Udyoga Parva: Chapter 128

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೨೮

ದುರ್ಯೋಧನನು ಶ್ರೀಕೃಷ್ಣನನ್ನು ಬಂಧಿಸಲು ಪ್ರಯತ್ನಿಸಿದುದು

ತಾಯಿಯ ಮಾತನ್ನು ಕೇಳಿ ಕೋಪಗೊಂಡು ಪುನಃ ಸಭಾತ್ಯಾಗ ಮಾಡಿದ ದುರ್ಯೋಧನನು ತನ್ನ ಆಪ್ತರೊಂದಿಗೆ ಸಮಾಲೋಚನೆಮಾಡಿ ಕೃಷ್ಣನನ್ನೇ ಸೆರೆಹಿಡಿಯಲು ಯೋಚಿಸಿದುದು (೧-೮). ಸನ್ನೆಗಳನ್ನು ಅರ್ಥಮಾಡಿಕೊಳ್ಳುವ ಸಾತ್ಯಕಿಯು ಅವರ ಇಂಗಿತವನ್ನು ತಿಳಿದು ಕೃತವರ್ಮನಿಗೆ ಸೇನೆಯನ್ನು ಸಿದ್ಧಮಾಡಿ ದ್ವಾರದಲ್ಲಿರುವಂತೆ ಹೇಳಿ ಸಭೆಗೆ ಬಂದು ಕೃಷ್ಣನಿಗೂ ವಿದುರ-ಧೃತರಾಷ್ಟ್ರರಿಗೂ ಅವರ ಯೋಜನೆಯನ್ನು ತಿಳಿಸಿದುದು (೯-೧೬). ಆಗ ವಿದುರನು ಧೃತರಾಷ್ಟ್ರನಿಗೆ ಕೃಷ್ಣನ ನಿಜಸ್ವರೂಪವನ್ನು ವರ್ಣಿಸಿದುದು (೧೭-೨೨). “ಈ ದುರ್ಯೋಧನನನಿಗೆ ಮತ್ತು ಇತರ ಎಲ್ಲರಿಗೂ ಏನು ಮಾಡಬೇಕೆಂದು ಬಯಸಿರುವರೋ ಅದನ್ನು ಮಾಡಲು ಒಪ್ಪಿಗೆಯನ್ನು ಕೊಡುತ್ತೇನೆ.” ಎಂದು ಕೃಷ್ಣನು ಹೇಳಲು (೨೩-೨೯) ಧೃತರಾಷ್ಟ್ರನು ದುರ್ಯೋಧನನನ್ನು ಕರೆಯಿಸಿ “ಕೈಯಲ್ಲಿ ಹಿಡಿದಿಟ್ಟುಕೊಳ್ಳಲಾರದ ಗಾಳಿಯಂತೆ, ಕೈಯಿಂದ ಮುಟ್ಟಲಾಗದ ಶಶಿಯಂತೆ, ತಲೆಯಲ್ಲಿ ಹೊರಲಿಕ್ಕಾಗದ ಭೂಮಿಯಂತೆ ಕೇಶವನನ್ನು ಬಲವನ್ನುಪಯೋಗಿಸಿ ಹಿಡಿಯಲಿಕ್ಕಾಗುವುದಿಲ್ಲ!” ಎಂದು ಎಚ್ಚರಿಸಿದುದು (೩೦-೩೯). ವಿದುರನೂ ದುರ್ಯೋಧನನಿಗೆ ಕೃಷ್ಣನು ಯಾರು ಮತ್ತು ಅವನ ಪರಾಕ್ರಮವೇನೆಂದು ತಿಳಿಸಿದುದು (೪೦-೫೨).

05128001 ವೈಶಂಪಾಯನ ಉವಾಚ|

05128001a ತತ್ತು ವಾಕ್ಯಮನಾದೃತ್ಯ ಸೋಽರ್ಥವನ್ಮಾತೃಭಾಷಿತಂ|

05128001c ಪುನಃ ಪ್ರತಸ್ಥೇ ಸಂರಂಭಾತ್ಸಕಾಶಮಕೃತಾತ್ಮನಾಂ||

ವೈಶಂಪಾಯನನು ಹೇಳಿದನು: “ತಾಯಿಯು ಹೇಳಿದ ಅರ್ಥವತ್ತಾದ ಮಾತುಗಳನ್ನು ಅನಾದರಿಸಿ ಪುನಃ ಸಿಟ್ಟಿನಿಂದ ಅವನು ಹೊರಟು ಅಕೃತಾತ್ಮರ ಬಳಿ ಹೋದನು.

05128002a ತತಃ ಸಭಾಯಾ ನಿರ್ಗಮ್ಯ ಮಂತ್ರಯಾಮಾಸ ಕೌರವಃ|

05128002c ಸೌಬಲೇನ ಮತಾಕ್ಷೇಣ ರಾಜ್ಞಾ ಶಕುನಿನಾ ಸಹ||

ಆಗ ಸಭೆಯಿಂದ ನಿರ್ಗಮಿಸಿ ಕೌರವನು ಜೂಜುಕೋರ ರಾಜ ಸೌಬಲ ಶಕುನಿಯೊಡನೆ ಮಂತ್ರಾಲೋಚನೆ ಮಾಡಿದನು.

