Sauptika Parva: Chapter 16

ಸೌಪ್ತಿಕಪರ್ವ: ಐಷೀಕ ಪರ್ವ

೧೬

ಕೃಷ್ಣನು ಉತ್ತರೆಯ ಗರ್ಭಕ್ಕೆ ೬೦ ವರ್ಷಗಳ ಆಯುಸ್ಸನ್ನಿತ್ತು ಅಶ್ವತ್ಥಾಮನನ್ನು ಶಪಿಸಿದುದು (೧-೧೫). ಅಶ್ವತ್ಥಾಮನು ಪಾಂಡವರಿಗೆ ತನ್ನ ಮಣಿಯನ್ನಿತ್ತು ವನಕ್ಕೆ ತೆರಳಿದುದು (೧೬-೧೯). ಅಶ್ವತ್ಥಾಮನ ಮಣಿಯನ್ನು ದ್ರೌಪದಿಗಿತ್ತು ಸಂತವಿಸಿದುದು (೨೦-೩೬).

Image result for dhritarashtra embraces bhima10016001 ವೈಶಂಪಾಯನ ಉವಾಚ|

10016001a ತದಾಜ್ಞಾಯ ಹೃಷೀಕೇ ವಿಸೃಷ್ಟಂ ಪಾಪಕರ್ಮಣಾ|

10016001c ಹೃಷ್ಯಮಾಣ ಇದಂ ವಾಕ್ಯಂ ದ್ರೌಣಿಂ ಪ್ರತ್ಯಬ್ರವೀತ್ತದಾ||

ವೈಶಂಪಾಯನನು ಹೇಳಿದನು: “ಆ ಪಾಪಕರ್ಮಿಯು ಅಸ್ತ್ರವನ್ನು ವಿಸೃಜಿಸುದುದನ್ನು ತಿಳಿದು ಹೃಷೀಕೇಶನು ಹರ್ಷಗೊಂಡು ದ್ರೌಣಿಗೆ ಈ ಮಾತನ್ನಾಡಿದನು:

10016002a ವಿರಾಟಸ್ಯ ಸುತಾಂ ಪೂರ್ವಂ ಸ್ನುಷಾಂ ಗಾಂಡೀವಧನ್ವನಃ|

10016002c ಉಪಪ್ಲವ್ಯಗತಾಂ ದೃಷ್ಟ್ವಾ ವ್ರತವಾನ್ಬ್ರಾಹ್ಮಣೋಽಬ್ರವೀತ್||

“ಗಾಂಡೀವಧನ್ವಿಯ ಸೊಸೆ ವಿರಾಟನ ಮಗಳು ಹಿಂದೆ ಉಪಪ್ಲವ್ಯಕ್ಕೆ ಹೋದಾಗ ವ್ರತವಂತ ಬ್ರಾಹ್ಮಣನೋರ್ವನು ಅವಳನ್ನು ನೋಡಿ ಹೇಳಿದ್ದನು:

10016003a ಪರಿಕ್ಷೀಣೇಷು ಕುರುಷು ಪುತ್ರಸ್ತವ ಜನಿಷ್ಯತಿ|

10016003c ಏತದಸ್ಯ ಪರಿಕ್ಷಿತ್ತ್ವಂ ಗರ್ಭಸ್ಥಸ್ಯ ಭವಿಷ್ಯತಿ||

“ಕುರುಗಳು ಕ್ಷೀಣಿಸಿಹೋಗುವಾಗ ನಿನ್ನ ಮಗನು ಹುಟ್ಟುತ್ತಾನೆ. ಗರ್ಭಸ್ಥನಾಗಿರುವ ಇವನ ಹೆಸರು ಪರಿಕ್ಷಿತನೆಂದೇ ಆಗುತ್ತದೆ!”

10016004a ತಸ್ಯ ತದ್ವಚನಂ ಸಾಧೋಃ ಸತ್ಯಮೇವ ಭವಿಷ್ಯತಿ|

10016004c ಪರಿಕ್ಷಿದ್ಭವಿತಾ ಹ್ಯೇಷಾಂ ಪುನರ್ವಂಶಕರಃ ಸುತಃ||

ಆ ಸಾಧುವಿನ ಮಾತು ಸತ್ಯವೇ ಆಗುತ್ತದೆ. ಅವಳ ಮಗ ಪರಿಕ್ಷಿತನು ಪುನಃ ವಂಶಕರನಾಗುವನು.”

