ದ್ರೋಣ ಪರ್ವ: ಸಂಶಪ್ತಕವಧ ಪರ್ವ
೧೮
ಸಂಶಪ್ತಕರೊಡನೆ ಅರ್ಜುನನ ಯುದ್ಧ (೧-೩೯).
07018001 ಸಂಜಯ ಉವಾಚ|
07018001a ದೃಷ್ಟ್ವಾ ತು ಸನ್ನಿವೃತ್ತಾಂಸ್ತಾನ್ಸಂಶಪ್ತಕಗಣಾನ್ಪುನಃ|
07018001c ವಾಸುದೇವಂ ಮಹಾತ್ಮಾನಮರ್ಜುನಃ ಸಮಭಾಷತ||
ಸಂಜಯನು ಹೇಳಿದನು: “ಆ ಸಂಶಪ್ತಕಗಣಗಳು ಪುನಃ ಹಿಂದಿರುಗಿದುದನ್ನು ನೋಡಿ ಅರ್ಜುನನು ಮಹಾತ್ಮ ವಾಸುದೇವನಿಗೆ ಹೇಳಿದನು:
07018002a ಚೋದಯಾಶ್ವಾನ್ ಹೃಷೀಕೇಶ ಸಂಶಪ್ತಕಗಣಾನ್ಪ್ರತಿ|
07018002c ನೈತೇ ಹಾಸ್ಯಂತಿ ಸಂಗ್ರಾಮಂ ಜೀವಂತ ಇತಿ ಮೇ ಮತಿಃ||
“ಹೃಷೀಕೇಶ! ಸಂಶಪ್ತಕಗಣಗಳ ಕಡೆ ಕುದುರೆಗಳನ್ನು ಓಡಿಸು. ಜೀವಂತವಿರುವವರೆಗೂ ಇವರು ಯುದ್ಧಮಾಡುವುದನ್ನು ಬಿಡುವುದಿಲ್ಲವೆಂದು ನನಗನ್ನಿಸುತ್ತಿದೆ.
07018003a ಪಶ್ಯ ಮೇಽಸ್ತ್ರಬಲಂ ಘೋರಂ ಬಾಹ್ವೋರಿಷ್ವಸನಸ್ಯ ಚ|
07018003c ಅದ್ಯೈತಾನ್ಪಾತಯಿಷ್ಯಾಮಿ ಕ್ರುದ್ಧೋ ರುದ್ರಃ ಪಶೂನಿವ||
ನನ್ನ ಘೋರ ಅಸ್ತ್ರಬಲವನ್ನು ಮತ್ತು ಬಾಹು-ಧನುಸ್ಸುಗಳ ಬಲವನ್ನು ನೋಡು! ಕ್ರುದ್ಧ ರುದ್ರನು ಪಶುಗಳನ್ನು ಹೇಗೋ ಹಾಗೆ ಇಂದು ಇವರನ್ನು ಉರುಳಿಸುತ್ತೇನೆ.”
07018004a ತತಃ ಕೃಷ್ಣಃ ಸ್ಮಿತಂ ಕೃತ್ವಾ ಪರಿಣಂದ್ಯ ಶಿವೇನ ತಂ|
07018004c ಪ್ರಾವೇಶಯತ ದುರ್ಧರ್ಷೋ ಯತ್ರ ಯತ್ರೈಚ್ಚದರ್ಜುನಃ||
ಆಗ ಕೃಷ್ಣನು ನಸುನಕ್ಕು ಶುಭಾಶಂಸನೆಗೆಳಿಂದ ಅವನನ್ನು ಅಭಿನಂದಿಸಿ ದುರ್ಧರ್ಷ ಅರ್ಜುನನು ಎಲ್ಲಿಗೆ ಹೋಗಬಯಸಿದನೋ ಅಲ್ಲಿಗೆ ಪ್ರವೇಶಿಸಿದನು.
07018005a ಬಭ್ರಾಜೇ ಸ ರಥೋಽತ್ಯರ್ಥಮುಹ್ಯಮಾನೋ ರಣೇ ತದಾ|
07018005c ಉಹ್ಯಮಾನಮಿವಾಕಾಶೇ ವಿಮಾನಂ ಪಾಂಡುರೈರ್ಹಯೈಃ||
ರಣರಂಗದಲ್ಲಿ ಬಿಳಿಯ ಕುದುರುಗಳು ಎಳೆದುಕೊಂಡು ಹೋಗುತ್ತಿದ್ದ ಆ ಬಿಳೀ ರಥವು ಆಕಾಶದಲ್ಲಿ ಹಾರಿಕೊಂಡು ಹೋಗುತ್ತಿದ್ದ ವಿಮಾನದಂತೆ ವಿಜೃಂಭಿಸಿತು.
