ಆರಣ್ಯಕ ಪರ್ವ: ಯಕ್ಷಯುದ್ಧ ಪರ್ವ
೧೬೪
ತನ್ನ ದೇವಲೋಕ ಪ್ರಯಾಣದ ಅರ್ಜುನನು ವರದಿ ಮಾಡಿದುದು
ಅರ್ಜುನನು ಲೋಕಪಾಲರಿಂದ ಅಸ್ತ್ರಗಳನ್ನು ಪಡೆದುದನ್ನು ವರ್ಣಿಸಿದುದು (೧-೧೮). ಇಂದ್ರನು ಅರ್ಜುನನಿಗೆ ಸ್ವರ್ಗಕ್ಕೆ ಬರಲು ಹೇಳಿ ತೆರಳಿದುದು (೧೯-೩೧). ಅರ್ಜುನನು ಸಶರೀರನಾಗಿ ಸರ್ಗಕ್ಕೆ ಮಾತಲಿಯು ನಡೆಸಿದ ಯಾನದಲ್ಲಿ ಪ್ರಯಾಣಿಸಿದುದು (೩೨-೪೦). ಅರ್ಜುನನು ಸ್ವರ್ಗದಲ್ಲಿ ತಾನು ಕಂಡಿದುದನ್ನು, ಕಲಿತಿದ್ದುದನ್ನು ವರ್ಣಿಸಿದುದು (೪೧-೫೮).
03164001 ಅರ್ಜುನ ಉವಾಚ|
03164001a ತತಸ್ತಾಮವಸಂ ಪ್ರೀತೋ ರಜನೀಂ ತತ್ರ ಭಾರತ|
03164001c ಪ್ರಸಾದಾದ್ದೇವದೇವಸ್ಯ ತ್ರ್ಯಂಬಕಸ್ಯ ಮಹಾತ್ಮನಃ||
ಅರ್ಜುನನು ಹೇಳಿದನು: “ಭಾರತ! ಮಹಾತ್ಮ ದೇವದೇವ ತ್ರ್ಯಂಬಕನ ಪ್ರಸಾದದಿಂದ ಪ್ರೀತನಾಗಿ ನಾನು ಆ ರಾತ್ರಿಯನ್ನು ಅಲ್ಲಿಯೇ ಕಳೆದೆನು.
03164002a ವ್ಯುಷಿತೋ ರಜನೀಂ ಚಾಹಂ ಕೃತ್ವಾ ಪೂರ್ವಾಃಣಿಕಕ್ರಿಯಾಂ|
03164002c ಅಪಶ್ಯಂ ತಂ ದ್ವಿಜಶ್ರೇಷ್ಠಂ ದೃಷ್ಟವಾನಸ್ಮಿ ಯಂ ಪುರಾ||
ರಾತ್ರಿಯನ್ನು ಕಳೆದು, ಪೂರ್ವಾಹ್ನಿಕಕ್ರಿಯೆಗಳನ್ನು ಮಾಡಿ ನಾನು ಹಿಂದೆ ನೋಡಿದ್ದ ದ್ವಿಜಶ್ರೇಷ್ಠನನ್ನು ನೋಡಿದೆ.
03164003a ತಸ್ಮೈ ಚಾಹಂ ಯಥಾವೃತ್ತಂ ಸರ್ವಮೇವ ನ್ಯವೇದಯಂ|
03164003c ಭಗವಂತಂ ಮಹಾದೇವಂ ಸಮೇತೋಽಸ್ಮೀತಿ ಭಾರತ||
ಭಾರತ! ನಾನು ಅವನಿಗೆ ಭಗವಂತ ಮಹಾದೇವನನ್ನು ಭೇಟಿಮಾಡಿದೆ ಎಂದೂ ಮತ್ತು ನಡೆದುದೆಲ್ಲವನ್ನೂ ಹೇಳಿದೆ.
03164004a ಸ ಮಾಮುವಾಚ ರಾಜೇಂದ್ರ ಪ್ರೀಯಮಾಣೋ ದ್ವಿಜೋತ್ತಮಃ|
03164004c ದೃಷ್ಟಸ್ತ್ವಯಾ ಮಹಾದೇವೋ ಯಥಾ ನಾನ್ಯೇನ ಕೇನ ಚಿತ್||
ರಾಜೇಂದ್ರ! ಆ ದ್ವಿಜೋತ್ತಮನು ಪ್ರೀತನಾಗಿ ನನಗೆ ಹೇಳಿದನು: “ಮಹಾದೇವನನ್ನು ನೀನು ನೋಡಿದಹಾಗೆ ಬೇರೆ ಯಾರೂ ಮಾಡಿಲ್ಲ.
03164005a ಸಮೇತ್ಯ ಲೋಕಪಾಲೈಸ್ತು ಸರ್ವೈರ್ವೈವಸ್ವತಾದಿಭಿಃ|
03164005c ದ್ರಷ್ಟಾಸ್ಯನಘ ದೇವೇಂದ್ರಂ ಸ ಚ ತೇಽಸ್ತ್ರಾಣಿ ದಾಸ್ಯತಿ||
ನೀನು ವೈವಸ್ವತರೇ ಮೊದಲಾದ ಲೋಕಪಾಲರನ್ನೂ ಭೇಟಿಮಾಡುತ್ತೀಯೆ. ಅನಂತರ ಅನಘ! ನೀನು ದೇವೇಂದ್ರನನ್ನು ನೋಡುತ್ತೀಯೆ ಮತ್ತು ಅವನೂ ಕೂಡ ನಿನಗೆ ಅಸ್ತ್ರಗಳನ್ನು ಕೊಡುತ್ತಾನೆ.”
03164006a ಏವಮುಕ್ತ್ವಾ ಸ ಮಾಂ ರಾಜನ್ನಾಶ್ಲಿಷ್ಯ ಚ ಪುನಃ ಪುನಃ|
03164006c ಅಗಚ್ಚತ್ಸ ಯಥಾಕಾಮಂ ಬ್ರಾಹ್ಮಣಃ ಸೂರ್ಯಸನ್ನಿಭಃ||
ರಾಜನ್! ಹೀಗೆ ಹೇಳಿ ಆ ಸೂರ್ಯಸನ್ನಿಭ ಬ್ರಾಹ್ಮಣನು ನನ್ನನ್ನು ಪುನಃ ಪುನಃ ಆಲಂಗಿಸಿ ಬಯಸಿದ ಕಡೆ ಹೊರಟುಹೋದನು.
