Harivamsha: Chapter 54

ಹರಿವಂಶ: ಹರಿವಂಶ ಪರ್ವ

೫೪

ವಿಷ್ಣುಂ ಪ್ರತಿ ದೇವರ್ಷೇರ್ವಾಕ್ಯಮ್

ವೈಶಂಪಾಯನ ಉವಾಚ|

ಕೃತಕಾರ್ಯೇ ಗತೇ ಕಾಲೇ ಜಗತ್ಯಾಂ ಚ ಯಥಾನಯಮ್|

ಅಂಶಾವತರಣೇ ವೃತ್ತೇ ಸುರಾಣಾಂ ಭಾರತೇ ಕುಲೇ||೧-೫೪-೧

ಭಾಗೇಽವತೀರ್ಣೇ ಧರ್ಮಸ್ಯ ಶಕ್ರಸ್ಯ ಪವನಸ್ಯ ಚ|

ಅಶ್ವಿನೋರ್ದೇವಭಿಷಜೋರ್ಭಾಗೇ ವೈ ಭಾಸ್ಕರಸ್ಯ ಚ||೧-೫೪-೨

ಪೂರ್ವಮೇವಾವನಿಗತೇ ಭಾಗೇ ದೇವಪುರೋಧಸಃ

ವಸೂನಾಮಷ್ಟಮೇ ಭಾಗೇ ಪ್ರಾಗೇವ ಧರಣೀಂ ಗತೇ ||೧-೫೪-೩

ಮೃತ್ಯೋರ್ಭಾಗೇ ಕ್ಷಿತಿಗತೇ ಕಲೇರ್ಭಾಗೇ ತಥೈವ ಚ |

ಭಾಗೇ ಶುಕ್ರಸ್ಯ ಸೋಮಸ್ಯ ವರುಣಸ್ಯ ಚ ಗಾಂ ಗತೇ  ||೧-೫೪-೪

ಶಂಕರಸ್ಯ ಗತೇ ಭಾಗೇ ಮಿತ್ರಸ್ಯ ಧನದಸ್ಯ ಚ |

ಗಂಧರ್ವೋರಗಯಕ್ಷಾಣಾಂ ಭಾಗಾಂಶೇಷು ಗತೇಷು ಚ ||೧-೫೪-೫

ಭಾಗೇಷ್ವೇತೇಷು ಗಗನಾದವತೀರ್ಣೇಷು ಮೇದಿನೀಮ್ |

ತಿಷ್ಠನ್ನಾರಾಯಣಸ್ಯಾಂಶೇ ನಾರದಃ ಸಮದೃಶ್ಯತ  ||೧-೫೪-೬

ವೈಶಂಪಾಯನನು ಹೇಳಿದನು: “ಪೃಥ್ವಿ ಮತ್ತು ಕಾಲರು ಕೃತಕೃತ್ಯರಾದೆವೆಂದು ಹಿಂದಿರುಗಲು, ಭಾರತ ಕುಲದಲ್ಲಿ ಸುರರ ಅಂಶಾವತರಣವು ನಡೆಯಲು, ಧರ್ಮ-ಶಕ್ರ-ಪವನ-ಭಿಷಜರಾದ ಅಶ್ವಿನೀ ದೇವತೆಗಳು ಮತ್ತು ಸೂರ್ಯನೂ ಕೂಡ ಭಾಗಗಳಲ್ಲಿ ಅವತರಿಸಿದನಂತರ, ದೇವಪುರೋಹಿತ ಬೃಹಸ್ಪತಿಯು ಭಾಗದಲ್ಲಿ ಮೊದಲೇ ಭುವಿಯಲ್ಲಿ ಅವತರಿಸಿದ್ದಾಗ, ವಸುಗಳ ಎಂಟನೇ ಒಂದು ಭಾಗವು ಮೊದಲೇ ಧರಣೀಗತವಾಗಿದ್ದಾಗ, ಮೃತ್ಯು ಮತ್ತು ಕಲಿಯ ಭಾಗಗಳು ಕ್ಷಿತಿಗತವಾಗಿದ್ದಾಗ, ಶುಕ್ರ,ಸೋ ಮ-ವರುಣರ ಭಾಗಗಳು ಭೂಮಿಯಲ್ಲಿ ಅವತರಿಸಿದ್ದಾಗ,  ಶಂಕರ-ಮಿತ್ರ-ಕುಬೇರರ ಗಂಧರ್ವ-ಉರಗ-ಯಕ್ಷರು ಭಾಗಂಶಗಳಲ್ಲಿ ಭೂಮಿಗೆ ಹೋಗಿರಲು ಗಗನದಿಂದ ಮೇದಿನಿಗೆ ಇಳಿದಿದ್ದಾಗ ನಾರಾಯಣನ ಅಂಶದ ಮುಂದೆ ನಾರದನು ಕಾಣಿಸಿಕೊಂಡನು.

ಜ್ವಲಿತಾಗ್ನಿಪ್ರತೀಕಾಶೋ ಬಾಲಾರ್ಕಸದೃಶೇಕ್ಷಣಃ |

ಸವ್ಯಾಪವೃತ್ತಂ ವಿಪುಲಂ ಜಟಾಮಂಡಲಮುದ್ವಹನ್ ||೧-೫೪-೭

ಆಗ ನಾರದನ ತೇಜಸ್ವೀ ಶರೀರವು ಪ್ರಜ್ವಲಿತ ಅಗ್ನಿಯಂತೆ ಪ್ರಕಾಶಿತವಾಗಿತ್ತು. ಅವನ ಕಣ್ಣುಗಳು ಉದಯಿಸುತ್ತಿರುವ ಸೂರ್ಯನಂತಿದ್ದವು. ಅವನು ವಾಮಾವರ್ತ ವಿಶಾಲ ಜಟಾಮಂಡಲವನ್ನು ಧರಿಸಿದ್ದನು.

ಚಂದ್ರಾಂಶುಶುಕ್ಲೇ ವಸನೇ ವಸಾನೋ ರುಕ್ಮಭೂಷಿತಃ |

ವೀಣಾಂ ಗೃಹೀತ್ವಾ ಮಹತೀಂ ಕಕ್ಷಾಸಕ್ತಾಂ ಸಖೀಮಿವ ||೧-೫೪-೮

ಚಂದ್ರನ ಕಿರಣಗಳಂತಿದ್ದ ಶ್ವೇತ ವಸ್ತ್ರವನ್ನುಟ್ಟಿದ್ದನು. ರುಕ್ಮವಿಭೂಷಿತನಾಗಿದ್ದನು. ಮಹತೀ ಎನ್ನುವ ವೀಣೆಯನ್ನು, ತನ್ನ ಸಖಿಯೋ ಎನ್ನುವಂತೆ ಅಪ್ಪಿಹಿಡಿದಿದ್ದನು.

ಕೃಷ್ಣಾಜಿನೋತ್ತರಾಸಂಗೋ ಹೇಮಯಜ್ಞೋಪವೀತವಾನ್ |

ದಂಡೀ ಕಮಂಡಲುಧರಃ ಸಾಕ್ಷಾಚ್ಛಕ್ರ ಇವಾಪರಃ ||೧-೫೪-೯

ಕೃಷ್ಣಾಜಿನವನ್ನು ಉತ್ತರೀಯವನ್ನಾಗಿ ಹೊದೆದಿದ್ದನು. ಚಿನ್ನದ ಯಜ್ಞೋಪವೀತವನ್ನು ಧರಿಸಿದ್ದನು. ದಂಡ-ಕಮಂಡಲುಗಳನ್ನು ಹಿಡಿದಿದ್ದನು. ಸಾಕ್ಷಾತ್ ಇನ್ನೊಬ್ಬ ಶಕ್ರನೋ ಎನ್ನುವಂತೆ ಕಾಣುತ್ತಿದ್ದನು.

ಭೇತ್ತಾ ಜಗತಿ ಗುಹ್ಯಾನಾಂ ವಿಗ್ರಹಾಣಾಂ ಗ್ರಹೋಪಮಃ |

ಗಾತಾ ಚತುರ್ಣಾಂ ವೇದಾನಾಮುದ್ಗಾತಾ ಪ್ರಥಮರ್ತ್ವಿಜಾಮ್ |

ಮಹರ್ಷಿವಿಗ್ರಹರುಚಿರ್ವಿದ್ವಾನ್ಗಾಂಧರ್ವಕೋವಿದಃ ||೧-೫೪-೧೦

ಅವನು ಜಗತ್ತಿನ ಗುಹ್ಯವಿಷಗಳನ್ನು ಯುದ್ಧಗಳುಂಟಾಗುವಷ್ಟು ಬಹಿರಂಗಪಡಿಸುವವನಾಗಿದ್ದನು. ಮುಂದೆ ಆಗಬಹುದಾದ ಯುದ್ಧಗಳನ್ನು ಮುನ್ಸೂಚುವ ಗ್ರಹಗಳಂತಿದ್ದನು. ಅವನು ನಾಲ್ಕೂವೇದಗಳ ಗಾಯಕನಾಗಿದ್ದನು ಮತ್ತು ಮುಖ್ಯ ಋತ್ವಿಜರಲ್ಲಿ ಉದ್ಗಾತನಾಗಿದ್ದನು. ಮಹರ್ಷಿಯಾಗಿದ್ದರೂ ಯುದ್ಧನೋಡುವುದರಲ್ಲಿ ರುಚಿಯನ್ನಿಟ್ಟಿದ್ದನು. ಮತ್ತು ವಿದ್ವಾನನಾಗಿದ್ದರೂ ಸಂಗೀತವಿದ್ಯೆಯ ಕೋವಿದನಾಗಿದ್ದನು.

