ಕರ್ಣ ಪರ್ವ
೬೭
ಕರ್ಣವಧೆ
ಕೃಷ್ಣನು ಕರ್ಣನನ್ನು ಅವನ ಹಿಂದಿನ ಅಧರ್ಮ ಅಪರಾಧಗಳನ್ನು ನೆನಪಿಸಿಕೊಟ್ಟು ನಿಂದಿಸಿದುದು (೧-೫). ಅರ್ಜುನನಿಂದ ಕರ್ಣವಧೆ (೬-೨೬). ಕುರುಸೇನೆಯು ಪಲಾಯನಗೈದುದು (೨೭-೩೭).
08067001 ಸಂಜಯ ಉವಾಚ|
08067001a ಅಥಾಬ್ರವೀದ್ವಾಸುದೇವೋ ರಥಸ್ಥೋ
ರಾಧೇಯ ದಿಷ್ಟ್ಯಾ ಸ್ಮರಸೀಹ ಧರ್ಮಂ|
08067001c ಪ್ರಾಯೇಣ ನೀಚಾ ವ್ಯಸನೇಷು ಮಗ್ನಾ
ನಿಂದಂತಿ ದೈವಂ ಕುಕೃತಂ ನ ತತ್ತತ್||
ಸಂಜಯನು ಹೇಳಿದನು: “ಆಗ ರಥಸ್ಥನಾದ ವಾಸುದೇವನು ಹೇಳಿದನು: “ರಾಧೇಯ! ಅದೃಷ್ಟವಶಾತ್ ಈಗ ನೀನು ಧರ್ಮವನ್ನು ನೆನಪಿಸಿಕೊಳ್ಳುತ್ತಿರುವೆ. ಕಷ್ಟದಲ್ಲಿ ಮುಳುಗಿದ ನೀಚರು ಸಾಮಾನ್ಯವಾಗಿ ತಾವು ಮಾಡಿದ ಕೆಟ್ಟ ಕೆಲಸಗಳನ್ನಲ್ಲದೇ ಕೇವಲ ದೈವವನ್ನೇ ನಿಂದಿಸುತ್ತಾರೆ.
08067002a ಯದ್ದ್ರೌಪದೀಂ ಏಕವಸ್ತ್ರಾಂ ಸಭಾಯಾಂ
ಆನಾಯ್ಯ ತ್ವಂ ಚೈವ ಸುಯೋಧನಶ್ಚ|
08067002c ದುಃಶಾಸನಃ ಶಕುನಿಃ ಸೌಬಲಶ್ಚ
ನ ತೇ ಕರ್ಣ ಪ್ರತ್ಯಭಾತ್ತತ್ರ ಧರ್ಮಃ||
ಕರ್ಣ! ಯಾವಾಗ ನೀನು, ಸುಯೋಧನ, ದುಃಶಾಸನ ಮತ್ತು ಸೌಬಲ ಶಕುನಿಯರು ಎಕವಸ್ತ್ರಳಾಗಿದ್ದ ದ್ರೌಪದಿಯನ್ನು ಸಭೆಗೆ ಎಳೆದು ತರಿಸಿದಾಗ ನಿನಗೆ ಅಲ್ಲಿ ಧರ್ಮದ ವಿಚಾರವೇ ಹೊಳೆದಿರಲಿಲ್ಲ!
08067003a ಯದಾ ಸಭಾಯಾಂ ಕೌಂತೇಯಮನಕ್ಷಜ್ಞಂ ಯುಧಿಷ್ಠಿರಂ|
08067003c ಅಕ್ಷಜ್ಞಃ ಶಕುನಿರ್ಜೇತಾ ತದಾ ಧರ್ಮಃ ಕ್ವ ತೇ ಗತಃ||
ಅಕ್ಷವಿದ್ಯೆಯನ್ನು ತಿಳಿದಿರದ ಕೌಂತೇಯ ಯುಧಿಷ್ಠಿರನನ್ನು ಸಭೆಯಲ್ಲಿ ಅಕ್ಷಜ್ಞ ಶಕುನಿಯು ಗೆದ್ದಾಗ ನಿನ್ನ ಧರ್ಮವು ಎಲ್ಲಿ ಹೋಗಿತ್ತು?
08067004a ಯದಾ ರಜಸ್ವಲಾಂ ಕೃಷ್ಣಾಂ ದುಃಶಾಸನವಶೇ ಸ್ಥಿತಾಂ|
08067004c ಸಭಾಯಾಂ ಪ್ರಾಹಸಃ ಕರ್ಣ ಕ್ವ ತೇ ಧರ್ಮಸ್ತದಾ ಗತಃ||
ಕರ್ಣ! ದುಃಶಾಸನನ ವಶದಲ್ಲಿದ್ದ ರಜಸ್ವಲೆ ಕೃಷ್ಣೆಯನ್ನು ಸಭೆಯಲ್ಲಿ ಅಪಹಾಸ್ಯಮಾಡುವಾಗ ನಿನ್ನ ಧರ್ಮವು ಎಲ್ಲಿ ಹೋಗಿತ್ತು?
