Bhishma Parva: Chapter 41

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ: ಭೀಷ್ಮವಧ ಪರ್ವ

೪೧

ಯುಧಿಷ್ಠಿರನು ಭೀಷ್ಮಾದಿಗಳನ್ನು ಸಮ್ಮಾನಿಸಿದುದು

ರಣರಂಗದಲ್ಲಿ ರಥದಿಂದಿಳಿದು ಕವಚ-ಆಯುಧಗಳನ್ನು ಕಳಚಿ ಯುಧಿಷ್ಠಿರನು ಕೌರವ ಸೇನೆಯ ಕಡೆ ಕಾಲ್ನಡುಗೆಯಲ್ಲಿ ನಡೆಯಲು ವಿಸ್ಮಯಗೊಂಡು ಅವನ ತಮ್ಮಂದಿರು ಕೃಷ್ಣನನ್ನೊಡಗೂಡಿ ಹಿಂಬಾಲಿಸಿದುದು (೧-೩೦). ಭೀಷ್ಮನನ್ನು ನಮಸ್ಕರಿಸಿ ಯುಧಿಷ್ಠಿರನು ವಿಜಯದ ಆಶೀರ್ವಾದವನ್ನು ಕೇಳಿದುದು (೩೧-೪೪). ಯುಧಿಷ್ಠಿರನು ದ್ರೋಣನನ್ನು ನಮಸ್ಕರಿಸಿ ವಿಜಯದ ಆಶೀರ್ವಾದವನ್ನು ಕೇಳಿದುದು (೪೫-೬೨). ಯುಧಿಷ್ಠಿರನು ಕೃಪನನ್ನು ನಮಸ್ಕರಿಸಿ ವಿಜಯದ ಆಶೀರ್ವಾದವನ್ನು ಕೇಳಿದುದು (೬೩-೭೧). ಯುಧಿಷ್ಠಿರನು ಶಲ್ಯನನ್ನು ನಮಸ್ಕರಿಸಿ ವಿಜಯದ ಆಶೀರ್ವಾದವನ್ನು ಕೇಳಿದುದು (೭೨-೮೨). ಕೃಷ್ಣನು ಕರ್ಣನನ್ನು ಭೇಟಿಯಾಗಿ ಪಾಂಡವರ ಪರವಾಗಿ ಯುದ್ಧಮಾಡಲು ಕೇಳುವುದು (೮೩-೮೮). ಯುಯುತ್ಸುವು ಪಾಂಡವರ ಸೇನೆಯನ್ನು ಸೇರಿದುದು (೮೯-೯೫). ಯುಧಿಷ್ಠಿರನನ್ನು ಎರಡೂ ಪಕ್ಷಗಳ ಯೋಧರು ಮೆಚ್ಚಿ ಹೊಗಳಿದುದು (೯೬-೧೦೪).

06041001 ಸಂಜಯ ಉವಾಚ|

06041001a ತತೋ ಧನಂಜಯಂ ದೃಷ್ಟ್ವಾ ಬಾಣಗಾಂಡೀವಧಾರಿಣಂ|

06041001c ಪುನರೇವ ಮಹಾನಾದಂ ವ್ಯಸೃಜಂತ ಮಹಾರಥಾಃ||

ಸಂಜಯನು ಹೇಳಿದನು: “ಆಗ ಧನಂಜಯನು ಬಾಣಗಾಂಡೀವಗಳನ್ನು ಧರಿಸಿದುದನ್ನು ನೋಡಿ ಮಹಾರಥಿಗಳು ಪುನಃ ಮಹಾನಾದಗೈದರು.

06041002a ಪಾಂಡವಾಃ ಸೋಮಕಾಶ್ಚೈವ ಯೇ ಚೈಷಾಮನುಯಾಯಿನಃ|

06041002c ದಧ್ಮುಶ್ಚ ಮುದಿತಾಃ ಶಂಖಾನ್ವೀರಾಃ ಸಾಗರಸಂಭವಾನ್||

ಆ ವೀರ ಪಾಂಡವರು, ಸೋಮಕರು ಮತ್ತು ಅವರ ಅನುಯಾಯಿಗಳು ಸಾಗರ ಸಂಭವ ಶಂಖಗಳನ್ನು ಹರ್ಷಿತರಾಗಿ ಊದಿದರು.

06041003a ತತೋ ಭೇರ್ಯಶ್ಚ ಪೇಶ್ಯಶ್ಚ ಕ್ರಕಚಾ ಗೋವಿಷಾಣಿಕಾಃ|

06041003c ಸಹಸೈವಾಭ್ಯಹನ್ಯಂತ ತತಃ ಶಬ್ದೋ ಮಹಾನಭೂತ್||

ಆಗ ಭೇರಿಗಳು, ಪೇಶಿಗಳು, ಕ್ರಕಚಗಳು, ಗೋವಿಷಾಣಿಕಗಳು ಒಟ್ಟಿಗೇ ಮೊಳಗಿ ಮಹಾ ಶಬ್ಧವುಂಟಾಯಿತು.

06041004a ಅಥ ದೇವಾಃ ಸಗಂಧರ್ವಾಃ ಪಿತರಶ್ಚ ಜನೇಶ್ವರ|

06041004c ಸಿದ್ಧಚಾರಣಸಂಘಾಶ್ಚ ಸಮೀಯುಸ್ತೇ ದಿದೃಕ್ಷಯಾ||

ಆಗ ಜನೇಶ್ವರ! ದೇವತೆಗಳು, ಒಟ್ಟಿಗೇ ಗಂಧರ್ವರು, ಪಿತೃಗಳು, ಮತ್ತು ಸಿದ್ಧಚಾರಣ ಸಂಘಗಳು ನೋಡಲು ಆಕಾಶದಲ್ಲಿ ಒಂದುಗೂಡಿದರು.

06041005a ಋಷಯಶ್ಚ ಮಹಾಭಾಗಾಃ ಪುರಸ್ಕೃತ್ಯ ಶತಕ್ರತುಂ|

06041005c ಸಮೀಯುಸ್ತತ್ರ ಸಹಿತಾ ದ್ರಷ್ಟುಂ ತದ್ವೈಶಸಂ ಮಹತ್||

ಮಹಾಭಾಗ ಋಷಿಗಳೂ ಕೂಡ ಶತಕ್ರತುವನ್ನು ಮುಂದಿಟ್ಟುಕೊಂಡು ಒಟ್ಟಿಗೇ ಆ ಮಹಾ ಯುದ್ಧವನ್ನು ನೋಡಲು ಒಂದುಗೂಡಿದರು.

06041006a ತತೋ ಯುಧಿಷ್ಠಿರೋ ದೃಷ್ಟ್ವಾ ಯುದ್ಧಾಯ ಸುಸಮುದ್ಯತೇ|

06041006c ತೇ ಸೇನೇ ಸಾಗರಪ್ರಖ್ಯೇ ಮುಹುಃ ಪ್ರಚಲಿತೇ ನೃಪ||

06041007a ವಿಮುಚ್ಯ ಕವಚಂ ವೀರೋ ನಿಕ್ಷಿಪ್ಯ ಚ ವರಾಯುಧಂ|

06041007c ಅವರುಹ್ಯ ರಥಾತ್ತೂರ್ಣಂ ಪದ್ಭ್ಯಾಮೇವ ಕೃತಾಂಜಲಿಃ||

06041008a ಪಿತಾಮಹಮಭಿಪ್ರೇಕ್ಷ್ಯ ಧರ್ಮರಾಜೋ ಯುಧಿಷ್ಠಿರಃ|

06041008c ವಾಗ್ಯತಃ ಪ್ರಯಯೌ ಯೇನ ಪ್ರಾಙ್ಮುಖೋ ರಿಪುವಾಹಿನೀಂ||

ನೃಪ! ಆಗ ಯುದ್ಧಕ್ಕೆ ಸುಸಮುದ್ಯತವಾಗಿ ಸಾಗರದಂತೆ ಮುಂದೆ ಚಲಿಸುತ್ತಿದ್ದ ಆ ಸೇನೆಗಳನ್ನು ನೋಡಿ ವೀರ ಯುಧಿಷ್ಠಿರನು ಕವಚವನ್ನು ಕಳಚಿ, ಶ್ರೇಷ್ಠ ಆಯುಧವನ್ನು ಕೆಳಗಿಟ್ಟು, ಬೇಗನೆ ರಥದಿಂದ ಕೆಳಗಿಳಿದು, ಕಾಲ್ನಡುಗೆಯಲ್ಲಿಯೇ, ಕೈಗಳನ್ನು ಮುಗಿದು ನಡೆದನು. ಧರ್ಮರಾಜ ಯುಧಿಷ್ಠಿರನು ರಿಪುವಾಹಿನಿಯಲ್ಲಿದ್ದ ಪಿತಾಮಹನನ್ನೇ ನೋಡಿ ಮಾತನಾಡಲು ಪೂರ್ವಾಭಿಮುಖವಾಗಿ ನಡೆದನು.

06041009a ತಂ ಪ್ರಯಾಂತಮಭಿಪ್ರೇಕ್ಷ್ಯ ಕುಂತೀಪುತ್ರೋ ಧನಂಜಯಃ|

06041009c ಅವತೀರ್ಯ ರಥಾತ್ತೂರ್ಣಂ ಭ್ರಾತೃಭಿಃ ಸಹಿತೋಽನ್ವಯಾತ್||

ಅವನು ಹೋಗುತ್ತಿರುವುದನ್ನು ನೋಡಿ ಕುಂತೀಪುತ್ರ ಧನಂಜಯನು ಕೂಡಲೇ ತನ್ನ ರಥದಿಂದ ಕೆಳಗಿಳಿದು ಇತರ ಸಹೋದರರೊಂದಿಗೆ ಅವನನ್ನು ಅನುಸರಿಸಿ ನಡೆದನು.

06041010a ವಾಸುದೇವಶ್ಚ ಭಗವಾನ್ಪೃಷ್ಠತೋಽನುಜಗಾಮ ಹ|

06041010c ಯಥಾಮುಖ್ಯಾಶ್ಚ ರಾಜಾನಸ್ತಮನ್ವಾಜಗ್ಮುರುತ್ಸುಕಾಃ||

ಭಗವಾನ್ ವಾಸುದೇವನೂ ಹಿಂದೆ ನಡೆದನು. ಹಾಗೆಯೇ ಉತ್ಸುಕ ಮುಖ್ಯ ರಾಜರೂ ಹಿಂಬಾಲಿಸಿದರು.

06041011 ಅರ್ಜುನ ಉವಾಚ|

06041011a ಕಿಂ ತೇ ವ್ಯವಸಿತಂ ರಾಜನ್ಯದಸ್ಮಾನಪಹಾಯ ವೈ|

06041011c ಪದ್ಭ್ಯಾಮೇವ ಪ್ರಯಾತೋಽಸಿ ಪ್ರಾಙ್ಮುಖೋ ರಿಪುವಾಹಿನೀಂ||

ಅರ್ಜುನನು ಹೇಳಿದನು: “ರಾಜನ್! ಇದೇನು ಮಾಡುತ್ತಿದ್ದೀಯೆ? ನಮ್ಮನ್ನು ತೊರೆದು ಕಾಲ್ನಡುಗೆಯಲ್ಲಿಯೇ ಪೂರ್ವಾಭಿಮುಖವಾಗಿ ಶತ್ರುಸೇನೆಗಳ ಕಡೆ ಹೋಗುತ್ತಿರುವೆಯಲ್ಲಾ?”

