Anushasana Parva: Chapter 94

ಅನುಶಾಸನ ಪರ್ವ: ದಾನಧರ್ಮ ಪರ್ವ

೯೪

ಪ್ರತಿಗ್ರಹದೋಷಗಳು

ಪ್ರತಿಗ್ರಹದೋಷದ ಕುರಿತಾದ ವೃಷಾದರ್ಭಿ ಮತ್ತು ಸಪ್ತರ್ಷಿಗಳ ಕಥೆ (೧-೪೪).

13094001 ಯುಧಿಷ್ಠಿರ ಉವಾಚ|

13094001a ಬ್ರಾಹ್ಮಣೇಭ್ಯಃ ಪ್ರಯಚ್ಚಂತಿ ದಾನಾನಿ ವಿವಿಧಾನಿ ಚ|

13094001c ದಾತೃಪ್ರತಿಗ್ರಹೀತ್ರೋರ್ವಾ[1] ಕೋ ವಿಶೇಷಃ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಬ್ರಾಹ್ಮಣರಿಗೆ ವಿವಿಧ ದಾನಗಳನ್ನು ಕೊಡುತ್ತಾರೆ. ದಾನವನ್ನು ಕೊಡುವವನು ಅಥವಾ ದಾನವನ್ನು ಸ್ವೀಕರಿಸುವನು ಇವರಲ್ಲಿ ಯಾರು ವಿಶಿಷ್ಠನು?”

13094002 ಭೀಷ್ಮ ಉವಾಚ|

13094002a ಸಾಧೋರ್ಯಃ ಪ್ರತಿಗೃಹ್ಣೀಯಾತ್ತಥೈವಾಸಾಧುತೋ ದ್ವಿಜಃ|

13094002c ಗುಣವತ್ಯಲ್ಪದೋಷಃ ಸ್ಯಾನ್ನಿರ್ಗುಣೇ ತು ನಿಮಜ್ಜತಿ||

ಭೀಷ್ಮನು ಹೇಳಿದನು: “ಬ್ರಾಹ್ಮಣನು ಗುಣಸಂಪನ್ನ ಸಾಧುವಿನಿಂದಲೂ ಗುಣಹೀನ ಅಸಾಧುವಿನಿಂದಲೂ ದಾನವನ್ನು ಸ್ವೀಕರಿಸುತ್ತಾನೆ. ಗುಣಸಂಪನ್ನನಿಂದ ದಾನವನ್ನು ಸ್ವೀಕರಿಸಿದರೆ ಸ್ವಲ್ಪವೇ ದೋಷವು ಅವನಿಗೆ ಪ್ರಾಪ್ತವಾಗುತ್ತದೆ. ಗುಣಹೀನನಿಂದ ದಾನವನ್ನು ತೆಗೆದುಕೊಂಡರೆ ಪಾಪದಲ್ಲಿ ಮುಳುಗಿಹೋಗುತ್ತಾನೆ.

13094003a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

13094003c ವೃಷಾದರ್ಭೇಶ್ಚ ಸಂವಾದಂ ಸಪ್ತರ್ಷೀಣಾಂ ಚ ಭಾರತ||

ಭಾರತ! ಈ ವಿಷಯದಲ್ಲಿ ಪುರಾತನ ಇತಿಹಾಸವಾದ ವೃಷಾದರ್ಭಿ ಮತ್ತು ಸಪ್ತರ್ಷಿಗಳ ಸಂವಾದವನ್ನು ಉದಾಹರಿಸುತ್ತಾರೆ.

13094004a ಕಶ್ಯಪೋಽತ್ರಿರ್ವಸಿಷ್ಠಶ್ಚ ಭರದ್ವಾಜೋಽಥ ಗೌತಮಃ|

13094004c ವಿಶ್ವಾಮಿತ್ರೋ ಜಮದಗ್ನಿಃ ಸಾಧ್ವೀ ಚೈವಾಪ್ಯರುಂಧತೀ||

13094005a ಸರ್ವೇಷಾಮಥ ತೇಷಾಂ ತು ಗಂಡಾಭೂತ್ಕರ್ಮಕಾರಿಕಾ|

13094005c ಶೂದ್ರಃ ಪಶುಸಖಶ್ಚೈವ ಭರ್ತಾ ಚಾಸ್ಯಾ ಬಭೂವ ಹ||

13094006a ತೇ ವೈ ಸರ್ವೇ ತಪಸ್ಯಂತಃ ಪುರಾ ಚೇರುರ್ಮಹೀಮಿಮಾಮ್|

13094006c ಸಮಾಧಿನೋಪಶಿಕ್ಷಂತೋ ಬ್ರಹ್ಮಲೋಕಂ ಸನಾತನಮ್||

ಒಮ್ಮೆ ಕಶ್ಯಪ, ಅತ್ರಿ, ವಸಿಷ್ಠ, ಭರದ್ವಾಜ, ಗೌತಮ, ವಿಶ್ವಾಮಿತ್ರ, ಜಮದಗ್ನಿ ಮತ್ತು ಸಾಧ್ವೀ ಅರುಂಧತೀ – ಇವರು ಸಮಾಧಿಯ ಮೂಲಕ ಸನಾತನ ಬ್ರಹ್ಮಲೋಕವನ್ನು ಪಡೆಯುವ ಇಚ್ಛೆಯಿಂದ ತಪಸ್ಸುಮಾಡುತ್ತಾ ಭೂಲೋಕದಲ್ಲಿ ಸಂಚರಿಸುತ್ತಿದ್ದರು. ಗಂಡಾ ಎಂಬ ಸ್ತ್ರೀಯು ಅವರೆಲ್ಲರ ಸೇವೆಗೈಯುತ್ತಿದ್ದಳು. ಅವಳ ಪತಿ ಪಶುಸಖನೆಂಬ ಶೂದ್ರನೂ ಕೂಡ ಸಪ್ತರ್ಷಿಗಳ ಜೊತೆಯಲ್ಲಿಯೇ ಇದ್ದುಕೊಂಡು ಅವರ ಸೇವೆಗೈಯುತ್ತಿದ್ದನು.

