ಭೀಷ್ಮ ಪರ್ವ: ಭೀಷ್ಮವಧ ಪರ್ವ
೮೩
ಎಂಟನೆಯ ದಿವಸದ ಯುದ್ಧ
ಕುರುಸೇನಾವ್ಯೂಹ (೧-೧೪). ಪಾಂಡವಸೇನಾವ್ಯೂಹ (೧೫-೨೨). ಯುದ್ಧಾರಂಭ (೨೩-೩೯).
06083001 ಸಂಜಯ ಉವಾಚ|
06083001a ಪರಿಣಾಮ್ಯ ನಿಶಾಂ ತಾಂ ತು ಸುಖಸುಪ್ತಾ ಜನೇಶ್ವರಾಃ|
06083001c ಕುರವಃ ಪಾಂಡವಾಶ್ಚೈವ ಪುನರ್ಯುದ್ಧಾಯ ನಿರ್ಯಯುಃ||
ಸಂಜಯನು ಹೇಳಿದನು: “ಕೌರವರ ಮತ್ತು ಪಾಂಡವರ ಕಡೆಯ ಜನೇಶ್ವರರು ಆ ರಾತ್ರಿಯಲ್ಲಿ ಸುಖವಾಗಿ ಮಲಗಿ ಬೆಳಗಾಗುತ್ತಲೇ ಪುನಃ ಯುದ್ಧಕ್ಕೆ ತೆರಳಿದರು.
06083002a ತತಃ ಶಬ್ದೋ ಮಹಾನಾಸೀತ್ಸೇನಯೋರುಭಯೋರಪಿ|
06083002c ನಿರ್ಗಚ್ಛಮಾನಯೋಃ ಸಂಖ್ಯೇ ಸಾಗರಪ್ರತಿಮೋ ಮಹಾನ್||
ಯುದ್ಧಕ್ಕೆ ಹೊರಡುವ ಆ ಎರಡೂ ಸೇನೆಗಳಲ್ಲಿ ಮಹಾಸಾಗರದ ಭೋರ್ಗರೆತದಂತೆ ಮಹಾ ಶಬ್ಧವುಂಟಾಯಿತು.
06083003a ತತೋ ದುರ್ಯೋಧನೋ ರಾಜಾ ಚಿತ್ರಸೇನೋ ವಿವಿಂಶತಿಃ|
06083003c ಭೀಷ್ಮಶ್ಚ ರಥಿನಾಂ ಶ್ರೇಷ್ಠೋ ಭಾರದ್ವಾಜಶ್ಚ ವೈ ದ್ವಿಜಃ||
06083004a ಏಕೀಭೂತಾಃ ಸುಸಮ್ಯತ್ತಾಃ ಕೌರವಾಣಾಂ ಮಹಾಚಮೂಃ|
06083004c ವ್ಯೂಹಾಯ ವಿದಧೂ ರಾಜನ್ಪಾಂಡವಾನ್ಪ್ರತಿ ದಂಶಿತಾಃ||
ರಾಜನ್! ಆಗ ಕೌರವರ ಮಹಾಸೇನೆಯ ರಾಜ ದುರ್ಯೋಧನ, ಚಿತ್ರಸೇನ, ವಿವಿಂಶತಿ, ರಥಿಗಳಲ್ಲಿ ಶ್ರೇಷ್ಠ ಭೀಷ್ಮ, ದ್ವಿಜ ಭಾರದ್ವಾಜ ಇವರೆಲ್ಲರೂ ಸಂಘಟಿತರಾಗಿ ಸುಸನ್ನದ್ಧರಾಗಿ ಪಾಂಡವರೊಂದಿಗೆ ಯುದ್ಧಮಾಡಲು ಕವಚಗಳನ್ನು ಧರಿಸಿ ವ್ಯೂಹವನ್ನು ರಚಿಸಿದರು.