06041012 ಭೀಮಸೇನ ಉವಾಚ|

06041012a ಕ್ವ ಗಮಿಷ್ಯಸಿ ರಾಜೇಂದ್ರ ನಿಕ್ಷಿಪ್ತಕವಚಾಯುಧಃ|

06041012c ದಂಶಿತೇಷ್ವರಿಸೈನ್ಯೇಷು ಭ್ರಾತೄನುತ್ಸೃಜ್ಯ ಪಾರ್ಥಿವ||

ಭೀಮಸೇನನು ಹೇಳಿದನು: “ರಾಜೇಂದ್ರ! ಪಾರ್ಥಿವ! ಕವಚಾಯುಧಗಳನ್ನು ಕೆಳಗಿಟ್ಟು, ಕವಚಗಳಿಂದ ಕೂಡಿದ ಅರಿಸೇನೆಗಳ ಕಡೆ ತಮ್ಮಂದಿರನ್ನು ತೊರೆದು ಎಲ್ಲಿಗೆ ಹೋಗುತ್ತಿದ್ದೀಯೆ?”

06041013 ನಕುಲ ಉವಾಚ|

06041013a ಏವಂಗತೇ ತ್ವಯಿ ಜ್ಯೇಷ್ಠೇ ಮಮ ಭ್ರಾತರಿ ಭಾರತ|

06041013c ಭೀರ್ಮೇ ಮೇ ದುನೋತಿ ಹೃದಯಂ ಬ್ರೂಹಿ ಗಂತಾ ಭವಾನ್ಕ್ವ ನು||

ನಕುಲನು ಹೇಳಿದನು: “ಭಾರತ! ನೀನು ನನ್ನ ಹಿರಿಯಣ್ಣ. ಈ ರೀತಿ ನೀನು ಹೋಗುತ್ತಿರುವುದರಿಂದ ಭೀತಿಯು ನನ್ನ ಹೃದಯವನ್ನು ನೋಯಿಸುತ್ತಿದೆ. ಹೇಳು! ನೀನು ಎಲ್ಲಿಗೆ ಹೋಗುತ್ತಿರುವೆ?”

06041014 ಸಹದೇವ ಉವಾಚ|

06041014a ಅಸ್ಮಿನ್ರಣಸಮೂಹೇ ವೈ ವರ್ತಮಾನೇ ಮಹಾಭಯೇ|

06041014c ಯೋದ್ಧವ್ಯೇ ಕ್ವ ನು ಗಂತಾಸಿ ಶತ್ರೂನಭಿಮುಖೋ ನೃಪ||

ಸಹದೇವನು ಹೇಳಿದನು: “ಸದ್ಯದಲ್ಲಿಯೇ ಮಹಾಭಯಂಕರ ಯುದ್ಧಮಾಡಲಿಕ್ಕಿರುವ ಈ ರಣಸಮೂಹದಲ್ಲಿ ಶತ್ರುಗಳ ಕಡೆ ಎಲ್ಲಿಗೆ ಹೋಗುತ್ತೀಯೆ ನೃಪ!””

06041015 ಸಂಜಯ ಉವಾಚ|

06041015a ಏವಮಾಭಾಷ್ಯಮಾಣೋಽಪಿ ಭ್ರಾತೃಭಿಃ ಕುರುನಂದನ|

06041015c ನೋವಾಚ ವಾಗ್ಯತಃ ಕಿಂ ಚಿದ್ಗಚ್ಛತ್ಯೇವ ಯುಧಿಷ್ಠಿರಃ||

ಸಂಜಯನು ಹೇಳಿದನು: “ಕುರುನಂದನ! ತಮ್ಮಂದಿರು ಈ ರೀತಿ ಕೇಳುತ್ತಿದ್ದರೂ ಯುಧಿಷ್ಠಿರನು ಏನನ್ನೂ ಮಾತನಾಡದೇ ಮುಂದುವರೆದನು.

06041016a ತಾನುವಾಚ ಮಹಾಪ್ರಾಜ್ಞೋ ವಾಸುದೇವೋ ಮಹಾಮನಾಃ|

06041016c ಅಭಿಪ್ರಾಯೋಽಸ್ಯ ವಿಜ್ಞಾತೋ ಮಯೇತಿ ಪ್ರಹಸನ್ನಿವ||

ಮಹಾಪ್ರಾಜ್ಞ ಮಹಾಮನಸ್ವಿ ವಾಸುದೇವನು ಅವರಿಗೆ ನಗುತ್ತಾ “ಇವನ ಅಭಿಪ್ರಾಯವು ನನಗೆ ತಿಳಿದಿದೆ” ಎಂದನು.

06041017a ಏಷ ಭೀಷ್ಮಂ ತಥಾ ದ್ರೋಣಂ ಗೌತಮಂ ಶಲ್ಯಮೇವ ಚ|

06041017c ಅನುಮಾನ್ಯ ಗುರೂನ್ಸರ್ವಾನ್ಯೋತ್ಸ್ಯತೇ ಪಾರ್ಥಿವೋಽರಿಭಿಃ||

“ಈ ಪಾರ್ಥಿವನು ಭೀಷ್ಮ, ದ್ರೋಣ, ಗೌತಮ ಮತ್ತು ಶಲ್ಯರೇ ಮೊದಲಾದ ಗುರುಗಳನ್ನು ಗೌರವಿಸಿ ಎಲ್ಲ ಶತ್ರುಗಳೊಂದಿಗೆ ಹೋರಾಡುತ್ತಾನೆ.

06041018a ಶ್ರೂಯತೇ ಹಿ ಪುರಾಕಲ್ಪೇ ಗುರೂನನನುಮಾನ್ಯ ಯಃ|

06041018c ಯುಧ್ಯತೇ ಸ ಭವೇದ್ವ್ಯಕ್ತಮಪಧ್ಯಾತೋ ಮಹತ್ತರೈಃ||

ಗುರುಗಳನ್ನು ಗೌರವಿಸಿ ನಮಸ್ಕರಿಸಿ ಯಾರು ಯುದ್ಧಮಾಡುತ್ತಾನೋ ಅವನು ಮಹತ್ತರ ಆಪತ್ತುಗಳನ್ನೂ ಜಯಿಸುತ್ತಾನೆಂದು ಹಿಂದಿನ ಕಲ್ಪಗಳಿಂದ ಕೇಳುತ್ತೇವೆ.

06041019a ಅನುಮಾನ್ಯ ಯಥಾಶಾಸ್ತ್ರಂ ಯಸ್ತು ಯುಧ್ಯೇನ್ಮಹತ್ತರೈಃ|

06041019c ಧ್ರುವಸ್ತಸ್ಯ ಜಯೋ ಯುದ್ಧೇ ಭವೇದಿತಿ ಮತಿರ್ಮಮ||

ತನಗಿಂತಲೂ ಮಹತ್ತರರನ್ನು ಯಥಾಶಾಸ್ತ್ರವಾಗಿ ನಮಸ್ಕರಿಸಿ ಯುದ್ಧಮಾಡುವವನಿಗೆ ಯುದ್ಧದಲ್ಲಿ ಜಯವು ಖಂಡಿತವಾದುದು ಎಂದು ನನಗನ್ನಿಸುತ್ತದೆ.”

06041020a ಏವಂ ಬ್ರುವತಿ ಕೃಷ್ಣೇ ತು ಧಾರ್ತರಾಷ್ಟ್ರಚಮೂಂ ಪ್ರತಿ|

06041020c ಹಾಹಾಕಾರೋ ಮಹಾನಾಸೀನ್ನಿಃಶಬ್ದಾಸ್ತ್ವಪರೇಽಭವನ್||

ಕೃಷ್ಣನು ಹೀಗೆ ಹೇಳಲು ಧಾರ್ತರಾಷ್ಟ್ರನ ಸೇನೆಯಲ್ಲಿ ಮಹಾ ಹಾಹಾಕಾರವಾಯಿತು. ಇನ್ನೊಂದು ಕಡೆಯಲ್ಲಿ ನಿಃಶಬ್ಧವಾಯಿತು.

06041021a ದೃಷ್ಟ್ವಾ ಯುಧಿಷ್ಠಿರಂ ದೂರಾದ್ಧಾರ್ತರಾಷ್ಟ್ರಸ್ಯ ಸೈನಿಕಾಃ|

06041021c ಮಿಥಃ ಸಂಕಥಯಾಂ ಚಕ್ರುರ್ನೇಶೋಽಸ್ತಿ ಕುಲಪಾಂಸನಃ||

ದೂರದಿಂದಲೇ ಯುಧಿಷ್ಠಿರನನ್ನು ನೋಡಿ ಧಾರ್ತರಾಷ್ಟ್ರನ ಸೈನಿಕರು ತಮ್ಮೊಂದಿಗೇ ಮಾತನಾಡಿಕೊಂಡರು: “ಇವನು ಕುಲಪಾಂಸನ!

06041022a ವ್ಯಕ್ತಂ ಭೀತ ಇವಾಭ್ಯೇತಿ ರಾಜಾಸೌ ಭೀಷ್ಮಮಂತಿಕಾತ್|

06041022c ಯುಧಿಷ್ಠಿರಃ ಸಸೋದರ್ಯಃ ಶರಣಾರ್ಥಂ ಪ್ರಯಾಚಕಃ||

ಈ ರಾಜನು ಹೆದರಿಕೊಂಡಿದ್ದಾನೆ ಎನ್ನುವುದು ವ್ಯಕ್ತವಾಗುತ್ತಿದೆ. ಯುಧಿಷ್ಠಿರನು ಸೋದರರೊಂದಿಗೆ ಶರಣಾಗಲು ಬೇಡಿಕೊಂಡು ಭೀಷ್ಮನಲ್ಲಿಗೆ ಬರುತ್ತಿದ್ದಾನೆ.

06041023a ಧನಂಜಯೇ ಕಥಂ ನಾಥೇ ಪಾಂಡವೇ ಚ ವೃಕೋದರೇ|

06041023c ನಕುಲೇ ಸಹದೇವೇ ಚ ಭೀತೋಽಭ್ಯೇತಿ ಚ ಪಾಂಡವಃ||

ಧನಂಜಯ, ಪಾಂಡವ ವೃಕೋದರ, ನಕುಲ ಸಹದೇವರು ನಾಯಕರಾಗಿರುವಾಗ ಈ ಪಾಂಡವನು ಏಕೆ ಭೀತನಾಗಿದ್ದಾನೆ?

06041024a ನ ನೂನಂ ಕ್ಷತ್ರಿಯಕುಲೇ ಜಾತಃ ಸಂಪ್ರಥಿತೇ ಭುವಿ|

06041024c ಯಥಾಸ್ಯ ಹೃದಯಂ ಭೀತಮಲ್ಪಸತ್ತ್ವಸ್ಯ ಸಂಯುಗೇ||

ಭುವಿಯಲ್ಲಿ ಪ್ರಸಿದ್ಧನಾದರೂ, ಯುದ್ಧದ ಕುರಿತು ಹೃದಯದಲ್ಲಿ ಭೀತಿಪಡುತ್ತಿರುವ ಈ ಅಲ್ಪಸತ್ವನು ಕ್ಷತ್ರಿಯಕುಲದಲ್ಲಿಯೇ ಜನಿಸಿರಲಿಕ್ಕಿಲ್ಲ!”

06041025a ತತಸ್ತೇ ಕ್ಷತ್ರಿಯಾಃ ಸರ್ವೇ ಪ್ರಶಂಸಂತಿ ಸ್ಮ ಕೌರವಾನ್|

06041025c ಹೃಷ್ಟಾಃ ಸುಮನಸೋ ಭೂತ್ವಾ ಚೈಲಾನಿ ದುಧುವುಃ ಪೃಥಕ್||

ಆಗ ಆ ಕ್ಷತ್ರಿಯರೆಲ್ಲರೂ ಕೌರವರನ್ನು ಪ್ರಶಂಸಿಸಿದರು. ಸಂತೋಷದಿಂದ ಸುಮನಸ್ಕರಾಗಿ ತಮ್ಮ ಅಂಗವಸ್ತ್ರಗಳನ್ನು ಪುನಃ ಪುನಃ ಮೇಲೆತ್ತಿ ಬೀಸಿದರು.