13094007a ಅಥಾಭವದನಾವೃಷ್ಟಿರ್ಮಹತೀ ಕುರುನಂದನ|

13094007c ಕೃಚ್ಚ್ರಪ್ರಾಣೋಽಭವದ್ಯತ್ರ ಲೋಕೋಽಯಂ ವೈ ಕ್ಷುಧಾನ್ವಿತಃ||

ಕುರುನಂದನ! ಆಗ ಮಹಾ ಅನಾವುಷ್ಟಿಯುಂಟಾಯಿತು. ಆಗ ಈ ಲೋಕದಲ್ಲಿ ಹಸಿವೆಯಿಂದ ಬಳಲಿದ್ದ ಜನರು ಬಹು ಕಷ್ಟದಿಂದ ಪ್ರಾಣಗಳನ್ನು ಧರಿಸಿಕೊಂಡಿದ್ದರು.

13094008a ಕಸ್ಮಿಂಶ್ಚಿಚ್ಚ ಪುರಾ ಯಜ್ಞೇ ಯಾಜ್ಯೇನ ಶಿಬಿಸೂನುನಾ|

13094008c ದಕ್ಷಿಣಾರ್ಥೇಽಥ ಋತ್ವಿಗ್ಭ್ಯೋ ದತ್ತಃ ಪುತ್ರೋ ನಿಜಃ ಕಿಲ||

ಹಿಂದೆ ಶಿಬಿಯ ಮಗ ಶೈಬ್ಯನು ಯಾವುದೋ ಒಂದು ಯಜ್ಞದಲ್ಲಿ ಯಜ್ಞದಕ್ಷಿಣೆಯನ್ನಾಗಿ ತನ್ನ ಮಗನನ್ನೇ ಋತ್ವಿಜರಿಗೆ ಕೊಟ್ಟಿದ್ದನಷ್ಟೇ?

13094009a ತಸ್ಮಿನ್ಕಾಲೇಽಥ ಸೋಽಲ್ಪಾಯುರ್ದಿಷ್ಟಾಂತಮಗಮತ್ಪ್ರಭೋ|

13094009c ತೇ ತಂ ಕ್ಷುಧಾಭಿಸಂತಪ್ತಾಃ ಪರಿವಾರ್ಯೋಪತಸ್ಥಿರೇ||

ಪ್ರಭೋ! ದುರ್ಭಿಕ್ಷದ ಆ ಸಮಯದಲ್ಲಿ ಅಲ್ಪಾಯುವಾಗಿದ್ದ ರಾಜಕುಮಾರನು ಮರಣಹೊಂದಿದನು. ಹಸಿವೆಯಿಂದ ಸಂತಪ್ತರಾಗಿದ್ದ ಸಪ್ತರ್ಷಿಗಳು ಅವನ ಶವವನ್ನು ಸುತ್ತುವರೆದು ಕುಳಿತುಕೊಂಡರು.

13094010a ಯಾಜ್ಯಾತ್ಮಜಮಥೋ ದೃಷ್ಟ್ವಾ ಗತಾಸುಮೃಷಿಸತ್ತಮಾಃ|

13094010c ಅಪಚಂತ ತದಾ ಸ್ಥಾಲ್ಯಾಂ ಕ್ಷುಧಾರ್ತಾಃ ಕಿಲ ಭಾರತ||

ಭಾರತ! ಹಸಿವೆಯಿಂದ ಬಳಲಿದ್ದ ಅವರು ಯಜ್ಞದ ಯಜಮಾನನ ಮಗನು ಸತ್ತಿರುವುದನ್ನು ನೋಡಿ ಅವನನ್ನು ಒಂದು ಪಾತ್ರೆಯಲ್ಲಿ ಹಾಕಿ ಬೇಯಿಸಿದರು.

13094011a ನಿರಾದ್ಯೇ ಮರ್ತ್ಯಲೋಕೇಽಸ್ಮಿನ್ನಾತ್ಮಾನಂ ತೇ ಪರೀಪ್ಸವಃ|

13094011c ಕೃಚ್ಚ್ರಾಮಾಪೇದಿರೇ ವೃತ್ತಿಮನ್ನಹೇತೋಸ್ತಪಸ್ವಿನಃ||

ಲೋಕವೆಲ್ಲವೂ ಅನಾವೃಷ್ಠಿಯಿಂದ ಪೀಡಿತವಾಗಿರಲು ತಿನ್ನಲು ಅನ್ನವೇ ಇಲ್ಲದಿದ್ದ ಆ ಸಮಯದಲ್ಲಿ ಪ್ರಾಣಗಳನ್ನು ಉಳಿಸಿಕೊಳ್ಳಲು ತಪಸ್ವಿಗಳು ಆ ಅತಿ ಕಷ್ಟಕರ ಘೋರ ವೃತ್ತಿಯನ್ನು ಅವಲಂಬಿಸಬೇಕಾಯಿತು.

13094012a ಅಟಮಾನೋಽಥ ತಾನ್ಮಾರ್ಗೇ ಪಚಮಾನಾನ್ಮಹೀಪತಿಃ|

13094012c ರಾಜಾ ಶೈಬ್ಯೋ ವೃಷಾದರ್ಭಿಃ ಕ್ಲಿಶ್ಯಮಾನಾನ್ದದರ್ಶ ಹ||

ಅದೇ ಮಾರ್ಗವಾಗಿ ಹೋಗುತ್ತಿದ್ದ ಮಹೀಪತಿ ರಾಜಾ ಶೈಬ್ಯನು ಅನ್ನಕ್ಕಾಗಿ ಕಷ್ಟಪಡುತ್ತಾ ಹೆಣವನ್ನು ಬೇಯಿಸುತ್ತಿದ್ದ ಅವರನ್ನು ನೋಡಿದನು.

