|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಉದ್ಯೋಗ ಪರ್ವ: ರಥಾಥಿರಥಸಂಖ್ಯ ಪರ್ವ
೧೬೧
ಯುಧಿಷ್ಠಿರನು ಸೇನಾನಾಯಕತ್ವಗಳನ್ನು ನೀಡಿದುದು
ಯುಧಿಷ್ಠಿರನು ಸೇನಾ ನಾಯಕತ್ವವನ್ನು ಧೃಷ್ಟದ್ಯುಮ್ನನಿಗೆ ನೀಡಿದುದು (೧-೪). ತನ್ನ ಸೇನೆಯಲ್ಲಿರುವ ಒಬ್ಬೊಬ್ಬ ರಥಿಗಳಿಗೆ ಕೌರವ ಸೇನೆಯ ರಥಿಗಳನ್ನು ಪ್ರತ್ಯೇಕ ಪ್ರತ್ಯೇಕ ಗುರಿಯಾಗಿ ಗುರುತಿಸಿಕೊಳ್ಳುವುದು (೫-೧೨).
05161001 ಸಂಜಯ ಉವಾಚ|
05161001a ಉಲೂಕಸ್ಯ ವಚಃ ಶ್ರುತ್ವಾ ಕುಂತೀಪುತ್ರೋ ಯುಧಿಷ್ಠಿರಃ|
05161001c ಸೇನಾಂ ನಿರ್ಯಾಪಯಾಮಾಸ ಧೃಷ್ಟದ್ಯುಮ್ನಪುರೋಗಮಾಂ||
ಸಂಜಯನು ಹೇಳಿದನು: “ಉಲೂಕನ ಮಾತನ್ನು ಕೇಳಿ ಕುಂತೀಪುತ್ರ ಯುಧಿಷ್ಠಿರನು ಧೃಷ್ಟದ್ಯುಮ್ನನ ನಾಯಕತ್ವದಲ್ಲಿದ್ದ ಸೇನೆಯನ್ನು ಹೊರಡಿಸಿದನು.
05161002a ಪದಾತಿನೀಂ ನಾಗವತೀಂ ರಥಿನೀಮಶ್ವವೃಂದಿನೀಂ|
05161002c ಚತುರ್ವಿಧಬಲಾಂ ಭೀಮಾಮಕಂಪ್ಯಾಂ ಪೃಥಿವೀಮಿವ||
ಪದಾತಿಗಳಿಂದ, ಆನೆಗಳಿಂದ, ರಥಗಳಿಂದ, ಅಶ್ವವೃಂದಗಳಿಂದ ಕೂಡಿದ ಚತುರ್ವಿಧ ಬಲವು ಪೃಥ್ವಿಯನ್ನೇ ನಡುಗಿಸುವಂತೆ ಭಯಂಕರವಾಗಿತ್ತು.
05161003a ಭೀಮಸೇನಾದಿಭಿರ್ಗುಪ್ತಾಂ ಸಾರ್ಜುನೈಶ್ಚ ಮಹಾರಥೈಃ|
05161003c ಧೃಷ್ಟದ್ಯುಮ್ನವಶಾಂ ದುರ್ಗಾಂ ಸಾಗರಸ್ತಿಮಿತೋಪಮಾಂ||
ಭೀಮಸೇನನಿಂದ, ಅರ್ಜುನನಿಂದ ಮತ್ತು ಮಹಾರಥಿಗಳಿಂದ ರಕ್ಷಿತವಾದ ಧೃಷ್ಟದ್ಯುಮ್ನನ ವಶದಲ್ಲಿದ್ದ ಆ ಸೇನೆಯು ತಿಮಿಂಗಿಲಗಳಿಂದ ತುಂಬಿದ ಸಾಗರದಂತೆ ಅಸಾಧ್ಯವಾಗಿತ್ತು.
