ವಿರಾಟ ಪರ್ವ: ಗೋಹರಣ ಪರ್ವ
೬೧
ಪಾರ್ಥನಿಂದ ಸಮ್ಮೋಹನಾಸ್ತ್ರ ಪ್ರಯೋಗ
ತನ್ನ ಮೇಲೆ ತಿರುಗಿ ಬಿದ್ದ ಕೌರವ ಸೇನೆಯ ಮೇಲೆ ಅರ್ಜುನನು ಸಮ್ಮೋಹನಾಸ್ತ್ರವನ್ನು ಪ್ರಯೋಗಿಸಿ, ಶಂಖವನ್ನೂದಿ, ಸರ್ವ ಸೇನೆಗಳನ್ನೂ ಮೂರ್ಛೆಗೊಳಿಸಿದುದು (೧-೧೧). ಮೂರ್ಛಿತರಾದ ಮಹಾರಥರ ವಸ್ತ್ರಗಳನ್ನು ತೆಗೆದುಕೊಂಡು ರಥವನ್ನೇರಿ ರಣದಿಂದಾಚೆಗೆ ಅರ್ಜುನ-ಉತ್ತರರು ಹೋದುದು (೧೨-೧೬). ಹಾಗೆ ಹೋಗುತ್ತಿದ್ದ ಅರ್ಜುನನನ್ನು ಭೀಷ್ಮನು ಬಾಣಗಳಿಂದ ಹೊಡೆಯಲು ಅರ್ಜುನನು ಅವನ ಕುದುರೆಗಳನ್ನು ಕೊಂದು ಪಕ್ಕೆಗಳಿಗೆ ಹೊಡೆದು ಮುಂದುವರೆದಿದು (೧೭-೧೮). ಎಚ್ಚೆತ್ತ ದುರ್ಯೋಧನನು ಅರ್ಜುನನನ್ನು ಹಿಡಿಯಲು ಬಯಸಿದರೂ ಭೀಷ್ಮನ ಹಿತವಚನದಿಂದ ಸುಮ್ಮನಾಗಿ ಎಲ್ಲರೂ ಮರಳಲು ನಿರ್ಧರಿಸಿದುದು (೧೯-೨೪). ಹಿಂದಿರುಗುತ್ತಿದ್ದ ಹಿರಿಯರನ್ನು ಅರ್ಜುನನು ಗೌರವಿಸಿದುದು ಮತ್ತು ದುರ್ಯೋಧನನನ್ನು ಕಿರೀಟ ತುಂಡರಿಸಿ ಅಪಮಾನಿಸಿದುದು (೨೫-೨೯).
04061001 ವೈಶಂಪಾಯನ ಉವಾಚ|
04061001a ಆಹೂಯಮಾನಸ್ತು ಸ ತೇನ ಸಂಖ್ಯೇ|
ಮಹಾಮನಾ ಧೃತರಾಷ್ಟ್ರಸ್ಯ ಪುತ್ರಃ|
04061001c ನಿವರ್ತಿತಸ್ತಸ್ಯ ಗಿರಾಮ್ಕುಶೇನ|
ಗಜೋ ಯಥಾ ಮತ್ತ ಇವಾಂಕುಶೇನ||
ವೈಶಂಪಾಯನನು ಹೇಳಿದನು: “ಅವನಿಂದ ಯುದ್ಧಕ್ಕೆ ಆಹ್ವಾನಿತನಾದ ಮಹಾತ್ಮ ದುರ್ಯೋಧನನು ಅಂಕುಶದಿಂದ ತಿವಿತಗೊಂಡ ಮದಗಜವು ಹಿಂದಕ್ಕೆ ತಿರುಗುವಂತೆ ಅವನ ಮಾತಿನ ಅಂಕುಶದಿಂದ ತಿವಿತಗೊಂಡು ಹಿಂದಿರುಗಿದನು.
04061002a ಸೋಽಮೃಷ್ಯಮಾಣೋ ವಚಸಾಭಿಮೃಷ್ಟೋ|
ಮಹಾರಥೇನಾತಿರಥಸ್ತರಸ್ವೀ|
04061002c ಪರ್ಯಾವವರ್ತಾಥ ರಥೇನ ವೀರೋ|
ಭೋಗೀ ಯಥಾ ಪಾದತಲಾಭಿಮೃಷ್ಟಃ||
ಆ ಅತಿರಥ, ಶೀಘ್ರತೆಯುಳ್ಳ ವೀರನು ಕಾಲಿನಿಂದ ತುಳಿದ ಸರ್ಪದಂತೆ ಮಹಾರಥಿ ಅರ್ಜುನನ ಮಾತಿನಿಂದ ಪೆಟ್ಟುಗೊಂಡು ಅದನ್ನು ಸೈರಿಸಲಾರದೇ ರಥದಲ್ಲಿ ಹಿಂದಿರುಗಿದನು.