13094013 ವೃಷಾದರ್ಭಿರುವಾಚ|

[2]13094013a ಪ್ರತಿಗ್ರಹಸ್ತಾರಯತಿ ಪುಷ್ಟಿರ್ವೈ ಪ್ರತಿಗೃಹ್ಣತಾಮ್|

13094013c ಮಯಿ ಯದ್ವಿದ್ಯತೇ ವಿತ್ತಂ ತಚ್ಚೃಣುಧ್ವಂ ತಪೋಧನಾಃ||

ವೃಷಾದರ್ಭಿಯು ಹೇಳಿದನು: “ತಪೋಧನರೇ! ನನ್ನನ್ನು ಕೇಳಿ. ಪ್ರತಿಗ್ರಹವು ಬ್ರಾಹ್ಮಣರನ್ನು ದುರ್ಭಿಕ್ಷೆಯಿಂದ ಪಾರುಮಾಡುತ್ತದೆ. ಪ್ರತಿಗ್ರಹವು ಪುಷ್ಟಿಗೆ ಸಾಧನವಾಗಿದೆ. ನನ್ನಲ್ಲಿರುವ ವಿತ್ತವನ್ನು ಸ್ವೀಕರಿಸಿರಿ.

13094014a ಪ್ರಿಯೋ ಹಿ ಮೇ ಬ್ರಾಹ್ಮಣೋ ಯಾಚಮಾನೋ

ದದ್ಯಾಮಹಂ ವೋಽಶ್ವತರೀಸಹಸ್ರಮ್|

13094014c ಏಕೈಕಶಃ ಸವೃಷಾಃ ಸಂಪ್ರಸೂತಾಃ

ಸರ್ವೇಷಾಂ ವೈ ಶೀಘ್ರಗಾಃ ಶ್ವೇತಲೋಮಾಃ||

ನನ್ನನ್ನು ಯಾಚಿಸುವ ಬ್ರಾಹ್ಮಣನು ನನಗೆ ಅತ್ಯಂತ ಪ್ರಿಯನು. ನಾನು ನಿಮ್ಮಲ್ಲಿ ಒಬ್ಬೊಬ್ಬರಿಗೂ ಒಂದೊಂದು ಸಾವಿರ ಹೇಸರಗತ್ತೆಗಳನ್ನು ಕೊಡುತ್ತೇನೆ. ಎಲ್ಲರಿಗೂ ಬಿಳಿಯ ಕೂದಲಿನ ಶೀಘ್ರವಾಗಿ ಹೋಗುವ ಮತ್ತು ಚೆನ್ನಾಗಿ ಬೆಳೆಸಿರುವ ಹೋರಿಗಳನ್ನು ಕೊಡುತ್ತೇನೆ.

13094015a ಕುಲಂಭರಾನನಡುಹಃ ಶತಂಶತಾನ್

ಧುರ್ಯಾನ್ ಶುಭಾನ್ಸರ್ವಶೋಽಹಂ ದದಾನಿ|

13094015c ಪೃಥ್ವೀವಾಹಾನ್ಪೀವರಾಂಶ್ಚೈವ ತಾವದ್

ಅಗ್ರ್ಯಾ ಗೃಷ್ಟ್ಯೋ ಧೇನವಃ ಸುವ್ರತಾಶ್ಚ||

ಕೃಷಿಯ ಮೂಲಕ ಕುಲವನ್ನು ಧರಿಸುವ, ಬಿಳಿಯ ಬಣ್ಣದ, ಭಾರವನ್ನು ಹೊರುವ ಹತ್ತು ಸಾವಿರ ಎತ್ತುಗಳನ್ನೂ ನಿಮಗೆ ಕೊಡುತ್ತೇನೆ. ಇಷ್ಟು ಮಾತ್ರವಲ್ಲದೇ ನಿಮಗೆಲ್ಲರಿಗೂ ಹೃಷ್ಟ-ಪುಷ್ಟವಾದ, ಮೊದಲನೆಯ ಗರ್ಭಧರಿಸಿರುವ ಅಥವಾ ಮೊದಲನೆಯ ಕರುವನ್ನು ಈಯ್ದಿರುವ ಒಳ್ಳೆಯ ಸ್ವಭಾವದ ಅಷ್ಟೇ ಹಸುಗಳನ್ನೂ ದಾನವಾಗಿ ಕೊಡುತ್ತೇನೆ.

13094016a ವರಾನ್ ಗ್ರಾಮಾನ್ ವ್ರೀಹಿಯವಂ ರಸಾಂಶ್ಚ

ರತ್ನಂ ಚಾನ್ಯದ್ದುರ್ಲಭಂ ಕಿಂ ದದಾನಿ|

13094016c ಮಾ ಸ್ಮಾಭಕ್ಷ್ಯೇ ಭಾವಮೇವಂ ಕುರುಧ್ವಂ

ಪುಷ್ಟ್ಯರ್ಥಂ ವೈ ಕಿಂ ಪ್ರಯಚ್ಚಾಮ್ಯಹಂ ವಃ||

ಶ್ರೇಷ್ಠ ಗ್ರಾಮಗಳನ್ನೂ, ಬತ್ತವನ್ನೂ, ರಸವನ್ನೂ, ಗೋಧಿಯನ್ನೂ, ರತ್ನವನ್ನೂ ಕೊಡುತ್ತೇನೆ. ದುರ್ಲಭವಾದ ಯಾವುದೇ ವಸ್ತುವನ್ನಾದರೂ ಕೊಡುತ್ತೇನೆ. ಯಾವುದು ಬೇಕೆಂದು ಹೇಳಿರಿ. ನಿಮ್ಮ ಪುಷ್ಟಿಗಾಗಿ ಏನನ್ನು ಕೊಡಲಿ. ಆದರೆ ನೀವು ಮಾತ್ರ ಅಭಕ್ಷ್ಯವಾದ ಇದನ್ನು ತಿನ್ನಬೇಡಿ.”

13094017 ಋಷಯ ಊಚುಃ|

13094017a ರಾಜನ್ ಪ್ರತಿಗ್ರಹೋ ರಾಜ್ಞೋ ಮಧ್ವಾಸ್ವಾದೋ ವಿಷೋಪಮಃ|

13094017c ತಜ್ಜಾನಮಾನಃ ಕಸ್ಮಾತ್ತ್ವಂ ಕುರುಷೇ ನಃ ಪ್ರಲೋಭನಮ್||

ಋಷಿಗಳು ಹೇಳಿದರು: “ರಾಜನ್! ರಾಜನು ನೀಡುವ ದಾನವು ಹೊರನೋಟಕ್ಕೆ ಜೇನುತುಪ್ಪದಂತೆ ಇದ್ದರೂ ಸ್ವೀಕರಿಸಿದವನಿಗೆ ಅದು ವಿಷದ ಸಮಾನವಾಗಿರುತ್ತದೆ. ಇದನ್ನು ತಿಳಿದವನಾಗಿದ್ದರೂ ಏಕೆ ನಮ್ಮನ್ನು ಪ್ರಲೋಭನಗೊಳಿಸುತ್ತಿರುವೆ?

