ಉದ್ಯೋಗ ಪರ್ವ: ಯಾನಸಂಧಿ ಪರ್ವ
೫೮
ವಾಸುದೇವ ಕೃಷ್ಣನ ಸಂದೇಶ
ಕೃಷ್ಣಾರ್ಜುನರ ಸಂದೇಶವೇನೆಂದು ಧೃತರಾಷ್ಟ್ರನು ಸಂಜಯನನ್ನು ಕೇಳಲು ಸಂಜಯನು ಅವನಿಗೆ ಅವರ ಸಂದೇಶಗಳನ್ನು ಹೇಳಿದುದು (೧-೩೦).
05058001 ಧೃತರಾಷ್ಟ್ರ ಉವಾಚ|
05058001a ಯದಬ್ರೂತಾಂ ಮಹಾತ್ಮಾನೌ ವಾಸುದೇವಧನಂಜಯೌ|
05058001c ತನ್ಮೇ ಬ್ರೂಹಿ ಮಹಾಪ್ರಾಜ್ಞಾ ಶುಶ್ರೂಷೇ ವಚನಂ ತವ||
ಧೃತರಾಷ್ಟ್ರನು ಹೇಳಿದನು: “ಮಹಾಪ್ರಾಜ್ಞ! ಮಹಾತ್ಮರಾದ ವಾಸುದೇವ-ಧನಂಜಯರು ಏನು ಹೇಳಿದರೆಂಬುದನ್ನು ನನಗೆ ಹೇಳು. ಅದನ್ನು ಕೇಳಲು ತವಕವಿದೆ.”
05058002 ಸಂಜಯ ಉವಾಚ|
05058002a ಶೃಣು ರಾಜನ್ಯಥಾ ದೃಷ್ಟೌ ಮಯಾ ಕೃಷ್ಣಧನಂಜಯೌ|
05058002c ಊಚತುಶ್ಚಾಪಿ ಯದ್ವೀರೌ ತತ್ತೇ ವಕ್ಷ್ಯಾಮಿ ಭಾರತ||
ಸಂಜಯನು ಹೇಳಿದನು: “ರಾಜನ್! ಭಾರತ! ನಾನು ಕೃಷ್ಣ-ಧನಂಜಯರನ್ನು ಹೇಗಿದ್ದಾಗ ನೋಡಿದೆನೆನ್ನುವುದನ್ನೂ, ಆ ವೀರರಿಬ್ಬರೂ ನನಗೆ ಏನು ಹೇಳಿ ಕಳುಹಿಸಿದ್ದಾರೆನ್ನುವುದನ್ನೂ ನಿನಗೆ ಹೇಳುತ್ತೇನೆ.
05058003a ಪಾದಾಂಗುಲೀರಭಿಪ್ರೇಕ್ಷನ್ಪ್ರಯತೋಽಹಂ ಕೃತಾಂಜಲಿಃ|
05058003c ಶುದ್ಧಾಂತಂ ಪ್ರಾವಿಶಂ ರಾಜನ್ನಾಖ್ಯಾತುಂ ನರದೇವಯೋಃ||
ರಾಜನ್! ಕಾಲಿನ ಬೆರಳುಗಳನ್ನು ನೋಡುತ್ತಾ, ತಲೆಬಾಗಿ, ಕೈಮುಗಿದು ಶುದ್ಧನಾಗಿ ಅವರಿಗೆ ಹೇಳಲು ನಾನು ಆ ನರದೇವರ ಅಂತಃಪುರವನ್ನು ಪ್ರವೇಶಿಸಿದೆ.
05058004a ನೈವಾಭಿಮನ್ಯುರ್ನ ಯಮೌ ತಂ ದೇಶಮಭಿಯಾಂತಿ ವೈ|
05058004c ಯತ್ರ ಕೃಷ್ಣೌ ಚ ಕೃಷ್ಣಾ ಚ ಸತ್ಯಭಾಮಾ ಚ ಭಾಮಿನೀ||
ಕೃಷ್ಣರಿಬ್ಬರೂ, ಕೃಷ್ಣೆ ಮತ್ತು ಭಾಮಿನೀ ಸತ್ಯಭಾಮೆಯರಿರುವ ಆ ಪ್ರದೇಶವನ್ನು ಅಭಿಮನ್ಯುವಾಗಲೀ ಯಮಳರಾಗಲೀ ಹೋಗಲಾರರು.