03164007a ಅಥಾಪರಾಹ್ಣೇ ತಸ್ಯಾಹ್ನಃ ಪ್ರಾವಾತ್ಪುಣ್ಯಃ ಸಮೀರಣಃ|
03164007c ಪುನರ್ನವಮಿಮಂ ಲೋಕಂ ಕುರ್ವನ್ನಿವ ಸಪತ್ನಹನ್||
ಅರಿಮರ್ದನ! ಆ ದಿನದ ಮಧ್ಯಾಹ್ನದ ನಂತರ ಲೋಕವನ್ನೇ ಪುನಃ ಹೊಸತಾಗಿ ಮಾಡುತ್ತಿದೆಯೋ ಎನ್ನುವಂತಹ ಪುಣ್ಯ ಗಾಳಿಯು ಬೀಸತೊಡಗಿತು
03164008a ದಿವ್ಯಾನಿ ಚೈವ ಮಾಲ್ಯಾನಿ ಸುಗಂಧೀನಿ ನವಾನಿ ಚ|
03164008c ಶೈಶಿರಸ್ಯ ಗಿರೇಃ ಪಾದೇ ಪ್ರಾದುರಾಸನ್ಸಮೀಪತಃ||
ನನ್ನ ಹತ್ತಿರದಲ್ಲಿಯೇ ಶೈಶಿರ ಗಿರಿಯ ತಪ್ಪಲಿನಲ್ಲಿ ದಿವ್ಯ ಸುಗಂಧಯುಕ್ತ ಹೊಸ ಹೂವುಗಳ ಮಾಲೆಗಳು ಕಾಣಿಸಿಕೊಂಡವು.
03164009a ವಾದಿತ್ರಾಣಿ ಚ ದಿವ್ಯಾನಿ ಸುಘೋಷಾಣಿ ಸಮಂತತಃ|
03164009c ಸ್ತುತಯಶ್ಚೇಂದ್ರಸಂಯುಕ್ತಾ ಅಶ್ರೂಯಂತ ಮನೋಹರಾಃ||
ಎಲ್ಲಕಡೆಯಿಂದಲೂ ದಿವ್ಯ ವಾದ್ಯಗಳ ಸುಘೋಷವು, ಇಂದ್ರನ ಮನೋಹರ ಸ್ತುತಿಗಳು ಕೇಳಿಬಂದವು.
03164010a ಗಣಾಶ್ಚಾಪ್ಸರಸಾಂ ತತ್ರ ಗಂಧರ್ವಾಣಾಂ ತಥೈವ ಚ|
03164010c ಪುರಸ್ತಾದ್ದೇವದೇವಸ್ಯ ಜಗುರ್ಗೀತಾನಿ ಸರ್ವಶಃ||
ಅಲ್ಲಿ ಎಲ್ಲ ಅಪ್ಸರೆ ಮತ್ತು ಗಂಧರ್ವ ಗಣಗಳು ದೇವದೇವನ ಜಯಗೀತೆಗಳನ್ನು ಹಾಡುತ್ತಾ ಮುಂದೆ ಬರುತ್ತಿದ್ದರು.
03164011a ಮರುತಾಂ ಚ ಗಣಾಸ್ತತ್ರ ದೇವಯಾನೈರುಪಾಗಮನ್|
03164011c ಮಹೇಂದ್ರಾನುಚರಾ ಯೇ ಚ ದೇವಸದ್ಮನಿವಾಸಿನಃ||
ಮರುತರ ಗಣಗಳೂ ಮತ್ತು ಮಹೇಂದ್ರನ ಅನುಚರರೂ, ದೇವಸದನದ ನಿವಾಸಿಗಳು, ದೇವಯಾನಗಳಲ್ಲಿ ಕುಳಿತು ಬರುತ್ತಿದ್ದರು.
03164012a ತತೋ ಮರುತ್ವಾನ್ ಹರಿಭಿರ್ಯುಕ್ತೈರ್ವಾಹೈಃ ಸ್ವಲಂಕೃತೈಃ|
03164012c ಶಚೀಸಹಾಯಸ್ತತ್ರಾಯಾತ್ಸಹ ಸರ್ವೈಸ್ತದಾಮರೈಃ||
ಆಗ ಮರುತ್ವಂತನು ಹರಿಗಳನ್ನು ಕಟ್ಟಿ ಎಳೆಯಲ್ಪಡುವ ಸ್ವಲಂಕೃತ ವಾಹನದಲ್ಲಿ ಶಚೀದೇವಿಯೊಂದಿಗೆ ಸರ್ವ ಅಮರರನ್ನು ಕೂಡಿ ಆಗಮಿಸಿದನು.
03164013a ಏತಸ್ಮಿನ್ನೇವ ಕಾಲೇ ತು ಕುಬೇರೋ ನರವಾಹನಃ|
03164013c ದರ್ಶಯಾಮಾಸ ಮಾಂ ರಾಜಽಲ್ಲಕ್ಷ್ಮ್ಯಾ ಪರಮಯಾ ಯುತಃ||
ರಾಜನ್! ಅದೇ ಸಮಯದಲ್ಲಿ ನರವಾಹನ ಕುಬೇರನೂ ಕೂಡ ಪರಮ ಶ್ರೀಯೊಡನೆ ನನಗೆ ಕಾಣಿಸಿಕೊಂಡನು.
03164014a ದಕ್ಷಿಣಸ್ಯಾಂ ದಿಶಿ ಯಮಂ ಪ್ರತ್ಯಪಶ್ಯಂ ವ್ಯವಸ್ಥಿತಂ|
03164014c ವರುಣಂ ದೇವರಾಜಂ ಚ ಯಥಾಸ್ಥಾನಮವಸ್ಥಿತಂ||
03164015a ತೇ ಮಾಮೂಚುರ್ಮಹಾರಾಜ ಸಾಂತ್ವಯಿತ್ವಾ ಸುರರ್ಷಭಾಃ|
03164015c ಸವ್ಯಸಾಚಿನ್ಸಮೀಕ್ಷಸ್ವ ಲೋಕಪಾಲಾನವಸ್ಥಿತಾನ್||
ದಕ್ಷಿಣದ ದಿಕ್ಕಿನಲ್ಲಿ ಯಮನು ನಿಂತಿರುವುದು ಕಾಣಿಸಿತು. ದೇವರಾಜ ವರುಣನೂ ಯಥಾಸ್ಥಾನದಲ್ಲಿ ನಿಂತಿದ್ದನು. ಮಹಾರಾಜ! ಆ ಸುರರ್ಷಭರು ನನಗೆ ಸಂತವಿಸುತ್ತಾ ಮಾತನಾಡಿದರು. “ಸವ್ಯಸಾಚಿ! ನಿಂತಿರುವ ಲೋಕಪಾಲರನ್ನು ನೋಡು.
