ ಮತ್ತು ಶತ್ರುಗಳನ್ನು ಸುಡಬಲ್ಲ ಆ ರಥವನ್ನು ಸಜ್ಜುಗೊಳಿಸಿದನು.
08050040a ಯುಕ್ತಂ ತು ರಥಮಾಸ್ಥಾಯ ದಾರುಕೇಣ ಮಹಾತ್ಮನಾ|
08050040c ಆಪೃಚ್ಚ್ಯ ಧರ್ಮರಾಜಾನಂ ಬ್ರಾಹ್ಮಣಾನ್ಸ್ವಸ್ತಿ ವಾಚ್ಯ ಚ|
08050040e ಸಮಂಗಲಸ್ವಸ್ತ್ಯಯನಮಾರುರೋಹ ರಥೋತ್ತಮಂ||
ಮಹಾತ್ಮ ದಾರುಕನಿಂದ ಸಿದ್ಧಗೊಳಿಸಲ್ಪಟ್ಟ ರಥವನ್ನು ನೋಡಿ ಅರ್ಜುನನು ಧರ್ಮರಾಜನ ಆಶೀರ್ವಾದ ಮತ್ತು ಬ್ರಾಹ್ಮಣರ ಸ್ವಸ್ತಿವಾಚನವನ್ನು ಕೇಳಿಸಿಕೊಂಡು ಸುಮಂಗಲಯುಕ್ತವಾದ ಆ ಉತ್ತಮ ರಥವನ್ನೇರಿದನು.
08050041a ತಸ್ಯ ರಾಜಾ ಮಹಾಪ್ರಾಜ್ಞೋ ಧರ್ಮರಾಜೋ ಯುಧಿಷ್ಠಿರಃ|
08050041c ಆಶಿಷೋಽಯುಂಕ್ತ ಪರಮಾ ಯುಕ್ತಾಃ ಕರ್ಣವಧಂ ಪ್ರತಿ||
ಮಹಾಪ್ರಾಜ್ಞ ಧರ್ಮರಾಜ ಯುಧಿಷ್ಠಿರನು ಅವನಿಗೆ ಕರ್ಣವಧೆಯ ಕುರಿತು ಪರಮ ಆಶೀರ್ವಚನಗಳನ್ನಿತ್ತನು.
08050042a ತಂ ಪ್ರಯಾಂತಂ ಮಹೇಷ್ವಾಸಂ ದೃಷ್ಟ್ವಾ ಭೂತಾನಿ ಭಾರತ|
08050042c ನಿಹತಂ ಮೇನಿರೇ ಕರ್ಣಂ ಪಾಂಡವೇನ ಮಹಾತ್ಮನಾ||
ಭಾರತ! ಆ ಮಹೇಷ್ವಾಸನು ಹೋಗುತ್ತಿರುವುದನ್ನು ನೋಡಿ ಭೂತಗಳು ಮಹಾತ್ಮ ಪಾಂಡವನಿಂದ ಕರ್ಣನು ಹತನಾದನೆಂದೇ ಭಾವಿಸಿದವು.
08050043a ಬಭೂವುರ್ವಿಮಲಾಃ ಸರ್ವಾ ದಿಶೋ ರಾಜನ್ಸಮಂತತಃ|
08050043c ಚಾಷಾಶ್ಚ ಶತಪತ್ರಾಶ್ಚ ಕ್ರೌಂಚಾಶ್ಚೈವ ಜನೇಶ್ವರ|
08050043e ಪ್ರದಕ್ಷಿಣಮಕುರ್ವಂತ ತದಾ ವೈ ಪಾಂಡುನಂದನಂ||
ರಾಜನ್! ಸುತ್ತಲೂ ಎಲ್ಲ ದಿಕ್ಕುಗಳೂ ವಿಮಲವಾದವು. ಜನೇಶ್ವರ! ನವಿಲುಗಳೂ, ಸಾರಸಗಳೂ ಮತ್ತು ಕ್ರೌಂಚಪಕ್ಷಿಗಳೂ ಪಾಂಡುನಂದನನ್ನು ಪ್ರದಕ್ಷಿಣೆ ಮಾಡಿ ಹಾರುತ್ತಿದ್ದವು.