05058005a ಉಭೌ ಮಧ್ವಾಸವಕ್ಷೀಬಾವುಭೌ ಚಂದನರೂಷಿತೌ|
05058005c ಸ್ರಗ್ವಿಣೌ ವರವಸ್ತ್ರೌ ತೌ ದಿವ್ಯಾಭರಣಭೂಷಿತೌ||
ಇಬ್ಬರೂ ಹಾರಗಳನ್ನು ಹಾಕಿಕೊಂಡು, ವರವಸ್ತ್ರಗಳನ್ನು ಧರಿಸಿ, ದಿವ್ಯಾಭರಣ ಭೂಷಿತರಾಗಿ, ಚಂದನಲೇಪಿತರಾಗಿ, ಮಧುವನ್ನು ಸೇವಿಸುತ್ತಾ ಕುಳಿತಿದ್ದರು.
05058006a ನೈಕರತ್ನವಿಚಿತ್ರಂ ತು ಕಾಂಚನಂ ಮಹದಾಸನಂ|
05058006c ವಿವಿಧಾಸ್ತರಣಾಸ್ತೀರ್ಣಂ ಯತ್ರಾಸಾತಾಮರಿಂದಮೌ||
ಅನೇಕ ವಿಚಿತ್ರ ರತ್ನಗಳಿಂದ ಕೂಡಿದ ಕಾಂಚನದ ಮಹದಾಸನದ ಮೇಲೆ, ವಿವಿಧ ನೆಲಗಂಬಳಿಗಳನ್ನು ಹಾಸಿದ್ದಲ್ಲಿ ಆ ಅರಿಂದಮರಿಬ್ಬರೂ ಕುಳಿತುಕೊಂಡಿದ್ದರು.
05058007a ಅರ್ಜುನೋತ್ಸಂಗಗೌ ಪಾದೌ ಕೇಶವಸ್ಯೋಪಲಕ್ಷಯೇ|
05058007c ಅರ್ಜುನಸ್ಯ ಚ ಕೃಷ್ಣಾಯಾಂ ಸತ್ಯಾಯಾಂ ಚ ಮಹಾತ್ಮನಃ||
ಕೇಶವನ ಪಾದಗಳು ಅರ್ಜುನನ ತೊಡೆಯಮೇಲಿದ್ದುದನ್ನು, ಮತ್ತು ಮಹಾತ್ಮ ಅರ್ಜುನನ ಪಾದಗಳು ಕೃಷ್ಣೆ ಮತ್ತು ಸತ್ಯಭಾಮೆಯರ ತೊಡೆಯಮೇಲಿರುವುದನ್ನು ನೋಡಿದೆನು.
05058008a ಕಾಂಚನಂ ಪಾದಪೀಠಂ ತು ಪಾರ್ಥೋ ಮೇ ಪ್ರಾದಿಶತ್ತದಾ|
05058008c ತದಹಂ ಪಾಣಿನಾ ಸ್ಪೃಷ್ಟ್ವಾ ತತೋ ಭೂಮಾವುಪಾವಿಶಂ||
ಪಾರ್ಥನು ನನಗೆ ಕಾಂಚನದ ಪಾದಪೀಠವೊಂದನ್ನು ತೋರಿಸಿದನು. ಅದನ್ನು ನಾನು ಕೈಯಲ್ಲಿ ಮುಟ್ಟಿ ನೆಲದ ಮೇಲೆ ಕುಳಿತುಕೊಂಡೆನು.
