Anushasana Parva: Chapter 9

ಅನುಶಾಸನ ಪರ್ವ: ದಾನಧರ್ಮ ಪರ್ವ

ಸೃಗಾಲ-ವಾನರ ಸಂವಾದ

“ಬ್ರಾಹ್ಮಣರಿಗೆ ಕೊಡುತ್ತೇನೆಂದು ಹೇಳಿ ಕೊಡದೇ ಇದ್ದವರಿಗೆ ಏನಾಗುತ್ತದೆ?” ಎಂಬ ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನು ನರಿ ಮತ್ತು ಕಪಿಯ ಸಂವಾದವನ್ನು ಉದಾಹರಿಸಿ, ಅಂಥವರು ಅಶುಭ ಯೋನಿಗಳಲ್ಲಿ ಜನ್ಮತಳೆಯುತ್ತಾರೆ ಎನ್ನುವುದು (೧-೨೪).

13009001 ಯುಧಿಷ್ಠಿರ ಉವಾಚ|

13009001a ಬ್ರಾಹ್ಮಣಾನಾಂ ತು ಯೇ ಲೋಕೇ ಪ್ರತಿಶ್ರುತ್ಯ ಪಿತಾಮಹ|

13009001c ನ ಪ್ರಯಚ್ಚಂತಿ ಮೋಹಾತ್ತೇ ಕೇ ಭವಂತಿ ಮಹಾಮತೇ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಹಾಮತೇ! ಲೋಕದಲ್ಲಿ ಬ್ರಾಹ್ಮಣರಿಗೆ ಕೊಡುತ್ತೇನೆಂದು ಹೇಳಿ ಮೋಹದಿಂದ ಕೊಡದೇ ಇದ್ದರೆ ಅಂಥವರಿಗೆ ಏನಾಗುತ್ತದೆ?

13009002a ಏತನ್ಮೇ ತತ್ತ್ವತೋ ಬ್ರೂಹಿ ಧರ್ಮಂ ಧರ್ಮಭೃತಾಂ ವರ|

13009002c ಪ್ರತಿಶ್ರುತ್ಯ ದುರಾತ್ಮಾನೋ ನ ಪ್ರಯಚ್ಚಂತಿ ಯೇ ನರಾಃ||

ಧರ್ಮಭೃತರಲ್ಲಿ ಶ್ರೇಷ್ಠ! ಕೊಡುತ್ತೇನೆಂದು ಹೇಳಿ ಕೊಡದೇ ಇರುವ ದುರಾತ್ಮ ನರರಿಗಾಗುವುದರ ಕುರಿತು ತತ್ತ್ವತಃ ಹೇಳು.”

13009003 ಭೀಷ್ಮ ಉವಾಚ|

13009003a ಯೋ ನ ದದ್ಯಾತ್ಪ್ರತಿಶ್ರುತ್ಯ ಸ್ವಲ್ಪಂ ವಾ ಯದಿ ವಾ ಬಹು|

13009003c ಆಶಾಸ್ತಸ್ಯ ಹತಾಃ ಸರ್ವಾಃ ಕ್ಲೀಬಸ್ಯೇವ ಪ್ರಜಾಫಲಮ್||

ಭೀಷ್ಮನು ಹೇಳಿದನು: “ಸ್ವಲ್ಪವಾಗಲೀ ಅಧಿಕವಾಗಲೀ ಕೊಡುತ್ತೇನೆಂದು ಹೇಳಿ ಕೊಡದೇ ಇರುವವನ ಆಶಯಗಳು ನಪುಂಸಕನಿಗೆ ಸಂತಾನದ ಆಶೆಯಂತೆ ಎಲ್ಲವೂ ನಿಷ್ಫಲವಾಗುತ್ತವೆ.

13009004a ಯಾಂ ರಾತ್ರಿಂ ಜಾಯತೇ ಪಾಪೋ ಯಾಂ ಚ ರಾತ್ರಿಂ ವಿನಶ್ಯತಿ|

13009004c ಏತಸ್ಮಿನ್ನಂತರೇ ಯದ್ಯತ್ಸುಕೃತಂ ತಸ್ಯ ಭಾರತ|

13009004e ಯಚ್ಚ ತಸ್ಯ ಹುತಂ ಕಿಂ ಚಿತ್ಸರ್ವಂ ತಸ್ಯೋಪಹನ್ಯತೇ||

ಭಾರತ! ಆ ಪಾಪಿಯು ಹುಟ್ಟಿದ ರಾತ್ರಿಯಿಂದ ಹಿಡಿದು ಮರಣಹೊಂದುವ ರಾತ್ರಿಯವರೆಗೆ ಏನೆಲ್ಲ ಮಾಡಿರುತ್ತಾನೋ, ಏನನ್ನಾದರೂ ಹೋಮ-ದಾನ-ತಪಸ್ಸುಗಳನ್ನು ಮಾಡಿದ್ದರೂ – ಅವೆಲ್ಲವೂ ನಷ್ಟವಾಗಿಹೋಗುತ್ತವೆ.