06083005a ಭೀಷ್ಮಃ ಕೃತ್ವಾ ಮಹಾವ್ಯೂಹಂ ಪಿತಾ ತವ ವಿಶಾಂ ಪತೇ|
06083005c ಸಾಗರಪ್ರತಿಮಂ ಘೋರಂ ವಾಹನೋರ್ಮಿತರಂಗಿಣಂ||
ವಿಶಾಂಪತೇ! ನಿನ್ನ ತಂದೆ ಭೀಷ್ಮನು ಸಾಗರದಂತೆ ಘೋರವಾಗಿರುವ ವಾಹನಗಳೇ ಅಲೆಗಳಾಗಿರುವ ಮಹಾವ್ಯೂಹವನ್ನು ರಚಿಸಿದನು.
06083006a ಅಗ್ರತಃ ಸರ್ವಸೈನ್ಯಾನಾಂ ಭೀಷ್ಮಃ ಶಾಂತನವೋ ಯಯೌ|
06083006c ಮಾಲವೈರ್ದಾಕ್ಷಿಣಾತ್ಯೈಶ್ಚ ಆವಂತ್ಯೈಶ್ಚ ಸಮನ್ವಿತಃ||
ಸರ್ವ ಸೇನೆಗಳ ಅಗ್ರಭಾಗದಲ್ಲಿ ಭೀಷ್ಮ ಶಾಂತನವನು ಮಾಲವ, ದಾಕ್ಷಿಣಾತ್ಯರು, ಮತ್ತು ಅವಂತಿಯವರಿಂದ ಸುತ್ತುವರೆಯಲ್ಪಟ್ಟು ಹೊರಟನು.
06083007a ತತೋಽನಂತರಮೇವಾಸೀದ್ಭಾರದ್ವಾಜಃ ಪ್ರತಾಪವಾನ್|
06083007c ಪುಲಿಂದೈಃ ಪಾರದೈಶ್ಚೈವ ತಥಾ ಕ್ಷುದ್ರಕಮಾಲವೈಃ||
ಅವನ ನಂತರದಲ್ಲಿ ಪುಲಿಂದರು, ಪಾರದರು ಮತ್ತು ಕ್ಷುದ್ರಕಮಾಲರೊಂದಿಗೆ ಪ್ರತಾಪವಾನ್ ಭಾರದ್ವಾಜನಿದ್ದನು.
06083008a ದ್ರೋಣಾದನಂತರಂ ಯತ್ತೋ ಭಗದತ್ತಃ ಪ್ರತಾಪವಾನ್|
06083008c ಮಾಗಧೈಶ್ಚ ಕಲಿಂಗೈಶ್ಚ ಪಿಶಾಚೈಶ್ಚ ವಿಶಾಂ ಪತೇ||
ವಿಶಾಂಪತೇ! ದ್ರೋಣನ ನಂತರದಲ್ಲಿ ಪ್ರತಾಪವಾನ್ ಭಗದತ್ತನು ಮಾಗಧ, ಕಲಿಂಗ ಮತ್ತು ಪಿಶಾಚರೊಂದಿಗೆ ಹೊರಟನು.
06083009a ಪ್ರಾಗ್ಜ್ಯೋತಿಷಾದನು ನೃಪಃ ಕೌಸಲ್ಯೋಽಥ ಬೃಹದ್ಬಲಃ|
06083009c ಮೇಕಲೈಸ್ತ್ರೈಪುರೈಶ್ಚೈವ ಚಿಚ್ಛಿಲೈಶ್ಚ ಸಮನ್ವಿತಃ||
ಪ್ರಾಗ್ಜ್ಯೋತಿಷರಾಜನನ್ನು ಅನುಸರಿಸಿ ಕೋಸಲದ ರಾಜ ಬೃಹದ್ಬಲನು ಮೇಕಲ, ತ್ರಿಪುರ ಮತ್ತು ಚಿಚ್ಛಿಲರಿಂದ ಕೂಡಿಕೊಂಡು ಹೋದನು.
06083010a ಬೃಹದ್ಬಲಾತ್ತತಃ ಶೂರಸ್ತ್ರಿಗರ್ತಃ ಪ್ರಸ್ಥಲಾಧಿಪಃ|
06083010c ಕಾಂಬೋಜೈರ್ಬಹುಭಿಃ ಸಾರ್ಧಂ ಯವನೈಶ್ಚ ಸಹಸ್ರಶಃ||
ಬೃಹದ್ಬಲನ ನಂತರ ಪ್ರಸ್ಥಲಾಧಿಪ ಶೂರ ತ್ರಿಗರ್ತನು ಅನೇಕ ಕಾಂಬೋಜರಿಂದ ಮತ್ತು ಸಹಸ್ರಾರು ಯವನರಿಂದ ಕೂಡಿಕೊಂಡು ಹೊರಟನು.
