ಕುಂಡಲಾಹರಣ: ಇಂದ್ರನು ಕರ್ಣನ ಕವಚ-ಕುಂಡಲಗಳನ್ನು ಬೇಡಿ ಪಡೆದುದು
[spacer height=”40px”] ಕುಂಡಲಾಹರಣ: ಇಂದ್ರನು ಕರ್ಣನ ಕವಚ-ಕುಂಡಲಗಳನ್ನು ಬೇಡಿ ಪಡೆದುದು ಹನ್ನೆರಡನೆಯ ವರ್ಷವು ಮುಗಿದು ಹದಿಮೂರನೆಯದು ಕಾಲಿಡುತ್ತಿರುವಾಗ ಪಾಂಡವರಿಗೆ ಹಿತವನ್ನುಂಟುಮಾಡಲೋಸುಗ ಇಂದ್ರನು ಕರ್ಣನಲ್ಲಿ ಭಿಕ್ಷೆಬೇಡಲು ಹೊರಟನು. ಕರ್ಣನ ಕುಂಡಲಗಳ ಕುರಿತು ಇಂದ್ರನು ಮಾಡಿದ ಉಪಾಯವನ್ನು ತಿಳಿದ ಸೂರ್ಯನು ಕರ್ಣನ ಬಳಿ ಬಂದನು. ಕರ್ಣನು ಸುಖಮಯ ಹಾಸಿಗೆಯ ಮೇಲೆ ವಿಶ್ವಾಸದಿಂದ ಮಲಗಿಕೊಂಡಿರುವಾಗ ರಾತ್ರಿಯ ಕೊನೆಯಲ್ಲಿ ಪುತ್ರಸ್ನೇಹ ಮತ್ತು ಕೃಪೆಗಳಿಂದ ಮುಳುಗಿಹೋಗಿದ್ದ ಸೂರ್ಯನು ವೇದವಿದ ರೂಪವಂತ ಬ್ರಾಹ್ಮಣನ ವೇಷದಲ್ಲಿ ಸ್ವಪ್ನದಲ್ಲಿ ಅವನಿಗೆ ಕಾಣಿಸಿಕೊಂಡನು.…