03164016a ಸುರಕಾರ್ಯಾರ್ಥಸಿದ್ಧ್ಯರ್ಥಂ ದೃಷ್ಟವಾನಸಿ ಶಂಕರಂ|
03164016c ಅಸ್ಮತ್ತೋಽಪಿ ಗೃಹಾಣ ತ್ವಮಸ್ತ್ರಾಣೀತಿ ಸಮಂತತಃ||
ಸುರಕಾರ್ಯಸಿದ್ಧಿಗಾಗಿ ನೀನು ಶಂಕರನನ್ನು ನೋಡಿದ್ದೀಯೆ. ನಮ್ಮಿಂದ ಕೂಡ ನೀನು ಅಸ್ತ್ರಗಳನ್ನು ಸ್ವೀಕರಿಸು.”
03164017a ತತೋಽಹಂ ಪ್ರಯತೋ ಭೂತ್ವಾ ಪ್ರಣಿಪತ್ಯ ಸುರರ್ಷಭಾನ್|
03164017c ಪ್ರತ್ಯಗೃಹ್ಣಂ ತದಾಸ್ತ್ರಾಣಿ ಮಹಾಂತಿ ವಿಧಿವತ್ಪ್ರಭೋ||
ಪ್ರಭೋ! ಆಗ ನಾನು ಶುದ್ದನಾಗಿ ಸುರರ್ಷಭರಿಗೆ ನಮಸ್ಕರಿಸಿ ಅವರ ಮಹಾ ಅಸ್ತ್ರಗಳನ್ನು ವಿಧಿವತ್ತಾಗಿ ಪ್ರತಿಗ್ರಹಿಸಿದೆನು.
03164018a ಗೃಹೀತಾಸ್ತ್ರಸ್ತತೋ ದೇವೈರನುಜ್ಞಾತೋಽಸ್ಮಿ ಭಾರತ|
03164018c ಅಥ ದೇವಾ ಯಯುಃ ಸರ್ವೇ ಯಥಾಗತಮರಿಂದಮ||
ಭಾರತ! ಅವರ ಅಸ್ತ್ರಗಳನ್ನು ಪಡೆದು ನಾನು ದೇವತೆಗಳಿಂದ ಅನುಜ್ಞೆಯನ್ನು ಪಡೆದೆನು. ಅರಿಂದಮ! ಆಗ ದೇವತೆಗಳೆಲ್ಲರೂ ಬಂದದಾರಿಯಲ್ಲಿಯೇ ತೆರಳಿದರು.
03164019a ಮಘವಾನಪಿ ದೇವೇಶೋ ರಥಮಾರುಹ್ಯ ಸುಪ್ರಭಂ|
03164019c ಉವಾಚ ಭಗವಾನ್ವಾಕ್ಯಂ ಸ್ಮಯನ್ನಿವ ಸುರಾರಿಹಾ||
ಭಗವನ್ ಸುರಾರಿಹ ದೇವೇಶ ಮಘವಾನನೂ ಕೂಡ ಸುಪ್ರಭೆಯ ರಥವನ್ನೇರಿ ನಸುನಗುತ್ತಾ ಹೇಳಿದನು:
03164020a ಪುರೈವಾಗಮನಾದಸ್ಮಾದ್ವೇದಾಹಂ ತ್ವಾಂ ಧನಂಜಯ|
03164020c ಅತಃ ಪರಂ ತ್ವಹಂ ವೈ ತ್ವಾಂ ದರ್ಶಯೇ ಭರತರ್ಷಭ||
“ಧನಂಜಯ! ನೀನು ಇಲ್ಲಿ ಬರುವುದಕ್ಕೆ ಮೊದಲೇ ನಾನು ನಿನ್ನನು ಚೆನ್ನಾಗಿ ಬಲ್ಲೆ. ಭರತರ್ಷಭ! ಇದಕ್ಕೂ ಮೊದಲೇ ನಾನು ನಿನಗೆ ಕಾಣಿಸಿಕೊಂಡಿದ್ದೆ.
03164021a ತ್ವಯಾ ಹಿ ತೀರ್ಥೇಷು ಪುರಾ ಸಮಾಪ್ಲಾವಃ ಕೃತೋಽಸಕೃತ್|
03164021c ತಪಶ್ಚೇದಂ ಪುರಾ ತಪ್ತಂ ಸ್ವರ್ಗಂ ಗಂತಾಸಿ ಪಾಂಡವ||
ಪಾಂಡವ! ನೀನು ಹಿಂದೆ ತೀರ್ಥಗಳಲ್ಲಿ ಮಿಂದಿದ್ದೀಯೆ ಮತ್ತು ತಪಸ್ಸನ್ನು ತಪಿಸಿದ್ದೀಯೆ. ಆದುದರಿಂದ ನೀನು ಸ್ವರ್ಗಕ್ಕೆ ಹೋಗುತ್ತೀಯೆ[1].
03164022a ಭೂಯಶ್ಚೈವ ತು ತಪ್ತವ್ಯಂ ತಪಃ ಪರಮದಾರುಣಂ|
03164022c ಉವಾಚ ಭಗವಾನ್ಸರ್ವಂ ತಪಸಶ್ಚೋಪಪಾದನಂ||
ನೀನು ಇನ್ನೊಮ್ಮೆ ಪರಮದಾರುಣ ತಪಸ್ಸನ್ನು ತಪಿಸುತ್ತೀಯೆ.” ಆಗ ಆ ಭಗವಾನನು ತಪಸ್ಸನ್ನು ಹೇಗೆ ಮಾಡಬೇಕೆಂದು ಎಲ್ಲವನ್ನು ವಿವರಿಸಿದನು.
