ಕರ್ಣ ಪರ್ವ
೩೮
ಕೃಪ-ಶಿಖಂಡಿಯರ ನಡುವೆ ಯುದ್ಧ (೧-೨೦). ಕೃಪನಿಂದ ಚಿತ್ರಕೇತುವಿನ ಮಗ ಸುಕೇತುವಿನ ವಧೆ (೨೧-೩೦). ಧೃಷ್ಟದ್ಯುಮ್ನ-ಕೃತವರ್ಮರ ಯುದ್ಧ; ಕೃತವರ್ಮನ ಪರಾಜಯ (೩೧-೪೨).
08038001 ಸಂಜಯ ಉವಾಚ|
08038001a ಕೃತವರ್ಮಾ ಕೃಪೋ ದ್ರೌಣಿಃ ಸೂತಪುತ್ರಶ್ಚ ಮಾರಿಷ|
08038001c ಉಲೂಕಃ ಸೌಬಲಶ್ಚೈವ ರಾಜಾ ಚ ಸಹ ಸೋದರೈಃ||
08038002a ಸೀದಮಾನಾಂ ಚಮೂಂ ದೃಷ್ಟ್ವಾ ಪಾಂಡುಪುತ್ರಭಯಾರ್ದಿತಾಂ|
08038002c ಸಮುಜ್ಜಿಹೀರ್ಷುರ್ವೇಗೇನ ಭಿನ್ನಾಂ ನಾವಮಿವಾರ್ಣವೇ||
ಸಂಜಯನು ಹೇಳಿದನು: “ಮಾರಿಷ! ಸಮುದ್ರದಲ್ಲಿ ಒಡೆದುಹೋದ ನೌಕೆಯಂತೆ ನಮ್ಮ ಸೈನ್ಯವು ಪಾಂಡುಪುತ್ರರ ಭಯದಿಂದ ಪೀಡಿತರಾಗಿ ನಾಶಗೊಳ್ಳುತ್ತಿರುವುದನ್ನು ನೋಡಿ ಕೃತವರ್ಮ, ಕೃಪ, ದ್ರೌಣಿ, ಸೂತಪುತ್ರ, ಉಲೂಕ, ಸೌಬಲ, ಸಹೋದರರೊಡನೆ ರಾಜಾ ದುರ್ಯೋಧನರು ಶೀಘ್ರವಾಗಿ ಮುಂದೆ ಹೋಗಿ ನಮ್ಮ ಸೈನ್ಯವನ್ನು ಉದ್ಧರಿಸಲು ಪ್ರಯತ್ನಿಸಿದರು.
08038003a ತತೋ ಯುದ್ಧಮತೀವಾಸೀನ್ಮುಹೂರ್ತಮಿವ ಭಾರತ|
08038003c ಭೀರೂಣಾಂ ತ್ರಾಸಜನನಂ ಶೂರಾಣಾಂ ಹರ್ಷವರ್ಧನಂ||
ಭಾರತ! ಆಗ ಮುಹೂರ್ತಕಾಲ ಹೇಡಿಗಳಿಗೆ ಭಯವನ್ನುಂಟುಮಾಡುವ ಮತ್ತು ಶೂರರ ಹರ್ಷವನ್ನು ಹೆಚ್ಚಿಸುವ ಅತೀವ ಯುದ್ಧವು ನಡೆಯಿತು.
08038004a ಕೃಪೇಣ ಶರವರ್ಷಾಣಿ ವಿಪ್ರಮುಕ್ತಾನಿ ಸಂಯುಗೇ|
08038004c ಸೃಂಜಯಾಃ ಶಾತಯಾಮಾಸುಃ ಶಲಭಾನಾಂ ವ್ರಜಾ ಇವ||
ಸಂಯುಗದಲ್ಲಿ ಕೃಪನು ಪ್ರಯೋಗಿಸಿದ ಶರವರ್ಷಗಳು ಮಿಡತೆಗಳ ಗುಂಪುಗಳೋಪಾದಿಯಲ್ಲಿ ಸೃಂಜಯರನ್ನು ಸಂಪೂರ್ಣವಾಗಿ ಮುಚ್ಚಿಬಿಟ್ಟಿತು.
08038005a ಶಿಖಂಡೀ ತು ತತಃ ಕ್ರುದ್ಧೋ ಗೌತಮಂ ತ್ವರಿತೋ ಯಯೌ|
08038005c ವವರ್ಷ ಶರವರ್ಷಾಣಿ ಸಮಂತಾದೇವ ಬ್ರಾಹ್ಮಣೇ||
ಆಗ ಕ್ರುದ್ಧ ಶಿಖಂಡಿಯು ತ್ವರೆಮಾಡಿ ಬಂದು ಬ್ರಾಹ್ಮಣ ಕೃಪನ ಸುತ್ತಲೂ ಶರವರ್ಷಗಳನ್ನು ಸುರಿಸಿದನು.