13094018a ಕ್ಷತ್ರಂ ಹಿ ದೈವತಮಿವ[3] ಬ್ರಾಹ್ಮಣಂ ಸಮುಪಾಶ್ರಿತಮ್|

13094018c ಅಮಲೋ ಹ್ಯೇಷ ತಪಸಾ ಪ್ರೀತಃ ಪ್ರೀಣಾತಿ ದೇವತಾಃ||

ಏಕೆಂದರೆ ಕ್ಷತ್ರಿಯನು ಬ್ರಾಹ್ಮಣನೆಂಬ ದೇವನನ್ನೇ ಆಶ್ರಯಿಸುತ್ತಾನೆ. ಬ್ರಾಹ್ಮಣನು ತಪಸ್ಸಿನಿಂದ ಅಮಲನೂ ಪ್ರೀತನೂ ಆದರೆ ದೇವತೆಗಳು ಪ್ರಿತರಾಗುತ್ತಾರೆ.

13094019a ಅಹ್ನಾಪೀಹ ತಪೋ ಜಾತು ಬ್ರಾಹ್ಮಣಸ್ಯೋಪಜಾಯತೇ|

13094019c ತದ್ದಾವ ಇವ ನಿರ್ದಹ್ಯಾತ್ ಪ್ರಾಪ್ತೋ ರಾಜಪ್ರತಿಗ್ರಹಃ||

ದಿನವೆಲ್ಲವೂ ತಪಸ್ಸನ್ನು ಮಾಡಿ ಸಂಗ್ರಹಿಸದ ತಪಃ ಫಲವು ರಾಜನ ದಾನವನ್ನು ಸ್ವೀಕರಿಸುವುದರಿಂದ ಕ್ಷಣಮಾತ್ರದಲ್ಲಿ ದಾವಾಗ್ನಿಯಂತೆ ಸುಟ್ಟುಹೋಗುತ್ತದೆ.

13094020a ಕುಶಲಂ ಸಹ ದಾನೇನ ರಾಜನ್ನಸ್ತು ಸದಾ ತವ|

13094020c ಅರ್ಥಿಭ್ಯೋ ದೀಯತಾಂ ಸರ್ವಮಿತ್ಯುಕ್ತ್ವಾ ತೇ ತತೋ ಯಯುಃ||

ರಾಜನ್! ನೀನು ಈ ದಾನದೊಂದಿಗೆ ಸದಾ ಕುಶಲನಾಗಿರು. ನೀನು ಹೇಳಿದ ಎಲ್ಲವನ್ನೂ ಯಾಚಕರಿಗೆ ದಾನಮಾಡು.”

13094021a ಅಪಕ್ವಮೇವ ತನ್ಮಾಂಸಮಭೂತ್ತೇಷಾಂ ಚ ಧೀಮತಾಮ್|

13094021c ಅಥ ಹಿತ್ವಾ ಯಯುಃ ಸರ್ವೇ ವನಮಾಹಾರಕಾಂಕ್ಷಿಣಃ||

ರಾಜಕುಮಾರನ ಮಾಂಸವು ಅಪಕ್ವವಾಗಿಯೇ ಉಳಿಯಿತು. ಹೀಗೆ ಹೇಳಿ ಆ ಧೀಮತರೆಲ್ಲರೂ ವನದಲ್ಲಿ ಆಹಾರವನ್ನು ಹುಡುಕುತ್ತಾ ಹೊರಟು ಹೋದರು.

13094022a ತತಃ ಪ್ರಚೋದಿತಾ ರಾಜ್ಞಾ ವನಂ ಗತ್ವಾಸ್ಯ ಮಂತ್ರಿಣಃ|

13094022c ಪ್ರಚೀಯೋದುಂಬರಾಣಿ ಸ್ಮ ದಾನಂ ದಾತುಂ ಪ್ರಚಕ್ರಮುಃ||

ಅನಂತರ ರಾಜನ ಪ್ರಚೋದನೆಯಂತೆ ಮಂತ್ರಿಗಳು ವನಕ್ಕೆ ಹೋಗಿ ಅತ್ತಿಹಣ್ಣುಗಳನ್ನು ಸಂಗ್ರಹಿಸಿ ಮುನಿಗಳಿಗೆ ಕೊಡಲು ಪ್ರಾರಂಭಿಸಿದರು.

13094023a ಉದುಂಬರಾಣ್ಯಥಾನ್ಯಾನಿ ಹೇಮಗರ್ಭಾಣ್ಯುಪಾಹರನ್|

13094023c ಭೃತ್ಯಾಸ್ತೇಷಾಂ ತತಸ್ತಾನಿ ಪ್ರಗ್ರಾಹಿತುಮುಪಾದ್ರವನ್||

ಅತ್ತಿಯ ಮತ್ತು ಅನ್ಯ ಹಣ್ಣುಗಳಲ್ಲಿ ಅವರು ಚಿನ್ನವನ್ನು ತುಂಬಿದ್ದರು. ರಾಜಸೇವಕರು ಅವುಗಳನ್ನು ಮುನಿಗಳು ಪ್ರತಿಗ್ರಹಿಸುವಂತೆ ಮಾಡಲು ಅವರ ಹಿಂದೆಯೇ ಹೋದರು.