05058009a ಊರ್ಧ್ವರೇಖತಲೌ ಪಾದೌ ಪಾರ್ಥಸ್ಯ ಶುಭಲಕ್ಷಣೌ|
05058009c ಪಾದಪೀಠಾದಪಹೃತೌ ತತ್ರಾಪಶ್ಯಮಹಂ ಶುಭೌ||
ಪಾದಪೀಠದಿಂದ ಕಾಲನ್ನು ಹಿಂದೆ ತೆಗೆದುಕೊಳ್ಳುವಾಗ ನಾನು ಪಾರ್ಥನ ಆ ಪಾದಗಳಲ್ಲಿರುವ ಶುಭಲಕ್ಷಣ ಊರ್ಧ್ವರೇಖೆಗಳಿರುವ ತಲವನ್ನು ನೋಡಿದೆನು.
05058010a ಶ್ಯಾಮೌ ಬೃಹಂತೌ ತರುಣೌ ಶಾಲಸ್ಕಂಧಾವಿವೋದ್ಗತೌ|
05058010c ಏಕಾಸನಗತೌ ದೃಷ್ಟ್ವಾ ಭಯಂ ಮಾಂ ಮಹದಾವಿಶತ್||
ಶ್ಯಾಮವರ್ಣದ, ದೊಡ್ಡದೇಹದ, ತರುಣರಾದ, ಶಾಲಸ್ಕಂಧದಂತೆ ಎತ್ತರವಾಗಿರುವ ಅವರಿಬ್ಬರೂ ಒಂದೇ ಆಸನದಲ್ಲಿ ಕುಳಿತಿರುವುದನ್ನು ನೋಡಿ ನನಗೆ ಮಹಾ ಭಯವು ಆವರಿಸಿತು.
05058011a ಇಂದ್ರವಿಷ್ಣುಸಮಾವೇತೌ ಮಂದಾತ್ಮಾ ನಾವಬುಧ್ಯತೇ|
05058011c ಸಂಶ್ರಯಾದ್ದ್ರೋಣಭೀಷ್ಮಾಭ್ಯಾಂ ಕರ್ಣಸ್ಯ ಚ ವಿಕತ್ಥನಾತ್||
ಇಂದ್ರ-ವಿಷ್ಣು ಇಬ್ಬರೂ ಸೇರಿರುವುದು ದ್ರೋಣ, ಭೀಷ್ಮ ಮತ್ತು ತನ್ನನ್ನು ತಾನು ಹೊಗಳಿಕೊಳ್ಳುವ ಕರ್ಣನನ್ನು ಸಂಶ್ರಯಿಸಿರುವ ಮಂದಾತ್ಮನಿಗೆ ತಿಳಿದಿಲ್ಲ.
05058012a ನಿದೇಶಸ್ಥಾವಿಮೌ ಯಸ್ಯ ಮಾನಸಸ್ತಸ್ಯ ಸೇತ್ಸ್ಯತೇ|
05058012c ಸಂಕಲ್ಪೋ ಧರ್ಮರಾಜಸ್ಯ ನಿಶ್ಚಯೋ ಮೇ ತದಾಭವತ್||
ಆ ಕ್ಷಣದಲ್ಲಿ ನನಗೆ ನಿಶ್ಚಯವಾಯಿತು - ಯಾರ ನಿರ್ದೇಶನದಂತೆ ಅವರಿಬ್ಬರು ನಡೆದುಕೊಳ್ಳುತ್ತಾರೋ ಯಾರ ಮನಸ್ಸನ್ನು ಅವರು ಸೇವಿಸುತ್ತಾರೋ ಆ ಧರ್ಮರಾಜನ ಸಂಕಲ್ಪದಂತೆಯೇ ಆಗುತ್ತದೆ.
05058013a ಸತ್ಕೃತಶ್ಚಾನ್ನಪಾನಾಭ್ಯಾಮಾಚ್ಚನ್ನೋ ಲಬ್ಧಸತ್ಕ್ರಿಯಃ|
05058013c ಅಂಜಲಿಂ ಮೂರ್ಧ್ನಿ ಸಂಧಾಯ ತೌ ಸಂದೇಶಮಚೋದಯಂ||
ಅನ್ನ ಪಾನಗಳಿಂದ ಸತ್ಕೃತನಾಗಿ ಮತ್ತು ಇತರ ಸತ್ಕ್ರಿಯೆಗಳಿಂದ ಸಮ್ಮಾನಿತನಾಗಿ ತಲೆಯ ಮೇಲೆ ಕೈಗಳನ್ನು ಮುಗಿದು ನಿನ್ನ ಸಂದೇಶವನ್ನು ಅವರಿಗೆ ಹೇಳಿದೆ.
