Bhishma Parva: Chapter 12

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಭೀಷ್ಮ ಪರ್ವ: ಭೂಮಿ ಪರ್ವ

೧೨

ಶಾಕದ್ವೀಪವರ್ಣನೆ (೧-೩೭).

06012001 ಧೃತರಾಷ್ಟ್ರ ಉವಾಚ|

06012001a ಜಂಬೂಖಂಡಸ್ತ್ವಯಾ ಪ್ರೋಕ್ತೋ ಯಥಾವದಿಹ ಸಂಜಯ|

06012001c ವಿಷ್ಕಂಭಮಸ್ಯ ಪ್ರಬ್ರೂಹಿ ಪರಿಮಾಣಂ ಚ ತತ್ತ್ವತಃ||

ಧೃತರಾಷ್ಟ್ರನು ಹೇಳಿದನು: “ಸಂಜಯ! ಯಥಾವತ್ತಾಗಿ ನೀನು ಜಂಬೂಖಂಡದ ಕುರಿತು ಹೇಳಿದ್ದೀಯೆ. ಈಗ ಅದರ ಸುತ್ತಳತೆ ಮತ್ತು ವಿಸ್ತಾರವೆಷ್ಟೆಂಬುದನ್ನು ಇದ್ದ ಹಾಗೆ ಹೇಳು.

06012002a ಸಮುದ್ರಸ್ಯ ಪ್ರಮಾಣಂ ಚ ಸಮ್ಯಗಚ್ಛಿದ್ರದರ್ಶನ|

06012002c ಶಾಕದ್ವೀಪಂ ಚ ಮೇ ಬ್ರೂಹಿ ಕುಶದ್ವೀಪಂ ಚ ಸಂಜಯ||

ಸಂಜಯ! ಜಂಬೂದ್ವೀಪದ ಸುತ್ತಲೂ ಇರುವ ಸಮುದ್ರದ, ಶಾಕದ್ವೀಪ ಮತ್ತು ಕುಶದ್ವೀಪಗಳ ಪ್ರಮಾಣಗಳನ್ನು ಹೇಳು.

06012003a ಶಾಲ್ಮಲಂ ಚೈವ ತತ್ತ್ವೇನ ಕ್ರೌಂಚದ್ವೀಪಂ ತಥೈವ ಚ|

06012003c ಬ್ರೂಹಿ ಗಾವಲ್ಗಣೇ ಸರ್ವಂ ರಾಹೋಃ ಸೋಮಾರ್ಕಯೋಸ್ತಥಾ||

ಗಾವಲ್ಗಣೇ! ಹಾಗೆಯೇ ಶಾಲ್ಮಲ ಮತ್ತು ಕ್ರೌಂಚದ್ವೀಪಗಳ ಕುರಿತು ಮತ್ತು ರಾಹು, ಚಂದ್ರ ಸೂರ್ಯರ ಕುರಿತು ಎಲ್ಲವನ್ನೂ ಹೇಳು.”

06012004 ಸಂಜಯ ಉವಾಚ|

06012004a ರಾಜನ್ಸುಬಹವೋ ದ್ವೀಪಾ ಯೈರಿದಂ ಸಂತತಂ ಜಗತ್|

06012004c ಸಪ್ತ ತ್ವಹಂ ಪ್ರವಕ್ಷ್ಯಾಮಿ ಚಂದ್ರಾದಿತ್ಯೌ ಗ್ರಹಾಂಸ್ತಥಾ||

ಸಂಜಯನು ಹೇಳಿದನು: “ರಾಜನ್! ಈ ಸಮಸ್ತ ಜಗತ್ತಿನಲ್ಲಿ ಬಹಳಷ್ಟು ದ್ವೀಪಗಳಿವೆ. ಆದರೆ ನಾನು ನಿನಗೆ ಏಳು ದ್ವೀಪಗಳ ಮತ್ತು ಚಂದ್ರ, ಆದಿತ್ಯಾದಿ ಗ್ರಹಗಳ ಕುರಿತು ಹೇಳುತ್ತೇನೆ.

06012005a ಅಷ್ಟಾದಶ ಸಹಸ್ರಾಣಿ ಯೋಜನಾನಾಂ ವಿಶಾಂ ಪತೇ|

06012005c ಷಟ್ಶತಾನಿ ಚ ಪೂರ್ಣಾನಿ ವಿಷ್ಕಂಭೋ ಜಂಬುಪರ್ವತಃ||

ವಿಶಾಂಪತೇ! ಜಂಬೂಪರ್ವತ (ದ್ವೀಪ)ವು ಸಂಪೂರ್ಣ ಹದಿನೆಂಟು ಸಾವಿರ ಆರುನೂರು ಯೋಜನೆಗಳ ವಿಸ್ತೀರ್ಣದಲ್ಲಿದೆ.