ವೈರಿಕೇಲಿಕಿಲೋ ವಿಪ್ರೋ ಬ್ರಾಹ್ಮಃ ಕಲಿರಿವಾಪರಃ |

ದೇವಗಂಧರ್ವಲೋಕಾನಾಮಾದಿವಕ್ತಾ ಮಹಾಮುನಿಃ ||೧-೫೪-೧೧

ಇತರರು ಜಗಳವಾಡುವಂತೆ ಮಾಡುವುದು ಅವನಿಗೆ ಒಂದು ಆಟವಾಗಿತ್ತು. ಅವನು ಬ್ರಾಹ್ಮಣ ಮತ್ತು ಬ್ರಹ್ಮಪುತ್ರನೇ ಆಗಿದ್ದರೂ ಅವನನ್ನು ಎರಡನೇ ಕಲಿ ಎಂದು ತಿಳಿಯುತ್ತಿದ್ದರು. ಮಹಾಮುನಿ ನಾರದನು ದೇವ-ಗಂಧರ್ವಲೋಕಗಳ ಆದಿವಕ್ತಾರನಾಗಿದ್ದನು.

ಸ ನಾರದೋಽಥ ಬ್ರಹ್ಮರ್ಷಿರ್ಬ್ರಹ್ಮಲೋಕಚರೋಽವ್ಯಯಃ |

ಸ್ಥಿತೋ ದೇವಸಭಾಮಧ್ಯೇ ಸಂರಬ್ಧೋ ವಿಷ್ಣುಮಬ್ರವೀತ್ ||೧-೫೪-೧೨

ಬ್ರಹ್ಮಲೋಕಸಂಚಾರಿಯಾದ ಆ ಅವ್ಯಯ ಬ್ರಹ್ಮರ್ಷಿ ನಾರದನು ಈ ಸಮಯ ದೇವಸಭಾಮಧ್ಯದಲ್ಲಿ ಬಂದು ನಿಂತು ರೋಷಾವೇಶದಿಂದ ವಿಷ್ಣುವಿಗೆ ಹೇಳಿದನು:

ಅಂಶಾವತರಣಂ ವಿಷ್ಣೋರ್ಯದಿದಂ ತ್ರಿದಶೈಃ ಕೃತಮ್ |

ಕ್ಷಯಾರ್ಥಂ ಪೃಥಿವೀಂದ್ರಾಣಾಂ ಸರ್ವಮೇತದಕಾರಣಮ್ ||೧-೫೪ ೧೩

“ವಿಷ್ಣೋ! ಪೃಥ್ವೀಂದ್ರರ ಕ್ಷಯಕ್ಕಾಗಿ ತ್ರಿದಶರು ಕೈಗೊಂಡ ಈ ಅಂಶಾತರಣವೆಲ್ಲವೂ ನಿಷ್ಫಲವಾಗಿಹೋಯಿತು!

ಯದೇತತ್ಪಾರ್ಥಿವಂ ಕ್ಷತ್ರಂ ಸ್ಥಿತಂ ತ್ವಯಿ ಯದೀಶ್ವರ |

ನೃನಾರಾಯಣಯುಕ್ತೋಽಯಂ ಕಾರ್ಯಾರ್ಥಃ ಪ್ರತಿಭಾತಿ ಮೇ ||೧-೫೪-೧೪

ಈಶ್ವರ! ಪಾರ್ಥಿವರ ಈ ಯುದ್ಧವು ನಿನ್ನ ಮೇಲೆಯೇ ಅವಲಂಬಿಸಿದೆ. ನರ-ನಾರಾಯಣರ ಸಂಗಮದಿಂದಲೇ ಈ ಕಾರ್ಯವು ನಡೆಯಬಲ್ಲದು ಎಂದು ನನಗನ್ನಿಸುತ್ತದೆ!

ನ ಯುಕ್ತಂ ಜಾನತಾ ದೇವ ತ್ವಯಾ ತತ್ವಾರ್ಥದರ್ಶಿನಾ |

ದೇವದೇವ ಪೃಥಿವ್ಯರ್ಥೇ ಪ್ರಯೋಕ್ತುಂ ಕಾರ್ಯಮೀದೃಶಮ್ ||೧-೫೪-೧೫

ದೇವ! ದೇವದೇವ! ತತ್ವಾರ್ಥದರ್ಶಿಯಾದ ನಿನಗೆ ಎಲ್ಲವೂ ತಿಳಿದಿದೆ. ಆದುದರಿಂದ ಪೃಥ್ವಿಗಾಗಿ ಅದು ಹಾಗಾಗದಿರುವುದು ಸರಿಯಲ್ಲ.

ತ್ವಂ ಹಿ ಚಕ್ಷುಷ್ಮತಾಂ ಚಕ್ಷುಃ ಶ್ಲಾಘ್ಯಃ ಪ್ರಭವತಾಂ ಪ್ರಭುಃ |

ಶ್ರೇಷ್ಠೋ ಯೋಗವತಾಂ ಯೋಗೀ ಗತಿರ್ಗತಿಮತಾಮಪಿ ||೧-೫೪-೧೬

ಏಕೆಂದರೆ ಕಣ್ಣಿರುವವರ ಕಣ್ಣು ನೀನು. ಪ್ರಭುಗಳಿಗೆ ಪ್ರಭುವು. ಯೋಗವಂತ ಯೋಗಿಗಳಲ್ಲಿ ಶ್ರೇಷ್ಠನು ಮತ್ತು ಗತಿಶಾಲಿ ಜೀವಿಗಳ ಗತಿಯು.

ದೇವಭಾಗಾಂಗತಾಂದೃಷ್ಟ್ವಾ ಕಿಂ ತ್ವಂ ಸರ್ವಾಶ್ರಯೋ ವಿಭುಃ |

ವಸುಂಧರಾಯಾಃ ಸಾಹ್ಯಾರ್ಥಮಂಶಂ ಸ್ವಂ ನಾನುಯುಂಜಸೇ ||೧-೫೪-೧೭

ಸರ್ವರಿಗೂ ಅಶ್ರಯನಾಗಿರುವ ಪ್ರಭೋ! ದೇವತೆಗಳು ತಮ್ಮ ತಮ್ಮ ಭಾಗಗಳಲ್ಲಿ ಅವತರಿಸಿರುವುದನ್ನು ನೋಡಿಯೂ ವಸುಂಧರೆಯ ಸಹಾಯಕ್ಕಾಗಿ ಸ್ವಯಂ ನೀನೂ ಅವತರಿಸುವುದಿಲ್ಲವೇ?

ತ್ವಯಾ ಸನಾಥ ದೇವಾಂಶಾಸ್ತ್ವನ್ಮಯಾಸ್ತ್ವತ್ಪರಾಯಣಾಃ |

ಜಗತ್ಯಾಂ ಸಂಚರಿಷ್ಯಂತಿ ಕಾರ್ಯಾತ್ಕಾರ್ಯಾಂತರಂ ಗತಾಃ ||೧-೫೪-೧೮

ದೇವತೆಗಳ ಅಂಶಗಳೂ ನಿನ್ನದೇ ಸ್ವರೂಪವುಳ್ಳವುಗಳು ಮತ್ತು ನಿನ್ನನ್ನೇ ಆಶ್ರಯಿಸಿರುವವು. ನೀನೂ ಅವರ ಜೊತೆಯಿದ್ದರೆ ಜಗತ್ತಿನ ಅವರು ಒಂದು ಕಾರ್ಯದಿಂದ ಇನ್ನೊಂದು ಕಾರ್ಯದಲ್ಲಿ ತೊಡಗಿಸಿಕೊಳ್ಳಬಲ್ಲರು.

ತದಹಂ ತ್ವರಯಾ ವಿಷ್ಣೋ ಪ್ರಾಪ್ತಃ ಸುರಸಭಾಮಿಮಾಮ್ |

ತವ ಸಂಚೋದನಾರ್ಥಂ ವೈ ಶೃಣು ಚಾಪ್ಯತ್ರ ಕಾರಣಮ್ ||೧-೫೪-೧೯

ವಿಷ್ಣೋ! ಅದಕ್ಕಾಗಿಯೇ ನಾನು ತ್ವರೆಮಾಡಿ ನಿನ್ನನ್ನು ಪ್ರಚೋದನೆಗೊಳಿಸಲಾಗಿಯೇ ಈ ಸುರಸಭೆಯನ್ನು ತಲುಪಿದ್ದೇನೆ. ಅದರ ಕಾರಣವನ್ನು ಕೇಳು.

ಯೇ ತ್ವಯಾ ನಿಹತಾ ದೈತ್ಯಾಃ ಸಂಗ್ರಾಮೇ ತಾರಕಾಮಯೇ |

ತೇಷಾಂ ಶೃಣು ಗತಿಂ ವಿಷ್ಣೋ ಯೇ ಗತಾಃ ಪೃಥಿವೀತಲಮ್ ||೧-೫೪-೨೦

ವಿಷ್ಣೋ! ತಾರಕಾಮಯ ಸಂಗ್ರಾಮದಲ್ಲಿ ನಿನ್ನಿಂದ ಹತರಾಗಿದ್ದ ದೈತ್ಯರು ಪೃಥಿವೀತಲಕ್ಕೆ ಹೋಗಿದ್ದಾರೆ. ಅಲ್ಲಿ ಅವರ ಅವಸ್ಥೆಯನ್ನು ಕೇಳು.

ಪುರೀ ಪೃಥಿವ್ಯಾಂ ಮುದಿತಾ ಮಥುರಾ ನಾಮತಃ ಶ್ರುತಾ |

ನಿವಿಷ್ಟಾ ಯಮುನಾತೀರೇ ಸ್ಫೀತಾ ಜನಪದಾಯುತಾ ||೧-೫೪-೨೧

ಪೃಥ್ವಿಯಲ್ಲಿ ಮಥುರಾ ಎಂಬ ಹೆಸರಿನ ಮುದಿತ ಪುರಿಯು ವಿಶ್ರುತವಾಗಿದೆ. ಸಂಪದ್ಭರಿತವಾದ ಆ ನಗರಿಯು ಯಮುನಾತೀರದಲ್ಲಿದೆ. ಅದರ ಸುತ್ತಲೂ ಅನೇಕ ಜನಪದಗಳಿವೆ.