03164023a ಮಾತಲಿರ್ಮನ್ನಿಯೋಗಾತ್ತ್ವಾಂ ತ್ರಿದಿವಂ ಪ್ರಾಪಯಿಷ್ಯತಿ|
03164023c ವಿದಿತಸ್ತ್ವಂ ಹಿ ದೇವಾನಾಮೃಷೀಣಾಂ ಚ ಮಹಾತ್ಮನಾಂ||
“ನನ್ನ ನಿಯೋಗದಂತೆ ಮಾತಲಿಯು ನಿನ್ನನ್ನು ತ್ರಿದಿವಕ್ಕೆ ತರುತ್ತಾನೆ. ಮಹಾತ್ಮ ದೇವತೆಗಳು ಮತ್ತು ಋಷಿಗಳಿಗೆ ನಿನ್ನ ಕುರಿತು ತಿಳಿದೇ ಇದೆ.”
03164024a ತತೋಽಹಮಬ್ರುವಂ ಶಕ್ರಂ ಪ್ರಸೀದ ಭಗವನ್ಮಮ|
03164024c ಆಚಾರ್ಯಂ ವರಯೇ ತ್ವಾಹಮಸ್ತ್ರಾರ್ಥಂ ತ್ರಿದಶೇಶ್ವರ||
ಆಗ ನಾನು ಶಕ್ರನಿಗೆ ಹೇಳಿದೆನು: “ಭಗವನ್! ನನ್ನ ಮೇಲೆ ಪ್ರಸೀದನಾಗು. ತ್ರಿದಶೇಶ್ವರ! ಅಸ್ತ್ರಗಳಿಗಾಗಿ ನಾನು ನಿನ್ನನ್ನು ಆಚಾರ್ಯನಾಗಿ ಕೇಳುತ್ತೇನೆ.”
03164025 ಇಂದ್ರ ಉವಾಚ|
03164025a ಕ್ರೂರಂ ಕರ್ಮಾಸ್ತ್ರವಿತ್ತಾತ ಕರಿಷ್ಯಸಿ ಪರಂತಪ|
03164025c ಯದರ್ಥಮಸ್ತ್ರಾಣೀಪ್ಸುಸ್ತ್ವಂ ತಂ ಕಾಮಂ ಪಾಂಡವಾಪ್ನುಹಿ||
ಇಂದ್ರನು ಹೇಳಿದನು: “ಮಗು! ಅಸ್ತ್ರಗಳನ್ನು ತಿಳಿದ ನಂತರ ನೀನು ಕ್ರೂರಕರ್ಮಗಳನ್ನೆಸಗುವೆ. ಪಾಂಡವ! ಪರಂತಪ! ಅನಂತರವೇ ನೀನು ಯಾವುದಕ್ಕಾಗಿ ಅಸ್ತ್ರಗಳನ್ನು ಕೇಳುತ್ತಿದ್ದೀಯೆ ಅದನ್ನು ಮಾಡಬಹುದು.””
03164026 ಅರ್ಜುನ ಉವಾಚ|
03164026a ತತೋಽಹಮಬ್ರುವಂ ನಾಹಂ ದಿವ್ಯಾನ್ಯಸ್ತ್ರಾಣಿ ಶತ್ರುಹನ್|
03164026c ಮಾನುಷೇಷು ಪ್ರಯೋಕ್ಷ್ಯಾಮಿ ವಿನಾಸ್ತ್ರಪ್ರತಿಘಾತನಂ||
ಅರ್ಜುನನು ಹೇಳಿದನು: “ಆಗ ನಾನು ಹೇಳಿದೆ: “ಶತ್ರುಹನ್! ನಾನು ಎಂದೂ ನನ್ನ ಇತರ ಅಸ್ತ್ರಗಳು ನಿಷ್ಫಲವಾದಾಗ ಮಾತ್ರ ಬಿಟ್ಟು ಈ ದಿವ್ಯಾಸ್ತ್ರಗಳನ್ನು ಎಂದೂ ಮನುಷ್ಯರ ಮೇಲೆ ಪ್ರಯೋಗಿಸುವುದಿಲ್ಲ.
03164027a ತಾನಿ ದಿವ್ಯಾನಿ ಮೇಽಸ್ತ್ರಾಣಿ ಪ್ರಯಚ್ಚ ವಿಬುಧಾಧಿಪ|
03164027c ಲೋಕಾಂಶ್ಚಾಸ್ತ್ರಜಿತಾನ್ಪಶ್ಚಾಲ್ಲಭೇಯಂ ಸುರಪುಂಗವ||
ವಿಬುಧಾಧಿಪ! ಆ ದಿವ್ಯಾಸ್ತ್ರಗಳನ್ನು ನನಗೆ ಕರುಣಿಸು. ಸುರಪುಂಗವ! ಅನಂತರ ನಾನು ಆ ಅಸ್ತ್ರಗಳು ಗೆಲ್ಲುವ ಲೋಕಗಳನ್ನು ಪಡೆಯುತ್ತೇನೆ.”
03164028 ಇಂದ್ರ ಉವಾಚ|
03164028a ಪರೀಕ್ಷಾರ್ಥಂ ಮಯೈತತ್ತೇ ವಾಕ್ಯಮುಕ್ತಂ ಧನಂಜಯ|
03164028c ಮಮಾತ್ಮಜಸ್ಯ ವಚನಂ ಸೂಪಪನ್ನಮಿದಂ ತವ||
ಇಂದ್ರನು ಹೇಳಿದನು: “ಧನಂಜಯ! ನಿನ್ನನ್ನು ಪರೀಕ್ಷಿಸಲು ನಾನು ಈ ಮಾತುಗಳನ್ನು ಹೇಳಿದೆ. ನಿನ್ನ ಮಾತುಗಳು ನನ್ನಿಂದ ಹುಟ್ಟಿದವನಿಗೆ ಸೂಕ್ತವಾಗಿವೆ.