05161004a ತಸ್ಯಾಸ್ತ್ವಗ್ರೇ ಮಹೇಷ್ವಾಸಃ ಪಾಂಚಾಲ್ಯೋ ಯುದ್ಧದುರ್ಮದಃ|
05161004c ದ್ರೋಣಪ್ರೇಪ್ಸುರನೀಕಾನಿ ಧೃಷ್ಟದ್ಯುಮ್ನಃ ಪ್ರಕರ್ಷತಿ||
ಅದರ ಮುಂದೆ ಮಹೇಷ್ವಾಸ, ಯುದ್ಧದುರ್ಮದ, ದ್ರೋಣನನ್ನು ಅರಸುತ್ತಿರುವ ಪಾಂಚಾಲ ಧೃಷ್ಟದ್ಯುಮ್ನನು ಸೇನೆಯನ್ನು ಕರೆದುಕೊಂಡು ಹೋಗುತ್ತಿದ್ದನು.
05161005a ಯಥಾಬಲಂ ಯಥೋತ್ಸಾಹಂ ರಥಿನಃ ಸಮುಪಾದಿಶತ್|
05161005c ಅರ್ಜುನಂ ಸೂತಪುತ್ರಾಯ ಭೀಮಂ ದುರ್ಯೋಧನಾಯ ಚ||
05161006a ಅಶ್ವತ್ಥಾಮ್ನೇ ಚ ನಕುಲಂ ಶೈಬ್ಯಂ ಚ ಕೃತವರ್ಮಣೇ|
05161006c ಸೈಂಧವಾಯ ಚ ವಾರ್ಷ್ಣೇಯಂ ಯುಯುಧಾನಮುಪಾದಿಶತ್||
ಯಥಾಬಲವಾಗಿ, ಉತ್ಸಾಹವಿದ್ದಂತೆ ರಥಿಗಳನ್ನು ಸೂಚಿಸಲಾಗಿತ್ತು: ಸೂತಪುತ್ರನಿಗೆ ಅರ್ಜುನ, ದುರ್ಯೋಧನನಿಗೆ ಭೀಮ, ಅಶ್ವತ್ಥಾಮನಿಗೆ ನಕುಲ, ಕೃತವರ್ಮನಿಗೆ ಶೈಬ್ಯ, ಸೈಂಧವನಿಗೆ ವಾರ್ಷ್ಣೇಯ ಯುಯುಧಾನನನ್ನು ಇಡಲಾಯಿತು.
05161007a ಶಿಖಂಡಿನಂ ಚ ಭೀಷ್ಮಾಯ ಪ್ರಮುಖೇ ಸಮಕಲ್ಪಯತ್|
05161007c ಸಹದೇವಂ ಶಕುನಯೇ ಚೇಕಿತಾನಂ ಶಲಾಯ ಚ||
05161008a ಧೃಷ್ಟಕೇತುಂ ಚ ಶಲ್ಯಾಯ ಗೌತಮಾಯೋತ್ತಮೌಜಸಂ|
05161008c ದ್ರೌಪದೇಯಾಂಶ್ಚ ಪಂಚಭ್ಯಸ್ತ್ರಿಗರ್ತೇಭ್ಯಃ ಸಮಾದಿಶತ್||
ಶಿಖಂಡಿಯನ್ನು ಪ್ರಮುಖವಾಗಿ ಭೀಷ್ಮನಿಗೆ, ಸಹದೇವನನ್ನು ಶಕುನಿಗೆ, ಚೇಕಿತಾನನನ್ನು ಶಲನಿಗೆ, ಧೃಷ್ಟಕೇತುವನ್ನು ಶಲ್ಯನಿಗೆ, ಗೌತಮನಿಗೆ ಉತ್ತಮೌಜಸನನ್ನು, ಮತ್ತು ಐವರು ದ್ರೌಪದೇಯರನ್ನು ತ್ರಿಗರ್ತರಿಗೆ ಇಡಲಾಯಿತು.