08050044a ಬಹವಃ ಪಕ್ಷಿಣೋ ರಾಜನ್ಪುಂನಾಮಾನಃ ಶುಭಾಃ ಶಿವಾಃ|
08050044c ತ್ವರಯಂತೋಽರ್ಜುನಂ ಯುದ್ಧೇ ಹೃಷ್ಟರೂಪಾ ವವಾಶಿರೇ||
ರಾಜನ್! ಅನೇಕ ಶುಭವಾದ ಮಂಗಳಕರ ಗಂಡುಪಕ್ಷಿಗಳು ಅರ್ಜುನನನ್ನು ಯುದ್ಧಕ್ಕೆ ತ್ವರೆಮಾಡುತ್ತಿರುವವೋ ಎನ್ನುವಂತೆ ಸಂತೋಷದಿಂದ ಕೂಗುತ್ತಿದ್ದವು.
08050045a ಕಂಕಾ ಗೃಧ್ರಾ ವಡಾಶ್ಚೈವ ವಾಯಸಾಶ್ಚ ವಿಶಾಂ ಪತೇ|
08050045c ಅಗ್ರತಸ್ತಸ್ಯ ಗಚ್ಚಂತಿ ಭಕ್ಷ್ಯಹೇತೋರ್ಭಯಾನಕಾಃ||
ವಿಶಾಂಪತೇ! ಭಯಾನಕ ಹದ್ದುಗಳೂ, ರಣಹದ್ದುಗಳೂ, ಗಿಡುಗಗಳೂ ಮತ್ತು ಕಾಗೆಗಳು ಮಾಂಸದ ಸಲುವಾಗಿ ಅವನ ಮುಂದೆ ಮುಂದೆ ಹೋಗುತ್ತಿದ್ದವು.
08050046a ನಿಮಿತ್ತಾನಿ ಚ ಧನ್ಯಾನಿ ಪಾರ್ಥಸ್ಯ ಪ್ರಶಶಂಸಿರೇ|
08050046c ವಿನಾಶಮರಿಸೈನ್ಯಾನಾಂ ಕರ್ಣಸ್ಯ ಚ ವಧಂ ತಥಾ||
ಧನ್ಯ ನಿಮಿತ್ತಗಳು ಪಾರ್ಥನನ್ನು ಪ್ರಶಂಶಿಸಿದವು ಮತ್ತು ಹಾಗೆಯೇ ಅರಿಸೇನೆಗಳ ವಿನಾಶವನ್ನೂ ಕರ್ಣನ ವಧೆಯನ್ನೂ ಸೂಚಿಸಿದವು.
08050047a ಪ್ರಯಾತಸ್ಯಾಥ ಪಾರ್ಥಸ್ಯ ಮಹಾನ್ಸ್ವೇದೋ ವ್ಯಜಾಯತ|
08050047c ಚಿಂತಾ ಚ ವಿಪುಲಾ ಜಜ್ಞೇ ಕಥಂ ನ್ವೇತದ್ಭವಿಷ್ಯತಿ||
ಹಾಗೆ ಪಾರ್ಥನು ಪ್ರಯಾಣಿಸುತ್ತಿರುವಾಗ ಅವನಿಗೆ ಅತಿಯಾದ ಬೆವರುಂಟಾಯಿತು. ಇದು ಏಕೆ ಹೀಗಾಗುತ್ತಿದೆ ಎಂಬ ವಿಪುಲ ಚಿಂತೆಯೂ ಅವನಿಗುಂಟಾಯಿತು.