04061003a ತಂ ಪ್ರೇಕ್ಷ್ಯ ಕರ್ಣಃ ಪರಿವರ್ತಮಾನಂ|
ನಿವರ್ತ್ಯ ಸಂಸ್ತಭ್ಯ ಚ ವಿದ್ಧಗಾತ್ರಃ|
04061003c ದುರ್ಯೋಧನಂ ದಕ್ಷಿಣತೋಽಭ್ಯಗಚ್ಛತ್|
ಪಾರ್ಥಂ ನೃವೀರೋ ಯುಧಿ ಹೇಮಮಾಲೀ||
ಹಿಂದಕ್ಕೆ ಬರುತ್ತಿದ್ದ ಆ ದುರ್ಯೋಧನನ್ನು ನೋಡಿ ಯುದ್ಧದಲ್ಲಿ ಶರೀರ ಗಾಯಗೊಂಡ, ಸುವರ್ಣಮಾಲೆಯನ್ನು ಧರಿಸಿದ ವೀರ ಕರ್ಣನು ಅವನನ್ನು ತಡೆದು ದುರ್ಯೋಧನನ ಬಲಗಡೆಯಿದ ಪಾರ್ಥನಿದ್ದೆಡಗೆ ಹೋದನು.
04061004a ಭೀಷ್ಮಸ್ತತಃ ಶಾಂತನವೋ ನಿವೃತ್ಯ|
ಹಿರಣ್ಯಕಕ್ಷ್ಯಾಂಸ್ತ್ವರಯಂಸ್ತುರಂಗಾನ್|
04061004c ದುರ್ಯೋಧನಂ ಪಶ್ಚಿಮತೋಽಭ್ಯರಕ್ಷತ್|
ಪಾರ್ಥಾನ್ಮಹಾಬಾಹುರಧಿಜ್ಯಧನ್ವಾ||
ಬಳಿಕ ಮಹಾಬಾಹು ಶಂತನುಪುತ್ರ ಭೀಷ್ಮನು ಚಿನ್ನದ ಜೀನುಗಳನ್ನುಳ್ಳ ಕುದುರೆಗಳನ್ನು ತ್ವರೆಗೊಳಿಸಿ ಹಿಂದಕ್ಕೆ ತಿರುಗಿಸಿ, ಬಿಲ್ಲನ್ನು ಮಿಡಿಯುತ್ತ ಹಿಂದಿನಿಂದ ದುರ್ಯೋಧನನನ್ನು ಪಾರ್ಥನಿಂದ ರಕ್ಷಿಸಿದನು.
04061005a ದ್ರೋಣಃ ಕೃಪಶ್ಚೈವ ವಿವಿಂಶತಿಶ್ಚ|
ದುಃಶಾಸನಶ್ಚೈವ ನಿವೃತ್ಯ ಶೀಘ್ರಂ|
04061005c ಸರ್ವೇ ಪುರಸ್ತಾದ್ವಿತತೇಷುಚಾಪಾ|
ದುರ್ಯೋಧನಾರ್ಥಂ ತ್ವರಿತಾಭ್ಯುಪೇಯುಃ||
ದ್ರೋಣ, ಕೃಪ, ವಿವಿಂಶತಿ, ದುಃಶಾಸನ - ಎಲ್ಲರೂ ಬೇಗ ಹಿಂದಿರುಗಿ, ಬಾಣಹೂಡಿದ ಬಿಲ್ಲುಗಳನ್ನೆಳೆದು ದುರ್ಯೋಧನನ ರಕ್ಷಣೆಗಾಗಿ ಮುನ್ನುಗ್ಗಿದರು.
04061006a ಸ ತಾನ್ಯನೀಕಾನಿ ನಿವರ್ತಮಾನಾನ್ಯ್|
ಆಲೋಕ್ಯ ಪೂರ್ಣೌಘನಿಭಾನಿ ಪಾರ್ಥಃ|
04061006c ಹಂಸೋ ಯಥಾ ಮೇಘಮಿವಾಪತಂತಂ|
ಧನಂಜಯಃ ಪ್ರತ್ಯಪತತ್ತರಸ್ವೀ||
ಹಿಂದಿರುಗಿ ಪೂರ್ಣಪ್ರವಾಹಸದೃಶ ಆ ಸೈನ್ಯಗಳನ್ನು ನೋಡಿದ ಕುಂತೀಪುತ್ರ ವೇಗಶಾಲಿ ಧನಂಜಯನು ಥಟ್ಟನೆ ಎದುರಾದ ಮೋಡಕ್ಕೆರಗುವ ಹಂಸದಂತೆ ಅವುಗಳ ಮೇಲೆ ಬಿದ್ದನು.