08067005a ರಾಜ್ಯಲುಬ್ಧಃ ಪುನಃ ಕರ್ಣ ಸಮಾಹ್ವಯಸಿ ಪಾಂಡವಂ|
08067005c ಗಾಂಧಾರರಾಜಮಾಶ್ರಿತ್ಯ ಕ್ವ ತೇ ಧರ್ಮಸ್ತದಾ ಗತಃ||
ಕರ್ಣ! ಪುನಃ ಪಾಂಡವನನ್ನು ಕರೆಯಿಸಿ ಗಾಂಧಾರರಾಜನನ್ನು ಅವಲಂಬಿಸಿ ರಾಜ್ಯವನ್ನು ಕಸಿದುಕೊಳ್ಳುವಾಗ ನಿನ್ನ ಧರ್ಮವು ಎಲ್ಲಿ ಹೋಗಿತ್ತು?”
08067006a ಏವಮುಕ್ತೇ ತು ರಾಧೇಯೇ ವಾಸುದೇವೇನ ಪಾಂಡವಂ|
08067006c ಮನ್ಯುರಭ್ಯಾವಿಶತ್ತೀವ್ರಃ ಸ್ಮೃತ್ವಾ ತತ್ತದ್ಧನಂಜಯಂ||
ಕರ್ಣನಿಗೆ ವಾಸುದೇವನು ಹೀಗೆ ಹೇಳುತ್ತಿರಲು ಅವುಗಳನ್ನು ಸ್ಮರಿಸಿಕೊಂಡ ಪಾಂಡವ ಧನಂಜಯನನ್ನು ತೀವ್ರವಾದ ಕೋಪವು ಆವರಿಸಿತು.
08067007a ತಸ್ಯ ಕ್ರೋಧೇನ ಸರ್ವೇಭ್ಯಃ ಸ್ರೋತೋಭ್ಯಸ್ತೇಜಸೋಽರ್ಚಿಷಃ|
08067007c ಪ್ರಾದುರಾಸನ್ಮಹಾರಾಜ ತದದ್ಭುತಮಿವಾಭವತ್||
ಮಹಾರಾಜ! ಕ್ರೋಧದಿಂದ ಅವನ ರಂಧ್ರ ರಂಧ್ರಗಳಲ್ಲಿ ಅಗ್ನಿಯ ಜ್ವಾಲೆಗಳು ಹೊರಹೊಮ್ಮಿ ಅದೊಂದು ಅದ್ಭುತವೆನಿಸಿತು.
08067008a ತಂ ಸಮೀಕ್ಷ್ಯ ತತಃ ಕರ್ಣೋ ಬ್ರಹ್ಮಾಸ್ತ್ರೇಣ ಧನಂಜಯಂ|
08067008c ಅಭ್ಯವರ್ಷತ್ಪುನರ್ಯತ್ನಮಾಕರೋದ್ರಥಸರ್ಜನೇ|
ಅದನ್ನು ನೋಡಿ ಕರ್ಣನು ಬ್ರಹ್ಮಾಸ್ತ್ರದಿಂದ ಧನಂಜಯನ ಮೇಲೆ ಬಾಣಗಳ ಮಳೆಯನ್ನು ಸುರಿಸಿ ಪುನಃ ರಥವನ್ನು ಮೇಲೆತ್ತುವ ಪ್ರಯತ್ನವನ್ನು ಮಾಡಿದನು.
08067008e ತದಸ್ತ್ರಮಸ್ತ್ರೇಣಾವಾರ್ಯ ಪ್ರಜಹಾರಾಸ್ಯ ಪಾಂಡವಃ||
08067009a ತತೋಽನ್ಯದಸ್ತ್ರಂ ಕೌಂತೇಯೋ ದಯಿತಂ ಜಾತವೇದಸಃ|
08067009c ಮುಮೋಚ ಕರ್ಣಮುದ್ದಿಶ್ಯ ತತ್ಪ್ರಜಜ್ವಾಲ ವೈ ಭೃಶಂ||
ಅ ಅಸ್ತ್ರವನ್ನು ಕೌಂತೇಯನು ಅಸ್ತ್ರದಿಂದಲೇ ನಿರಸನಗೊಳಿಸಿದನು. ಅನಂತರ ಪಾರ್ಥನು ಜಾತವೇದಸನಿಗೆ ಪ್ರಿಯವಾದ ಇನ್ನೊಂದು ಅಸ್ತ್ರವನ್ನು ಕರ್ಣನ ಮೇಲೆ ಗುರಿಯಿಟ್ಟು ಪ್ರಯೋಗಿಸಿದನು. ಅದು ಬಹಳವಾಗಿ ಪ್ರಜ್ವಲಿಸುತ್ತಿತ್ತು.
08067010a ವಾರುಣೇನ ತತಃ ಕರ್ಣಃ ಶಮಯಾಮಾಸ ಪಾವಕಂ|
08067010c ಜೀಮೂತೈಶ್ಚ ದಿಶಃ ಸರ್ವಾಶ್ಚಕ್ರೇ ತಿಮಿರದುರ್ದಿನಾಃ||
ಆಗ ಕರ್ಣನು ಆ ಅಗ್ನಿಯನ್ನು ವಾರುಣಾಸ್ತ್ರದಿಂದ ಶಮನಗೊಳಿಸಿದನು. ಮತ್ತು ಮೋಡಗಳಿಂದ ಎಲ್ಲ ದಿಕ್ಕುಗಳನ್ನೂ ತುಂಬಿಸಿ ಹಗಲನ್ನೇ ಕತ್ತಲೆಯನ್ನಾಗಿಸಿದನು.