ಮಧುರ್ನಾಮ ಮಹಾನಾಸೀದ್ದಾನವೋ ಯುಧಿ ದುರ್ಜಯಃ |

ತ್ರಾಸನಃ ಸರ್ವಭೂತಾನಾಂ ಬಲೇನ ಮಹತಾನ್ವಿತಃ ||೧-೫೪-೨೨

ಹಿಂದೆ ಅಲ್ಲಿ ಯುದ್ಧದಲ್ಲಿ ದುರ್ಜಯನಾಗಿದ್ದ ಮಧು ಎಂಬ ಹೆಸರಿನ ಮಹಾ ದಾನವನು ಮಹಾ ಬಲದಿಂದ ಕೂಡಿದವನಾಗಿ ಸರ್ವಭೂತಗಳನ್ನೂ ಪೀಡಿಸುತ್ತಿದ್ದನು.

ತಸ್ಯ ತತ್ರ ಮಹಚ್ಚಾಸೀನ್ಮಹಾಪಾದಪಸಂಕುಲಮ್ |

ಘೋರಂ ಮಧುವನಂ ನಾಮ ಯತ್ರಾಸೌ ನ್ಯವಸತ್ಪುರಾ ||೧-೫೪-೨೩

ಅದೇ ಘೋರವೂ ವಿಶಾಲವೂ ಆಗಿದ್ದ ಮಧುವನ ಎಂಬ ಹೆಸರಿನ ವನವಾಗಿತ್ತು. ಅಲ್ಲಿಯೇ ಹಿಂದೆ ಅವನು ವಾಸಿಸುತ್ತಿದ್ದನು.

ತಸ್ಯ ಪುತ್ರೋ ಮಹಾನಾಸೀಲ್ಲವಣೋ ನಾಮ ದಾನವಃ |

ತ್ರಾಸನಃ ಸರ್ವಭೂತಾನಾಂ ಮಹಾಬಲಪರಾಕ್ರಮಃ ||೧-೫೪-೨೪

ಅವನ ಮಗ ಲವಣ ಎಂಬ ಹೆಸರಿನ ಮಹಾ ದಾನವನಾಗಿದ್ದನು. ಮಹಾಬಲ ಪರಾಕ್ರಮಿಯಾಗಿದ್ದ ಅವನೂ ಸರ್ವಭೂತಗಳನ್ನು ಪೀಡಿಸುತ್ತಿದ್ದನು.

ಸ ತತ್ರ ದಾನವಃ ಕ್ರೀಡನ್ವರ್ಷಪೂಗಾನನೇಕಶಃ |

ಸ ದೈವತಗಣಾಲ್ಲೋಕಾನುದ್ವಾಸಯತಿ ದರ್ಪಿತಃ ||೧-೫೪-೨೫

ಅಲ್ಲಿ ಆ ದಾನವನು ಅನೇಕ ವರ್ಷಗಳ ವರೆಗೆ ಆಟವಾಡುತ್ತಿದ್ದನು. ದರ್ಪಿತನಾದ ಅವನು ದೈವತಗಣಗಳನ್ನೂ ಲೋಕಗಳನ್ನು ಉದ್ವಿಗ್ನಗೊಳಿಸತೊಡಗಿದನು.

ಅಯೋಧ್ಯಾಯಾಮಯೋಧ್ಯಾಯಾಂ ರಾಮೇ ದಾಶರಥೌ ಸ್ಥಿತೇ |

ರಾಜಂ ಶಾಸತಿ ಧರ್ಮಜ್ಞೇ ರಾಕ್ಷಸಾನಾಂ ಭಯಾವಹೇ ||೧-೫೪-೨೬

ಸ  ದಾನವೋ ಬಲಶ್ಲಾಘೀ ಘೋರಂ ವನಮುಪಾಶ್ರಿತಃ |

ಪ್ರೇಷಯಾಮಾಸ ರಾಮಾಯ ದೂತಂ ಪರುಷವಾದಿನಮ್ ||೧-೫೪-೨೭

ಅಯೋಧನೀಯವಾಗಿದ್ದ ಅಯೋಧ್ಯೆಯಲ್ಲಿ ರಾಕ್ಷಸರಿಗೆ ಭಯವನ್ನುಂಟುಮಾಡುವ ಧರ್ಮಜ್ಞ ದಾಶರಥಿ ರಾಮನು ರಾಜ್ಯವಾಳುತ್ತಿದ್ದಾಗ ಆ ಘೋರ ವನವನ್ನು ಆಶ್ರಯಿಸಿದ್ದ ಬಲಶ್ಲಾಘೀ ದಾನವನು ರಾಮನಿಗೆ ಕಟುಭಾಷೀ ದೂತನನ್ನು ಕಳುಹಿಸಿದ್ದನು.

ವಿಷಯಾಸನ್ನಭೂತೋಽಸ್ಮಿ ತವ ರಾಮ ರಿಪುಶ್ಚ ಹ |

ನ ಚ ಸಾಮಂತಮಿಚ್ಛಂತಿ ರಾಜಾನೋ ಬಲದರ್ಪಿತಮ್ ||೧-೫೪-೨೮

“ರಾಮ! ನಿನ್ನ ರಾಜ್ಯದಲ್ಲಿಯೇ ನಾನು ವಾಸಿಸುತ್ತಿದ್ದೇನ ಮತ್ತು ನಿನ್ನ ಶತ್ರುವೂ ಕೂಡ ಆಗಿದ್ದೇನೆ. ರಾಜರು ಬಲದರ್ಪಿತನನ್ನು ಸಾಮಂತನನ್ನಾಗಿ ಪಡೆದುಕೊಳ್ಳಲು ಇಚ್ಛಿಸುವುದಿಲ್ಲ.

ರಾಜ್ಞಾ ರಾಜ್ಯವ್ರತಸ್ಥೇನ ಪ್ರಜಾನಾಂ ಹಿತಕಾಮ್ಯಯಾ |

ಜೇತವ್ಯಾ ರಿಪವಃ ಸರ್ವೇ ಸ್ಫೀತಂ ವಿಷಯಮಿಚ್ಛತಾ ||೧-೫೪-೨೯

ಸಮೃದ್ಧಶೀಲ ರಾಜ್ಯವನ್ನು ಬಯಸುವವರಿಲ್ಲರೂ  ರಾಜ್ಯವ್ರತರಾದ ರಾಜರು ಪ್ರಜೆಗಳ ಹಿತವನ್ನು ಬಯಸಿ ಶತ್ರುಗಳೆಲ್ಲರನ್ನೂ ಜಯಿಸುತ್ತಾರೆ.

ಅಭಿಷೇಕಾರ್ದ್ರಕೇಶೇನ ರಾಜ್ಞಾ ರಂಜನಕಾಮ್ಯಯಾ |

ಜೇತವ್ಯಾನೀಂದ್ರಿಯಾಣ್ಯಾದೌ ತಜ್ಜಯೇ ಹಿ ಧ್ರುವೋ ಜಯಃ ||೧-೫೪-೩೦

ರಾಜ್ಯಾಭಿಷೇಕದಿಂದ ತಲೆಗೂದಲು ಒದ್ದೆಯಾಗಿದ್ದ ರಾಜನು ಪ್ರಜೆಗಳನ್ನು ರಂಜಿಸಲೋಸುಗ ಮೊದಲು ತನ್ನ ಇಂದ್ರಿಯಗಳ ಮೇಲೆ ವಿಜಯವನ್ನು ಸಾಧಿಸಿದರೆ ನಿಶ್ಚಿತವಾಗಿಯೂ ಅವನಿಗೆ ಜಯವೊದಗುತ್ತದೆ.

ಸಮ್ಯಗ್ವರ್ತಿತುಕಾಮ್ಯಸ್ಯ ವಿಶೇಷೇಣ ಮಹೀಪತೇಃ |

ನಯಾನಾಮುಪದೇಶೇನ ನಾಸ್ತಿ ಲೋಕಸಮೋ ಗುರುಃ  ||೧-೫೪-೩೧

ಲೋಕದಲ್ಲಿ ನೀತಿಯ ಉಪದೇಶಗಳನ್ನು ನೀಡಲು ಉತ್ತಮವಾಗಿ ವರ್ತಿಸಲು ಬಯಸುವ, ವಿಶೇಷತಃ ಮಹೀಪತಿಯ ಸಮನಾದ ಗುರುವಿಲ್ಲ.

ವ್ಯಸನೇಷು ಜಘನ್ಯಸ್ಯ ಧರ್ಮಮಧ್ಯಸ್ಯ ಧೀಮತಃ |

ಫಲಜ್ಯೇಷ್ಠಸ್ಯ ನೃಪತೇರ್ನಾಸ್ತಿ ಸಾಮಂತಜಂ ಭಯಮ್ ||೧-೫೪-೩೨

ವ್ಯಸನಗಳನ್ನು ಕಳೆದುಕೊಂಡು, ಧರ್ಮಮಧ್ಯಸ್ಥನಾದ ಧೀಮತ ಫಲಜ್ಯೇಷ್ಠ ನೃಪತಿಗೆ ಸಾಮಂತನಿಂದ ಭಯವಿರುವುದಿಲ್ಲ.

ಸಹಜೈರ್ಬಾಧ್ಯತೇ ಸರ್ವಃ ಪ್ರವೃದ್ಧೈರಿಂದ್ರಿಯಾರಿಭಿಃ |

ಅಮಿತ್ರಾಣಾಂ ಪ್ರಿಯಕರೈರ್ಮೋಹೈರಧೃತಿರೀಶ್ವರಃ ||೧-೫೪-೩೩

ಶರೀರದ ಜೊತೆಗೇ ಉತ್ಪನ್ನವಾಗಿರುವ ಇಂದ್ರಿಯರೂಪೀ ಶತ್ರುಗಳು ಹೆಚ್ಚಾದಾಗ ಆ ಶತ್ರುಗಳ ಕೆಲಸವನ್ನು ಮಾಡುವಂಥಹ ಮೋಹವು ಉತ್ಪನ್ನವಾಗುತ್ತದೆ. ಆ ದಶೆಯಿಂದಾಗಿ ಎಲ್ಲ ಪುರುಷ ರಾಜರೂ ಧೈರ್ಯಹೀನರಾಗಿಬಿಡುತ್ತಾರೆ.