05128003a ದುರ್ಯೋಧನಸ್ಯ ಕರ್ಣಸ್ಯ ಶಕುನೇಃ ಸೌಬಲಸ್ಯ ಚ|

05128003c ದುಃಶಾಸನಚತುರ್ಥಾನಾಮಿದಮಾಸೀದ್ವಿಚೇಷ್ಟಿತಂ||

ದುರ್ಯೋಧನ, ಕರ್ಣ, ಸೌಬಲ ಶಕುನಿ ಮತ್ತು ದುಃಶಾಸನ ಈ ನಾಲ್ವರ ನಡುವೆ ಈ ಚರ್ಚೆಯಾಯಿತು:

05128004a ಪುರಾಯಮಸ್ಮಾನ್ಗೃಹ್ಣಾತಿ ಕ್ಷಿಪ್ರಕಾರೀ ಜನಾರ್ದನಃ|

05128004c ಸಹಿತೋ ಧೃತರಾಷ್ಟ್ರೇಣ ರಾಜ್ಞಾ ಶಾಂತನವೇನ ಚ||

05128005a ವಯಮೇವ ಹೃಷೀಕೇಶಂ ನಿಗೃಹ್ಣೀಮ ಬಲಾದಿವ|

05128005c ಪ್ರಸಹ್ಯ ಪುರುಷವ್ಯಾಘ್ರಮಿಂದ್ರೋ ವೈರೋಚನಿಂ ಯಥಾ||

“ಕ್ಷಿಪ್ರಕಾರೀ ಜನಾರ್ದನನು ರಾಜ ಧೃತರಾಷ್ಟ್ರ ಮತ್ತು ಶಾಂತನವನ ಸಹಾಯದಿಂದ ನಮ್ಮನ್ನು ಸೆರೆಹಿಡಿಯುವ ಮೊದಲು ನಾವೇ ಇಂದ್ರನು ವೈರೋಚನಿಯನ್ನು ಹೇಗೋ ಹಾಗೆ ಬಲವನ್ನುಪಯೋಗಿಸಿ ಸೋಲಿಸಿ ಪುರುಷವ್ಯಾಘ್ರ ಹೃಷೀಕೇಶನನ್ನು ಬಂಧಿಸೋಣ!

05128006a ಶ್ರುತ್ವಾ ಗೃಹೀತಂ ವಾರ್ಷ್ಣೇಯಂ ಪಾಂಡವಾ ಹತಚೇತಸಃ|

05128006c ನಿರುತ್ಸಾಹಾ ಭವಿಷ್ಯಂತಿ ಭಗ್ನದಂಷ್ಟ್ರಾ ಇವೋರಗಾಃ||

ವಾರ್ಷ್ಣೇಯನು ಬಂಧಿಯಾದುದನ್ನು ಕೇಳಿ ಹತಚೇತಸರಾದ ಪಾಂಡವರು ಹಲ್ಲು ಮುರಿದ ಹಾವಿನಂತೆ ನಿರುತ್ಸಾಹಿಗಳಾಗುತ್ತಾರೆ.

05128007a ಅಯಂ ಹ್ಯೇಷಾಂ ಮಹಾಬಾಹುಃ ಸರ್ವೇಷಾಂ ಶರ್ಮ ವರ್ಮ ಚ|

05128007c ಅಸ್ಮಿನ್ಗೃಹೀತೇ ವರದೇ ಋಷಭೇ ಸರ್ವಸಾತ್ವತಾಂ||

05128007e ನಿರುದ್ಯಮಾ ಭವಿಷ್ಯಂತಿ ಪಾಂಡವಾಃ ಸೋಮಕೈಃ ಸಹ||

ಏಕೆಂದರೆ ಈ ಮಹಾಬಾಹುವು ಅವರೆಲ್ಲರಿಗೆ ನೆರಳು ಮತ್ತು ರಕ್ಷೆ. ಸರ್ವಸಾತ್ವತರ ವರದ ಈ ಋಷಭನನ್ನು ಸೆರೆಹಿಡಿದರೆ ಸೋಮಕರೊಂದಿಗೆ ಪಾಂಡವರು ನಿರುದ್ಯಮರಾಗುತ್ತಾರೆ.

05128008a ತಸ್ಮಾದ್ವಯಮಿಹೈವೈನಂ ಕೇಶವಂ ಕ್ಷಿಪ್ರಕಾರಿಣಂ|

05128008c ಕ್ರೋಶತೋ ಧೃತರಾಷ್ಟ್ರಸ್ಯ ಬದ್ಧ್ವಾ ಯೋತ್ಸ್ಯಾಮಹೇ ರಿಪೂನ್||

ಆದುದರಿಂದ ಈ ಕ್ಷಿಪ್ರಕಾರಿಣೀ ಕೇಶವನನ್ನು ನಾವೇ, ಧೃತರಾಷ್ಟ್ರನು ಕೂಗಾಡಿದರೂ, ಬಂಧಿಸಿಟ್ಟು, ಶತ್ರುಗಳ ಮೇಲೆ ಆಕ್ರಮಣ ಮಾಡೋಣ!”

05128009a ತೇಷಾಂ ಪಾಪಮಭಿಪ್ರಾಯಂ ಪಾಪಾನಾಂ ದುಷ್ಟಚೇತಸಾಂ|

05128009c ಇಂಗಿತಜ್ಞಾಃ ಕವಿಃ ಕ್ಷಿಪ್ರಮನ್ವಬುಧ್ಯತ ಸಾತ್ಯಕಿಃ||

ಸನ್ನೆಗಳನ್ನು ಅರ್ಥಮಾಡಿಕೊಳ್ಳುವ ಕವಿ ಸಾತ್ಯಕಿಯು ಆ ಪಾಪಿ ದುಷ್ಟಚೇತಸರ ಅಭಿಪ್ರಾಯವನ್ನು ಕೂಡಲೇ ತಿಳಿದುಕೊಂಡನು.

05128010a ತದರ್ಥಮಭಿನಿಷ್ಕ್ರಮ್ಯ ಹಾರ್ದಿಕ್ಯೇನ ಸಹಾಸ್ಥಿತಃ|

05128010c ಅಬ್ರವೀತ್ಕೃತವರ್ಮಾಣಂ ಕ್ಷಿಪ್ರಂ ಯೋಜಯ ವಾಹಿನೀಂ||

ಅದಕ್ಕಾಗಿ ಹೊರಬಂದು ಹತ್ತಿರದಲ್ಲಿ ನಿಂತಿದ್ದ ಹಾರ್ದಿಕ್ಯ ಕೃತವರ್ಮನಿಗೆ ಹೇಳಿದನು: “ಬೇಗನೇ ಸೇನೆಯನ್ನು ಸಿದ್ಧಗೊಳಿಸು!