08067011a ಪಾಂಡವೇಯಸ್ತ್ವಸಂಭ್ರಾಂತೋ ವಾಯವ್ಯಾಸ್ತ್ರೇಣ ವೀರ್ಯವಾನ್|
08067011c ಅಪೋವಾಹ ತದಾಭ್ರಾಣಿ ರಾಧೇಯಸ್ಯ ಪ್ರಪಶ್ಯತಃ||
ವೀರ್ಯವಾನ್ ಪಾಂಡವೇಯನು ಸ್ವಲ್ಪವೂ ಗಾಬರಿಗೊಳ್ಳದೇ ವಾಯವ್ಯಾಸ್ತ್ರದಿಂದ ರಾಧೇಯನು ನೋಡುತ್ತಿದ್ದಂತೆಯೇ ಆ ಮೋಡಗಳನ್ನು ನಿರಸನಗೊಳಿಸಿದನು.
08067012a ತಂ ಹಸ್ತಿಕಕ್ಷ್ಯಾಪ್ರವರಂ ಚ ಬಾಣೈಃ
ಸುವರ್ಣಮುಕ್ತಾಮಣಿವಜ್ರಮೃಷ್ಟಂ|
08067012c ಕಾಲಪ್ರಯತ್ನೋತ್ತಮಶಿಲ್ಪಿಯತ್ನೈಃ
ಕೃತಂ ಸುರೂಪಂ ವಿತಮಸ್ಕಮುಚ್ಚೈಃ||
08067013a ಊರ್ಜಸ್ಕರಂ ತವ ಸೈನ್ಯಸ್ಯ ನಿತ್ಯಂ
ಅಮಿತ್ರವಿತ್ರಾಸನಮೀಡ್ಯರೂಪಂ|
08067013c ವಿಖ್ಯಾತಮಾದಿತ್ಯಸಮಸ್ಯ ಲೋಕೇ
ತ್ವಿಷಾ ಸಮಂ ಪಾವಕಭಾನುಚಂದ್ರೈಃ||
08067014a ತತಃ ಕ್ಷುರೇಣಾಧಿರಥೇಃ ಕಿರೀಟೀ
ಸುವರ್ಣಪುಂಖೇನ ಶಿತೇನ ಯತ್ತಃ|
08067014c ಶ್ರಿಯಾ ಜ್ವಲಂತಂ ಧ್ವಜಮುನ್ಮಮಾಥ
ಮಹಾರಥಸ್ಯಾಧಿರಥೇರ್ಮಹಾತ್ಮಾ||
ಅನಂತರ ಕಿರೀಟಿಯು ಸುವರ್ಣಪುಂಖಗಳುಳ್ಳ ನಿಶಿತ ಕ್ಷುರದಿಂದ ಪ್ರಯತ್ನಮಾಡಿ ಮಹಾತ್ಮ ಆಧಿರಥಿಯ ಮಹಾರಥದ ಮೇಲೆ ಹಾರಾಡುತ್ತಿದ್ದ ಆನೆಯ ಹಗ್ಗದ ಚಿಹ್ನೆಯನ್ನು ಹೊಂದಿದ್ದ, ಸುವರ್ಣ-ಮುತ್ತು-ವಜ್ರಗಳಿಂದ ಸಮಲಂಕೃತವಾಗಿದ್ದ, ಉತ್ತಮ ಶಿಲ್ಪಿಗಳಿಂದ ನಿರ್ಮಿಸಲ್ಪಟ್ಟಿದ್ದ, ಸೂರ್ಯನಂತೆ ವಿಶ್ವವಿಖ್ಯಾತವಾಗಿದ್ದ, ನಿನ್ನ ಸೈನ್ಯದ ವಿಜಯಕ್ಕೆ ಆಧಾರಸ್ತಂಭವೆಂತಿದ್ದ, ಶತ್ರುಗಳಿಗೆ ಭಯವನ್ನುಂಟುಮಾಡುತ್ತಿದ್ದ, ಸರ್ವರ ಸ್ತುತಿಗೂ ಪಾತ್ರವಾಗಿದ್ದ, ಕಾಂತಿಯಲ್ಲಿ ಸೂರ್ಯಾಗ್ನಿಗಳಿಗೆ ಸಮಾನವಾಗಿದ್ದ ಧ್ವಜವನ್ನು ಪ್ರಹರಿಸಿ ಕೆಡವಿದನು.
08067015a ಯಶಶ್ಚ ಧರ್ಮಶ್ಚ ಜಯಶ್ಚ ಮಾರಿಷ
ಪ್ರಿಯಾಣಿ ಸರ್ವಾಣಿ ಚ ತೇನ ಕೇತುನಾ|
08067015c ತದಾ ಕುರೂಣಾಂ ಹೃದಯಾನಿ ಚಾಪತನ್
ಬಭೂವ ಹಾಹೇತಿ ಚ ನಿಸ್ವನೋ ಮಹಾನ್||
ಮಾರಿಷ! ಆ ಧ್ವಜದ ಜೊತೆಯಲ್ಲಿಯೇ ಕೌರವರ ಯಶಸ್ಸು, ಧರ್ಮ, ಜಯ, ಮತ್ತು ಸರ್ವರ ಸಂತೋಷವೂ, ಹಾಗೆಯೇ ಕುರುಗಳ ಹೃದಯವೂ ಕೆಳಗೆ ಬಿದ್ದಿತು! ನಿಟ್ಟುಸಿರಿನ ಮಹಾ ಹಾಹಾಕಾರವುಂಟಾಯಿತು.