03164029a ಶಿಕ್ಷ ಮೇ ಭವನಂ ಗತ್ವಾ ಸರ್ವಾಣ್ಯಸ್ತ್ರಾಣಿ ಭಾರತ|
03164029c ವಾಯೋರಗ್ನೇರ್ವಸುಭ್ಯೋಽಥ ವರುಣಾತ್ಸಮರುದ್ಗಣಾತ್||
03164030a ಸಾಧ್ಯಂ ಪೈತಾಮಹಂ ಚೈವ ಗಂಧರ್ವೋರಗರಕ್ಷಸಾಂ|
03164030c ವೈಷ್ಣವಾನಿ ಚ ಸರ್ವಾಣಿ ನೈರೃತಾನಿ ತಥೈವ ಚ||
03164030e ಮದ್ಗತಾನಿ ಚ ಯಾನೀಹ ಸರ್ವಾಸ್ತ್ರಾಣಿ ಕುರೂದ್ವಹ||
ಭಾರತ! ನೀನು ನನ್ನ ಮನೆಗೆ ಬಂದಾಗ ಸರ್ವಾಸ್ತ್ರಗಳನ್ನೂ – ವಾಯು, ಅಗ್ನಿ, ವಸುಗಳು, ವರುಣ, ಮರುದ್ಗಣಗಳು, ಸಾಧ್ಯರು, ಪಿತಾಮಹ, ಗಂಧರ್ವ, ಉರಗ, ರಾಕ್ಷಸರು, ವಿಷ್ಣು, ಮತ್ತು ಎಲ್ಲ ನೈರುತ್ಯರಿಂದ, ಮತ್ತು ಕುರೂದ್ವಹ! ನನ್ನಲ್ಲಿರುವ ಎಲ್ಲ ಅಸ್ತ್ರಗಳನ್ನೂ ಕಲಿಯುತ್ತೀಯೆ.””
03164031 ಅರ್ಜುನ ಉವಾಚ|
03164031a ಏವಮುಕ್ತ್ವಾ ತು ಮಾಂ ಶಕ್ರಸ್ತತ್ರೈವಾಂತರಧೀಯತ|
03164031c ಅಥಾಪಶ್ಯಂ ಹರಿಯುಜಂ ರಥಮೈಂದ್ರಮುಪಸ್ಥಿತಂ||
03164031e ದಿವ್ಯಂ ಮಾಯಾಮಯಂ ಪುಣ್ಯಂ ಯತ್ತಂ ಮಾತಲಿನಾ ನೃಪ||
ಅರ್ಜುನನು ಹೇಳಿದನು: “ಹೀಗೆ ನನಗೆ ಹೇಳಿ ಶಕ್ರನು ಅಲ್ಲಿಯೇ ಅಂತರ್ಧಾನನಾದನು. ನೃಪ! ಆಗ ನಾನು ಕುದುರೆಗಳನ್ನು ಕಟ್ಟಿದ್ದ, ಮಾತಲಿಯು ತಂದ ಇಂದ್ರನು ಕುಳಿತುಕೊಳ್ಳುವ ದಿವ್ಯ ಮಾಯಾಮಯ ಪುಣ್ಯ ರಥವನ್ನು ನೋಡಿದೆ.
03164032a ಲೋಕಪಾಲೇಷು ಯಾತೇಷು ಮಾಮುವಾಚಾಥ ಮಾತಲಿಃ|
03164032c ದ್ರಷ್ಟುಮಿಚ್ಚತಿ ಶಕ್ರಸ್ತ್ವಾಂ ದೇವರಾಜೋ ಮಹಾದ್ಯುತೇ||
03164033a ಸಂಸಿದ್ಧಸ್ತ್ವಂ ಮಹಾಬಾಹೋ ಕುರು ಕಾರ್ಯಮನುತ್ತಮಂ|
03164033c ಪಶ್ಯ ಪುಣ್ಯಕೃತಾಂ ಲೋಕಾನ್ಸಶರೀರೋ ದಿವಂ ವ್ರಜ||
ಲೋಕಪಾಲರು ಹೊರಟುಹೋದ ನಂತರ ಮಾತಲಿಯು ನನಗೆ ಹೇಳಿದನು: “ಮಹಾದ್ಯುತೇ! ದೇವರಾಜ ಶಕ್ರನು ನಿನ್ನನ್ನು ನೋಡಲು ಬಯಸುತ್ತಾನೆ. ಮಹಾಬಾಹೋ! ಅನುತ್ತಮ ಕಾರ್ಯವನ್ನು ಮಾಡಿ ಸಿದ್ಧಿಯನ್ನು ಹೊಂದು. ಸಶರೀರನಾಗಿ ಪುಣ್ಯಕೃತರ ದೇವಲೋಕವನ್ನು ನೋಡು.”
03164034a ಇತ್ಯುಕ್ತೋಽಹಂ ಮಾತಲಿನಾ ಗಿರಿಮಾಮಂತ್ರ್ಯ ಶೈಶಿರಂ|
03164034c ಪ್ರದಕ್ಷಿಣಮುಪಾವೃತ್ಯ ಸಮಾರೋಹಂ ರಥೋತ್ತಮಂ||
ಮಾತಲಿಯು ಹೀಗೆ ಹೇಳಲು ಶೈಶಿರ ಗಿರಿಯನ್ನು ಬೀಳ್ಕೊಂಡು ಪ್ರದಕ್ಷಿಣೆ ಸಮಸ್ಕಾರ ಮಾಡಿ ಉತ್ತಮ ರಥವನ್ನು ಏರಿದೆನು.
03164035a ಚೋದಯಾಮಾಸ ಸ ಹಯಾನ್ಮನೋಮಾರುತರಂಹಸಃ|
03164035c ಮಾತಲಿರ್ಹಯಶಾಸ್ತ್ರಜ್ಞೋ ಯಥಾವದ್ಭೂರಿದಕ್ಷಿಣಃ||
ಹಯಶಾಸ್ತ್ರಜ್ಞ ಭೂರಿದಕ್ಷಿಣ ಮಾತಲಿಯು ಯಥಾವತ್ತಾಗಿ ಮನಸ್ಸು ಮತ್ತು ವಾಯುವಿನ ವೇಗದಲ್ಲಿ ಓಡುವ ಹಯಗಳನ್ನು ಹೊರಡಿಸಿದನು.
03164036a ಅವೈಕ್ಷತ ಚ ಮೇ ವಕ್ತ್ರಂ ಸ್ಥಿತಸ್ಯಾಥ ಸ ಸಾರಥಿಃ|
03164036c ತಥಾ ಭ್ರಾಂತೇ ರಥೇ ರಾಜನ್ವಿಸ್ಮಿತಶ್ಚೇದಮಬ್ರವೀತ್||
ರಾಜನ್! ಆ ನಡುಗುತ್ತಿರುವ ವಕ್ರ ರಥದಲ್ಲಿ ನಿಂತಿರುವ ನನ್ನನ್ನು ನೋಡಿದ ಸಾರಥಿಯು ವಿಸ್ಮಿತನಾಗಿ ಹೇಳಿದನು:
03164037a ಅತ್ಯದ್ಭುತಮಿದಂ ಮೇಽದ್ಯ ವಿಚಿತ್ರಂ ಪ್ರತಿಭಾತಿ ಮಾಂ|
03164037c ಯದಾಸ್ಥಿತೋ ರಥಂ ದಿವ್ಯಂ ಪದಾ ನ ಚಲಿತೋ ಭವಾನ್||
“ಅತ್ಯದ್ಭುತ! ಇಂದು ವಿಚಿತ್ರವಾಗಿ ನನಗೆ ತೋರುತ್ತಿದೆ. ಈ ದಿವ್ಯರಥದಲ್ಲಿ ಏರಿದಾಗಿನಿಂದ ನೀನು ಒಂದು ಹೆಜ್ಜೆಯೂ ಚಲಿಸಲಿಲ್ಲ.