04061007a ತೇ ಸರ್ವತಃ ಸಂಪರಿವಾರ್ಯ ಪಾರ್ಥಂ|
ಅಸ್ತ್ರಾಣಿ ದಿವ್ಯಾನಿ ಸಮಾದದಾನಾಃ|
04061007c ವವರ್ಷುರಭ್ಯೇತ್ಯ ಶರೈಃ ಸಮಂತಾನ್|
ಮೇಘಾ ಯಥಾ ಭೂಧರಮಂಬುವೇಗೈಃ||
ಅವರು ದಿವ್ಯಾಸ್ತ್ರಗಳನ್ನು ಹಿಡಿದು ಪಾರ್ಥನನ್ನು ಎಲ್ಲ ಕಡೆಗಳಿಂದಲೂ ಮುತ್ತಿ ಮೋಡಗಳು ಪರ್ವತದ ಮೇಲೆ ಜಲಧಾರೆಯನ್ನು ಸುರಿಸುವಂತೆ ಅವನ ಮೇಲೆ ಬಿದ್ದು ಸುತ್ತಲೂ ಬಾಣಗಳನ್ನು ಸುರಿಸಿದರು.
04061008a ತತೋಽಸ್ತ್ರಮಸ್ತ್ರೇಣ ನಿವಾರ್ಯ ತೇಷಾಂ|
ಗಾಂಡೀವಧನ್ವಾ ಕುರುಪುಂಗವಾನಾಂ|
04061008c ಸಮ್ಮೋಹನಂ ಶತ್ರುಸಹೋಽನ್ಯದಸ್ತ್ರಂ|
ಪ್ರಾದುಶ್ಚಕಾರೈಂದ್ರಿರಪಾರಣೀಯಂ||
ಆಗ ಶತ್ರುಗಳನ್ನು ಎದುರಿಸಬಲ್ಲ ಇಂದ್ರಪುತ್ರ ಗಾಂಡೀವಿಯು ಆ ಕೌರವಶ್ರೇಷ್ಠರ ಅಸ್ತ್ರಗಳನ್ನು ಅಸ್ತ್ರದಿಂದ ನಿವಾರಿಸಿ, ಸಮ್ಮೋಹನವೆಂಬ ಮತ್ತೊಂದು ಅಜೇಯ ಅಸ್ತ್ರವನ್ನು ಹೊರತೆಗೆದನು.
04061009a ತತೋ ದಿಶಶ್ಚಾನುದಿಶೋ ವಿವೃತ್ಯ|
ಶರೈಃ ಸುಧಾರೈರ್ನಿಶಿತೈಃ ಸುಪುಂಖೈಃ|
04061009c ಗಾಂಡೀವಘೋಷೇಣ ಮನಾಂಸಿ ತೇಷಾಂ|
ಮಹಾಬಲಃ ಪ್ರವ್ಯಥಯಾಂ ಚಕಾರ||
ಆ ಬಲಶಾಲಿಯು ಹರಿತ ಅಲಗುಗಳಿಂದಲೂ, ಅಂದದ ಗರಿಗಳಿಂದಲೂ ಕೂಡಿದ ಬಾಣಗಳಿಂದ ಎಲ್ಲ ದಿಕ್ಕುಗಳನ್ನೂ ಮುಚ್ಚಿ ಗಾಂಡೀವ ಘೋಷದಿಂದ ಅವರ ಮನಸ್ಸುಗಳಿಗೆ ವ್ಯಥೆಯನ್ನುಂಟುಮಾಡಿದನು.
04061010a ತತಃ ಪುನರ್ಭೀಮರವಂ ಪ್ರಗೃಹ್ಯ|
ದೋರ್ಭ್ಯಾಂ ಮಹಾಶಂಖಮುದಾರಘೋಷಂ|
04061010c ವ್ಯನಾದಯತ್ಸ ಪ್ರದಿಶೋ ದಿಶಃ ಖಂ|
ಭುವಂ ಚ ಪಾರ್ಥೋ ದ್ವಿಷತಾಂ ನಿಹಂತಾ||
ಆಗ ಶತ್ರುನಾಶಕ ಪಾರ್ಥನು ಭಯಂಕರ ಧ್ವನಿಯ, ಮಹಾಘೋಷವನ್ನುಳ್ಳ, ಮಹಾಶಂಖವನ್ನು ಎರಡು ಕೈಗಳಿಂದಲೂ ಹಿಡಿದು ಊದಿ ದಿಕ್ಕುದಿಕ್ಕುಗಳನ್ನೂ ಭೂಮ್ಯಾಕಾಶಗಳನ್ನೂ ಮೊಳಗಿಸಿದನು.
