ಶಾಂತಿ ಪರ್ವ: ಮೋಕ್ಷಧರ್ಮ ಪರ್ವ
೩೩೮
ವೈಜಯಂತ ಪರ್ವತದ ಮೇಲೆ ಪುರುಷನ ಕುರಿತು ಬ್ರಹ್ಮ-ರುದ್ರರ ಸಂವಾದ (1-25).
12338001 ಜನಮೇಜಯ ಉವಾಚ|
12338001a ಬಹವಃ ಪುರುಷಾ ಬ್ರಹ್ಮನ್ನುತಾಹೋ ಏಕ ಏವ ತು|
12338001c ಕೋ ಹ್ಯತ್ರ ಪುರುಷಃ ಶ್ರೇಷ್ಠಃ ಕೋ ವಾ ಯೋನಿರಿಹೋಚ್ಯತೇ||
ಜನಮೇಜಯನು ಹೇಳಿದನು: “ಬ್ರಹ್ಮನ್! ಪುರುಷರು ಅನೇಕರಿರುವರೇ? ಅಥವಾ ಒಬ್ಬನೇ ಇರುವನೇ? ಅನೇಕರಿರುವುದಾದರೆ ಎಲ್ಲರಿಗಿಂತಲೂ ಶ್ರೇಷ್ಠನಾದ ಮತ್ತು ಎಲ್ಲವಕ್ಕೂ ಉತ್ಪತ್ತಿಸ್ಥಾನನಾದ ಪುರುಷನು ಯಾರು?”
12338002 ವೈಶಂಪಾಯನ ಉವಾಚ|
12338002a ಬಹವಃ ಪುರುಷಾ ಲೋಕೇ ಸಾಂಖ್ಯಯೋಗವಿಚಾರಿಣಾಮ್|
12338002c ನೈತದಿಚ್ಚಂತಿ ಪುರುಷಮೇಕಂ ಕುರುಕುಲೋದ್ವಹ||
ವೈಶಂಪಾಯನನು ಹೇಳಿದನು: “ಕುರುಕುಲೋದ್ವಹ! ಸಾಂಖ್ಯ-ಯೋಗಗಳ ವಿಚಾರದಲ್ಲಿ ಲೋಕದಲ್ಲಿ ಅನೇಕ ಪುರುಷರಿದ್ದಾರೆ. ಅವರು ಪುರುಷನು ಒಬ್ಬನೇ ಎನ್ನುವುದನ್ನು ಮನ್ನಿಸುವುದಿಲ್ಲ.
12338003a ಬಹೂನಾಂ ಪುರುಷಾಣಾಂ ಚ ಯಥೈಕಾ ಯೋನಿರುಚ್ಯತೇ|
12338003c ತಥಾ ತಂ ಪುರುಷಂ ವಿಶ್ವಂ ವ್ಯಾಖ್ಯಾಸ್ಯಾಮಿ ಗುಣಾಧಿಕಮ್||
12338004a ನಮಸ್ಕೃತ್ವಾ ತು ಗುರವೇ ವ್ಯಾಸಾಯಾಮಿತತೇಜಸೇ|
12338004c ತಪೋಯುಕ್ತಾಯ ದಾಂತಾಯ ವಂದ್ಯಾಯ ಪರಮರ್ಷಯೇ||
ಅಮಿತತೇಜಸ್ವಿ, ತಪೋಯುಕ್ತ, ದಾಂತ, ವಂದ್ಯ, ಪರಮ ಋಷಿ ಗುರು ವ್ಯಾಸನಿಗೆ ನಮಸ್ಕರಿಸಿ ಅನೇಕ ಪುರುಷರಿಗೂ ಯಾರನ್ನು ಒಬ್ಬನೇ ಮೂಲವೆಂದು ಹೇಳುತ್ತಾರೋ ಅಂತಹ ಅಧಿಕಗುಣಗಳಿರುವ ವಿಶ್ವಾತ್ಮ ಪುರುಷನನ್ನು ವರ್ಣಿಸುತ್ತೇನೆ.