07018006a ಮಂಡಲಾನಿ ತತಶ್ಚಕ್ರೇ ಗತಪ್ರತ್ಯಾಗತಾನಿ ಚ|
07018006c ಯಥಾ ಶಕ್ರರಥೋ ರಾಜನ್ಯುದ್ಧೇ ದೇವಾಸುರೇ ಪುರಾ||
ರಾಜನ್! ಹಿಂದೆ ದೇವಾಸುರರ ಯುದ್ಧದಲ್ಲಿ ಶಕ್ರನ ರಥವು ಹೇಗೋ ಹಾಗೆ ಇವರ ರಥವೂ ಕೂಡ ಮಂಡಲಾಕಾರದಲ್ಲಿ, ಮುಂದೆ ಮತ್ತು ಹಿಂದೆ ಚಲಿಸುತ್ತಿತ್ತು.
07018007a ಅಥ ನಾರಾಯಣಾಃ ಕ್ರುದ್ಧಾ ವಿವಿಧಾಯುಧಪಾಣಯಃ|
07018007c ಚಾದಯಂತಃ ಶರವ್ರಾತೈಃ ಪರಿವವ್ರುರ್ಧನಂಜಯಂ||
ಆಗ ನಾರಾಯಣರು ಕ್ರುದ್ಧರಾಗಿ ವಿವಿಧ ಆಯುಧಗಳನ್ನು ಹಿಡಿದು ಧನಂಜಯನನ್ನು ಬಾಣಗಳ ಮಳೆಯಿಂದ ಮುಚ್ಚಿ ಸುತ್ತುವರೆದರು.
07018008a ಅದೃಶ್ಯಂ ಚ ಮುಹೂರ್ತೇನ ಚಕ್ರುಸ್ತೇ ಭರತರ್ಷಭ|
07018008c ಕೃಷ್ಣೇನ ಸಹಿತಂ ಯುದ್ಧೇ ಕುಂತೀಪುತ್ರಂ ಧನಂಜಯಂ||
ಭರತರ್ಷಭ! ಅವರು ಯುದ್ಧದಲ್ಲಿ ಕೃಷ್ಣನ ಸಹಿತ ಕುಂತೀಪುತ್ರ ಧನಂಜಯನನ್ನು ಮುಹೂರ್ತಕಾಲ ಅದೃಶ್ಯನನ್ನಾಗಿ ಮಾಡಿಬಿಟ್ಟರು.
07018009a ಕ್ರುದ್ಧಸ್ತು ಫಲ್ಗುನಃ ಸಂಖ್ಯೇ ದ್ವಿಗುಣೀಕೃತವಿಕ್ರಮಃ|
07018009c ಗಾಂಡೀವಮುಪಸಮ್ಮೃಜ್ಯ ತೂರ್ಣಂ ಜಗ್ರಾಹ ಸಂಯುಗೇ||
ಕ್ರುದ್ಧ ಫಲ್ಗುನನ ವಿಕ್ರಮವು ರಣದಲ್ಲಿ ಇಮ್ಮಡಿಯಾಯಿತು. ತಕ್ಷಣವೇ ಸಂಯುಗದಲ್ಲಿ ಅವನು ಗಾಂಡೀವವನ್ನು ಹಿಡಿದು ಶಿಂಜಿನಿಯನ್ನು ಮೀಟಿದನು.
07018010a ಬದ್ಧ್ವಾ ಚ ಭೃಕುಟೀಂ ವಕ್ತ್ರೇ ಕ್ರೋಧಸ್ಯ ಪ್ರತಿಲಕ್ಷಣಂ|
07018010c ದೇವದತ್ತಂ ಮಹಾಶಂಖಂ ಪೂರಯಾಮಾಸ ಪಾಂಡವಃ||
ಕ್ರೋಧದ ಪ್ರತಿಲಕ್ಷಣವಾದ ಹುಬ್ಬು-ಮುಖಗಳನ್ನು ಗಂಟಿಕ್ಕಿ ಪಾಂಡವನು ಮಹಾಶಂಖ ದೇವದತ್ತವನ್ನು ಜೋರಾಗಿ ಊದಿದನು.