10016005a ಏವಂ ಬ್ರುವಾಣಂ ಗೋವಿಂದಂ ಸಾತ್ವತಪ್ರವರಂ ತದಾ|

10016005c ದ್ರೌಣಿಃ ಪರಮಸಂರಬ್ಧಃ ಪ್ರತ್ಯುವಾಚೇದಮುತ್ತರಂ||

ಹೀಗೆ ಹೇಳಿದ ಸಾತ್ವತಶ್ರೇಷ್ಠ ಗೋವಿಂದನಿಗೆ ಪರಮಕುಪಿತ ದ್ರೌಣಿಯು ಉತ್ತರವನ್ನಿತ್ತನು:

10016006a ನೈತದೇವಂ ಯಥಾತ್ಥ ತ್ವಂ ಪಕ್ಷಪಾತೇನ ಕೇಶವ|

10016006c ವಚನಂ ಪುಂಡರೀಕಾಕ್ಷ ನ ಚ ಮದ್ವಾಕ್ಯಮನ್ಯಥಾ||

“ಪುಂಡರೀಕಾಕ್ಷ! ಕೇಶವ! ಪಕ್ಷಪಾತದಿಂದ ಇದೇನು ನೀನು ಹೇಳುತ್ತಿರುವೆಯೋ ಅದು ಹಾಗೆ ಆಗುವುದಿಲ್ಲ! ನನ್ನ ಮಾತು ಅನ್ಯಥಾ ಆಗುವುದಿಲ್ಲ.

10016007a ಪತಿಷ್ಯತ್ಯೇತದಸ್ತ್ರಂ ಹಿ ಗರ್ಭೇ ತಸ್ಯಾ ಮಯೋದ್ಯತಂ|

10016007c ವಿರಾಟದುಹಿತುಃ ಕೃಷ್ಣ ಯಾಂ ತ್ವಂ ರಕ್ಷಿತುಮಿಚ್ಚಸಿ||

ಕೃಷ್ಣ! ನೀನು ಯಾರನ್ನು ರಕ್ಷಿಸಲು ಇಚ್ಛಿಸುತ್ತಿರುವೆಯೋ ವಿರಾಟಪುತ್ರಿಯ ಗರ್ಭದ ಮೇಲೆ ನಾನು ಪ್ರಯೋಗಿಸಿದ ಅಸ್ತ್ರವು ಈಗಾಗಲೇ ಬಿದ್ದಿದೆ!

10016008 ವಾಸುದೇವ ಉವಾಚ|

10016008a ಅಮೋಘಃ ಪರಮಾಸ್ತ್ರಸ್ಯ ಪಾತಸ್ತಸ್ಯ ಭವಿಷ್ಯತಿ|

10016008c ಸ ತು ಗರ್ಭೋ ಮೃತೋ ಜಾತೋ ದೀರ್ಘಮಾಯುರವಾಪ್ಸ್ಯತಿ||

ವಾಸುದೇವನು ಹೇಳಿದನು: “ಪರಮಾಸ್ತ್ರದ ಪತನವು ಅಮೋಘವಾಗುತ್ತದೆ. ಮೃತನಾಗಿ ಹುಟ್ಟುವ ಆ ಗರ್ಭವು ದೀರ್ಘ ಆಯುಸ್ಸನ್ನು ಪಡೆಯುತ್ತಾನೆ.

10016009a ತ್ವಾಂ ತು ಕಾಪುರುಷಂ ಪಾಪಂ ವಿದುಃ ಸರ್ವೇ ಮನೀಷಿಣಃ|

10016009c ಅಸಕೃತ್ಪಾಪಕರ್ಮಾಣಂ ಬಾಲಜೀವಿತಘಾತಕಂ||

ನಿನ್ನನ್ನಾದರೋ ಸರ್ವ ಮನೀಷಿಣರು ಕಾಪುರುಷ, ಪಾಪಿ, ಪಾಪಕರ್ಮಗಳನ್ನು ಮಾಡಿದವ ಮತ್ತು ಬಾಲಜೀವಿತಘಾತಕನೆಂದೂ ತಿಳಿಯುತ್ತಾರೆ.