12338005a ಇದಂ ಪುರುಷಸೂಕ್ತಂ ಹಿ ಸರ್ವವೇದೇಷು ಪಾರ್ಥಿವ|
12338005c ಋತಂ ಸತ್ಯಂ ಚ ವಿಖ್ಯಾತಮೃಷಿಸಿಂಹೇನ ಚಿಂತಿತಮ್||
ಪಾರ್ಥಿವ! ಇದೇ ನಾರಾಯಣ ಋಷಿಸಿಂಹನು ಚಿಂತಿಸಿದ ಪುರುಷಸೂಕ್ತವು ಸರ್ವವೇದಗಳಲ್ಲಿ ಋತ ಮತ್ತು ಸತ್ಯವೆಂದು ವಿಖ್ಯಾತವಾಗಿದೆ.
12338006a ಉತ್ಸರ್ಗೇಣಾಪವಾದೇನ ಋಷಿಭಿಃ ಕಪಿಲಾದಿಭಿಃ|
12338006c ಅಧ್ಯಾತ್ಮಚಿಂತಾಮಾಶ್ರಿತ್ಯ ಶಾಸ್ತ್ರಾಣ್ಯುಕ್ತಾನಿ ಭಾರತ||
ಭಾರತ! ಕಪಿಲನೇ ಮೊದಲಾದ ಋಷಿಗಳು ಸಾಮಾನ್ಯ ಮತ್ತು ವಿಶೇಷ ಶಾಸ್ತ್ರಗಳ ಹಿನ್ನಲೆಯಲ್ಲಿ ಆಧ್ಯಾತ್ಮತತ್ತ್ವವನ್ನು ಚಿಂತನೆಮಾಡಿ ಅದಕ್ಕೆ ಸಂಬಂಧಿಸಿದಂತೆ ಅನೇಕ ಶಾಸ್ತ್ರಗಳನ್ನು ಹೇಳಿದ್ದಾರೆ.
12338007a ಸಮಾಸತಸ್ತು ಯದ್ವ್ಯಾಸಃ ಪುರುಷೈಕತ್ವಮುಕ್ತವಾನ್|
12338007c ತತ್ತೇಽಹಂ ಸಂಪ್ರವಕ್ಷ್ಯಾಮಿ ಪ್ರಸಾದಾದಮಿತೌಜಸಃ||
ಆದರೆ ನಾನು ನಿನಗೆ ಪುರುಷನ ಏಕತ್ವವು ಹೇಗೆ ಎಂದು ಅಮಿತೌಜಸ ಗುರುವಿನ ಪ್ರಸಾದದಿಂದ ಸಂಕ್ಷಿಪ್ತವಾಗಿ ಹೇಳುತ್ತೇನೆ.
12338008a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|
12338008c ಬ್ರಹ್ಮಣಾ ಸಹ ಸಂವಾದಂ ತ್ರ್ಯಂಬಕಸ್ಯ ವಿಶಾಂ ಪತೇ||
ವಿಶಾಂಪತೇ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಬ್ರಹ್ಮನೊಂದಿಗೆ ತ್ರ್ಯಂಬಕನ ಸಂವಾದವನ್ನು ಉದಾಹರಿಸುತ್ತಾರೆ.
12338009a ಕ್ಷೀರೋದಸ್ಯ ಸಮುದ್ರಸ್ಯ ಮಧ್ಯೇ ಹಾಟಕಸಪ್ರಭಃ|
12338009c ವೈಜಯಂತ ಇತಿ ಖ್ಯಾತಃ ಪರ್ವತಪ್ರವರೋ ನೃಪ||
ನೃಪ! ಕ್ಷೀರಸಮುದ್ರದ ಮಧ್ಯೆ ಸುವರ್ಣಪ್ರಭೆಯಿಂದ ಹೊಳೆಯುತ್ತಿರುವ ವೈಜಯಂತವೆಂಬ ಖ್ಯಾತ ಪರ್ವತವಿದೆ.
12338010a ತತ್ರಾಧ್ಯಾತ್ಮಗತಿಂ ದೇವ ಏಕಾಕೀ ಪ್ರವಿಚಿಂತಯನ್|
12338010c ವೈರಾಜಸದನೇ ನಿತ್ಯಂ ವೈಜಯಂತಂ ನಿಷೇವತೇ||
ಆಧ್ಯಾತ್ಮ ಗತಿಯ ಕುರಿತೇ ಚಿಂತಿಸುತ್ತಿದ್ದ ದೇವ ಬ್ರಹ್ಮನು ಏಕಾಕಿಯಾಗಿ ನಿತ್ಯವೂ ಬ್ರಹ್ಮಲೋಕದಿಂದ ವೈಜಯಂತ ಪರ್ವತಕ್ಕೆ ಬಂದು ಸೇವಿಸುತ್ತಿದ್ದನು.