05128011a ವ್ಯೂಢಾನೀಕಃ ಸಭಾದ್ವಾರಮುಪತಿಷ್ಠಸ್ವ ದಂಶಿತಃ|

05128011c ಯಾವದಾಖ್ಯಾಮ್ಯಹಂ ಚೈತತ್ಕೃಷ್ಣಾಯಾಕ್ಲಿಷ್ಟಕರ್ಮಣೇ||

ನಾನು ಅಕ್ಲಿಷ್ಟಕರ್ಮಿಗೆ ಹೇಳುವುದರೊಳಗೆ ನೀನು ಸನ್ನದ್ಧ ಸೇನೆಯನ್ನು ಸಭಾದ್ವಾರದಲ್ಲಿ ತಂದು ನಿಲ್ಲಿಸು.”

05128012a ಸ ಪ್ರವಿಶ್ಯ ಸಭಾಂ ವೀರಃ ಸಿಂಹೋ ಗಿರಿಗುಹಾಮಿವ|

05128012c ಆಚಷ್ಟ ತಮಭಿಪ್ರಾಯಂ ಕೇಶವಾಯ ಮಹಾತ್ಮನೇ||

ಸಿಂಹವು ಗಿರಿಗುಹೆಯನ್ನು ಪ್ರವೇಶಿಸುವಂತೆ ಆ ವೀರನು ಸಭೆಯನ್ನು ಪ್ರವೇಶಿಸಿ ಅವರ ಅಭಿಪ್ರಾಯವನ್ನು ಮಹಾತ್ಮ ಕೇಶವನಿಗೆ ಹೇಳಿದನು.

05128013a ಧೃತರಾಷ್ಟ್ರಂ ತತಶ್ಚೈವ ವಿದುರಂ ಚಾನ್ವಭಾಷತ|

05128013c ತೇಷಾಮೇತಮಭಿಪ್ರಾಯಮಾಚಚಕ್ಷೇ ಸ್ಮಯನ್ನಿವ||

ಧೃತರಾಷ್ಟ್ರ-ವಿದುರರಿಗೂ ಇದನ್ನು ಹೇಳಿದನು. ಅವರ ಉಪಾಯದ ಕುರಿತು ಹೇಳಿ ನಸುನಗುತ್ತಾ ಹೇಳಿದನು:

05128014a ಧರ್ಮಾದಪೇತಮರ್ಥಾಚ್ಚ ಕರ್ಮ ಸಾಧುವಿಗರ್ಹಿತಂ|

05128014c ಮಂದಾಃ ಕರ್ತುಮಿಹೇಚ್ಚಂತಿ ನ ಚಾವಾಪ್ಯಂ ಕಥಂ ಚನ||

“ಈ ಮೂಢರು ಇಲ್ಲಿ ಸಾಧುಗಳು ನಿಷೇಧಿಸುವ, ಧರ್ಮ-ಅರ್ಥ-ಕಾಮಗಳಿಗೆ ಸಲ್ಲದ ಕೆಲಸವನ್ನು ಮಾಡಲು ಬಯಸುತ್ತಿದ್ದಾರೆ. ಆದರೆ ಅವರು ಅದನ್ನು ಎಂದೂ ಸಾಧಿಸರಾರರು.

05128015a ಪುರಾ ವಿಕುರ್ವತೇ ಮೂಢಾಃ ಪಾಪಾತ್ಮಾನಃ ಸಮಾಗತಾಃ|

05128015c ಧರ್ಷಿತಾಃ ಕಾಮಮನ್ಯುಭ್ಯಾಂ ಕ್ರೋಧಲೋಭವಶಾನುಗಾಃ||

ಈ ಮೂಢರು ಪಾಪಾತ್ಮರು ಒಂದಾಗಿ ಕ್ರೋಧಲೋಭವಶಾನುಗರಾಗಿ, ಕಾಮ ಮತ್ತು ಸಿಟ್ಟಿನಿಂದ ಧರ್ಷಿತರಾಗಿ ಮಾಡಬಾರದುದನ್ನು ಮಾಡಲು ಹೊರಟಿದ್ದಾರೆ.

05128016a ಇಮಂ ಹಿ ಪುಂಡರೀಕಾಕ್ಷಂ ಜಿಘೃಕ್ಷಂತ್ಯಲ್ಪಚೇತಸಃ|

05128016c ಪಟೇನಾಗ್ನಿಂ ಪ್ರಜ್ವಲಿತಂ ಯಥಾ ಬಾಲಾ ಯಥಾ ಜಡಾಃ||

ಈ ಅಲ್ಪಚೇತಸರು ಉತ್ತರೀಯದಲ್ಲಿ ಉರಿಯುತ್ತಿರುವ ಬೆಂಕಿಯನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುವ ಬಾಲಕರಂತೆ ಈ ಪುಂಡರೀಕಾಕ್ಷನನ್ನು ಸೆರೆಹಿಡಿಯಲು ಹೊರಟಿದ್ದಾರೆ.”

05128017a ಸಾತ್ಯಕೇಸ್ತದ್ವಚಃ ಶ್ರುತ್ವಾ ವಿದುರೋ ದೀರ್ಘದರ್ಶಿವಾನ್|

05128017c ಧೃತರಾಷ್ಟ್ರಂ ಮಹಾಬಾಹುಮಬ್ರವೀತ್ಕುರುಸಂಸದಿ||

ಸಾತ್ಯಕಿಯ ಆ ಮಾತನ್ನು ಕೇಳಿ ದೀರ್ಘದರ್ಶಿ ವಿದುರನು ಕುರುಸಂಸದಿಯಲ್ಲಿ ಮಹಾಬಾಹು ಧೃತರಾಷ್ಟ್ರನಿಗೆ ಹೇಳಿದನು.