06083011a ದ್ರೌಣಿಸ್ತು ರಭಸಃ ಶೂರಸ್ತ್ರಿಗರ್ತಾದನು ಭಾರತ|
06083011c ಪ್ರಯಯೌ ಸಿಂಹನಾದೇನ ನಾದಯಾನೋ ಧರಾತಲಂ||
ಭಾರತ! ತ್ರಿಗರ್ತನನ್ನು ಅನುಸರಿಸಿ ಶೂರ ದ್ರೌಣಿಯು ರಭಸದಿಂದ ಸಿಂಹನಾದದಿಂದ ಧರಾತಲವನ್ನು ಮೊಳಗಿಸುತ್ತಾ ನಡೆದನು.
06083012a ತಥಾ ಸರ್ವೇಣ ಸೈನ್ಯೇನ ರಾಜಾ ದುರ್ಯೋಧನಸ್ತದಾ|
06083012c ದ್ರೌಣೇರನಂತರಂ ಪ್ರಾಯಾತ್ಸೋದರ್ಯೈಃ ಪರಿವಾರಿತಃ||
ಹಾಗೆಯೇ ದ್ರೌಣಿಯ ನಂತರ ರಾಜಾ ದುರ್ಯೋಧನನು ಸೋದರರಿಂದ ಪರಿವಾರಿತನಾಗಿ ಸರ್ವ ಸೈನ್ಯದೊಂದಿಗೆ ಹೊರಟನು.
06083013a ದುರ್ಯೋಧನಾದನು ಕೃಪಸ್ತತಃ ಶಾರದ್ವತೋ ಯಯೌ|
06083013c ಏವಮೇಷ ಮಹಾವ್ಯೂಹಃ ಪ್ರಯಯೌ ಸಾಗರೋಪಮಃ||
ದುರ್ಯೋಧನನನ್ನು ಅನುಸರಿಸಿ ಶಾರದ್ವತ ಕೃಪನು ಹೊರಟನು. ಹೀಗೆ ಸಾಗರೋಪಮವಾಗಿದ್ದ ಮಹಾವ್ಯೂಹವು ಹೊರಟಿತು.
06083014a ರೇಜುಸ್ತತ್ರ ಪತಾಕಾಶ್ಚ ಶ್ವೇತಚ್ಛತ್ರಾಣಿ ಚಾಭಿಭೋ|
06083014c ಅಂಗದಾನ್ಯಥ ಚಿತ್ರಾಣಿ ಮಹಾರ್ಹಾಣಿ ಧನೂಂಷಿ ಚ||
ವಿಭೋ! ಅಲ್ಲಿ ಪತಾಕೆಗಳು ಶ್ವೇತ ಚತ್ರಗಳು, ಬಹುಮೂಲ್ಯದ ಚಿತ್ರ-ವಿಚಿತ್ರ ಭುಜಬಂದಿಗಳೂ, ಧನುಸ್ಸುಗಳೂ ಪ್ರಕಾಶಿಸಿದವು.