08038006a ಕೃಪಸ್ತು ಶರವರ್ಷಂ ತದ್ವಿನಿಹತ್ಯ ಮಹಾಸ್ತ್ರವಿತ್|
08038006c ಶಿಖಂಡಿನಂ ರಣೇ ಕ್ರುದ್ಧೋ ವಿವ್ಯಾಧ ದಶಭಿಃ ಶರೈಃ||
ಮಹಾಸ್ತ್ರವಿದು ಕೃಪನು ಆ ಶರವರ್ಷವನ್ನು ನಿರಸನಗೊಳಿಸಿ ಕ್ರುದ್ಧನಾಗಿ ಹತ್ತು ಶರಗಳಿಂದ ಶಿಖಂಡಿಯನ್ನು ಪ್ರಹರಿಸಿದನು.
08038007a ತತಃ ಶಿಖಂಡೀ ಕುಪೀತಃ ಶರೈಃ ಸಪ್ತಭಿರಾಹವೇ|
08038007c ಕೃಪಂ ವಿವ್ಯಾಧ ಸುಭೃಶಂ ಕಂಕಪತ್ರೈರಜಿಹ್ಮಗೈಃ||
ಆಗ ಕುಪಿತ ಶಿಖಂಡಿಯು ಯುದ್ಧದಲ್ಲಿ ಕಂಕಪತ್ರಗಳಿದ್ದ ಏಳು ಜಿಹ್ಮಗ ಶರಗಳಿಂದ ಕೃಪನನ್ನು ಹೊಡೆದನು.
08038008a ತತಃ ಕೃಪಃ ಶರೈಸ್ತೀಕ್ಷ್ಣೈಃ ಸೋಽತಿವಿದ್ಧೋ ಮಹಾರಥಃ|
08038008c ವ್ಯಶ್ವಸೂತರಥಂ ಚಕ್ರೇ ಪಾರ್ಷತಂ ತು ದ್ವಿಜೋತ್ತಮಃ||
ಆಗ ತೀಕ್ಷ್ಣ ಶರಗಳಿಂದ ಅತಿಯಾಗಿ ಗಾಯಗೊಂಡ ಮಹಾರಥ ದ್ವಿಜೋತ್ತಮ ಕೃಪನು ಪಾರ್ಷತ ಶಿಖಂಡಿಯನ್ನು ಅಶ್ವ-ಸೂತ-ರಥಗಳಿಂದ ವಿಹೀನನ್ನಾಗಿ ಮಾಡಿದನು.
08038009a ಹತಾಶ್ವಾತ್ತು ತತೋ ಯಾನಾದವಪ್ಲುತ್ಯ ಮಹಾರಥಃ|
08038009c ಚರ್ಮಖಡ್ಗೇ ಚ ಸಂಗೃಹ್ಯ ಸತ್ವರಂ ಬ್ರಾಹ್ಮಣಂ ಯಯೌ||
ಕುದುರೆಗಳು ವಧಿಸಲ್ಪಡಲು ಮಹಾರಥ ಶಿಖಂಡಿಯು ರಥದಿಂದ ಕೆಳಕ್ಕೆ ಧುಮುಕಿ ಬಲವತ್ತಾದ ಖಡ್ಗ ಗುರಾಣಿಗಳನ್ನು ಹಿಡಿದು ಬ್ರಾಹ್ಮಣ ಕೃಪನ ಬಳಿ ನುಗ್ಗಿದನು.
08038010a ತಮಾಪತಂತಂ ಸಹಸಾ ಶರೈಃ ಸನ್ನತಪರ್ವಭಿಃ|
08038010c ಚಾದಯಾಮಾಸ ಸಮರೇ ತದದ್ಭುತಮಿವಾಭವತ್||
ಸಮರದಲ್ಲಿ ಹಾಗೆ ನುಗ್ಗಿಬರುತ್ತಿದ್ದ ಶಿಖಂಡಿಯನ್ನು ಕೂಡಲೇ ಕೃಪನು ಸನ್ನತಪರ್ವ ಶರಗಳಿಂದ ಮುಚ್ಚಿಬಿಟ್ಟನು. ಅದೊಂದು ಅದ್ಭುತವಾಗಿತ್ತು.