06012006a ಲಾವಣಸ್ಯ ಸಮುದ್ರಸ್ಯ ವಿಷ್ಕಂಭೋ ದ್ವಿಗುಣಃ ಸ್ಮೃತಃ|

06012006c ನಾನಾಜನಪದಾಕೀರ್ಣೋ ಮಣಿವಿದ್ರುಮಚಿತ್ರಿತಃ||

ನಾನಾಜನಪದಗಳಿಂದ ತುಂಬಿದ ಮತ್ತು ಮಣಿವಿದ್ರುಮಗಳಿಂದ ಚಿತ್ರಿತವಾದ ಲವಣ ಸಮುದ್ರದ ವಿಸ್ತಾರವು ಅದರ ಎರಡು ಪಟ್ಟು ಇದೆಯೆಂದು ಹೇಳುತ್ತಾರೆ[1].

06012007a ನೈಕಧಾತುವಿಚಿತ್ರೈಶ್ಚ ಪರ್ವತೈರುಪಶೋಭಿತಃ|

06012007c ಸಿದ್ಧಚಾರಣಸಂಕೀರ್ಣಃ ಸಾಗರಃ ಪರಿಮಂಡಲಃ||

ಅನೇಕ ಖನಿಜಗಳಿಂದ ಕೂಡಿದ ವಿಚಿತ್ರ ಪರ್ವತಗಳಿಂದ ಅದು ಶೋಭಿಸುತ್ತದೆ. ಸಿದ್ಧಚಾರಣರಿಂದ ತುಂಬಿರುವ ಆ ಸಾಗರವು ಗೋಲಾಕಾರವಾಗಿದೆ.

06012008a ಶಾಕದ್ವೀಪಂ ಚ ವಕ್ಷ್ಯಾಮಿ ಯಥಾವದಿಹ ಪಾರ್ಥಿವ|

06012008c ಶೃಣು ಮೇ ತ್ವಂ ಯಥಾನ್ಯಾಯಂ ಬ್ರುವತಃ ಕುರುನಂದನ||

ಪಾರ್ಥಿವ! ಈಗ ಶಾಕದ್ವೀಪದ ಕುರಿತು ಹೇಳುತ್ತೇನೆ. ಕುರುನಂದನ! ಯಥಾನ್ಯಾಯವಾಗಿ ನಾನು ಹೇಳುವುದನ್ನು ಕೇಳು.

06012009a ಜಂಬೂದ್ವೀಪಪ್ರಮಾಣೇನ ದ್ವಿಗುಣಃ ಸ ನರಾಧಿಪ|

06012009c ವಿಷ್ಕಂಭೇಣ ಮಹಾರಾಜ ಸಾಗರೋಽಪಿ ವಿಭಾಗಶಃ|

06012009e ಕ್ಷೀರೋದೋ ಭರತಶ್ರೇಷ್ಠ ಯೇನ ಸಂಪರಿವಾರಿತಃ||

ನರಾಧಿಪ! ಶಾಕದ್ವೀಪವು ಪ್ರಮಾಣದಲ್ಲಿ ಜಂಬೂದ್ವೀಪಕ್ಕಿಂತ ಎರಡು ಪಟ್ಟಿದೆ[2]. ಮಹಾರಾಜ! ಭರತಶ್ರೇಷ್ಠ! ಶಾಕದ್ವೀಪವನ್ನು ಸುತ್ತುವರೆದಿರುವ ಕ್ಷೀರಸಾಗರವು ವಿಸ್ತಾರದಲ್ಲಿ ಶಾಕದ್ವೀಪಕ್ಕಿಂತ ಎರಡು ಪಟ್ಟಿದೆ[3].

06012010a ತತ್ರ ಪುಣ್ಯಾ ಜನಪದಾ ನ ತತ್ರ ಮ್ರಿಯತೇ ಜನಃ|

06012010c ಕುತ ಏವ ಹಿ ದುರ್ಭಿಕ್ಷಂ ಕ್ಷಮಾತೇಜೋಯುತಾ ಹಿ ತೇ||

ಅಲ್ಲಿರುವ ಜನಪದಗಳು ಪುಣ್ಯವಾದವು ಮತ್ತು ಅಲ್ಲಿಯ ಜನರು ಸಾಯುವುದಿಲ್ಲ. ಅವರು ಕ್ಷಮ-ತೇಜೋಯುತರಾಗಿರುವಾಗ ಎಲ್ಲಿಂದ ಅಲ್ಲಿ ದುರ್ಭಿಕ್ಷವಿರಬೇಕು?