13009005a ಅತ್ರೈತದ್ವಚನಂ ಪ್ರಾಹುರ್ಧರ್ಮಶಾಸ್ತ್ರವಿದೋ ಜನಾಃ|

13009005c ನಿಶಮ್ಯ ಭರತಶ್ರೇಷ್ಠ ಬುದ್ಧ್ಯಾ ಪರಮಯುಕ್ತಯಾ||

ಇದರ ಕುರಿತು ಧರ್ಮಶಾಸ್ತ್ರಗಳನ್ನು ತಿಳಿದ ಜನರು ಹೇಳುತ್ತಾರೆ. ಭರತಶ್ರೇಷ್ಠ! ಇದನ್ನು ಪರಮ ಯುಕ್ತನಾಗಿ ಬುದ್ಧಿಯಿಂದ ಕೇಳು.

13009006a ಅಪಿ ಚೋದಾಹರಂತೀಮಂ ಧರ್ಮಶಾಸ್ತ್ರವಿದೋ ಜನಾಃ|

13009006c ಅಶ್ವಾನಾಂ ಶ್ಯಾಮಕರ್ಣಾನಾಂ ಸಹಸ್ರೇಣ ಸ ಮುಚ್ಯತೇ||

ಧರ್ಮಶಾಸ್ತ್ರಗಳನ್ನು ತಿಳಿದ ಜನರು ಇದನ್ನೂ ಕೂಡ ಉದಾಹರಿಸುತ್ತಾರೆ: ಶ್ಯಾಮವರ್ಣದ ಕಿವಿಗಳಿರುವ ಸಹಸ್ರ ಅಶ್ವಗಳನ್ನು ದಾನಮಾಡುವುದರಿಂದ ಪ್ರತಿಜ್ಞಾಭಂಗದ ಪಾಪದಿಂದ ವಿಮುಕ್ತನಾಗುತ್ತಾನೆ.

13009007a ಅತ್ರೈವೋದಾಹರಂತೀಮಮಿತಿಹಾಸಂ ಪುರಾತನಮ್|

13009007c ಸೃಗಾಲಸ್ಯ ಚ ಸಂವಾದಂ ವಾನರಸ್ಯ ಚ ಭಾರತ||

ಭಾರತ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ನರಿ ಮತ್ತು ಕಪಿಯ ಸಂವಾದವನ್ನು ಉದಾಹರಿಸುತ್ತಾರೆ.

13009008a ತೌ ಸಖಾಯೌ ಪುರಾ ಹ್ಯಾಸ್ತಾಂ ಮಾನುಷತ್ವೇ ಪರಂತಪ|

13009008c ಅನ್ಯಾಂ ಯೋನಿಂ ಸಮಾಪನ್ನೌ ಸಾರ್ಗಾಲೀಂ ವಾನರೀಂ ತಥಾ||

ಪರಂತಪ! ಹಿಂದೆ ಮನುಷ್ಯಜನ್ಮದಲ್ಲಿ ಸಖರಾಗಿದ್ದ ಇಬ್ಬರು ಇನ್ನೊಂದು ಜನ್ಮದಲ್ಲಿ ನರಿ ಮತ್ತು ಕಪಿಯ ಯೋನಿಗಳಲ್ಲಿ ಜನಿಸಿದರು.

13009009a ತತಃ ಪರಾಸೂನ್ಖಾದಂತಂ ಸೃಗಾಲಂ ವಾನರೋಽಬ್ರವೀತ್|

13009009c ಶ್ಮಶಾನಮಧ್ಯೇ ಸಂಪ್ರೇಕ್ಷ್ಯ ಪೂರ್ವಜಾತಿಮನುಸ್ಮರನ್||

ಆಗ ಶ್ಮಶಾನಮಧ್ಯದಲ್ಲಿ ಶವಗಳನ್ನು ತಿನ್ನುತ್ತಿದ್ದ ನರಿಯನ್ನು ನೋಡಿ ಪೂರ್ವಜನ್ಮವನ್ನು ಸ್ಮರಿಸಿಕೊಂಡು ಕಪಿಯು ಹೇಳಿತು:

13009010a ಕಿಂ ತ್ವಯಾ ಪಾಪಕಂ ಕರ್ಮ ಕೃತಂ ಪೂರ್ವಂ ಸುದಾರುಣಮ್|

13009010c ಯಸ್ತ್ವಂ ಶ್ಮಶಾನೇ ಮೃತಕಾನ್ಪೂತಿಕಾನತ್ಸಿ ಕುತ್ಸಿತಾನ್||

“ಶ್ಮಶಾನದಲ್ಲಿ ಈ ರೀತಿ ಕೊಳೆಯುತ್ತಿರುವ ಮೃತಶರೀರಗಳನ್ನು ತಿನ್ನುತ್ತಿರುವ ನೀನು ಹಿಂದಿನ ಜನ್ಮದಲ್ಲಿ ಯಾವ ಸುದಾರುಣ ಪಾಪಕರ್ಮವನ್ನು ಮಾಡಿದ್ದೆ?”

13009011a ಏವಮುಕ್ತಃ ಪ್ರತ್ಯುವಾಚ ಸೃಗಾಲೋ ವಾನರಂ ತದಾ|

13009011c ಬ್ರಾಹ್ಮಣಸ್ಯ ಪ್ರತಿಶ್ರುತ್ಯ ನ ಮಯಾ ತದುಪಾಕೃತಮ್||

ಇದನ್ನು ಕೇಳಿ ನರಿಯು ಕಪಿಗೆ ಹೇಳಿತು: “ಬ್ರಾಹ್ಮಣನಿಗೆ ಕೊಡುತ್ತೇನೆಂದು ಹೇಳಿ ಅದರಂತೆ ನಾನು ಮಾಡಲಿಲ್ಲ.

13009012a ತತ್ಕೃತೇ ಪಾಪಿಕಾಂ ಯೋನಿಮಾಪನ್ನೋಽಸ್ಮಿ ಪ್ಲವಂಗಮ|

13009012c ತಸ್ಮಾದೇವಂವಿಧಂ ಭಕ್ಷ್ಯಂ ಭಕ್ಷಯಾಮಿ ಬುಭುಕ್ಷಿತಃ||

ಕಪಿಯೇ! ಅದನ್ನು ಮಾಡಿದುದಕ್ಕಾಗಿ ನಾನು ಈ ಪಾಪಿ ಯೋನಿಯಲ್ಲಿ ಜನಿಸಿದ್ದೇನೆ. ಆದುದರಿಂದಲೇ ಹಸಿದ ನಾನು ಈ ವಿಧದ ಆಹಾರವನ್ನು ತಿನ್ನುತ್ತಿದ್ದೇನೆ.”

13009013a ಇತ್ಯೇತದ್ಬ್ರುವತೋ ರಾಜನ್ಬ್ರಾಹ್ಮಣಸ್ಯ ಮಯಾ ಶ್ರುತಮ್|

13009013c ಕಥಾಂ ಕಥಯತಃ ಪುಣ್ಯಾಂ ಧರ್ಮಜ್ಞಸ್ಯ ಪುರಾತನೀಮ್||

ರಾಜನ್! ಪುರಾತನ ಪುಣ್ಯ ಕಥೆಗಳನ್ನು ಹೇಳುತ್ತಿದ್ದ ಬ್ರಾಹ್ಮಣನಿಂದ ನಾನು ಇದನ್ನು ಕೇಳಿದೆನು.

13009014a ಶ್ರುತಂ ಚಾಪಿ ಮಯಾ ಭೂಯಃ ಕೃಷ್ಣಸ್ಯಾಪಿ ವಿಶಾಂ ಪತೇ|

13009014c ಕಥಾಂ ಕಥಯತಃ ಪೂರ್ವಂ ಬ್ರಾಹ್ಮಣಂ ಪ್ರತಿ ಪಾಂಡವ||

ವಿಶಾಂಪತೇ! ಪಾಂಡವ! ಅಲ್ಲದೇ ಇದೇ ಕಥೆಯನ್ನು ಹಿಂದೆ ಕೃಷ್ಣನು ಬ್ರಾಹ್ಮಣನೊಬ್ಬನಿಗೆ ಹೇಳುತ್ತಿರುವಾಗಲೂ ಕೇಳಿದ್ದೆ.

