ಉದ್ಯೋಗ ಪರ್ವ: ಯಾನಸಂಧಿ ಪರ್ವ
೫೧
ಅರ್ಜುನನ ಕುರಿತು ತನಗಿದ್ದ ಭಯವನ್ನು ಧೃತರಾಷ್ಟ್ರನು ಸಭೆಯಲ್ಲಿ ಹೇಳಿಕೊಂಡಿದುದು (೧-೧೯).
05051001 ಧೃತರಾಷ್ಟ್ರ ಉವಾಚ|
05051001a ಯಸ್ಯ ವೈ ನಾನೃತಾ ವಾಚಃ ಪ್ರವೃತ್ತಾ ಅನುಶುಶ್ರುಮಃ|
05051001c ತ್ರೈಲೋಕ್ಯಮಪಿ ತಸ್ಯ ಸ್ಯಾದ್ಯೋದ್ಧಾ ಯಸ್ಯ ಧನಂಜಯಃ||
ಧೃತರಾಷ್ಟ್ರನು ಹೇಳಿದನು: “ಯಾರ ತುಟಿಗಳಿಂದ ನಾವು ಒಂದಾದರೂ ಸುಳ್ಳು ಮಾತನ್ನು ಕೇಳಿರದ ಮತ್ತು ಯಾರ ಯೋಧನು ಧನಂಜಯನೋ ಅವನು ತ್ರಿಲೋಕಗಳನ್ನೂ ಆಳಬಹುದು.
05051002a ತಸ್ಯೈವ ಚ ನ ಪಶ್ಯಾಮಿ ಯುಧಿ ಗಾಂಡೀವಧನ್ವನಃ|
05051002c ಅನಿಶಂ ಚಿಂತಯಾನೋಽಪಿ ಯಃ ಪ್ರತೀಯಾದ್ರಥೇನ ತಂ||
ಹಗಲೂ ರಾತ್ರಿ ನಾನು ಚಿಂತಿಸಿದರೂ ಯುದ್ಧದಲ್ಲಿ ಆ ಗಾಂಡೀವ ಧನ್ವಿಯನ್ನು ರಥದಲ್ಲಿ ಎದುರಿಸುವ ಯಾರನ್ನೂ ಕಾಣಲಾರೆ!
05051003a ಅಸ್ಯತಃ ಕರ್ಣಿನಾಲೀಕಾನ್ಮಾರ್ಗಣಾನ್ ಹೃದಯಚ್ಚಿದಃ|
05051003c ಪ್ರತ್ಯೇತಾ ನ ಸಮಃ ಕಶ್ಚಿದ್ಯುಧಿ ಗಾಂಡೀವಧನ್ವನಃ||
ಯುದ್ಧದಲ್ಲಿ ಗಾಂಡೀವಧನ್ವಿಯು ಹೃದಯಗಳನ್ನು ಭೇದಿಸುವ ಕರ್ಣಿ-ನಾಲೀಕಗಳನ್ನು ಮತ್ತು ಮಾರ್ಗಣಗಳನ್ನು ಪ್ರತಿದ್ವಂದಿಸುವ ಸರಿಸಮನು ಯಾರೂ ಇಲ್ಲ.
05051004a ದ್ರೋಣಕರ್ಣೌ ಪ್ರತೀಯಾತಾಂ ಯದಿ ವೀರೌ ನರರ್ಷಭೌ|
05051004c ಮಾಹಾತ್ಮ್ಯಾತ್ಸಂಶಯೋ ಲೋಕೇ ನ ತ್ವಸ್ತಿ ವಿಜಯೋ ಮಮ||
ಒಂದುವೇಳೆ ವೀರ ನರರ್ಷಭರಾದ ದ್ರೋಣ-ಕರ್ಣರು ಅವನನ್ನು ಎದುರಿಸಿನಿಂತರೂ ಮಹಾತ್ಮರಾದ ಅವರಿಗೆ ಅಲ್ಪವೇ ಅವಕಾಶವಿರಬಹುದು. ನನಗೆ ವಿಜಯವು ಇಲ್ಲವೆಂಬುದರಲ್ಲಿ ಸಂಶಯವಿಲ್ಲ.