06012011a ಶಾಕದ್ವೀಪಸ್ಯ ಸಂಕ್ಷೇಪೋ ಯಥಾವದ್ ಭರತರ್ಷಭ|

06012011c ಉಕ್ತ ಏಷ ಮಹಾರಾಜ ಕಿಮನ್ಯಚ್ಚ್ರೋತುಮಿಚ್ಛಸಿ||

ಭರತರ್ಷಭ! ಶಾಕದ್ವೀಪದ ಕುರಿತು ಇದ್ದುದನ್ನು ಸಂಕ್ಷೇಪವಾಗಿ ಹೇಳಿದ್ದೇನೆ. ಮಹಾರಾಜ! ಇನ್ನು ಏನನ್ನು ಕೇಳಲು ಬಯಸುತ್ತೀಯೆ?”

06012012 ಧೃತರಾಷ್ಟ್ರ ಉವಾಚ|

06012012a ಶಾಕದ್ವೀಪಸ್ಯ ಸಂಕ್ಷೇಪೋ ಯಥಾವದಿಹ ಸಂಜಯ|

06012012c ಉಕ್ತಸ್ತ್ವಯಾ ಮಹಾಭಾಗ ವಿಸ್ತರಂ ಬ್ರೂಹಿ ತತ್ತ್ವತಃ||

ಧೃತರಾಷ್ಟ್ರನು ಹೇಳಿದನು: “ಸಂಜಯ! ಶಾಕದ್ವೀಪದ ಕುರಿತು ಇದ್ದುದನ್ನು ಸಂಕ್ಷಿಪ್ತವಾಗಿ ತಿಳಿಸಿದ್ದೀಯೆ. ಮಹಾಭಾಗ! ನೀನು ಹೇಳಿದುದನ್ನೇ ತತ್ವತಃ ವಿಸ್ತಾರವಾಗಿ ಹೇಳು.”

06012013 ಸಂಜಯ ಉವಾಚ|

06012013a ತಥೈವ ಪರ್ವತಾ ರಾಜನ್ಸಪ್ತಾತ್ರ ಮಣಿಭೂಷಿತಾಃ|

06012013c ರತ್ನಾಕರಾಸ್ತಥಾ ನದ್ಯಸ್ತೇಷಾಂ ನಾಮಾನಿ ಮೇ ಶೃಣು|

06012013e ಅತೀವಗುಣವತ್ಸರ್ವಂ ತತ್ರ ಪುಣ್ಯಂ ಜನಾಧಿಪ||

ಸಂಜಯನು ಹೇಳಿದನು: “ರಾಜನ್! ಅಲ್ಲಿಯೇ ಇರುವ ಏಳು ಮಣಿಭೂಷಿತ ಪರ್ವತಗಳ, ಸಾಗರಗಳ, ನದಿಗಳ ಹೆಸರುಗಳನ್ನು ನನ್ನಿಂದ ಕೇಳು. ಜನಾಧಿಪ! ಅಲ್ಲಿ ಎಲ್ಲವೂ ಅತೀವ ಗುಣವತ್ತಾಗಿವೆ ಮತ್ತು ಪುಣ್ಯವಾಗಿವೆ.

06012014a ದೇವರ್ಷಿಗಂಧರ್ವಯುತಃ ಪರಮೋ ಮೇರುರುಚ್ಯತೇ|

06012014c ಪ್ರಾಗಾಯತೋ ಮಹಾರಾಜ ಮಲಯೋ ನಾಮ ಪರ್ವತಃ|

06012014e ಯತೋ ಮೇಘಾಃ ಪ್ರವರ್ತಂತೇ ಪ್ರಭವಂತಿ ಚ ಸರ್ವಶಃ||

ದೇವ-ಋಷಿ-ಗಂಧರ್ವರಿಂದ ಕೂಡಿರುವ ಮೇರುವನ್ನು ಪರಮವೆಂದು ಹೇಳುತ್ತಾರೆ. ಮಹಾರಾಜ! ಅದರ ನಂತರ ಬರುತ್ತದೆ ಮಲಯ ಎಂಬ ಹೆಸರಿನ ಪರ್ವತ. ಈ ಪರ್ವತದಿಂದಲೇ ಮೋಡಗಳು ಹುಟ್ಟುತ್ತವೆ ಮತ್ತು ಎಲ್ಲ ಕಡೆ ಪಸರಿಸುತ್ತವೆ.