05128018a ರಾಜನ್ಪರೀತಕಾಲಾಸ್ತೇ ಪುತ್ರಾಃ ಸರ್ವೇ ಪರಂತಪ|

05128018c ಅಯಶಸ್ಯಮಶಕ್ಯಂ ಚ ಕರ್ಮ ಕರ್ತುಂ ಸಮುದ್ಯತಾಃ||

“ರಾಜನ್! ಪರಂತಪ! ನಿನ್ನ ಮಕ್ಕಳೆಲ್ಲರಿಗೂ ಕೊನೆಯ ಗಳಿಗೆಯು ಬಂದುಬಿಟ್ಟಿದೆ! ಅಶಕ್ಯರಾಗಿದ್ದರೂ ಅಯಶಸ್ಸನ್ನು ತರುವ ಕೆಲಸವನ್ನು ಮಾಡಲು ಉದ್ಯುಕ್ತರಾಗಿದ್ದಾರೆ.

05128019a ಇಮಂ ಹಿ ಪುಂಡರೀಕಾಕ್ಷಮಭಿಭೂಯ ಪ್ರಸಹ್ಯ ಚ|

05128019c ನಿಗ್ರಹೀತುಂ ಕಿಲೇಚ್ಚಂತಿ ಸಹಿತಾ ವಾಸವಾನುಜಂ||

ಎಲ್ಲರೂ ಒಂದಾಗಿ ಈ ವಾಸವನ ಅನುಜ ಪುಂಡರೀಕಾಕ್ಷನ ಮೇಲೆ ಅಕ್ರಮಣ ಮಾಡಿ ಸೆರೆಹಿಡಿಯಲು ಬಯಸುತ್ತಿದ್ದಾರಲ್ಲ!

05128020a ಇಮಂ ಪುರುಷಶಾರ್ದೂಲಮಪ್ರಧೃಷ್ಯಂ ದುರಾಸದಂ|

05128020c ಆಸಾದ್ಯ ನ ಭವಿಷ್ಯಂತಿ ಪತಂಗಾ ಇವ ಪಾವಕಂ||

ಬೆಂಕಿಯ ಬಳಿ ಹೋಗಲು ಪತಂಗಗಳಿಗೆ ಹೇಗೆ ಅಸಾಧ್ಯವೋ ಹಾಗೆ ಈ ಪುರುಷ ಶಾರ್ದೂಲ, ಅಪ್ರಧೃಷ್ಯ, ದುರಾಸದನ ಬಳಿಹೋಗಲೂ ಅವರಿಗೆ ಸಾದ್ಯವಿಲ್ಲ.

05128021a ಅಯಮಿಚ್ಚನ್ ಹಿ ತಾನ್ಸರ್ವಾನ್ಯತಮಾನಾಂ ಜನಾರ್ದನಃ|

05128021c ಸಿಂಹೋ ಮೃಗಾನಿವ ಕ್ರುದ್ಧೋ ಗಮಯೇದ್ಯಮಸಾದನಂ||

ಜನಾರ್ದನನು ಬಯಸಿದರೆ ಪ್ರಯತ್ನಿಸುತ್ತಿರುವ ಇವರೆಲ್ಲರನ್ನೂ ಕೃದ್ಧ ಸಿಂಹವು ಮೃಗಗಳನ್ನು ಹೇಗೋ ಹಾಗೆ ಯಮಸಾದನಕ್ಕೆ ಕಳುಹಿಸುತ್ತಾನೆ.

05128022a ನ ತ್ವಯಂ ನಿಂದಿತಂ ಕರ್ಮ ಕುರ್ಯಾತ್ಕೃಷ್ಣಃ ಕಥಂ ಚನ|

05128022c ನ ಚ ಧರ್ಮಾದಪಕ್ರಾಮೇದಚ್ಯುತಃ ಪುರುಷೋತ್ತಮಃ||

ಆದರೆ ಕೃಷ್ಣನು ಈ ನಿಂದನೀಯ ಕೆಸಲವನ್ನು ಎಂದೂ ಮಾಡುವುದಿಲ್ಲ. ಈ ಅಚ್ಯುತ ಪುರುಷೋತ್ತಮನು ಧರ್ಮವನ್ನು ದಾಟುವವನಲ್ಲ.”

05128023a ವಿದುರೇಣೈವಮುಕ್ತೇ ತು ಕೇಶವೋ ವಾಕ್ಯಮಬ್ರವೀತ್|

05128023c ಧೃತರಾಷ್ಟ್ರಮಭಿಪ್ರೇಕ್ಷ್ಯ ಸುಹೃದಾಂ ಶೃಣ್ವತಾಂ ಮಿಥಃ||

ವಿದುರನು ಹೀಗೆ ಹೇಳಲು ಕೇಶವನು, ಧೃತರಾಷ್ಟ್ರನನ್ನು ನೋಡಿ, ಸುಹೃದಯರು ಕೇಳುವಂತೆ ಈ ಮಾತುಗಳನ್ನಾಡಿದನು.

05128024a ರಾಜನ್ನೇತೇ ಯದಿ ಕ್ರುದ್ಧಾ ಮಾಂ ನಿಗೃಹ್ಣೀಯುರೋಜಸಾ|

05128024c ಏತೇ ವಾ ಮಾಮಹಂ ವೈನಾನನುಜಾನೀಹಿ ಪಾರ್ಥಿವ||

“ರಾಜನ್! ಪಾರ್ಥಿವ! ಇವರು ತಮ್ಮ ಬಲವನ್ನುಪಯೋಗಿಸಿ ನನ್ನ ಸೆರೆಹಿಡಿಯ ಬಯಸಿದರೆ ಅವರಿಗೆ ಅದನ್ನು ಮಾಡುವುದಕ್ಕೆ ಬಿಡು. ಅವರನ್ನು ನಾನು ಏನು ಮಾಡಬೇಕೆಂದು ನನಗೆ ತಿಳಿದಿದೆ.