08067016a ಅಥ ತ್ವರನ್ಕರ್ಣವಧಾಯ ಪಾಂಡವೋ
ಮಹೇಂದ್ರವಜ್ರಾನಲದಂಡಸಂನಿಭಂ|
08067016c ಆದತ್ತ ಪಾರ್ಥೋಽಂಜಲಿಕಂ ನಿಷಂಗಾತ್
ಸಹಸ್ರರಶ್ಮೇರಿವ ರಶ್ಮಿಮುತ್ತಮಂ|
ಕರ್ಣನ ವಧೆಯನ್ನು ತ್ವರೆಗೊಳಿಸಲು ಕೂಡಲೇ ಪಾಂಡವ ಪಾರ್ಥನು ಮಹೇಂದ್ರನ ವಜ್ರ, ಅಗ್ನಿದಂಡ ಮತ್ತು ಸೂರ್ಯನ ಶ್ರೇಷ್ಠ ಕಿರಣಗಳಿಗೆ ಸಮನಾದ ಅಂಜಲಿಕವನ್ನು ಕೈಗೆತ್ತಿಕೊಂಡನು.
08067017a ಮರ್ಮಚ್ಛಿದಂ ಶೋಣಿತಮಾಂಸದಿಗ್ಧಂ
ವೈಶ್ವಾನರಾರ್ಕಪ್ರತಿಮಂ ಮಹಾರ್ಹಂ|
08067017c ನರಾಶ್ವನಾಗಾಸುಹರಂ ತ್ರ್ಯರತ್ನಿಂ
ಷಡ್ವಾಜಮಂಜೋಗತಿಮುಗ್ರವೇಗಂ||
08067018a ಸಹಸ್ರನೇತ್ರಾಶನಿತುಲ್ಯತೇಜಸಂ
ಸಮಾನಕ್ರವ್ಯಾದಮಿವಾತಿದುಃಸಹಂ|
08067018c ಪಿನಾಕನಾರಾಯಣಚಕ್ರಸಂನಿಭಂ
ಭಯಂಕರಂ ಪ್ರಾಣಭೃತಾಂ ವಿನಾಶನಂ||
08067019a ಯುಕ್ತ್ವಾ ಮಹಾಸ್ತ್ರೇಣ ಪರೇಣ ಮಂತ್ರವಿದ್
ವಿಕೃಷ್ಯ ಗಾಂಡೀವಮುವಾಚ ಸಸ್ವನಂ|
ಮರ್ಮಗಳನ್ನು ಕತ್ತರಿಸುವ, ರಕ್ತಮಾಂಸಗಳಿಂದ ಲೇಪಿತವಾಗಿದ್ದ, ಸೂರ್ಯಾಗ್ನಿಸದೃಶವಾಗಿದ್ದ, ಬಹುಮೂಲ್ಯವಾಗಿದ್ದ, ನರ-ಅಶ್ವ-ಗಜಗಳನ್ನು ಸಂಹರಿಸಬಲ್ಲ, ಮೂರುಮೊಳ ಉದ್ದದ, ಆರು ರೆಕ್ಕೆಗಳುಳ್ಳ, ಉಗ್ರವೇಗದ, ಸಹಸ್ರನೇತ್ರನ ವಜ್ರಾಯುಧಕ್ಕೆ ಸಮಾನ ತೇಜಸ್ಸುಳ್ಳ, ಬಾಯಿತೆರೆದ ಅಂತಕನಂತೆ ಸಹಿಸಲಸಾಧ್ಯವಾದ, ಶಿವನ ಪಿನಾಕಕ್ಕೂ, ನಾರಾಯಣನ ಚಕ್ರಕ್ಕೂ ಸಮನಾಗಿದ್ದ, ಭಯಂಕರವಾಗಿದ್ದ, ಪ್ರಾಣಭೃತರ ವಿನಾಶಕಾರಿಯಾಗಿದ್ದ, ಆ ಬಾಣವನ್ನು ಮಹಾಸ್ತ್ರದಿಂದ ಅಭಿಮಂತ್ರಿಸಿ ಗಾಂಡೀವಕ್ಕೆ ಹೂಡಿ ಟೇಂಕಾರದೊಂದಿಗೆ ಕೂಗಿ ಹೇಳಿದನು:
08067019c ಅಯಂ ಮಹಾಸ್ತ್ರೋಽಪ್ರತಿಮೋ ಧೃತಃ ಶರಃ
ಶರೀರಭಿಚ್ಚಾಸುಹರಶ್ಚ ದುರ್ಹೃದಃ||
08067020a ತಪೋಽಸ್ತಿ ತಪ್ತಂ ಗುರವಶ್ಚ ತೋಷಿತಾ
ಮಯಾ ಯದಿಷ್ಟಂ ಸುಹೃದಾಂ ತಥಾ ಶ್ರುತಂ|
08067020c ಅನೇನ ಸತ್ಯೇನ ನಿಹಂತ್ವಯಂ ಶರಃ
ಸುದಂಶಿತಃ ಕರ್ಣಮರಿಂ ಮಮಾಜಿತಃ||
“ನಾನು ತಪಸ್ಸನ್ನು ತಪಿಸಿದ್ದರೆ, ಗುರುಗಳನ್ನು ತೃಪ್ತಿಗೊಳಿಸಿದ್ದರೆ, ಯಜ್ಞಯಾಗಾದಿಗಳನ್ನು ಮಾಡಿದ್ದರೆ, ಸುಹೃದಯರನ್ನು ಕೇಳಿದ್ದಿದ್ದರೆ, ಈ ಸತ್ಯಗಳಿಂದ ಸುವಿಹಿತವಾಗಿ ಸಂಧಾನಗೊಂಡಿರುವ, ಶತ್ರುಗಳ ಶರೀರವನ್ನೂ ಪ್ರಾಣವನ್ನೂ ಹರಣಮಾಡಬಲ್ಲ ಈ ಅಪ್ರತಿಮ, ಧೃತ, ಮಹಾಸ್ತ್ರದಿಂದ ಅಭಿಮಂತ್ರಿತ ಈ ಶರವು ನನ್ನ ಪ್ರಬಲಶತ್ರು ಕರ್ಣನನ್ನು ಸಂಹರಿಸಲಿ!”