04061011a ತೇ ಶಂಖನಾದೇನ ಕುರುಪ್ರವೀರಾಃ|
ಸಮ್ಮೋಹಿತಾಃ ಪಾರ್ಥಸಮೀರಿತೇನ|
04061011c ಉತ್ಸೃಜ್ಯ ಚಾಪಾನಿ ದುರಾಸದಾನಿ|
ಸರ್ವೇ ತದಾ ಶಾಂತಿಪರಾ ಬಭೂವುಃ||
ಪಾರ್ಥನು ಊದಿದ ಆ ಶಂಖದ ಶಬ್ಧದಿಂದ ಕೌರವವೀರರೆಲ್ಲ ಮೂರ್ಛಿತರಾಗಿ ಎದುರಿಸಲು ಅಶಕ್ಯವಾಗಿದ್ದ ತಮ್ಮ ಬಿಲ್ಲುಗಳನ್ನು ತ್ಯಜಿಸಿ ಸ್ತಬ್ಧರಾದರು.
04061012a ತಥಾ ವಿಸಂಜ್ಞೇಷು ಪರೇಷು ಪಾರ್ಥಃ|
ಸ್ಮೃತ್ವಾ ತು ವಾಕ್ಯಾನಿ ತಥೋತ್ತರಾಯಾಃ|
04061012c ನಿರ್ಯಾಹಿ ಮಧ್ಯಾದಿತಿ ಮತ್ಸ್ಯಪುತ್ರಂ|
ಉವಾಚ ಯಾವತ್ಕುರವೋ ವಿಸಂಜ್ಞಾಃ||
ಹಾಗೆ ಶತ್ರುಗಳು ಪ್ರಜ್ಞಾಹೀನರಾಗಿರಲು ಪಾರ್ಥನು ಉತ್ತರೆಯ ಮಾತುಗಳನ್ನು ಜ್ಞಾಪಿಸಿಕೊಂಡು ವಿರಾಟಪುತ್ರನಿಗೆ ಹೇಳಿದನು: “ಕೌರವರು ಪ್ರಜ್ಞಾಶೀಲರಾಗುವುದರೊಳಗೇ ಅವರ ನಡುವೆ ಹೋಗು.
04061013a ಆಚಾರ್ಯ ಶಾರದ್ವತಯೋಃ ಸುಶುಕ್ಲೇ|
ಕರ್ಣಸ್ಯ ಪೀತಂ ರುಚಿರಂ ಚ ವಸ್ತ್ರಂ|
04061013c ದ್ರೌಣೇಶ್ಚ ರಾಜ್ಞಶ್ಚ ತಥೈವ ನೀಲೇ|
ವಸ್ತ್ರೇ ಸಮಾದತ್ಸ್ವ ನರಪ್ರವೀರ||
ವೀರಶ್ರೇಷ್ಠ! ಆಚಾರ್ಯ ದ್ರೋಣನ ಮತ್ತು ಕೃಪನ ಬಿಳಿಯ ವಸ್ತ್ರಗಳನ್ನೂ, ಕರ್ಣನ ಸುಂದರ ಹಳದಿ ವಸ್ತ್ರವನ್ನೂ, ಅಶ್ವತ್ಥಾಮನ ಹಾಗೂ ರಾಜ ದುರ್ಯೊಧನನ ನೀಲಿ ವಸ್ತ್ರವನ್ನೂ ತೆಗೆದುಕೊಂಡು ಬಾ.
04061014a ಭೀಷ್ಮಸ್ಯ ಸಂಜ್ಞಾಂ ತು ತಥೈವ ಮನ್ಯೇ|
ಜಾನಾತಿ ಮೇಽಸ್ತ್ರಪ್ರತಿಘಾತಮೇಷಃ|
04061014c ಏತಸ್ಯ ವಾಹಾನ್ಕುರು ಸವ್ಯತಸ್ತ್ವಂ|
ಏವಂ ಹಿ ಯಾತವ್ಯಮಮೂಢಸಂಜ್ಞೈಃ||
ಭೀಷ್ಮನು ಎಚ್ಚರವಾಗಿದ್ದಾನೆಂದು ಭಾವಿಸುತ್ತೇನೆ. ನನ್ನ ಅಸ್ತ್ರಕ್ಕೆ ಪ್ರತೀಕಾರವನ್ನು ಅವನು ಬಲ್ಲ. ಅವನ ಕುದುರೆಗಳನ್ನು ಎಡಕ್ಕಿಟ್ಟುಕೊಂಡು ಹೋಗು. ಪ್ರಜ್ಞೆತಪ್ಪದಿರುವವರ ಬಳಿಗೆ ಹೀಗೆಯೇ ಹೋಗಬೇಕು.”