06012015a ತತಃ ಪರೇಣ ಕೌರವ್ಯ ಜಲಧಾರೋ ಮಹಾಗಿರಿಃ|

06012015c ಯತ್ರ ನಿತ್ಯಮುಪಾದತ್ತೇ ವಾಸವಃ ಪರಮಂ ಜಲಂ|

06012015e ಯತೋ ವರ್ಷಂ ಪ್ರಭವತಿ ವರ್ಷಾಕಾಲೇ ಜನೇಶ್ವರ||

ಕೌರವ್ಯ! ನಂತರದ್ದು ಜಲಧಾರ ಎಂಬ ಮಹಾಗಿರಿಯಿದೆ. ಅಲ್ಲಿ ವಾಸವನು ನಿತ್ಯವೂ ಪರಮ ಜಲವನ್ನು ಪಡೆಯುತ್ತಾನೆ ಮತ್ತು ಜನೇಶ್ವರ! ಅದೇ ನೀರನ್ನು ಮಳೆಗಾಳದಲ್ಲಿ ಮಳೆಯಾಗಿ ಸುರಿಸುತ್ತಾನೆ.

06012016a ಉಚ್ಚೈರ್ಗಿರೀ ರೈವತಕೋ ಯತ್ರ ನಿತ್ಯಂ ಪ್ರತಿಷ್ಠಿತಃ|

06012016c ರೇವತೀ ದಿವಿ ನಕ್ಷತ್ರಂ ಪಿತಾಮಹಕೃತೋ ವಿಧಿಃ||

ಅನಂತರ ಎತ್ತರದ ರೈವತಕ ಗಿರಿಯಿದೆ. ಅಲ್ಲಿ ವಿಧಿ ಪಿತಾಮಹನು ಮಾಡಿದ ರೇವತೀ ನಕ್ಷತ್ರವು ದಿವಿಯಲ್ಲಿ ನಿತ್ಯವೂ ಪತಿಷ್ಠಿತಗೊಂಡಿದೆ.

06012017a ಉತ್ತರೇಣ ತು ರಾಜೇಂದ್ರ ಶ್ಯಾಮೋ ನಾಮ ಮಹಾಗಿರಿಃ|

06012017c ಯತಃ ಶ್ಯಾಮತ್ವಮಾಪನ್ನಾಃ ಪ್ರಜಾ ಜನಪದೇಶ್ವರ||

ರಾಜೇಂದ್ರ! ಅದರ ಉತ್ತರದಲ್ಲಿ ಶ್ಯಾಮ ಎಂಬ ಹೆಸರಿನ ಮಹಾಗಿರಿಯಿದೆ. ಜನಪದೇಶ್ವರ! ಅಲ್ಲಿರುವ ಪ್ರಜೆಗಳು ಶ್ಯಾಮತ್ವವನ್ನು ಪಡೆದಿದ್ದಾರೆ.”

06012018 ಧೃತರಾಷ್ಟ್ರ ಉವಾಚ|

06012018a ಸುಮಹಾನ್ಸಂಶಯೋ ಮೇಽದ್ಯ ಪ್ರೋಕ್ತಂ ಸಂಜಯ ಯತ್ತ್ವಯಾ|

06012018c ಪ್ರಜಾಃ ಕಥಂ ಸೂತಪುತ್ರ ಸಂಪ್ರಾಪ್ತಾಃ ಶ್ಯಾಮತಾಮಿಹ||

ಧೃತರಾಷ್ಟ್ರನು ಹೇಳಿದನು: “ಸಂಜಯ! ನೀನು ಈಗ ಹೇಳಿದುದರಲ್ಲಿ ನನಗೆ ಮಹಾಸಂಶಯವಿದೆ. ಸೂತಪುತ್ರ! ಅಲ್ಲಿಯ ಪ್ರಜೆಗಳು ಹೇಗೆ ಶ್ಯಾಮತ್ವವನ್ನು ಪಡೆದರು[4]?”

06012019 ಸಂಜಯ ಉವಾಚ|

06012019a ಸರ್ವೇಷ್ವೇವ ಮಹಾಪ್ರಾಜ್ಞ ದ್ವೀಪೇಷು ಕುರುನಂದನ|

06012019c ಗೌರಃ ಕೃಷ್ಣಶ್ಚ ವರ್ಣೌ ದ್ವೌ ತಯೋರ್ವರ್ಣಾಂತರಂ ನೃಪ||

ಸಂಜಯನು ಹೇಳಿದನು: “ಕುರುನಂದನ! ಮಹಾಪ್ರಾಜ್ಞ! ನೃಪ! ಎಲ್ಲ ದ್ವೀಪಗಳಲ್ಲಿಯೂ ಗೌರವರ್ಣದವರು, ಕೃಷ್ಣವರ್ಣದವರು ಮತ್ತು ಇವೆರಡೂ ವರ್ಣಗಳ ನಡುವೆ ಇರುವವರು ಕಂಡುಬರುತ್ತಾರೆ.