08050048a ತತೋ ಗಾಂಡೀವಧನ್ವಾನಮಬ್ರವೀನ್ಮಧುಸೂದನಃ|
08050048c ದೃಷ್ಟ್ವಾ ಪಾರ್ಥಂ ತದಾಯಸ್ತಂ ಚಿಂತಾಪರಿಗತಂ ತದಾ||
ಹಾಗೆ ಚಿಂತಾಪರನಾಗಿದ್ದ ಪಾರ್ಥನನ್ನು ನೋಡಿ ಮಧುಸೂದನನು ಗಾಂಡೀವಧನ್ವಿಗೆ ಹೀಗೆ ಹೇಳಿದನು:
08050049a ಗಾಂಡೀವಧನ್ವನ್ಸಂಗ್ರಾಮೇ ಯೇ ತ್ವಯಾ ಧನುಷಾ ಜಿತಾಃ|
08050049c ನ ತೇಷಾಂ ಮಾನುಷೋ ಜೇತಾ ತ್ವದನ್ಯ ಇಹ ವಿದ್ಯತೇ||
“ಗಾಂಡೀವಧನ್ವಿಯೇ! ನಿನ್ನ ಧನುಸ್ಸಿನಿಂದ ನೀನು ಸಂಗ್ರಾಮದಲ್ಲಿ ಯಾರನ್ನು ಜಯಿಸಿದ್ದೀಯೋ ಅವರನ್ನು ಅನ್ಯ ಮಾನವರು ಜಯಿಸಲು ಸಾಧ್ಯವಾಗುತ್ತಿರಲಿಲ್ಲ.
08050050a ದೃಷ್ಟಾ ಹಿ ಬಹವಃ ಶೂರಾಃ ಶಕ್ರತುಲ್ಯಪರಾಕ್ರಮಾಃ|
08050050c ತ್ವಾಂ ಪ್ರಾಪ್ಯ ಸಮರೇ ವೀರಂ ಯೇ ಗತಾಃ ಪರಮಾಂ ಗತಿಂ||
ಶಕ್ರತುಲ್ಯಪರಾಕ್ರಮವುಳ್ಳ ಅನೇಕ ಶೂರರು ಸಮರದಲ್ಲಿ ನಿನ್ನನ್ನು ಎದುರಿಸಿ ವೀರರ ಪರಮ ಗತಿಯನ್ನು ಹೊಂದಿರುವುದನ್ನು ನೋಡಿದ್ದೇವೆ!
08050051a ಕೋ ಹಿ ದ್ರೋಣಂ ಚ ಭೀಷ್ಮಂ ಚ ಭಗದತ್ತಂ ಚ ಮಾರಿಷ|
08050051c ವಿಂದಾನುವಿಂದಾವಾವಂತ್ಯೌ ಕಾಂಬೋಜಂ ಚ ಸುದಕ್ಷಿಣಂ||
08050052a ಶ್ರುತಾಯುಷಂ ಮಹಾವೀರ್ಯಮಚ್ಯುತಾಯುಷಮೇವ ಚ|
08050052c ಪ್ರತ್ಯುದ್ಗಮ್ಯ ಭವೇತ್ ಕ್ಷೇಮೀ ಯೋ ನ ಸ್ಯಾತ್ತ್ವಮಿವ ಕ್ಷಮೀ||
ಮಾರಿಷ! ದ್ರೋಣ, ಭೀಷ್ಮ, ಭಗದತ್ತ, ಅವಂತಿಯ ವಿಂದಾನುವಿಂದರು, ಕಾಂಬೋಜದ ಸುದಕ್ಷಿಣ, ಮಯಾವೀರ್ಯ ಶ್ರುತಾಯುಷ ಮತ್ತು ಅಚ್ಯುತಾಯುಷರನ್ನು ಎದುರಿಸಿ ನೀನಲ್ಲದೇ ಬೇರೆ ಯಾರಿಗೆ ತಾನೇ ಕ್ಷೇಮದಿಂದ ಇರಲು ಸಾಧ್ಯವಾಗುತ್ತಿತ್ತು?