05128025a ಏತಾನ್ ಹಿ ಸರ್ವಾನ್ಸಂರಬ್ಧಾನ್ನಿಯಂತುಮಹಮುತ್ಸಹೇ|

05128025c ನ ತ್ವಹಂ ನಿಂದಿತಂ ಕರ್ಮ ಕುರ್ಯಾಂ ಪಾಪಂ ಕಥಂ ಚನ||

ಇವರೆಲ್ಲರೂ ಸಿಟ್ಟಾಗಿ ಮಹಾ ಉತ್ಸಾಹದಿಂದ ಆಕ್ರಮಣ ಮಾಡಲು ಬಂದರೂ ನಾನು ನಿಂದನೀಯ ಪಾಪ ಕರ್ಮವನ್ನು ಎಂದೂ ಮಾಡುವುದಿಲ್ಲ.

05128026a ಪಾಂಡವಾರ್ಥೇ ಹಿ ಲುಭ್ಯಂತಃ ಸ್ವಾರ್ಥಾದ್ಧಾಸ್ಯಂತಿ ತೇ ಸುತಾಃ|

05128026c ಏತೇ ಚೇದೇವಮಿಚ್ಚಂತಿ ಕೃತಕಾರ್ಯೋ ಯುಧಿಷ್ಠಿರಃ||

ಪಾಂಡವರದ್ದನ್ನು ಹಿಡಿದಿಟ್ಟುಕೊಂಡು ನಿನ್ನ ಮಕ್ಕಳು ತಮ್ಮದ್ದನ್ನೂ ಕಳೆದುಕೊಳ್ಳುತ್ತಾರೆ. ಆದರೆ ಇದನ್ನೇ ಮಾಡಲು ಅವರು ಇಚ್ಛಿಸಿದರೆ, ಯುಧಿಷ್ಠಿರನ ಕೆಲಸವು ಮುಗಿದಂತೆ.

05128027a ಅದ್ಯೈವ ಹ್ಯಹಮೇತಾಂಶ್ಚ ಯೇ ಚೈತಾನನು ಭಾರತ|

05128027c ನಿಗೃಹ್ಯ ರಾಜನ್ಪಾರ್ಥೇಭ್ಯೋ ದದ್ಯಾಂ ಕಿಂ ದುಷ್ಕೃತಂ ಭವೇತ್||

ಏಕೆಂದರೆ ಭಾರತ! ರಾಜನ್! ಇಂದೇ ನಾನು ಇವರನ್ನು ಮತ್ತು ಇವರನ್ನು ಅನುಸರಿಸಿ ಬರುವವರನ್ನು ಹಿಡಿದು ಪಾರ್ಥರಿಗೆ ಕೊಡಬಹುದು. ನನಗೆ ಯಾವುದು ಅಸಾಧ್ಯವಾದುದು?

05128028a ಇದಂ ತು ನ ಪ್ರವರ್ತೇಯಂ ನಿಂದಿತಂ ಕರ್ಮ ಭಾರತ|

05128028c ಸನ್ನಿಧೌ ತೇ ಮಹಾರಾಜ ಕ್ರೋಧಜಂ ಪಾಪಬುದ್ಧಿಜಂ||

ಆದರೆ ಭಾರತ! ಮಹಾರಾಜ! ನಿನ್ನ ಸನ್ನಿಧಿಯಲ್ಲಿ ಕೋಪ ಮತ್ತು ಪಾಪಬುದ್ಧಿಯಲ್ಲಿ ಹುಟ್ಟುವ ಈ ನಿಂದನೀಯ ಕೆಲಸವನ್ನು ಮಾಡುವುದಿಲ್ಲ.

05128029a ಏಷ ದುರ್ಯೋಧನೋ ರಾಜನ್ಯಥೇಚ್ಚತಿ ತಥಾಸ್ತು ತತ್|

05128029c ಅಹಂ ತು ಸರ್ವಾನ್ಸಮಯಾನನುಜಾನಾಮಿ ಭಾರತ||

ರಾಜನ್! ಭಾರತ! ಈ ದುರ್ಯೋಧನನನಿಗೆ ಮತ್ತು ಇತರ ಎಲ್ಲರಿಗೂ ಏನು ಮಾಡಬೇಕೆಂದು ಬಯಸಿರುವರೋ ಅದನ್ನು ಮಾಡಲು ಒಪ್ಪಿಗೆಯನ್ನು ಕೊಡುತ್ತೇನೆ.”

05128030a ಏತಚ್ಚ್ರುತ್ವಾ ತು ವಿದುರಂ ಧೃತರಾಷ್ಟ್ರೋಽಭ್ಯಭಾಷತ|

05128030c ಕ್ಷಿಪ್ರಮಾನಯ ತಂ ಪಾಪಂ ರಾಜ್ಯಲುಬ್ಧಂ ಸುಯೋಧನಂ||

05128031a ಸಹಮಿತ್ರಂ ಸಹಾಮಾತ್ಯಂ ಸಸೋದರ್ಯಂ ಸಹಾನುಗಂ|

05128031c ಶಕ್ನುಯಾಂ ಯದಿ ಪಂಥಾನಮವತಾರಯಿತುಂ ಪುನಃ||

ಇದನ್ನು ಕೇಳಿ ಧೃತರಾಷ್ಟ್ರನು ವಿದುರನಿಗೆ ಹೇಳಿದನು: “ಆ ಪಾಪಿ, ರಾಜ್ಯಲುಬ್ಧ ಸುಯೋಧನನನ್ನು ಅವನ ಮಿತ್ರರು, ಅಮಾತ್ಯರು, ಸೋದರರು ಮತ್ತು ಅನುಯಾಯಿಗಳೊಂದಿಗೆ ಬೇಗನೆ ಕರೆದುಕೊಂಡು ಬಾ! ಅವರನ್ನು ದಾರಿಗೆ ತರಲು ಮತ್ತೊಮ್ಮೆ ಪ್ರಯತ್ನಿಸೋಣ.”