08038011a ತತ್ರಾದ್ಭುತಮಪಶ್ಯಾಮ ಶಿಲಾನಾಂ ಪ್ಲವನಂ ಯಥಾ|
08038011c ನಿಶ್ಚೇಷ್ಟೋ ಯದ್ರಣೇ ರಾಜಂ ಶಿಖಂಡೀ ಸಮತಿಷ್ಠತ||
ರಾಜನ್! ಆಗ ರಣದಲ್ಲಿ ಶಿಖಂಡಿಯು ನಿಶ್ಚೇಷ್ಟನಾಗಿ ನಿಂತುಬಿಟ್ಟನು. ಕಲ್ಲುಗಳು ನೀರಿನಲ್ಲಿ ತೇಲಿದಂಥಹ ಆ ಅದ್ಭುತವನ್ನು ನಾವು ನೋಡಿದೆವು.
08038012a ಕೃಪೇಣ ಚಾದಿತಂ ದೃಷ್ಟ್ವಾ ನೃಪೋತ್ತಮ ಶಿಖಂಡಿನಂ|
08038012c ಪ್ರತ್ಯುದ್ಯಯೌ ಕೃಪಂ ತೂರ್ಣಂ ಧೃಷ್ಟದ್ಯುಮ್ನೋ ಮಹಾರಥಃ||
ನೃಪೋತ್ತಮ! ಕೃಪನಿಂದ ಶಿಖಂಡಿಯು ಮುಚ್ಚಿಹೋದುದನ್ನು ನೋಡಿ ಮಹಾರಥ ಧೃಷ್ಟದ್ಯುಮ್ನನು ಬೇಗನೇ ಕೃಪನಲ್ಲಿಗೆ ಆಗಮಿಸಿದನು.
08038013a ಧೃಷ್ಟದ್ಯುಮ್ನಂ ತತೋ ಯಾಂತಂ ಶಾರದ್ವತರಥಂ ಪ್ರತಿ|
08038013c ಪ್ರತಿಜಗ್ರಾಹ ವೇಗೇನ ಕೃತವರ್ಮಾ ಮಹಾರಥಃ||
ಶಾರದ್ವತನ ರಥದ ಬಳಿಬರುತ್ತಿದ್ದ ಧೃಷ್ಟದ್ಯುಮ್ನನನ್ನು ಮಹಾರಥ ಕೃತವರ್ಮನು ವೇಗದಿಂದ ಮುಂದೆಬಂದು ತಡೆದನು.
08038014a ಯುಧಿಷ್ಠಿರಮಥಾಯಾಂತಂ ಶಾರದ್ವತರಥಂ ಪ್ರತಿ|
08038014c ಸಪುತ್ರಂ ಸಹಸೇನಂ ಚ ದ್ರೋಣಪುತ್ರೋ ನ್ಯವಾರಯತ್||
ಆಗ ತನ್ನ ಮಗ ಮತ್ತು ಸೇನೆಗಳೊಂದಿಗೆ ಶಾರದ್ವತನ ರಥದ ಬಳಿಬರುತ್ತಿದ್ದ ಯುಧಿಷ್ಠಿರನನ್ನು ದ್ರೋಣಪುತ್ರನು ತಡೆದನು.
08038015a ನಕುಲಂ ಸಹದೇವಂ ಚ ತ್ವರಮಾಣೌ ಮಹಾರಥೌ|
08038015c ಪ್ರತಿಜಗ್ರಾಹ ತೇ ಪುತ್ರಃ ಶರವರ್ಷೇಣ ವಾರಯನ್||
ತ್ವರೆಮಾಡಿ ಬರುತ್ತಿದ್ದ ಮಹಾರಥ ನಕುಲ-ಸಹದೇವರನ್ನು ನಿನ್ನ ಪುತ್ರನು ಶರವರ್ಷಗಳಿಂದ ತಡೆದು ನಿಲ್ಲಿಸಿದನು.
08038016a ಭೀಮಸೇನಂ ಕರೂಷಾಂಶ್ಚ ಕೇಕಯಾನ್ಸಹಸೃಂಜಯಾನ್|
08038016c ಕರ್ಣೋ ವೈಕರ್ತನೋ ಯುದ್ಧೇ ವಾರಯಾಮಾಸ ಭಾರತ||
ಭಾರತ! ವೈಕರ್ತನ ಕರ್ಣನು ಯುದ್ಧದಲ್ಲಿ ಬೀಮಸೇನನನ್ನು ಕರುಷ-ಕೇಕಯ-ಸೃಂಜಯರೊಂದಿಗೆ ತಡೆದನು.