05058014a ಧನುರ್ಬಾಣೋಚಿತೇನೈಕಪಾಣಿನಾ ಶುಭಲಕ್ಷಣಂ|
05058014c ಪಾದಮಾನಮಯನ್ಪಾರ್ಥಃ ಕೇಶವಂ ಸಮಚೋದಯತ್|
ಆಗ ಪಾರ್ಥನು ಧನುರ್ಬಾಣಗಳನ್ನು ಹಿಡಿಯುವ ಕೈಯಿಂದ ಕೇಶವನ ಶುಭಲಕ್ಷಣಯುತ ಕಾಲನ್ನು ಸರಿಸಿ, ಅವನಿಗೆ ಮಾತನಾಡಲು ಒತ್ತಾಯಿಸಿದನು.
05058015a ಇಂದ್ರಕೇತುರಿವೋತ್ಥಾಯ ಸರ್ವಾಭರಣಭೂಷಿತಃ|
05058015c ಇಂದ್ರವೀರ್ಯೋಪಮಃ ಕೃಷ್ಣಃ ಸಂವಿಷ್ಟೋ ಮಾಭ್ಯಭಾಷತ||
ಸರ್ವಾಭರಣಭೂಷಿತ ಇಂದ್ರವೀರ್ಯೋಪಮ ಕೃಷ್ಣನು ಇಂದ್ರಧ್ವಜದಂತೆ ಮೇಲೆದ್ದು ನನ್ನನ್ನು ಉದ್ದೇಶಿಸಿ ಹೇಳಿದನು:
05058016a ವಾಚಂ ಸ ವದತಾಂ ಶ್ರೇಷ್ಠೋ ಹ್ಲಾದಿನೀಂ ವಚನಕ್ಷಮಾಂ|
05058016c ತ್ರಾಸನೀಂ ಧಾರ್ತರಾಷ್ಟ್ರಾಣಾಂ ಮೃದುಪೂರ್ವಾಂ ಸುದಾರುಣಾಂ||
ಆ ಮಾತುನಾಡುವವರಲ್ಲಿ ಶ್ರೇಷ್ಠನ ಮಾತುಗಳು ದಾರುಣವಾಗಿದ್ದು ಧಾರ್ತರಾಷ್ಟ್ರರನ್ನು ಕಾಡುವಂತಿದ್ದರೂ, ಆನಂದದಾಯಕವಾಗಿದ್ದವು, ಮನಸೆಳೆಯುವಂತಿದ್ದವು ಮತ್ತು ಮೃದುಪೂರ್ವಕವಾಗಿದ್ದವು.
05058017a ವಾಚಂ ತಾಂ ವಚನಾರ್ಹಸ್ಯ ಶಿಕ್ಷಾಕ್ಷರಸಮನ್ವಿತಾಂ|
05058017c ಅಶ್ರೌಷಮಹಮಿಷ್ಟಾರ್ಥಾಂ ಪಶ್ಚಾದ್ಧೃದಯಶೋಷಿಣೀಂ|
ಆ ಮಾತುಗಳನ್ನಾಡಲು ಅವನೋರ್ವನೇ ಅರ್ಹನಾಗಿದ್ದನು. ಅವು ಶಿಕ್ಷಾಕ್ಷರ ಸಮನ್ವಿತವಾಗಿತ್ತು. ಅರ್ಥಗರ್ಭಿತವಾಗಿತ್ತು. ಆದರೂ ಕೊನೆಯಲ್ಲಿ ಅದು ಹೃದಯವನ್ನು ಶೋಷಿಸುವಂತಿತ್ತು.