12338011a ಅಥ ತತ್ರಾಸತಸ್ತಸ್ಯ ಚತುರ್ವಕ್ತ್ರಸ್ಯ ಧೀಮತಃ|
12338011c ಲಲಾಟಪ್ರಭವಃ ಪುತ್ರಃ ಶಿವ ಆಗಾದ್ಯದೃಚ್ಚಯಾ|
12338011e ಆಕಾಶೇನೈವ ಯೋಗೀಶಃ ಪುರಾ ತ್ರಿನಯನಃ ಪ್ರಭುಃ||
ಹಿಂದೆ ಒಮ್ಮೆ ಧೀಮತ ಚತುರ್ವಕ್ತ್ರನು ಅಲ್ಲಿದ್ದಾಗ ಆಕಾಶದಲ್ಲಿ ಹೋಗುತ್ತಿದ್ದ ಲಲಾಟದಿಂದ ಹುಟ್ಟಿದ ಪುತ್ರ ಯೋಗೀಶ ತ್ರಿನಯನ ಪ್ರಭುವು ಅಲ್ಲಿಗೆ ಹೋಗಲು ಬಯಸಿದನು.
12338012a ತತಃ ಖಾನ್ನಿಪಪಾತಾಶು ಧರಣೀಧರಮೂರ್ಧನಿ|
12338012c ಅಗ್ರತಶ್ಚಾಭವತ್ ಪ್ರೀತೋ ವವಂದೇ ಚಾಪಿ ಪಾದಯೋಃ||
ಆಗ ಆಕಾಶದಿಂದ ಪರ್ವತದ ಶಿಖರದ ಮೇಲೆ ಇಳಿದು ರುದ್ರನು ಎದುರಿಗಿದ್ದವನ ಪಾದಗಳಿಗೆ ಪ್ರೀತಿಯಿಂದ ವಂದಿಸಿದನು.
12338013a ತಂ ಪಾದಯೋರ್ನಿಪತಿತಂ ದೃಷ್ಟ್ವಾ ಸವ್ಯೇನ ಪಾಣಿನಾ|
12338013c ಉತ್ಥಾಪಯಾಮಾಸ ತದಾ ಪ್ರಭುರೇಕಃ ಪ್ರಜಾಪತಿಃ||
ಪಾದಗಳಿಗೆ ಬಿದ್ದ ಅವನನ್ನು ನೋಡಿ ಏಕೈಕ ಪ್ರಭು ಪ್ರಜಾಪತಿಯು ತನ್ನ ಎಡಗೈಯಿಂದ ಅವನನ್ನು ಮೇಲೆತ್ತಿದನು.
12338014a ಉವಾಚ ಚೈನಂ ಭಗವಾಂಶ್ಚಿರಸ್ಯಾಗತಮಾತ್ಮಜಮ್|
12338014c ಸ್ವಾಗತಂ ತೇ ಮಹಾಬಾಹೋ ದಿಷ್ಟ್ಯಾ ಪ್ರಾಪ್ತೋಽಸಿ ಮೇಽಂತಿಕಮ್||
ಬಹಳ ಸಮಯದ ನಂತರ ಬಂದಿದ್ದ ತನ್ನ ಪುತ್ರನಿಗೆ ಭಗವಾನನು ಹೇಳಿದನು: “ಮಹಾಬಾಹೋ! ನಿನಗೆ ಸ್ವಾಗತ! ನೀನು ನನ್ನ ಬಳಿ ಬಂದಿರುವುದು ಒಳ್ಳೆಯದೇ ಆಯಿತು.