05128032a ತತೋ ದುರ್ಯೋಧನಂ ಕ್ಷತ್ತಾ ಪುನಃ ಪ್ರಾವೇಶಯತ್ಸಭಾಂ|

05128032c ಅಕಾಮಂ ಭ್ರಾತೃಭಿಃ ಸಾರ್ಧಂ ರಾಜಭಿಃ ಪರಿವಾರಿತಂ||

ಆಗ ಕ್ಷತ್ತನು ಬೇಡವಂತಿದ್ದ, ರಾಜರಿಂದ ಸುತ್ತುವರೆಯಲ್ಪಟ್ಟಿದ್ದ ದುರ್ಯೋಧನನನ್ನು ಅವನ ಸಹೋದರರೊಂದಿಗೆ ಸಭೆಗೆ ಪ್ರವೇಶಗೊಳಿಸಿದನು.

05128033a ಅಥ ದುರ್ಯೋಧನಂ ರಾಜಾ ಧೃತರಾಷ್ಟ್ರೋಽಭ್ಯಭಾಷತ|

05128033c ಕರ್ಣದುಃಶಾಸನಾಭ್ಯಾಂ ಚ ರಾಜಭಿಶ್ಚಾಭಿಸಂವೃತಂ||

ಆಗ ರಾಜಾ ಧೃತರಾಷ್ಟ್ರನು ಕರ್ಣ-ದುಃಶಾಸನರೊಡನಿದ್ದ, ರಾಜರಿಂದ ಸುತ್ತುವರೆಯಲ್ಪಟ್ಟಿದ್ದ ದುರ್ಯೋಧನನಿಗೆ ಹೇಳಿದನು:

05128034a ನೃಶಂಸ ಪಾಪಭೂಯಿಷ್ಠ ಕ್ಷುದ್ರಕರ್ಮಸಹಾಯವಾನ್|

05128034c ಪಾಪೈಃ ಸಹಾಯೈಃ ಸಂಹತ್ಯ ಪಾಪಂ ಕರ್ಮ ಚಿಕೀರ್ಷಸಿ||

“ಕ್ರೂರಿ! ಪಾಪಭೂಯಿಷ್ಠ! ಕ್ಷುದ್ರಕರ್ಮಿಗಳ ಸಹಾಯದಿಂದ, ಪಾಪಿಗಳೊಂದಿಗೆ ಪಾಪ ಕರ್ಮವನ್ನೆಸಗಲು ಬಯಸುತ್ತಿದ್ದೀಯೆ!

05128035a ಅಶಕ್ಯಮಯಶಸ್ಯಂ ಚ ಸದ್ಭಿಶ್ಚಾಪಿ ವಿಗರ್ಹಿತಂ|

05128035c ಯಥಾ ತ್ವಾದೃಶಕೋ ಮೂಢೋ ವ್ಯವಸ್ಯೇತ್ಕುಲಪಾಂಸನಃ||

ಕುಲಪಾಂಸನ! ಅಶಕ್ಯವಾದರೂ ಅಯಶಸ್ಸನ್ನು ತರುವ, ಸಾಧುಗಳು ನಿಂದಿಸುವ, ಮೂಢನಾದ ನೀನೊಬ್ಬನೇ ಮಾಡಬಹುದಾದ ಕೆಲಸವನ್ನು ಮಾಡಲು ಹೊರಟಿರುವೆ.

05128036a ತ್ವಮಿಮಂ ಪುಂಡರೀಕಾಕ್ಷಮಪ್ರಧೃಷ್ಯಂ ದುರಾಸದಂ|

05128036c ಪಾಪೈಃ ಸಹಾಯೈಃ ಸಂಹತ್ಯ ನಿಗ್ರಹೀತುಂ ಕಿಲೇಚ್ಚಸಿ||

ಅಪ್ರಧೃಷ್ಠನಾದ, ದುರಾಸದನಾದ ಈ ಪುಂಡರೀಕಾಕ್ಷನನ್ನು ನೀನು ಪಾಪಿಗಳ ಸಹಾಯದಿಂದ ನಿರ್ಬಲನನ್ನಾಗಿಸಿ ಸೆರೆಹಿಡಿಯಲು ಬಯಸುತ್ತೀಯಲ್ಲಾ!

05128037a ಯೋ ನ ಶಕ್ಯೋ ಬಲಾತ್ಕರ್ತುಂ ದೇವೈರಪಿ ಸವಾಸವೈಃ|

05128037c ತಂ ತ್ವಂ ಪ್ರಾರ್ಥಯಸೇ ಮಂದ ಬಾಲಶ್ಚಂದ್ರಮಸಂ ಯಥಾ||

ಮಂದ! ಬಾಲಕನು ಚಂದ್ರನನ್ನು ಬಯಸುವಂತೆ ವಾಸವನೊಂದಿಗೆ ದೇವತೆಗಳೂ ಬಲಾತ್ಕರಿಸಲು ಶಕ್ಯನಲ್ಲದ ಇವನನ್ನು ಹಿಡಿಯಲು ನೀನು ಬಯಸುತ್ತಿದ್ದೀಯೆ.

05128038a ದೇವೈರ್ಮನುಷ್ಯೈರ್ಗಂಧರ್ವೈರಸುರೈರುರಗೈಶ್ಚ ಯಃ|

05128038c ನ ಸೋಢುಂ ಸಮರೇ ಶಕ್ಯಸ್ತಂ ನ ಬುಧ್ಯಸಿ ಕೇಶವಂ||

ಕೇಶವನನ್ನು ಸಮರದಲ್ಲಿ ದೇವ-ಮನುಷ್ಯ-ಗಂಧರ್ವ-ಸುರ-ಉರುಗರೂ ಕೂಡ ಸೋಲಿಸಲಾರರು ಎಂದು ನಿನಗೆ ತಿಳಿದಿಲ್ಲವೇ?