ಯತ್ತ್ವಯಾ ಸ್ತ್ರೀಕೃತೇ ಮೋಹಾತ್ಸಗಣೋ ರಾವಣೋ ಹತಃ |

ನೈತದೌಪಯಿಕಂ ಮನ್ಯೇ ಮಹದ್ವೈ ಕರ್ಮ ಕುತ್ಸಿತಮ್ ||೧-೫೪-೩೪

ಮೋಹವಾಶನಾಗಿ ನೀನು ಓರ್ವ ಸ್ತ್ರೀಗಾಗಿ ಗಣಗಳ ಸಮೇತ ರಾವಣನನ್ನು ಕೊಂದದ್ದು ನ್ಯಾಯಸಂಗತವಾದದ್ದು ಎಂದು ನನಗನಿಸುವುದಿಲ್ಲ. ಆ ನಿನ್ನ ಕೃತ್ಯವು ಮಹತ್ತರವಾದುದಾರೂ ಕುತ್ಸಿತವಾದದ್ದು ಎಂದು ಅನ್ನಿಸುತ್ತದೆ.

ವನವಾಸಪ್ರವೃತ್ತೇನ ಯತ್ತ್ವಯಾ ವ್ರತಶಾಲಿನಾ |

ಪ್ರಹೃತಂ ರಾಕ್ಷಸಾನೀಕೇ ನೈವ ದೃಷ್ಟಃ ಸತಾಂ ವಿಧಿಃ ||೧-೫೪-೩೫

ನೀನು ವನವಾಸ ಪೃತ್ತನಾಗಿದ್ದೆ. ವನವಾಸೀ ಮುನಿಗಳ ನಿಯಮಗಳನ್ನು ಪಾಲಿಸುವುದೇ ನಿನ್ನ ಕರ್ಮವಾಗಿತ್ತು. ಆ ಪರಿಸ್ಥಿತಿಯಲ್ಲಿ ಬೇರೆ ಯಾವ ಸತ್ಪುರುಷನೂ ನಿನ್ನಂತೆ ರಾಕ್ಷಸ ಸೇನೆಯನ್ನು ಪ್ರಹರಿಸಿರಲಿಲ್ಲ. ಅದನ್ನು ಎಂದೂ ನೋಡಿರಲಿಲ್ಲ.

ಸತಾಮಕ್ರೋಧಜೋ ಧರ್ಮಃ ಶುಭಾಂ ನಯತಿ ಸದ್ಗತಿಮ್ |

ಯತ್ತ್ವಯಾ ನಿಹತಾ ಮೋಹಾದ್ದೂಷಿತಾಶ್ಚಾಶ್ರಮೌಕಸಃ ||೧-೫೪-೩೬

ಕ್ರೋಧವನ್ನು ಪರಿತ್ಯಜಿಸಿ ಸಾಧುಪುರುಷರು ಪಾಲಿಸುವ ಧರ್ಮವೇ ಶುಭ ಸದ್ಗತಿಯನ್ನು ನೀಡುತ್ತದೆ. ಮೋಹವಶನಾಗಿ ನೀನು ರಾಕ್ಷಸರನ್ನು ವಧಿಸಿದ್ದುದರಿಂದ ಎಲ್ಲ ಆಶ್ರಮವಾಸಿಗಳೂ ಕಲಂಕಿತರಾಗಿಹೋದರು.

ಸ ಏಷ ರಾವಣೋ ಧನ್ಯೋ ಯಸ್ತ್ವಯಾ ವ್ರತಚಾರಿಣಾ |

ಸ್ತ್ರೀನಿಮಿತ್ತೇ ಹತೋ ಯುದ್ಧೇ ಗ್ರಾಮ್ಯಾಂಧರ್ಮಾನವೇಕ್ಷತಾ ||೧-೫೪-೩೭

ಗ್ರಾಮ್ಯಧರ್ಮವನ್ನೇ ಅವಲೋಕಿಸಿ ನಿನ್ನಂತಹ ವ್ರತಧಾರಿಯಿಂದ ಸ್ತ್ರೀಯ ಕಾರಣದಿಂದಾಗಿ ಹತನಾದ ಆ ರಾವಣನೇ ಧನ್ಯ!

ಯದಿ ತೇ ನಿಹತಃ ಸಂಖ್ಯೇ ದುರ್ಬುದ್ಧಿರಜಿತೇಂದ್ರಿಯಃ |

ಯುದ್ಧ್ಯಸ್ವಾದ್ಯ ಮಯಾ ಸಾರ್ಧಂ ಮೃಧೇ ಯದ್ಯಸಿ ವೀರ್ಯವಾನ್ ||೧-೫೪-೩೮

ಒಂದು ವೇಳೆ ನೀನು ಆ ದುರ್ಬುದ್ಧಿ ಅಜಿತೇಂದ್ರಿಯನನ್ನು ಯುದ್ಧದಲ್ಲಿ ಸಂಹರಿಸಿ ರಣದಲ್ಲಿ ವೀರ್ಯವಾನನೆಂದು ಹೇಳಿಸಿಕೊಳ್ಳುವೆಯಾದರೆ ಇಂದು ನನ್ನೊಡನೆ ಯುದ್ಧಮಾಡು.”

ತಸ್ಯ ದೂತಸ್ಯ ತಚ್ಛ್ರುತ್ವಾ ಭಾಷಿತಂ ತತ್ತ್ವವಾದಿನಃ |

ಧೈರ್ಯಾದಸಂಭ್ರಾಂತವಪುಃ ಸಸ್ಮಿತಂ ರಾಘವೋಽಬ್ರವೀತ್  ||೧-೫೪-೩೯

ಆ ದೂತನ ಮಾತುಗಳನ್ನು ಕೇಳಿ ತತ್ತ್ವವಾದೀ ರಾಘವನು ತನ್ನ ಸ್ವಾಭಾವಿಕ ಧೈರ್ಯದಿಂದ ವಿಚಲಿತನಾಗದೇ ಮುಗುಳ್ನಗುತ್ತಾ ಇಂತೆಂದನು:

ಅಸದೇತತ್ತ್ವಯಾ ದೂತ ಭಾಷಿತಂ ತಸ್ಯ ಗೌರವಾತ್ |

ಯನ್ಮಾಂ ಕ್ಷಿಪಸಿ ದೋಷೇಣ ವೇದಾತ್ಮಾನಂ ಚ ಸುಸ್ಥಿರಮ್ ||೧-೫೪-೪೦

“ದೂತ! ಅವನ ಕುರಿತು ಗೌರವದಿಂದ ನೀನಾಡಿದ ಮಾತುಗಳು ಸುಳ್ಳು. ನಿನ್ನನ್ನು ನೀನು ನ್ಯಾಯಮಾರ್ಗದಲ್ಲಿರುವೆಯೆಂದು ತಿಳಿದು ನನ್ನಮೇಲೆ ದೋಷಗಳನ್ನು ಹೊರಿಸುತ್ತಿದ್ದೀಯೆ.

ಯದ್ಯಹಂ ಸತ್ಪಥೇ ಮೂಢೋ ಯದಿ ವಾ ರಾವಣೋ ಹತಃ |

ಯದಿ ವಾ ಮೇ ಹೃತಾ ಭಾರ್ಯಾ ಕಾ ತತ್ರ ಪರಿದೇವನಾ ||೧-೫೪-೪೧

ನಾನು ಸತ್ಪಥದಲ್ಲಿರದ ಮೂಢನಾಗಿದ್ದರೆ, ಅಥವಾ ರಾವಣನು ಹತನಾಗಿದ್ದರೆ ಅಥವಾ ನನ್ನ ಭಾರ್ಯೆಯು ಅಪಹೃತಳಾಗಿದ್ದರೆ ಅದರಲ್ಲಿ ನೀನು ಪರಿವೇದನೆ ಪಡಬೇಕದುದು ಏನಿದೆ?

ನ ವಾಙ್ಮಾತ್ರೇಣ ದುಷ್ಯಂತಿ ಸಾಧವಃ ಸತ್ಪಥೇ ಸ್ಥಿತಾಃ |

ಜಾಗರ್ತಿ ಚ ಯಥಾ ದೇವಃ ಸದಾ ಸತ್ಸ್ವಿತರೇಷು ಚ ||೧-೫೪-೪೨

ಸತ್ಪಥದಲ್ಲಿರುವ ಸಾಧುಗಳು ಯಾರದ್ದೋ ಹೇಳಿಕೆಯಿಂದ ಕಳಂಕಿತರಾಗುವುದಿಲ್ಲ. ಸತ್ಯ ಮತ್ತು ಅಸತ್ಯಗಳಲ್ಲಿ ದೇವನು ಸದಾ ಜಾಗೃತನಾಗಿರುತ್ತಾನೆ.

ಕೃತಂ ದೂತೇನ ಯತ್ಕಾರ್ಯಂ ಗಚ್ಛ ತ್ವಂ ದೂತ ಮಾ ಚಿರಮ್ |

ನಾತ್ಮಶ್ಲಾಘಿಷು ನೀಚೇಷು ಪ್ರಹರಂತೀಹ ಮದ್ವಿಧಾಃ ||೧-೫೪-೪೩

ದೂತ! ದೂತನು ಮಾಡಬೇಕಾದ ಕಾರ್ಯವನ್ನು ನೀನು ಮಾಡಿದ್ದೀಯೆ. ಈಗ ತಡಮಾಡದೇ ಹೋಗು! ನನ್ನಂಥವರು ಆತ್ಮಶ್ಲಾಘನೆ ಮಾಡಿಕೊಳ್ಳುವ ನೀಚರನ್ನು ಪ್ರಹರಿಸುವುದಿಲ್ಲ.

