Udyoga Parva: Chapter 69

ಉದ್ಯೋಗ ಪರ್ವ: ಯಾನಸಂಧಿ ಪರ್ವ

೬೯

ಧೃತರಾಷ್ಟ್ರನು ಮಹಾವಿಷ್ಣುವನ್ನು ಪ್ರಾರ್ಥಿಸಿದುದು (೧-೭).

05069001 ಧೃತರಾಷ್ಟ್ರ ಉವಾಚ|

05069001a ಚಕ್ಷುಷ್ಮತಾಂ ವೈ ಸ್ಪೃಹಯಾಮಿ ಸಂಜಯ

         ದ್ರಕ್ಷ್ಯಂತಿ ಯೇ ವಾಸುದೇವಂ ಸಮೀಪೇ|

05069001c ವಿಭ್ರಾಜಮಾನಂ ವಪುಷಾ ಪರೇಣ

         ಪ್ರಕಾಶಯಂತಂ ಪ್ರದಿಶೋ ದಿಶಶ್ಚ||

ಧೃತರಾಷ್ಟ್ರನು ಹೇಳಿದನು: “ಸಂಜಯ! ದಿಕ್ಕುಗಳನ್ನು ದಿಕ್ಸೂಚಿಯಂತೆ ಪ್ರಕಾಶಗೊಳಿಸುವ ಪರಮ ಶರೀರದಿಂದ ಬೆಳಗುವ ವಾಸುದೇವನನ್ನು ಹತ್ತಿರದಿಂದ ನೋಡಬಲ್ಲ ಕಣ್ಣುಳ್ಳವರ ಮೇಲೆ ಅಸೂಯೆಪಡುತ್ತೇನೆ.

05069002a ಈರಯಂತಂ ಭಾರತೀಂ ಭಾರತಾನಾಂ

         ಅಭ್ಯರ್ಚನೀಯಾಂ ಶಂಕರೀಂ ಸೃಂಜಯಾನಾಂ|

05069002c ಬುಭೂಷದ್ಭಿರ್ಗ್ರಹಣೀಯಾಮನಿಂದ್ಯಾಂ

         ಪರಾಸೂನಾಮಗ್ರಹಣೀಯರೂಪಾಂ||

ಅವನು ಭಾರತರು ಗೌರವದಿಂದ ಕೇಳುವಹಾಗೆ, ಸೃಂಜಯರಿಗೆ ಮಂಗಳವನ್ನು ಮಾಡುವ, ಅಭಿವೃದ್ಧಿಯನ್ನು ಬಯಸುವವರು ಕೇಳಬೇಕಾದ, ಯಾವರೀತಿಯಲ್ಲಿಯೂ ನಿಂದನೀಯವಲ್ಲದ, ಸಾಯಲು ಬಯಸುವವರು ಕೇಳದ ಮಾತುಗಳನ್ನು ಆಡುತ್ತಾನೆ.

05069003a ಸಮುದ್ಯಂತಂ ಸಾತ್ವತಮೇಕವೀರಂ

         ಪ್ರಣೇತಾರಮೃಷಭಂ ಯಾದವಾನಾಂ|

05069003c ನಿಹಂತಾರಂ ಕ್ಷೋಭಣಂ ಶಾತ್ರವಾಣಾಂ

         ಮುಷ್ಣಂತಂ ಚ ದ್ವಿಷತಾಂ ವೈ ಯಶಾಂಸಿ||

ಸಾತ್ವತರ ಏಕವೀರನು ನಮ್ಮಲ್ಲಿಗೆ ಬರುತ್ತಾನೆ. ಯಾದವರ ಪ್ರಣೇತಾರ ಆ ವೃಷಭ, ಶತ್ರುಗಳ ಕ್ಷೋಭಣ ಮತ್ತು ಹಂತಾರ, ಮತ್ತು ದ್ವೇಷಿಸುವವರ ಯಶಸ್ಸನ್ನು ಎಳೆದುಕೊಳ್ಳುವವನು.