07018011a ಅಥಾಸ್ತ್ರಮರಿಸಂಘಘ್ನಂ ತ್ವಾಷ್ಟ್ರಮಭ್ಯಸ್ಯದರ್ಜುನಃ|
07018011c ತತೋ ರೂಪಸಹಸ್ರಾಣಿ ಪ್ರಾದುರಾಸನ್ ಪೃಥಕ್ ಪೃಥಕ್||
ಆಗ ಅರ್ಜುನನು ಅರಿಸಂಹಾರಕ ತ್ವಾಷ್ಟ್ರವೆಂಬ ಮಹಾ ಅಸ್ತ್ರವನ್ನು ಪ್ರಯೋಗಿಸಲು ಅದರಿಂದ ಪ್ರತ್ಯೇಕ ಪ್ರತ್ಯೇಕವಾಗಿ ಸಹಸ್ರಾರು ರೂಪಗಳು ಹೊರಹೊಮ್ಮಿದವು.
07018012a ಆತ್ಮನಃ ಪ್ರತಿರೂಪೈಸ್ತೈರ್ನಾನಾರೂಪೈರ್ವಿಮೋಹಿತಾಃ|
07018012c ಅನ್ಯೋನ್ಯಮರ್ಜುನಂ ಮತ್ವಾ ಸ್ವಮಾತ್ಮಾನಂ ಚ ಜಘ್ನಿರೇ||
ಅರ್ಜುನನ ರೂಪದಂತೆಯೇ ಇದ್ದ ಸಾವಿರಾರು ಆಕೃತಿಗಳು ಆ ಸೈನಿಕರನ್ನು ಸೇರಿಕೊಳ್ಳಲು ಅವರು ಮೋಹಿತರಾಗಿ ಅನ್ಯೋನ್ಯರನ್ನೇ ಅರ್ಜುನನೆಂದು ತಿಳಿದುಕೊಂಡು ತಾವೇ ತಮ್ಮವರನ್ನು ಸಂಹರಿಸಿದರು.
07018013a ಅಯಮರ್ಜುನೋಽಯಂ ಗೋವಿಂದ ಇಮೌ ಯಾದವಪಾಂಡವೌ|
07018013c ಇತಿ ಬ್ರುವಾಣಾಃ ಸಮ್ಮೂಢಾ ಜಘ್ನುರನ್ಯೋನ್ಯಮಾಹವೇ||
“ಇವನು ಅರ್ಜುನ! ಇವನು ಗೋವಿಂದ! ಇವರಿಬ್ಬರು ಯಾದವ-ಪಾಂಡವರು!” ಎಂದು ಹೇಳುತ್ತಾ, ಸಮ್ಮೂಢರಾಗಿ, ಆಹವದಲ್ಲಿ ಅವರು ಅನ್ಯೋನ್ಯರನ್ನು ಸಂಹರಿಸಿದರು.
07018014a ಮೋಹಿತಾಃ ಪರಮಾಸ್ತ್ರೇಣ ಕ್ಷಯಂ ಜಗ್ಮುಃ ಪರಸ್ಪರಂ|
07018014c ಅಶೋಭಂತ ರಣೇ ಯೋಧಾಃ ಪುಷ್ಪಿತಾ ಇವ ಕಿಂಶುಕಾಃ||
ಪರಮಾಸ್ತ್ರದ ಪ್ರಭಾವದಿಂದ ಮೋಹಿತರಾದ ಅವರು ಪರಸ್ಪರರೊಂದಿಗೆ ಹೊಡೆದಾಡಿ ಕ್ಷಯವನ್ನು ಹೊಂದಿದರು. ರಣದಲ್ಲಿ ಆ ಯೋಧರು ಪುಷ್ಪಭರಿತ ಕಿಂಶುಕಗಳಂತೆ (ಮುತ್ತುಗದ ಮರಗಳಂತೆ) ಶೋಭಿಸಿದರು.
07018015a ತತಃ ಶರಸಹಸ್ರಾಣಿ ತೈರ್ವಿಮುಕ್ತಾನಿ ಭಸ್ಮಸಾತ್|
07018015c ಕೃತ್ವಾ ತದಸ್ತ್ರಂ ತಾನ್ವೀರಾನನಯದ್ಯಮಸಾದನಂ||
ಆಗ ಆ ಅಸ್ತ್ರವು ಆ ವೀರರು ಬಿಟ್ಟ ಸಹಸ್ರಾರು ಬಾಣಗಳನ್ನು ಭಸ್ಮೀಭೂತವಾಗಿಸಿ ಅವರನ್ನು ಯಮಸದನಕ್ಕೆ ಕಳುಹಿಸಿತು.