13094024a ಗುರೂಣೀತಿ ವಿದಿತ್ವಾಥ ನ ಗ್ರಾಹ್ಯಾಣ್ಯತ್ರಿರಬ್ರವೀತ್|

13094024c ನ ಸ್ಮ ಹೇ ಮೂಢವಿಜ್ಞಾನಾ ನ ಸ್ಮ ಹೇ ಮಂದಬುದ್ಧಯಃ|

13094024e ಹೈಮಾನೀಮಾನಿ ಜಾನೀಮಃ ಪ್ರತಿಬುದ್ಧಾಃ ಸ್ಮ ಜಾಗೃಮಃ||

ಹಣ್ಣುಗಳು ಭಾರವಾಗಿರುವುದನ್ನು ನೋಡಿ ತಿಳಿದು ಅತ್ರಿಯು ಅವು ಪ್ರತಿಗ್ರಹಕ್ಕೆ ಯೋಗ್ಯವಲ್ಲವೆಂದು ಹೇಳಿದನು: “ನಾವು ಮೂಢರಲ್ಲ. ನಾವು ಮಂದಬುದ್ಧಿಯವರೂ ಅಲ್ಲ. ನಾವು ಎಚ್ಚೆತ್ತೇ ಇದ್ದೇವೆ. ಈ ಹಣ್ಣುಗಳಲ್ಲಿ ಚಿನ್ನವನ್ನು ತುಂಬಲಾಗಿದೆ ಎಂದು ನಮಗೆ ತಿಳಿದಿದೆ.

13094025a ಇಹ ಹ್ಯೇತದುಪಾದತ್ತಂ ಪ್ರೇತ್ಯ ಸ್ಯಾತ್ಕಟುಕೋದಯಮ್|

13094025c ಅಪ್ರತಿಗ್ರಾಹ್ಯಮೇವೈತತ್ಪ್ರೇತ್ಯ ಚೇಹ ಸುಖೇಪ್ಸುನಾ||

ನಾವೇನಾದರು ಇಂದು ಇದನ್ನು ತೆಗೆದುಕೊಂಡರೆ ಪರಲೋಕದಲ್ಲಿ ನಮಗೆ ಇದರಿಂದ ಕೆಟ್ಟ ಪರಿಣಾಮವೇ ಆಗುತ್ತದೆ. ಐಹಿಕ ಮತ್ತು ಆಮುಷ್ಮಿಕ ಫಲಗಳನ್ನು ಅಪೇಕ್ಷಿಸುವವರಿಗೆ ಸುವರ್ಣಭರಿತ ಈ ಹಣ್ಣುಗಳು ಅಗ್ರಾಹ್ಯವಾಗಿದೆ.”

13094026 ವಸಿಷ್ಠ ಉವಾಚ|

13094026a ಶತೇನ ನಿಷ್ಕಂ ಗಣಿತಂ ಸಹಸ್ರೇಣ ಚ ಸಂಮಿತಮ್|

13094026c ಯಥಾ ಬಹು ಪ್ರತೀಚ್ಚನ್ ಹಿ ಪಾಪಿಷ್ಠಾಂ ಲಭತೇ ಗತಿಮ್||

ವಸಿಷ್ಠನು ಹೇಳಿದನು: “ದಾನವನ್ನು ಸ್ವೀಕರಿಸುವವನು ಮೊದಲು ನೂರು, ನಂತರ ಸಾವಿರ ಮತ್ತು ಅಂತರ ಬಹುಸಂಖ್ಯೆಯ ಸುವರ್ಣನಾಣ್ಯಗಳನ್ನು ಅಪೇಕ್ಷಿಸುತ್ತಾ ಪಾಪಿಷ್ಠರ ಗತಿಯನ್ನು ಹೊಂದುತ್ತಾನೆ.”

13094027 ಕಶ್ಯಪ ಉವಾಚ|

13094027a ಯತ್ ಪೃಥಿವ್ಯಾಂ ವ್ರೀಹಿಯವಂ ಹಿರಣ್ಯಂ ಪಶವಃ ಸ್ತ್ರಿಯಃ|

13094027c ಸರ್ವಂ ತನ್ನಾಲಮೇಕಸ್ಯ ತಸ್ಮಾದ್ವಿದ್ವಾನ್ ಶಮಂ ವ್ರಜೇತ್||

ಕಶ್ಯಪನು ಹೇಳಿದನು: “ಭೂಮಿಯಲ್ಲಿರುವ ಧಾನ್ಯಗಳೂ, ಹಿರಣ್ಯವೂ, ಪಶುಗಳೂ, ಸ್ತ್ರೀಯರೂ ಎಲ್ಲವೂ ಆಸೆಬುರುಕನಾದ ಒಬ್ಬನಿಗೇ ಸಾಲದಾಗುತ್ತದೆ. ಆದುದರಿಂದ ವಿದ್ವಾಂಸನು ಮನಸ್ಸಿನ ತೃಷ್ಣೆಯನ್ನು ಶಾಂತಗೊಳಿಸಬೇಕು.”

13094028 ಭರದ್ವಾಜ ಉವಾಚ|

13094028a ಉತ್ಪನ್ನಸ್ಯ ರುರೋಃ ಶೃಂಗಂ ವರ್ಧಮಾನಸ್ಯ ವರ್ಧತೇ|

13094028c ಪ್ರಾರ್ಥನಾ ಪುರುಷಸ್ಯೇವ ತಸ್ಯ ಮಾತ್ರಾ ನ ವಿದ್ಯತೇ||

ಭರದ್ವಾಜನು ಹೇಳಿದನು: “ಹುಟ್ಟಿದ ರುರುವಿನ ಕೋಡು ಬೆಳೆಯುತ್ತಿರುವಂತೆ ಮನುಷ್ಯನ ಬಯಕೆಗಳೂ ವೃದ್ಧಿಸುತ್ತಲೇ ಇರುತ್ತವೆ. ಅದಕ್ಕೆ ಎಲ್ಲೆಯೆಂಬುದೇ ಇರುವುದಿಲ್ಲ.”