06041026a ವ್ಯನಿಂದಂತ ತತಃ ಸರ್ವೇ ಯೋಧಾಸ್ತತ್ರ ವಿಶಾಂ ಪತೇ|

06041026c ಯುಧಿಷ್ಠಿರಂ ಸಸೋದರ್ಯಂ ಸಹಿತಂ ಕೇಶವೇನ ಹ||

ವಿಶಾಂಪತೇ! ಆಗ ಅಲ್ಲಿರುವ ಯೋಧರೆಲ್ಲರೂ ಸೋದರರೊಂದಿಗೆ ಯುಧಿಷ್ಠಿರನನ್ನೂ ಜೊತೆಗೆ ಕೇಶವನನ್ನೂ ನಿಂದಿಸಿದರು.

06041027a ತತಸ್ತತ್ಕೌರವಂ ಸೈನ್ಯಂ ಧಿಕ್ಕೃತ್ವಾ ತು ಯುಧಿಷ್ಠಿರಂ|

06041027c ನಿಃಶಬ್ದಮಭವತ್ತೂರ್ಣಂ ಪುನರೇವ ವಿಶಾಂ ಪತೇ||

ವಿಶಾಂಪತೇ! ಆಗ ಯುಧಿಷ್ಠಿರನನ್ನು ಧಿಕ್ಕರಿಸಿ ಕೌರವ ಸೈನ್ಯವು ಪುನಃ ನಿಃಶಬ್ಧವಾಯಿತು.

06041028a ಕಿಂ ನು ವಕ್ಷ್ಯತಿ ರಾಜಾಸೌ ಕಿಂ ಭೀಷ್ಮಃ ಪ್ರತಿವಕ್ಷ್ಯತಿ|

06041028c ಕಿಂ ಭೀಮಃ ಸಮರಶ್ಲಾಘೀ ಕಿಂ ನು ಕೃಷ್ಣಾರ್ಜುನಾವಿತಿ||

06041029a ವಿವಕ್ಷಿತಂ ಕಿಮಸ್ಯೇತಿ ಸಂಶಯಃ ಸುಮಹಾನಭೂತ್|

06041029c ಉಭಯೋಃ ಸೇನಯೋ ರಾಜನ್ಯುಧಿಷ್ಠಿರಕೃತೇ ತದಾ||

ಯುಧಿಷ್ಠಿರನು ಹೀಗೆ ಮಾಡಲು ಎರಡೂ ಸೇನೆಗಳಲ್ಲಿ “ರಾಜನು ಏನು ಹೇಳುತ್ತಾನೆ? ಭೀಷ್ಮನು ಏನೆಂದು ಉತ್ತರಿಸುತ್ತಾನೆ? ಸಮರಶ್ಲಾಘೀ ಭೀಮ ಮತ್ತು ಕೃಷ್ಣಾರ್ಜುನರು ಏನು ಹೇಳುತ್ತಾರೆ?” ಎಂದು ಮಹಾ ಸಂಶಯವುಂಟಾಯಿತು.

06041030a ಸ ವಿಗಾಹ್ಯ ಚಮೂಂ ಶತ್ರೋಃ ಶರಶಕ್ತಿಸಮಾಕುಲಾಂ|

06041030c ಭೀಷ್ಮಮೇವಾಭ್ಯಯಾತ್ತೂರ್ಣಂ ಭ್ರಾತೃಭಿಃ ಪರಿವಾರಿತಃ||

ಅವನು ಶರ-ಶಕ್ತಿಗಳಿಂದ ಕೂಡಿದ್ದ ಶತ್ರುಗಳ ಸೇನೆಯನ್ನು ಪ್ರವೇಶಿಸಿ, ತಮ್ಮಂದಿರಿಂದ ಸುತ್ತುವರೆಯಲ್ಪಟ್ಟು ಭೀಷ್ಮನನ್ನು ಸಮೀಪಿಸಿದನು.

06041031a ತಂ ಉವಾಚ ತತಃ ಪಾದೌ ಕರಾಭ್ಯಾಂ ಪೀಡ್ಯ ಪಾಂಡವಃ|

06041031c ಭೀಷ್ಮಂ ಶಾಂತನವಂ ರಾಜಾ ಯುದ್ಧಾಯ ಸಮುಪಸ್ಥಿತಂ||

ಆಗ ರಾಜಾ ಪಾಂಡವನು ಯುದ್ಧಕ್ಕೆ ಸಿದ್ಧನಾಗಿದ್ದ ಶಾಂತನವ ಭೀಷ್ಮನ ಪಾದಗಳನ್ನು ಕೈಗಳಿಂದ ಹಿಡಿದುಕೊಂಡು ಹೇಳಿದನು:

06041032 ಯುಧಿಷ್ಠಿರ ಉವಾಚ|

06041032a ಆಮಂತ್ರಯೇ ತ್ವಾಂ ದುರ್ಧರ್ಷ ಯೋತ್ಸ್ಯೇ ತಾತ ತ್ವಯಾ ಸಹ|

06041032c ಅನುಜಾನೀಹಿ ಮಾಂ ತಾತ ಆಶಿಷಶ್ಚ ಪ್ರಯೋಜಯ||

ಯುಧಿಷ್ಠಿರನು ಹೇಳಿದನು: “ತಾತ! ದುರ್ಧರ್ಷ! ನಿನ್ನೊಡನೆ ಯುದ್ಧಮಾಡಲು ಕರೆಸಿಕೊಂಡಿರುವೆ! ಅನುಜ್ಞೆಯನ್ನು ನೀಡು. ತಾತ! ಜಯವಾಗಲೆಂದು ಆಶೀರ್ವದಿಸು!”

06041033 ಭೀಷ್ಮ ಉವಾಚ|

06041033a ಯದ್ಯೇವಂ ನಾಭಿಗಚ್ಛೇಥಾ ಯುಧಿ ಮಾಂ ಪೃಥಿವೀಪತೇ|

06041033c ಶಪೇಯಂ ತ್ವಾಂ ಮಹಾರಾಜ ಪರಾಭಾವಾಯ ಭಾರತ||

ಭೀಷ್ಮನು ಹೇಳಿದನು: “ಭಾರತ! ಪೃಥಿವೀಪತೇ! ಮಹಾರಾಜ! ಹೀಗೆ ನೀನು ನನ್ನ ಬಳಿ ಬರದೇ ಇದ್ದಿದ್ದರೆ ನಿನಗೆ ಪರಾಭವವಾಗಲೆಂದು ಶಪಿಸುತ್ತಿದ್ದೆ.

06041034a ಪ್ರೀತೋಽಸ್ಮಿ ಪುತ್ರ ಯುಧ್ಯಸ್ವ ಜಯಮಾಪ್ನುಹಿ ಪಾಂಡವ|

06041034c ಯತ್ತೇಽಭಿಲಷಿತಂ ಚಾನ್ಯತ್ತದವಾಪ್ನುಹಿ ಸಂಯುಗೇ||

ಪುತ್ರ! ಪಾಂಡವ! ಪ್ರೀತನಾಗಿದ್ದೇನೆ. ಯುದ್ಧಮಾಡು. ಜಯವನ್ನು ಹೊಂದು. ಯುದ್ಧದಲ್ಲಿ ನಿನಗೆ ಅನ್ಯ ಏನೆಲ್ಲ ಅಭಿಲಾಷೆಗಳಿವೆಯೋ ಅವುಗಳನ್ನೂ ಪಡೆಯುತ್ತೀಯೆ.

06041035a ವ್ರಿಯತಾಂ ಚ ವರಃ ಪಾರ್ಥ ಕಿಮಸ್ಮತ್ತೋಽಭಿಕಾಂಕ್ಷಸಿ|

06041035c ಏವಂ ಗತೇ ಮಹಾರಾಜ ನ ತವಾಸ್ತಿ ಪರಾಜಯಃ||

ಪಾರ್ಥ! ನನ್ನಿಂದ ಏನನ್ನು ಬಯಸುತ್ತೀಯೋ ಆ ವರವನ್ನು ಕೇಳು. ಮಹಾರಾಜ! ಇದೇ ರೀತಿ ನಡೆದರೆ ನಿನಗೆ ಪರಾಜಯವಿಲ್ಲ.

06041036a ಅರ್ಥಸ್ಯ ಪುರುಷೋ ದಾಸೋ ದಾಸಸ್ತ್ವರ್ಥೋ ನ ಕಸ್ಯ ಚಿತ್|

06041036c ಇತಿ ಸತ್ಯಂ ಮಹಾರಾಜ ಬದ್ಧೋಽಸ್ಮ್ಯರ್ಥೇನ ಕೌರವೈಃ||

ಮನುಷ್ಯನು ಧನದ ದಾಸನೇ ಹೊರತು ಧನವು ಎಂದೂ ಯಾರ ದಾಸನೂ ಆಗಿರುವುದಿಲ್ಲ. ಮಹಾರಾಜ! ಇದು ಸತ್ಯ. ಧನದಿಂದಲೇ ನಾನು ಕೌರವರಿಗೆ ಬದ್ಧನಾಗಿದ್ದೇನೆ.

06041037a ಅತಸ್ತ್ವಾಂ ಕ್ಲೀಬವದ್ವಾಕ್ಯಂ ಬ್ರವೀಮಿ ಕುರುನಂದನ|

06041037c ಹೃತೋಽಸ್ಮ್ಯರ್ಥೇನ ಕೌರವ್ಯ ಯುದ್ಧಾದನ್ಯತ್ಕಿಮಿಚ್ಛಸಿ||

ಕುರುನಂದನ! ಆದುದರಿಂದ ಈ ಕ್ಲೀಬವಾಕ್ಯವನ್ನು ಹೇಳುತ್ತಿದ್ದೇನೆ. ಧನದಿಂದ ನಾನು ಅಪಹೃತನಾಗಿದ್ದೇನೆ. ಕೌರವ್ಯ! ಯುದ್ಧದಿಂದ ಬೇರೆ ಏನನ್ನು ಇಚ್ಛಿಸುತ್ತೀಯೆ?”

06041038 ಯುಧಿಷ್ಠಿರ ಉವಾಚ|

06041038a ಮಂತ್ರಯಸ್ವ ಮಹಾಪ್ರಾಜ್ಞ ಹಿತೈಷೀ ಮಮ ನಿತ್ಯಶಃ|

06041038c ಯುಧ್ಯಸ್ವ ಕೌರವಸ್ಯಾರ್ಥೇ ಮಮೈಷ ಸತತಂ ವರಃ||

ಯುಧಿಷ್ಠಿರನು ಹೇಳಿದನು: “ಮಹಾಪ್ರಾಜ್ಞ! ನಿತ್ಯವೂ ನನ್ನ ಹಿತೈಷಿಯಾಗಿ ಸಲಹೆ ನೀಡುತ್ತಿರು. ಸತತವೂ ಕೌರವನಿಗೋಸ್ಕರ ಯುದ್ಧಮಾಡು. ಇದೇ ನನ್ನ ವರ.”

06041039 ಭೀಷ್ಮ ಉವಾಚ|

06041039a ರಾಜನ್ಕಿಮತ್ರ ಸಾಹ್ಯಂ ತೇ ಕರೋಮಿ ಕುರುನಂದನ|

06041039c ಕಾಮಂ ಯೋತ್ಸ್ಯೇ ಪರಸ್ಯಾರ್ಥೇ ಬ್ರೂಹಿ ಯತ್ತೇ ವಿವಕ್ಷಿತಂ||

ಭೀಷ್ಮನು ಹೇಳಿದನು: “ರಾಜನ್! ಕುರುನಂದನ! ಇದರಲ್ಲಿ ನಿನಗೆ ಏನು ಸಹಾಯಮಾಡಲಿ? ನಿನ್ನ ಶತ್ರುಗಳಿಗಾಗಿ ಹೋರಾಡುತ್ತಿದ್ದೇನೆ. ನಿನ್ನ ಬಯಕೆಯೇನೆನ್ನುವುದನ್ನು ಹೇಳು!”