07018016a ಅಥ ಪ್ರಹಸ್ಯ ಬೀಭತ್ಸುರ್ಲಲಿತ್ಥಾನ್ಮಾಲವಾನಪಿ|
07018016c ಮಾಚೇಲ್ಲಕಾಂಸ್ತ್ರಿಗರ್ತಾಂಶ್ಚ ಯೌಧೇಯಾಂಶ್ಚಾರ್ದಯಚ್ಚರೈಃ||
ಆಗ ಬೀಭತ್ಸುವು ಜೋರಾಗಿ ನಕ್ಕು ಲಲಿತ್ಥ-ಮಾಲವ-ಮಾಚೇಲ್ಲ ಮತ್ತು ತ್ರಿಗರ್ತಯೋಧರನ್ನು ಶರಗಳಿಂದ ಹೊಡೆದು ಚದುರಿಸಿ ಬೇರೆ ಬೇರೆ ಮಾಡಿದನು.
07018017a ತೇ ವಧ್ಯಮಾನಾ ವೀರೇಣ ಕ್ಷತ್ರಿಯಾಃ ಕಾಲಚೋದಿತಾಃ|
07018017c ವ್ಯಸೃಜಂ ಶರವರ್ಷಾಣಿ ಪಾರ್ಥೇ ನಾನಾವಿಧಾನಿ ಚ||
ಆ ವೀರನು ವಧಿಸುತ್ತಿದ್ದ ಕಾಲಚೋದಿತ ಆ ಕ್ಷತ್ರಿಯರು ಪಾರ್ಥನ ಮೇಲೆ ನಾನಾವಿಧದ ಬಾಣಗಳ ಮಳೆಯನ್ನು ಸುರಿಸಿದರು.
07018018a ತತೋ ನೈವಾರ್ಜುನಸ್ತತ್ರ ನ ರಥೋ ನ ಚ ಕೇಶವಃ|
07018018c ಪ್ರತ್ಯದೃಶ್ಯತ ಘೋರೇಣ ಶರವರ್ಷೇಣ ಸಂವೃತಃ||
ಘೋರ ಶರವರ್ಷದಿಂದ ತುಂಬಿಹೋಗಿರಲು ಅಲ್ಲಿ ಅರ್ಜುನನಾಗಲೀ, ರಥವಾಗಲೀ, ಕೇಶವನಾಗಲೀ ಕಾಣಿಸಲಿಲ್ಲ.
07018019a ತತಸ್ತೇ ಲಬ್ಧಲಕ್ಷ್ಯತ್ವಾದನ್ಯೋನ್ಯಮಭಿಚುಕ್ರುಶುಃ|
07018019c ಹತೌ ಕೃಷ್ಣಾವಿತಿ ಪ್ರೀತಾ ವಾಸಾಂಸ್ಯಾದುಧುವುಸ್ತದಾ||
ಆಗ ಅವರು ಅನ್ಯೋನ್ಯರಲ್ಲಿ “ಗುರಿಗೆ ಸಿಲುಕಿ ಇಬ್ಬರೂ ಕೃಷ್ಣರೂ ಹತರಾದರು!” ಎಂದು ಹೇಳಿಕೊಳ್ಳುತ್ತಾ ಸಂತೋಷದಿಂದ ಅಂಗವಸ್ತ್ರಗಳನ್ನು ಮೇಲಕ್ಕೆತ್ತಿ ಕೂಗಿದರು.
07018020a ಭೇರೀಮೃದಂಗಶಂಖಾಂಶ್ಚ ದಧ್ಮುರ್ವೀರಾಃ ಸಹಸ್ರಶಃ|
07018020c ಸಿಂಹನಾದರವಾಂಶ್ಚೋಗ್ರಾಂಶ್ಚಕ್ರಿರೇ ತತ್ರ ಮಾರಿಷ||
ಮಾರಿಷ! ಅಲ್ಲಿ ಸಹಸ್ರಾರು ವೀರರು ಭೇರಿ-ಮೃದಂಗ-ಶಂಖಗಳನ್ನು ಮೊಳಗಿಸಿದರು ಮತ್ತು ಉಗ್ರವಾಗಿ ಸಿಂಹನಾದಗೈದರು.