10016010a ತಸ್ಮಾತ್ತ್ವಮಸ್ಯ ಪಾಪಸ್ಯ ಕರ್ಮಣಃ ಫಲಮಾಪ್ನುಹಿ|

10016010c ತ್ರೀಣಿ ವರ್ಷಸಹಸ್ರಾಣಿ ಚರಿಷ್ಯಸಿ ಮಹೀಮಿಮಾಂ|

10016010e ಅಪ್ರಾಪ್ನುವನ್ಕ್ವ ಚಿತ್ಕಾಂ ಚಿತ್ಸಂವಿದಂ ಜಾತು ಕೇನ ಚಿತ್||

ಆದುದರಿಂದ ನೀನು ನಿನ್ನ ಪಾಪಕರ್ಮದ ಫಲವನ್ನು ಹೊಂದುತ್ತೀಯೆ. ಮೂರು ಸಾವಿರ ವರ್ಷಗಳು ಈ ಭೂಮಿಯಲ್ಲಿ ಅಲೆಯುತ್ತೀಯೆ. ಆಗ ನಿನ್ನೊಡನೆ ಯಾರೂ ಏನನ್ನೂ ಮಾತನಾಡುವುದಿಲ್ಲ.

10016011a ನಿರ್ಜನಾನಸಹಾಯಸ್ತ್ವಂ ದೇಶಾನ್ಪ್ರವಿಚರಿಷ್ಯಸಿ|

10016011c ಭವಿತ್ರೀ ನ ಹಿ ತೇ ಕ್ಷುದ್ರ ಜನಮಧ್ಯೇಷು ಸಂಸ್ಥಿತಿಃ||

ನಿರ್ಜನಪ್ರದೇಶಗಳಲ್ಲಿ ಅಸಹಾಯಕನಾಗಿ ನೀನು ಅಲೆದಾಡುತ್ತೀಯೆ. ಕ್ಷುದ್ರ! ಇನ್ನು ಮುಂದೆ ನೀನು ಜನರ ಮಧ್ಯೆ ವಾಸಮಾಡಲಾರೆ!

10016012a ಪೂಯಶೋಣಿತಗಂಧೀ ಚ ದುರ್ಗಕಾಂತಾರಸಂಶ್ರಯಃ|

10016012c ವಿಚರಿಷ್ಯಸಿ ಪಾಪಾತ್ಮನ್ಸರ್ವವ್ಯಾಧಿಸಮನ್ವಿತಃ||

ಪಾಪಾತ್ಮನ್! ಕೀವು ಮತ್ತು ರಕ್ತದ ದುರ್ಗಂಧದಿಂದ ಕೂಡಿದ ನೀನು ದುರ್ಗ-ಕಾಂತಾರಗಳಲ್ಲಿ ವಾಸಿಸುವೆ. ಸರ್ವವ್ಯಾಧಿಸಮನ್ವಿತನಾಗಿ ಸಂಚರಿಸುತ್ತಿರುತ್ತೀಯೆ.

10016013a ವಯಃ ಪ್ರಾಪ್ಯ ಪರಿಕ್ಷಿತ್ತು ವೇದವ್ರತಮವಾಪ್ಯ ಚ|

10016013c ಕೃಪಾಚ್ಚಾರದ್ವತಾದ್ವೀರಃ ಸರ್ವಾಸ್ತ್ರಾಣ್ಯುಪಲಪ್ಸ್ಯತೇ||

ವೀರ ಪರಿಕ್ಷಿತನಾದರೋ ವಯಸ್ಕನಾಗಿ ವೇದವ್ರತಗಳನ್ನು ಪಡೆಯುತ್ತಾನೆ. ಶಾರದ್ವತ ಕೃಪನಿಂದ ಸರ್ವಾಸ್ತ್ರಗಳನ್ನು ಪಡೆದುಕೊಳ್ಳುತ್ತಾನೆ.