08038017a ಶಿಖಂಡಿನಸ್ತತೋ ಬಾಣಾನ್ಕೃಪಃ ಶಾರದ್ವತೋ ಯುಧಿ|
08038017c ಪ್ರಾಹಿಣೋತ್ತ್ವರಯಾ ಯುಕ್ತೋ ದಿಧಕ್ಷುರಿವ ಮಾರಿಷ||
ಮಾರಿಷ! ಆಗ ಯುದ್ಧದಲ್ಲಿ ಶಾರದ್ವತ ಕೃಪನು ಶಿಖಂಡಿಯನ್ನು ದಹಿಸಿಬಿಡುವನೋ ಎನ್ನುವಂತೆ ತ್ವರೆಮಾಡಿ ಬಾಣಗಳನ್ನು ಪ್ರಯೋಗಿಸುತ್ತಿದ್ದನು.
08038018a ತಾಂ ಶರಾನ್ಪ್ರೇಷಿತಾಂಸ್ತೇನ ಸಮಂತಾದ್ಧೇಮಭೂಷಣಾನ್|
08038018c ಚಿಚ್ಚೇದ ಖಡ್ಗಮಾವಿಧ್ಯ ಭ್ರಾಮಯಂಶ್ಚ ಪುನಃ ಪುನಃ||
ಎಲ್ಲಕಡೆಗಳಿಂದ ಕೃಪನು ಪ್ರಯೋಗಿಸುತ್ತಿದ್ದ ಹೇಮಭೂಷಿತ ಬಾಣಗಳನ್ನು ಶಿಖಂಡಿಯು ಕತ್ತಿಯನ್ನು ಪುನಃ ಪುನಃ ತಿರುಗಿಸುತ್ತಾ ಕತ್ತರಿಸಿ ಹಾಕುತ್ತಿದ್ದನು.
08038019a ಶತಚಂದ್ರಂ ತತಶ್ಚರ್ಮ ಗೌತಮಃ ಪಾರ್ಷತಸ್ಯ ಹ|
08038019c ವ್ಯಧಮತ್ಸಾಯಕೈಸ್ತೂರ್ಣಂ ತತ ಉಚ್ಚುಕ್ರುಶುರ್ಜನಾಃ||
ಆಗ ಗೌತಮನು ಪಾರ್ಷತನ ಶತಚಂದ್ರ ಗುರಾಣಿಯನ್ನು ಬೇಗನೇ ಸಾಯಕಗಳಿಂದ ಧ್ವಂಸಗೊಳಿಸಿದನು. ಆಗ ಅಲ್ಲಿದ್ದ ಜನರು ಗಟ್ಟಿಯಾಗಿ ಕೂಗಿಕೊಂಡರು.
08038020a ಸ ವಿಚರ್ಮಾ ಮಹಾರಾಜ ಖಡ್ಗಪಾಣಿರುಪಾದ್ರವತ್|
08038020c ಕೃಪಸ್ಯ ವಶಮಾಪನ್ನೋ ಮೃತ್ಯೋರಾಸ್ಯಮಿವಾತುರಃ||
ಮಹಾರಾಜ! ಗುರಾಣಿಯನ್ನು ಕಳೆದುಕೊಂಡು ರೋಗಿಯು ಮೃತ್ಯುಮುಖನಾಗುವಂತೆ ಕೃಪನ ವಶನಾಗಿದ್ದ ಶಿಖಂಡಿಯು ಖಡ್ಗಹಸ್ತನಾಗಿಯೇ ಅವನ ಕಡೆ ನುಗ್ಗಿ ಹೋದನು.
08038021a ಶಾರದ್ವತಶರೈರ್ಗ್ರಸ್ತಂ ಕ್ಲಿಶ್ಯಮಾನಂ ಮಹಾಬಲಂ|
08038021c ಚಿತ್ರಕೇತುಸುತೋ ರಾಜನ್ಸುಕೇತುಸ್ತ್ವರಿತೋ ಯಯೌ||
ರಾಜನ್! ಶಾರದ್ವತ ಶರಗಳಿಗೆ ಸಿಲುಕಿ ಸಂಕಟಪಡುತ್ತಿದ್ದ ಮಹಾಬಲ ಶಿಖಂಡಿಯನ್ನು ನೋಡಿ ಚಿತ್ರಕೇತುವಿನ ಮಗ ಸುಕೇತುವು ತ್ವರೆಮಾಡಿ ಅಲ್ಲಿಗೆ ಬಂದನು.