13094029 ಗೌತಮ ಉವಾಚ|

13094029a ನ ತಲ್ಲೋಕೇ ದ್ರವ್ಯಮಸ್ತಿ ಯಲ್ಲೋಕಂ ಪ್ರತಿಪೂರಯೇತ್|

13094029c ಸಮುದ್ರಕಲ್ಪಃ ಪುರುಷೋ ನ ಕದಾ ಚನ ಪೂರ್ಯತೇ||

ಗೌತಮನು ಹೇಳಿದನು: “ಮನುಷ್ಯನ ಆಸೆಗಳನ್ನು ಪೂರೈಸಬಲ್ಲ ಯಾವ ವಸ್ತುವೂ ಈ ಲೋಕದಲ್ಲಿಲ್ಲ. ಸಮುದ್ರದಂತಿರುವ ಮನುಷ್ಯನ ಆಸೆಯು ಎಂದೂ ತುಂಬುವುದಿಲ್ಲ.”

13094030 ವಿಶ್ವಾಮಿತ್ರ ಉವಾಚ|

13094030a ಕಾಮಂ ಕಾಮಯಮಾನಸ್ಯ ಯದಾ ಕಾಮಃ ಸಮೃಧ್ಯತೇ|

13094030c ಅಥೈನಮಪರಃ ಕಾಮಸ್ತೃಷ್ಣಾ ವಿಧ್ಯತಿ ಬಾಣವತ್||

ವಿಶ್ವಾಮಿತ್ರನು ಹೇಳಿದನು: “ಒಂದು ಬಯಕೆಯನ್ನು ತೀರಿಸಿಕೊಳ್ಳುತ್ತಿದ್ದಂತೆಯೇ ಇನ್ನೊಂದು ಬಯಕೆಯು ಹುಟ್ಟಿಕೊಳ್ಳುತ್ತದೆ. ಹೀಗೆ ಕಾಮವೆಂಬ ತೃಷ್ಣೆಯು ಬಾಣದಂತೆ ಚುಚ್ಚುತ್ತಲೇ ಇರುತ್ತದೆ.”

13094031 ಜಮದಗ್ನಿರುವಾಚ|

13094031a ಪ್ರತಿಗ್ರಹೇ ಸಂಯಮೋ ವೈ ತಪೋ ಧಾರಯತೇ ಧ್ರುವಮ್|

13094031c ತದ್ಧನಂ ಬ್ರಾಹ್ಮಣಸ್ಯೇಹ ಲುಭ್ಯಮಾನಸ್ಯ ವಿಸ್ರವೇತ್||

ಜಮದಗ್ನಿಯು ಹೇಳಿದನು: “ದಾನವನ್ನು ಸ್ವೀಕರಿಸುವಾಗ ಸಂಯಮವಿರಬೇಕು. ಸಂಯಮಿಯು ತನ್ನ ತಪಸ್ಸನ್ನು ರಕ್ಷಿಸಿಕೊಳ್ಳುವನೆಂಬುವುದು ನಿಜ. ತಪಸ್ಸೇ ಬ್ರಾಹ್ಮಣನ ಧನ. ಆಸೆಯಿಂದ ಅದನ್ನು ಕಳೆದುಕೊಳ್ಳುತ್ತಾನೆ.”

13094032 ಅರುಂಧತ್ಯುವಾಚ|

13094032a ಧರ್ಮಾರ್ಥಂ ಸಂಚಯೋ ಯೋ ವೈ ದ್ರವ್ಯಾಣಾಂ ಪಕ್ಷಸಂಮತಃ|

13094032c ತಪಃಸಂಚಯ ಏವೇಹ ವಿಶಿಷ್ಟೋ ದ್ರವ್ಯಸಂಚಯಾತ್||

ಅರುಂಧತಿಯು ಹೇಳಿದಳು: “ಧರ್ಮಾರ್ಥವಾಗಿ ದ್ರವ್ಯಗಳನ್ನು ಸಂಗ್ರಹಿಸಬೇಕೆಂದು ಒಂದು ಪಕ್ಷದ ಅಭಿಪ್ರಾಯವಾಗಿದೆ. ಆದರೆ ದ್ರವ್ಯಸಂಚಯಕ್ಕಿಂತಲೂ ತಪಃಸಂಚಯವೇ ವಿಶಿಷ್ಠ ಎಂದೂ ಹೇಳಿದ್ದಾರೆ.”

13094033 ಗಂಡೋವಾಚ|

13094033a ಉಗ್ರಾದಿತೋ ಭಯಾದ್ಯಸ್ಮಾದ್ಬಿಭ್ಯತೀಮೇ ಮಮೇಶ್ವರಾಃ|

13094033c ಬಲೀಯಾಂಸೋ ದುರ್ಬಲವದ್ಬಿಭೇಮ್ಯಹಮತಃ ಪರಮ್||

ಗಂಡಾಳು ಹೇಳಿದಳು: “ನನ್ನ ಈ ಯಜಮಾನರು ತಪಸ್ಸಿನಿಂದ ಮಹಾಬಲಿಷ್ಠರಾಗಿದ್ದರೂ ಪ್ರತಿಗ್ರಹವೆಂಬ ಉಗ್ರ ಭಯದಿಂದ ದುರ್ಬಲರಂತೆ ಭೀತರಾಗಿದ್ದಾರೆ. ಆದುದರಿಂದ ಅವರ ಅನುಚರಳಾದ ನಾನೂ ಪ್ರತಿಗ್ರಹಕ್ಕೆ ಭಯಪಡುತ್ತೇನೆ.”

13094034 ಪಶುಸಖ ಉವಾಚ|

13094034a ಯದ್ವೈ ಧರ್ಮೇ ಪರಂ ನಾಸ್ತಿ ಬ್ರಾಹ್ಮಣಾಸ್ತದ್ಧನಂ ವಿದುಃ|

13094034c ವಿನಯಾರ್ಥಂ ಸುವಿದ್ವಾಂಸಮುಪಾಸೇಯಂ ಯಥಾತಥಮ್||

ಪಶುಸಖನು ಹೇಳಿದನು: “ಧರ್ಮಪಾಲನೆಯಿಂದ ದೊರೆಯುವ ಧನಕ್ಕಿಂತ ಶ್ರೇಷ್ಠವಾದ ಧನವಿಲ್ಲವೆಂದು ಬ್ರಾಹ್ಮಣರು ತಿಳಿದಿದ್ದಾರೆ. ಅದನ್ನು ತಿಳಿಯುವ ಸಲುವಾಗಿಯೇ ನಾನು ಉತ್ತಮ ವಿದ್ವಾಂಸರನ್ನು ಯಥಾವತ್ತಾಗಿ ಉಪಾಸಿಸುತ್ತಿದ್ದೇನೆ[4].”