05058018 ವಾಸುದೇವ ಉವಾಚ|
05058018a ಸಂಜಯೇದಂ ವಚೋ ಬ್ರೂಯಾ ಧೃತರಾಷ್ಟ್ರಂ ಮನೀಷಿಣಂ|
05058018c ಶೃಣ್ವತಃ ಕುರುಮುಖ್ಯಸ್ಯ ದ್ರೋಣಸ್ಯಾಪಿ ಚ ಶೃಣ್ವತಃ||
ವಾಸುದೇವನು ಹೇಳಿದನು: “ಸಂಜಯ! ಮನೀಷಿ ಧೃತರಾಷ್ಟ್ರನಿಗೆ ಈ ಮಾತುಗಳನ್ನು ಹೇಳು. ಕುರುಮುಖ್ಯರಿಗೂ ಕೇಳಿಸು ಮತ್ತು ದ್ರೋಣನಿಗೂ ಕೇಳಿಸು.
05058019a ಯಜಧ್ವಂ ವಿಪುಲೈರ್ಯಜ್ಞೈರ್ವಿಪ್ರೇಭ್ಯೋ ದತ್ತ ದಕ್ಷಿಣಾಃ|
05058019c ಪುತ್ರೈರ್ದಾರೈಶ್ಚ ಮೋದಧ್ವಂ ಮಹದ್ವೋ ಭಯಮಾಗತಂ||
ವಿಪ್ರರಿಗೆ ವಿಪುಲ ದಕ್ಷಿಣೆಗಳನ್ನಿತ್ತು ಯಜ್ಞಗಳನ್ನು ಯಾಜಿಸಿರಿ. ಹೆಂಡತಿ ಮಕ್ಕಳೊಂದಿಗೆ ಆನಂದಿಸಿಕೊಳ್ಳಿ. ಮಹಾಭಯವು ಬಂದೊದಗಿದೆ.
05058020a ಅರ್ಥಾಂಸ್ತ್ಯಜತ ಪಾತ್ರೇಭ್ಯಃ ಸುತಾನ್ಪ್ರಾಪ್ನುತ ಕಾಮಜಾನ್|
05058020c ಪ್ರಿಯಂ ಪ್ರಿಯೇಭ್ಯಶ್ಚರತ ರಾಜಾ ಹಿ ತ್ವರತೇ ಜಯೇ||
ಸಂಪತ್ತನ್ನು ಪಾತ್ರರಲ್ಲಿ ಹಂಚಿ. ಬೇಕಾದ ಸುತರನ್ನು ಪಡೆಯಿರಿ. ಪ್ರಿಯರೊಡನೆ ಪ್ರೀತಿಯಿಂದ ನಡೆದುಕೊಳ್ಳಿ. ಏಕೆಂದರೆ ರಾಜಾ ಯುಧಿಷ್ಠಿರನು ಜಯಕ್ಕೆ ಕಾತರನಾಗಿದ್ದಾನೆ.
05058021a ಋಣಮೇತತ್ಪ್ರವೃದ್ಧಂ ಮೇ ಹೃದಯಾನ್ನಾಪಸರ್ಪತಿ|
05058021c ಯದ್ಗೋವಿಂದೇತಿ ಚುಕ್ರೋಶ ಕೃಷ್ಣಾ ಮಾಂ ದೂರವಾಸಿನಂ||
05058022a ತೇಜೋಮಯಂ ದುರಾಧರ್ಷಂ ಗಾಂಡೀವಂ ಯಸ್ಯ ಕಾರ್ಮುಕಂ|
05058022c ಮದ್ದ್ವಿತೀಯೇನ ತೇನೇಹ ವೈರಂ ವಃ ಸವ್ಯಸಾಚಿನಾ||
ನಾನು ದೂರದಲ್ಲಿರುವಾಗ ಕೃಷ್ಣೆಯು “ಗೋವಿಂದ!” ಎಂದು ಶೋಕದಿಂದ ಕೂಗಿ ಕರೆದಿದ್ದುದರ, ಯಾರ ಕಾರ್ಮುಕವು ತೇಜೋಮಯ, ದುರಾಧರ್ಷ ಗಾಂಡೀವವೋ ಆ ಸವ್ಯಸಾಚಿ – ನನ್ನ ಎರಡನೆಯವನೊಡನೆ ನೀವೇನು ವೈರ ಸಾಧಿಸಿದ್ದೀರೋ ಅವುಗಳ ಋಣವು ಬೆಳೆದು ನನ್ನ ಹೃದಯವನ್ನು ಆವರಿಸಿದೆ.