08067021a ಇತ್ಯೂಚಿವಾಂಸ್ತಂ ಸ ಮುಮೋಚ ಬಾಣಂ
ಧನಂಜಯಃ ಕರ್ಣವಧಾಯ ಘೋರಂ|
08067021c ಕೃತ್ಯಾಮಥರ್ವಾಂಗಿರಸೀಮಿವೋಗ್ರಾಂ
ದೀಪ್ತಾಮಸಹ್ಯಾಂ ಯುಧಿ ಮೃತ್ಯುನಾಪಿ||
ಹೀಗೆ ಹೇಳಿ ಧನಂಜಯನು ಕರ್ಣನ ವಧೆಗೆಂದು ಅಥರ್ವಾಂಗೀರಸ ಮಂತ್ರದಿಂದ ಮಾಡಿದ ಕೃತ್ಯವು ಹೇಗೆ ಉಗ್ರವೂ, ಪ್ರದೀಪ್ತವೂ, ಮೃತ್ಯುವಿಗೂ ಯುದ್ಧದ್ದಲ್ಲಿ ಎದುರಿಸಲಸಾಧ್ಯವಾಗಿರುತ್ತದೆಯೋ ಹಾಗಿದ್ದ ಆ ಘೋರ ಬಾಣವನ್ನು ಪ್ರಯೋಗಿಸಿದನು.
08067022a ಬ್ರುವನ್ಕಿರೀಟೀ ತಮತಿಪ್ರಹೃಷ್ಟೋ
ಅಯಂ ಶರೋ ಮೇ ವಿಜಯಾವಹೋಽಸ್ತು|
08067022c ಜಿಘಾಂಸುರರ್ಕೇಂದುಸಮಪ್ರಭಾವಃ
ಕರ್ಣಂ ಸಮಾಪ್ತಿಂ ನಯತಾಂ ಯಮಾಯ||
ಅದರಿಂದ ಪರಮ ಹೃಷ್ಟನಾದ ಕಿರೀಟಿಯು ಪುನಃ ಹೇಳಿದನು: “ಈ ಶರವು ನನಗೆ ವಿಜಯದಾಯಕವಾಗಲಿ! ಚಂದ್ರಾದಿತ್ಯರ ಪ್ರಭೆಗೆ ಸಮಾನವಾಗಿರುವ ಇದು ಕರ್ಣನನ್ನು ಸಂಹರಿಸಿ, ಸಮಾಪ್ತಿಗೊಳಿಸಿ, ಯಮನಲ್ಲಿಗೆ ಕಳುಹಿಸಲಿ!”
08067023a ತೇನೇಷುವರ್ಯೇಣ ಕಿರೀಟಮಾಲೀ
ಪ್ರಹೃಷ್ಟರೂಪೋ ವಿಜಯಾವಹೇನ|
08067023c ಜಿಘಾಂಸುರರ್ಕೇಂದುಸಮಪ್ರಭೇಣ
ಚಕ್ರೇ ವಿಷಕ್ತಂ ರಿಪುಮಾತತಾಯೀ||
ಯುದ್ಧದಲ್ಲಿ ವಿಜಯವನ್ನು ತರಬಲ್ಲ ಆ ಶ್ರೇಷ್ಠಬಾಣದಿಂದ ಪ್ರಹೃಷ್ಟನಾಗಿ ಕಾಣುತ್ತಿದ್ದ ಕಿರೀಟಮಾಲಿಯು ತನ್ನ ರಿಪು ಆತಯಾಯಿಯನ್ನು ಸಂಹರಿಸಲು ಚಂದ್ರಾದಿತ್ಯಸಮ ಪ್ರಭೆಯುಳ್ಳ ಆ ಶರವನ್ನು ಪ್ರಯೋಗಿಸಿದನು.
08067024a ತದುದ್ಯತಾದಿತ್ಯಸಮಾನವರ್ಚಸಂ
ಶರನ್ನಭೋಮಧ್ಯಗಭಾಸ್ಕರೋಪಮಂ|
08067024c ವರಾಂಗಮುರ್ವ್ಯಾಂ ಅಪತಚ್ಚಮೂಪತೇರ್
ದಿವಾಕರೋಽಸ್ತಾದಿವ ರಕ್ತಮಂಡಲಃ||
ಉದಯಿಸುವ ಸೂರ್ಯನ ಸಮಾನ ವರ್ಚಸ್ಸುಳ್ಳ ಮತ್ತು ನಭೋಮಧ್ಯದಲ್ಲಿದ್ದ ಭಾಸ್ಕರನಂತಿರುವ ಆ ಬಾಣವು ಕೆಂಪಾದ ಅಸ್ತಾಚಲದಿಂದ ದಿವಾಕರನು ಕೆಳಗೆ ಬೀಳುತ್ತಿರುವನೋ ಎಂಬಂತೆ ಕರ್ಣನ ಶಿರಸ್ಸನ್ನು ಸೇನೆಯ ಅಗ್ರಭಾಗದಲ್ಲಿ ಕೆಡವಿತು.