07018021a ತತಃ ಪ್ರಸಿಷ್ವಿದೇ ಕೃಷ್ಣಃ ಖಿನ್ನಶ್ಚಾರ್ಜುನಮಬ್ರವೀತ್|
07018021c ಕ್ವಾಸಿ ಪಾರ್ಥ ನ ಪಶ್ಯೇ ತ್ವಾಂ ಕಚಿವಿಜ್ಜೀವಸಿ ಶತ್ರುಹನ್||
ಆಗ ಬೆವತುಹೋದ ಕೃಷ್ಣನು ಖಿನ್ನನಾಗಿ ಅರ್ಜುನನಿಗೆ ಹೇಳಿದನು: “ಪಾರ್ಥ! ಎಲ್ಲಿರುವೆ? ನಿನ್ನನ್ನು ಕಾಣುತ್ತಿಲ್ಲವಲ್ಲ! ಶತ್ರುಹನ್! ಜೀವಂತವಿದ್ದೀಯೆ ತಾನೇ?”
07018022a ತಸ್ಯ ತಂ ಮಾನುಷಂ ಭಾವಂ ಭಾವಜ್ಞೋಽಽಜ್ಞಾಯ ಪಾಂಡವಃ|
07018022c ವಾಯವ್ಯಾಸ್ತ್ರೇಣ ತೈರಸ್ತಾಂ ಶರವೃಷ್ಟಿಮಪಾಹರತ್||
ಅವನ ಆ ಮಾನುಷ ಭಾವವನ್ನು ಅರಿತ ಭಾವಜ್ಞ ಪಾಂಡವನು ಕೂಡಲೇ ವಾಯುವ್ಯಾಸ್ತ್ರದಿಂದ ಆ ಶರವೃಷ್ಠಿಯನ್ನು ಹೋಗಲಾಡಿಸಿದನು.
07018023a ತತಃ ಸಂಶಪ್ತಕವ್ರಾತಾನ್ಸಾಶ್ವದ್ವಿಪರಥಾಯುಧಾನ್|
07018023c ಉವಾಹ ಭಗವಾನ್ವಾಯುಃ ಶುಷ್ಕಪರ್ಣಚಯಾನಿವ||
ಆಗ ಭಗವಾನ್ ವಾಯುವು ಒಣಗಿದ ತರಗೆಲೆಗಳನ್ನು ಹಾರಿಸಿಕೊಂಡು ಹೋಗುವಂತೆ ಆ ಸಂಶಪ್ತಕ ಸಮೂಹವನ್ನು ಕುದುರೆ-ಆನೆ-ರಥ-ಆಯುಧಗಳೊಂದಿಗೆ ಹಾರಿಸಿಕೊಂಡು ಹೋದನು.
07018024a ಉಹ್ಯಮಾನಾಸ್ತು ತೇ ರಾಜನ್ಬಹ್ವಶೋಭಂತ ವಾಯುನಾ|
07018024c ಪ್ರಡೀನಾಃ ಪಕ್ಷಿಣಃ ಕಾಲೇ ವೃಕ್ಷೇಭ್ಯ ಇವ ಮಾರಿಷ||
ರಾಜನ್! ಮಾರಿಷ! ವಾಯುವಿನಿಂದ ಹಾರಿಸಿಕೊಂಡು ಹೋಗುತ್ತಿದ್ದ ಆ ಸೇನೆಯು ಮರದಲ್ಲಿರುವ ಪಕ್ಷಿಗಳು ಸಮಯಬಂದಾಗ ಒಟ್ಟಿಗೇ ಹಾರಿಹೋಗುತ್ತಿರುವಂತೆ ಕಂಡಿತು.
07018025a ತಾಂಸ್ತಥಾ ವ್ಯಾಕುಲೀಕೃತ್ಯ ತ್ವರಮಾಣೋ ಧನಂಜಯಃ|
07018025c ಜಘಾನ ನಿಶಿತೈರ್ಬಾಣೈಃ ಸಹಸ್ರಾಣಿ ಶತಾನಿ ಚ||
ಅವರನ್ನು ಹೀಗೆ ವ್ಯಾಕುಲರನ್ನಾಗಿಸಿ ಧನಂಜಯನು ತ್ವರೆಮಾಡಿ ನಿಶಿತಬಾಣಗಳಿಂದ ನೂರಾರು ಸಹಸ್ರಾರು ಯೋಧರನ್ನು ಸಂಹರಿಸಿದನು.