06041040 ಯುಧಿಷ್ಠಿರ ಉವಾಚ|

06041040a ಕಥಂ ಜಯೇಯಂ ಸಂಗ್ರಾಮೇ ಭವಂತಮಪರಾಜಿತಂ|

06041040c ಏತನ್ಮೇ ಮಂತ್ರಯ ಹಿತಂ ಯದಿ ಶ್ರೇಯಃ ಪ್ರಪಶ್ಯಸಿ||

ಯುಧಿಷ್ಠಿರನು ಹೇಳಿದನು: “ಅಪರಾಜಿತನಾದ ನಿನ್ನನ್ನು ಸಂಗ್ರಾಮದಲ್ಲಿ ಹೇಗೆ ಜಯಿಸಬಹುದು? ನಿನಗೆ ಶ್ರೇಯಸ್ಕರವೆಂದು ಕಂಡರೆ ನನಗೆ ಹಿತವಾದ ಈ ಸಲಹೆಯನ್ನು ನೀಡು.”

06041041 ಭೀಷ್ಮ ಉವಾಚ|

06041041a ನ ತಂ ಪಶ್ಯಾಮಿ ಕೌಂತೇಯ ಯೋ ಮಾಂ ಯುಧ್ಯಂತಮಾಹವೇ|

06041041c ವಿಜಯೇತ ಪುಮಾನ್ಕಶ್ಚಿದಪಿ ಸಾಕ್ಷಾಚ್ಚತಕ್ರತುಃ||

ಭೀಷ್ಮನು ಹೇಳಿದನು: “ಕೌಂತೇಯ! ಆಹವದಲ್ಲಿ ನನ್ನೊಂದಿಗೆ ಯುದ್ಧಮಾಡಿ ಗೆಲ್ಲುವ ಯಾವ ಪುರುಷನನ್ನೂ, ಸಾಕ್ಷಾತ್ ಶತಕ್ರತುವೂ ಕೂಡ, ನಾನು ಕಾಣುವುದಿಲ್ಲ.”

06041042 ಯುಧಿಷ್ಠಿರ ಉವಾಚ|

06041042a ಹಂತ ಪೃಚ್ಛಾಮಿ ತಸ್ಮಾತ್ತ್ವಾಂ ಪಿತಾಮಹ ನಮೋಽಸ್ತು ತೇ|

06041042c ಜಯೋಪಾಯಂ ಬ್ರವೀಹಿ ತ್ವಮಾತ್ಮನಃ ಸಮರೇ ಪರೈಃ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ನಿನಗೆ ನಮಸ್ಕಾರಗಳು! ಅದನ್ನು ಪುನಃ ನಿನ್ನಲ್ಲಿ ಕೇಳುತ್ತಿದ್ದೇನೆ. ಸಮರದಲ್ಲಿ ಶತ್ರುಗಳು ನಿನ್ನನ್ನು ಗೆಲ್ಲುವ ಉಪಾಯವನ್ನು ಹೇಳು.”

06041043 ಭೀಷ್ಮ ಉವಾಚ|

06041043a ನ ಶತ್ರುಂ ತಾತ ಪಶ್ಯಾಮಿ ಸಮರೇ ಯೋ ಜಯೇತ ಮಾಂ|

06041043c ನ ತಾವನ್ಮೃತ್ಯುಕಾಲೋ ಮೇ ಪುನರಾಗಮನಂ ಕುರು||

ಭೀಷ್ಮನು ಹೇಳಿದನು: “ಮಗೂ! ಸಮರದಲ್ಲಿ ನನ್ನನ್ನು ಜಯಿಸಬಲ್ಲ ಶತ್ರುವನ್ನು ನಾನು ಕಾಣುವುದಿಲ್ಲ. ನನ್ನ ಮೃತ್ಯುಕಾಲವು ಇನ್ನೂ ಬಂದಿಲ್ಲ. ಪುನಃ ಬರುವುದನ್ನು ಮಾಡು!””

06041044 ಸಂಜಯ ಉವಾಚ|

06041044a ತತೋ ಯುಧಿಷ್ಠಿರೋ ವಾಕ್ಯಂ ಭೀಷ್ಮಸ್ಯ ಕುರುನಂದನ|

06041044c ಶಿರಸಾ ಪ್ರತಿಜಗ್ರಾಹ ಭೂಯಸ್ತಮಭಿವಾದ್ಯ ಚ||

ಸಂಜಯನು ಹೇಳಿದನು: “ಕುರುನಂದನ! ಆಗ ಭೀಷ್ಮನ ವಾಕ್ಯವನ್ನು ಶಿರಸಾ ಸ್ವೀಕರಿಸಿ ಯುಧಿಷ್ಠಿರನು ಪುನಃ ಅವನನ್ನು ವಂದಿಸಿದನು.

06041045a ಪ್ರಾಯಾತ್ಪುನರ್ಮಹಾಬಾಹುರಾಚಾರ್ಯಸ್ಯ ರಥಂ ಪ್ರತಿ|

06041045c ಪಶ್ಯತಾಂ ಸರ್ವಸೈನ್ಯಾನಾಂ ಮಧ್ಯೇನ ಭ್ರಾತೃಭಿಃ ಸಹ||

ಅನಂತರ ಆ ಮಹಾಬಾಹುವು ಸರ್ವಸೈನ್ಯಗಳಿಗೂ ಕಾಣಿಸುವಂತೆ ಮಧ್ಯದಲ್ಲಿ ತಮ್ಮಂದಿರನ್ನೊಡಗೂಡಿ ಆಚಾರ್ಯನ ರಥದ ಕಡೆ ನಡೆದನು.

06041046a ಸ ದ್ರೋಣಮಭಿವಾದ್ಯಾಥ ಕೃತ್ವಾ ಚೈವ ಪ್ರದಕ್ಷಿಣಂ|

06041046c ಉವಾಚ ವಾಚಾ ದುರ್ಧರ್ಷಮಾತ್ಮನಿಃಶ್ರೇಯಸಂ ವಚಃ||

ಅವನು ಆ ದುರ್ಧರ್ಷ ದ್ರೋಣನನ್ನು ಪ್ರದಕ್ಷಿಣೆಮಾಡಿ ನಮಸ್ಕರಿಸಿ ತನಗೆ ಶ್ರೇಯಸ್ಸನ್ನು ನೀಡುವಂತಹ ಮಾತುಗಳನ್ನಾಡಿದನು.

06041047a ಆಮಂತ್ರಯೇ ತ್ವಾಂ ಭಗವನ್ಯೋತ್ಸ್ಯೇ ವಿಗತಕಲ್ಮಷಃ|

06041047c ಜಯೇಯಂ ಚ ರಿಪೂನ್ಸರ್ವಾನನುಜ್ಞಾತಸ್ತ್ವಯಾ ದ್ವಿಜ||

“ಭಗವನ್! ವಿಗತಕಲ್ಮಶನಾದ ನಿನ್ನೊಡನೆ ಯುದ್ಧಮಾಡಲು ಆಮಂತ್ರಿತನಾಗಿದ್ದೇನೆ. ದ್ವಿಜ! ನಿನ್ನಿಂದ ಅನುಜ್ಞಾತನಾಗಿ ಸರ್ವ ಶತ್ರುಗಳನ್ನೂ ಗೆಲ್ಲಬಲ್ಲೆನು.”

06041048 ದ್ರೋಣ ಉವಾಚ|

06041048a ಯದಿ ಮಾಂ ನಾಭಿಗಚ್ಛೇಥಾ ಯುದ್ಧಾಯ ಕೃತನಿಶ್ಚಯಃ|

06041048c ಶಪೇಯಂ ತ್ವಾಂ ಮಹಾರಾಜ ಪರಾಭಾವಾಯ ಸರ್ವಶಃ||

ದ್ರೋಣನು ಹೇಳಿದನು: “ಮಹಾರಾಜ! ಯುದ್ಧದ ನಿಶ್ಚಯವನ್ನು ಮಾಡಿ ಒಂದುವೇಳೆ ನೀನು ನನ್ನಲ್ಲಿಗೆ ಬಾರದೇ ಇದ್ದಿದ್ದರೆ ನಾನು ನಿನಗೆ ಎಲ್ಲೆಡೆಯಿಂದ ಪರಾಭವವಾಗಲೆಂದು ಶಪಿಸುತ್ತಿದ್ದೆ.

06041049a ತದ್ಯುಧಿಷ್ಠಿರ ತುಷ್ಟೋಽಸ್ಮಿ ಪೂಜಿತಶ್ಚ ತ್ವಯಾನಘ|

06041049c ಅನುಜಾನಾಮಿ ಯುಧ್ಯಸ್ವ ವಿಜಯಂ ಸಮವಾಪ್ನುಹಿ||

ಅನಘ! ಯುಧಿಷ್ಠಿರ! ನಿನ್ನಿಂದ ಪೂಜಿತನಾಗಿ ತುಷ್ಟನಾಗಿದ್ದೇನೆ. ಅನುಮತಿಯನ್ನಿತ್ತಿದ್ದೇನೆ. ಯುದ್ಧ ಮಾಡು! ವಿಜಯವನ್ನು ಹೊಂದುವೆ!

06041050a ಕರವಾಣಿ ಚ ತೇ ಕಾಮಂ ಬ್ರೂಹಿ ಯತ್ತೇಽಭಿಕಾಂಕ್ಷಿತಂ|

06041050c ಏವಂ ಗತೇ ಮಹಾರಾಜ ಯುದ್ಧಾದನ್ಯತ್ಕಿಮಿಚ್ಛಸಿ||

ಈಗ ನಿನಗಿಷ್ಟವಾದುದನ್ನು ಮಾಡಲು ಬಿಡು. ನೀನು ಏನನ್ನು ಬಯಸುತ್ತೀಯೆ ಹೇಳು. ಮಹಾರಾಜ! ಹೀಗಿರುವಾಗ ಯುದ್ಧದಲ್ಲಿ ಸಹಾಯವನ್ನು ಬಿಟ್ಟು ಬೇರೆ ಏನನ್ನು ಬಯಸುತ್ತೀಯೆ?

06041051a ಅರ್ಥಸ್ಯ ಪುರುಷೋ ದಾಸೋ ದಾಸಸ್ತ್ವರ್ಥೋ ನ ಕಸ್ಯ ಚಿತ್|

06041051c ಇತಿ ಸತ್ಯಂ ಮಹಾರಾಜ ಬದ್ಧೋಽಸ್ಮ್ಯರ್ಥೇನ ಕೌರವೈಃ||

ಮನುಷ್ಯನು ಧನದ ದಾಸನೇ ಹೊರತು ಧನವು ಎಂದೂ ಯಾರ ದಾಸನೂ ಆಗಿರುವುದಿಲ್ಲ. ಮಹಾರಾಜ! ಇದು ಸತ್ಯ. ಧನದಿಂದಲೇ ನಾನು ಕೌರವರಿಗೆ ಬದ್ಧನಾಗಿದ್ದೇನೆ.

06041052a ಅತಸ್ತ್ವಾಂ ಕ್ಲೀಬವದ್ಬ್ರೂಮೋ ಯುದ್ಧಾದನ್ಯತ್ಕಿಮಿಚ್ಛಸಿ|

06041052c ಯೋತ್ಸ್ಯಾಮಿ ಕೌರವಸ್ಯಾರ್ಥೇ ತವಾಶಾಸ್ಯೋ ಜಯೋ ಮಯಾ||

ಆದುದರಿಂದ ನಾನು ಒಬ್ಬ ಶಂಡನಂತೆ ಯುದ್ಧದಲ್ಲಿ ಸಹಾಯವಲ್ಲದೇ ಬೇರೆ ಏನನ್ನು ಬಯಸುತ್ತೀಯೆಂದು ಕೇಳುತ್ತಿದ್ದೇನೆ. ನಾನು ಕೌರವನಿಗಾಗಿ ಹೋರಾಡುತ್ತೇನೆ. ಆದರೆ ನನ್ನ ಆಸೆಯು ನಿನ್ನ ಜಯದ ಕುರಿತಾಗಿದೆ.”