06083015a ತಂ ತು ದೃಷ್ಟ್ವಾ ಮಹಾವ್ಯೂಹಂ ತಾವಕಾನಾಂ ಮಹಾರಥಃ|
06083015c ಯುಧಿಷ್ಠಿರೋಽಬ್ರವೀತ್ತೂರ್ಣಂ ಪಾರ್ಷತಂ ಪೃತನಾಪತಿಂ||
ನಿನ್ನವರ ಆ ಮಹಾವ್ಯೂಹವನ್ನು ನೋಡಿ ಮಹಾರಥ ಯುಧಿಷ್ಠಿರನು ತಕ್ಷಣವೇ ಪೃತನಾಪತಿ ಪಾರ್ಷತನಿಗೆ ಹೇಳಿದನು:
06083016a ಪಶ್ಯ ವ್ಯೂಹಂ ಮಹೇಷ್ವಾಸ ನಿರ್ಮಿತಂ ಸಾಗರೋಪಮಂ|
06083016c ಪ್ರತಿವ್ಯೂಹಂ ತ್ವಮಪಿ ಹಿ ಕುರು ಪಾರ್ಷತ ಮಾಚಿರಂ||
“ಮಹೇಷ್ವಾಸ! ಸಾಗರದಂತೆ ನಿರ್ಮಿತವಾಗಿರುವ ವ್ಯೂಹವನ್ನು ನೋಡು! ಪಾರ್ಷತ! ತಡಮಾಡದೇ ನೀನೂ ಕೂಡ ಅದಕ್ಕೆ ಪ್ರತಿಯಾದ ವ್ಯೂಹವನ್ನು ರಚಿಸು.”
06083017a ತತಃ ಸ ಪಾರ್ಷತಃ ಶೂರೋ ವ್ಯೂಹಂ ಚಕ್ರೇ ಸುದಾರುಣಂ|
06083017c ಶೃಂಗಾಟಕಂ ಮಹಾರಾಜ ಪರವ್ಯೂಹವಿನಾಶನಂ||
ಮಹಾರಾಜ! ಆಗ ಶೂರ ಪಾರ್ಷತನು ಪರವ್ಯೂಹವನ್ನು ನಾಶಪಡಿಸಬಲ್ಲ ಸುದಾರುಣ ಶೃಂಗಾಟಕ ವ್ಯೂಹವನ್ನು ರಚಿಸಿದನು.
06083018a ಶೃಂಗೇಭ್ಯೋ ಭೀಮಸೇನಶ್ಚ ಸಾತ್ಯಕಿಶ್ಚ ಮಹಾರಥಃ|
06083018c ರಥೈರನೇಕಸಾಹಸ್ರೈಸ್ತಥಾ ಹಯಪದಾತಿಭಿಃ||
ಎರಡೂ ಶೃಂಗಗಳಲ್ಲಿ ಅನೇಕ ಸಹಸ್ರ ರಥಿಗಳಿಂದ ಮತ್ತು ಅಶ್ವಾರೋಹಿ-ಪದಾತಿಸೇನೆಗಳೊಂದಿಗೆ ಮಹಾರಥಿ ಭೀಮಸೇನ-ಸಾತ್ಯಕಿಯರಿದ್ದರು.
06083019a ನಾಭ್ಯಾಮಭೂನ್ನರಶ್ರೇಷ್ಠಃ ಶ್ವೇತಾಶ್ವೋ ವಾನರಧ್ವಜಃ|
06083019c ಮಧ್ಯೇ ಯುಧಿಷ್ಠಿರೋ ರಾಜಾ ಮಾದ್ರೀಪುತ್ರೌ ಚ ಪಾಂಡವೌ||
ನಾಭಿಭಾಗದಲ್ಲಿ ನರಶ್ರೇಷ್ಠ ಶ್ವೇತಾಶ್ವ ವಾನರಧ್ವಜನಿದ್ದನು. ಮಧ್ಯದಲ್ಲಿ ರಾಜ ಯುಧಿಷ್ಠಿರ ಮತ್ತು ಇಬ್ಬರು ಮಾದ್ರೀಪುತ್ರ ಪಾಂಡವರಿದ್ದರು.
06083020a ಅಥೇತರೇ ಮಹೇಷ್ವಾಸಾಃ ಸಹಸೈನ್ಯಾ ನರಾಧಿಪಾಃ|
06083020c ವ್ಯೂಹಂ ತಂ ಪೂರಯಾಮಾಸುರ್ವ್ಯೂಹಶಾಸ್ತ್ರವಿಶಾರದಾಃ||
ಇತರ ಮಹೇಷ್ವಾಸ ವ್ಯೂಹಶಾಸ್ತ್ರ ವಿಶಾರದ ನರಾಧಿಪರು ವ್ಯೂಹವನ್ನು ಪೂರೈಸಿದರು.