10016014a ವಿದಿತ್ವಾ ಪರಮಾಸ್ತ್ರಾಣಿ ಕ್ಷತ್ರಧರ್ಮವ್ರತೇ ಸ್ಥಿತಃ|

10016014c ಷಷ್ಟಿಂ ವರ್ಷಾಣಿ ಧರ್ಮಾತ್ಮಾ ವಸುಧಾಂ ಪಾಲಯಿಷ್ಯತಿ||

ಪರಮಾಸ್ತ್ರಗಳನ್ನು ತಿಳಿದುಕೊಂಡು ಕ್ಷತ್ರಧರ್ಮದಲ್ಲಿದ್ದುಕೊಂಡು ಧರ್ಮಾತ್ಮನು ಅರವತ್ತು ವರ್ಷಗಳು ವಸುಧೆಯನ್ನು ಪಾಲಿಸುತ್ತಾನೆ.

10016015a ಇತಶ್ಚೋರ್ಧ್ವಂ ಮಹಾಬಾಹುಃ ಕುರುರಾಜೋ ಭವಿಷ್ಯತಿ|

10016015c ಪರಿಕ್ಷಿನ್ನಾಮ ನೃಪತಿರ್ಮಿಷತಸ್ತೇ ಸುದುರ್ಮತೇ|

10016015e ಪಶ್ಯ ಮೇ ತಪಸೋ ವೀರ್ಯಂ ಸತ್ಯಸ್ಯ ಚ ನರಾಧಮ||

ಇನ್ನುಮುಂದೆ ಆ ಮಹಾಬಾಹುವೇ ಕುರುರಾಜನಾಗುತ್ತಾನೆ. ಸುದುರ್ಮತೇ! ನೀನು ನೋಡುತ್ತಿರುವಂತೆಯೇ ಇವನು ಪರಿಕ್ಷಿತನೆಂಬ ಹೆಸರಿನ ನೃಪತಿಯಾಗುತ್ತಾನೆ. ನರಾಧಮ! ನನ್ನ ತಪಸ್ಸಿನ ಮತ್ತು ಸತ್ಯದ ವೀರ್ಯವನ್ನು ನೋಡು!”

10016016 ವ್ಯಾಸ ಉವಾಚ|

10016016a ಯಸ್ಮಾದನಾದೃತ್ಯ ಕೃತಂ ತ್ವಯಾಸ್ಮಾನ್ಕರ್ಮ ದಾರುಣಂ|

10016016c ಬ್ರಾಹ್ಮಣಸ್ಯ ಸತಶ್ಚೈವ ಯಸ್ಮಾತ್ತೇ ವೃತ್ತಮೀದೃಶಂ||

ವ್ಯಾಸನು ಹೇಳಿದನು: “ನಮ್ಮೆಲ್ಲರನ್ನು ಅನಾದರಿಸಿ ನೀನು ಈ ದಾರುಣಕರ್ಮವನ್ನೆಸಗಿದೆ! ಸದ್ಬ್ರಾಹ್ಮಣನಾಗಿದ್ದು ನೀನು ಈ ರೀತಿ ನಡೆದುಕೊಂಡೆ!

10016017a ತಸ್ಮಾದ್ಯದ್ದೇವಕೀಪುತ್ರ ಉಕ್ತವಾನುತ್ತಮಂ ವಚಃ|

10016017c ಅಸಂಶಯಂ ತೇ ತದ್ಭಾವಿ ಕ್ಷುದ್ರಕರ್ಮನ್ವ್ರಜಾಶ್ವಿತಃ||

ಕ್ಷುದ್ರಕರ್ಮಿಯೇ! ಆದುದರಿಂದ ದೇವಕೀಪುತ್ರನಾಡಿದ ಉತ್ತಮ ವಚನದಂತೆಯೇ ನಡೆಯುತ್ತದೆ. ಅದರಲ್ಲಿ ಸಂಶಯವೇ ಇಲ್ಲ.”