05128039a ದುರ್ಗ್ರಹಃ ಪಾಣಿನಾ ವಾಯುರ್ದುಃಸ್ಪರ್ಶಃ ಪಾಣಿನಾ ಶಶೀ|

05128039c ದುರ್ಧರಾ ಪೃಥಿವೀ ಮೂರ್ಧ್ನಾ ದುರ್ಗ್ರಹಃ ಕೇಶವೋ ಬಲಾತ್||

ಕೈಯಲ್ಲಿ ಹಿಡಿದಿಟ್ಟುಕೊಳ್ಳಲಾರದ ಗಾಳಿಯಂತೆ, ಕೈಯಿಂದ ಮುಟ್ಟಲಾಗದ ಶಶಿಯಂತೆ, ತಲೆಯಲ್ಲಿ ಹೊರಲಿಕ್ಕಾಗದ ಭೂಮಿಯಂತೆ ಕೇಶವನನ್ನು ಬಲವನ್ನುಪಯೋಗಿಸಿ ಹಿಡಿಯಲಿಕ್ಕಾಗುವುದಿಲ್ಲ!”

05128040a ಇತ್ಯುಕ್ತೇ ಧೃತರಾಷ್ಟ್ರೇಣ ಕ್ಷತ್ತಾಪಿ ವಿದುರೋಽಬ್ರವೀತ್|

05128040c ದುರ್ಯೋಧನಮಭಿಪ್ರೇಕ್ಷ್ಯ ಧಾರ್ತರಾಷ್ಟ್ರಮಮರ್ಷಣಂ||

ಧೃತರಾಷ್ಟ್ರನು ಹೀಗೆ ಹೇಳಲು ಕ್ಷತ್ತ ವಿದುರನೂ ಕೂಡ ಅಮರ್ಷಣ ಧಾರ್ತರಾಷ್ಟ್ರ ದುರ್ಯೋಧನನನ್ನು ನೋಡಿ ಹೇಳಿದನು:

05128041a ಸೌಭದ್ವಾರೇ ವಾನರೇಂದ್ರೋ ದ್ವಿವಿದೋ ನಾಮ ನಾಮತಃ|

05128041c ಶಿಲಾವರ್ಷೇಣ ಮಹತಾ ಚಾದಯಾಮಾಸ ಕೇಶವಂ||

“ಸೌಭದ್ವಾರದಲ್ಲಿ ದ್ವಿವಿದ ಎಂಬ ಹೆಸರಿನ ವಾನರೇಂದ್ರನು ಅತಿ ದೊಡ್ಡ ಶಿಲಾವರ್ಷದಿಂದ ಕೇಶವನನ್ನು ಮುಚ್ಚಿದನು.

05128042a ಗ್ರಹೀತುಕಾಮೋ ವಿಕ್ರಮ್ಯ ಸರ್ವಯತ್ನೇನ ಮಾಧವಂ|

05128042c ಗ್ರಹೀತುಂ ನಾಶಕತ್ತತ್ರ ತಂ ತ್ವಂ ಪ್ರಾರ್ಥಯಸೇ ಬಲಾತ್||

ಮಾಧವನನ್ನು ಹಿಡಿಯಲು ಬಯಸಿ ವಿಕ್ರಮದಿಂದ ಸರ್ವಯತ್ನಗಳನ್ನು ಮಾಡಿದರೂ ಹಿಡಿಯಲು ಆಗಲಿಲ್ಲ. ಅಂಥವನನ್ನು ಬಲವನ್ನುಪಯೋಗಿಸಿ ಹಿಡಿಯಲು ಬಯಸುತ್ತಿರುವೆ.

05128043a ನಿರ್ಮೋಚನೇ ಷಟ್ಸಹಸ್ರಾಃ ಪಾಶೈರ್ಬದ್ಧ್ವಾ ಮಹಾಸುರಾಃ|

05128043c ಗ್ರಹೀತುಂ ನಾಶಕಂಶ್ಚೈನಂ ತಂ ತ್ವಂ ಪ್ರಾರ್ಥಯಸೇ ಬಲಾತ್||

ನಿರ್ಮೋಚನದಲ್ಲಿ ಮಹಾಸುರರು ಆರುಸಾವಿರ ಪಾಶಗಳಿಂದಲೂ ಹಿಡಿಯಲು ಅಸಮರ್ಥರಾದ ಇವನನ್ನು ಬಲವನ್ನುಪಯೋಗಿಸಿ ಹಿಡಿಯಲು ಬಯಸುತ್ತಿರುವೆ.

05128044a ಪ್ರಾಗ್ಜ್ಯೋತಿಷಗತಂ ಶೌರಿಂ ನರಕಃ ಸಹ ದಾನವೈಃ|

05128044c ಗ್ರಹೀತುಂ ನಾಶಕತ್ತತ್ರ ತಂ ತ್ವಂ ಪ್ರಾರ್ಥಯಸೇ ಬಲಾತ್||

ಪ್ರಾಗ್ಜ್ಯೋತಿಷಕ್ಕೆ ಹೋಗಿದ್ದ ಶೌರಿಯನ್ನು ದಾನವರ ಸಹಿತ ನರಕನು ಹಿಡಿಯಲು ಅಸಮರ್ಥನಾದ. ಇವನನ್ನು ನೀನು ಬಲವನ್ನುಪಯೋಗಿಸಿ ಹಿಡಿಯಲು ಬಯಸುತ್ತಿರುವೆ.

05128045a ಅನೇನ ಹಿ ಹತಾ ಬಾಲ್ಯೇ ಪೂತನಾ ಶಿಶುನಾ ತಥಾ|

05128045c ಗೋವರ್ಧನೋ ಧಾರಿತಶ್ಚ ಗವಾರ್ಥೇ ಭರತರ್ಷಭ||

ಭರತರ್ಷಭ! ಇವನು ಬಾಲ್ಯದಲ್ಲಿಯೇ ಶಿಶುವಾಗಿದ್ದಾಗ ಪೂತನಿಯನ್ನು ಕೊಂದನು ಮತ್ತು ಗೋವುಗಳನ್ನು ರಕ್ಷಿಸಲು ಗೋವರ್ಧನವನ್ನು ಎತ್ತಿ ಹಿಡಿದನು.

