Udyoga Parva: Chapter 24

ಉದ್ಯೋಗ ಪರ್ವ: ಸಂಜಯಯಾನ ಪರ್ವ

೨೪

ಸಂಜಯನು ಧೃತರಾಷ್ಟ್ರನ ಸಂದೇಶವನ್ನು ಹೇಳಿದುದು

ಕೌರವರೆಲ್ಲರೂ ಕುಶಲದಿಂದಿದ್ದಾರೆಂದೂ, ಅವರು ಪಾಂಡವರ ಪರಾಕ್ರಮಗಳನ್ನು ಸ್ಮರಿಸಿಕೊಳ್ಳುತ್ತಿದ್ದಾರೆಂದೂ, ಆದರೆ ಪಾಂಡವರು ಕಾಮಕ್ಕಾಗಿ ಧರ್ಮವನ್ನು ಎಂದೂ ತ್ಯಜಿಸುವುದಿಲ್ಲವೆಂದೂ, ಯುಧಿಷ್ಠಿರನು ಶಾಂತಿಯನ್ನುಂಟುಮಾಡುತ್ತಾನೆಂದು ಧೃತರಾಷ್ಟ್ರನು ನಂಬಿದ್ದಾನೆಂದೂ ಸಂಜಯನು ಪಾಂಡವರಿಗೆ ತಿಳಿಸುವುದು (೧-೧೦).

05024001 ಸಂಜಯ ಉವಾಚ|

05024001a ಯಥಾರ್ಹಸೇ ಪಾಂಡವ ತತ್ತಥೈವ

        ಕುರೂನ್ ಕುರುಶ್ರೇಷ್ಠ ಜನಂ ಚ ಪೃಚ್ಚಸಿ|

05024001c ಅನಾಮಯಾಸ್ತಾತ ಮನಸ್ವಿನಸ್ತೇ

        ಕುರುಶ್ರೇಷ್ಠಾನ್ಪೃಚ್ಚಸಿ ಪಾರ್ಥ ಯಾಂಸ್ತ್ವಂ||

ಸಂಜಯನು ಹೇಳಿದನು: “ಪಾಂಡವ! ನೀನು ಹೇಳಿದಂತೆಯೇ ಇದೆ. ತಾತ! ಮನಸ್ವೀ! ಕುರುಗಳ ಮತ್ತು ಕುರುಶ್ರೇಷ್ಠ ಜನರ ಕುಶಲವನ್ನು ಕೇಳುತ್ತಿದ್ದೀಯಲ್ಲ. ಪಾರ್ಥ! ಯಾವ ಕುರುಶ್ರೇಷ್ಠರ ಕುರಿತು ನೀನು ಕೇಳುತ್ತಿದ್ದೀಯೋ ಅವರು ಅನಾಮಯರಾಗಿದ್ದಾರೆ.

05024002a ಸಂತ್ಯೇವ ವೃದ್ಧಾಃ ಸಾಧವೋ ಧಾರ್ತರಾಷ್ಟ್ರೇ

        ಸಂತ್ಯೇವ ಪಾಪಾಃ ಪಾಂಡವ ತಸ್ಯ ವಿದ್ಧಿ|

05024002c ದದ್ಯಾದ್ರಿಪೋಶ್ಚಾಪಿ ಹಿ ಧಾರ್ತರಾಷ್ಟ್ರಃ

        ಕುತೋ ದಾಯಾಽಲ್ಲೋಪಯೇದ್ಬ್ರಾಹ್ಮಣಾನಾಂ||

ಪಾಂಡವ! ಧಾರ್ತರಾಷ್ಟ್ರನ ಬಳಿ ಸಂತರೂ, ವೃದ್ಧರೂ ಮತ್ತು ಪಾಪಿಗಳೂ ಇದ್ದಾರೆಂದು ತಿಳಿ. ಧಾರ್ತರಾಷ್ಟ್ರನು ರಿಪುಗಳಿಗೂ ಕೊಡುತ್ತಾನೆ. ಹಾಗಿರುವಾಗ ಬ್ರಾಹ್ಮಣರಿಗೆ ಕೊಟ್ಟಿದ್ದುದನ್ನು ಹೇಗೆ ತಾನೇ ಕಸಿದುಕೊಳ್ಳುತ್ತಾನೆ?