08050053a ತವ ಹ್ಯಸ್ತ್ರಾಣಿ ದಿವ್ಯಾನಿ ಲಾಘವಂ ಬಲಂ ಏವ ಚ|
08050053c ವೇಧಃ ಪಾತಶ್ಚ ಲಕ್ಷಶ್ಚ ಯೋಗಶ್ಚೈವ ತವಾರ್ಜುನ|
08050053e ಅಸಮ್ಮೋಹಶ್ಚ ಯುದ್ಧೇಷು ವಿಜ್ಞಾನಸ್ಯ ಚ ಸಂನತಿಃ||
ನಿನ್ನಲ್ಲಿ ದಿವ್ಯಾಸ್ತ್ರಗಳು, ಲಾಘವವೂ, ಬಲವೂ ಇವೆ. ಅರ್ಜುನ! ಲಕ್ಷ್ಯಭೇದನ ಪಾತನಗಳು ನಿನಗೆ ಚೆನ್ನಾಗಿ ತಿಳಿದಿವೆ. ಯುದ್ಧದಲ್ಲಿ ನೀನು ಸಮ್ಮೋಹನನಾಗುವುದಿಲ್ಲ. ಮತ್ತು ನಿನ್ನಲ್ಲಿ ವಿಶೇಷ ಜ್ಞಾನವಿದೆ.
08050054a ಭವಾನ್ದೇವಾಸುರಾನ್ಸರ್ವಾನ್ ಹನ್ಯಾತ್ಸಹಚರಾಚರಾನ್|
08050054c ಪೃಥಿವ್ಯಾಂ ಹಿ ರಣೇ ಪಾರ್ಥ ನ ಯೋದ್ಧಾ ತ್ವತ್ಸಮಃ ಪುಮಾನ್||
ಪಾರ್ಥ! ನೀನು ದೇವಾಸುರರನ್ನೂ ಸಚರಾಚರ ಸರ್ವವನ್ನೂ ಪೃಥ್ವಿಯನ್ನೂ ನಾಶಗೊಳಿಸಬಲ್ಲೆ. ರಣದಲ್ಲಿ ನಿನ್ನ ಸಮನಾದ ಪುರುಷ ಯೋಧನು ಇಲ್ಲ!
08050055a ಧನುರ್ಗ್ರಹಾ ಹಿ ಯೇ ಕೇ ಚಿತ್ ಕ್ಷತ್ರಿಯಾ ಯುದ್ಧದುರ್ಮದಾಃ|
08050055c ಆ ದೇವಾತ್ತ್ವತ್ಸಮಂ ತೇಷಾಂ ನ ಪಶ್ಯಾಮಿ ಶೃಣೋಮಿ ವಾ||
ದೇವತೆಗಳ ಪರ್ಯಂತವಾಗಿ ಯುದ್ಧದುರ್ಮದರಾದ ಧನುಸ್ಸನ್ನು ಹಿಡಿದಿರುವ ಕ್ಷತ್ರಿಯರೇನೋ ಇದ್ದಾರೆ. ಆದರೆ ಅವರಲ್ಲಿ ನಿನ್ನ ಸಮನಾಗಿರುವವರನ್ನು ನಾನು ನೋಡಿಲ್ಲ. ಕೇಳಿಯೂ ಇಲ್ಲ.
08050056a ಬ್ರಹ್ಮಣಾ ಚ ಪ್ರಜಾಃ ಸೃಷ್ಟಾ ಗಾಂಡೀವಂ ಚ ಮಹಾದ್ಭುತಂ|
08050056c ಯೇನ ತ್ವಂ ಯುಧ್ಯಸೇ ಪಾರ್ಥ ತಸ್ಮಾನ್ನಾಸ್ತಿ ತ್ವಯಾ ಸಮಃ||
ಬ್ರಹ್ಮನಿಂದ ಪ್ರಜೆಗಳೂ ಮತ್ತು ಈ ಮಹಾದ್ಭುತವಾದ ಗಾಂಡೀವವೂ ಸೃಷ್ಟಿಸಲ್ಪಟ್ಟವು. ಪಾರ್ಥ! ಅದರಿಂದ ನೀನು ಯುದ್ಧಮಾಡುತ್ತಿರುವೆ! ನಿನ್ನ ಸಮನಾಗಿರುವವರು ಯಾರೂ ಇಲ್ಲ!
