ವ್ಯಾಸನು ಧೃತರಾಷ್ಟ್ರಾದಿಗಳಿಗೆ ಯುದ್ಧದಲ್ಲಿ ಮಡಿದ ದುರ್ಯೋಧನಾದಿ ಯೋದ್ಧರನ್ನು ತೋರಿಸಿದುದು

ವ್ಯಾಸನು ಧೃತರಾಷ್ಟ್ರಾದಿಗಳಿಗೆ ಯುದ್ಧದಲ್ಲಿ ಮಡಿದ ದುರ್ಯೋಧನಾದಿ ಯೋದ್ಧರನ್ನು ತೋರಿಸಿದುದು ಪಾಂಡವಶೋಕ ಕೌರವೇಂದ್ರನು ವನಕ್ಕೆ ತೆರಳಿದ ನಂತರ ಪಾಂಡವರು ಮಾತೃಶೋಕದಿಂದ ಪೀಡಿತರಾಗಿ ದುಃಖಶೋಕಗಳಿಂದ ಪರಿತಪಿಸಿದರು. ಹಾಗೆಯೇ ಪೌರಜನರೆಲ್ಲರೂ ಜನಾಧಿಪನ ಕುರಿತು ಶೋಕಿಸುತ್ತಿದ್ದರು. ರಾಜನ ಕುರಿತು ಬ್ರಾಹ್ಮಣರು ಅಲ್ಲಲ್ಲಿ ಈ ರೀತಿ ಮಾತನಾಡಿಕೊಳ್ಳುತ್ತಿದ್ದರು: “ವೃದ್ಧ ರಾಜನು ನಿರ್ಜನ ವನದಲ್ಲಿ ಹೇಗೆ ತಾನೇ ವಾಸಿಸುತ್ತಾನೆ? ಮಹಾಭಾಗೆ ಗಾಂಧಾರಿಯೂ ಪೃಥೆ ಕುಂತಿಯೂ ಹೇಗೆ ಜೀವಿಸುತ್ತಿದ್ದಾರೆ? ಸುಖಾರ್ಹನೂ ಮಕ್ಕಳನ್ನು ಕಳೆದುಕೊಂಡವನೂ ಆದ ಆ ಪ್ರಜ್ಞಾಚಕ್ಷು ರಾಜರ್ಷಿಯು ಆ…

Continue reading

ದಾವಾಗ್ನಿಯಲ್ಲಿ ಧೃತರಾಷ್ಟ್ರಾದಿಗಳ ದಹನ

ದಾವಾಗ್ನಿಯಲ್ಲಿ ಧೃತರಾಷ್ಟ್ರಾದಿಗಳ ದಹನ ಹಸ್ತಿನಾಪುರಕ್ಕೆ ನಾರದನ ಆಗಮನ ಪಾಂಡವರು ಹಿಂದಿರುಗಿ ಎರಡು ವರ್ಷಗಳಾದನಂತರ ದೇವರ್ಷಿ ನಾರದನು ರಾಜ ಯುಧಿಷ್ಠಿರನಲ್ಲಿಗೆ ಆಗಮಿಸಿದನು. ಕುರುರಾಜ ಯುಧಿಷ್ಠಿರನು ಅವನನ್ನು ಅರ್ಚಿಸಿದನು. ವಿಶ್ರಮಿಸಿಕೊಂಡು ಆಸನದಲ್ಲಿ ಕುಳಿತಿದ್ದ ನಾರದನಿಗೆ ವಾಗ್ಮಿಶ್ರೇಷ್ಠ ಯುಧಿಷ್ಠಿರನು ಹೇಳಿದನು: “ವಿಪ್ರ! ಬಹುದಿನಗಳ ನಂತರ ನಿಮ್ಮ ಆಗಮನವನ್ನು ನಾನು ಕಾಣುತ್ತಿದ್ದೇನೆ. ನೀವು ಕುಶಲರಾಗಿದ್ದೀರಿ ತಾನೆ? ಎಲ್ಲವೂ ಶುಭವಾಗಿದೆಯಲ್ಲವೇ? ಇಲ್ಲಿ ಬರುವ ಮೊದಲು ಯಾವ ಪ್ರದೇಶಗಳನ್ನು ನೋಡಿದ್ದಿರಿ? ನಿಮಗೆ ನಾನು ಯಾವ ಕಾರ್ಯವನ್ನು ಮಾಡಲಿ? ದ್ವಿಜಮುಖ್ಯ!…