05024003a ಯದ್ಯುಷ್ಮಾಕಂ ವರ್ತತೇಽಸೌ ನ ಧರ್ಮ್ಯಂ

        ಅದ್ರುಗ್ಧೇಷು ದ್ರುಗ್ಧವತ್ತನ್ನ ಸಾಧು|

05024003c ಮಿತ್ರಧ್ರುಕ್ಸ್ಯಾದ್ಧೃತರಾಷ್ಟ್ರಃ ಸಪುತ್ರೋ

        ಯುಷ್ಮಾನ್ದ್ವಿಷನ್ಸಾಧುವೃತ್ತಾನಸಾಧುಃ||

ನಿಮ್ಮ ಈ ನಡವಳಿಕೆಯು ಧರ್ಮಯುತವಾದುದಲ್ಲ. ನಿಮಗೆ ಕೆಟ್ಟದ್ದನ್ನು ಬಯಸದೇ ಇರುವವರ ಮೇಲೂ ಹಗೆತನವನ್ನು ಸಾಧಿಸುವುದು ಒಳ್ಳೆಯದಲ್ಲ. ಪುತ್ರರೊಂದಿಗೆ ಧೃತರಾಷ್ಟ್ರನು ಸಾಧುನಡತೆಯುಳ್ಳ ನಿಮ್ಮೊಂದಿಗೆ ದ್ವೇಷಿಗಳಂತೆ ನಡೆದುಕೊಳ್ಳುವುದು ಸಾಧುವಲ್ಲ. ಇದು ಮಿತ್ರರೊಡನೆ ಹಗೆಸಾಧಿಸಿದಂತೆ.

05024004a ನ ಚಾನುಜಾನಾತಿ ಭೃಶಂ ಚ ತಪ್ಯತೇ

        ಶೋಚತ್ಯಂತಃ ಸ್ಥವಿರೋಽಜಾತಶತ್ರೋ|

05024004c ಶೃಣೋತಿ ಹಿ ಬ್ರಾಹ್ಮಣಾನಾಂ ಸಮೇತ್ಯ

        ಮಿತ್ರದ್ರೋಹಃ ಪಾತಕೇಭ್ಯೋ ಗರೀಯಾನ್||

ಅಜಾತಶತ್ರೋ! ಅವನು ಈ ರೀತಿ ಕಾಡಿಸುವುದನ್ನು ಒಪ್ಪಿಕೊಳ್ಳುವುದಿಲ್ಲ. ಆಗಿದ್ದುದಕ್ಕೆ ಅತ್ಯಂತ ದುಃಖಿತನಾಗಿದ್ದಾನೆ. ಮಿತ್ರದ್ರೋಹವು ಎಲ್ಲ ಪಾಪಗಳಿಗಿಂತಲೂ ಹೆಚ್ಚಿನದು ಎಂದು ಬ್ರಾಹ್ಮಣರು ಸೇರಿ ಅವನಿಗೆ ಹೇಳಿದ್ದಾರೆ.

05024005a ಸ್ಮರಂತಿ ತುಭ್ಯಂ ನರದೇವ ಸಂಗಮೇ

        ಯುದ್ಧೇ ಚ ಜಿಷ್ಣೋಶ್ಚ ಯುಧಾಂ ಪ್ರಣೇತುಃ|

05024005c ಸಮುತ್ಕೃಷ್ಟೇ ದುಂದುಭಿಶಂಖಶಬ್ದೇ

        ಗದಾಪಾಣಿಂ ಭೀಮಸೇನಂ ಸ್ಮರಂತಿ||

ನರದೇವ! ಯುದ್ಧಕ್ಕೆ ಸೇರಿದಾಗ ನಿನ್ನನ್ನು ಮತ್ತು ಯೋಧರ ನಾಯಕನಾದ ಜಿಷ್ಣುವನ್ನು ನೆನಪಿಸಿಕೊಳ್ಳುತ್ತಾರೆ. ಶಂಖ ಮತ್ತು ದುಂಧುಭಿಗಳ ಶಬ್ದವು ಕೇಳಿದಾಗಲೆಲ್ಲ ಗದಾಪಾಣಿ ಭೀಮಸೇನನನ್ನು ಸ್ಮರಿಸಿಕೊಳ್ಳುತ್ತಾರೆ.

05024006a ಮಾದ್ರೀಸುತೌ ಚಾಪಿ ರಣಾಜಿಮಧ್ಯೇ

        ಸರ್ವಾ ದಿಶಃ ಸಂಪತಂತೌ ಸ್ಮರಂತಿ|

05024006c ಸೇನಾಂ ವರ್ಷಂತೌ ಶರವರ್ಷೈರಜಸ್ರಂ

        ಮಹಾರಥೌ ಸಮರೇ ದುಷ್ಪ್ರಕಂಪ್ಯೌ||

ರಣದ ಮಧ್ಯದಲ್ಲಿ ಎಲ್ಲ ದಿಕ್ಕುಗಳಲ್ಲಿಯೂ ಹೋಗಬಲ್ಲ, ಶತ್ರುಸೇನೆಯ ಮೇಲೆ ಒಂದೇಸಮನೆ ಶರಗಳ ಮಳೆಯನ್ನು ಸುರಿಸುವ, ಸಮರದಲ್ಲಿ ಇತರರನ್ನು ನಡುಗಿಸಬಲ್ಲ, ಮಹಾರಥಿ ಮಾದ್ರೀ ಸುತರಿಬ್ಬರನ್ನೂ ಎಲ್ಲರೂ ಸ್ಮರಿಸಿಕೊಳ್ಳುತ್ತಾರೆ.