05128046a ಅರಿಷ್ಟೋ ಧೇನುಕಶ್ಚೈವ ಚಾಣೂರಶ್ಚ ಮಹಾಬಲಃ|

05128046c ಅಶ್ವರಾಜಶ್ಚ ನಿಹತಃ ಕಂಸಶ್ಚಾರಿಷ್ಟಮಾಚರನ್||

ಇವನು ಅರಿಷ್ಟ, ಧೇನುಕ, ಮಹಾಬಲ ಚಾಣೂರ, ಅಶ್ವರಾಜ ಮತ್ತು ದುರಾಚಾರಿ ಕಂಸನನ್ನು ಕೊಂದಿರುವನು.

05128047a ಜರಾಸಂಧಶ್ಚ ವಕ್ರಶ್ಚ ಶಿಶುಪಾಲಶ್ಚ ವೀರ್ಯವಾನ್|

05128047c ಬಾಣಶ್ಚ ನಿಹತಃ ಸಂಖ್ಯೇ ರಾಜಾನಶ್ಚ ನಿಷೂದಿತಾಃ||

ಇವನು ಜರಾಸಂಧ, ವಕ್ರ, ವೀರ್ಯವಾನ್ ಶಿಶುಪಾಲ ಮತ್ತು ಬಾಣರನ್ನು ಸಂಹರಿಸಿದ್ದಾನೆ. ಸಮರದಲ್ಲಿ ರಾಜರನ್ನು ಸದೆಬಡಿದಿದ್ದಾನೆ.

05128048a ವರುಣೋ ನಿರ್ಜಿತೋ ರಾಜಾ ಪಾವಕಶ್ಚಾಮಿತೌಜಸಾ|

05128048c ಪಾರಿಜಾತಂ ಚ ಹರತಾ ಜಿತಃ ಸಾಕ್ಷಾಚ್ಚಚೀಪತಿಃ||

ಇವನು ರಾಜಾ ವರುಣ ಮತ್ತು ಅಮಿತೌಜಸ ಪಾವಕನನ್ನು ಸೋಲಿಸಿದ್ದಾನೆ. ಸಾಕ್ಷಾತ್ ಶಚೀಪತಿಯನ್ನು ಗೆದ್ದು ಪಾರಿಜಾತವನ್ನು ಅಪಹರಿಸಿದನು.

05128049a ಏಕಾರ್ಣವೇ ಶಯಾನೇನ ಹತೌ ತೌ ಮಧುಕೈಟಭೌ|

05128049c ಜನ್ಮಾಂತರಮುಪಾಗಮ್ಯ ಹಯಗ್ರೀವಸ್ತಥಾ ಹತಃ||

ಏಕಾರ್ಣವದಲ್ಲಿ ಮಲಗಿರುವಾಗ ಇವನು ಮಧು-ಕೈಟಭರನ್ನು ಸಂಹರಿಸಿದನು. ಇನ್ನೊಂದು ಜನ್ಮದಲ್ಲಿ ಹಯಗ್ರೀವನನ್ನು ಕೊಂದನು.

05128050a ಅಯಂ ಕರ್ತಾ ನ ಕ್ರಿಯತೇ ಕಾರಣಂ ಚಾಪಿ ಪೌರುಷೇ|

05128050c ಯದ್ಯದಿಚ್ಚೇದಯಂ ಶೌರಿಸ್ತತ್ತತ್ಕುರ್ಯಾದಯತ್ನತಃ||

ಇವನು ಕರ್ತ. ಇವನನ್ನು ಯಾರೂ ಮಾಡಿಲ್ಲ. ಇವನು ಪೌರುಷಗಳ ಕಾರಣ. ಯಾವುದನ್ನು ಬಯಸುತ್ತಾನೋ ಅದನ್ನು ಶೌರಿಯು ನಿರಾಯಾಸವಾಗಿ ಮಾಡುತ್ತಾನೆ.

05128051a ತಂ ನ ಬುಧ್ಯಸಿ ಗೋವಿಂದಂ ಘೋರವಿಕ್ರಮಮಚ್ಯುತಂ|

05128051c ಆಶೀವಿಷಮಿವ ಕ್ರುದ್ಧಂ ತೇಜೋರಾಶಿಮನಿರ್ಜಿತಂ||

ಇಲ್ಲ! ನಿನಗೆ ಈ ಗೋವಿಂದ, ಘೋರವಿಕ್ರಮಿ, ಅಚ್ಯುತ, ಕೃದ್ಧನಾದರೆ ಘೋರವಿಷದಂತಿರುವ, ತೇಜೋರಾಶಿ, ಅನಿರ್ಜಿತನು ಗೊತ್ತಿಲ್ಲ!

05128052a ಪ್ರಧರ್ಷಯನ್ಮಹಾಬಾಹುಂ ಕೃಷ್ಣಮಕ್ಲಿಷ್ಟಕಾರಿಣಂ|

05128052c ಪತಂಗೋಽಗ್ನಿಮಿವಾಸಾದ್ಯ ಸಾಮಾತ್ಯೋ ನ ಭವಿಷ್ಯಸಿ||

ಅಗ್ನಿಯ ಬಳಿಸಾರುವ ಪತಂಗಗಳಂತೆ ಈ ಅಕ್ಲಿಷ್ಟಕರ್ಮಿ, ಮಹಾಬಾಹು ಕೃಷ್ಣನ ಮೇಲೆರಗಿ ನೀನು ಮತ್ತು ಅಮಾತ್ಯರು ಇಲ್ಲವಾಗುತ್ತೀರಿ!””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ವಿದುರವಾಕ್ಯೇ ಅಷ್ಟಾವಿಂಶತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ವಿದುರವಾಕ್ಯದಲ್ಲಿ ನೂರಾಇಪ್ಪತ್ತೆಂಟನೆಯ ಅಧ್ಯಾಯವು.

Image result for indian motifs

Comments are closed.