08067025a ತದಸ್ಯ ದೇಹೀ ಸತತಂ ಸುಖೋದಿತಂ
ಸ್ವರೂಪಮತ್ಯರ್ಥಮುದಾರಕರ್ಮಣಃ|
08067025c ಪರೇಣ ಕೃಚ್ಚ್ರೇಣ ಶರೀರಮಾತ್ಯಜದ್
ಗೃಹಂ ಮಹರ್ದ್ಧೀವ ಸಸಂಗಮೀಶ್ವರಃ||
ಉದಾರಕರ್ಮಿ ಕರ್ಣನ ಶಿರಸ್ಸು ಐಶ್ವರ್ಯವಂತನು ಸಂಪತ್ತಿನಿಂದ ಮತ್ತು ಪ್ರಿಯಜನರಿಂದ ತುಂಬಿರುವ ಮನೆಯನ್ನು ಬಹಳ ಕಷ್ಟದಿಂದ ಬಿಟ್ಟುಹೋಗುವಂತೆ ಬಹಳ ಕಷ್ಟದಿಂದ ಆ ಈಶ್ವರನ ಸತತವೂ ಸುಖವನ್ನೇ ಅನುಭವಿಸಿದ್ದ ಆ ಅತ್ಯಂತ ಸುಂದರ ದೇಹಸಂಗವನ್ನು ತೊರೆದು ಹೋಯಿತು.
08067026a ಶರೈರ್ವಿಭುಗ್ನಂ ವ್ಯಸು ತದ್ವಿವರ್ಮಣಃ
ಪಪಾತ ಕರ್ಣಸ್ಯ ಶರೀರಮುಚ್ಚ್ರಿತಂ|
08067026c ಸ್ರವದ್ವ್ರಣಂ ಗೈರಿಕತೋಯವಿಸ್ರವಂ
ಗಿರೇರ್ಯಥಾ ವಜ್ರಹತಂ ಶಿರಸ್ತಥಾ||
ವಜ್ರದಿಂದ ಹತವಾದ ಗಿರಿಯಂತೆ ಶರದಿಂದ ಶಿರವು ಕತ್ತರಿಸಲ್ಪಡಲು ಪ್ರಾಣವನ್ನು ತೊರೆದ ಕರ್ಣನ ಎತ್ತರ ಶರೀರವು ಗೈರಿಕಾದಿ ಧಾತುಗಳಿಂದ ಕೂಡಿದ ಕೆಂಪುನೀರನ್ನು ಸುರಿಸುವ ಪರ್ವತದಂತೆ ರಕ್ತವನ್ನು ಸುರಿಸುತ್ತಾ ಭೂಮಿಯ ಮೇಲೆ ಬಿದ್ದಿತು.
08067027a ದೇಹಾತ್ತು ಕರ್ಣಸ್ಯ ನಿಪಾತಿತಸ್ಯ
ತೇಜೋ ದೀಪ್ತಂ ಖಂ ವಿಗಾಹ್ಯಾಚಿರೇಣ|
08067027c ತದದ್ಭುತಂ ಸರ್ವಮನುಷ್ಯಯೋಧಾಃ
ಪಶ್ಯಂತಿ ರಾಜನ್ನಿಹತೇ ಸ್ಮ ಕರ್ಣೇ||
ಕರ್ಣನ ದೇಹವು ಕೆಳಗೆ ಬೀಳುತ್ತಲೇ ಅವನ ದೇಹದಿಂದ ಬೆಳಗುತ್ತಿರುವ ತೇಜಸ್ಸೊಂದು ಹೊರಹೊರಟು ಆಕಾಶದಲ್ಲಿ ಸೂರ್ಯಮಂಡಲದಲ್ಲಿ ಲೀನವಾಯಿತು. ರಾಜನ್! ಕರ್ಣನು ಹತನಾದಾಗ ನಡೆದ ಆ ಅದ್ಭುತವನ್ನು ಸರ್ವ ಮನುಷ್ಯಯೋಧರೂ ನೋಡಿದರು.