05161009a ವೃಷಸೇನಾಯ ಸೌಭದ್ರಂ ಶೇಷಾಣಾಂ ಚ ಮಹೀಕ್ಷಿತಾಂ|
05161009c ಸಮರ್ಥಂ ತಂ ಹಿ ಮೇನೇ ವೈ ಪಾರ್ಥಾದಭ್ಯಧಿಕಂ ರಣೇ||
ಸೌಭದ್ರನನ್ನು ವೃಷಸೇನನಿಗೆ ಮತ್ತು ಉಳಿದ ಮಹೀಕ್ಷಿತರಿಗೆ ಇರಿಸಲಾಯಿತು. ಏಕೆಂದರೆ ಅವನನ್ನು ಪಾರ್ಥನಿಗಿಂತಲೂ ಸಮರ್ಥನೆಂದು ತಿಳಿಯಲಾಗಿತ್ತು.
05161010a ಏವಂ ವಿಭಜ್ಯ ಯೋಧಾಂಸ್ತಾನ್ಪೃಥಕ್ಚ ಸಹ ಚೈವ ಹ|
05161010c ಜ್ವಾಲಾವರ್ಣೋ ಮಹೇಷ್ವಾಸೋ ದ್ರೋಣಮಂಶಮಕಲ್ಪಯತ್||
ಈ ರೀತಿ ಯೋಧರನ್ನು ಪ್ರತ್ಯೇಕವಾಗಿ ಅಥವಾ ಒಟ್ಟಿಗೆ ವಿಭಜಿಸಿ ಮಹೇಷ್ವಾಸ ಜ್ವಾಲವರ್ಣಿಯು ದ್ರೋಣನನ್ನು ತನ್ನ ಪಾಲಿಗೆ ಇರಿಸಿಕೊಂಡನು.
05161011a ಧೃಷ್ಟದ್ಯುಮ್ನೋ ಮಹೇಷ್ವಾಸಃ ಸೇನಾಪತಿಪತಿಸ್ತತಃ|
05161011c ವಿಧಿವದ್ವ್ಯೂಹ್ಯ ಮೇಧಾವೀ ಯುದ್ಧಾಯ ಧೃತಮಾನಸಃ||
05161012a ಯಥಾದಿಷ್ಟಾನ್ಯನೀಕಾನಿ ಪಾಂಡವಾನಾಮಯೋಜಯತ್|
05161012c ಜಯಾಯ ಪಾಂಡುಪುತ್ರಾಣಾಂ ಯತ್ತಸ್ತಸ್ಥೌ ರಣಾಜಿರೇ||
ಆಗ ಮಹೇಷ್ವಾಸ ಸೇನಾಪತಿ ಮೇಧಾವೀ ಧೃಷ್ಟದ್ಯುಮ್ನನು ವಿಧಿವತ್ತಾಗಿ ವ್ಯೂಹವನ್ನು ರಚಿಸಿ ಯುದ್ಧಕ್ಕೆ ಧೃತಮನಸ್ಕನಾಗಿ ಯಥಾವತ್ತಾಗಿ ಪಾಂಡವರ ಸೇನೆಯನ್ನು ಆಯೋಜಿಸಿ ಪಾಂಡುಪುತ್ರರ ಜಯಕ್ಕಾಗಿ ರಣವನ್ನು ಸಿದ್ಧಗೊಳಿಸಿ ನಿಂತನು.”
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ರಥಾಥಿರಥಸಂಖ್ಯಾನ ಪರ್ವಣಿ ಸೇನಾಪತಿನಿಯೋಗೇ ಏಕಷಷ್ಟ್ಯಧಿಕಶತತಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ರಥಾಥಿರಥಸಂಖ್ಯಾನ ಪರ್ವದಲ್ಲಿ ಸೇನಾಪತಿನಿಯೋಗದಲ್ಲಿ ನೂರಾಅರವತ್ತೊಂದನೆಯ ಅಧ್ಯಾಯವು.