08038022a ವಿಕಿರನ್ಬ್ರಾಹ್ಮಣಂ ಯುದ್ಧೇ ಬಹುಭಿರ್ನಿಶಿತೈಃ ಶರೈಃ|
08038022c ಅಭ್ಯಾಪತದಮೇಯಾತ್ಮಾ ಗೌತಮಸ್ಯ ರಥಂ ಪ್ರತಿ||
ಅಮೇಯಾತ್ಮ ಸುಕೇತುವು ಯುದ್ಧದಲ್ಲಿ ಗೌತಮನ ರಥದ ಬಳಿ ಬಂದು ಅನೇಕ ನಿಶಿತ ಶರಗಳಿಂದ ಬ್ರಾಹ್ಮಣನ ಮೇಲೆ ಎರಗಿದನು.
08038023a ದೃಷ್ಟ್ವಾವಿಷಹ್ಯಂ ತಂ ಯುದ್ಧೇ ಬ್ರಾಹ್ಮಣಂ ಚರಿತವ್ರತಂ|
08038023c ಅಪಯಾತಸ್ತತಸ್ತೂರ್ಣಂ ಶಿಖಂಡೀ ರಾಜಸತ್ತಮ||
ರಾಜಸತ್ತಮ! ಚರಿತವ್ರತ ಬ್ರಾಹ್ಮಣ ಕೃಪನು ಸುಕೇತುವಿನೊಡನೆ ಯುದ್ಧದಲ್ಲಿ ನಿರತನಾಗಿರುವುದನ್ನು ನೋಡಿ ಶಿಖಂಡಿಯು ಬೇಗನೇ ಅಲ್ಲಿಂದ ಹೊರಟುಹೋದನು.
08038024a ಸುಕೇತುಸ್ತು ತತೋ ರಾಜನ್ಗೌತಮಂ ನವಭಿಃ ಶರೈಃ|
08038024c ವಿದ್ಧ್ವಾ ವಿವ್ಯಾಧ ಸಪ್ತತ್ಯಾ ಪುನಶ್ಚೈನಂ ತ್ರಿಭಿಃ ಶರೈಃ||
ರಾಜನ್! ಆಗ ಸುಕೇತುವಾದರೋ ಗೌತಮನನ್ನು ಒಂಭತ್ತು ಶರಗಳಿಂದ ಹೊಡೆದು ಎಪ್ಪತ್ಮೂರು ಬಾಣಗಳಿಂದ ಪುನಃ ಪ್ರಹರಿಸಿದನು.
08038025a ಅಥಾಸ್ಯ ಸಶರಂ ಚಾಪಂ ಪುನಶ್ಚಿಚ್ಚೇದ ಮಾರಿಷ|
08038025c ಸಾರಥಿಂ ಚ ಶರೇಣಾಸ್ಯ ಭೃಶಂ ಮರ್ಮಣ್ಯತಾಡಯತ್||
ಮಾರಿಷ! ಪುನಃ ಅವನು ಬಾಣಗಳಿಂದ ಯುಕ್ತವಾಗಿದ್ದ ಕೃಪನ ಧನುಸ್ಸನ್ನು ಕತ್ತರಿಸಿ, ಶರದಿಂದ ಸಾರಥಿಯ ಮರ್ಮಸ್ಥಳಗಳನ್ನು ಗಾಢವಾಗಿ ಪ್ರಹರಿಸಿದನು.
08038026a ಗೌತಮಸ್ತು ತತಃ ಕ್ರುದ್ಧೋ ಧನುರ್ಗೃಹ್ಯ ನವಂ ದೃಢಂ|
08038026c ಸುಕೇತುಂ ತ್ರಿಂಶತಾ ಬಾಣೈಃ ಸರ್ವಮರ್ಮಸ್ವತಾಡಯತ್||
ಆಗ ಕ್ರುದ್ಧ ಗೌತಮನಾದರೋ ದೃಢವಾದ ಹೊಸ ಧನುಸ್ಸನ್ನು ಹಿಡಿದು ಮೂವತ್ತು ಬಾಣಗಳಿಂದ ಸುಕೇತುವಿನ ಮರ್ಮಸ್ಥಾನಗಳಿಗೆ ಪ್ರಹರಿಸಿದನು.