12338015a ಕಚ್ಚಿತ್ತೇ ಕುಶಲಂ ಪುತ್ರ ಸ್ವಾಧ್ಯಾಯತಪಸೋಃ ಸದಾ|
12338015c ನಿತ್ಯಮುಗ್ರತಪಾಸ್ತ್ವಂ ಹಿ ತತಃ ಪೃಚ್ಚಾಮಿ ತೇ ಪುನಃ||
ಪುತ್ರ! ನೀನು ಕುಶಲಿಯಾಗಿದ್ದೀಯಾ? ಸ್ವಾಧ್ಯಾಯ ತಪಸ್ಸುಗಳು ಚೆನ್ನಾಗಿ ನಡೆಯುತ್ತಿವೆಯೇ? ನೀನು ನಿತ್ಯವೂ ಉಗ್ರ ತಪಸ್ಸಿನಲ್ಲಿಯೇ ತೊಡಗಿರುತ್ತೀಯೆ. ಆದುದರಿಂದ ಪುನಃ ಕೇಳುತ್ತಿದ್ದೇನೆ.”
12338016 ರುದ್ರ ಉವಾಚ|
12338016a ತ್ವತ್ಪ್ರಸಾದೇನ ಭಗವನ್ ಸ್ವಾಧ್ಯಾಯತಪಸೋರ್ಮಮ|
12338016c ಕುಶಲಂ ಚಾವ್ಯಯಂ ಚೈವ ಸರ್ವಸ್ಯ ಜಗತಸ್ತಥಾ||
ರುದ್ರನು ಹೇಳಿದನು: “ಭಗವನ್! ನಿನ್ನ ಕೃಪೆಯಿಂದ ನನ್ನ ಸ್ವಾಧ್ಯಾಯ ಮತ್ತು ತಪಸ್ಸುಗಳು ಕುಶಲವಾಗಿ ನಡೆಯುತ್ತಿವೆ. ಸರ್ವ ಜಗತ್ತೂ ಅವ್ಯಯವಾಗಿದೆ.
12338017a ಚಿರದೃಷ್ಟೋ ಹಿ ಭಗವಾನ್ ವೈರಾಜಸದನೇ ಮಯಾ|
12338017c ತತೋಽಹಂ ಪರ್ವತಂ ಪ್ರಾಪ್ತಸ್ತ್ವಿಮಂ ತ್ವತ್ಪಾದಸೇವಿತಮ್||
ಭಗವನ್! ಬ್ರಹ್ಮಸದನದಲ್ಲಿ ನಿನ್ನನ್ನು ನೋಡಿ ಬಹಳ ಸಮಯವಾಯಿತು. ಆದುದರಿಂದ ನಿನ್ನ ಪಾದಸೇವಿತವಾದ ಈ ಪರ್ವತಕ್ಕೆ ಬಂದಿದ್ದೇನೆ.
12338018a ಕೌತೂಹಲಂ ಚಾಪಿ ಹಿ ಮೇ ಏಕಾಂತಗಮನೇನ ತೇ|
12338018c ನೈತತ್ಕಾರಣಮಲ್ಪಂ ಹಿ ಭವಿಷ್ಯತಿ ಪಿತಾಮಹ||
ಪಿತಾಮಹ! ಇಲ್ಲಿ ನೀನು ಏಕಾಂತದಲ್ಲಿರುವುದನ್ನು ನೋಡಿ ನನಗೆ ಕುತೂಹಲವೂ ಉಂಟಾಗಿದೆ. ಇದಕ್ಕೆ ಕಾರಣವು ಅಲ್ಪವಾಗಿರಲಿಕ್ಕಿಲ್ಲ.
12338019a ಕಿಂ ನು ತತ್ಸದನಂ ಶ್ರೇಷ್ಠಂ ಕ್ಷುತ್ಪಿಪಾಸಾವಿವರ್ಜಿತಮ್|
12338019c ಸುರಾಸುರೈರಧ್ಯುಷಿತಮೃಷಿಭಿಶ್ಚಾಮಿತಪ್ರಭೈಃ||
12338020a ಗಂಧರ್ವೈರಪ್ಸರೋಭಿಶ್ಚ ಸತತಂ ಸಂನಿಷೇವಿತಮ್|
12338020c ಉತ್ಸೃಜ್ಯೇಮಂ ಗಿರಿವರಮೇಕಾಕೀ ಪ್ರಾಪ್ತವಾನಸಿ||
ಹಸಿವು-ಬಾಯಾರಿಕೆಗಳಿಂದ ವಿವರ್ಜಿತವಾಗಿರುವ, ಸುರಾಸುರರಿಂದ ಮತ್ತು ಅಮಿತಪ್ರಭೆಯ ಋಷಿಗಳಿಂದ ಸೇವಿತವಾಗಿರುವ, ಸತತವೂ ಗಂಧರ್ವ-ಅಪ್ಸರೆಯರಿಂದ ಸೇವಿಸಲ್ಪಡುವ ಆ ಶ್ರೇಷ್ಠ ಸದನವನ್ನು ಬಿಟ್ಟು ಈ ಗಿರಿವರಕ್ಕೆ ಏಕೆ ಏಕಾಂಗಿಯಾಗಿ ಬಂದಿರುವೆ?”