08050057a ಅವಶ್ಯಂ ತು ಮಯಾ ವಾಚ್ಯಂ ಯತ್ಪಥ್ಯಂ ತವ ಪಾಂಡವ|
08050057c ಮಾವಮಂಸ್ಥಾ ಮಹಾಬಾಹೋ ಕರ್ಣಮಾಹವಶೋಭಿನಂ||
ಆದರೂ ಪಾಂಡವ! ನಿನ್ನ ಹಿತದಲ್ಲಿ ನಾನು ಈ ಮಾತನ್ನು ಹೇಳುವುದು ಅವಶ್ಯಕವಾಗಿದೆ. ಮಹಾಬಾಹೋ! ಆಹವಶೋಭೀ ಕರ್ಣನನ್ನು ಅವಗಣಿಸಬೇಡ!
08050058a ಕರ್ಣೋ ಹಿ ಬಲವಾನ್ ಧೃಷ್ಟಃ ಕೃತಾಸ್ತ್ರಶ್ಚ ಮಹಾರಥಃ|
08050058c ಕೃತೀ ಚ ಚಿತ್ರಯೋಧೀ ಚ ದೇಶೇ ಕಾಲೇ ಚ ಕೋವಿದಃ||
ಏಕೆಂದರೆ ಕರ್ಣನು ಬಲವಾನನು. ಅಭಿಮಾನಿಯು. ಅಸ್ತ್ರವಿದನು. ಮಹಾರಥನು. ಯುದ್ಧಕುಶಲನು. ವಿತ್ರಯೋಧಿಯು. ಮತ್ತು ದೇಶ-ಕಾಲಗಳ ಕೋವಿದನು.
08050059a ತೇಜಸಾ ವಹ್ನಿಸದೃಶೋ ವಾಯುವೇಗಸಮೋ ಜವೇ|
08050059c ಅಂತಕಪ್ರತಿಮಃ ಕ್ರೋಧೇ ಸಿಂಹಸಂಹನನೋ ಬಲೀ||
ತೇಜಸ್ಸಿನಲ್ಲಿ ವಹ್ನಿಸದೃಶನು. ವೇಗದಲ್ಲಿ ವಾಯುವಿನ ವೇಗಸಮನು. ಕ್ರೋಧದಲ್ಲಿ ಅಂತಕನಂತೆ ಮತ್ತು ಬಲದಲ್ಲಿ ಸಿಂಹದಂತೆ.
08050060a ಅಯೋರತ್ನಿರ್ಮಹಾಬಾಹುರ್ವ್ಯೂಢೋರಸ್ಕಃ ಸುದುರ್ಜಯಃ|
08050060c ಅತಿಮಾನೀ ಚ ಶೂರಶ್ಚ ಪ್ರವೀರಃ ಪ್ರಿಯದರ್ಶನಃ||
ಎತ್ತರವಾಗಿರುವನು. ಮಾಹಾಬಾಹು. ವಿಶಾಲ ಎದೆಯುಳ್ಳವನು. ಜಯಿಸಲು ಕಷ್ಟಕರನಾದವನು. ಅತಿಮಾನಿನಿಯು. ಶೂರ, ಪ್ರವೀರ ಮತ್ತು ನೋಡಲು ಸುಂದರನು.
08050061a ಸರ್ವೈರ್ಯೋಧಗುಣೈರ್ಯುಕ್ತೋ ಮಿತ್ರಾಣಾಮಭಯಂಕರಃ|
08050061c ಸತತಂ ಪಾಂಡವದ್ವೇಷೀ ಧಾರ್ತರಾಷ್ಟ್ರಹಿತೇ ರತಃ||
ಯೋಧನ ಸರ್ವ ಗುಣಗಳಿಂದಲೂ ಕೂಡಿದವನು. ಮಿತ್ರರಿಗೆ ಅಭಯವನ್ನುಂಟುಮಾಡುವವನು. ಸತತವೂ ಪಾಂಡವದ್ವೇಷಿಯಾಗಿರುವನು ಮತ್ತು ಧಾರ್ತರಾಷ್ಟ್ರರ ಹಿತದಲ್ಲಿ ನಿರತನಾಗಿರುವವನು.