05051005a ಘೃಣೀ ಕರ್ಣಃ ಪ್ರಮಾದೀ ಚ ಆಚಾರ್ಯಃ ಸ್ಥವಿರೋ ಗುರುಃ|
05051005c ಸಮರ್ಥೋ ಬಲವಾನ್ಪಾರ್ಥೋ ದೃಢಧನ್ವಾ ಜಿತಕ್ಲಮಃ|
05051005e ಭವೇತ್ಸುತುಮುಲಂ ಯುದ್ಧಂ ಸರ್ವಶೋಽಪ್ಯಪರಾಜಯಃ||
ಕರ್ಣನು ಕನಿಕರವುಳ್ಳವನು ಮತ್ತು ಪ್ರಮಾದಕ್ಕೊಳಗಾಗುವನು. ಆಚಾರ್ಯನು ವೃದ್ಧ ಮತ್ತು ಗುರು. ಬಲವಾನ್ ಪಾರ್ಥನು ದೃಢಧನ್ವಿ ಮತ್ತು ಇಬ್ಬರನ್ನೂ ಗೆಲ್ಲಲು ಸಮರ್ಥ. ನಡೆಯುವ ತುಮಲ ಯುದ್ಧದಲ್ಲಿ ಎಲ್ಲರಿಗೂ ಪರಾಜಯವೇ ಆಗುತ್ತದೆ.
05051006a ಸರ್ವೇ ಹ್ಯಸ್ತ್ರವಿದಃ ಶೂರಾಃ ಸರ್ವೇ ಪ್ರಾಪ್ತಾ ಮಹದ್ಯಶಃ|
05051006c ಅಪಿ ಸರ್ವಾಮರೈಶ್ವರ್ಯಂ ತ್ಯಜೇಯುರ್ನ ಪುನರ್ಜಯಂ|
05051006e ವಧೇ ನೂನಂ ಭವೇಚ್ಚಾಂತಿಸ್ತಯೋರ್ವಾ ಫಲ್ಗುನಸ್ಯ ವಾ||
ಎಲ್ಲರೂ ಅಸ್ತ್ರವಿದರು, ಶೂರರು ಮತ್ತು ಎಲ್ಲರೂ ಮಹಾ ಯಶಸ್ಸನ್ನು ಪಡೆದಿದ್ದಾರೆ. ಎಲ್ಲರೂ ಅಮರ ಐಶ್ವರ್ಯವನ್ನು ತ್ಯಜಿಸಿಯಾರು ಆದರೆ ಜಯವನ್ನಲ್ಲ. ಇವರಿಬ್ಬರ ಅಥವಾ ಅರ್ಜುನನ ವಧೆಯಾದರೆ ಮಾತ್ರ ಶಾಂತಿಯುಂಟಾಗುತ್ತದೆ.
05051007a ನ ತು ಜೇತಾರ್ಜುನಸ್ಯಾಸ್ತಿ ಹಂತಾ ಚಾಸ್ಯ ನ ವಿದ್ಯತೇ|
05051007c ಮನ್ಯುಸ್ತಸ್ಯ ಕಥಂ ಶಾಮ್ಯೇನ್ಮಂದಾನ್ಪ್ರತಿ ಯ ಉತ್ಥಿತಃ||
ಆದರೂ ಅರ್ಜುನನ್ನು ಗೆಲ್ಲುವವನಾಗಲೀ ಕೊಲ್ಲುವವನಾಗಲೀ ಇಲ್ಲಿರುವುದು ತಿಳಿದಿಲ್ಲ. ನನ್ನ ಮಂದಬುದ್ಧಿಯವರ ಪ್ರತಿ ಹೆಚ್ಚಾಗಿರುವ ಅವನ ಕೋಪವನ್ನು ಹೇಗೆ ತಣಿಸಬಹುದು?