07018026a ಶಿರಾಂಸಿ ಭಲ್ಲೈರಹರದ್ಬಾಹೂನಪಿ ಚ ಸಾಯುಧಾನ್|
07018026c ಹಸ್ತಿಹಸ್ತೋಪಮಾಂಶ್ಚೋರೂಂ ಶರೈರುರ್ವ್ಯಾಮಪಾತಯತ್||
ನಿಶಿತ ಭಲ್ಲಗಳೆಂಬ ಶರಗಳಿಂದ ಶಿರಗಳನ್ನೂ, ಆಯುಧಗಳೊಂದಿಗೆ ಬಾಹುಗಳನ್ನೂ, ಆನೆಗಳ ಸೊಂಡಿಲುಗಳಂತಿದ್ದ ಯೋಧರ ತೊಡೆಗಳನ್ನೂ ಉರುಳಿಸಿದನು.
07018027a ಪೃಷ್ಠಚ್ಚಿನ್ನಾನ್ವಿಚರಣಾನ್ವಿಮಸ್ತಿಷ್ಕೇಕ್ಷಣಾಂಗುಲೀನ್|
07018027c ನಾನಾಂಗಾವಯವೈರ್ಹೀನಾಂಶ್ಚಕಾರಾರೀನ್ಧನಂಜಯಃ||
ಕೆಲವರ ಪೃಷ್ಟಭಾಗವು ಕತ್ತರಿಸಿ ಹೋಗಿತ್ತು. ಕೆಲವರು ಕಾಲುಗಳನ್ನು ಕಳೆದುಕೊಂಡಿದ್ದರು. ತೋಳುಗಳನ್ನು ಕಳೆದುಕೊಂಡಿದ್ದರು. ಕೆಲವರ ದೇಹದ ಅರ್ಧಭಾಗವೇ ಕತ್ತರಿಸಿ ಹೋಗಿತ್ತು. ಹೀಗೆ ಧನಂಜಯನು ಅವರನ್ನು ನಾನಾ ಅಂಗಾಂಗಗಳಿಂದ ವಿಹೀನರನ್ನಾಗಿ ಮಾಡಿದನು.
07018028a ಗಂಧರ್ವನಗರಾಕಾರಾನ್ವಿಧಿವತ್ಕಲ್ಪಿತಾನ್ರಥಾನ್|
07018028c ಶರೈರ್ವಿಶಕಲೀಕುರ್ವಂಶ್ಚಕ್ರೇ ವ್ಯಶ್ವರಥದ್ವಿಪಾನ್||
ಅವನು ಗಂಧರ್ವನಗರಗಳ ಆಕಾರದಲ್ಲಿ ವಿಧಿವತ್ತಾಗಿ ಕಲ್ಪಿಸಿದ್ದ ರಥಗಳನ್ನು ಶರಗಳಿಂದ ಛಿನ್ನ-ಭಿನ್ನಗಳನ್ನಾಗಿ ಮಾಡಿ ಅವರನ್ನು ಅಶ್ವ-ರಥ-ಗಜಗಳಿಂದ ವಿಹೀನರನ್ನಾಗಿ ಮಾಡಿದನು.
07018029a ಮುಂಡತಾಲವನಾನೀವ ತತ್ರ ತತ್ರ ಚಕಾಶಿರೇ|
07018029c ಚಿನ್ನಧ್ವಜರಥವ್ರಾತಾಃ ಕೇ ಚಿತ್ಕೇ ಚಿತ್ಕ್ವ ಚಿತ್ಕ್ವ ಚಿತ್||
ಅಲ್ಲಲ್ಲಿ ಧ್ವಜಗಳು ತುಂಡಾಗಿದ್ದ ರಥಗಳ ಗುಂಪುಗಳು ತಲೆಯನ್ನು ಕತ್ತರಿಸಿದ ತಾಳೆಯ ಮರಗಳಂತೆ ಕಾಣುತ್ತಿದ್ದವು.
07018030a ಸೋತ್ತರಾಯುಧಿನೋ ನಾಗಾಃ ಸಪತಾಕಾಂಕುಶಾಯುಧಾಃ|
07018030c ಪೇತುಃ ಶಕ್ರಾಶನಿಹತಾ ದ್ರುಮವಂತ ಇವಾಚಲಾಃ||
ಪತಾಕ-ಅಂಕುಶ-ಆಯುಧಗಳನ್ನು ಕಳೆದುಕೊಂಡ ಮಾವುತರನ್ನು ಕಳೆದುಕೊಂಡ ಆನೆಗಳು ಇಂದ್ರನ ವಜ್ರಾಯುಧದಿಂದ ಹೊಡೆಯಲ್ಪಟ್ಟ ಪರ್ವತಗಳು ವೃಕ್ಷಸಹಿತ ಕೆಳಗುರುಳಿರುವಂತೆ ಬಿದ್ದಿದ್ದವು.