05058023a ಮದ್ದ್ವಿತೀಯಂ ಪುನಃ ಪಾರ್ಥಂ ಕಃ ಪ್ರಾರ್ಥಯಿತುಮಿಚ್ಚತಿ|
05058023c ಯೋ ನ ಕಾಲಪರೀತೋ ವಾಪ್ಯಪಿ ಸಾಕ್ಷಾತ್ಪುರಂದರಃ||
ನನಗೆ ಎರಡನೆಯವನಾದ ಪಾರ್ಥನನ್ನು ಯಾರುತಾನೇ - ಅವನು ಸಾಕ್ಷಾತ್ ಪುರಂದರನೇ ಆಗಿದ್ದರೂ - ಅವನ ಕಾಲವು ಮುಗಿದಿಲ್ಲವಾಗಿದ್ದರೆ ಎದುರಿಸಲು ಬಯಸುತ್ತಾನೆ?
05058024a ಬಾಹುಭ್ಯಾಮುದ್ವಹೇದ್ಭೂಮಿಂ ದಹೇತ್ಕ್ರುದ್ಧ ಇಮಾಃ ಪ್ರಜಾಃ|
05058024c ಪಾತಯೇತ್ತ್ರಿದಿವಾದ್ದೇವಾನ್ಯೋಽರ್ಜುನಂ ಸಮರೇ ಜಯೇತ್||
ಅರ್ಜುನನನ್ನು ಸಮರದಲ್ಲಿ ಯಾರು ಗೆಲ್ಲುತ್ತಾನೋ ಅವನು ಎರಡೂ ಬಾಹುಗಳಿಂದ ಭೂಮಿಯನ್ನು ಎತ್ತಿ ಹಿಡಿಯಬಹುದು, ಕೃದ್ಧನಾಗಿ ಈ ಪ್ರಜೆಗಳನ್ನು ಸುಟ್ಟುಬಿಡಬಲ್ಲನು, ಮತ್ತು ದೇವತೆಗಳೊಂದಿಗೆ ದಿವಿಯನ್ನು ಕೆಳಗೆ ಬೀಳಿಸಿಯಾನು.
05058025a ದೇವಾಸುರಮನುಷ್ಯೇಷು ಯಕ್ಷಗಂಧರ್ವಭೋಗಿಷು|
05058025c ನ ತಂ ಪಶ್ಯಾಮ್ಯಹಂ ಯುದ್ಧೇ ಪಾಂಡವಂ ಯೋಽಭ್ಯಯಾದ್ರಣೇ||
ರಣದಲ್ಲಿ ಪಾಂಡವನೊಂದಿಗೆ ಯುದ್ಧಮಾಡಿ ಎದುರಿಸುವವನನ್ನು ದೇವಾಸುರಮನುಷ್ಯರಲ್ಲಿ, ಯಕ್ಷ-ಗಂಧರ್ವ-ನಾಗರಲ್ಲಿ ನಾನು ಕಾಣಲಾರೆ.
05058026a ಯತ್ತದ್ವಿರಾಟನಗರೇ ಶ್ರೂಯತೇ ಮಹದದ್ಭುತಂ|
05058026c ಏಕಸ್ಯ ಚ ಬಹೂನಾಂ ಚ ಪರ್ಯಾಪ್ತಂ ತನ್ನಿದರ್ಶನಂ||
ವಿರಾಟನಗರದಲ್ಲಿ ನಡೆದ ಮಹಾ ಅದ್ಭುತದ ಕುರಿತು ಏನು ಕೇಳಿದ್ದೇವೋ - ಓರ್ವನೇ ಬಹುಯೋಧರನ್ನು ಎದುರಿಸಿದುದು - ಅದೇ ಇದಕ್ಕೆ ನಿದರ್ಶನವು.