08050062a ಸರ್ವೈರವಧ್ಯೋ ರಾಧೇಯೋ ದೇವೈರಪಿ ಸವಾಸವೈಃ|
08050062c ಋತೇ ತ್ವಾಮಿತಿ ಮೇ ಬುದ್ಧಿಸ್ತ್ವಮದ್ಯ ಜಹಿ ಸೂತಜಂ||
ರಾಧೇಯನು ನಿನ್ನನ್ನು ಮಾತ್ರ ಬಿಟ್ಟು ಎಲ್ಲರಿಂದಲೂ, ವಾಸವನೊಂದಿಗೆ ದೇವತೆಗಳಿಂದಲೂ, ಅವಧ್ಯನು ಎಂದು ನನ್ನ ಯೋಚನೆ. ಇಂದು ಸೂತಜನನ್ನು ಕೊಲ್ಲು!
08050063a ದೇವೈರಪಿ ಹಿ ಸಂಯತ್ತೈರ್ಬಿಭ್ರದ್ಭಿರ್ಮಾಂಸಶೋಣಿತಂ|
08050063c ಅಶಕ್ಯಃ ಸಮರೇ ಜೇತುಂ ಸರ್ವೈರಪಿ ಯುಯುತ್ಸುಭಿಃ||
ಮಾಂಸಶೋಣಿತಯುಕ್ತವಾದ ಶರೀರಗಳನ್ನು ಧರಿಸಿ ದೇವತೆಗಳು ಯುದ್ಧೋತ್ಸುಕರಾಗಿ ಬಂದರೂ ಸಮರದಲ್ಲಿ ಅವರೆಲ್ಲರಿಂದ ಇವನನ್ನು ಜಯಿಸಲು ಶಕ್ಯವಾಗುವುದಿಲ್ಲ.
08050064a ದುರಾತ್ಮಾನಂ ಪಾಪಮತಿಂ ನೃಶಂಸಂ
ದುಷ್ಟಪ್ರಜ್ಞಂ ಪಾಂಡವೇಯೇಷು ನಿತ್ಯಂ|
08050064c ಹೀನಸ್ವಾರ್ಥಂ ಪಾಂಡವೇಯೈರ್ವಿರೋಧೇ
ಹತ್ವಾ ಕರ್ಣಂ ಧಿಷ್ಠಿತಾರ್ಥೋ ಭವಾದ್ಯ||
ಇಂದು ಆ ದುರಾತ್ಮನನ್ನೂ, ಪಾಪಮತಿಯನ್ನೂ, ನೃಶಂಸನನ್ನೂ, ನಿತ್ಯವೂ ಪಾಂಡವರೊಡನೆ ದುಷ್ಟನಾಗಿ ನಡೆದುಕೊಂಡುಬಂದಿರುವ, ಹೀನಸ್ವಾರ್ಥಿ, ಪಾಂಡವೇಯರ ವಿರೋಧೀ ಕರ್ಣನನ್ನು ಸಂಹರಿಸಿ ನಿನ್ನ ಮನೋರಥವನ್ನು ಪೂರೈಸಿಕೋ!
08050065a ವೀರಂ ಮನ್ಯತ ಆತ್ಮಾನಂ ಯೇನ ಪಾಪಃ ಸುಯೋಧನಃ|
08050065c ತಮದ್ಯ ಮೂಲಂ ಪಾಪಾನಾಂ ಜಯ ಸೌತಿಂ ಧನಂಜಯ||
ಧನಂಜಯ! ಯಾರಿಂದಾಗಿ ಸುಯೋಧನನು ತನ್ನನ್ನು ವೀರನೆಂದು ತಿಳಿದುಕೊಂಡಿದ್ದಾನೋ ಅವನ ಪಾಪಗಳ ಮೂಲ ಸೌತಿಯನ್ನು ಇಂದು ಜಯಿಸು!””
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಕೃಷ್ಣಾರ್ಜುನಸಂವಾದೇ ಪಂಚಾಶತ್ತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಕರ್ಣಾರ್ಜುನಸಂವಾದ ಎನ್ನುವ ಐವತ್ತನೇ ಅಧ್ಯಾಯವು.