ಅಯಂ ಮಮಾನುಜೋ ಭ್ರಾತಾ ಶತ್ರುಘ್ನಃ ಶತ್ರುತಾಪನಃ |

ತಸ್ಯ ದೈತ್ಯಸ್ಯ ದುರ್ಬುದ್ಧೇರ್ಮೃಧೇ ಪ್ರತಿಕರಿಷ್ಯತಿ ||೧-೫೪-೪೪

ಈ ನನ್ನ ಅನುಜ ಭ್ರಾತಾ ಶತ್ರುತಾಪನ ಶತ್ರುಘ್ನನು ಯುದ್ಧದಲ್ಲಿ ಆ ದುರ್ಬುದ್ಧಿ ದೈತ್ಯನಿಗೆ ಪ್ರತೀಕಾರವನ್ನೆಸಗುತ್ತಾನೆ.”

ಏವಮುಕ್ತಃ ಸ ದೂತಸ್ತು ಯಯೌ ಸೌಮಿತ್ರಿಣಾ ಸಹ |

ಅನುಜ್ಞಾತೋ ನರೇಂದ್ರೇಣ ರಾಘವೇಣ ಮಹಾತ್ಮನಾ ||೧-೫೪-೪೫

ಹೀಗೆ ಹೇಳಲು ಆ ದೂತನು ಮಹಾತ್ಮ ನರೇಂದ್ರ ರಾಘವನ ಅನುಮತಿಯನ್ನು ಪಡೆದು ಸೌಮಿತ್ರಿಯೊಡನೆ ಹೊರಟು ಹೋದನು.

ಸ ಶೀಘ್ರಯಾನಃ ಸಂಪ್ರಾಪ್ತಸ್ತದ್ದಾನವಪುರಂ ಮಹತ್ |

ಚಕ್ರೇ ನಿವೇಶಂ ಸೌಮಿತ್ರಿರ್ವನಾಂತೇ ಯುದ್ಧಲಾಲಸಃ ||೧-೫೪-೪೬

ಯುದ್ಧಲಾಲಸ ಸೌಮಿತ್ರಿಯು ಶೀಘ್ರರಥದಲ್ಲಿ ಕುಳಿತು ಆ ಮಹಾ ದಾನವಪುರವನ್ನು ತಲುಪಿ ವನದ ಬುಡದಲ್ಲಿ ಶಿಬಿರವನ್ನು ಹೂಡಿದನು.

ತತೋ ದೂತಸ್ಯ ವಚನಾತ್ಸ ದೈತ್ಯಃ ಕ್ರೋಧಮೂರ್ಚ್ಛಿತಃ |

ಪೃಷ್ಠತಸ್ತದ್ವನಂ ಕೃತ್ವಾ ಯುದ್ಧಾಯಾಭಿಮುಖಃ ಸ್ಥಿತಃ ||೧-೫೪-೪೭

ಅನಂತರ ದೂತನ ವಚನದಿಂದ ಕ್ರೋಧಮೂರ್ಛಿತನಾದ ದೈತ್ಯನು ಅವನನ್ನು ಅನುಸರಿಸಿ ಆ ವನಕ್ಕೆ ಹೋಗಿ ಯುದ್ಧಾಭಿಮುಖನಾಗಿ ನಿಂತನು.

ತದ್ಯುದ್ಧಮಭವದ್ಘೋರಂ ಸೌಮಿತ್ರೇರ್ದಾನವಸ್ಯ ಚ |

ಉಭಯೋರೇವ ಬಲಿನೋಃ ಶೂರಯೋ ರಣಮೂರ್ಧನಿ ||೧-೫೪-೪೮

ರಣಮೂರ್ಧನಿಯಲ್ಲಿ ಬಲಿಗಳೂ ಶೂರರೂ ಆಗಿದ್ದ ಸೌಮಿತ್ರಿ ಮತ್ತು ದಾನವರ ಆ ಯುದ್ಧವು ಘೋರವಾಗಿತ್ತು.

ತೌ ಶರೈಃ ಸಾಧು ನಿಶಿತೈರನ್ಯೋನ್ಯಮಭಿಜಘ್ನತುಃ |

ನ ಚ ತೌ ಯುದ್ಧವೈಮುಖ್ಯಂ ಶ್ರಮಂ ವಾಪ್ಯುಪಜಗ್ಮತುಃ ||೧-೫೪-೪೯

ಅವರಿಬ್ಬರೂ ನಿಶಿತ ಶರಗಳಿಂದ ಅನ್ಯೋನ್ಯರನ್ನು ಗಾಯಗೊಳಿಸಿದರು. ಅವರಿಬ್ಬರಲ್ಲಿ ಯಾರೂ ಯುದ್ಧದಿಂದ ಹಿಮ್ಮೆಟ್ಟಲಿಲ್ಲ ಮತ್ತು ಯಾರೂ ಬಳಲಲಿಲ್ಲ.

ಅಥ ಸೌಮಿತ್ರಿಣಾ ಬಾಣೈಃ ಪೀಡಿತೋ ದಾನವೋ ಯುಧಿ |

ತತಃ ಸ ಶೂಲರಹಿತಃ ಪರ್ಯಹೀಯತ ದಾನವಃ ||೧-೫೪-೫೦  

ಅನಂತರ ಯುದ್ಧದಲ್ಲಿ ಸೌಮಿತ್ರಿಯ ಬಾಣಗಳಿಂದ ಪೀಡಿತನಾದ ಆ ದಾನವನು ಶೂಲರಹಿತನಾದನು ಮತ್ತು ಆ ದಾನವನು ಶಕ್ತಿಹೀನನಾದನು.

ಸ ಗೃಹೀತ್ವಾಂಕುಶಂ ಚೈವ ದೇವೈರ್ದತ್ತವರಂ ರಣೇ |

ಕರ್ಷಣಂ ಸರ್ವಭೂತಾನಾಂ ಲವಣೋ ವಿರರಾಸ ಹ ||೧-೫೪-೫೧

ಆಗ ಅವನು ದೇವತೆಗಳಿಂದ ವರವನ್ನಾಡಿ ಪಡೆದಿದ್ದ, ಸರ್ವಭೂತಗಳನ್ನೂ ಆಕರ್ಷಿಸಿಕೊಳ್ಳಬಹುದಾಗಿದ್ದ ಅಂಕುಶವನ್ನು ಹಿಡಿದು ಲವಣನು ಗರ್ಜಿಸತೊಡಗಿದನು.

ಶಿರೋಧರಾಯಾಂ ಜಗ್ರಾಹ ಸೋಽಂಕುಶೇನ ಚಕರ್ಷ ಹ |

ಪ್ರವೇಶಯಿತುಮಾರಬ್ಧೋ ಲವಣೋ ರಾಘವಾನುಜಮ್ || ೧-೫೪-೫೨

ಲವಣನು ಆ ಅಂಕುಶವನ್ನು ರಾಘವಾನುಜನ ಕತ್ತಿಗೆ ಒತ್ತಿ ಎಳೆದು ಅವನ ಕುತ್ತಿಗೆಯನ್ನು ಚುಚ್ಚಲು ಪ್ರಾರಂಭಿಸಿದನು.

ಸ ರುಕ್ಮತ್ಸರುಮುದ್ಯಮ್ಯ ಶತ್ರುಘ್ನಃ ಖಡ್ಗಮುತ್ತಮಮ್ |

ಶಿರಶ್ಚಿಚ್ಛೇದ ಖಡ್ಗೇನ ಲವಣಸ್ಯ ಮಹಾಮೃಧೇ ||೧-೫೪-೫೩

ಆಗ ಮಹಾಮೃಧದಲ್ಲಿ ಶತ್ರುಘ್ನನು ಚಿನ್ನದ ಹಿಡಿಯಿದ್ದ ಉತ್ತಮ ಖಡ್ಗವನ್ನು ಎತ್ತಿ ಆ ಖಡ್ಗದಿಂದ ಲವಣನ ಶಿರವನ್ನು ತುಂಡರಿಸಿದನು.

ಸ ಹತ್ವಾ ದಾನವಂ ಸಂಖ್ಯೇ ಸೌಮಿತ್ರಿರ್ಮಿತ್ರವತ್ಸಲಃ |

ತದ್ವನಂ ತಸ್ಯ ದೈತ್ಯಸ್ಯ ಚಿಚ್ಛೇದಾಸ್ತ್ರೇಣ ಬುದ್ಧಿಮಾನ್ ||೧-೫೪-೫೪

ಮಿತ್ರವತ್ಸಲ ಬುದ್ಧಿಮಾನ್ ಸೌಮಿತ್ರಿಯು ಯುದ್ಧದಲ್ಲಿ ಆ ದಾನವನನ್ನು ಸಂಹರಿಸಿ ದೈತ್ಯನ ಆ ವನವನ್ನೂ ಅಸ್ತ್ರದಿಂದ ತುಂಡರಿಸಿದನು.

ಛಿತ್ತ್ವಾ ವನಂ ತತ್ಸೌಮಿತ್ರಿರ್ನಿವೇಶಂ ಸೋಽಭ್ಯರೋಚಯತ್ |

ಭವಾಯ ತಸ್ಯ ದೇಶಸ್ಯ ಪುರ್ಯಾಃ ಪರಮಧರ್ಮವಿತ್ ||೧-೫೪-೫೫

ಆ ವನವನ್ನು ಕತ್ತರಿಸಿ ಪರಮಧರ್ಮವಿದು ಸೌಮಿತ್ರಿಯು ಆ ಪ್ರದೇಶದ ಅಭಿವೃದ್ಧಿಗಾಗಿ ಒಂದು ಪುರಿಯನ್ನು ನಿರ್ಮಿಸಲು ಬಯಸಿದನು.