03164038a ದೇವರಾಜೋಽಪಿ ಹಿ ಮಯಾ ನಿತ್ಯಮತ್ರೋಪಲಕ್ಷಿತಃ|
03164038c ವಿಚಲನ್ಪ್ರಥಮೋತ್ಪಾತೇ ಹಯಾನಾಂ ಭರತರ್ಷಭ||
ಭರತರ್ಷಭ! ಕುದುರೆಗೆಳ ಪ್ರಥಮ ನೆಗೆತಕ್ಕೆ ದೇವರಾಜನೂ ಕೂಡ ವಿಚಲಿತನಾಗಿದ್ದುದನ್ನು ನೋಡಿದ್ದೇನೆ.
03164039a ತ್ವಂ ಪುನಃ ಸ್ಥಿತ ಏವಾತ್ರ ರಥೇ ಭ್ರಾಂತೇ ಕುರೂದ್ವಹ|
03164039c ಅತಿಶಕ್ರಮಿದಂ ಸತ್ತ್ವಂ ತವೇತಿ ಪ್ರತಿಭಾತಿ ಮೇ||
ಕುರೂದ್ವಹ! ಆದರೆ ಅಲುಗಾಡುತ್ತಿರುವ ಈ ರಥದಲ್ಲಿ ನೀನು ನಿಂತಿರುವುದನ್ನು ನೋಡಿದರೆ ನಿನ್ನ ಸತ್ವವು ಶಕ್ರನದಕ್ಕಿಂತಲೂ ಅಧಿಕ ಎಂದು ನನಗೆ ಹೊಳೆಯುತ್ತಿದೆ.”
03164040a ಇತ್ಯುಕ್ತ್ವಾಕಾಶಮಾವಿಶ್ಯ ಮಾತಲಿರ್ವಿಬುಧಾಲಯಾನ್|
03164040c ದರ್ಶಯಾಮಾಸ ಮೇ ರಾಜನ್ವಿಮಾನಾನಿ ಚ ಭಾರತ||
ರಾಜನ್! ಭಾರತ! ಹೀಗೆ ಹೇಳಿ ಮಾತಲಿಯು ಆಕಾಶವನ್ನು ಪ್ರವೇಶಿಸಿ ನನಗೆ ವಿಬುಧಾಲಯಗಳನ್ನು ವಿಮಾನಗಳನ್ನು ತೋರಿಸಿದನು.
03164041a ನಂದನಾದೀನಿ ದೇವಾನಾಂ ವನಾನಿ ಬಹುಲಾನ್ಯುತ|
03164041c ದರ್ಶಯಾಮಾಸ ಮೇ ಪ್ರೀತ್ಯಾ ಮಾತಲಿಃ ಶಕ್ರಸಾರಥಿಃ||
03164042a ತತಃ ಶಕ್ರಸ್ಯ ಭವನಮಪಶ್ಯಮಮರಾವತೀಂ|
03164042c ದಿವ್ಯೈಃ ಕಾಮಫಲೈರ್ವೃಕ್ಷೈ ರತ್ನೈಶ್ಚ ಸಮಲಂಕೃತಾಂ||
ಶಕ್ರಸಾರಥಿ ಮಾತಲಿಯು ಪ್ರೀತಿಯಿಂದ ನನಗೆ ನಂದನವೇ ಮೊದಲಾದ ದೇವತೆಗಳ ಬಹಳ ವನಗಳನ್ನು ತೋರಿಸಿದನು. ಆಗ ಶಕ್ರನ ಭವನ, ದಿವ್ಯ ಕಾಪಫಲಗಳನ್ನು ನೀಡುವ ವೃಕ್ಷಗಳಿಂದ ಮತ್ತು ರತ್ನಗಳಿಂದ ಸಮಲಂಕೃತ ಅಮರಾವತಿಯನ್ನು ನೋಡಿದೆನು.
03164043a ನ ತಾಂ ಭಾಸಯತೇ ಸೂರ್ಯೋ ನ ಶೀತೋಷ್ಣೇ ನ ಚ ಕ್ಲಮಃ|
03164043c ರಜಃ ಪಮ್ಕೋ ನ ಚ ತಮಸ್ತತ್ರಾಸ್ತಿ ನ ಜರಾ ನೃಪ||
ಅದನ್ನು ಸೂರ್ಯನು ಬೆಳಗುವುದಿಲ್ಲ. ಅಲ್ಲಿ ಶೀತೋಷ್ಣಗಳೂ, ಆಯಾಸವೂ ಇಲ್ಲ. ಅಲ್ಲಿ ಧೂಳಿಲ್ಲ, ಕೆಸರಿಲ್ಲ, ಕತ್ತಲೆಯಿಲ್ಲ, ಮತ್ತು ನೃಪ! ಮುಪ್ಪೂ ಇಲ್ಲ.
03164044a ನ ತತ್ರ ಶೋಕೋ ದೈನ್ಯಂ ವಾ ವೈವರ್ಣ್ಯಂ ಚೋಪಲಕ್ಷ್ಯತೇ|
03164044c ದಿವೌಕಸಾಂ ಮಹಾರಾಜ ನ ಚ ಗ್ಲಾನಿರರಿಂದಮ||
ಮಹಾರಾಜ! ಅರಿಂದಮ! ಅಲ್ಲಿ ದಿವೌಕಸರಲ್ಲಿ ಶೋಕಪಡುವವರು, ದೈನ್ಯರು, ವಿವರ್ಣರಾದವರು ಮತ್ತು ಗ್ಲಾನಿಗಳು ಯಾರೂ ಕಂಡುಬರುವುದಿಲ್ಲ.