13009015a ಏವಮೇವ ಚ ಮಾಂ ನಿತ್ಯಂ ಬ್ರಾಹ್ಮಣಾಃ ಸಂದಿಶಂತಿ ವೈ|

13009015c ಪ್ರತಿಶ್ರುತ್ಯ ಭವೇದ್ದೇಯಂ ನಾಶಾ ಕಾರ್ಯಾ ಹಿ ಬ್ರಾಹ್ಮಣೈಃ||

ಬ್ರಾಹ್ಮಣರೂ ಕೂಡ ನಿತ್ಯವೂ ನನಗೆ ಇದನ್ನೇ ಉಪದೇಶಿಸುತ್ತಿದ್ದರು. ಬ್ರಾಹ್ಮಣರಿಗೆ ಕೊಡುತ್ತೇನೆಂದು ಹೇಳಿ ಕೊಡಲೇ ಬೇಕು. ಅವರಲ್ಲಿ ಆಶೆಯನ್ನು ಹುಟ್ಟಿಸಬಾರದು.

13009016a ಬ್ರಾಹ್ಮಣೋ ಹ್ಯಾಶಯಾ ಪೂರ್ವಂ ಕೃತಯಾ ಪೃಥಿವೀಪತೇ|

13009016c ಸುಸಮಿದ್ಧೋ ಯಥಾ ದೀಪ್ತಃ ಪಾವಕಸ್ತದ್ವಿಧಃ ಸ್ಮೃತಃ||

ಪೃಥಿವೀಪತೇ! ಮೊದಲೇ ಹುಟ್ಟಿಸಿದ ಆಶೆಯಿಂದ ಬ್ರಾಹ್ಮಣನು ಕಾಷ್ಠಗಳಿಂದ ಪ್ರಜ್ವಲಿತನಾದ ಯಜ್ಞೇಶ್ವರನಂತೆ ಉದ್ದೀಪ್ತನಾಗುತ್ತಾನೆ.

13009017a ಯಂ ನಿರೀಕ್ಷೇತ ಸಂಕ್ರುದ್ಧ ಆಶಯಾ ಪೂರ್ವಜಾತಯಾ|

13009017c ಪ್ರದಹೇತ ಹಿ ತಂ ರಾಜನ್ಕಕ್ಷಮಕ್ಷಯ್ಯಭುಗ್ಯಥಾ||

ರಾಜನ್! ಮೊದಲು ಅವನಲ್ಲಿ ಆಶೆಯನ್ನು ಹುಟ್ಟಿಸಿದ್ದವನನ್ನು ನೋಡಿಯೇ ಅಕ್ಷಯಭುಂಜಿಯಾದ ಅಗ್ನಿಯಂತೆ ಅವನನ್ನು ಸುಟ್ಟುಬಿಡುತ್ತಾನೆ.

13009018a ಸ ಏವ ಹಿ ಯದಾ ತುಷ್ಟೋ ವಚಸಾ ಪ್ರತಿನಂದತಿ|

13009018c ಭವತ್ಯಗದಸಂಕಾಶೋ ವಿಷಯೇ ತಸ್ಯ ಭಾರತ||

ಭಾರತ! ಅದೇ ರೀತಿ ತುಷ್ಟನಾದವನು ಒಳ್ಳೆಯ ಮಾತುಗಳಿಂದ ರಾಜನನ್ನು ಪ್ರತಿನಂದಿಸುತ್ತಾನೆ. ಅವನ ರಾಜ್ಯದಲ್ಲಿ ಚಿಕಿತ್ಸಕನಂತೆ ಇರುತ್ತಾನೆ.

13009019a ಪುತ್ರಾನ್ಪೌತ್ರಾನ್ಪಶೂಂಶ್ಚೈವ ಬಾಂಧವಾನ್ಸಚಿವಾಂಸ್ತಥಾ|

13009019c ಪುರಂ ಜನಪದಂ ಚೈವ ಶಾಂತಿರಿಷ್ಟೇವ ಪುಷ್ಯತಿ||

ಸಂತುಷ್ಟ ಬ್ರಾಹ್ಮಣನು ದಾನಿಯನ್ನೂ, ದಾನಿಯ ಪುತ್ರ-ಪೌತ್ರರನ್ನೂ, ಪಶುಗಳನ್ನೂ, ಬಾಂಧವರನ್ನೂ, ಸಚಿವರನ್ನೂ, ಪುರ-ಗ್ರಾಮ ಪ್ರದೇಶಗಳನ್ನೂ ಶಾಂತಿ-ಕ್ಷೇಮದಿಂದ ಪಾಲಿಸಬಲ್ಲನು.