ತಸ್ಮಿನ್ಮಧುವನಸ್ಥಾನೇ ಮಥುರಾ ನಾಮ ಸಾ ಪುರೀ |

ಶತ್ರುಘ್ನೇನ ಪುರಾ ಸೃಷ್ಟಾ ಹತ್ವಾ ತಂ ದಾನವಂ ರಣೇ ||೧-೫೪-೫೬

ಹಿಂದೆ ಆ ದಾನವನನ್ನು ರಣದಲ್ಲಿ ಸಂಹರಿಸಿ ಆ ಮಧುವನದ ಸ್ಥಾನದಲ್ಲಿ ಮಥುರಾ ಎಂಬ ಹೆಸರಿನ ಪುರಿಯನ್ನು ಶತ್ರುಘ್ರನು ರಚಿಸಿದನು.

ಸಾ ಪುರೀ ಪರಮೋದಾರಾ ಸಾಟ್ಟಪ್ರಾಕಾರತೋರಣಾ |

ಸ್ಫೀತಾ ರಾಷ್ಟ್ರಸಮಾಕೀರ್ಣಾ ಸಮೃದ್ಧಬಲವಾಹನಾ ||೧-೫೪-೫೭

ಆ ಪುರಿಯು ಅಟ್ಟ-ಪ್ರಾಕಾರ-ತೋರಣಗಳಿಂದ ಕೂಡಿದ್ದು ಅತಿ ದೊಡ್ಡದಾಗಿತ್ತು. ಸೇನೆ-ವಾಹನಗಳಿಂದ ಸಮೃದ್ಧವಾಗಿದ್ದು ಅದು ರಾಷ್ಟ್ರದ ಜನಸಂದಣಿಯಿಂದ ತುಂಬಿಕೊಂಡಿತ್ತು.

ಉದ್ಯಾನವನಸಂಪನ್ನಾ ಸುಸೀಮಾ ಸುಪ್ರತಿಷ್ಠಿತಾ |

ಪ್ರಾಂಶುಪ್ರಾಕಾರವಸನಾ ಪರಿಖಾಕುಲಮೇಖಲಾ ||೧-೫೪-೫೮

ಅದು ಉದ್ಯಾನವನಗಳಿಂದ ಸಂಪನ್ನವಾಗಿತ್ತು. ಅದರ ಗಡಿಯು ಉತ್ತಮವಾಗಿತ್ತು ಮತ್ತು ಸುಪ್ರತಿಷ್ಠಿತವಾಗಿತ್ತು. ಎತ್ತರದ ಕೋಟೆಗಳಿಂದ ಮುಚ್ಚಲ್ಪಟ್ಟಿತ್ತು. ಆಳವಾದ ಕೋಡಿಗಳು ಆ ಪುರಿಯನ್ನು ರಕ್ಷಿಸುತ್ತಿದ್ದವು.

ಚಯಾಟ್ಟಾಲಕಕೇಯೂರಾ ಪ್ರಾಸಾದವರಕುಂಡಲಾ |

ಸುಸಂವೃತದ್ವಾರವತೀ ಚತ್ವಾರೋದ್ಗಾರಹಾಸಿನೀ ||೧-೫೪-೫೯

ನಗರ ದ್ವಾರ ಮತ್ತು ಗೋಪುರಗಳು ಕೇಯೂರಗಳಂತೆ ಆ ಪುರಿಯನ್ನು ಅಲಂಕರಿಸಿದ್ದವು. ಪ್ರಾಸಾದಗಳು ಶ್ರೇಷ್ಠ ಕುಂಡಲಗಳಂತಿದ್ದವು. ಸುಸಂವೃತ ದ್ವಾರಗಳು ಅದರ ಮುಖದಂತಿತ್ತು ಮತ್ತು ಅದರ ನಾಲ್ಕೂ ರಸ್ತೆಗಳು ಉದ್ಗಾರದ ನಗೆಯಂತೆ ತೋರುತ್ತಿದ್ದವು.

ಅರೋಗವೀರಪುರುಷಾ ಹಸ್ತ್ಯಶ್ವರಥಸಂಕುಲಾ |

ಅರ್ಧಚಂದ್ರಪ್ರತೀಕಾಶಾ ಯಮುನಾತೀರಶೋಭಿತಾ ||೧-೫೪-೬೦

ರೋಗವಿಲ್ಲದ ವೀರಪುರುಷರಿಂದ ಮತ್ತು ಆನೆ-ಕುದುರೆ-ರಥಗಳ ಸಂಕುಲಗಳಿಂದ ತುಂಬಿದ್ದ ಮತ್ತು ಯಮುನಾತೀರದಲ್ಲಿ ಶೋಭಿಸುತ್ತಿದ್ದ ಆ ಪುರಿಯು ಅರ್ಧಚಂದ್ರನಂತೆ ಕಾಣುತ್ತಿತ್ತು.

ಪುಣ್ಯಾಪಣವತೀ ದುರ್ಗಾ ರತ್ನಸಂಚಯಗರ್ವಿತಾ |

ಕ್ಷೇತ್ರಾಣಿ ಸಸ್ಯವಂತ್ಯಸ್ಯಾಃ ಕಾಲೇ ದೇವಶ್ಚ ವರ್ಷತಿ ||೧-೫೪-೬೧

ಈ ಪುರಿಯಲ್ಲಿ ಪುಣ್ಯ ಪಣವಿದೆ. ಇದನ್ನು ಪ್ರವೇಶಿಸುವುದು ಕಷ್ಟ. ರಥಸಂಚಯದಿಂದ ಅದು ಗರ್ವಿತಗೊಂಡಿದೆ. ಇದರ ಹೊಲಗಳು ಸಸ್ಯಗಳಿಂದ ತುಂಬಿಕೊಂಡಿವೆ ಮತ್ತು ದೇವನೂ ಕೂಡ ಕಾಲಕ್ಕೆ ಮಳೆಸುರಿಸುತ್ತಾನೆ.

ನರನಾರೀಪ್ರಮುದಿತಾ ಸಾ ಪುರೀ ಸ್ಮ ಪ್ರಕಾಶತೇ |

ನಿವಿಷ್ಟವಿಷಯಶ್ಚೈವ ಶೂರಸೇನಸ್ತತೋಽಭವತ್ ||೧-೫೪-೬೨

ನರನಾರಿಯರ ಪ್ರಮೋದಗಳಿಂದ ತುಂಬಿದ್ದ ಆ ಪುರಿಯು ಪ್ರಕಾಶಿಸುತ್ತದೆ. ಇದೇ ಪ್ರದೇಶದಲ್ಲಿ ಶೂರಸೇನನು ರಾಜನಾದನು.

ತಸ್ಯಾಂ ಪುರ್ಯಾಂ ಮಹಾವೀರ್ಯೋ ರಾಜಾ ಭೋಜಕುಲೋದ್ವಹಃ |

ಉಗ್ರಸೇನ ಇತಿ ಖ್ಯಾತೋ ಮಹಾಸೇನಪರಾಕ್ರಮಃ ||೧-೫೪-೬೩

ಆ ಪುರಿಯಲ್ಲಿ ಮಹಾವೀರ್ಯ ಭೋಜಕುಲೋದ್ವಹ ರಾಜಾ ಉಗ್ರಸೇನ ಎಂದು ಖ್ಯಾತನಾದ ಮಹಾಸೇನ ಪರಾಕ್ರಮಿಯು ಖ್ಯಾತನಾಗಿದ್ದಾನೆ.

ತಸ್ಯ ಪುತ್ರತ್ವಮಾಪನ್ನೋ ಯೋಽಸೌ ವಿಷ್ಣೋ ತ್ವಯಾ ಹತಃ |

ಕಾಲನೇಮಿರ್ಮಹಾದೈತ್ಯಃ ಸಂಗ್ರಾಮೇ ತಾರಕಾಮಯೇ ||೧-೫೪-೬೪

ವಿಷ್ಣೋ! ತಾರಕಾಮಯ ಸಂಗ್ರಾಮದಲ್ಲಿ ನಿನ್ನಿಂದ ಹತನಾದ ಮಹಾದೈತ್ಯ ಕಾಲನೇಮಿಯು ಅವನ ಪುತ್ರತ್ವವನ್ನು ಪಡೆದುಕೊಂಡಿದ್ದಾನೆ.

ಕಂಸೋ ನಾಮ ವಿಶಾಲಾಕ್ಷೋ ಭೋಜವಂಶವಿವರ್ಧನಃ |

ರಾಜಾ ಪೃಥಿವ್ಯಾಂ ವಿಖ್ಯಾತಃ ಸಿಂಹವಿಸ್ಪಷ್ಟವಿಕ್ರಮಃ ||೧-೫೪-೬೫

ಕಂಸನೆಂಬ ಹೆಸರಿನ ಆ ಭೋಜವಂಶವಿವರ್ಧನನು ವಿಶಾಲಾಕ್ಷನೂ ಸಿಂಹದಂಥಹ ನಡೆ ಮತ್ತು ವಿಕ್ರಮದಿಂದ ಭೂಮಿಯಲ್ಲಿ ವಿಖ್ಯಾತ ರಾಜನೆನಿಸಿಕೊಂಡಿದ್ದಾನೆ.

ರಾಜ್ಞಾಂ ಭಯಂಕರೋ ಘೋರಃ ಶಂಕನೀಯೋ ಮಹೀಕ್ಷಿತಾಮ್ |

ಭಯದಃ ಸರ್ವಭೂತಾನಾಂ ಸತ್ಪಥಾದ್ಬಾಹ್ಯತಾಂ ಗತಃ ||೧-೫೪-೬೬

ಅವನು ರಾಜರಿಗೆ ಭಯಂಕರನೂ ಮಹೀಕ್ಷಿತರಿಗೆ ಶಂಕನೀಯನೂ ಆಗಿದ್ದಾನೆ. ಸರ್ವಭೂತಗಳಿಗೂ ಭಯದಾಯಕನಾಗಿರುವ ಅವನು ಸತ್ಪಥದಿಂದ ಹೊರಗೆ ಹೊರಟಿದ್ದಾನೆ.