10016018 ಅಶ್ವತ್ಥಾಮೋವಾಚ|

10016018a ಸಹೈವ ಭವತಾ ಬ್ರಹ್ಮನ್ ಸ್ಥಾಸ್ಯಾಮಿ ಪುರುಷೇಷ್ವಹಂ|

10016018c ಸತ್ಯವಾಗಸ್ತು ಭಗವಾನಯಂ ಚ ಪುರುಷೋತ್ತಮಃ||

ಅಶ್ವತ್ಥಾಮನು ಹೇಳಿದನು: “ಬ್ರಹ್ಮನ್! ನಾನು ಇನ್ನು ಮುಂದೆ ಮನುಷ್ಯರಲ್ಲಿ ನಿನ್ನೊಡನೆ ಮಾತ್ರ ಇದ್ದುಬಿಡುತ್ತೇನೆ. ಭಗವಾನ್ ಪುರುಷೋತ್ತಮನು ಹೇಳಿದುದು ಸತ್ಯವಾಗಲಿ!””

10016019 ವೈಶಂಪಾಯನ ಉವಾಚ|

10016019a ಪ್ರದಾಯಾಥ ಮಣಿಂ ದ್ರೌಣಿಃ ಪಾಂಡವಾನಾಂ ಮಹಾತ್ಮನಾಂ|

10016019c ಜಗಾಮ ವಿಮನಾಸ್ತೇಷಾಂ ಸರ್ವೇಷಾಂ ಪಶ್ಯತಾಂ ವನಂ||

ವೈಶಂಪಾಯನನು ಹೇಳಿದನು: “ಆಗ ದ್ರೌಣಿಯು ಮಹಾತ್ಮ ಪಾಂಡವರಿಗೆ ಮಣಿಯನ್ನಿತ್ತು, ಅವರೆಲ್ಲರೂ ನೋಡುತ್ತಿರಲು ವಿಮನಸ್ಕನಾಗಿ ವನಕ್ಕೆ ತೆರಳಿದನು.

10016020a ಪಾಂಡವಾಶ್ಚಾಪಿ ಗೋವಿಂದಂ ಪುರಸ್ಕೃತ್ಯ ಹತದ್ವಿಷಃ|

10016020c ಕೃಷ್ಣದ್ವೈಪಾಯನಂ ಚೈವ ನಾರದಂ ಚ ಮಹಾಮುನಿಂ||

10016021a ದ್ರೋಣಪುತ್ರಸ್ಯ ಸಹಜಂ ಮಣಿಮಾದಾಯ ಸತ್ವರಾಃ|

10016021c ದ್ರೌಪದೀಮಭ್ಯಧಾವಂತ ಪ್ರಾಯೋಪೇತಾಂ ಮನಸ್ವಿನೀಂ||

ಪಾಂಡವರಾದರೋ ಶತ್ರುವನ್ನು ನಾಶಪಡಿಸಿ, ದ್ರೋಣಪುತ್ರನ ಸಹಜ ಮಣಿಯನ್ನು ತೆಗೆದುಕೊಂಡು, ಗೋವಿಂದನನ್ನು ಮುಂದಿರಿಸಿಕೊಂಡು ಕೃಷ್ಣದ್ವೈಪಾಯನ ಮತ್ತು ಮಹಾಮುನಿ ನಾರದರೊಂದಿಗೆ, ಪ್ರಾಯೋಪವೇಶಮಾಡಿದ್ದ ದ್ರೌಪದಿಯ ಬಳಿಗೆ ತ್ವರೆಮಾಡಿ ಧಾವಿಸಿದರು.

10016022a ತತಸ್ತೇ ಪುರುಷವ್ಯಾಘ್ರಾಃ ಸದಶ್ವೈರನಿಲೋಪಮೈಃ|

10016022c ಅಭ್ಯಯುಃ ಸಹದಾಶಾರ್ಹಾಃ ಶಿಬಿರಂ ಪುನರೇವ ಹ||

ಆಗ ಪುರುಷವ್ಯಾಘ್ರರು ಅನಿಲೋಪಮ ಅಶ್ವಗಳೊಂದಿಗೆ ದಾಶಾರ್ಹನೊಡಗೂಡಿ ಪುನಃ ಶಿಬಿರಕ್ಕೆ ಬಂದರು.