06083021a ಅಭಿಮನ್ಯುಸ್ತತಃ ಪಶ್ಚಾದ್ವಿರಾಟಶ್ಚ ಮಹಾರಥಃ|
06083021c ದ್ರೌಪದೇಯಾಶ್ಚ ಸಂಹೃಷ್ಟಾ ರಾಕ್ಷಸಶ್ಚ ಘಟೋತ್ಕಚಃ||
ಅವರ ನಂತರ ಅಭಿಮನ್ಯು, ಮಹಾರಥ ವಿರಾಟ, ಸಂಹೃಷ್ಟರಾದ ದ್ರೌಪದೇಯರು ಮತ್ತು ರಾಕ್ಷಸ ಘಟೋತ್ಕಚರಿದ್ದರು.
06083022a ಏವಮೇತಂ ಮಹಾವ್ಯೂಹಂ ವ್ಯೂಹ್ಯ ಭಾರತ ಪಾಂಡವಾಃ|
06083022c ಅತಿಷ್ಠನ್ಸಮರೇ ಶೂರಾ ಯೋದ್ಧುಕಾಮಾ ಜಯೈಷಿಣಃ||
ಭಾರತ! ಹೀಗೆ ಶೂರ ಪಾಂಡವರು ಮಹಾವ್ಯೂಹವನ್ನು ರಚಿಸಿಕೊಂಡು ಜಯವನ್ನು ಬಯಸಿ ಯುದ್ಧಮಾಡಲು ಇಚ್ಛಿಸಿ ಸಮರದಲ್ಲಿ ನಿಂತರು.
06083023a ಭೇರೀಶಬ್ದಾಶ್ಚ ತುಮುಲಾ ವಿಮಿಶ್ರಾಃ ಶಂಖನಿಸ್ವನೈಃ|
06083023c ಕ್ಷ್ವೇಡಿತಾಸ್ಫೋಟಿತೋತ್ಕ್ರುಷ್ಟೈಃ ಸುಭೀಮಾಃ ಸರ್ವತೋದಿಶಂ||
ತುಮುಲ ಭೇರಿಶಬ್ಧವು ಶಂಖನಾದದಿಂದ ಮಿಶ್ರಿತವಾಗಿ, ಸಿಂಹನಾದ ಮತ್ತು ಭುಜಗಳನ್ನು ತಟ್ಟುವುದರಿಂದ ಎಲ್ಲ ಕಡೆಗಳಲ್ಲಿ ಭಯಂಕರ ಶಬ್ಧವುಂಟಾಯಿತು.
06083024a ತತಃ ಶೂರಾಃ ಸಮಾಸಾದ್ಯ ಸಮರೇ ತೇ ಪರಸ್ಪರಂ|
06083024c ನೇತ್ರೈರನಿಮಿಷೈ ರಾಜನ್ನವೈಕ್ಷಂತ ಪ್ರಕೋಪಿತಾಃ||
ರಾಜನ್! ಆಗ ಶೂರರು ಸಮರದಲ್ಲಿ ಎದುರಿಸಿ ಕೋಪದಿಂದ ಪರಸ್ಪರರನ್ನು ಎವೆಯಿಕ್ಕದೇ ನೋಡತೊಡಗಿದರು.
06083025a ಮನೋಭಿಸ್ತೇ ಮನುಷ್ಯೇಂದ್ರ ಪೂರ್ವಂ ಯೋಧಾಃ ಪರಸ್ಪರಂ|
06083025c ಯುದ್ಧಾಯ ಸಮವರ್ತಂತ ಸಮಾಹೂಯೇತರೇತರಂ||
ಮನುಷ್ಯೇಂದ್ರ! ಮೊದಲು ಆ ಯೋಧರು ತಮಗೆ ಅನುರೂಪರಾದವರನ್ನು ಪರಸ್ಪರ ಯುದ್ಧಕ್ಕೆ ಕರೆದು ಅವರೊಂದಿಗೆ ಯುದ್ಧಮಾಡುತ್ತಿದ್ದರು.