07018031a ಚಾಮರಾಪೀಡಕವಚಾಃ ಸ್ರಸ್ತಾಂತ್ರನಯನಾಸವಃ|
07018031c ಸಾರೋಹಾಸ್ತುರಗಾಃ ಪೇತುಃ ಪಾರ್ಥಬಾಣಹತಾಃ ಕ್ಷಿತೌ||
ಚಾಮರಗಳಿಂದಲೂ ಮಾಲೆಗಳಿಂದಲೂ, ಕವಚಗಳಿಂದಲೂ ಸವಾರರಿಂದಲೂ ಕೂಡಿದ್ದ ಅನೇಕ ಕುದುರೆಗಳು ಪಾರ್ಥನ ಬಾಣಗಳಿಂದ ಹತವಾಗಿ ಭೂಮಿಯ ಮೇಲೆ ಬಿದ್ದವು.
07018032a ವಿಪ್ರವಿದ್ಧಾಸಿನಖರಾಶ್ಚಿನ್ನವರ್ಮರ್ಷ್ಟಿಶಕ್ತಯಃ|
07018032c ಪತ್ತಯಶ್ಚಿನ್ನವರ್ಮಾಣಃ ಕೃಪಣಂ ಶೇರತೇ ಹತಾಃ||
ತುಂಡಾದ ಖಡ್ಗಗಳು ಮತ್ತು ನಖರುಗಳು, ತುಂಡಾಗಿದ್ದ ಕವಚಗಳು, ಋಷ್ಟಿಗಳು ಮತ್ತು ಶಕ್ತಿಗಳೊಂದಿಗೆ ಪದಾತಿಗಳು ಕವಚಗಳು ಹರಿದುಹೋಗಿ ಬಡಪಾಯಿಗಳಂತೆ ಸತ್ತು ಮಲಗಿದರು.
07018033a ತೈರ್ಹತೈರ್ಹನ್ಯಮಾನೈಶ್ಚ ಪತದ್ಭಿಃ ಪತಿತೈರಪಿ|
07018033c ಭ್ರಮದ್ಭಿರ್ನಿಷ್ಟನದ್ಭಿಶ್ಚ ಘೋರಮಾಯೋಧನಂ ಬಭೌ||
ಅವರಲ್ಲಿ ಸತ್ತುಹೋಗಿದ್ದ, ಸಾಯುತ್ತಿದ್ದ, ಬಿದ್ದಿದ್ದ, ಬೀಳುತ್ತಿದ್ದ, ಭ್ರಮೆಯಿಂದ ತಿರುಗುತ್ತಿದ್ದ, ಕೂಗಿಕೊಳ್ಳುತ್ತಿದ್ದವರಿಂದ ತುಂಬಿಹೋಗಿ ರಣಾಂಗಣವು ಬಹಳ ಭಯಂಕರವಾಗಿ ಕಾಣುತ್ತಿತ್ತು.
07018034a ರಜಶ್ಚ ಮಹದುದ್ಭೂತಂ ಶಾಂತಂ ರುಧಿರವೃಷ್ಟಿಭಿಃ|
07018034c ಮಹೀ ಚಾಪ್ಯಭವದ್ದುರ್ಗಾ ಕಬಂಧಶತಸಂಕುಲಾ||
ಮೇಲೆದ್ದಿದ್ದ ಅತಿದೊಡ್ಡ ಧೂಳು ರಕ್ತದ ಮಳೆಸುರಿದು ಶಾಂತವಾದವು. ನೂರಾರು ಮುಂಡಗಳ ರಾಶಿಯಿಂದ ತುಂಬಿಹೋಗಿದ್ದ ರಣಾಂಗಣವು ಪ್ರವೇಶಕ್ಕೂ ಬಹಳ ದುರ್ಗಮವಾಗಿತ್ತು.