Continue reading

ಯಾದವರ ವಿನಾಶ; ಕೃಷ್ಣಾವತಾರ ಸಮಾಪ್ತಿ

ಯಾದವರ ವಿನಾಶ; ಕೃಷ್ಣಾವತಾರ ಸಮಾಪ್ತಿ ಯುಧಿಷ್ಠಿರನಿಗೆ ಉತ್ಪಾತದರ್ಶನ ಮಹಾಭಾರತ ಯುದ್ಧವು ಮುಗಿದು ಮೂವತ್ತಾರನೆಯ ವರ್ಷವು ಬರಲು ಕೌರವನಂದನ ಯುಧಿಷ್ಠಿರನು ವಿಪರೀತ ನಿಮಿತ್ತಗಳನ್ನು ಕಂಡನು. ಕಲ್ಲು ಮರಳುಗಳೊಂದಿಗೆ ಭಿರುಸಾದ ಒಣ ಗಾಳಿಯು ಎಲ್ಲ ಕಡೆಗಳಿಂದ ಬೀಸತೊಡಗಿತು. ಪಕ್ಷಿಗಳು ಅಪ್ರದಕ್ಷಿಣೆಯಾಗಿ ಸುತ್ತತೊಡಗಿದವು. ಮಹಾನದಿಗಳು ವಿರುದ್ಧ ದಿಕ್ಕಿನಲ್ಲಿ ಹರಿಯತೊಡಗಿದವು. ದಿಕ್ಕುಗಳಲ್ಲಿ ಸದಾ ಮುಸುಕು ಕವಿದಿತ್ತು. ಬೆಂಕಿಯ ಉಂಡೆಗಳನ್ನು ಸುರಿಸುತ್ತಾ ಉಲ್ಕೆಗಳು ಗಗನದಿಂದ ಭೂಮಿಯ ಮೇಲೆ ಬಿದ್ದವು. ಸೂರ್ಯಮಂಡಲವು ಯಾವಾಗಲೂ ಧೂಳಿನಿಂದ ಮುಸುಕಿದಂತೆ ತೋರುತ್ತಿತ್ತು. ನಿತ್ಯವೂ…

Continue reading

ಮಹಾಪ್ರಸ್ಥಾನ

ಮಹಾಪ್ರಸ್ಥಾನ ಪಾಂಡವಪ್ರವ್ರಜನ ವೃಷ್ಣಿಗಳ ಮಹಾ ಕದನದ ಕುರಿತು ಕೇಳುತ್ತಲೇ ಕೌರವ ರಾಜ ಯುಧಿಷ್ಠಿರನು ಪ್ರಸ್ಥಾನದ ಕುರಿತು ನಿಶ್ಚಯಿಸಿ ಅರ್ಜುನನಿಗೆ ಇಂತೆಂದನು: “ಮಹಾಮತೇ! ಕಾಲವು ಸರ್ವ ಭೂತಗಳನ್ನೂ ಬೇಯಿಸುತ್ತದೆ. ಕರ್ಮನ್ಯಾಸಮಾಡಬೇಕೆಂದು ನನಗನ್ನಿಸುತ್ತದೆ. ನೀನೂ ಕೂಡ ಇದರ ಕುರಿತು ಯೋಚಿಸಬೇಕಾಗಿದೆ.” ಇದನ್ನು ಕೇಳಿದ ವೀರ್ಯವಾನ್ ಕೌಂತೇಯನು “ಕಾಲವೇ ಕಾಲ!” ಎಂದು ಹೇಳುತ್ತಾ ಜ್ಯೇಷ್ಠ ಭ್ರಾತರನ ಆ ಮಾತನ್ನು ಒಪ್ಪಿಕೊಂಡನು. ಅರ್ಜುನನ ಮತವನ್ನು ಅರಿತ ಭೀಮಸೇನ ಮತ್ತು ಯಮಳರು ಸವ್ಯಸಾಚಿಯು ಆಡಿದ ಆ ಮಾತನ್ನು…

Continue reading

ಯುಧಿಷ್ಠಿರನ ಸ್ವರ್ಗಾರೋಹಣ

ಯುಧಿಷ್ಠಿರನ ಸ್ವರ್ಗಾರೋಹಣ ಸ್ವರ್ಗದಲ್ಲಿ ನಾರದವಾಕ್ಯ ಧರ್ಮರಾಜ ಯುಧಿಷ್ಠಿರನು ತ್ರಿವಿಷ್ಟಪ ಸ್ವರ್ಗವನ್ನು ತಲುಪಿ ಅಲ್ಲಿ ದುರ್ಯೋಧನನು ರಾಜಕಳೆಯಿಂದ, ಆದಿತ್ಯನಂತೆ ಪ್ರಕಾಶಿಸುತ್ತಾ ವೀರನ ವಿಜೃಂಭಣೆಯಿಂದ, ಪುಣ್ಯಕರ್ಮಿ ಸಾಧ್ಯರು ಮತ್ತು ದೇವತೆಗಳೊಂದಿಗೆ ಆಸನದಲ್ಲಿ ಕುಳಿತಿರುವುದನ್ನು ನೋಡಿದನು. ಅಲ್ಲಿ ದುರ್ಯೋಧನನನ್ನು ನೋಡಿ ಸಹಿಸಿಕೊಳ್ಳಲಾರದೇ ಯುಧಿಷ್ಠಿರನು ಸುಯೋಧನನು ಕಂಡೊಡನೆಯೇ ತಿರುಗಿ ಜೋರಾದ ಧ್ವನಿಯಲ್ಲಿ ಕೂಗಿ ಹೇಳಿದನು: “ನಾನು ದುರ್ಯೋಧನನೊಂದಿಗೆ ಈ ಲೋಕಗಳನ್ನು ಅನುಭವಿಸಲು ಬಯಸುವುದಿಲ್ಲ. ಮುಂದಾಲೋಚನೆಯಿಲ್ಲದ ಈ ಲುಬ್ಧನು ಮಾಡಿದ ಕರ್ಮಗಳಿಂದಾಗಿ ಭೂಮಿಯ ಸರ್ವ ಸುಹೃದಯರೂ ಬಾಂಧವರೂ…

Continue reading