05058027a ಏಕೇನ ಪಾಂಡುಪುತ್ರೇಣ ವಿರಾಟನಗರೇ ಯದಾ|
05058027c ಭಗ್ನಾಃ ಪಲಾಯಂತ ದಿಶಃ ಪರ್ಯಾಪ್ತಂ ತನ್ನಿದರ್ಶನಂ||
ವಿರಾಟನಗರದಲ್ಲಿ ಪಾಂಡುಪುತ್ರನೊಬ್ಬನಿಂದಲೇ ಎದುರಿಸಲ್ಪಟ್ಟಾಗ, ಭಗ್ನರಾಗಿ ದಿಕ್ಕುಗಳಲ್ಲಿ ಪಲಾಯನ ಮಾಡಿದುದೇ ಅದಕ್ಕೆ ನಿದರ್ಶನವು.
05058028a ಬಲಂ ವೀರ್ಯಂ ಚ ತೇಜಶ್ಚ ಶೀಘ್ರತಾ ಲಘುಹಸ್ತತಾ|
05058028c ಅವಿಷಾದಶ್ಚ ಧೈರ್ಯಂ ಚ ಪಾರ್ಥಾನ್ನಾನ್ಯತ್ರ ವಿದ್ಯತೇ||
ಪಾರ್ಥನಲ್ಲಿರುವ ಬಲ, ವೀರ್ಯ, ತೇಜಸ್ಸು, ಶೀಘ್ರತೆ, ಕೈಚಳಕ, ಆಯಾಸಗೊಳ್ಳದಿರುವಿಕೆ, ಮತ್ತು ಧೈರ್ಯವು ಬೇರೆ ಯಾರಲ್ಲಿಯೂ ಇದ್ದುದು ಗೊತ್ತಿಲ್ಲ.””
05058029 ಸಂಜಯ ಉವಾಚ|
05058029a ಇತ್ಯಬ್ರವೀದ್ಧೃಷೀಕೇಶಃ ಪಾರ್ಥಮುದ್ಧರ್ಷಯನ್ಗಿರಾ|
05058029c ಗರ್ಜನ್ಸಮಯವರ್ಷೀವ ಗಗನೇ ಪಾಕಶಾಸನಃ||
ಸಂಜಯನು ಹೇಳಿದನು: “ಹೀಗೆ ಗಗನದಲ್ಲಿ ಪಾಕಶಾಸನನು ಮಳೆಸುರಿಸುವಾಗ ಕೇಳಿಬರುವ ಗುಡುಗಿನ ಧ್ವನಿಯಲ್ಲಿ ಪಾರ್ಥನನ್ನು ಉತ್ತೇಜಿಸುವ ಈ ಮಾತುಗಳನ್ನಾಡಿದನು.
05058030a ಕೇಶವಸ್ಯ ವಚಃ ಶ್ರುತ್ವಾ ಕಿರೀಟೀ ಶ್ವೇತವಾಹನಃ|
05058030c ಅರ್ಜುನಸ್ತನ್ಮಹದ್ವಾಕ್ಯಮಬ್ರವೀಲ್ಲೋಮಹರ್ಷಣಂ||
ಕೇಶವನ ಮಾತುಗಳನ್ನು ಕೇಳಿ ಶ್ವೇತವಾಹನ ಕಿರೀಟಿ ಅರ್ಜುನನು ಆ ಲೋಮಹರ್ಷಣ ಮಹಾಮಾತನ್ನು ಆಡಿದನು.””
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಶ್ರೀಕೃಷ್ಣವಾಕ್ಯಕಥನೇ ಅಷ್ಟಪಂಚಾಶತ್ತಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಶ್ರೀಕೃಷ್ಣವಾಕ್ಯಕಥನದಲ್ಲಿ ಐವತ್ತೆಂಟನೆಯ ಅಧ್ಯಾಯವು.