04061015a ರಶ್ಮೀನ್ಸಮುತ್ಸೃಜ್ಯ ತತೋ ಮಹಾತ್ಮಾ|
ರಥಾದವಪ್ಲುತ್ಯ ವಿರಾಟಪುತ್ರಃ|
04061015c ವಸ್ತ್ರಾಣ್ಯುಪಾದಾಯ ಮಹಾರಥಾನಾಂ|
ತೂರ್ಣಂ ಪುನಃ ಸ್ವಂ ರಥಮಾರುರೋಹ||
ಆಗ ಮಹಾಸತ್ವ ವಿರಾಟಪುತ್ರನು ಕಡಿವಾಣಗಳನ್ನು ಬಿಟ್ಟು, ರಥದಿಂದ ಧುಮುಕಿ, ಮಹಾರಥರ ವಸ್ತ್ರಗಳನ್ನು ತೆಗೆದುಕೊಂಡು ಶೀಘ್ರವಾಗಿ ಮತ್ತೆ ರಥವನ್ನೇರಿದನು.
04061016a ತತೋಽನ್ವಶಾಸಚ್ಚತುರಃ ಸದಶ್ವಾನ್|
ಪುತ್ರೋ ವಿರಾಟಸ್ಯ ಹಿರಣ್ಯಕಕ್ಷ್ಯಾನ್|
04061016c ತೇ ತದ್ವ್ಯತೀಯುರ್ಧ್ವಜಿನಾಮನೀಕಂ|
ಶ್ವೇತಾ ವಹಂತೋಽರ್ಜುನಮಾಜಿಮಧ್ಯಾತ್||
ವಿರಾಟಪುತ್ರನು ಚಿನ್ನದ ಜೀನುಗಳನ್ನುಳ್ಳ ನಾಲ್ಕು ಉತ್ತಮ ಕುದುರೆಗಳನ್ನು ಮುನ್ನಡೆಸಿದನು. ಆ ಬಿಳಿಯ ಕುದುರೆಗಳು ಅರ್ಜುನನನ್ನು ರಣರಂಗದ ಮಧ್ಯದಿಂದ ರಣದಿಂದಾದಾಚೆಗೆ ಕೊಂಡೊಯ್ದವು.
04061017a ತಥಾ ತು ಯಾಂತಂ ಪುರುಷಪ್ರವೀರಂ|
ಭೀಷ್ಮಃ ಶರೈರಭ್ಯಹನತ್ತರಸ್ವೀ|
04061017c ಸ ಚಾಪಿ ಭೀಷ್ಮಸ್ಯ ಹಯಾನ್ನಿಹತ್ಯ|
ವಿವ್ಯಾಧ ಪಾರ್ಶ್ವೇ ದಶಭಿಃ ಪೃಷತ್ಕೈಃ||
ಹಾಗೆ ಹೋಗುತ್ತಿದ್ದ ವೀರಪುರುಷ ಅರ್ಜುನನನ್ನು ಚುರುಕಿನಿಂದ ಕೂಡಿದ ಭೀಷ್ಮನು ಬಾಣಗಳಿಂದ ಹೊಡೆದನು. ಅವನಾದರೋ ಭೀಷ್ಮನ ಕುದುರೆಗಳನ್ನು ಕೊಂದು ಹತ್ತು ಬಾಣಗಳಿಂದ ಅವನ ಪಕ್ಕೆಗೆ ಹೊಡೆದನು.
04061018a ತತೋಽರ್ಜುನೋ ಭೀಷ್ಮಮಪಾಸ್ಯ ಯುದ್ಧೇ|
ವಿದ್ಧ್ವಾಸ್ಯ ಯಂತಾರಮರಿಷ್ಟಧನ್ವಾ|
04061018c ತಸ್ಥೌ ವಿಮುಕ್ತೋ ರಥವೃಂದಮಧ್ಯಾದ್|
ರಾಹುಂ ವಿದಾರ್ಯೇವ ಸಹಸ್ರರಶ್ಮಿಃ||
ಬಳಿಕ ಅಜೇಯ ಬಿಲ್ಲನ್ನುಳ್ಳ ಅರ್ಜುನನನು ಭೀಷ್ಮನನ್ನು ಯುದ್ಧರಂಗದಲ್ಲಿ ಬಿಟ್ಟು ಅವನ ಸಾರಥಿಯನ್ನು ಹೊಡೆದು ರಾಹುವನ್ನು ಸೀಳಿಕೊಂಡು ಸೂರ್ಯನು ಹೊರಬರುವಂತೆ ರಥಸಮೂಹದ ಮಧ್ಯದಿಂದ ಹೊರಬಂದು ನಿಂತನು.