06083026a ತತಃ ಪ್ರವವೃತೇ ಯುದ್ಧಂ ಘೋರರೂಪಂ ಭಯಾವಹಂ|
06083026c ತಾವಕಾನಾಂ ಪರೇಷಾಂ ಚ ನಿಘ್ನತಾಮಿತರೇತರಂ||
ಆಗ ಇತರೇತರನ್ನು ಸಂಹರಿಸುವ ನಿನ್ನವರ ಮತ್ತು ಶತ್ರುಗಳ ನಡುವೆ ಭಯವನ್ನುಂಟುಮಾಡುವ ಘೋರರೂಪದ ಯುದ್ಧವು ನಡೆಯಿತು.
06083027a ನಾರಾಚಾ ನಿಶಿತಾಃ ಸಂಖ್ಯೇ ಸಂಪತಂತಿ ಸ್ಮ ಭಾರತ|
06083027c ವ್ಯಾತ್ತಾನನಾ ಭಯಕರಾ ಉರಗಾ ಇವ ಸಂಘಶಃ||
ಭಾರತ! ಬಾಯ್ದೆರೆದ ಭಯಂಕರ ಸರ್ಪಗಳ ಗುಂಪಿನಂತೆ ನಿಶಿತ ನಾರಾಚಗಳು ಗುಂಪುಗುಂಪಾಗಿ ರಣಾಂಗಣದಲ್ಲಿ ಬೀಳುತ್ತಿದ್ದವು.
06083028a ನಿಷ್ಪೇತುರ್ವಿಮಲಾಃ ಶಕ್ತ್ಯಸ್ತೈಲಧೌತಾಃ ಸುತೇಜನಾಃ|
06083028c ಅಂಬುದೇಭ್ಯೋ ಯಥಾ ರಾಜನ್ಭ್ರಾಜಮಾನಾಃ ಶತಹ್ರದಾಃ||
ರಾಜನ್! ಮೋಡದಿಂದ ಹೊರಬರುವ ಹೊಳೆಯುತ್ತಿರುವ ಮಿಂಚುಗಳಂತೆ ತೈಲದಲ್ಲಿ ಅದ್ದಿದ್ದ ತೇಜಸ್ಸುಳ್ಳ ಹೊಳೆಯುವ ಶಕ್ತಿಗಳು ಬೀಳುತ್ತಿದ್ದವು.
06083029a ಗದಾಶ್ಚ ವಿಮಲೈಃ ಪಟ್ಟೈಃ ಪಿನದ್ಧಾಃ ಸ್ವರ್ಣಭೂಷಿತಾಃ|
06083029c ಪತಂತ್ಯಸ್ತತ್ರ ದೃಶ್ಯಂತೇ ಗಿರಿಶೃಂಗೋಪಮಾಃ ಶುಭಾಃ|
06083029e ನಿಸ್ತ್ರಿಂಶಾಶ್ಚ ವ್ಯರಾಜಂತ ವಿಮಲಾಂಬರಸನ್ನಿಭಾಃ||
ಸುವರ್ಣಭೂಷಿತ, ವಿಮಲ ಪಟ್ಟಿಗಳಿಂದ ಕಟ್ಟಲ್ಪಟ್ಟಿದ್ದ, ಪರ್ವತಶಿಖರಗಳಂತೆ ಚೂಪಾಗಿದ್ದ, ಶುಭ ಗದೆಗಳು ಅಲ್ಲಲ್ಲಿ ಬೀಳುತ್ತಿದ್ದುದು ಕಾಣುತ್ತಿತ್ತು. ನಿರ್ಮಲ ಆಕಾಶದಂತಹ ಖಡ್ಗಗಳೂ ವಿರಾಜಿಸುತ್ತಿದ್ದವು.
06083030a ಆರ್ಷಭಾಣಿ ಚ ಚರ್ಮಾಣಿ ಶತಚಂದ್ರಾಣಿ ಭಾರತ|
06083030c ಅಶೋಭಂತ ರಣೇ ರಾಜನ್ಪತಮಾನಾನಿ ಸರ್ವಶಃ||
ಭಾರತ! ರಾಜನ್! ಎತ್ತಿನ ಚರ್ಮಗಳಿಂದ ಮಾಡಲ್ಪಟ್ಟ ನೂರು ಚಂದ್ರರ ಕವಚಗಳು ರಣದಲ್ಲಿ ಎಲ್ಲಕಡೆ ಬಿದ್ದು ಶೋಭಿಸುತ್ತಿದ್ದವು.