06012020a ಶ್ಯಾಮೋ ಯಸ್ಮಾತ್ಪ್ರವೃತ್ತೋ ವೈ ತತ್ತೇ ವಕ್ಷ್ಯಾಮಿ ಭಾರತ|

06012020c ಆಸ್ತೇಽತ್ರ ಭಗವಾನ್ ಕೃಷ್ಣಸ್ತತ್ಕಾಂತ್ಯಾ ಶ್ಯಾಮತಾಂ ಗತಃ||

ಭಾರತ! ಅಲ್ಲಿರುವವರು ಹೇಗೆ ಶ್ಯಾಮವರ್ಣದವರಾದರೆಂದು ನಿನಗೆ ಹೇಳುತ್ತೇನೆ. ಅಲ್ಲಿರುವವರು ಭಗವಾನ್ ಕೃಷ್ಣನ ಕಾಂತಿಯಿಂದ ಶ್ಯಾಮತ್ವವನ್ನು ಪಡೆದರು[5].

06012021a ತತಃ ಪರಂ ಕೌರವೇಂದ್ರ ದುರ್ಗಶೈಲೋ ಮಹೋದಯಃ|

06012021c ಕೇಸರೀ ಕೇಸರಯುತೋ ಯತೋ ವಾತಃ ಪ್ರವಾಯತಿ||

ಕೌರವೇಂದ್ರ! ಅದಕ್ಕೂ ನಂತರದ ಮಹೋದಯ ದುರ್ಗಶೈಲವಿದೆ. ಅಲ್ಲಿ ಬೀಸುವ ಗಾಳಿಯು ಕೇಸರೀ ಬಣ್ಣದಾಗಿದ್ದು ಕೇಸರೀಯತವಾಗಿದೆ.

06012022a ತೇಷಾಂ ಯೋಜನವಿಷ್ಕಂಭೋ ದ್ವಿಗುಣಃ ಪ್ರವಿಭಾಗಶಃ|

06012022c ವರ್ಷಾಣಿ ತೇಷು ಕೌರವ್ಯ ಸಂಪ್ರೋಕ್ತಾನಿ ಮನೀಷಿಭಿಃ||

ಕೌರವ್ಯ! ಅವುಗಳ ವಿಸ್ತಾರವು ಕ್ರಮವಾಗಿ ಅದರ ಮೊದಲಿನದಕ್ಕಿಂತ ದ್ವಿಗುಣವಾಗಿರುತ್ತದೆ[6]. ಅಲ್ಲಿ ಏಳು ವರ್ಷ(ಖಂಡ)ಗಳಿವೆ ಎಂದು ಮನೀಷಿಗಳು ಹೇಳುತ್ತಾರೆ.

06012023a ಮಹಾಮೇರುರ್ಮಹಾಕಾಶೋ ಜಲದಃ ಕುಮುದೋತ್ತರಃ|

06012023c ಜಲಧಾರಾತ್ಪರೋ ರಾಜನ್ಸುಕುಮಾರ ಇತಿ ಸ್ಮೃತಃ||

ರಾಜನ್! ಮಹಾಮೇರು ಪರ್ವತದ ಸಮೀಪ ಮಹಾಕಾಶವರ್ಷವಿದೆ. ಜಲದ (ಮಲಯ) ಪರ್ವತದ ಪಕ್ಕ ಕುಮುದೋತ್ತರವರ್ಷವಿದೆ. ಇಲಧಾರ ಪರ್ವತದ ಸಮೀಪ ಸುಕುಮಾರ ವರ್ಷವಿದೆ ಎಂದು ಹೇಳುತ್ತಾರೆ.

06012024a ರೈವತಸ್ಯ ತು ಕೌಮಾರಃ ಶ್ಯಾಮಸ್ಯ ತು ಮಣೀಚಕಃ|

06012024c ಕೇಸರಸ್ಯಾಥ ಮೋದಾಕೀ ಪರೇಣ ತು ಮಹಾಪುಮಾನ್||

ರೈವತದ ಪಕ್ಕದಲ್ಲಿರುವುದು ಕೌಮಾರವರ್ಷ. ಶ್ಯಾಮಪರ್ವತದ ಪಕ್ಕದಲ್ಲಿರುವುದು ಮಣೀಚಕ ವರ್ಷ. ಕೇಸರ ಪರ್ವತದ ಸಮೀಪದ್ದು ಮೋದಾಕೀಖಂಡ. ಮೋದಾಕೀಖಂಡದ ನಂತರ ಮಹಾಪುಮಾನ್ ಎಂಬ ಪರ್ವತವಿದೆ.