06041053 ಯುಧಿಷ್ಠಿರ ಉವಾಚ|

06041053a ಜಯಮಾಶಾಸ್ಸ್ವ ಮೇ ಬ್ರಹ್ಮನ್ಮಂತ್ರಯಸ್ವ ಚ ಮದ್ಧಿತಂ|

06041053c ಯುಧ್ಯಸ್ವ ಕೌರವಸ್ಯಾರ್ಥೇ ವರ ಏಷ ವೃತೋ ಮಯಾ||

ಯುಧಿಷ್ಠಿರನು ಹೇಳಿದನು: “ಬ್ರಹ್ಮನ್! ನನ್ನ ಜಯವನ್ನು ಬಯಸು. ನನ್ನ ಹಿತದಲ್ಲಿ ಸಲಹೆ ನೀಡು. ಕೌರವನ ಕಡೆಯಿಂದ ಯುದ್ಧಮಾಡು. ಇದು ನಾನು ಆರಿಸಿಕೊಳ್ಳುವ ವರ.”

06041054 ದ್ರೋಣ ಉವಾಚ|

06041054a ಧ್ರುವಸ್ತೇ ವಿಜಯೋ ರಾಜನ್ಯಸ್ಯ ಮಂತ್ರೀ ಹರಿಸ್ತವ|

06041054c ಅಹಂ ಚ ತ್ವಾಭಿಜಾನಾಮಿ ರಣೇ ಶತ್ರೂನ್ವಿಜೇಷ್ಯಸಿ||

ದ್ರೋಣನು ಹೇಳಿದನು: “ರಾಜನ್! ಹರಿಯೇ ಮಂತ್ರಿಯಾಗಿರುವ ನಿನಗೆ ವಿಜಯವು ನಿಶ್ಚಯಿಸಿದ್ದು. ನನಗೂ ಕೂಡ ತಿಳಿದಿದೆ. ರಣದಲ್ಲಿ ಶತ್ರುಗಳನ್ನು ಜಯಿಸುತ್ತೀಯೆ.

06041055a ಯತೋ ಧರ್ಮಸ್ತತಃ ಕೃಷ್ಣೋ ಯತಃ ಕೃಷ್ಣಸ್ತತೋ ಜಯಃ|

06041055c ಯುಧ್ಯಸ್ವ ಗಚ್ಛ ಕೌಂತೇಯ ಪೃಚ್ಛ ಮಾಂ ಕಿಂ ಬ್ರವೀಮಿ ತೇ||

ಧರ್ಮವು ಎಲ್ಲಿದೆಯೋ ಅಲ್ಲಿ ಕೃಷ್ಣ. ಕೃಷ್ಣನೆಲ್ಲಿರುವನೋ ಅಲ್ಲಿ ಜಯ. ಕೌಂತೇಯ! ಹೋಗು. ಯುದ್ಧಮಾಡು. ಕೇಳು. ಇನ್ನೇನು ಹೇಳಲಿ?”

06041056 ಯುಧಿಷ್ಠಿರ ಉವಾಚ|

06041056a ಪೃಚ್ಛಾಮಿ ತ್ವಾಂ ದ್ವಿಜಶ್ರೇಷ್ಠ ಶೃಣು ಮೇ ಯದ್ವಿವಕ್ಷಿತಂ|

06041056c ಕಥಂ ಜಯೇಯಂ ಸಂಗ್ರಾಮೇ ಭವಂತಮಪರಾಜಿತಂ||

ಯುಧಿಷ್ಠಿರನು ಹೇಳಿದನು: “ದ್ವಿಜಶ್ರೇಷ್ಠ! ನಾನು ನಿನ್ನಲ್ಲಿ ಕೇಳುತ್ತಿದ್ದೇನೆ. ಹೇಳುವುದನ್ನು ಕೇಳು. ಸಂಗ್ರಾಮದಲ್ಲಿ ನಾವು ಹೇಗೆ ನಿನ್ನನ್ನು ಸೋಲಿಸಿ ಜಯವನ್ನು ಪಡೆಯಬಹುದು?”

06041057 ದ್ರೋಣ ಉವಾಚ|

06041057a ನ ತೇಽಸ್ತಿ ವಿಜಯಸ್ತಾವದ್ಯಾವದ್ಯುಧ್ಯಾಮ್ಯಹಂ ರಣೇ|

06041057c ಮಮಾಶು ನಿಧನೇ ರಾಜನ್ಯತಸ್ವ ಸಹ ಸೋದರೈಃ||

ದ್ರೋಣನು ಹೇಳಿದನು: “ರಾಜನ್! ರಣದಲ್ಲಿ ನಾನು ಯುದ್ಧ ಮಾಡುತ್ತಿರುವವರೆಗೆ ನಿನಗೆ ವಿಜಯವಿಲ್ಲ. ಸೋದರರೊಂದಿಗೆ ಬೇಗನೆ ನನ್ನ ಸಾವಿಗೆ ಪ್ರಯತ್ನಿಸು.”

06041058 ಯುಧಿಷ್ಠಿರ ಉವಾಚ|

06041058a ಹಂತ ತಸ್ಮಾನ್ಮಹಾಬಾಹೋ ವಧೋಪಾಯಂ ವದಾತ್ಮನಃ|

06041058c ಆಚಾರ್ಯ ಪ್ರಣಿಪತ್ಯೈಷ ಪೃಚ್ಛಾಮಿ ತ್ವಾಂ ನಮೋಽಸ್ತು ತೇ||

ಯುಧಿಷ್ಠಿರನು ಹೇಳಿದನು: “ಮಹಾಬಾಹೋ! ಹಾಗಿದ್ದರೆ ನಿನ್ನ ವಧೆಯ ಉಪಾಯವನ್ನು ಹೇಳು. ಆಚಾರ್ಯ! ನಿನಗೆ ನಮಸ್ಕಾರಗಳು. ಇದನ್ನು ತಿಳಿಸಿಕೊಡು. ಕೇಳಿಕೊಳ್ಳುತ್ತಿದ್ದೇನೆ.”

06041059 ದ್ರೋಣ ಉವಾಚ|

06041059a ನ ಶತ್ರುಂ ತಾತ ಪಶ್ಯಾಮಿ ಯೋ ಮಾಂ ಹನ್ಯಾದ್ರಣೇ ಸ್ಥಿತಂ|

06041059c ಯುಧ್ಯಮಾನಂ ಸುಸಂರಬ್ಧಂ ಶರವರ್ಷೌಘವರ್ಷಿಣಂ||

ದ್ರೋಣನು ಹೇಳಿದನು: “ಮಗೂ! ರಣದಲ್ಲಿ ನಿಂತಿರುವ, ಸುಸಂರಬ್ಧನಾಗಿ ಶರವರ್ಷಗಳನ್ನು ಸುರಿಸುತ್ತಾ ಯುದ್ಧಮಾಡುತ್ತಿರುವ ನನ್ನನ್ನು ಕೊಲ್ಲುವ ಯಾವ ಶತ್ರುವನ್ನೂ ನಾನು ಕಾಣೆ!

06041060a ಋತೇ ಪ್ರಾಯಗತಂ ರಾಜನ್ನ್ಯಸ್ತಶಸ್ತ್ರಮಚೇತನಂ|

06041060c ಹನ್ಯಾನ್ಮಾಂ ಯುಧಿ ಯೋಧಾನಾಂ ಸತ್ಯಮೇತದ್ಬ್ರವೀಮಿ ತೇ||

ರಾಜನ್! ಶಸ್ತ್ರಗಳನ್ನು ಕೆಳಗಿಟ್ಟು, ಅಚೇತನನಾಗಿ ಪ್ರಾಯಗತನಾದ ನನ್ನನ್ನು ಮಾತ್ರ ಯುದ್ಧದಲ್ಲಿ ಯೋಧರು ಕೊಲ್ಲಬಹುದು. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ.

06041061a ಶಸ್ತ್ರಂ ಚಾಹಂ ರಣೇ ಜಹ್ಯಾಂ ಶ್ರುತ್ವಾ ಸುಮಹದಪ್ರಿಯಂ|

06041061c ಶ್ರದ್ಧೇಯವಾಕ್ಯಾತ್ಪುರುಷಾದೇತತ್ಸತ್ಯಂ ಬ್ರವೀಮಿ ತೇ||

ನನಗೆ ಶ್ರದ್ಧೆಯಿರುವವನ ಕ್ರೂರವಾದ ಸುಮಹಾ ಅಪ್ರಿಯ ವಾಕ್ಯಗಳನ್ನು ಕೇಳಿ ನಾನು ರಣದಲ್ಲಿ ಶಸ್ತ್ರಗಳನ್ನು ತ್ಯಜಿಸಿಯೇನು. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ.””

06041062 ಸಂಜಯ ಉವಾಚ

06041062a ಏತಚ್ಚ್ರುತ್ವಾ ಮಹಾರಾಜ ಭಾರದ್ವಾಜಸ್ಯ ಧೀಮತಃ|

06041062c ಅನುಮಾನ್ಯ ತಮಾಚಾರ್ಯಂ ಪ್ರಾಯಾಚ್ಚಾರದ್ವತಂ ಪ್ರತಿ||

ಸಂಜಯನು ಹೇಳಿದನು: “ಮಹಾರಾಜ! ಭಾರದ್ವಾಜನ ಈ ಮಾತನ್ನು ಕೇಳಿ ಧೀಮತನು ಆಚಾರ್ಯನ ಅನುಮತಿಯನ್ನು ಪಡೆದು ಶಾರದ್ವತನ ಕಡೆ ನಡೆದನು.

06041063a ಸೋಽಭಿವಾದ್ಯ ಕೃಪಂ ರಾಜಾ ಕೃತ್ವಾ ಚಾಪಿ ಪ್ರದಕ್ಷಿಣಂ|

06041063c ಉವಾಚ ದುರ್ಧರ್ಷತಮಂ ವಾಕ್ಯಂ ವಾಕ್ಯವಿಶಾರದಃ||

ಆ ವಾಕ್ಯವಿಶಾರದ ರಾಜನು ಕೃಪನನ್ನೂ ಪ್ರದಕ್ಷಿಣೆ ಮಾಡಿ ನಮಸ್ಕರಿಸಿ ಆ ದುರ್ಧರ್ಷತಮನಿಗೆ ಈ ಮಾತನ್ನಾಡಿದನು:

06041064a ಅನುಮಾನಯೇ ತ್ವಾಂ ಯೋತ್ಸ್ಯಾಮಿ ಗುರೋ ವಿಗತಕಲ್ಮಷಃ|

06041064c ಜಯೇಯಂ ಚ ರಿಪೂನ್ಸರ್ವಾನನುಜ್ಞಾತಸ್ತ್ವಯಾನಘ||

“ಗುರೋ! ಕಲ್ಮಷಗಳನ್ನು ಕಳೆದುಕೊಂಡು ನಿನ್ನೊಂದಿಗೆ ಯುದ್ಧಮಾಡುತ್ತೇನೆ. ಅಪ್ಪಣೆ ಕೊಡಬೇಕು. ಅನಘ! ಈ ರಿಪುಗಳೆಲ್ಲರನ್ನೂ ಜಯಿಸುತ್ತೇನೆ. ಅನುಜ್ಞೆ ನೀಡಬೇಕು!”

06041065 ಕೃಪ ಉವಾಚ|

06041065a ಯದಿ ಮಾಂ ನಾಭಿಗಚ್ಛೇಥಾ ಯುದ್ಧಾಯ ಕೃತನಿಶ್ಚಯಃ|

06041065c ಶಪೇಯಂ ತ್ವಾಂ ಮಹಾರಾಜ ಪರಾಭಾವಾಯ ಸರ್ವಶಃ||

ಕೃಪನು ಹೇಳಿದನು: “ಯುದ್ಧವನ್ನು ನಿಶ್ಚಯಿಸಿ ನೀನು ನನ್ನ ಬಳಿ ಬರದೇ ಇದ್ದಿದ್ದರೆ ಮಹಾರಾಜ! ನಾನು ನಿನ್ನ ಸರ್ವಶಃ ಸೋಲಾಗಲೆಂದು ಶಪಿಸುತ್ತಿದ್ದೆ.