06083031a ತೇಽನ್ಯೋನ್ಯಂ ಸಮರೇ ಸೇನೇ ಯುಧ್ಯಮಾನೇ ನರಾಧಿಪ|
06083031c ಅಶೋಭೇತಾಂ ಯಥಾ ದೈತ್ಯದೇವಸೇನೇ ಸಮುದ್ಯತೇ|
06083031e ಅಭ್ಯದ್ರವಂತ ಸಮರೇ ತೇಽನ್ಯೋನ್ಯಂ ವೈ ಸಮಂತತಃ||
ನರಾಧಿಪ! ಸಮರದಲ್ಲಿ ಅನ್ಯೋನ್ಯರೊಡನೆ ಯುದ್ಧಮಾಡುತ್ತಿದ್ದ ಆ ಸೇನೆಗಳು ಹೋರಾಡುತ್ತಿರುವ ದೈತ್ಯ-ದೇವ ಸೇನೆಗಳಂತೆ ಶೋಭಿಸಿದವು. ಅವರು ಸಮರದಲ್ಲಿ ಅನ್ಯೋನ್ಯರನ್ನು ಸುತ್ತುವರೆದು ಆಕ್ರಮಣಿಸುತ್ತಿದ್ದರು.
06083032a ರಥಾಸ್ತು ರಥಿಭಿಸ್ತೂರ್ಣಂ ಪ್ರೇಷಿತಾಃ ಪರಮಾಹವೇ|
06083032c ಯುಗೈರ್ಯುಗಾನಿ ಸಂಶ್ಲಿಷ್ಯ ಯುಯುಧುಃ ಪಾರ್ಥಿವರ್ಷಭಾಃ||
ಆ ಪರಮ ಯುದ್ಧದಲ್ಲಿ ರಥಿಗಳಿಂದ ಬೇಗನೇ ಕಳುಹಿಸಲ್ಪಟ್ಟ ಪಾರ್ಥಿವರ್ಷಭರು ನೂಕುಗಳಿಂದ ನೂಕುಗಳಿಗೆ ತಾಗಿಸಿ ಯುದ್ಧಮಾಡುತ್ತಿದ್ದರು.
06083033a ದಂತಿನಾಂ ಯುಧ್ಯಮಾನಾನಾಂ ಸಂಘರ್ಷಾತ್ಪಾವಕೋಽಭವತ್|
06083033c ದಂತೇಷು ಭರತಶ್ರೇಷ್ಠ ಸಧೂಮಃ ಸರ್ವತೋದಿಶಂ||
ಭರತಶ್ರೇಷ್ಠ! ದಂತಗಳಿಂದ ಹೊಡೆದಾಡುತ್ತಿದ್ದ ಆನೆಗಳ ಸಂಘರ್ಷದಿಂದ ಬೆಂಕಿಯು ಹುಟ್ಟಿ ಹೊಗೆಯೊಂದಿಗೆ ಅದು ಎಲ್ಲೆಡೆ ಹರಡಿತು.
06083034a ಪ್ರಾಸೈರಭಿಹತಾಃ ಕೇ ಚಿದ್ಗಜಯೋಧಾಃ ಸಮಂತತಃ|
06083034c ಪತಮಾನಾಃ ಸ್ಮ ದೃಶ್ಯಂತೇ ಗಿರಿಶೃಂಗಾನ್ನಗಾ ಇವ||
ಪ್ರಾಸಗಳಿಂದ ಹೊಡೆಯಲ್ಪಟ್ಟು ಕೆಲವು ಗಜಯೋಧರು ಗಿರಿಶೃಂಗಗಳಂತೆ ಆನೆಗಳ ಮೇಲಿಂದ ಬೀಳುತ್ತಿರುವುದು ಎಲ್ಲೆಡೆ ಕಂಡುಬಂದಿತು.