08038027a ಸ ವಿಹ್ವಲಿತಸರ್ವಾಂಗಃ ಪ್ರಚಚಾಲ ರಥೋತ್ತಮೇ|
08038027c ಭೂಮಿಚಾಲೇ ಯಥಾ ವೃಕ್ಷಶ್ಚಲತ್ಯಾಕಂಪಿತೋ ಭೃಶಂ||
ಸುಕೇತುವು ಸರ್ವಾಂಗಗಳಲ್ಲಿ ವಿಹ್ವಲಿತನಾಗಿ ಭೂಕಂಪದ ಸಮಯದಲ್ಲಿ ವೃಕ್ಷಗಳು ಅಳ್ಳಾಡುವಂತೆ ತನ್ನ ಉತ್ತಮ ರಥದಲ್ಲಿ ತರತರನೆ ನಡುಗಿದನು.
08038028a ಚಲತಸ್ತಸ್ಯ ಕಾಯಾತ್ತು ಶಿರೋ ಜ್ವಲಿತಕುಂಡಲಂ|
08038028c ಸೋಷ್ಣೀಷಂ ಸಶಿರಸ್ತ್ರಾಣಂ ಕ್ಷುರಪ್ರೇಣಾನ್ವಪಾತಯತ್||
ಹೀಗೆ ನಡುಗುತ್ತಿದ್ದ ಅವನ ಕಾಯದಿಂದ ಪ್ರಜ್ವಲಿತ ಕುಂಡಲಗಳನ್ನುಳ್ಳ ಮತ್ತು ಕಿರೀಟದಿಂದ ಶೋಭಿಸುತ್ತಿದ್ದ ಶಿರವನ್ನು ಕೃಪನು ಕ್ಷುರಪ್ರದಿಂದ ಕೆಡವಿದನು.
08038029a ತಚ್ಚಿರಃ ಪ್ರಾಪತದ್ಭೂಮೌ ಶ್ಯೇನಾಹೃತಮಿವಾಮಿಷಂ|
08038029c ತತೋಽಸ್ಯ ಕಾಯೋ ವಸುಧಾಂ ಪಶ್ಚಾತ್ಪ್ರಾಪ ತದಾ ಚ್ಯುತಃ||
ಗಿಡುಗವು ಕೊಂಡೊಯ್ಯುತ್ತಿದ್ದ ಮಾಂಸದತುಂಡು ಕೆಳಕ್ಕೆ ಬೀಳುವಂತೆ ಶೀಘ್ರವಾಗಿ ಸುಕೇತುವಿನ ಶಿರವು ಭೂಮಿಯ ಮೇಲೆ ಬೀಳಲು, ಅವನ ಕಾಯವು ಕೆಳಗೆ ಬಿದ್ದಿತು.
08038030a ತಸ್ಮಿನ್ ಹತೇ ಮಹಾರಾಜ ತ್ರಸ್ತಾಸ್ತಸ್ಯ ಪದಾನುಗಾಃ|
08038030c ಗೌತಮಂ ಸಮರೇ ತ್ಯಕ್ತ್ವಾ ದುದ್ರುವುಸ್ತೇ ದಿಶೋ ದಶ||
ಮಹಾರಾಜ! ಸುಕೇತುವು ಹತನಾಗಲು ಅವನ ಪದಾನುಗರು ಭಯಗೊಂಡು ಗೌತಮನನ್ನು ಸಮರದಲ್ಲಿ ಬಿಟ್ಟು ಹತ್ತು ದಿಕ್ಕುಗಳಲ್ಲಿಯೂ ಓಡಿ ಹೋದರು.
08038031a ಧೃಷ್ಟದ್ಯುಮ್ನಂ ತು ಸಮರೇ ಸನ್ನಿವಾರ್ಯ ಮಹಾಬಲಃ|
08038031c ಕೃತವರ್ಮಾಬ್ರವೀದ್ಧೃಷ್ಟಸ್ತಿಷ್ಠ ತಿಷ್ಠೇತಿ ಪಾರ್ಷತಂ||
ಮಹಾಬಲ ಕೃತವರ್ಮನಾದರೋ ಸಮರದಲ್ಲಿ ಪಾರ್ಷತ ಧೃಷ್ಟದ್ಯುಮ್ನನನ್ನು ತಡೆದು “ನಿಲ್ಲು! ನಿಲ್ಲು!” ಎಂದು ಹೇಳಿದನು.
08038032a ತದಭೂತ್ತುಮುಲಂ ಯುದ್ಧಂ ವೃಷ್ಣಿಪಾರ್ಷತಯೋ ರಣೇ|
08038032c ಆಮಿಷಾರ್ಥೇ ಯಥಾ ಯುದ್ಧಂ ಶ್ಯೇನಯೋರ್ಗೃದ್ಧಯೋರ್ನೃಪ||
ನೃಪ! ಆಗ ಮಾಂಸದತುಂಡಿಗೆ ಎರಡು ಗಿಡುಗಗಳು ಕಾಳಗವಾಡುವಂತೆ ವೃಷ್ಣಿ-ಪಾರ್ಷತರ ನಡುವೆ ರಣದಲ್ಲಿ ತುಮುಲ ಯುದ್ಧವು ನಡೆಯಿತು.