05051008a ಅನ್ಯೇಽಪ್ಯಸ್ತ್ರಾಣಿ ಜಾನಂತಿ ಜೀಯಂತೇ ಚ ಜಯಂತಿ ಚ|
05051008c ಏಕಾಂತವಿಜಯಸ್ತ್ವೇವ ಶ್ರೂಯತೇ ಫಲ್ಗುನಸ್ಯ ಹ||
ಇತರರೂ ಕೂಡ ಅಸ್ತ್ರಗಳನ್ನು ತಿಳಿದಿದ್ದಾರೆ. ಅವರು ಗೆದ್ದಿದ್ದಾರೆ ಮತ್ತು ಸೋತಿದ್ದಾರೆ ಕೂಡ. ಆದರೆ ಫಲ್ಗುನನಿಗೆ ವಿಜಯವೊಂದನ್ನೇ ಕೇಳಿದ್ದೇವೆ.
05051009a ತ್ರಯಸ್ತ್ರಿಂಶತ್ಸಮಾಹೂಯ ಖಾಂಡವೇಽಗ್ನಿಮತರ್ಪಯತ್|
05051009c ಜಿಗಾಯ ಚ ಸುರಾನ್ಸರ್ವಾನ್ನಾಸ್ಯ ವೇದ್ಮಿ ಪರಾಜಯಂ||
ಅವನು ಮೂವತ್ತ್ಮೂರು ದೇವತೆಗಳನ್ನು ಎದುರಿಸಿ ಖಾಂಡವದಲ್ಲಿ ಅಗ್ನಿಯನ್ನು ತೃಪ್ತಪಡಿಸಿದನು. ಅವನು ಸುರರೆಲ್ಲರನ್ನೂ ಗೆದ್ದನು. ಅವನಿಗೆ ಪರಾಜಯವಾದುದು ನನಗೆ ತಿಳಿದಿಲ್ಲ.
05051010a ಯಸ್ಯ ಯಂತಾ ಹೃಷೀಕೇಶಃ ಶೀಲವೃತ್ತಸಮೋ ಯುಧಿ|
05051010c ಧ್ರುವಸ್ತಸ್ಯ ಜಯಸ್ತಾತ ಯಥೇಂದ್ರಸ್ಯ ಜಯಸ್ತಥಾ||
ಅಯ್ಯಾ! ಯುದ್ಧದಲ್ಲಿ ಯಾರ ಸಾರಥಿಯು ಶೀಲ, ನಡತೆಗಳಲ್ಲಿ ಸರಿಸಮನಾಗಿರುವ ಹೃಷೀಕೇಶನೋ ಅವನ ಜಯವು, ಇಂದ್ರನಿಗೆ ಜಯವು ಹೇಗೋ ಹಾಗೆ ನಿಶ್ಚಯವಾದುದು.
05051011a ಕೃಷ್ಣಾವೇಕರಥೇ ಯತ್ತಾವಧಿಜ್ಯಂ ಗಾಂಡಿವಂ ಧನುಃ|
05051011c ಯುಗಪತ್ತ್ರೀಣಿ ತೇಜಾಂಸಿ ಸಮೇತಾನ್ಯನುಶುಶ್ರುಮಃ||
ಕೃಷ್ಣರಿಬ್ಬರು ಮತ್ತು ಗಾಂಡೀವ ಧನುಸ್ಸು ಈ ಮೂರೂ ತೇಜಸ್ಸುಗಳೂ ಒಂದೇ ರಥದಲ್ಲಿ ಸೇರಿಕೊಂಡಿವೆ ಎಂದು ಕೇಳಿದ್ದೇವೆ.