05024007a ನ ತ್ವೇವ ಮನ್ಯೇ ಪುರುಷಸ್ಯ ರಾಜನ್ನ್

        ಅನಾಗತಂ ಜ್ಞಾಯತೇ ಯದ್ಭವಿಷ್ಯಂ|

05024007c ತ್ವಂ ಚೇದಿಮಂ ಸರ್ವಧರ್ಮೋಪಪನ್ನಃ

        ಪ್ರಾಪ್ತಃ ಕ್ಲೇಶಂ ಪಾಂಡವ ಕೃಚ್ಚ್ರರೂಪಂ||

ರಾಜನ್! ಪುರುಷನಿಗೆ ಭವಿಷ್ಯದಲ್ಲಿ ಏನು ಬರುತ್ತದೆಯೋ ಎಂದು ತಿಳಿಯವುದು ಕಷ್ಟ. ಪಾಂಡವ! ಸರ್ವಧರ್ಮೋಪನ್ನನಾದ ನೀನೂ ಕೂಡ ಸಹಿಸಲಾಧ್ಯವಾದ ಕಷ್ಟಗಳನ್ನು ಪಡೆದೆ.

05024008a ತ್ವಮೇವೈತತ್ಸರ್ವಮತಶ್ಚ ಭೂಯಃ

        ಸಮೀಕುರ್ಯಾಃ ಪ್ರಜ್ಞಾಯಾಜಾತಶತ್ರೋ|

05024008c ನ ಕಾಮಾರ್ಥಂ ಸಂತ್ಯಜೇಯುರ್ಹಿ ಧರ್ಮಂ

        ಪಾಂಡೋಃ ಸುತಾಃ ಸರ್ವ ಏವೇಂದ್ರಕಲ್ಪಾಃ||

ಅಜಾತಶತ್ರೋ! ಪ್ರಜ್ಞೆಯಿಂದ ನೀನೇ ಆದ ಇವೆಲ್ಲವನ್ನೂ ಸರಿಪಡೆಸಿಕೊಳುತ್ತೀಯೆ ಎನ್ನುವುದು ಖಂಡಿತ. ಇಂದ್ರಸಮರಾದ ಪಾಂಡುವಿನ ಮಕ್ಕಳು ಕಾಮಕ್ಕಾಗಿ ಧರ್ಮವನ್ನು ಎಂದೂ ತ್ಯಜಿಸುವುದಿಲ್ಲ.

05024009a ತ್ವಮೇವೈತತ್ಪ್ರಜ್ಞಾಯಾಜಾತಶತ್ರೋ

        ಶಮಂ ಕುರ್ಯಾ ಯೇನ ಶರ್ಮಾಪ್ನುಯುಸ್ತೇ|

05024009c ಧಾರ್ತರಾಷ್ಟ್ರಾಃ ಪಾಂಡವಾಃ ಸೃಂಜಯಾಶ್ಚ

        ಯೇ ಚಾಪ್ಯನ್ಯೇ ಪಾರ್ಥಿವಾಃ ಸಮ್ನಿವಿಷ್ಟಾಃ||

ಅಜಾತಶತ್ರೋ! ಪ್ರಜ್ಞೆಯಿಂದಲೇ ನೀನು ಧಾರ್ತರಾಷ್ಟ್ರರು, ಪಾಂಡವರು, ಸೃಂಜಯರು ಮತ್ತು ಇಲ್ಲಿ ಸೇರಿರುವ ಇತರ ರಾಜರೂ ಕೂಡ ಶಾಂತಿಯನ್ನು ಹೊಂದುವಂತೆ ಮಾಡುತ್ತೀಯೆ.

05024010a ಯನ್ಮಾಬ್ರವೀದ್ಧೃತರಾಷ್ಟ್ರೋ ನಿಶಾಯಾಂ

        ಅಜಾತಶತ್ರೋ ವಚನಂ ಪಿತಾ ತೇ|

05024010c ಸಹಾಮಾತ್ಯಃ ಸಹಪುತ್ರಶ್ಚ ರಾಜನ್

        ಸಮೇತ್ಯ ತಾಂ ವಾಚಮಿಮಾಂ ನಿಬೋಧ||

ಅಜಾತಶತ್ರೋ! ರಾಜನ್! ನಿನ್ನ ತಂದೆ ಧೃತರಾಷ್ಟ್ರನ ಮಾತನ್ನು ನಾನು ಹೇಳಿದ್ದೇನೆ. ಅವನು ಅಮಾತ್ಯರೊಡನೆ ಮತ್ತು ಮಕ್ಕಳೊಂದಿಗೆ ವಿಚಾರಿಸಿ ನನಗೆ ಈ ಮಾತುಗಳನ್ನು ತಿಳಿಸಿದ್ದಾನೆ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸಂಜಯಯಾನ ಪರ್ವಣಿ ಸಂಜಯವಾಕ್ಯೇ ಚತುರ್ವಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸಂಜಯಯಾನ ಪರ್ವದಲ್ಲಿ ಸಂಜಯವಾಕ್ಯದಲ್ಲಿ ಇಪ್ಪತ್ನಾಲ್ಕನೆಯ ಅಧ್ಯಾಯವು.

Related image

Comments are closed.