06041066a ಅರ್ಥಸ್ಯ ಪುರುಷೋ ದಾಸೋ ದಾಸಸ್ತ್ವರ್ಥೋ ನ ಕಸ್ಯ ಚಿತ್|

06041066c ಇತಿ ಸತ್ಯಂ ಮಹಾರಾಜ ಬದ್ಧೋಽಸ್ಮ್ಯರ್ಥೇನ ಕೌರವೈಃ||

ಮನುಷ್ಯನು ಧನದ ದಾಸನೇ ಹೊರತು ಧನವು ಎಂದೂ ಯಾರ ದಾಸನೂ ಆಗಿರುವುದಿಲ್ಲ. ಮಹಾರಾಜ! ಇದು ಸತ್ಯ. ಧನದಿಂದಲೇ ನಾನು ಕೌರವರಿಗೆ ಬದ್ಧನಾಗಿದ್ದೇನೆ.

06041067a ತೇಷಾಮರ್ಥೇ ಮಹಾರಾಜ ಯೋದ್ಧವ್ಯಂ ಇತಿ ಮೇ ಮತಿಃ|

06041067c ಅತಸ್ತ್ವಾಂ ಕ್ಲೀಬವದ್ಬ್ರೂಮಿ ಯುದ್ಧಾದನ್ಯತ್ಕಿಮಿಚ್ಛಸಿ||

ಮಹಾರಾಜ! ಅವರ ಉದ್ದೇಶಕ್ಕೆ ಹೋರಾಡಬೇಕೆಂದು ನನ್ನ ಅಭಿಪ್ರಾಯವಿದೆ. ಆದುದರಿಂದ ಶಂಡನಂತೆ ಹೇಳುತ್ತಿದ್ದೇನೆ. ನಿನ್ನ ಪರವಾಗಿ ಯುದ್ಧಮಾಡುವುದನ್ನು ಬಿಟ್ಟು ಬೇರೆ ಏನನ್ನು ಬಯಸುತ್ತೀಯೆ?”

06041068 ಯುಧಿಷ್ಠಿರ ಉವಾಚ|

06041068a ಹಂತ ಪೃಚ್ಛಾಮಿ ತೇ ತಸ್ಮಾದಾಚಾರ್ಯ ಶೃಣು ಮೇ ವಚಃ|

ಯುಧಿಷ್ಠಿರನು ಹೇಳಿದನು: “ಆಚಾರ್ಯ! ಅದು ಹಾಗಿದೆಯೆಂದೇ ನಿನ್ನನ್ನು ಕೇಳಿಕೊಳ್ಳುತ್ತೇನೆ. ನನ್ನ ಮಾತನ್ನು ಕೇಳು.””

06041069  ಸಂಜಯ ಉವಾಚ|

06041069a ಇತ್ಯುಕ್ತ್ವಾ ವ್ಯಥಿತೋ ರಾಜಾ ನೋವಾಚ ಗತಚೇತನಃ|

06041069c ತಂ ಗೌತಮಃ ಪ್ರತ್ಯುವಾಚ ವಿಜ್ಞಾಯಾಸ್ಯ ವಿವಕ್ಷಿತಂ|

06041069e ಅವಧ್ಯೋಽಹಂ ಮಹೀಪಾಲ ಯುಧ್ಯಸ್ವ ಜಯಮಾಪ್ನುಹಿ||

ಸಂಜಯನು ಹೇಳಿದನು: “ಇದನ್ನು ಹೇಳಿ ವ್ಯಥಿತನಾದ ರಾಜನು ಚೇತನವನ್ನು ಕಳೆದುಕೊಂಡು ಏನನ್ನೂ ಹೇಳದೇ ಸುಮ್ಮನಾದನು. ಆದರೆ ಅವನು ಹೇಳಬಯಸಿದುದನ್ನು ತಿಳಿದುಕೊಂಡ ಗೌತಮನು ಉತ್ತರಿಸಿದನು: “ಮಹೀಪಾಲ! ನಾನು ಅವಧ್ಯ! ಯುದ್ಧಮಾಡು! ಜಯವನ್ನು ಹೊಂದು!

06041070a ಪ್ರೀತಸ್ತ್ವಭಿಗಮೇನಾಹಂ ಜಯಂ ತವ ನರಾಧಿಪ|

06041070c ಆಶಾಸಿಷ್ಯೇ ಸದೋತ್ಥಾಯ ಸತ್ಯಮೇತದ್ಬ್ರವೀಮಿ ತೇ||

ನೀನು ಬಂದಿದುದರಿಂದ ಪ್ರೀತನಾಗಿದ್ದೇನೆ. ನರಾಧಿಪ! ಪ್ರತಿದಿನ ಬೆಳಿಗ್ಗೆ ಎದ್ದು ನಿನ್ನ ಜಯಕ್ಕಾಗಿ ಆಶಿಸುತ್ತೇನೆ. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ.”

06041071a ಏತಚ್ಚ್ರುತ್ವಾ ಮಹಾರಾಜ ಗೌತಮಸ್ಯ ವಚಸ್ತದಾ|

06041071c ಅನುಮಾನ್ಯ ಕೃಪಂ ರಾಜಾ ಪ್ರಯಯೌ ಯೇನ ಮದ್ರರಾಟ್||

ಮಹಾರಾಜ! ಗೌತಮನಾಡಿದ ಈ ಮಾತುಗಳನ್ನು ಕೇಳಿ ರಾಜನು ಕೃಪನಿಂದ ಅನುಮತಿಯನ್ನು ಪಡೆದು ಮದ್ರರಾಜನಿರುವಲ್ಲಿಗೆ ಹೋದನು.

06041072a ಸ ಶಲ್ಯಮಭಿವಾದ್ಯಾಥ ಕೃತ್ವಾ ಚಾಭಿಪ್ರದಕ್ಷಿಣಂ|

06041072c ಉವಾಚ ರಾಜಾ ದುರ್ಧರ್ಷಮಾತ್ಮನಿಃಶ್ರೇಯಸಂ ವಚಃ||

ಆಗ ಅವನು ಆ ದುರ್ಧರ್ಷ ಶಲ್ಯನಿಗೂ ಪ್ರದಕ್ಷಿಣೆ ಮಾಡಿ ನಮಸ್ಕರಿಸಿ ತನಗೆ ಶ್ರೇಯಸ್ಸನ್ನು ಕೊಡುವ ಈ ಮಾತುಗಳನ್ನು ಹೇಳಿದನು:

06041073a ಅನುಮಾನಯೇ ತ್ವಾಂ ಯೋತ್ಸ್ಯಾಮಿ ಗುರೋ ವಿಗತಕಲ್ಮಷಃ|

06041073c ಜಯೇಯಂ ಚ ಮಹಾರಾಜ ಅನುಜ್ಞಾತಸ್ತ್ವಯಾ ರಿಪೂನ್||

“ಗುರೋ! ವಿಗತಕಲ್ಮಶನಾಗಿ ನಿನ್ನೊಡನೆ ಯುದ್ಧ ಮಾಡುತ್ತೇನೆ. ಮಹಾರಾಜ! ರಿಪುಗಳನ್ನು ಜಯಿಸಲು ನಿನ್ನ ಅನುಜ್ಞೆಯನ್ನು ನೀಡು!”

06041074 ಶಲ್ಯ ಉವಾಚ|

06041074a ಯದಿ ಮಾಂ ನಾಭಿಗಚ್ಛೇಥಾ ಯುದ್ಧಾಯ ಕೃತನಿಶ್ಚಯಃ|

06041074c ಶಪೇಯಂ ತ್ವಾಂ ಮಹಾರಾಜ ಪರಾಭಾವಾಯ ವೈ ರಣೇ||

ಶಲ್ಯನು ಹೇಳಿದನು: “ಯುದ್ಧ ಮಾಡಲು ನಿಶ್ಚಯ ಮಾಡಿ ನೀನು ನನ್ನಲ್ಲಿಗೆ ಬರದಿದ್ದರೆ ಮಹಾರಾಜ! ರಣದಲ್ಲಿ ನಿನ್ನ ಪರಾಭವವಾಗಲೆಂದು ಶಪಿಸುತ್ತಿದ್ದೆ.

06041075a ತುಷ್ಟೋಽಸ್ಮಿ ಪೂಜಿತಶ್ಚಾಸ್ಮಿ ಯತ್ಕಾಂಕ್ಷಸಿ ತದಸ್ತು ತೇ|

06041075c ಅನುಜಾನಾಮಿ ಚೈವ ತ್ವಾಂ ಯುಧ್ಯಸ್ವ ಜಯಮಾಪ್ನುಹಿ||

ನಿನ್ನಿಂದ ತೃಪ್ತನಾಗಿದ್ದೇನೆ. ಗೌರವಿಸಲ್ಪಟ್ಟಿದ್ದೇನೆ. ಏನನ್ನು ಬಯಸುತ್ತೀಯೋ ಅದು ನಿನ್ನದಾಗಲಿ! ನಿನಗೆ ಅಪ್ಪಣೆಯನ್ನೂ ಕೊಡುತ್ತಿದ್ದೇನೆ. ಯುದ್ಧಮಾಡು. ಜಯವನ್ನು ಪಡೆ.

06041076a ಬ್ರೂಹಿ ಚೈವ ಪರಂ ವೀರ ಕೇನಾರ್ಥಃ ಕಿಂ ದದಾಮಿ ತೇ|

06041076c ಏವಂ ಗತೇ ಮಹಾರಾಜ ಯುದ್ಧಾದನ್ಯತ್ಕಿಮಿಚ್ಛಸಿ||

ವೀರ! ಬೇರೆ ಏನಾದರೂ ಕೇಳುವುದಿದ್ದರೆ ಹೇಳು. ನಿನಗೆ ಏನನ್ನು ಕೊಡಲಿ? ಮಹಾರಾಜ! ಹೀಗಿರುವಾಗ ಯುದ್ಧದಲ್ಲಿ ಸಹಾಯವೊಂದನ್ನು ಬಿಟ್ಟು ಬೇರೆ ಏನನ್ನು ಬಯಸುತ್ತೀಯೆ?

06041077a ಅರ್ಥಸ್ಯ ಪುರುಷೋ ದಾಸೋ ದಾಸಸ್ತ್ವರ್ಥೋ ನ ಕಸ್ಯ ಚಿತ್|

06041077c ಇತಿ ಸತ್ಯಂ ಮಹಾರಾಜ ಬದ್ಧೋಽಸ್ಮ್ಯರ್ಥೇನ ಕೌರವೈಃ||

ಮನುಷ್ಯನು ಧನದ ದಾಸನೇ ಹೊರತು ಧನವು ಎಂದೂ ಯಾರ ದಾಸನೂ ಆಗಿರುವುದಿಲ್ಲ. ಮಹಾರಾಜ! ಇದು ಸತ್ಯ. ಧನದಿಂದಲೇ ನಾನು ಕೌರವರಿಗೆ ಬದ್ಧನಾಗಿದ್ದೇನೆ.

06041078a ಕರಿಷ್ಯಾಮಿ ಹಿ ತೇ ಕಾಮಂ ಭಾಗಿನೇಯ ಯಥೇಪ್ಸಿತಂ|

06041078c ಬ್ರವೀಮ್ಯತಃ ಕ್ಲೀಬವತ್ತ್ವಾಂ ಯುದ್ಧಾದನ್ಯತ್ಕಿಮಿಚ್ಛಸಿ||

ತಂಗಿಯ ಮಗನೇ! ನೀನು ಏನನ್ನು ಬಯಸುತ್ತೀಯೋ ಅದನ್ನು ಮಾಡುತ್ತೇನೆ. ಶಂಡನಂತೆ ಹೇಳುತ್ತಿದ್ದೇನೆ. ಯುದ್ಧದಲ್ಲಿ ಸಹಾಯದ ಹೊರತು ಏನನ್ನು ಬಯಸುತ್ತೀಯೆ?”