13094035 ಋಷಯ ಊಚುಃ|

13094035a ಕುಶಲಂ ಸಹ ದಾನಾಯ ತಸ್ಮೈ ಯಸ್ಯ ಪ್ರಜಾ ಇಮಾಃ|

13094035c ಫಲಾನ್ಯುಪಧಿಯುಕ್ತಾನಿ ಯ ಏವಂ ನಃ ಪ್ರಯಚ್ಚಸಿ||

ಋಷಿಗಳು ಹೇಳಿದರು: “ಯಾವ ರಾಜನ ಪ್ರಜೆಗಳು ಮೋಸದಿಂದ ನಮಗೆ ಈ ಫಲಗಳನ್ನು ಕೊಟ್ಟು ಫಲಗಳ ವ್ಯಾಜದಿಂದ ಸುವರ್ಣವನ್ನು ದಾನಮಾಡಲು ಪ್ರಯತ್ನಿಸುತ್ತಿರುವರೋ ಅವನು ಈ ಧನವನ್ನು ತನ್ನಲ್ಲಿಯೇ ಇಟ್ಟುಕೊಂಡು ಕುಶಲಿಯಾಗಿರಲಿ!””

13094036 ಭೀಷ್ಮ ಉವಾಚ|

13094036a ಇತ್ಯುಕ್ತ್ವಾ ಹೇಮಗರ್ಭಾಣಿ ಹಿತ್ವಾ ತಾನಿ ಫಲಾನಿ ತೇ|

13094036c ಋಷಯೋ ಜಗ್ಮುರನ್ಯತ್ರ ಸರ್ವ ಏವ ಧೃತವ್ರತಾಃ||

ಭೀಷ್ಮನು ಹೇಳಿದನು: “ಹೀಗೆ ಹೇಳಿ ಆ ಹೇಮಗರ್ಭ ಫಲಗಳನ್ನು ತೊರೆದು ಧೃತವ್ರತ ಋಷಿಗಳು ಎಲ್ಲರೂ ಬೇರೆಕಡೆ ಹೊರಟುಹೋದರು.

13094037 ಮಂತ್ರಿಣಃ ಊಚುಃ|

13094037a ಉಪಧಿಂ ಶಂಕಮಾನಾಸ್ತೇ ಹಿತ್ವೇಮಾನಿ ಫಲಾನಿ ವೈ|

13094037c ತತೋಽನ್ಯೇನೈವ ಗಚ್ಚಂತಿ ವಿದಿತಂ ತೇಽಸ್ತು ಪಾರ್ಥಿವ||

ಮಂತ್ರಿಗಳು ಹೇಳಿದರು: “ಪಾರ್ಥಿವ! ಕಪಟವಿರಬಹುದೆಂಬ ಶಂಕೆಯಿಂದ ಆ ಫಲಗಳನ್ನು ತೊರೆದು ಅವರು ಬೇರೊಂದು ಮಾರ್ಗದಿಂದ ಎಲ್ಲಿಯೋ ಹೊರಟು ಹೋದರು. ಇದನ್ನು ನಾವು ನಿನಗೆ ತಿಳಿಸಿದ್ದೇವೆ.”

13094038a ಇತ್ಯುಕ್ತಃ ಸ ತು ಭೃತ್ಯೈಸ್ತೈರ್ವೃಷಾದರ್ಭಿಶ್ಚುಕೋಪ ಹ|

13094038c ತೇಷಾಂ ಸಂಪ್ರತಿಕರ್ತುಂ ಚ ಸರ್ವೇಷಾಮಗಮದ್ಗೃಹಮ್||

ಸೇವಕರಾಡಿದುದನ್ನು ಕೇಳಿ ವೃಷಾದರ್ಭಿಯು ಕುಪಿತನಾದನು. ಅವರೆಲ್ಲರಿಗೂ ಪ್ರತೀಕಾರವನ್ನೆಸಗಲು ನಿಶ್ಚಯಿಸಿ ತನ್ನ ಮನೆಗೆ ತೆರಳಿದನು.

13094039a ಸ ಗತ್ವಾಹವನೀಯೇಽಗ್ನೌ ತೀವ್ರಂ ನಿಯಮಮಾಸ್ಥಿತಃ|

13094039c ಜುಹಾವ ಸಂಸ್ಕೃತಾಂ ಮಂತ್ರೈರೇಕೈಕಾಮಾಹುತಿಂ ನೃಪಃ||

ಹೋಗಿ ನೃಪನು ತೀವ್ರ ನಿಯಮಾನುಷ್ಠಾನುಗಳನ್ನು ಮಾಡುತ್ತಾ ಸಂಸ್ಕೃತಗೊಳಿಸಿದ ಆಹವನೀಯ ಅಗ್ನಿಯಲ್ಲಿ ಮಂತ್ರಗಳಿಂದ ಒಂದೊಂದೇ ಆಹುತಿಯನ್ನು ನೀಡತೊಡಗಿದನು.

13094040a ತಸ್ಮಾದಗ್ನೇಃ ಸಮುತ್ತಸ್ಥೌ ಕೃತ್ಯಾ ಲೋಕಭಯಂಕರೀ|

13094040c ತಸ್ಯಾ ನಾಮ ವೃಷಾದರ್ಭಿರ್ಯಾತುಧಾನೀತ್ಯಥಾಕರೋತ್||

ಆ ಅಗ್ನಿಯಿಂದ ಲೋಕಭಯಂಕರಿಯಾದ ಕೃತ್ಯೆಯೊಂದು ಪ್ರಾದುರ್ಭವಿಸಿದಳು. ವೃಷಾದರ್ಭಿಯು ಅವಳಿಗೆ ಯಾತುಧಾನೀ ಎಂಬ ನಾಮಕರಣವನ್ನು ಮಾಡಿದನು.