03164045a ನ ಕ್ರೋಧಲೋಭೌ ತತ್ರಾಸ್ತಾಮಶುಭಂ ಚ ವಿಶಾಂ ಪತೇ|
03164045c ನಿತ್ಯತುಷ್ಟಾಶ್ಚ ಹೃಷ್ಟಾಶ್ಚ ಪ್ರಾಣಿನಃ ಸುರವೇಶ್ಮನಿ||
ವಿಶಾಂಪತೇ! ಸುರರ ಆಲಯದಲ್ಲಿ ಕ್ರೋಧ-ಲೋಭಗಳಿಲ್ಲ. ಅಶುಭವೂ ಇಲ್ಲ. ಪ್ರಾಣಿಗಳೆಲ್ಲರೂ ನಿತ್ಯ ತುಷ್ಟರೂ ಹೃಷ್ಟರೂ ಆಗಿದ್ದಾರೆ.
03164046a ನಿತ್ಯಪುಷ್ಪಫಲಾಸ್ತತ್ರ ಪಾದಪಾ ಹರಿತಚ್ಚದಾಃ|
03164046c ಪುಷ್ಕರಿಣ್ಯಶ್ಚ ವಿವಿಧಾಃ ಪದ್ಮಸೌಗಂಧಿಕಾಯುತಾಃ||
ಮರಗಳು ಹಸಿರಿನಿಂದ ತುಂಬಿ ನಿತ್ಯವೂ ಪುಷ್ಪ-ಫಲಗಳನ್ನು ಹೊಂದಿವೆ. ಅಲ್ಲಿ ಪದ್ಮ ಮತ್ತು ಸೌಗಂಧಿಕಗಳಿಂದ ತುಂಬಿದ ವಿವಿಧ ಸರೋವರಗಳಿವೆ.
03164047a ಶೀತಸ್ತತ್ರ ವವೌ ವಾಯುಃ ಸುಗಂಧೋ ಜೀವನಃ ಶುಚಿಃ|
03164047c ಸರ್ವರತ್ನವಿಚಿತ್ರಾ ಚ ಭೂಮಿಃ ಪುಷ್ಪವಿಭೂಷಿತಾ||
ಅಲ್ಲಿ ಶೀತಲ ಸುಂಗಂಧಯುಕ್ತ, ಜೀವನವನ್ನು ನಿಡುವ, ಶುಚಿಯಾದ ಗಾಳಿಯು ಬೀಸುತ್ತದೆ. ನೆಲವು ಪುಷ್ಪವಿಭೂಷಿತವಾಗಿ ಬಣ್ಣ ಬಣ್ಣದ ಸರ್ವರತ್ನಗಳನ್ನು ಹೊಂದಿದೆ.
03164048a ಮೃಗದ್ವಿಜಾಶ್ಚ ಬಹವೋ ರುಚಿರಾ ಮಧುರಸ್ವರಾಃ|
03164048c ವಿಮಾನಯಾಯಿನಶ್ಚಾತ್ರ ದೃಶ್ಯಂತೇ ಬಹವೋಽಮರಾಃ||
ಸುಂದರ ಮಧುರ ಸ್ವರದ ಜಿಂಕೆಗಳು ಮತ್ತು ಪಕ್ಷಿಗಳು ಇವೆ. ಮತ್ತು ತಮ್ಮ ವಿಮಾನಗಳನ್ನೇರಿ ಹೋಗುವ ಬಹಳ ಅಮರರು ಕಾಣುತ್ತಾರೆ.
03164049a ತತೋಽಪಶ್ಯಂ ವಸೂನ್ರುದ್ರಾನ್ಸಾಧ್ಯಾಂಶ್ಚ ಸಮರುದ್ಗಣಾನ್|
03164049c ಆದಿತ್ಯಾನಶ್ವಿನೌ ಚೈವ ತಾನ್ಸರ್ವಾನ್ಪ್ರತ್ಯಪೂಜಯಂ||
ಆಗ ನಾನು ವಸುಗಳನ್ನು, ರುದ್ರರನ್ನು, ಸಾಧ್ಯರನ್ನು, ಮರುದ್ಗಣಗಳನ್ನು, ಆದಿತ್ಯರನ್ನು, ಅಶ್ವಿನಿಯರನ್ನು ನೋಡಿದೆನು ಮತ್ತು ಸರ್ವರನ್ನೂ ಪ್ರತಿಪೂಜಿಸಿದೆನು.
03164050a ತೇ ಮಾಂ ವೀರ್ಯೇಣ ಯಶಸಾ ತೇಜಸಾ ಚ ಬಲೇನ ಚ|
03164050c ಅಸ್ತ್ರೈಶ್ಚಾಪ್ಯನ್ವಜಾನಂತ ಸಂಗ್ರಾಮವಿಜಯೇನ ಚ||
ಅವರು ನನಗೆ ವೀರ್ಯ, ಯಶಸ್ಸು, ತೇಜಸ್ಸು, ಬಲ, ಅಸ್ತ್ರಗಳು, ಮತ್ತು ಸಂಗ್ರಾಮದಲ್ಲಿ ವಿಜಯದ ಆಶೀರ್ವಚನಗಳನ್ನು ನೀಡಿದರು.
03164051a ಪ್ರವಿಶ್ಯ ತಾಂ ಪುರೀಂ ರಮ್ಯಾಂ ದೇವಗಂಧರ್ವಸೇವಿತಾಂ|
03164051c ದೇವರಾಜಂ ಸಹಸ್ರಾಕ್ಷಮುಪಾತಿಷ್ಠಂ ಕೃತಾಂಜಲಿಃ||
ಅನಂತರ ನಾನು ರಮ್ಯ ದೇವಗಂಧರ್ವ ಸೇವಿತ ಆ ಪುರಿಯನ್ನು ಪ್ರವೇಶಿಸಿ ಅಂಜಲೀ ಬದ್ಧನಾಗಿ ದೇವರಾಜ ಸಹಸ್ರಾಕ್ಷನ ಮುಂದೆ ನಿಂತೆನು.
03164052a ದದಾವರ್ಧಾಸನಂ ಪ್ರೀತಃ ಶಕ್ರೋ ಮೇ ದದತಾಂ ವರಃ|
03164052c ಬಹುಮಾನಾಚ್ಚ ಗಾತ್ರಾಣಿ ಪಸ್ಪರ್ಶ ಮಮ ವಾಸವಃ||
ಕೊಡುವವರಲ್ಲಿ ಶ್ರೇಷ್ಠ ಶಕ್ರನು ಸಂತೋಷದಿಂದ ನನಗೆ ಅವನ ಆಸನದ ಅರ್ಧಭಾಗವನ್ನಿತ್ತನು. ಬಹುಮಾನ್ಯತೆಯನ್ನಿತ್ತು ವಾಸವನು ನನ್ನ ಅಂಗಾಂಗಗಳನ್ನು ಸ್ಪರ್ಷಿಸಿದನು.