06012025a ಪರಿವಾರ್ಯ ತು ಕೌರವ್ಯ ದೈರ್ಘ್ಯಂ ಹ್ರಸ್ವತ್ವಮೇವ ಚ|

06012025c ಜಂಬೂದ್ವೀಪೇನ ವಿಖ್ಯಾತಸ್ತಸ್ಯ ಮಧ್ಯೇ ಮಹಾದ್ರುಮಃ||

06012026a ಶಾಕೋ ನಾಮ ಮಹಾರಾಜ ತಸ್ಯ ದ್ವೀಪಸ್ಯ ಮಧ್ಯಗಃ|

06012026c ತತ್ರ ಪುಣ್ಯಾ ಜನಪದಾಃ ಪೂಜ್ಯತೇ ತತ್ರ ಶಂಕರಃ||

ಕೌರವ್ಯ! ಆ ದ್ವೀಪದ ಮಧ್ಯದಲ್ಲಿ ವಿಖ್ಯಾತವಾದ ಶಾಕಾ ಎಂಬ ಹೆಸರಿನ ಮಹಾದ್ರುಮವಿದೆ. ಎತ್ತರ ಮತ್ತು ಅಗಲಗಳಲ್ಲಿ ಅದು ಜಂಬೂದ್ವೀಪದಲ್ಲಿರುವ ಜಂಬೂ ವೃಕ್ಷದಂತಿದೆ. ಅಲ್ಲಿಯ ಪುಣ್ಯಜನಪದರು ಶಂಕರನನ್ನು ಪೂಜಿಸುತ್ತಾರೆ.

06012027a ತತ್ರ ಗಚ್ಛಂತಿ ಸಿದ್ಧಾಶ್ಚ ಚಾರಣಾ ದೈವತಾನಿ ಚ|

06012027c ಧಾರ್ಮಿಕಾಶ್ಚ ಪ್ರಜಾ ರಾಜಂಶ್ಚತ್ವಾರೋಽತೀವ ಭಾರತ||

ರಾಜನ್! ಭಾರತ! ಅಲ್ಲಿಗೆ ಸಿದ್ಧರೂ, ಚಾರಣರೂ, ದೇವತೆಗಳೂ, ಧಾರ್ಮಿಕ ಪ್ರಜೆಗಳೂ ಈ ನಾಲ್ವರೂ ಹೋಗುತ್ತಾರೆ.

06012028a ವರ್ಣಾಃ ಸ್ವಕರ್ಮನಿರತಾ ನ ಚ ಸ್ತೇನೋಽತ್ರ ದೃಶ್ಯತೇ|

06012028c ದೀರ್ಘಾಯುಷೋ ಮಹಾರಾಜ ಜರಾಮೃತ್ಯುವಿವರ್ಜಿತಾಃ||

ಅಲ್ಲಿ ವರ್ಣಗಳು ಸ್ವಕರ್ಮದಲ್ಲಿ ನಿರತರಾಗಿರುವುದು ಕಂಡುಬರುತ್ತದೆ. ಕಳ್ಳತನವೆಂಬುದಿಲ್ಲ. ಮಹಾರಾಜ! ದೀರ್ಘಾಯುಷಿಗಳಾದ ಅವರು ಜರಾಮೃತ್ಯು ವಿವರ್ಜಿತರಾಗಿರುತ್ತಾರೆ.

06012029a ಪ್ರಜಾಸ್ತತ್ರ ವಿವರ್ಧಂತೇ ವರ್ಷಾಸ್ವಿವ ಸಮುದ್ರಗಾಃ|

06012029c ನದ್ಯಃ ಪುಣ್ಯಜಲಾಸ್ತತ್ರ ಗಂಗಾ ಚ ಬಹುಧಾಗತಿಃ||

ಅಲ್ಲಿಯ ಪ್ರಜೆಗಳು ಮಳೆಗಾಲದ ನದಿಗಳಂತೆ ಬೆಳೆಯುತ್ತಾರೆ. ಅಲ್ಲಿಯ ನದಿಗಳಲ್ಲಿ ಪುಣ್ಯ ನೀರುಗಳಿವೆ. ಗಂಗೆಯೂ ಕೂಡ ಬಹು ನದಿಗಳಾಗಿ ಹರಿಯುತ್ತಾಳೆ.

06012030a ಸುಕುಮಾರೀ ಕುಮಾರೀ ಚ ಸೀತಾ ಕಾವೇರಕಾ ತಥಾ|

06012030c ಮಹಾನದೀ ಚ ಕೌರವ್ಯ ತಥಾ ಮಣಿಜಲಾ ನದೀ|

06012030e ಇಕ್ಷುವರ್ಧನಿಕಾ ಚೈವ ತಥಾ ಭರತಸತ್ತಮ||

ಕೌರವ್ಯ! ಭರತಸತ್ತಮ! ಆ ನದಿಗಳು ಸುಕುಮಾರೀ, ಕುಮಾರೀ, ಸೀತಾ, ಕಾವೇರಕಾ, ಮಹಾನದೀ, ಮಣಿಜಲಾ, ಮತ್ತು ಇಕ್ಷುವರ್ಧನಿಕಾ.