13094041a ಸಾ ಕೃತ್ಯಾ ಕಾಲರಾತ್ರೀವ ಕೃತಾಂಜಲಿರುಪಸ್ಥಿತಾ|

13094041c ವೃಷಾದರ್ಭಿಂ ನರಪತಿಂ ಕಿಂ ಕರೋಮೀತಿ ಚಾಬ್ರವೀತ್||

ಕಾಳರಾತ್ರಿಯಂತಿದ್ದ ಆ ಕೃತ್ಯೆಯು ಅಂಜಲೀಬದ್ಧಳಾಗಿ ನಿಂತು ಏನು ಮಾಡಬೇಕು ಎಂದು ನರಪತಿ ವೃಷಾದರ್ಭಿಯನ್ನು ಕೇಳಿದಳು.

13094042 ವೃಷಾದರ್ಭಿರುವಾಚ|

13094042a ಋಷೀಣಾಂ ಗಚ್ಚ ಸಪ್ತಾನಾಮರುಂಧತ್ಯಾಸ್ತಥೈವ ಚ|

13094042c ದಾಸೀಭರ್ತುಶ್ಚ ದಾಸ್ಯಾಶ್ಚ ಮನಸಾ ನಾಮ ಧಾರಯ||

ವೃಷಾದರ್ಭಿಯು ಹೇಳಿದನು: “ಮನಸ್ಸಿನಲ್ಲಿ ಅವರ ಹೆಸರುಗಳನ್ನು ನೆನಪಿಟ್ಟುಕೊಂಡು ಸಪ್ತ ಋಷಿಗಳು, ಅರುಂಧತಿ, ದಾಸೀ ಸೇವಕಿ ಮತ್ತು ದಾಸನ ಬಳಿ ಹೋಗು.

13094043a ಜ್ಞಾತ್ವಾ ನಾಮಾನಿ ಚೈತೇಷಾಂ ಸರ್ವಾನೇತಾನ್ವಿನಾಶಯ|

13094043c ವಿನಷ್ಟೇಷು ಯಥಾ ಸ್ವೈರಂ ಗಚ್ಚ ಯತ್ರೇಪ್ಸಿತಂ ತವ||

ಅವರ ಹೆಸರುಗಳನ್ನು ತಿಳಿದುಕೊಂಡು ಅವರೆಲ್ಲರನ್ನೂ ನಾಶಗೊಳಿಸು. ಅವರು ನಾಶಹೊಂದಿದ ನಂತರ ನೀನು ಬೇಕಾದಲ್ಲಿಗೆ ಹೊರಟು ಹೋಗು.”

13094044a ಸಾ ತಥೇತಿ ಪ್ರತಿಶ್ರುತ್ಯ ಯಾತುಧಾನೀ ಸ್ವರೂಪಿಣೀ|

13094044c ಜಗಾಮ ತದ್ವನಂ ಯತ್ರ ವಿಚೇರುಸ್ತೇ ಮಹರ್ಷಯಃ||

ಆ ಸ್ವರೂಪಿಣೀ ಯಾತುಧಾನಿಯು ಹಾಗೆಯೇ ಆಗಲೆಂದು ಉತ್ತರಿಸಿ ಮಹರ್ಷಿಗಳು ಸುತ್ತಾಡುತ್ತಿದ್ದ ಆ ವನಕ್ಕೆ ಹೋದಳು.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ವಿಸಸ್ತೈನ್ಯೋಪಾಖ್ಯಾನೇ ಚತುರ್ನವತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ವಿಸಸ್ತೈನ್ಯೋಪಾಖ್ಯಾನ ಎನ್ನುವ ತೊಂಭತ್ನಾಲ್ಕನೇ ಅಧ್ಯಾಯವು.

[1] ದಾತೃಪ್ರತಿಗೃಹೀತೋರ್ವೇ (ಭಾರತ ದರ್ಶನ/ಗೀತಾ ಪ್ರೆಸ್).

[2] ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ಪ್ರತಿಗ್ರಹೋ ಬ್ರಾಹ್ಮಣಾನಾಂ ಸೃಷ್ಟಾ ವೃತ್ತಿರನಿಂದಿತಾ (ದಕ್ಷಿಣಾತ್ಯ ಪಾಠದಲ್ಲಿರುವಂತೆ ಗೀತಾ ಪ್ರೆಸ್).

[3] ಕ್ಷೇತ್ರಂ ಹಿ ದೈವತಮಿದಂ (ಭಾರತ ದರ್ಶನ/ಗೀತಾ ಪ್ರೆಸ್).

[4] ಈ ಶ್ಲೋಕವನ್ನು ಇನ್ನೊಂದು ರೀತಿಯಲ್ಲಿ ಅನುವಾದಿಸಿದ್ದಾರೆ: ಯಾವ ಧರ್ಮದಲ್ಲಿ ಪರೋಪಕಾರವಿಲ್ಲವೋ ಅದನ್ನೇ ಬ್ರಾಹ್ಮಣರು ಧನವೆಂದು ತಿಳಿಯುತ್ತಾರೆ. ಪ್ರತಿಗ್ರಹವು ಬ್ರಾಹ್ಮಣನಿಗೆ ಧರ್ಮವೆಂದು ಹೇಳುತ್ತಾರೆ. ಆದರೆ ಪ್ರತಿಗ್ರಹವು ಧನವನ್ನು ಗಳಿಸಿಕೊಟ್ಟು ಜೀವಿಕೆಗೆ ಸಾಧಕವಾಗುವುದೇ ಹೊರತು ಪರಲೋಕಕ್ಕೆ ಸಾಧಕವಾಗುವುದಿಲ್ಲ. ಆದುದರಿಂದ ಬ್ರಾಹ್ಮಣರು ಪ್ರತಿಗ್ರಹಧರ್ಮವನ್ನೇ ಧನವೆಂದು ತಿಳಿಯುತ್ತಾರೆ. ಈ ರಹಸ್ಯವನ್ನು ತಿಳಿಯುವ ಸಲುವಾಗಿಯೇ ನಾನು ಯಥಾವತ್ತಾಗಿ ವಿದ್ವಾಂಸರ ಸೇವೆಯನ್ನು ಮಾಡುತ್ತೇನೆ (ಭಾರತ ದರ್ಶನ).

Comments are closed.