06041079 ಯುಧಿಷ್ಠಿರ ಉವಾಚ|

06041079a ಮಂತ್ರಯಸ್ವ ಮಹಾರಾಜ ನಿತ್ಯಂ ಮದ್ಧಿತಮುತ್ತಮಂ|

06041079c ಕಾಮಂ ಯುಧ್ಯ ಪರಸ್ಯಾರ್ಥೇ ವರಮೇತದ್ವೃಣೋಮ್ಯಹಂ|| 

ಯುಧಿಷ್ಠಿರನು ಹೇಳಿದನು: “ಮಹಾರಾಜ! ನಿತ್ಯವೂ ನನ್ನ ಹಿತದಲ್ಲಿ ಉತ್ತಮ ಸಲಹೆಗಳನ್ನು ನೀಡು. ಬೇಕಾದರೆ ಶತ್ರುಗಳಿಗಾಗಿ ಯುದ್ಧಮಾಡು. ಇದೇ ನಾನು ಆರಿಸಿಕೊಳ್ಳುವ ವರ.”

06041080 ಶಲ್ಯ ಉವಾಚ|

06041080a ಬ್ರೂಹಿ ಕಿಮತ್ರ ಸಾಹ್ಯಂ ತೇ ಕರೋಮಿ ನೃಪಸತ್ತಮ|

06041080c ಕಾಮಂ ಯೋತ್ಸ್ಯೇ ಪರಸ್ಯಾರ್ಥೇ ವೃತೋಽಸ್ಮ್ಯರ್ಥೇನ ಕೌರವೈಃ||

ಶಲ್ಯನು ಹೇಳಿದನು: “ನೃಪಸತ್ತಮ! ಹೇಳು! ಇದರಲ್ಲಿ ನಿನಗೆ ನಾನು ಏನು ಸಹಾಯವನ್ನು ಮಾಡಬೇಕು? ಕೌರವರು ಧನವನ್ನಿತ್ತು ನನ್ನನ್ನು ಆರಿಸಿಕೊಂಡಿರುವುದರಿಂದ ಅವರಿಗಾಗಿ ನಾನು ಯುದ್ಧಮಾಡಲು ಬಯಸುತ್ತೇನೆ.”

06041081 ಯುಧಿಷ್ಠಿರ ಉವಾಚ|

06041081a ಸ ಏವ ಮೇ ವರಃ ಸತ್ಯ ಉದ್ಯೋಗೇ ಯಸ್ತ್ವಯಾ ಕೃತಃ|

06041081c ಸೂತಪುತ್ರಸ್ಯ ಸಂಗ್ರಾಮೇ ಕಾರ್ಯಸ್ತೇಜೋವಧಸ್ತ್ವಯಾ||

ಯುಧಿಷ್ಠಿರನು ಹೇಳಿದನು: “ಉದ್ಯೋಗದ ಸಮಯದಲ್ಲಿ ನೀನು ನನಗೆ ಏನು ವರವನ್ನು ನೀಡಿದ್ದೆಯೋ ಅದನ್ನೇ ಸತ್ಯವಾಗಿಸು. ಸಂಗ್ರಾಮದಲ್ಲಿ ಸೂತಪುತ್ರನ ತೇಜೋವಧೆಯನ್ನು ಮಾಡು!”

06041082 ಶಲ್ಯ ಉವಾಚ|

06041082a ಸಂಪತ್ಸ್ಯತ್ಯೇಷ ತೇ ಕಾಮಃ ಕುಂತೀಪುತ್ರ ಯಥೇಪ್ಸಿತಃ|

06041082c ಗಚ್ಛ ಯುಧ್ಯಸ್ವ ವಿಸ್ರಬ್ಧಂ ಪ್ರತಿಜಾನೇ ಜಯಂ ತವ||

ಶಲ್ಯನು ಹೇಳಿದನು: “ಕುಂತೀಪುತ್ರ! ನೀನು ಬಯಸಿದ ಹಾಗೆ ಇದು ನಡೆಯುತ್ತದೆ. ಹೋಗು! ವಿಸ್ರಬ್ಧನಾಗಿ ಯುದ್ಧಮಾಡು. ನಿನಗೆ ಜಯದ ಭರವಸೆಯನ್ನು ನೀಡುತ್ತೇನೆ!””

06041083 ಸಂಜಯ ಉವಾಚ|

06041083a ಅನುಮಾನ್ಯಾಥ ಕೌಂತೇಯೋ ಮಾತುಲಂ ಮದ್ರಕೇಶ್ವರಂ|

06041083c ನಿರ್ಜಗಾಮ ಮಹಾಸೈನ್ಯಾದ್ಭ್ರಾತೃಭಿಃ ಪರಿವಾರಿತಃ||

ಸಂಜಯನು ಹೇಳಿದನು: “ಆಗ ಮಾತುಲ ಮಾದ್ರಕೇಶ್ವರನಿಂದ ಅನುಮತಿಯನ್ನು ಪಡೆದು ಕೌಂತೇಯನು ಸಹೋದರರಿಂದ ಪರಿವಾರಿತನಾಗಿ ಆ ಮಹಾಸೇನೆಯಿಂದ ನಿರ್ಗಮಿಸಿದನು.

06041084a ವಾಸುದೇವಸ್ತು ರಾಧೇಯಮಾಹವೇಽಭಿಜಗಾಮ ವೈ|

06041084c ತತ ಏನಮುವಾಚೇದಂ ಪಾಂಡವಾರ್ಥೇ ಗದಾಗ್ರಜಃ||

ಅಷ್ಟರಲ್ಲಿ ಗದಾಗ್ರಜ ವಾಸುದೇವನು ರಾಧೇಯನನ್ನು ರಣರಂಗದಲ್ಲಿ ಭೇಟಿಯಾಗಿ, ಪಾಂಡವರ ಪರವಾಗಿ ಇದನ್ನು ಹೇಳಿದನು:

06041085a ಶ್ರುತಂ ಮೇ ಕರ್ಣ ಭೀಷ್ಮಸ್ಯ ದ್ವೇಷಾತ್ಕಿಲ ನ ಯೋತ್ಸ್ಯಸಿ|

06041085c ಅಸ್ಮಾನ್ವರಯ ರಾಧೇಯ ಯಾವದ್ಭೀಷ್ಮೋ ನ ಹನ್ಯತೇ||

“ಕರ್ಣ! ಭೀಷ್ಮನ ದ್ವೇಷದಿಂದಾಗಿ ನೀನು ಯುದ್ಧಮಾಡುತ್ತಿಲ್ಲವೆಂದು ನಾನು ಕೇಳಿದ್ದೇನೆ. ಭೀಷ್ಮನು ಸಾಯುವವರೆಗೆ ರಾಧೇಯ! ನಮ್ಮನ್ನು ವರಿಸು!

06041086a ಹತೇ ತು ಭೀಷ್ಮೇ ರಾಧೇಯ ಪುನರೇಷ್ಯಸಿ ಸಂಯುಗೇ|

06041086c ಧಾರ್ತರಾಷ್ಟ್ರಸ್ಯ ಸಾಹಾಯ್ಯಂ ಯದಿ ಪಶ್ಯಸಿ ಚೇತ್ಸಮಂ||

ರಾಧೇಯ! ಭೀಷ್ಮನ ಮೃತ್ಯುವಾದ ಬಳಿಕ ಯುದ್ಧದಲ್ಲಿ ನಿನಗೆ ಸರಿಯೆಂದು ಹೇಗನಿಸುತ್ತದೆಯೋ ಹಾಗೆ ಧಾರ್ತರಾಷ್ಟ್ರನ ಸಹಾಯವನ್ನು ಮಾಡುವಿಯಂತೆ!”

06041087 ಕರ್ಣ ಉವಾಚ|

06041087a ನ ವಿಪ್ರಿಯಂ ಕರಿಷ್ಯಾಮಿ ಧಾರ್ತರಾಷ್ಟ್ರಸ್ಯ ಕೇಶವ|

06041087c ತ್ಯಕ್ತಪ್ರಾಣಂ ಹಿ ಮಾಂ ವಿದ್ಧಿ ದುರ್ಯೋಧನಹಿತೈಷಿಣಂ||

ಕರ್ಣನು ಹೇಳಿದನು: “ಕೇಶವ! ಧಾರ್ತರಾಷ್ಟ್ರನಿಗೆ ವಿಪ್ರಿಯವಾಗಿ ಮಾಡಲಾರೆ. ದುರ್ಯೋಧನನ ಹಿತೈಷಿಣಿಯಾಗಿ ಪ್ರಾಣವನ್ನೇ ತ್ಯಜಿಸುತ್ತೇನೆ. ನಿನಗಿದು ತಿಳಿದೇ ಇದೆ.””

06041088 ಸಂಜಯ ಉವಾಚ|

06041088a ತಚ್ಚ್ರುತ್ವಾ ವಚನಂ ಕೃಷ್ಣಃ ಸಮ್ನ್ಯವರ್ತತ ಭಾರತ|

06041088c ಯುಧಿಷ್ಠಿರಪುರೋಗೈಶ್ಚ ಪಾಂಡವೈಃ ಸಹ ಸಂಗತಃ||

ಸಂಜಯನು ಹೇಳಿದನು: “ಭಾರತ! ಅವನ ಆ ಮಾತನ್ನು ಕೇಳಿ ಕೃಷ್ಣನು ಯುಧಿಷ್ಠಿರನನ್ನು ಮುಂದಿರಿಸಿಕೊಂಡು ಹಿಂದಿರುಗುತ್ತಿದ್ದ ಪಾಂಡವರೊಂದಿಗೆ ಕೂಡಿಕೊಂಡನು.

06041089a ಅಥ ಸೈನ್ಯಸ್ಯ ಮಧ್ಯೇ ತು ಪ್ರಾಕ್ರೋಶತ್ಪಾಂಡವಾಗ್ರಜಃ|

06041089c ಯೋಽಸ್ಮಾನ್ವೃಣೋತಿ ತದಹಂ ವರಯೇ ಸಾಹ್ಯಕಾರಣಾತ್||

ಆಗ ಸೈನ್ಯದ ಮಧ್ಯೆ ಪಾಂಡವಾಗ್ರಜನು ಕೂಗಿ ಹೇಳಿದನು: “ಯಾರಾದರೂ ನಮ್ಮ ಪಕ್ಷವನ್ನು ಸೇರಬೇಕೆಂದಿದ್ದರೆ ನಾನು ಅವನನ್ನು ನನ್ನ ಸಹಾಯಕನೆಂದು ಸ್ವೀಕರಿಸುತ್ತೇನೆ!”

06041090a ಅಥ ತಾನ್ಸಮಭಿಪ್ರೇಕ್ಷ್ಯ ಯುಯುತ್ಸುರಿದಮಬ್ರವೀತ್|

06041090c ಪ್ರೀತಾತ್ಮಾ ಧರ್ಮರಾಜಾನಂ ಕುಂತೀಪುತ್ರಂ ಯುಧಿಷ್ಠಿರಂ||

ಆಗ ಯುಯುತ್ಸುವು ಅವರನ್ನು ನೋಡಿ, ಪ್ರೀತಾತ್ಮಾ ಧರ್ಮರಾಜ ಕುಂತೀಪುತ್ರ ಯುಧಿಷ್ಠಿರನಿಗೆ ಇದನ್ನು ಹೇಳಿದನು:

06041091a ಅಹಂ ಯೋತ್ಸ್ಯಾಮಿ ಮಿಷತಃ ಸಂಯುಗೇ ಧಾರ್ತರಾಷ್ಟ್ರಜಾನ್|

06041091c ಯುಷ್ಮದರ್ಥೇ ಮಹಾರಾಜ ಯದಿ ಮಾಂ ವೃಣುಷೇಽನಘ||

“ಮಹಾರಾಜ! ಅನಘ! ನೀನು ನನ್ನನ್ನು ಸ್ವೀಕರಿಸಿದರೆ ನಾನು ಬಹಿರಂಗವಾಗಿ ಧಾರ್ತರಾಷ್ಟ್ರರ ವಿರುದ್ಧವಾಗಿ ನಿನ್ನ ಪರವಾಗಿ ರಣದಲ್ಲಿ ಹೋರಾಡುತ್ತೇನೆ.”