06012031a ತತಃ ಪ್ರವೃತ್ತಾಃ ಪುಣ್ಯೋದಾ ನದ್ಯಃ ಕುರುಕುಲೋದ್ವಹ|

06012031c ಸಹಸ್ರಾಣಾಂ ಶತಾನ್ಯೇವ ಯತೋ ವರ್ಷತಿ ವಾಸವಃ||

ಕುರುಕುಲೋದ್ವಹ! ಹೀಗೆ ಅಲ್ಲಿ ಸಹಸ್ರಾರು ನೂರಾರು ಪುಣ್ಯ ನದಿಗಳು ಹರಿಯುತ್ತವೆ. ವಾಸವನು ಅಲ್ಲಿ ಮಳೆಸುರಿಸುತ್ತಾನೆ.

06012032a ನ ತಾಸಾಂ ನಾಮಧೇಯಾನಿ ಪರಿಮಾಣಂ ತಥೈವ ಚ|

06012032c ಶಕ್ಯತೇ ಪರಿಸಂಖ್ಯಾತುಂ ಪುಣ್ಯಾಸ್ತಾ ಹಿ ಸರಿದ್ವರಾಃ||

ಅವುಗಳ ಹೆಸರುಗಳನ್ನು ಪರಿಮಾಣಗಳನ್ನು ಪಟ್ಟಿ ಮಾಡಲು ಶಕ್ಯವಿಲ್ಲ. ಅವೆಲ್ಲವೂ ಪುಣ್ಯನದಿಗಳು.

06012033a ತತ್ರ ಪುಣ್ಯಾ ಜನಪದಾಶ್ಚತ್ವಾರೋ ಲೋಕಸಮ್ಮತಾಃ|

06012033c ಮಗಾಶ್ಚ ಮಶಕಾಶ್ಚೈವ ಮಾನಸಾ ಮಂದಗಾಸ್ತಥಾ||

ಅಲ್ಲಿ ಲೋಕಸಮ್ಮತವಾದ ನಾಲ್ಕು ಪುಣ್ಯ ಜನಪದಗಳಿವೆ - ಮಗಾ, ಮಶಕಾ, ಮಾನಸ ಮತ್ತು ಮಂದಗಾ.

06012034a ಮಗಾ ಬ್ರಾಹ್ಮಣಭೂಯಿಷ್ಠಾಃ ಸ್ವಕರ್ಮನಿರತಾ ನೃಪ|

06012034c ಮಶಕೇಷು ತು ರಾಜನ್ಯಾ ಧಾರ್ಮಿಕಾಃ ಸರ್ವಕಾಮದಾಃ||

ನೃಪ! ಮಗಾರು ಹೆಚ್ಚಾಗಿ ಸ್ವಕರ್ಮನಿರತರಾದ ಬ್ರಾಹ್ಮಣರು. ಮಶಕರಲ್ಲಿ ಸರ್ವಕಾಮಗಳನ್ನು ನೀಡುವ ಧಾರ್ಮಿಕ ರಾಜರಿದ್ದಾರೆ.

06012035a ಮಾನಸೇಷು ಮಹಾರಾಜ ವೈಶ್ಯಾಃ ಕರ್ಮೋಪಜೀವಿನಃ|

06012035c ಸರ್ವಕಾಮಸಮಾಯುಕ್ತಾಃ ಶೂರಾ ಧರ್ಮಾರ್ಥನಿಶ್ಚಿತಾಃ|

06012035e ಶೂದ್ರಾಸ್ತು ಮಂದಗೇ ನಿತ್ಯಂ ಪುರುಷಾ ಧರ್ಮಶೀಲಿನಃ||

ಮಹಾರಾಜ! ಮಾನಸರು ವೈಶ್ಯರ ಕರ್ಮೋಪಜೀವಿಗಳು. ಅವರು ಸರ್ವಕಾಮಸಮಾಯುಕ್ತರು, ಶೂರರು ಮತ್ತು ಧರ್ಮಾರ್ಥನಿಶ್ಚಿತರು. ಮಂದಗರು ಶೂದ್ರರು - ನಿತ್ಯವೂ ಧರ್ಮಶೀಲಪುರುಷರು.

06012036a ನ ತತ್ರ ರಾಜಾ ರಾಜೇಂದ್ರ ನ ದಂಡೋ ನ ಚ ದಂಡಿಕಾಃ|

06012036c ಸ್ವಧರ್ಮೇಣೈವ ಧರ್ಮಂ ಚ ತೇ ರಕ್ಷಂತಿ ಪರಸ್ಪರಂ||

ರಾಜೇಂದ್ರ! ಅಲ್ಲಿ ರಾಜನೂ ಇಲ್ಲ, ದಂಡಿಸುವವನೂ ಇಲ್ಲ, ದಂಡನೆಗೆ ಒಳಪಡುವವರೂ ಇಲ್ಲ. ಸ್ವಧರ್ಮವೇ ಪರಸ್ಪರರ ಧರ್ಮವನ್ನು ರಕ್ಷಿಸುತ್ತದೆ.