ದಾರುಣಾಭಿನಿವೇಶೇನ ದಾರುಣೇನಾಂತರಾತ್ಮನಾ |

ಯುಕ್ತಸ್ತೇನೈವ ದರ್ಪೇಣ ಪ್ರಜಾನಾಂ ರೋಮಹರ್ಷಣಃ ||೧-೫೪-೬೭

ದಾರುಣನೂ ಮತ್ತು ಅಂತರಾತ್ಮದಲ್ಲಿ ಕ್ರೂರನೂ ಆಗಿದ್ದ ಆ ಕಂಸನು ತನ್ನ ಪೂರ್ವಜನ್ಮದ ದರ್ಪದಿಂದ ಪ್ರಜೆಗಳಿಗೆ ರೋಮಾಂಚಕಾರಿಯಾಗಿದ್ದಾನೆ.

ನ ರಾಜಧರ್ಮಾಭಿರತೋ ನಾತ್ಮಪಕ್ಷಸುಖಾವಹಃ |

ನಾತ್ಮರಾಜ್ಯೇ ಪ್ರಿಯಕರಶ್ಚಂಡಃ ಕರರುಚಿಃ ಸದಾ ||೧-೫೪-೬೮

ರಾಜಧರ್ಮದಲ್ಲಿ ಅವನಿಗೆ ಅಭಿರುಚಿಯಿಲ್ಲದಾಗಿದೆ. ಅವನ ಪಕ್ಷದವರಿಗೂ ಕೂಡ ಸುಖವನ್ನು ನೀಡದವನಾಗಿದ್ದಾನೆ. ತನ್ನ ರಾಜ್ಯದವರಿಗೂ ಪ್ರಿಯವಾದುದನ್ನು ಮಾಡುತ್ತಿಲ್ಲ. ಸದಾ ಅತ್ಯಂತ ಕೋಪಿಷ್ಟನೂ ಮತ್ತು ಪ್ರಜೆಗಳಿಂದ ಕೇವಲ ಕರವನ್ನು ಪಡೆದುಕೊಳ್ಳುವುದರಲ್ಲಿ ಆಸಕ್ತನೂ ಆಗಿದ್ದಾನೆ.

ಸ ಕಂಸಸ್ತತ್ರ ಸಂಭೂತಸ್ತ್ವಯಾ ಯುದ್ಧೇ ಪರಾಜಿತಃ |

ಕ್ರವ್ಯಾದೋ ಬಾಧತೇ ಲೋಕಾನಾಸುರೇಣಾಂತರಾತ್ಮನಾ ||೧-೫೪-೬೯

ಯುದ್ಧದಲ್ಲಿ ನಿನ್ನಿಂದ ಪರಾಜಿತನಾದ ಕಾಲನೇಮಿಯೇ ಈಗ ಅಲ್ಲಿ ಕಂಸನಾಗಿ ಪ್ರಕಟಗೊಂಡಿದ್ದಾನೆ. ಅಂತರಾತ್ಮದಲ್ಲಿ ಅಸುರೀಭಾವನಾಗಿರುವ ಆ ಮಾಂಸಾಶಿಯು ಲೋಕಗಳನ್ನು ಬಾಧಿಸುತ್ತಿದ್ದಾನೆ.

ಯೋಽಪ್ಯಸೌ ಹಯವಿಕ್ರಾಂತೋ ಹಯಗ್ರೀವ ಇತಿ ಸ್ಮೃತಃ |

ಕೇಶೀ ನಾಮ ಹಯೋ ಜಾತಃ  ಸ ತಸ್ಯೈವ ಜಘನ್ಯಜಃ ||೧-೫೪-೭೦

ಅವನೂ ಅಲ್ಲದೇ ಹಿಂದೆ ಹಯವಿಕ್ರಾಂತ ಹಯಗ್ರೀವನೆಂದು ವಿಖ್ಯಾತನಾಗಿದ್ದ ದೈತ್ಯನು ಕೇಶೀ ಎಂಬ ಕುದುರೆಯಾಗಿ ಹುಟ್ಟಿದ್ದಾನೆ. ಈಗ ಅವನು ಕಂಸನ ತಮ್ಮನಂತಿದ್ದಾನೆ.

ಸ ದುಷ್ಟೋ ಹೇಷಿತಪಟುಃ ಕೇಸರೀ ನಿರವಗ್ರಹಃ |

ವೃಂದಾವನೇ ವಸತ್ಯೇಕೋ ನೃಣಾಂ ಮಾಂಸಾನಿ ಭಕ್ಷಯನ್ ||೧-೫೪-೭೧

ಹೇಂಕಾರದಲ್ಲಿ ಪಟುವಾಗಿರುವ ಆ ಕೇಸರೀ ದುಷ್ಟನನ್ನು ಯಾರೂ ನಿಯಂತ್ರಿಸಲಾರರು. ಅವನು ಒಬ್ಬನೇ ವೃಂದಾವನದಲ್ಲಿ ವಾಸಿಸುತ್ತಾ ನರರ ಮಾಂಸವನ್ನು ಭಕ್ಷಿಸುತ್ತಿದ್ದಾನೆ.

ಅರಿಷ್ಟೋ ಬಲಿಪುತ್ರಶ್ಚ ಕಕುದ್ಮೀ ವೃಷರೂಪಧೃಕ್ |

ಗವಾಮರಿತ್ವಮಾಪನ್ನಃ ಕಾಮರೂಪೀ ಮಹಾಸುರಃ ||೧-೫೪-೭೨

ಬಲಿಯ ಮಗ ಅರಿಷ್ಟನು ಉನ್ನತ ಭುಜವುಳ್ಳ ಹೋರಿಯ ರೂಪವನ್ನು ಧರಿಸಿ ಪ್ರಕಟಗೊಂಡಿದ್ದಾನೆ. ಆ ಕಾಮರೂಪೀ ಮಹಾಸುರನು ಗೋವುಗಳ ಶತ್ರುವಾಗಿಬಿಟ್ಟಿದ್ದಾನೆ.

ರಿಷ್ಟೋ ನಾಮ ದಿತೇಃ ಪುತ್ರೋ ವರಿಷ್ಠೋ ದಾನವೇಷು ಯಃ |

ಸ ಕುಂಜರತ್ವಮಾಪನ್ನೋ ದೈತ್ಯಃ ಕಂಸಸ್ಯ ವಾಹನಃ ||೧-೫೪-೭೩

ದಾನವರಲ್ಲಿಯೇ ವರಿಷ್ಠನಾಗಿರುವ ದಿತಿಯ ಪುತ್ರ ರಿಷ್ಟ ಎನ್ನುವವನು ಆನೆಯ ರೂಪವನ್ನು ತಾಳಿ ದೈತ್ಯ ಕಂಸನ ವಾಹನವಾಗಿದ್ದಾನೆ.

ಲಂಬೋ ನಾಮೇತಿ ವಿಖ್ಯಾತೋ ಯೋಽಸೌ ದೈತ್ಯೇಷು ದರ್ಪಿತಃ |

ಪ್ರಲಂಬೋ ನಾಮ ದೈತ್ಯೋಽಸೌ ವಟಂ ಭಾಂಡೀರಮಾಶ್ರಿತಃ ||೧-೫೪-೭೪

ದೈತ್ಯರಲ್ಲಿಯೇ ದರ್ಪಿತನಾಗಿದ್ದ ಲಂಬ ಎಂಬ ಹೆಸರಿನ ವಿಖ್ಯಾತ ದೈತ್ಯನು ಈಗ ಪ್ರಲಂಬ ಎಂಬ ಹೆಸರಿನಿಂದ ಭಾಂಡೀರ ವಟವನ್ನು ಆಶ್ರಯಿಸಿದ್ದಾನೆ.

ಖರ ಇತ್ಯುಚ್ಯತೇ ದೈತ್ಯೋ ಧೇನುಕಃ ಸೋಽಸುರೋತ್ತಮಃ |

ಘೋರಂ ತಾಲವನಂ ದೈತ್ಯಶ್ಚರತ್ಯುದ್ವಾಸಯನ್ಪ್ರಜಾಃ ||೧-೫೪-೭೫

ಖರ ಎಂಬ ದೈತ್ಯನು ಈಗ ಧೇನುಕನೆಂಬ ಅಸುರೋತ್ತಮನಾಗಿದ್ದಾನೆ. ಆ ದೈತ್ಯನು ಪ್ರಜೆಗಳನ್ನು ಪೀಡಿಸುತ್ತಾ ಈಗ ಘೋರ ತಾಲವನದಲ್ಲಿ ಸಂಚರಿಸುತ್ತಿದ್ದಾನೆ.

ವಾರಾಹಶ್ಚ ಕಿಶೋರಶ್ಚ ದಾನವೌ ಯೌ ಮಹಾಬಲೌ |

ಮಲ್ಲೌ ರಂಗಗತೌ ತೌ ತು ಜಾತೌ ಚಾಣೂರಮುಷ್ಟಿಕೌ ||೧-೫೪-೭೬

ಹಿಂದೆ ವಾರಾಹ ಮತ್ತು ಕಿಶೋರರೆಂಬಿದ್ದ ಮಹಾಬಲಶಾಲೀ ದಾನವರು ಈಗ ಚಾಣೂರ-ಮುಷ್ಟಿಕರೆಂಬ ಮಲ್ಲರಾಗಿ ಪ್ರಸಿದ್ಧರಾಗಿದ್ದಾರೆ.

ಯೌ ತೌ ಮಯಶ್ಚ ತಾರಶ್ಚ ದಾನವೌ ದಾನವಾಂತಕ |

ಪ್ರಾಗ್ಜ್ಯೋತಿಷೇ ತೌ ಭೌಮಸ್ಯ ನರಕಸ್ಯ ಪುರೇ ರತೌ ||೧-೫೪-೭೭

ದಾನವಾಂತಕ! ಮಯ ಮತ್ತು ತಾರ ಎಂಬ ದಾನವರಿಬ್ಬರೂ ಈಗ ಭೂಮಿಪುತ್ರ ನರಕನ ಪುರಿ ಪ್ರಾಜ್ಜ್ಯೋತಿಷದಲ್ಲಿ ವಾಸಿಸುತ್ತಿದ್ದಾರೆ.