05051012a ನೈವ ನೋಽಸ್ತಿ ಧನುಸ್ತಾದೃಂ ನ ಯೋದ್ಧಾ ನ ಚ ಸಾರಥಿಃ|
05051012c ತಚ್ಚ ಮಂದಾ ನ ಜಾನಂತಿ ದುರ್ಯೋಧನವಶಾನುಗಾಃ||
ಅದರಂಥಹ ಧನುಸ್ಸಾಗಲೀ ಅವರಂಥಹ ಸಾರಥಿಯಾಗಲೀ ಯೋಧನಾಗಲೀ ನಮ್ಮಲ್ಲಿಲ್ಲ. ಇದು ಮಂದಬುದ್ಧಿ ದುರ್ಯೋಧನನಿಗೆ ಮತ್ತು ಅವನ ಅನುಯಾಯಿಗಳಿಗೆ ತಿಳಿದಿಲ್ಲ.
05051013a ಶೇಷಯೇದಶನಿರ್ದೀಪ್ತೋ ನಿಪತನ್ಮೂರ್ಧ್ನಿ ಸಂಜಯ|
05051013c ನ ತು ಶೇಷಂ ಶರಾಃ ಕುರ್ಯುರಸ್ತಾಸ್ತಾತ ಕಿರೀಟಿನಾ||
ಮೇಲಿಂದ ಬಿದ್ದ ಸಿಡಿಲು ತಲೆಯ ಮೇಲೆ ಸ್ವಲ್ಪವನ್ನಾದರೂ ಉಳಿಸೀತು. ಆದರೆ ಸಂಜಯ! ಕಿರೀಟಿಯು ಪ್ರಯೋಗಿಸಿದ ಬಾಣವು ಏನನ್ನೂ ಉಳಿಸುವುದಿಲ್ಲ.
05051014a ಅಪಿ ಚಾಸ್ಯನ್ನಿವಾಭಾತಿ ನಿಘ್ನನ್ನಿವ ಚ ಫಲ್ಗುನಃ|
05051014c ಉದ್ಧರನ್ನಿವ ಕಾಯೇಭ್ಯಃ ಶಿರಾಂಸಿ ಶರವೃಷ್ಟಿಭಿಃ||
ಫಲ್ಗುನನು ಈಗಲೇ ಕೊಲ್ಲುತ್ತಿರುವಂತೆ, ತನ್ನ ಶರವೃಷ್ಟಿಯಿಂದ ಕಾಯಗಳಿಂದ ತಲೆಗಳನ್ನು ಕತ್ತರಿಸುತ್ತಿರುವುದು ಕಂಡುಬರುತ್ತದೆ.
05051015a ಅಪಿ ಬಾಣಮಯಂ ತೇಜಃ ಪ್ರದೀಪ್ತಮಿವ ಸರ್ವತಃ|
05051015c ಗಾಂಡೀವೇದ್ಧಂ ದಹೇತಾಜೌ ಪುತ್ರಾಣಾಂ ಮಮ ವಾಹಿನೀಂ||
ಎಲ್ಲೆಡೆಯೂ ಸುಡುತ್ತಿರುವ ತೇಜಸ್ಸಿನಿಂದ ಉರಿಯುತ್ತಿರುವ ಅವನ ಗಾಂಡೀವದಿಂದ ಹೊರಬಂದ ಬಾಣಗುಂಪುಗಳು ನನ್ನ ಮಕ್ಕಳ ಸೇನೆಯನ್ನು ಸುಡದೆಯೇ ಇರುತ್ತದೆಯೇ?