04061019a ಲಬ್ಧ್ವಾ ತು ಸಂಜ್ಞಾಂ ಚ ಕುರುಪ್ರವೀರಃ|
ಪಾರ್ಥಂ ಸಮೀಕ್ಷ್ಯಾಥ ಮಹೇಂದ್ರಕಲ್ಪಂ|
04061019c ರಣಾದ್ವಿಮುಕ್ತಂ ಸ್ಥಿತಮೇಕಮಾಜೌ|
ಸ ಧಾರ್ತರಾಷ್ಟ್ರಸ್ತ್ವರಿತೋ ಬಭಾಷೇ||
ರಣದಿಂದ ಹೊರಬಂದು ಯುದ್ಧರಂಗದಲ್ಲಿ ಏಕಾಂಗಿಯಾಗಿ ನಿಂತಿದ್ದ ಮಹೇಂದ್ರಸಮ ಪಾರ್ಥನನ್ನು ಪ್ರಜ್ಞೆಬಂದ ಕುರುವೀರ ದುರ್ಯೋಧನನು ಕಂಡು ಭೀಷ್ಮನಿಗೆ ನುಡಿದನು:
04061020a ಅಯಂ ಕಥಂ ಸ್ವಿದ್ಭವತಾಂ ವಿಮುಕ್ತಸ್|
ತಂ ವೈ ಪ್ರಬಧ್ನೀತ ಯಥಾ ನ ಮುಚ್ಯೇತ್|
04061020c ತಮಬ್ರವೀಚ್ಚಾಂತನವಃ ಪ್ರಹಸ್ಯ|
ಕ್ವ ತೇ ಗತಾ ಬುದ್ಧಿರಭೂತ್ಕ್ವ ವೀರ್ಯಂ||
“ಇವನು ಹೇಗೆ ನಮ್ಮಿಂದ ತಪ್ಪಿಸಿಕೊಂಡ? ತಪ್ಪಿಸಿಕೊಳ್ಳದಂತೆ ಇವನನ್ನು ಕಟ್ಟಿಹಾಕಿ!” ಭೀಷ್ಮನು ನಕ್ಕು ಅವನಿಗೆ ಹೇಳಿದನು: “ನಿನ್ನ ಬುದ್ಧಿ ಎಲ್ಲಿ ಹೋಗಿತ್ತು? ನಿನ್ನ ಶೌರ್ಯ ಎಲ್ಲಿ ಹೋಗಿತ್ತು?
04061021a ಶಾಂತಿಂ ಪರಾಶ್ವಸ್ಯ ಯಥಾ ಸ್ಥಿತೋಽಭೂರ್|
ಉತ್ಸೃಜ್ಯ ಬಾಣಾಂಶ್ಚ ಧನುಶ್ಚ ಚಿತ್ರಂ|
04061021c ನ ತ್ವೇವ ಬೀಭತ್ಸುರಲಂ ನೃಶಂಸಂ|
ಕರ್ತುಂ ನ ಪಾಪೇಽಸ್ಯ ಮನೋ ನಿವಿಷ್ಟಂ||
ಬಾಣಗಳನ್ನೂ ಸುಂದರ ಬಿಲ್ಲನ್ನೂ ತ್ಯಜಿಸಿ ತೆಪ್ಪಗೆ ಸ್ತಬ್ಧನಾಗಿದ್ದೆಯಲ್ಲ? ಅರ್ಜುನನು ಕ್ರೂರಕಾರ್ಯವನ್ನು ಮಾಡುವವನಲ್ಲ. ಅವನ ಮನಸ್ಸು ಪಾಪದಲ್ಲಿ ಆಸಕ್ತವಾಗಿಲ್ಲ.