08067028a ತಂ ಸೋಮಕಾಃ ಪ್ರೇಕ್ಷ್ಯ ಹತಂ ಶಯಾನಂ
ಪ್ರೀತಾ ನಾದಂ ಸಹ ಸೈನ್ಯೈರಕುರ್ವನ್|
08067028c ತೂರ್ಯಾಣಿ ಚಾಜಘ್ನುರತೀವ ಹೃಷ್ಟಾ
ವಾಸಾಂಸಿ ಚೈವಾದುಧುವುರ್ಭುಜಾಂಶ್ಚ|
08067028e ಬಲಾನ್ವಿತಾಶ್ಚಾಪ್ಯಪರೇ ಹ್ಯನೃತ್ಯನ್ನ್
ಅನ್ಯೋನ್ಯಮಾಶ್ಲಿಷ್ಯ ನದಂತ ಊಚುಃ||
ಹತನಾಗಿ ಮಲಗಿರುವ ಅವನನ್ನು ನೋಡಿ ಪ್ರೀತರಾದ ಸೋಮಕರು ಸೇನೆಗಳೊಂದಿಗೆ ನಿನಾದಿಸಿದರು. ಅತೀವ ಹೃಷ್ಟರಾಗಿ ತೂರ್ಯಗಳನ್ನು ಮೊಳಗಿಸಿದರು ಮತ್ತು ಭುಜಗಳನ್ನು ಮೇಲೆತ್ತಿ ಉತ್ತರೀಯಗಳನ್ನು ಹಾರಿಸಿದರು. ಇತರ ಬಲಾನ್ವಿತರು ಅನ್ಯೋನ್ಯರನ್ನು ಆಲಂಗಿಸಿ, ಕುಣಿದಾಡಿ, ಗರ್ಜಿಸುತ್ತಾ ಒಬ್ಬರಿಗೊಬ್ಬರು ಹೀಗೆ ಮಾತನಾಡಿಕೊಂಡರು:
08067029a ದೃಷ್ಟ್ವಾ ತು ಕರ್ಣಂ ಭುವಿ ನಿಷ್ಟನಂತಂ
ಹತಂ ರಥಾತ್ಸಾಯಕೇನಾವಭಿನ್ನಂ|
08067029c ಮಹಾನಿಲೇನಾಗ್ನಿಮಿವಾಪವಿದ್ಧಂ
ಯಜ್ಞಾವಸಾನೇ ಶಯನೇ ನಿಶಾಂತೇ||
“ಸಾಯಕದಿಂದ ಕತ್ತರಿಸಲ್ಪಟ್ಟು ರಥದಿಂದ ಕೆಳಕ್ಕೆ ಬಿದ್ದಿರುವ ಅವನು ಚಂಡಮಾರುತದಿಂದ ಭಗ್ನವಾಗಿ ಕೆಳಗೆ ಬಿದ್ದ ಪರ್ವತ ಶಿಖರದಂತೆಯೂ, ಯಜ್ಞಾವಸಾನದ ಅಗ್ನಿಯಂತೆಯೂ, ಮುಳುಗಿರುವ ಸೂರ್ಯನಂತೆಯೂ ಕಾಣುತ್ತಿದ್ದಾನೆ!
08067030a ಶರೈರಾಚಿತಸರ್ವಾಂಗಃ ಶೋಣಿತೌಘಪರಿಪ್ಲುತಃ|
08067030c ವಿಭಾತಿ ದೇಹಃ ಕರ್ಣಸ್ಯ ಸ್ವರಶ್ಮಿಭಿರಿವಾಂಶುಮಾನ್||
ಸರ್ವಾಂಗಗಳಲ್ಲಿಯೂ ಶರಗಳಿಂದ ಚುಚ್ಚಲ್ಪಟ್ಟು ಸುರಿಯುತ್ತಿರುವ ರಕ್ತದಿಂದ ಲೇಪಿತನಾಗಿರುವ ಕರ್ಣನ ದೇಹವು ತನ್ನದೇ ರಶ್ಮಿಗಳಿಂದ ಬೆಳಗುವ ಸೂರ್ಯನಂತೆ ಬೆಳಗುತ್ತಿದೆ!
08067031a ಪ್ರತಾಪ್ಯ ಸೇನಾಮಾಮಿತ್ರೀಂ ದೀಪ್ತೈಃ ಶರಗಭಸ್ತಿಭಿಃ|
08067031c ಬಲಿನಾರ್ಜುನಕಾಲೇನ ನೀತೋಽಸ್ತಂ ಕರ್ಣಭಾಸ್ಕರಃ||
ಉರಿಯುತ್ತಿರುವ ಶರಗಳೆಂಬ ಕಿರಣಗಳಿಂದ ಸೇನೆಗಳನ್ನು ತೀವ್ರವಾಗಿ ಉರಿಸಿ ಬಲಶಾಲಿ ಅರ್ಜುನನೆಂಬ ಸಮಯದಿಂದ ಕರ್ಣನೆಂಬ ಭಾಸ್ಕರನು ಅಸ್ತಗೊಂಡಿದ್ದಾನೆ!
08067032a ಅಸ್ತಂ ಗಚ್ಚನ್ಯಥಾದಿತ್ಯಃ ಪ್ರಭಾಮಾದಾಯ ಗಚ್ಚತಿ|
08067032c ಏವಂ ಜೀವಿತಮಾದಾಯ ಕರ್ಣಸ್ಯೇಷುರ್ಜಗಾಮ ಹ||
ಅಸ್ತನಾಗುತ್ತಿರುವ ಸೂರ್ಯನು ಹೇಗೆ ತನ್ನ ಪ್ರಭೆಗಳನ್ನೂ ತೆಗೆದುಕೊಂಡು ಹೋಗುತ್ತಾನೋ ಹಾಗೆ ಈ ಶರವು ಕರ್ಣನ ಜೀವವನ್ನೂ ತೆಗೆದುಕೊಂಡು ಹೋಯಿತು!