06041092 ಯುಧಿಷ್ಠಿರ ಉವಾಚ|

06041092a ಏಹ್ಯೇಹಿ ಸರ್ವೇ ಯೋತ್ಸ್ಯಾಮಸ್ತವ ಭ್ರಾತೄನಪಂಡಿತಾನ್|

06041092c ಯುಯುತ್ಸೋ ವಾಸುದೇವಶ್ಚ ವಯಂ ಚ ಬ್ರೂಮ ಸರ್ವಶಃ||

ಯುಧಿಷ್ಠಿರನು ಹೇಳಿದನು: “ಬಾ! ಬಾ ಯುಯುತ್ಸೋ! ನಾವೆಲ್ಲರೂ ನಿನ್ನ ಈ ಅಪಂಡಿತ ಸಹೋದರರನ್ನು ಎದುರಿಸಿ ಯುದ್ಧಮಾಡೋಣ! ವಾಸುದೇವನೊಂದಿಗೆ ನಾವೆಲ್ಲರೂ ಹೇಳುತ್ತಿದ್ದೇವೆ.

06041093a ವೃಣೋಮಿ ತ್ವಾಂ ಮಹಾಬಾಹೋ ಯುಧ್ಯಸ್ವ ಮಮ ಕಾರಣಾತ್|

06041093c ತ್ವಯಿ ಪಿಂಡಶ್ಚ ತಂತುಶ್ಚ ಧೃತರಾಷ್ಟ್ರಸ್ಯ ದೃಶ್ಯತೇ||

ಮಹಾಬಾಹೋ! ನಿನ್ನನ್ನು ಸ್ವೀಕರಿಸಿದ್ದೇನೆ. ನನ್ನ ಕಾರಣಕ್ಕಾಗಿ ಯುದ್ಧಮಾಡು. ನೀನೇ ಧೃತರಾಷ್ಟ್ರನ ವಂಶದ ತಂತುವೂ ಅವನಿಗೆ ಪಿಂಡವನ್ನು ನೀಡುವವನೂ ಎಂದು ತೋರುತ್ತಿದ್ದೀಯೆ.

06041094a ಭಜಸ್ವಾಸ್ಮಾನ್ರಾಜಪುತ್ರ ಭಜಮಾನಾನ್ಮಹಾದ್ಯುತೇ|

06041094c ನ ಭವಿಷ್ಯತಿ ದುರ್ಬುದ್ಧಿರ್ಧಾರ್ತರಾಷ್ಟ್ರೋಽತ್ಯಮರ್ಷಣಃ||

ರಾಜಪುತ್ರ! ಮಹಾದ್ಯುತೇ! ನಾವು ನಿನ್ನನ್ನು ಸ್ವೀಕರಿಸುವಂತೆ ನೀನೂ ನಮ್ಮನ್ನು ಸ್ವೀಕರಿಸು. ಅತ್ಯಮರ್ಷಣ ದುರ್ಬುದ್ಧಿ ಧಾರ್ತರಾಷ್ಟ್ರನು ಇಲ್ಲವಾಗುತ್ತಾನೆ!””

06041095 ಸಂಜಯ ಉವಾಚ|

06041095a ತತೋ ಯುಯುತ್ಸುಃ ಕೌರವ್ಯಃ ಪರಿತ್ಯಜ್ಯ ಸುತಾಂಸ್ತವ|

06041095c ಜಗಾಮ ಪಾಂಡುಪುತ್ರಾಣಾಂ ಸೇನಾಂ ವಿಶ್ರಾವ್ಯ ದುಂದುಭಿಂ||

ಸಂಜಯನು ಹೇಳಿದನು: “ಆಗ ಕೌರವ್ಯ ಯುಯುತ್ಸುವು, ದುಂದುಭಿಗಳು ಕೇಳುತ್ತಿರಲು, ನಿನ್ನ ಮಗನನ್ನು ತ್ಯಜಿಸಿ ಪಾಂಡುಪುತ್ರರ ಸೇನೆಗೆ ಹೋದನು.

06041096a ತತೋ ಯುಧಿಷ್ಠಿರೋ ರಾಜಾ ಸಂಪ್ರಹೃಷ್ಟಃ ಸಹಾನುಜೈಃ|

06041096c ಜಗ್ರಾಹ ಕವಚಂ ಭೂಯೋ ದೀಪ್ತಿಮತ್ಕನಕೋಜ್ಜ್ವಲಂ||

ಆಗ ರಾಜಾ ಯುಧಿಷ್ಠಿರನು ಸಂಪ್ರಹೃಷ್ಟನಾಗಿ ಅನುಜರೊಂದಿಗೆ ಪುನಃ ಬೆಳಗುತ್ತಿದ್ದ ಕನಕೋಜ್ಜ್ವಲ ಕವಚವನ್ನು ಧರಿಸಿದನು.

06041097a ಪ್ರತ್ಯಪದ್ಯಂತ ತೇ ಸರ್ವೇ ರಥಾನ್ಸ್ವಾನ್ಪುರುಷರ್ಷಭಾಃ|

06041097c ತತೋ ವ್ಯೂಹಂ ಯಥಾಪೂರ್ವಂ ಪ್ರತ್ಯವ್ಯೂಹಂತ ತೇ ಪುನಃ||

ಆ ಎಲ್ಲ ಪುರುಷರ್ಷಭರೂ ತಮ್ಮ ತಮ್ಮ ರಥಗಳನ್ನೇರಿ ಮೊದಲಿನಂತೆಯೇ ಪುನಃ ವ್ಯೂಹಗಳನ್ನು ರಚಿಸಿಕೊಂಡರು.

06041098a ಅವಾದಯನ್ದುಂದುಭೀಂಶ್ಚ ಶತಶಶ್ಚೈವ ಪುಷ್ಕರಾನ್|

06041098c ಸಿಂಹನಾದಾಂಶ್ಚ ವಿವಿಧಾನ್ವಿನೇದುಃ ಪುರುಷರ್ಷಭಾಃ||

ಆ ಪುರುಷರ್ಷಭರು ನೂರಾರು ದುಂದುಭಿಗಳನ್ನೂ ನೂರಾರು ಪುಷ್ಕರಗಳನ್ನೂ ಮೊಳಗಿಸಿದರು. ವಿವಿಧ ಸಿಂಹನಾದಗಳನ್ನೂ ಗೈದರು.

06041099a ರಥಸ್ಥಾನ್ಪುರುಷವ್ಯಾಘ್ರಾನ್ಪಾಂಡವಾನ್ಪ್ರೇಕ್ಷ್ಯ ಪಾರ್ಥಿವಾಃ|

06041099c ಧೃಷ್ಟದ್ಯುಮ್ನಾದಯಃ ಸರ್ವೇ ಪುನರ್ಜಹೃಷಿರೇ ಮುದಾ||

ರಥದ ಮೇಲೇರಿದ್ದ ಆ ಪುರುಷವ್ಯಾಘ್ರ ಪಾಂಡವರನ್ನು ಪುನಃ ಕಂಡು ಧೃಷ್ಟದ್ಯುಮ್ನನೇ ಮೊದಲಾದ ಪಾರ್ಥಿವರೆಲ್ಲರೂ ಸಂತೋಷಭರಿತರಾದರು.

06041100a ಗೌರವಂ ಪಾಂಡುಪುತ್ರಾಣಾಂ ಮಾನ್ಯಾನ್ಮಾನಯತಾಂ ಚ ತಾನ್|

06041100c ದೃಷ್ಟ್ವಾ ಮಹೀಕ್ಷಿತಸ್ತತ್ರ ಪೂಜಯಾಂ ಚಕ್ರಿರೇ ಭೃಶಂ||

ಗೌರವಿಸಬೇಕಾದವರನ್ನು ಗೌರವಿಸಿದ ಪಾಂಡುಪುತ್ರರ ಗೌರವವನ್ನು ನೋಡಿ ಅಲ್ಲಿದ್ದ ಮಹೀಕ್ಷಿತರು ಅವರನ್ನು ತುಂಬಾ ಗೌರವಿಸಿದರು.

06041101a ಸೌಹೃದಂ ಚ ಕೃಪಾಂ ಚೈವ ಪ್ರಾಪ್ತಕಾಲಂ ಮಹಾತ್ಮನಾಂ|

06041101c ದಯಾಂ ಚ ಜ್ಞಾತಿಷು ಪರಾಂ ಕಥಯಾಂ ಚಕ್ರಿರೇ ನೃಪಾಃ||

ಆ ಮಹಾತ್ಮರ ಕಾಲಕ್ಕೆ ತಕ್ಕುದಾದ ಸೌಹಾರ್ದತೆ, ಕೃಪೆ, ಮತ್ತು ಕುಲದವರ ಮೇಲಿದ್ದ ಅವರ ದಯೆಯ ಕುರಿತು ಇತರ ನೃಪರು ಮಾತನಾಡಿಕೊಂಡರು.

06041102a ಸಾಧು ಸಾಧ್ವಿತಿ ಸರ್ವತ್ರ ನಿಶ್ಚೇರುಃ ಸ್ತುತಿಸಂಹಿತಾಃ|

06041102c ವಾಚಃ ಪುಣ್ಯಾಃ ಕೀರ್ತಿಮತಾಂ ಮನೋಹೃದಯಹರ್ಷಿಣೀಃ||

ಎಲ್ಲಾ ಕಡೆಗಳಿಂದಲೂ “ಸಾಧು! ಸಾಧು!” ಎಂದು ಮನಸ್ಸು ಮತ್ತು ಹೃದಯಗಳಿಗೆ ಹರ್ಷವನ್ನು ಕೊಡುವ ಆ ಕೀರ್ತಿಮತರ ಪುಣ್ಯ ಹೊಗಳಿಕೆಯ ಮಾತುಗಳೇ ಕೇಳಿಬಂದವು.

06041103a ಮ್ಲೇಚ್ಛಾಶ್ಚಾರ್ಯಾಶ್ಚ ಯೇ ತತ್ರ ದದೃಶುಃ ಶುಶ್ರುವುಸ್ತದಾ|

06041103c ವೃತ್ತಂ ತತ್ಪಾಂಡುಪುತ್ರಾಣಾಂ ರುರುದುಸ್ತೇ ಸಗದ್ಗದಾಃ||

ಮ್ಲೇಚ್ಛರಾಗಿರಲಿ ಅಥವಾ ಆರ್ಯರಾಗಿರಲಿ ಯಾರೆಲ್ಲ ಅಲ್ಲಿ ಪಾಂಡುಪುತ್ರರ ಆ ನಡತೆಯನ್ನು ನೋಡಿದರೋ ಅಥವಾ ಕೇಳಿದರೋ ಅವರು ಗದ್ಗದರಾಗಿ ಕಣ್ಣೀರಿಟ್ಟರು.

06041104a ತತೋ ಜಘ್ನುರ್ಮಹಾಭೇರೀಃ ಶತಶಶ್ಚೈವ ಪುಷ್ಕರಾನ್|

06041104c ಶಂಖಾಂಶ್ಚ ಗೋಕ್ಷೀರನಿಭಾನ್ದಧ್ಮುರ್ಹೃಷ್ಟಾ ಮನಸ್ವಿನಃ||

ಆಗ ಆ ಮನಸ್ವಿಗಳು ಹರ್ಷಿತರಾಗಿ ನೂರಾರು ಮಹಾ ಭೇರಿಗಳನ್ನೂ ನೂರಾರು ಪುಷ್ಕರಗಳನ್ನೂ ಬಾರಿಸಿದರು ಮತ್ತು ಆಕಳ ಹಾಲಿನ ಬಣ್ಣದ ಶಂಖಗಳನ್ನೂ ಊದಿದರು.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಭೀಷ್ಮಾದಿಸಮ್ಮಾನನೇ ಏಕಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಭೀಷ್ಮಾದಿಸಮ್ಮಾನನವೆಂಬ ನಲ್ವತ್ತೊಂದನೇ ಅಧ್ಯಾಯವು.

Image result for flowers against white background

Comments are closed.