08038033a ಧೃಷ್ಟದ್ಯುಮ್ನಸ್ತು ಸಮರೇ ಹಾರ್ದಿಕ್ಯಂ ನವಭಿಃ ಶರೈಃ|
08038033c ಆಜಘಾನೋರಸಿ ಕ್ರುದ್ಧಃ ಪೀಡಯನ್ ಹೃದಿಕಾತ್ಮಜಂ||
ಧೃಷ್ಟದ್ಯುಮ್ನನಾದರೋ ಸಮರದಲ್ಲಿ ಹಾರ್ದಿಕ್ಯನನ್ನು ಒಂಭತ್ತು ಶರಗಳಿಂದ ವಕ್ಷಃಸ್ಥಳದಲ್ಲಿ ಪ್ರಹರಿಸಿ ಕ್ರುದ್ಧನಾಗಿ ಹೃದಿಕಾತ್ಮಜನನ್ನು ಪೀಡಿಸಿದನು.
08038034a ಕೃತವರ್ಮಾ ತು ಸಮರೇ ಪಾರ್ಷತೇನ ದೃಢಾಹತಃ|
08038034c ಪಾರ್ಷತಂ ಸರಥಂ ಸಾಶ್ವಂ ಚಾದಯಾಮಾಸ ಸಾಯಕೈಃ||
ಕೃತವರ್ಮನಾದರೋ ಸಮರದಲ್ಲಿ ಪಾರ್ಷತನಿಂದ ದೃಢವಾಗಿ ಪ್ರಹರಿಸಲ್ಪಟ್ಟು ಸಾಯಕಗಳಿಂದ ಪಾರ್ಷತನನ್ನು – ಅವನ ರಥ, ಕುದುರೆಗಳೊಂದಿಗೆ – ಮುಚ್ಚಿಬಿಟ್ಟನು.
08038035a ಸರಥಶ್ಚಾದಿತೋ ರಾಜನ್ ಧೃಷ್ಟದ್ಯುಮ್ನೋ ನ ದೃಶ್ಯತೇ|
08038035c ಮೇಘೈರಿವ ಪರಿಚ್ಚನ್ನೋ ಭಾಸ್ಕರೋ ಜಲದಾಗಮೇ||
ರಾಜನ್! ರಥದೊಡನೆ ಮುಚ್ಚಿಹೋಗಿದ್ದ ಧೃಷ್ಟದ್ಯುಮ್ನನು ಮಳೆಗಾಲದ ಪ್ರಾರಂಭದಲ್ಲಿ ಮೇಘಗಳಿಂದ ಪರಿಚ್ಚನ್ನ ಭಾಸ್ಕರನಂತೆ ಕಾಣದಂತಾದನು.
08038036a ವಿಧೂಯ ತಂ ಬಾಣಗಣಂ ಶರೈಃ ಕನಕಭೂಷಣೈಃ|
08038036c ವ್ಯರೋಚತ ರಣೇ ರಾಜನ್ ಧೃಷ್ಟದ್ಯುಮ್ನಃ ಕೃತವ್ರಣಃ||
ರಾಜನ್! ಗಾಯಗೊಂಡಿದ್ದ ಧೃಷ್ಟದ್ಯುಮ್ನನು ಕನಕಭೂಷಣ ಶರಗಳಿಂದ ಕೃತವರ್ಮನ ಬಾಣಗಣಗಳನ್ನು ನಿರಸನಗೊಳಿಸಿ ಪುನಃ ಕಾಣಿಸಿಕೊಂಡನು.
08038037a ತತಸ್ತು ಪಾರ್ಷತಃ ಕ್ರುದ್ಧಃ ಶಸ್ತ್ರವೃಷ್ಟಿಂ ಸುದಾರುಣಾಂ|
08038037c ಕೃತವರ್ಮಾಣಮಾಸಾದ್ಯ ವ್ಯಸೃಜತ್ ಪೃತನಾಪತಿಃ||
ಆಗ ಸೇನಾನಾಯಕ ಧೃಷ್ಟದ್ಯುಮ್ನನು ಕ್ರುದ್ಧನಾಗಿ ಕೃತವರ್ಮನ ಬಳಿಸಾರಿ ಅವನ ಮೇಲೆ ದಾರುಣ ಶಸ್ತ್ರವೃಷ್ಟಿಯನ್ನು ಸುರಿಸಿದನು.