08067033a ಅಪರಾಹ್ಣೇ ಪರಾಹ್ಣಸ್ಯ ಸೂತಪುತ್ರಸ್ಯ ಮಾರಿಷ|
08067033c ಚಿನ್ನಮಂಜಲಿಕೇನಾಜೌ ಸೋತ್ಸೇಧಮಪತಚ್ಚಿರಃ||
ಮಾರಿಷ! ಸೂತಪುತ್ರನ ಮರಣವು ದಿವಸದ ಕಡೆಯ ಭಾಗದಲ್ಲಾಯಿತು. ಅಂಜಲಿಕ ಬಾಣದಿಂದ ಕತ್ತರಿಸಲ್ಪಟ್ಟು ಶಿರಸ್ಸು ದೇಹದಿಂದ ಕೆಳಗೆ ಬಿದ್ದಿತು.
08067034a ಉಪರ್ಯುಪರಿ ಸೈನ್ಯಾನಾಂ ತಸ್ಯ ಶತ್ರೋಸ್ತದಂಜಸಾ|
08067034c ಶಿರಃ ಕರ್ಣಸ್ಯ ಸೋತ್ಸೇಧಮಿಷುಃ ಸೋಽಪಾಹರದ್ದ್ರುತಂ||
ಅದು ಸೇನೆಯ ಮೇಲ್ಭಾಗದಲ್ಲಿಯೇ ಹೋಗುತ್ತಾ ಎತ್ತರವಾದ ಶಿರಸ್ಸನ್ನು ಬಹಳ ಬೇಗ ಅಪಹರಿಸಿಬಿಟ್ಟಿತು!””
08067035 ಸಂಜಯ ಉವಾಚ|
08067035a ಕರ್ಣಂ ತು ಶೂರಂ ಪತಿತಂ ಪೃಥಿವ್ಯಾಂ
ಶರಾಚಿತಂ ಶೋಣಿತದಿಗ್ಧಗಾತ್ರಂ|
08067035c ದೃಷ್ಟ್ವಾ ಶಯಾನಂ ಭುವಿ ಮದ್ರರಾಜಶ್
ಚಿನ್ನಧ್ವಜೇನಾಪಯಯೌ ರಥೇನ||
ಸಂಜಯನು ಹೇಳಿದನು: “ಬಾಣಗಳಿಂದ ಚುಚ್ಚಲ್ಪಟ್ಟು ರಕ್ತದಿಂದ ತೋಯ್ದುಹೋಗಿ ಭೂಮಿಯ ಮೇಲೆ ಬಿದ್ದಿದ್ದ ಶೂರ ಕರ್ಣನನ್ನು ನೋಡಿ ಮದ್ರರಾಜನು ಧ್ವಜವಿಹೀನ ರಥದಿಂದ ಹೊರಬಂದು ಹೊರಟು ಹೋದನು.
08067036a ಕರ್ಣೇ ಹತೇ ಕುರವಃ ಪ್ರಾದ್ರವಂತ
ಭಯಾರ್ದಿತಾ ಗಾಢವಿದ್ಧಾಶ್ಚ ಸಂಖ್ಯೇ|
08067036c ಅವೇಕ್ಷಮಾಣಾ ಮುಹುರರ್ಜುನಸ್ಯ
ಧ್ವಜಂ ಮಹಾಂತಂ ವಪುಷಾ ಜ್ವಲಂತಂ||
ಕರ್ಣನು ಹತನಾಗಲು ಬಾಣಗಳಿಂದ ಗಾಢವಾಗಿ ಗಾಯಗೊಂಡಿದ್ದ ಕೌರವ ಸೇನೆಯು ರಣದಲ್ಲಿ ತೇಜಸ್ಸಿನಿಂದ ಬೆಳಗುತ್ತಿದ್ದ ಅರ್ಜುನನ ಮಹಾಧ್ವಜವನ್ನು ತಿರುಗಿ ತಿರುಗಿ ನೋಡುತ್ತಾ ಪಲಾಯನಮಾಡಿತು.
08067037a ಸಹಸ್ರನೇತ್ರಪ್ರತಿಮಾನಕರ್ಮಣಃ
ಸಹಸ್ರಪತ್ರಪ್ರತಿಮಾನನಂ ಶುಭಂ|
08067037c ಸಹಸ್ರರಶ್ಮಿರ್ದಿನಸಂಕ್ಷಯೇ ಯಥಾ
ತಥಾಪತತ್ತಸ್ಯ ಶಿರೋ ವಸುಂಧರಾಂ||
ಸಹಸ್ರನೇತ್ರನ ಕರ್ಮಗಳಿಗೆ ಸಮಾನ ಕರ್ಮಗಳನ್ನು ಮಾಡಿದ್ದ ಕರ್ಣನ ಸಹಸ್ರದಳ ಕಮಲಕ್ಕೆ ಸಮಾನ ಶುಭ ಮುಖವು ದಿನವು ಕಳೆದಾಗ ಮುಳುಗುವ ಸಹಸ್ರರಶ್ಮಿ ಸೂರ್ಯನು ಪಶ್ಚಿಮ ಪರ್ವತದಲ್ಲಿ ಬೀಳುವಂತೆ ಭೂಮಿಯ ಮೇಲೆ ಬಿದ್ದಿತು.”
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಕರ್ಣವಧೇ ಸಪ್ತಷಷ್ಠಿತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಕರ್ಣವಧ ಎನ್ನುವ ಅರವತ್ತೇಳನೇ ಅಧ್ಯಾಯವು.