05069004a ದ್ರಷ್ಟಾರೋ ಹಿ ಕುರವಸ್ತಂ ಸಮೇತಾ

         ಮಹಾತ್ಮಾನಂ ಶತ್ರುಹಣಂ ವರೇಣ್ಯಂ|

05069004c ಬ್ರುವಂತಂ ವಾಚಮನೃಶಂಸರೂಪಾಂ

         ವೃಷ್ಣಿಶ್ರೇಷ್ಠಂ ಮೋಹಯಂತಂ ಮದೀಯಾನ್||

ಕುರುಗಳು ಒಟ್ಟಿಗೇ ಆ ಮಹಾತ್ಮ, ಶತ್ರುಹರಣ, ವರೇಣ್ಯ, ಅಹಿಂಸೆಯ ಕುರಿತಾಗಿ ಮಾತನಾಡಿ ನಮ್ಮವರನ್ನು ಮೋಹಿಸುವಂತಹ ಆ ವೃಷ್ಣಿಶ್ರೇಷ್ಠನನ್ನು ನೋಡುತ್ತಾರೆ.

05069005a ಋಷಿಂ ಸನಾತನತಮಂ ವಿಪಶ್ಚಿತಂ

         ವಾಚಃ ಸಮುದ್ರಂ ಕಲಶಂ ಯತೀನಾಂ|

05069005c ಅರಿಷ್ಟನೇಮಿಂ ಗರುಡಂ ಸುಪರ್ಣಂ

         ಪತಿಂ ಪ್ರಜಾನಾಂ ಭುವನಸ್ಯ ಧಾಮ||

05069006a ಸಹಸ್ರಶೀರ್ಷಂ ಪುರುಷಂ ಪುರಾಣಂ

         ಅನಾದಿಮಧ್ಯಾಂತಮನಂತಕೀರ್ತಿಂ|

05069006c ಶುಕ್ರಸ್ಯ ಧಾತಾರಮಜಂ ಜನಿತ್ರಂ

         ಪರಂ ಪರೇಭ್ಯಃ ಶರಣಂ ಪ್ರಪದ್ಯೇ||

ಆ ಋಷಿ, ಅತ್ಯಂತ ಸನಾತನ, ಮಾತುಗಳ ಸಮುದ್ರ, ಯತಿಗಳ ಕಲಶ, ಅರಿಷ್ಟನೇಮಿ, ಗರುಡ, ಸುಪರ್ಣ, ಪ್ರಜೆಗಳ ಪತಿ, ಭುವನದ ಧಾಮ, ಸಹಸ್ರಶೀರ್ಷ, ಪುರುಷ, ಪುರಾಣ, ಆದಿ-ಮಧ್ಯ-ಅಂತ್ಯಗಳಿಲ್ಲದಿರುವ, ಅನಂತ ಕೀರ್ತಿ, ಶುಕ್ರದ ಧಾತಾರ, ಹುಟ್ಟಿರದ ಜನಿತ್ರ, ಪರಮ ಪರೇಭ್ಯನಿಗೆ ಶರಣು ಹೋಗುತ್ತೇನೆ.

05069007a ತ್ರೈಲೋಕ್ಯನಿರ್ಮಾಣಕರಂ ಜನಿತ್ರಂ

         ದೇವಾಸುರಾಣಾಮಥ ನಾಗರಕ್ಷಸಾಂ|

05069007c ನರಾಧಿಪಾನಾಂ ವಿದುಷಾಂ ಪ್ರಧಾನಂ

         ಇಂದ್ರಾನುಜಂ ತಂ ಶರಣಂ ಪ್ರಪದ್ಯೇ||

ಮೂರೂಲೋಕಗಳನ್ನು ನಿರ್ಮಿಸಿದ, ದೇವಾಸುರರನ್ನೂ ನಾಗ-ರಾಕ್ಷಸರನ್ನೂ, ಪ್ರಧಾನ ನರಾಧಿಪರನ್ನೂ, ವಿದುಷರನ್ನೂ ಹುಟ್ಟಿಸಿದ, ಇಂದ್ರನ ಅನುಜನಿಗೆ ಶರಣು ಹೋಗುತ್ತೇನೆ.””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಧೃತರಾಷ್ಟ್ರವಾಕ್ಯೇ ಏಕೋನಸಪ್ತತಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಧೃತರಾಷ್ಟ್ರವಾಕ್ಯದಲ್ಲಿ ಅರವತ್ತೊಂಭತ್ತನೆಯ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೪/೧೮, ಉಪಪರ್ವಗಳು-೬೦/೧೦೦, ಅಧ್ಯಾಯಗಳು-೭೩೨, ಶ್ಲೋಕಗಳು-೨೩೯೮೫

Image result for vishnu in white background

Comments are closed.