06012037a ಏತಾವದೇವ ಶಕ್ಯಂ ತು ತಸ್ಮಿನ್ದ್ವೀಪೇ ಪ್ರಭಾಷಿತುಂ|

06012037c ಏತಾವದೇವ ಶ್ರೋತವ್ಯಂ ಶಾಕದ್ವೀಪೇ ಮಹೌಜಸಿ||

ಇಷ್ಟನ್ನೇ ಆ ದ್ವೀಪದ ಕುರಿತು ಮಾತನಾಡಲು ಶಕ್ಯ. ಮತ್ತು ಆ ಮಹೌಜಸ ಶಾಕದ್ವೀಪದ ಕುರಿತು ಇಷ್ಟನ್ನೇ ಕೇಳಬೇಕು[7].”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೂಮಿ ಪರ್ವಣಿ ಶಾಕದ್ವೀಪವರ್ಣನೇ ದ್ವಾದಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೂಮಿ ಪರ್ವದಲ್ಲಿ ಶಾಕದ್ವೀಪವರ್ಣನೆ ಎನ್ನುವ ಹನ್ನೆರಡನೇ ಅಧ್ಯಾಯವು.

Image result for indian motifs earth"

[1]ಅಂದರೆ ಲವಣಸಮುದ್ರದ ವಿಸ್ತೀರ್ಣವು ೩೭,೨೦೦ ಯೋಜನೆಗಳು.

[2]ಅಂದರೆ ಶಾಕದ್ವೀಪದ ವಿಸ್ತಾರ ೩೭,೨೦೦ ಯೋಜನೆಗಳು. ಶಾಕದ್ವೀಪ ಮತ್ತು ಲವಣಸಮುದ್ರಗಳ ವಿಸ್ತೀರ್ಣಗಳು ಒಂದೇ ಸಮನಾಗಿವೆ.

[3]ಅಂದರೆ ಕ್ಷೀರಸಾಗರದ ವಿಸ್ತೀರ್ಣ ೭೪,೪೦೦ ಯೋಜನೆಗಳು. ಕ್ಷೀರಸಾಗರದ ವಿಸ್ತೀರ್ಣವು ಲವಣ ಸಮುದ್ರದ ವಿಸ್ತೀರ್ಣದ ಎರಡು ಪಟ್ಟಿದೆ.

[4]ಪರ್ವತವು ಶ್ಯಾಮಲವರ್ಣವಾಗಿದ್ದರೆ ಪ್ರಜೆಗಳೇಕೆ ಶ್ಯಾಮಲವರ್ಣದವರಾದರು?

[5]ಈ ಶ್ಯಾಮಪರ್ವತದಲ್ಲಿಯೇ ಭಗವಾನ್ ಕೃಷ್ಣನಿದ್ದಾನೆ. ಶ್ಯಾಮಲವರ್ಣದ (ಕಡುನೀಲಿಬಣ್ಣದ) ಕೃಷ್ಣನಿಂದಾಗೆ ಪರ್ವತವು ಶ್ಯಾಮವರ್ಣದ್ದಾಯಿತು; ಅಲ್ಲಿರುವವರೂ ಶ್ಯಾಮವರ್ಣದವರಾದರು.

[6]ಮೊದಲನೆಯ ಪರ್ವತವಾದ ಮೇರುವಿನ ವಿಸ್ತಾರವು ಒಂದು ಸಾವಿರ ಯೋಜನೆಗಳಿದ್ದರೆ ಎರಡನೆಯದಾದ ಮಲಯ ಪರ್ವತವು ಎರಡು ಸಾವಿರ ಯೋಜನೆಗಳ ವಿಸ್ತೀರ್ಣದಲ್ಲಿದೆ. ಮೂರನೆಯ ಪರ್ವತದ ವಿಸ್ತೀರ್ಣವು ನಾಲ್ಕು ಸಾವಿರ ಯೋಜನೆಗಳು. ಹೀಗೆ ಒಂದಕ್ಕೆರಡರಂತೆ ಪರ್ವತದ ವಿಸ್ತೀರ್ಣವು ಕ್ರಮವಾಗಿ ಅಧಿಕವಾಗುತ್ತ ಹೋಗುತ್ತದೆ.

[7]ಈ ದ್ವೀಪದ ಕುರಿತು ಹೆಚ್ಚುತಿಳಿದುಕೊಳ್ಳಲು ಪ್ರಯತ್ನಿಸಬಾರದು...ಏಕೆ?

 

Comments are closed.