13009020a ಏತದ್ಧಿ ಪರಮಂ ತೇಜೋ ಬ್ರಾಹ್ಮಣಸ್ಯೇಹ ದೃಶ್ಯತೇ|

13009020c ಸಹಸ್ರಕಿರಣಸ್ಯೇವ ಸವಿತುರ್ಧರಣೀತಲೇ||

ಈ ರೀತಿ ಸಹಸ್ರಕಿರಣ ಸವಿತುವಿನ ತೇಜಸ್ಸಿನಂತೆ ಬ್ರಾಹ್ಮಣನ ಪರಮ ತೇಜಸ್ಸು ಭೂಮಿಯಲ್ಲಿ ಕಂಗೊಳಿಸುತ್ತದೆ.

13009021a ತಸ್ಮಾದ್ದಾತವ್ಯಮೇವೇಹ ಪ್ರತಿಶ್ರುತ್ಯ ಯುಧಿಷ್ಠಿರ|

13009021c ಯದೀಚ್ಚೇಚ್ಚೋಭನಾಂ ಜಾತಿಂ ಪ್ರಾಪ್ತುಂ ಭರತಸತ್ತಮ||

ಯುಧಿಷ್ಠಿರ! ಭರತಸತ್ತಮ! ಆದುದರಿಂದ ಶುಭ ಜನ್ಮವನ್ನು ಪಡೆಯಲು ಬಯಸುವವನು ಕೊಡುತ್ತೇನೆಂದು ಹೇಳಿದುದನ್ನು ಕೊಡಬೇಕು.

13009022a ಬ್ರಾಹ್ಮಣಸ್ಯ ಹಿ ದತ್ತೇನ ಧ್ರುವಂ ಸ್ವರ್ಗೋ ಹ್ಯನುತ್ತಮಃ|

13009022c ಶಕ್ಯಂ ಪ್ರಾಪ್ತುಂ ವಿಶೇಷೇಣ ದಾನಂ ಹಿ ಮಹತೀ ಕ್ರಿಯಾ||

ಬ್ರಾಹ್ಮಣನಿಗೆ ನೀಡಿದ ದಾನವು ವಿಶೇಷವಾಗಿ ಅನುತ್ತಮ ಸ್ವರ್ಗವನ್ನು ನಿಶ್ಚಿತವಾಗಿ ಪಡೆಯಲು ಶಕ್ಯವಾಗುತ್ತದೆ. ದಾನವೇ ಮಹಾಕ್ರಿಯೆಯು.

13009023a ಇತೋ ದತ್ತೇನ ಜೀವಂತಿ ದೇವತಾಃ ಪಿತರಸ್ತಥಾ|

13009023c ತಸ್ಮಾದ್ದಾನಾನಿ ದೇಯಾನಿ ಬ್ರಾಹ್ಮಣೇಭ್ಯೋ ವಿಜಾನತಾ||

ಈ ರೀತಿಯ ದಾನದಿಂದಲೇ ದೇವತೆಗಳು ಮತ್ತು ಪಿತೃಗಳು ಜೀವಿಸುತ್ತಾರೆ. ಆದುದರಿಂದ ಬ್ರಾಹ್ಮಣರಿಗೆ ದಾನಮಾಡಬೇಕು ಎಂದು ತಿಳಿದಿದ್ದಾರೆ.

13009024a ಮಹದ್ಧಿ ಭರತಶ್ರೇಷ್ಠ ಬ್ರಾಹ್ಮಣಸ್ತೀರ್ಥಮುಚ್ಯತೇ|

13009024c ವೇಲಾಯಾಂ ನ ತು ಕಸ್ಯಾಂ ಚಿದ್ಗಚ್ಚೇದ್ವಿಪ್ರೋ ಹ್ಯಪೂಜಿತಃ||

ಭರತಶ್ರೇಷ್ಠ! ಬ್ರಾಹ್ಮಣನೇ ಮಹಾತೀರ್ಥ ಎಂದು ಹೇಳುತ್ತಾರೆ. ಯಾವುದೇ ಸಮದಲ್ಲಿಯೂ ಆಗಮಿಸಿದ ಬ್ರಾಹ್ಮಣನು ಸತ್ಕೃತನಾಗದೇ ಹಿಂತಿರುಗಿ ಹೋಗಬಾರದು.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಸೃಗಾಲವಾನರಸಂವಾದೇ ನವಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಸೃಗಾಲವಾನರಸಂವಾದ ಎನ್ನುವ ಒಂಭತ್ತನೇ ಅಧ್ಯಾಯವು.

Related image

Comments are closed.