10016023a ಅವತೀರ್ಯ ರಥಾಭ್ಯಾಂ ತು ತ್ವರಮಾಣಾ ಮಹಾರಥಾಃ|

10016023c ದದೃಶುರ್ದ್ರೌಪದೀಂ ಕೃಷ್ಣಾಮಾರ್ತಾಮಾರ್ತತರಾಃ ಸ್ವಯಂ||

ತ್ವರೆಮಾಡಿ ಎರಡೂ ರಥಗಳಿಂದಿಳಿದು ಸ್ವಯಂ ಆರ್ತರಾಗಿದ್ದ ಮಹಾರಥರು ಅತ್ಯಂತ ಆರ್ತಳಾಗಿದ್ದ ದ್ರೌಪದಿ ಕೃಷ್ಣೆಯನ್ನು ನೋಡಿದರು.

10016024a ತಾಮುಪೇತ್ಯ ನಿರಾನಂದಾಂ ದುಃಖಶೋಕಸಮನ್ವಿತಾಂ|

10016024c ಪರಿವಾರ್ಯ ವ್ಯತಿಷ್ಠಂತ ಪಾಂಡವಾಃ ಸಹಕೇಶವಾಃ||

ಆನಂದರಹಿತಳಾಗಿ ದುಃಖಶೋಖಸಮನ್ವಿತಳಾಗಿದ್ದ ಅವಳನ್ನು ಸುತ್ತುವರೆದು ಪಾಂಡವರು ಕೇಶವನೊಂದಿಗೆ ಕುಳಿತುಕೊಂಡರು.

10016025a ತತೋ ರಾಜ್ಞಾಭ್ಯನುಜ್ಞಾತೋ ಭೀಮಸೇನೋ ಮಹಾಬಲಃ|

10016025c ಪ್ರದದೌ ತು ಮಣಿಂ ದಿವ್ಯಂ ವಚನಂ ಚೇದಮಬ್ರವೀತ್||

ಆಗ ರಾಜನ ಅನುಜ್ಞೆಯಂತೆ ಮಹಾಬಲ ಭೀಮಸೇನನು ಅವಳಿಗೆ ದಿವ್ಯ ಮಣಿಯನ್ನಿತ್ತು ಮಾತನ್ನಾಡಿದನು:

10016026a ಅಯಂ ಭದ್ರೇ ತವ ಮಣಿಃ ಪುತ್ರಹಂತಾ ಜಿತಃ ಸ ತೇ|

10016026c ಉತ್ತಿಷ್ಠ ಶೋಕಮುತ್ಸೃಜ್ಯ ಕ್ಷತ್ರಧರ್ಮಮನುಸ್ಮರ||

“ಭದ್ರೇ! ಪುತ್ರಹಂತಕನನ್ನು ಗೆದ್ದು ನಿನಗೋಸ್ಕರ ತಂದಿರುವ ಇದೋ ಮಣಿ! ಶೋಕವನ್ನು ತೊರೆದು ಎದ್ದೇಳು! ಕ್ಷತ್ರಧರ್ಮವನ್ನು ಸ್ಮರಿಸಿಕೋ!

10016027a ಪ್ರಯಾಣೇ ವಾಸುದೇವಸ್ಯ ಶಮಾರ್ಥಮಸಿತೇಕ್ಷಣೇ|

10016027c ಯಾನ್ಯುಕ್ತಾನಿ ತ್ವಯಾ ಭೀರು ವಾಕ್ಯಾನಿ ಮಧುಘಾತಿನಃ||

ಅಸಿತೇಕ್ಷಣೇ! ಭೀರು! ಸಂಧಿಗಾಗಿ ವಾಸುದೇವನು ಪ್ರಯಾಣಮಾಡುವಾಗ ನೀನು ಮಧುಘಾತಿನಿಗೆ ಮಾತುಗಳನ್ನು ಹೇಳಿದ್ದೆ:

10016028a ನೈವ ಮೇ ಪತಯಃ ಸಂತಿ ನ ಪುತ್ರಾ ಭ್ರಾತರೋ ನ ಚ|

10016028c ನೈವ ತ್ವಮಪಿ ಗೋವಿಂದ ಶಮಮಿಚ್ಚತಿ ರಾಜನಿ||

10016029a ಉಕ್ತವತ್ಯಸಿ ಧೀರಾಣಿ ವಾಕ್ಯಾನಿ ಪುರುಷೋತ್ತಮಂ|

10016029c ಕ್ಷತ್ರಧರ್ಮಾನುರೂಪಾಣಿ ತಾನಿ ಸಂಸ್ಮರ್ತುಮರ್ಹಸಿ||

“ನನಗೆ ಪತಿಗಳಿಲ್ಲ! ಪುತ್ರರಿಲ್ಲ! ಸಹೋದರರೂ ಇಲ್ಲ! ರಾಜನೊಂದಿಗೆ ಶಾಂತಿಯನ್ನು ಬಯಸುವ ಗೋವಿಂದ ನೀನೂ ಕೂಡ ನನ್ನ ಪಾಲಿಗಿಲ್ಲ!” ಕ್ಷತ್ರಧರ್ಮಕ್ಕೆ ಅನುರೂಪ ಈ ಧೀರ ವಾಕ್ಯಗಳನ್ನು ನೀನು ಪುರುಷೋತ್ತಮನೊಡನೆ ಹೇಳಿದ್ದೆ. ಅದನ್ನು ಸ್ಮರಿಸಿಕೋ!

10016030a ಹತೋ ದುರ್ಯೋಧನಃ ಪಾಪೋ ರಾಜ್ಯಸ್ಯ ಪರಿಪಂಥಕಃ|

10016030c ದುಃಶಾಸನಸ್ಯ ರುಧಿರಂ ಪೀತಂ ವಿಸ್ಫುರತೋ ಮಯಾ||

ರಾಜ್ಯವನ್ನು ಅಪಹರಿಸಿದ್ದ ಪಾಪಿ ದುರ್ಯೋಧನನು ಹತನಾಗಿದ್ದಾನೆ. ಚಡಪಡಿಸುತ್ತಿದ್ದ ದುಃಶಾಸನನ ರಕ್ತವನ್ನು ನಾನು ಕುಡಿದಿದ್ದೇನೆ.

10016031a ವೈರಸ್ಯ ಗತಮಾನೃಣ್ಯಂ ನ ಸ್ಮ ವಾಚ್ಯಾ ವಿವಕ್ಷತಾಂ|

10016031c ಜಿತ್ವಾ ಮುಕ್ತೋ ದ್ರೋಣಪುತ್ರೋ ಬ್ರಾಹ್ಮಣ್ಯಾದ್ಗೌರವೇಣ ಚ||

ವೈರದ ಋಣವನ್ನು ನಾವು ಪೂರೈಸಿದ್ದೇವೆ. ನಮ್ಮ ಮೇಲೆ ನಿಂದನೀಯ ಮಾತುಗಳ್ಯಾವುವೂ ಇಲ್ಲ. ದ್ರೋಣಪುತ್ರನನ್ನು ಗೆದ್ದು ಬ್ರಾಹ್ಮಣನೆನ್ನುವ ಗೌರವದಿಂದ ಅವನನ್ನು ಬಿಟ್ಟುಬಿಟ್ಟೆವು.

10016032a ಯಶೋಽಸ್ಯ ಪಾತಿತಂ ದೇವಿ ಶರೀರಂ ತ್ವವಶೇಷಿತಂ|

10016032c ವಿಯೋಜಿತಶ್ಚ ಮಣಿನಾ ನ್ಯಾಸಿತಶ್ಚಾಯುಧಂ ಭುವಿ||

ದೇವೀ! ಮಣಿಯನ್ನು ತ್ಯಜಿಸಿದ ಮತ್ತು ಆಯುಧವನ್ನು ಭೂಮಿಯಮೇಲಿಟ್ಟ ಅವನ ಯಶಸ್ಸು ಬಿದ್ದುಹೋಗಿ ಶರೀರಮಾತ್ರ ಉಳಿದುಕೊಂಡಿದೆ.”