ಏತೇ ದೈತ್ಯಾ ವಿನಿಹತಾಸ್ತ್ವಯಾ ವಿಷ್ಣೋ ನಿರಾಕೃತಾಃ |

ಮಾನುಷಂ ವಪುರಾಸ್ಥಾಯ ಬಾಧಂತೇ ಭುವಿ ಮಾನುಷಾನ್ ||೧-೫೪-೭೮

ವಿಷ್ಣೋ! ನಿನ್ನಿಂದ ಪರಾಜಿತಗೊಂಡು ಹತರಾದ ಈ ದೈತ್ಯರು ಭುವಿಯಲ್ಲಿ ಮಾನುಷ ರೂಪವನ್ನು ಪಡೆದು ಮನುಷ್ಯರನ್ನು ಬಾಧಿಸುತ್ತಿದ್ದಾರೆ.

ತ್ವತ್ಕಥಾದ್ವೇಷಿಣಃ ಸರ್ವೇ ತ್ವದ್ಭಕ್ತಾನ್ಘ್ನಂತಿ ಮಾನುಷಾನ್ |

ತವ ಪ್ರಸಾದಾತ್ತೇಷಾಂ ವೈ ದಾನವಾನಾಂ ಕ್ಷಯೋ ಭವೇತ್ ||೧-೫೪-೭೯

ನಿನ್ನ ಕುರಿತು ದ್ವೇಷವನ್ನಿಟ್ಟುಕೊಂಡಿರುವ ಅವರೆಲ್ಲರೂ ನಿನ್ನ ಮನುಷ್ಯ ಭಕ್ತರನ್ನು ಕೊಲ್ಲುತ್ತಿದ್ದಾರೆ. ನಿನ್ನ ಪ್ರಸಾದದಿಂದ ಅ ದಾನವರ ಕ್ಷಯವು ಆಗಬಲ್ಲದು.

ತ್ವತ್ತಸ್ತೇ ಬಿಭ್ಯತಿ ದಿವಿ ತ್ವತ್ತೋ ಬಿಭ್ಯತಿ ಸಾಗರೇ |

ಪೃಥಿವ್ಯಾಂ ತವ ಬಿಭ್ಯಂತಿ ನಾನ್ಯತಸ್ತು ಕದಾಚನ ||೧-೫೪-೮೦

ದಿವಿಯಲ್ಲಿ ಅವರಿಗೆ ನಿನ್ನ ಭಯವಿದೆ. ಸಾಗರದಲ್ಲಿ ಅವರಿಗೆ ನಿನ್ನ ಭಯವಿದೆ. ಪೃಥ್ವಿಯಲ್ಲಿಯೂ ಅವರಿಗೆ ನಿನ್ನ ಭಯವಿದೆ. ಅವರಿಗೆ ಬೇರೆ ಯಾರದ್ದೂ ಭಯವಿಲ್ಲ.

ದುರ್ವೃತ್ತಸ್ಯ ಹತಸ್ಯಾಪಿ ತ್ವಯಾ ನಾನ್ಯೇನ ಶ್ರೀಧರ |

ದಿವಶ್ಚ್ಯುತಸ್ಯ ದೈತ್ಯಸ್ಯ ಗತಿರ್ಭವತಿ ಮೇದಿನೀ ||೧-೫೪-೮೧

ಶ್ರೀಧರ! ಈ ದುರ್ವೃತ್ತರೂ ಕೂಡ ನಿನ್ನಿಂದಲ್ಲದೇ ಬೇರೆ ಯಾರಿಂದಲೂ ಹತರಾಗುವವರಲ್ಲ. ಆದರೆ ದಿವದಿಂದ ಚ್ಯುತರಾದ ದೈತ್ಯರಿಗೆ ಮೇದಿನಿಯೇ ಗತಿಯಾಗುತ್ತಾಳೆ[1].

ವ್ಯುತ್ಥಿತಸ್ಯ ಚ ಮೇದಿನ್ಯಾಂ ಹತಸ್ಯ ನೃಶರೀರಿಣಃ |

ದುರ್ಲಭಂ ಸ್ವರ್ಗಗಮನಂ ತ್ವಯಿ ಜಾಗ್ರತಿ ಕೇಶವ ||೧-೫೪-೮೨

ಕೇಶವ! ನೀನು ಜಾಗೃತನಾಗಿರುವಾಗ, ಮೇದಿನಿಯಲ್ಲಿ ಇನ್ನೊಬ್ಬರಿಂದ ಹತರಾದ ಮನುಷ್ಯ ಶರೀರದಲ್ಲಿರುವ ಅವರಿಗೆ ಸ್ವರ್ಗಗಮನವು ದುರ್ಲಭವಾಗುವುದು.

ತದಾಗಚ್ಛ ಸ್ವಯಂ ವಿಷ್ಣೋ ಗಚ್ಛಾಮಃ ಪೃಥಿವೀತಲಮ್ |

ದಾನವಾನಾಂ ವಿನಾಶಾಯ ವಿಸೃಜಾತ್ಮಾನಮಾತ್ಮನಾ  ||೧-೫೪-೮೩

ಆದುದರಿಂದ ವಿಷ್ಣೋ! ನೀನು ಸ್ವಯಂ ಹೋಗು! ಕೆಳಗೆ ಭೂಮಿಗೆ ಹೋಗೋಣ! ದಾನವರ ವಿನಾಶಕ್ಕಾಗಿ ನಿನ್ನನ್ನು ನೀನೇ ಪ್ರಕಟಗೊಳಿಸು.

ಮೂರ್ತಯೋ ಹಿ ತವಾವ್ಯಕ್ತಾ ದೃಶ್ಯಾದೃಶ್ಯಾಃ ಸುರೋತ್ತಮೈಃ |

ತಾಸು ಸೃಷ್ಟಾಸ್ತ್ವಯಾ ದೇವಾಃ ಸಂಭವಿಷ್ಯಂತಿ ಭೂತಲೇ ||೧-೫೪-೮೪

ಏಕೆಂದರೆ ನಿನ್ನ ಹಲವಾರು ಮೂರ್ತಿಗಳು ಅವ್ಯಕ್ತವಾಗಿವೆ. ಸುರೋತ್ತಮರಿಗೂ ಸ್ವಲ್ಪ ಕಾಣುತ್ತದೆ ಸ್ವಲ್ಪ ಕಾಣುವುದಿಲ್ಲ. ನಿನ್ನಿಂದ ಸೃಷ್ಟಿಸಲ್ಪಟ್ಟ ದೇವತೆಗಳು ಆಯಾ ಮೂರ್ತಿಗಳಲ್ಲಿಯೇ ಪ್ರಕಟರಾಗುತ್ತಾರೆ.

ತವಾವತರಣೇ ವಿಷ್ಣೋ ಕಂಸಃ ಸ ವಿನಶಿಷ್ಯತಿ |

ಸೇತ್ಸ್ಯತೇ ಚ ಸ ಕಾರ್ಯಾರ್ಥೋ ಯಸ್ಯಾರ್ಥೇ ಭೂಮಿರಾಗತಾ ||೧-೫೪-೮೫

ವಿಷ್ಣೋ! ನಿನ್ನ ಅವತಾರದದಿಂದಲೇ ಕಂಸನು ನಾಶನಾಗುತ್ತಾನೆ ಮತ್ತು ಯಾವ ಕಾರ್ಯಾರ್ಥವಾಗಿ ಭೂಮಿಯು ಇಲ್ಲಿಗೆ ಆಗಮಿಸಿದ್ದಳೋ ಅದು ಪ್ರಯೋಜನಗೊಳ್ಳುತ್ತದೆ.

ತ್ವಂ ಭಾರತೇ ಕಾರ್ಯಗುರುಸ್ತ್ವಂ ಚಕ್ಷುಸ್ತ್ವಂ ಪರಾಯಣಮ್ |

ತದಾಗಚ್ಛ ಹೃಷೀಕೇಶ ಕ್ಷಿತೌ ತಾಂಜಹಿ ದಾನವಾನ್ ||೧-೫೪-೮೬

ಹೃಷೀಕೇಶ! ನೀನು ಭಾರತದಲ್ಲಿ ಗುರುತರ ಕಾರ್ಯವನ್ನೆಸಗಬೇಕಾಗಿದೆ. ನೀನೇ ಎಲ್ಲರಿಗೂ ಕಣ್ಣು ಮತ್ತು ಪರಮ ಆಶ್ರಯನು. ಆದುದರಿಂದ ಹೋಗು! ಕ್ಷಿತಿಯಲ್ಲಿರುವ ಆ ದಾನವರನ್ನು ಸಂಹರಿಸು!”

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ನಾರದವಾಕ್ಯೇ ಚತುಃಪಂಚಾಶತ್ತಮೋಽಧ್ಯಾಯಃ

 

[1] ಶ್ರೀಧರ! ನಿನ್ನಿಂದ ಮಾತ್ರ ಯಾರು ಸಾಯಬಲ್ಲರೋ, ಬೇರೆಯವರಿಂದ ಅಲ್ಲ, ಆ ದೈತ್ಯನಿಗೆ, ಅವನು ದುರಾಚಾರಿಯಲ್ಲದಿದ್ದರೂ, ನಿನ್ನನ್ನೇ ಹೊಂದುತ್ತಾರೆ. ಆದರೆ ಅರು ಇನ್ನೊಬ್ಬರಿಂದ ಹತರಾದರೋ ಆ ದೈತ್ಯರು ಸ್ವರ್ಗದಿಂದ ಭ್ರಷ್ಟರಾದರೆ ಪೃಥ್ವಿಯಲ್ಲಿಯೇ ಜನ್ಮತಳೆಯುತ್ತಾರೆ (ಗೀತಾ ಪ್ರೆಸ್).

Comments are closed.