08038038a ತಾಮಾಪತಂತೀಂ ಸಹಸಾ ಶಸ್ತ್ರವೃಷ್ಟಿಂ ನಿರಂತರಾಂ|
08038038c ಶರೈರನೇಕಸಾಹಸ್ರೈರ್ಹಾರ್ದಿಕ್ಯೋ ವ್ಯಧಮದ್ಯುಧಿ||
ಯುದ್ಧದಲ್ಲಿ ತನ್ನ ಮೇಲೆ ನಿರಂತರವಾಗಿ ಬೀಳುತ್ತಿದ್ದ ಆ ಶಸ್ತ್ರವೃಷ್ಟಿಯನ್ನು ಹಾರ್ದಿಕ್ಯನು ಅನೇಕ ಸಹಸ್ರ ಶರಗಳಿಂದ ಕೂಡಲೇ ನಾಶಗೊಳಿಸಿದನು.
08038039a ದೃಷ್ಟ್ವಾ ತು ದಾರಿತಾಂ ಯುದ್ಧೇ ಶಸ್ತ್ರವೃಷ್ಟಿಂ ದುರುತ್ತರಾಂ|
08038039c ಕೃತವರ್ಮಾಣಮಭ್ಯೇತ್ಯ ವಾರಯಾಮಾಸ ಪಾರ್ಷತಃ||
ಯುದ್ಧದಲ್ಲಿ ಎದುರಿಸಲಸಾಧ್ಯ ಶಸ್ತ್ರವೃಷ್ಟಿಯನ್ನು ನಾಶಗೊಳಿಸಿದುದನ್ನು ಕಂಡು ಪಾರ್ಷತನು ಕೃತವರ್ಮನನ್ನು ಪ್ರಹರಿಸಿ ನಿಲ್ಲಿಸಿದನು.
08038040a ಸಾರಥಿಂ ಚಾಸ್ಯ ತರಸಾ ಪ್ರಾಹಿಣೋದ್ಯಮಸಾದನಂ|
08038040c ಭಲ್ಲೇನ ಶಿತಧಾರೇಣ ಸ ಹತಃ ಪ್ರಾಪತದ್ರಥಾತ್||
ಮತ್ತು ಕೂಡಲೇ ಅವನ ಸಾರಥಿಯನ್ನು ಯಮಸಾದನಕ್ಕೆ ಕಳುಹಿಸಿದನು. ತೀಕ್ಷ್ಣ ಭಲ್ಲದಿಂದ ಅವನು ಹತನಾಗಿ ರಥದಿಂದ ಕೆಳಕ್ಕೆ ಬಿದ್ದನು.
08038041a ಧೃಷ್ಟದ್ಯುಮ್ನಸ್ತು ಬಲವಾನ್ ಜಿತ್ವಾ ಶತ್ರುಂ ಮಹಾರಥಂ|
08038041c ಕೌರವಾನ್ಸಮರೇ ತೂರ್ಣಂ ವಾರಯಾಮಾಸ ಸಾಯಕೈಃ||
ಬಲವಾನ್ ಧೃಷ್ಟದ್ಯುಮ್ನನಾದರೋ ಮಹಾರಥ ಶತ್ರುವನ್ನು ಸಮರದಲ್ಲಿ ಗೆದ್ದು ಕೂಡಲೇ ಸಾಯಕಗಳಿಂದ ಕೌರವರನ್ನು ತಡೆದನು.
08038042a ತತಸ್ತೇ ತಾವಕಾ ಯೋಧಾ ಧೃಷ್ಟದ್ಯುಮ್ನಮುಪಾದ್ರವನ್|
08038042c ಸಿಂಹನಾದರವಂ ಕೃತ್ವಾ ತತೋ ಯುದ್ಧಮವರ್ತತ||
ಆಗ ನಿನ್ನ ಕಡೆಯ ಯೋಧರು ಸಿಂಹನಾದಗೈಯುತ್ತಾ ಧೃಷ್ಟದ್ಯುಮ್ನನನ್ನು ಆಕ್ರಮಿಸಿದರು. ಯುದ್ಧವು ಮುಂದುವರೆಯಿತು.”
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲಯುದ್ಧೇ ಅಷ್ಠತ್ರಿಂಶೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲಯುದ್ಧ ಎನ್ನುವ ಮೂವತ್ತೆಂಟನೇ ಅಧ್ಯಾಯವು.