04061022a ತ್ರೈಲೋಕ್ಯಹೇತೋರ್ನ ಜಹೇತ್ಸ್ವಧರ್ಮಂ|
ತಸ್ಮಾನ್ನ ಸರ್ವೇ ನಿಹತಾ ರಣೇಽಸ್ಮಿನ್|
04061022c ಕ್ಷಿಪ್ರಂ ಕುರೂನ್ಯಾಹಿ ಕುರುಪ್ರವೀರ|
ವಿಜಿತ್ಯ ಗಾಶ್ಚ ಪ್ರತಿಯಾತು ಪಾರ್ಥಃ||
ಮೂರುಲೋಕಗಳಿಗಾಗಿಯಾದರೂ ಅವನು ಸ್ವಧರ್ಮವನ್ನು ಬಿಡುವುದಿಲ್ಲ. ಆದ್ದರಿಂದಲೇ ಈ ಯುದ್ಧದಲ್ಲಿ ಎಲ್ಲರೂ ಹತರಾಗಿಲ್ಲ. ಕುರುವೀರ! ಬೇಗ ಕುರುದೇಶಕ್ಕೆ ಹೋಗಿಬಿಡು. ಪಾರ್ಥನು ಗೋವುಗಳನ್ನು ಗೆದ್ದುಕೊಂಡು ಹಿಂದಿರುಗಲಿ.”
04061023a ದುರ್ಯೋಧನಸ್ತಸ್ಯ ತು ತನ್ನಿಶಮ್ಯ|
ಪಿತಾಮಹಸ್ಯಾತ್ಮಹಿತಂ ವಚೋಽಥ|
04061023c ಅತೀತಕಾಮೋ ಯುಧಿ ಸೋಽತ್ಯಮರ್ಷೀ|
ರಾಜಾ ವಿನಿಃಶ್ವಸ್ಯ ಬಭೂವ ತೂಷ್ಣೀಂ||
ಆಗ ರಾಜ ದುರ್ಯೋಧನನು ತನಗೆ ಹಿತಕರವಾದ ಪಿತಾಮಹನ ಮಾತನ್ನು ಕೇಳಿ ಯುದ್ಧದ ಆಸೆಯನ್ನು ಬಿಟ್ಟು ಬಹಳ ಕೋಪದಿಂದ ನಿಡುಸುಯ್ದು ಸುಮ್ಮನಾದನು.
04061024a ತದ್ಭೀಷ್ಮವಾಕ್ಯಂ ಹಿತಮೀಕ್ಷ್ಯ ಸರ್ವೇ|
ಧನಂಜಯಾಗ್ನಿಂ ಚ ವಿವರ್ಧಮಾನಂ|
04061024c ನಿವರ್ತನಾಯೈವ ಮನೋ ನಿದಧ್ಯುರ್|
ದುರ್ಯೋಧನಂ ತೇ ಪರಿರಕ್ಷಮಾಣಾಃ||
ಭೀಷ್ಮನ ಆ ಹಿತಕರ ಮಾತನ್ನು ಪರಿಭಾವಿಸಿ ಹೆಚ್ಚುತ್ತಿರುವ ಧನಂಜಯಾಗ್ನಿಯನ್ನು ನೋಡಿ ದುರ್ಯೊಧನನನ್ನು ರಕ್ಷಿಸುತ್ತಾ ಹಿಂದಿರುಗಲು ಅವರೆಲ್ಲರೂ ಮನಸ್ಸು ಮಾಡಿದರು.
04061025a ತಾನ್ಪ್ರಸ್ಥಿತಾನ್ಪ್ರೀತಮನಾಃ ಸ ಪಾರ್ಥೋ|
ಧನಂಜಯಃ ಪ್ರೇಕ್ಷ್ಯ ಕುರುಪ್ರವೀರಾನ್|
04061025c ಆಭಾಷಮಾಣೋಽನುಯಯೌ ಮುಹೂರ್ತಂ|
ಸಂಪೂಜಯಂಸ್ತತ್ರ ಗುರೂನ್ಮಹಾತ್ಮಾ||
ಕುಂತೀಪುತ್ರ ಮಹಾತ್ಮ ಧನಂಜಯನು ಕೌರವವೀರರು ಹೊರಡುತ್ತಿರುವುದನ್ನು ಕಂಡು ಸಂತೋಷಚಿತ್ತನಾಗಿ ಹಿರಿಯರೊಡನೆ ಮಾತನಾಡುತ್ತಾ ಅವರನ್ನು ಆದರಿಸಿ ತುಸುಹೊತ್ತು ಹಿಂಬಾಲಿಸಿದನು.