05051016a ಅಪಿ ಸಾ ರಥಘೋಷೇಣ ಭಯಾರ್ತಾ ಸವ್ಯಸಾಚಿನಃ|
05051016c ವಿತ್ರಸ್ತಾ ಬಹುಲಾ ಸೇನಾ ಭಾರತೀ ಪ್ರತಿಭಾತಿ ಮೇ||
ಆ ಸವ್ಯಸಾಚಿಯ ರಥಘೋಷದಿಂದಲೇ ಭಯಾರ್ತರಾಗಿ ಭಾರತ ಸೇನೆಯು ಬಹುಸಂಖ್ಯೆಗಳಲ್ಲಿ ನಡುಗುತ್ತಿರುವಂತೆ ನನಗೆ ತೋರುತ್ತಿದೆ.
05051017a ಯಥಾ ಕಕ್ಷಂ ದಹತ್ಯಗ್ನಿಃ ಪ್ರವೃದ್ಧಃ ಸರ್ವತಶ್ಚರನ್|
05051017c ಮಹಾರ್ಚಿರನಿಲೋದ್ಧೂತಸ್ತದ್ವದ್ಧಕ್ಷ್ಯತಿ ಮಾಮಕಾನ್||
ಒಣಗಿದ ಮರಗಳನ್ನು ಸುಟ್ಟು ಹೆಚ್ಚಾಗಿ ಎಲ್ಲಕಡೆ ಪಸರಿಸುವಂತೆ, ಗಾಳಿಯಿಂದ ಬೆಂಕಿಯು ಭುಗಿಲೆದ್ದು ಸುಡುವಂತೆ ಅವನು ನನ್ನವರನ್ನು ಸುಟ್ಟು ಹಾಕುತ್ತಾನೆ.
05051018a ಯದೋದ್ವಮನ್ನಿಶಿತಾನ್ಬಾಣಸಂಘಾನ್
ಸ್ಥಾತಾತತಾಯೀ ಸಮರೇ ಕಿರೀಟೀ|
05051018c ಸೃಷ್ಟೋಽಂತಕಃ ಸರ್ವಹರೋ ವಿಧಾತ್ರಾ
ಯಥಾ ಭವೇತ್ತದ್ವದವಾರಣೀಯಃ||
ನಿಶಿತ ಬಾಣಸಂಘಗಳನ್ನು ಉಗುಳುತ್ತಾ ಸಮರಕ್ಕೆ ಸನ್ನದ್ಧನಾಗಿ ನಿಂತ ಕಿರೀಟಿಯು, ವಿಧಾತ್ರನು ಸೃಷ್ಟಿಸಿದ, ಸರ್ವವನ್ನೂ ಕಳೆಯುವ ಅಂತಕನಂತೆ ತಪ್ಪಿಸಿಕೊಳ್ಳಲಾರದಂತೆ ಇರುತ್ತಾನೆ.
05051019a ಯದಾ ಹ್ಯಭೀಕ್ಷ್ಣಂ ಸುಬಹೂನ್ಪ್ರಕಾರಾಂ
ಶ್ರೋತಾಸ್ಮಿ ತಾನಾವಸಥೇ ಕುರೂಣಾಂ|
05051019c ತೇಷಾಂ ಸಮಂತಾಚ್ಚ ತಥಾ ರಣಾಗ್ರೇ
ಕ್ಷಯಃ ಕಿಲಾಯಂ ಭರತಾನುಪೈತಿ||
ಈಗ ಕುರುಗಳಿರುವಲ್ಲಿ, ಅವರು ಸೇರಿರುವಲ್ಲಿ, ರಣದ ಮೊದಲು ಬಹಳ ಪ್ರಕಾರದ ಕುರುಹಗಳ ಕುರಿತು ಕೇಳಿದಾಗ, ಭರತರ ಕ್ಷಯವು ಬಂದಿದೆ ಎಂದು ನನಗನ್ನಿಸುತ್ತದೆ.”
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಧೃತರಾಷ್ಟ್ರವಾಕ್ಯೇ ಏಕಪಂಚಾಶತ್ತಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಧೃತರಾಷ್ಟ್ರವಾಕ್ಯದಲ್ಲಿ ಐವತ್ತೊಂದನೆಯ ಅಧ್ಯಾಯವು.