06083035a ಪಾದಾತಾಶ್ಚಾಪ್ಯದೃಶ್ಯಂತ ನಿಘ್ನಂತೋ ಹಿ ಪರಸ್ಪರಂ|
06083035c ಚಿತ್ರರೂಪಧರಾಃ ಶೂರಾ ನಖರಪ್ರಾಸಯೋಧಿನಃ||
ವಿಚಿತ್ರರೂಪಗಳನ್ನು ಧರಿಸಿದ್ದ, ನಖ-ಪ್ರಾಸಾಯುಧಗಳಿಂದ ಯುದ್ಧಮಾಡುತ್ತಿದ್ದ ಶೂರ ಪದಾತಿಗಳು ಪರಸ್ಪರರನ್ನು ಕೊಲ್ಲುತ್ತಿದ್ದುದು ಕಂಡುಬಂದಿತು.
06083036a ಅನ್ಯೋನ್ಯಂ ತೇ ಸಮಾಸಾದ್ಯ ಕುರುಪಾಂಡವಸೈನಿಕಾಃ|
06083036c ಶಸ್ತ್ರೈರ್ನಾನಾವಿಧೈರ್ಘೋರೈ ರಣೇ ನಿನ್ಯುರ್ಯಮಕ್ಷಯಂ||
ಆ ಕುರುಪಾಂಡವ ಸೈನಿಕರು ಅನ್ಯೋನ್ಯರನ್ನು ಎದುರಿಸಿ ನಾನಾವಿಧದ ಘೋರ ಶಸ್ತ್ರಗಳಿಂದ ರಣದಿಂದ ಯಮಾಲಯಕ್ಕೆ ಕಳುಹಿಸುತ್ತಿದ್ದರು.
06083037a ತತಃ ಶಾಂತನವೋ ಭೀಷ್ಮೋ ರಥಘೋಷೇಣ ನಾದಯನ್|
06083037c ಅಭ್ಯಾಗಮದ್ರಣೇ ಪಾಂಡೂನ್ಧನುಃಶಬ್ದೇನ ಮೋಹಯನ್||
ಆಗ ಶಾಂತನವ ಭೀಷ್ಮನು ರಥಘೋಷದಿಂದ ಗರ್ಜಿಸುತ್ತಾ ಧನುಸ್ಸಿನ ಶಬ್ಧದಿಂದ ಪಾಂಡವರನ್ನು ಮೋಹಿಸುತ್ತಾ ರಣರಂಗದಲ್ಲಿ ಆಕ್ರಮಣಿಸಿದನು.
06083038a ಪಾಂಡವಾನಾಂ ರಥಾಶ್ಚಾಪಿ ನದಂತೋ ಭೈರವಸ್ವನಂ|
06083038c ಅಭ್ಯದ್ರವಂತ ಸಮ್ಯತ್ತಾ ಧೃಷ್ಟದ್ಯುಮ್ನಪುರೋಗಮಾಃ||
ಪಾಂಡವರ ರಥರೂ ಕೂಡ ಭೈರವಸ್ವರದಲ್ಲಿ ಕೂಗುತ್ತಾ ಧೃಷ್ಟದ್ಯುಮ್ನನ ನಾಯಕತ್ವದಲ್ಲಿ ಯುದ್ಧಸನ್ನದ್ಧರಾಗಿ ಆಕ್ರಮಣಿಸಿದರು.
06083039a ತತಃ ಪ್ರವವೃತೇ ಯುದ್ಧಂ ತವ ತೇಷಾಂ ಚ ಭಾರತ|
06083039c ನರಾಶ್ವರಥನಾಗಾನಾಂ ವ್ಯತಿಷಕ್ತಂ ಪರಸ್ಪರಂ||
ಭಾರತ! ಆಗ ನಿನ್ನವರ ಮತ್ತು ಅವರ ನಡುವೆ ನರ-ಅಶ್ವ-ರಥ-ಆನೆಗಳ ಪರಸ್ಟರ ಘರ್ಷಣೆಯ ಯುದ್ಧವು ನಡೆಯಿತು.”
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಅಷ್ಟಮದಿವಸಯುದ್ಧಾರಂಭೇ ತ್ರ್ಯಾಶೀತಿತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಅಷ್ಟಮದಿವಸಯುದ್ಧಾರಂಭ ಎನ್ನುವ ಎಂಭತ್ಮೂರನೇ ಅಧ್ಯಾಯವು.