04061026a ಪಿತಾಮಹಂ ಶಾಂತನವಂ ಸ ವೃದ್ಧಂ|
ದ್ರೋಣಂ ಗುರುಂ ಚ ಪ್ರತಿಪೂಜ್ಯ ಮೂರ್ಧ್ನಾ|
04061026c ದ್ರೌಣಿಂ ಕೃಪಂ ಚೈವ ಗುರೂಂಶ್ಚ ಸರ್ವಾಂ|
ಶರೈರ್ವಿಚಿತ್ರೈರಭಿವಾದ್ಯ ಚೈವ||
ಅವನು ವೃದ್ಧ ಪಿತಾಮಹ ಶಾಂತನವನನ್ನೂ ಗುರುದ್ರೋಣನನ್ನೂ ತಲೆಬಾಗಿ ಗೌರವಿಸಿ ಅಶ್ವತ್ಥಾಮನನ್ನೂ ಕೃಪನನ್ನೂ ಇತರ ಎಲ್ಲ ಹಿರಿಯರನ್ನೂ ಸುಂದರ ಬಾಣಗಳಿಂದ ವಂದಿಸಿದನು.
04061027a ದುರ್ಯೋಧನಸ್ಯೋತ್ತಮರತ್ನಚಿತ್ರಂ|
ಚಿಚ್ಛೇದ ಪಾರ್ಥೋ ಮುಕುಟಂ ಶರೇಣ|
04061027c ಆಮಂತ್ರ್ಯ ವೀರಾಂಶ್ಚ ತಥೈವ ಮಾನ್ಯಾನ್|
ಗಾಂಡೀವಘೋಷೇಣ ವಿನಾದ್ಯ ಲೋಕಾನ್||
ಪಾರ್ಥನು ಶ್ರೇಷ್ಠ ರತ್ನಗಳಿಂದ ಸುಂದರವಾಗಿದ್ದ ದುರ್ಯೋಧನನ ಕಿರೀಟವನ್ನು ಬಾಣದಿಂದ ತುಂಡರಿಸಿದನು. ಅಂತೆಯೇ ಗಾಂಡೀವಘೋಷದಿಂದ ಲೋಕಗಳನ್ನು ಮೊಳಗಿಸುತ್ತಾ ಮಾನ್ಯ ವೀರರನ್ನು ಕರೆದು ಆದರಿಸಿದನು.
04061028a ಸ ದೇವದತ್ತಂ ಸಹಸಾ ವಿನಾದ್ಯ|
ವಿದಾರ್ಯ ವೀರೋ ದ್ವಿಷತಾಂ ಮನಾಂಸಿ|
04061028c ಧ್ವಜೇನ ಸರ್ವಾನಭಿಭೂಯ ಶತ್ರೂನ್|
ಸ ಹೇಮಜಾಲೇನ ವಿರಾಜಮಾನಃ||
ಆ ವೀರನು ಇದ್ದಕ್ಕಿದ್ದಂತೆ ದೇವದತ್ತವನ್ನು ಮೊಳಗಿಸಿ ಶತ್ರುಗಳ ಮನಸ್ಸನ್ನು ಭೇದಿಸಿದನು. ವೈರಿಗಳನ್ನೆಲ್ಲ ಸೋಲಿಸಿ ಚಿನ್ನದ ಸರಿಗೆಯುಳ್ಳ ಧ್ವಜದಿಂದ ಶೋಭಿಸಿದನು.
04061029a ದೃಷ್ಟ್ವಾ ಪ್ರಯಾತಾಂಸ್ತು ಕುರೂನ್ಕಿರೀಟೀ|
ಹೃಷ್ಟೋಽಬ್ರವೀತ್ತತ್ರ ಸ ಮತ್ಸ್ಯಪುತ್ರಂ|
04061029c ಆವರ್ತಯಾಶ್ವಾನ್ಪಶವೋ ಜಿತಾಸ್ತೇ|
ಯಾತಾಃ ಪರೇ ಯಾಹಿ ಪುರಂ ಪ್ರಹೃಷ್ಟಃ||
ಕೌರವರು ಹೋದುದನ್ನು ನೋಡಿದ ಅರ್ಜುನನನು ಹರ್ಷಗೊಂಡು “ಕುದುರೆಗಳನ್ನು ತಿರುಗಿಸು. ನಿನ್ನ ಹಸುಗಳನ್ನು ಗೆದ್ದುದ್ದಾಯಿತು. ಶತ್ರುಗಳು ತೊಲಗಿದರು. ಸಂತೋಷದಿಂದ ನಗರಕ್ಕೆ ನಡೆ!” ಎಂದು ಉತ್ತರನಿಗೆ ಹೇಳಿದನು.”
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಸಮಸ್ತಕೌರವಪಲಾಯನೇ ಏಕಷಷ್ಟಿತಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಸಮಸ್ತಕೌರವಪಲಾಯನದಲ್ಲಿ ಅರವತ್ತೊಂದನೆಯ ಅಧ್ಯಾಯವು.