10016033 ದ್ರೌಪದ್ಯುವಾಚ|

10016033a ಕೇವಲಾನೃಣ್ಯಮಾಪ್ತಾಸ್ಮಿ ಗುರುಪುತ್ರೋ ಗುರುರ್ಮಮ|

10016033c ಶಿರಸ್ಯೇತಂ ಮಣಿಂ ರಾಜಾ ಪ್ರತಿಬಧ್ನಾತು ಭಾರತ||

ದ್ರೌಪದಿಯು ಹೇಳಿದಳು: “ಪುತ್ರ‌ಋಣದಿಂದ ಮುಕ್ತಳಾಗಿದ್ದೇನೆ. ಆ ಗುರುಪುತ್ರನು ನನಗೂ ಗುರುವೇ. ಭಾರತ! ರಾಜನು ಈ ಮಣಿಯನ್ನು ಧರಿಸಲಿ!””

10016034 ವೈಶಂಪಾಯನ ಉವಾಚ|

10016034a ತಂ ಗೃಹೀತ್ವಾ ತತೋ ರಾಜಾ ಶಿರಸ್ಯೇವಾಕರೋತ್ತದಾ|

10016034c ಗುರೋರುಚ್ಚಿಷ್ಟಮಿತ್ಯೇವ ದ್ರೌಪದ್ಯಾ ವಚನಾದಪಿ||

ವೈಶಂಪಾಯನನು ಹೇಳಿದನು: “ಆಗ ರಾಜನು ದ್ರೌಪದಿಯ ವಚನದಂತೆ ಗುರುವಿನ ಪ್ರಸಾದವೆಂದು ಅದನ್ನು ಸ್ವೀಕರಿಸಿ ತನ್ನ ಶಿರದಲ್ಲಿ ಧರಿಸಿಕೊಂಡನು.

10016035a ತತೋ ದಿವ್ಯಂ ಮಣಿವರಂ ಶಿರಸಾ ಧಾರಯನ್ ಪ್ರಭುಃ|

10016035c ಶುಶುಭೇ ಸ ಮಹಾರಾಜಃ ಸಚಂದ್ರ ಇವ ಪರ್ವತಃ||

ಪ್ರಭು ಮಹಾರಾಜನು ದಿವ್ಯ ಶ್ರೇಷ್ಠ ಮಣಿಯನ್ನು ಶಿರದಲ್ಲಿ ಧರಿಸಿ ಮೇಲೆ ಚಂದ್ರನಿರುವ ಪರ್ವತದಂತೆ ಶೋಭಿಸಿದನು.

10016036a ಉತ್ತಸ್ಥೌ ಪುತ್ರಶೋಕಾರ್ತಾ ತತಃ ಕೃಷ್ಣಾ ಮನಸ್ವಿನೀ|

10016036c ಕೃಷ್ಣಂ ಚಾಪಿ ಮಹಾಬಾಹುಂ ಪರ್ಯಪೃಚ್ಚತ ಧರ್ಮರಾಟ್||

ಆಗ ಪುತ್ರಶೋಕಾರ್ತಳಾಗಿದ್ದ ಮನಸ್ವಿನೀ ಕೃಷ್ಣೆಯು ಮೇಲೆದ್ದಳು. ಧರ್ಮರಾಜನಾದರೋ ಮಹಾಬಾಹು ಕೃಷ್ಣನನ್ನು ಪ್ರಶ್ನಿಸಿದನು.”

ಇತಿ ಶ್ರೀಮಹಾಭಾರತೇ ಸೌಪ್ತಿಕಪರ್ವಣಿ ಐಷೀಕಪರ್ವಣಿ ದ್ರೌಪದೀಸಾಂತ್ವನಾಯಾಂ ಷೋಡಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸೌಪ್ತಿಕಪರ್ವದಲ್ಲಿ ಐಷೀಕಪರ್ವದಲ್ಲಿ ದ್ರೌಪದೀಸಾಂತ್ವನ ಎನ್ನುವ ಹದಿನಾರನೇ ಅಧ್ಯಾಯವು.

Comments are closed.