03164053a ತತ್ರಾಹಂ ದೇವಗಂಧರ್ವೈಃ ಸಹಿತೋ ಭುರಿದಕ್ಷಿಣ|
03164053c ಅಸ್ತ್ರಾರ್ಥಮವಸಂ ಸ್ವರ್ಗೇ ಕುರ್ವಾಣೋಽಸ್ತ್ರಾಣಿ ಭಾರತ||
ಭೂರಿದಕ್ಷಿಣ! ಭಾರತ! ದೇವಗಂಧರ್ವರ ಸಹಿತ ನಾನು ಅಲ್ಲಿ ಸ್ವರ್ಗದಲ್ಲಿ ಅಸ್ತ್ರಗಳಿಗಾಗಿ ವಾಸಿಸಿದೆನು ಮತ್ತು ಆ ಅಸ್ತ್ರಗಳನ್ನು ಕಲಿತುಕೊಂಡೆನು.
03164054a ವಿಶ್ವಾವಸೋಶ್ಚ ಮೇ ಪುತ್ರಶ್ಚಿತ್ರಸೇನೋಽಭವತ್ಸಖಾ|
03164054c ಸ ಚ ಗಾಂಧರ್ವಮಖಿಲಂ ಗ್ರಾಹಯಾಮಾಸ ಮಾಂ ನೃಪ||
ವಿಶ್ವಾವಸುವಿನ ಮಗ ಚಿತ್ರಸೇನನು ನನಗೆ ಸಖನಾದನು. ನೃಪ! ಅವನು ನನಗೆ ಗಂಧರ್ವರ ವಿದ್ಯೆಯನ್ನು ಸಂಪೂರ್ಣವಾಗಿ ಕಲಿಸಿದನು.
03164055a ತತೋಽಹಮವಸಂ ರಾಜನ್ಗೃಹೀತಾಸ್ತ್ರಃ ಸುಪೂಜಿತಃ|
03164055c ಸುಖಂ ಶಕ್ರಸ್ಯ ಭವನೇ ಸರ್ವಕಾಮಸಮನ್ವಿತಃ||
03164056a ಶೃಣ್ವನ್ವೈ ಗೀತಶಬ್ಧಂ ಚ ತೂರ್ಯಶಬ್ಧಂ ಚ ಪುಷ್ಕಲಂ|
03164056c ಪಶ್ಯಂಶ್ಚಾಪ್ಸರಸಃ ಶ್ರೇಷ್ಠಾ ನೃತ್ಯಮಾನಾಃ ಪರಂತಪ||
ರಾಜನ್! ಪರಂತಪ! ಅಸ್ತ್ರಗಳನ್ನು ಪಡೆದು ನಾನು ಶಕ್ರನ ಭವನದಲ್ಲಿ ಸರ್ವಕಾಮಗಳನ್ನು ಪೂರೈಸಿಕೊಂಡು ಸುಪೂಜಿತನಾಗಿ, ಪುಷ್ಕಲವಾಗಿ ಗೀತಶಬ್ಧ ಮತ್ತು ತೂರ್ಯಶಬ್ಧಗಳನ್ನು ಕೇಳುತ್ತಾ, ಶ್ರೇಷ್ಠ ಅಪ್ಸರೆಯರು ನರ್ತಿಸುತ್ತಿರುವುದನ್ನು ನೋಡುತ್ತಾ ಸುಖದಿಂದ ಇದ್ದೆನು.
03164057a ತತ್ಸರ್ವಮನವಜ್ಞಾಯ ತಥ್ಯಂ ವಿಜ್ಞಾಯ ಭಾರತ|
03164057c ಅತ್ಯರ್ಥಂ ಪ್ರತಿಗೃಹ್ಯಾಹಮಸ್ತ್ರೇಷ್ವೇವ ವ್ಯವಸ್ಥಿತಃ||
ಭಾರತ! ಅವೆಲ್ಲವನ್ನೂ ಕಡೆಗೆಣಿಸದೇ ಮತ್ತು ಸತ್ಯವನ್ನು ತಿಳಿದುಕೊಂಡು ಎಲ್ಲ ಅಸ್ತ್ರಗಳನ್ನು ವ್ಯವಸ್ಥಿತವಾಗಿ ಕಲಿತುಕೊಂಡೆನು.
03164058a ತತೋಽತುಷ್ಯತ್ಸಹಸ್ರಾಕ್ಷಸ್ತೇನ ಕಾಮೇನ ಮೇ ವಿಭುಃ|
03164058c ಏವಂ ಮೇ ವಸತೋ ರಾಜನ್ನೇಷ ಕಾಲೋಽತ್ಯಗಾದ್ದಿವಿ||
ಆಗ ಸಹಸ್ರಾಕ್ಷನು ನನ್ನ ಆಸೆಯಂತೆ ತುಂಬಾ ಸಂತುಷ್ಟನಾದನು. ರಾಜನ್! ಹೀಗೆ ನಾನು ನನ್ನ ಕಾಲವನ್ನು ದೇವಲೋಕದಲ್ಲಿ ಕಳೆದೆ.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಯಕ್ಷಯುದ್ಧಪರ್ವಣಿ ನಿವಾತಕವಚಯುದ್ಧೇ ಅರ್ಜುನವಾಕ್ಯೇ ಚತುಃಷಷ್ಟ್ಯಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಯಕ್ಷಯುದ್ಧಪರ್ವದಲ್ಲಿ ನಿವಾತಕವಚಯುದ್ಧದಲ್ಲಿ ಅರ್ಜುನವಾಕ್ಯದಲ್ಲಿ ನೂರಾಅರವತ್ನಾಲ್ಕನೆಯ ಅಧ್ಯಾಯವು.
[1]ಅರ್ಜುನನು ಈ ಮೊದಲೇ ತೀರ್ಥಯಾತ್ರೆಯನ್ನು ಮುಗಿಸಿದುದು ಅವನನ್ನು ಸ್ವರ್ಗಕ್ಕೆ ಹೋಗಲು ತಯಾರಿಸಲು ವಿಧಿಯು ರಚಿಸಿದ ಘಟನೆಯೇ?