07018035a ತದ್ಬಭೌ ರೌದ್ರಬೀಭತ್ಸಂ ಬೀಭತ್ಸೋರ್ಯಾನಮಾಹವೇ|
07018035c ಆಕ್ರೀಡ ಇವ ರುದ್ರಸ್ಯ ಘ್ನತಃ ಕಾಲಾತ್ಯಯೇ ಪಶೂನ್||
ಆಗ ಆಹವದಲ್ಲಿ ಬೀಭತ್ಸುವಿನ ರಥವು ರೌದ್ರವೂ ಬೀಭತ್ಸವೂ ಆಗಿತ್ತು. ಕಾಲಾಂತ್ಯದಲ್ಲಿ ಪ್ರಾಣಿಗಳನ್ನು ಕೊಲ್ಲುವ ರುದ್ರನ ಕ್ರೀಡಾಂಗಣದಂತೆ ತೋರಿತು.
07018036a ತೇ ವಧ್ಯಮಾನಾಃ ಪಾರ್ಥೇನ ವ್ಯಾಕುಲಾಶ್ವರಥದ್ವಿಪಾಃ|
07018036c ತಮೇವಾಭಿಮುಖಾಃ ಕ್ಷೀಣಾಃ ಶಕ್ರಸ್ಯಾತಿಥಿತಾಂ ಗತಾಃ||
ಪಾರ್ಥನಿಂದ ವಧಿಸಲ್ಪಟ್ಟು ವ್ಯಾಕುಲಗೊಂಡ ಅಶ್ವ-ರಥ-ಗಜಗಳು ಅವನ ಎದುರಾಗಿಯೇ ಯುದ್ಧಮಾಡಿ ಶಕ್ರನ ಅತಿಥಿಗಳಾಗಿ ಹೋಗಿ ಕ್ಷೀಣವಾಗುತ್ತಿದ್ದವು.
07018037a ಸಾ ಭೂಮಿರ್ಭರತಶ್ರೇಷ್ಠ ನಿಹತೈಸ್ತೈರ್ಮಹಾರಥೈಃ|
07018037c ಆಸ್ತೀರ್ಣಾ ಸಂಬಭೌ ಸರ್ವಾ ಪ್ರೇತೀಭೂತೈಃ ಸಮಂತತಃ||
ಭರತಶ್ರೇಷ್ಠ! ಆ ಮಹಾರಥರು ಹತರಾಗಿ ಬಿದ್ದಿದ್ದ ಭೂಮಿಯು ಎಲ್ಲ ಕಡೆ ಪ್ರೇತಗಳಿಂದ ತುಂಬಿಕೊಂಡಿದೆಯೋ ಎನ್ನುವಂತೆ ತೋರಿತು.
07018038a ಏತಸ್ಮಿನ್ನಂತರೇ ಚೈವ ಪ್ರಮತ್ತೇ ಸವ್ಯಸಾಚಿನಿ|
07018038c ವ್ಯೂಢಾನೀಕಸ್ತತೋ ದ್ರೋಣೋ ಯುಧಿಷ್ಠಿರಮುಪಾದ್ರವತ್||
ಈ ರೀತಿ ಸವ್ಯಸಾಚಿಯು ಯುದ್ಧದಲ್ಲಿ ತಲ್ಲೀನನಾಗಿರಲು ದ್ರೋಣನು ವ್ಯೂಹದೊಂದಿಗೆ ಯುಧಿಷ್ಠಿರನನ್ನು ಆಕ್ರಮಣಿಸಿದನು.
07018039a ತಂ ಪ್ರತ್ಯಗೃಹ್ಣಂಸ್ತ್ವರಿತಾ ವ್ಯೂಢಾನೀಕಾಃ ಪ್ರಹಾರಿಣಃ|
07018039c ಯುಧಿಷ್ಠಿರಂ ಪರೀಪ್ಸಂತಸ್ತದಾಸೀತ್ತುಮುಲಂ ಮಹತ್||
ಯುಧಿಷ್ಠಿರನನ್ನು ಬಂಧಿಸಲು ವ್ಯೂಹವನ್ನು ರಚಿಸಿಕೊಂಡು ಪ್ರಹಾರ ಮಾಡಲು ಆಗ ಮಹಾ ತುಮುಲಯುದ್ಧವು ನಡೆಯಿತು.”
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಸಂಶಪ್ತಕವಧ ಪರ್ವಣಿ ಅರ್ಜುನಸಂಶಪ್ತಕಯುದ್ಧೇ ಅಷ್ಟಾದಶೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಸಂಶಪ್ತಕವಧ ಪರ್ವದಲ್ಲಿ ಅರ್ಜುನಸಂಶಪ್ತಕಯುದ್ಧ ಎನ್ನುವ ಹದಿನೆಂಟನೇ ಅಧ್ಯಾಯವು.