12338021 ಬ್ರಹ್ಮೋವಾಚ|
12338021a ವೈಜಯಂತೋ ಗಿರಿವರಃ ಸತತಂ ಸೇವ್ಯತೇ ಮಯಾ|
12338021c ಅತ್ರೈಕಾಗ್ರೇಣ ಮನಸಾ ಪುರುಷಶ್ಚಿಂತ್ಯತೇ ವಿರಾಟ್||
ಬ್ರಹ್ಮನು ಹೇಳಿದನು: “ನಾನು ಈ ಗಿರಿವರ ವೈಜಯಂತಕ್ಕೆ ಸತತವೂ ಬರುತ್ತಿರುತ್ತೇನೆ. ಇಲ್ಲಿ ಏಕಾಗ್ರ ಮನಸ್ಸಿನಿಂದ ವಿರಾಟ್ ಪುರುಷನನ್ನು ಧ್ಯಾನಿಸುತ್ತೇನೆ.”
12338022 ರುದ್ರ ಉವಾಚ|
12338022a ಬಹವಃ ಪುರುಷಾ ಬ್ರಹ್ಮಂಸ್ತ್ವಯಾ ಸೃಷ್ಟಾಃ ಸ್ವಯಂಭುವಾ|
12338022c ಸೃಜ್ಯಂತೇ ಚಾಪರೇ ಬ್ರಹ್ಮನ್ಸ ಚೈಕಃ ಪುರುಷೋ ವಿರಾಟ್||
12338023a ಕೋ ಹ್ಯಸೌ ಚಿಂತ್ಯತೇ ಬ್ರಹ್ಮಂಸ್ತ್ವಯಾ ವೈ ಪುರುಷೋತ್ತಮಃ|
12338023c ಏತನ್ಮೇ ಸಂಶಯಂ ಬ್ರೂಹಿ ಮಹತ್ಕೌತೂಹಲಂ ಹಿ ಮೇ||
ರುದ್ರನು ಹೇಳಿದನು: “ಬ್ರಹ್ಮನ್! ಸ್ವಯಂಭುವಾದ ನೀನು ಅನೇಕ ಪುರುಷರನ್ನು ಸೃಷ್ಟಿಸಿದ್ದೀಯೆ. ಬ್ರಹ್ಮನ್! ಇನ್ನೂ ಇತರ ಪುರುಷರನ್ನೂ ಸೃಷ್ಟಿಸುತ್ತಿರುತ್ತೀಯೆ. ಅವರಲ್ಲಿ ವಿರಾಟ್ ಪುರುಷನೂ ಒಬ್ಬನಾಗಿರಬೇಕು. ಬ್ರಹ್ಮನ್! ನೀನು ಧ್ಯಾನಿಸುತ್ತಿರುವ ಈ ಪುರುಷೋತ್ತಮನು ಯಾರು? ಇದರ ಕುರಿತು ನನ್ನಲ್ಲಿ ಸಂಶಯವೂ ಕುತೂಹಲವೂ ಉಂಟಾಗಿದೆ. ಹೇಳು.”
12338024 ಬ್ರಹ್ಮೋವಾಚ|
12338024a ಬಹವಃ ಪುರುಷಾಃ ಪುತ್ರ ಯೇ ತ್ವಯಾ ಸಮುದಾಹೃತಾಃ|
12338024c ಏವಮೇತದತಿಕ್ರಾಂತಂ ದ್ರಷ್ಟವ್ಯಂ ನೈವಮಿತ್ಯಪಿ|
ಬ್ರಹ್ಮನು ಹೇಳಿದನು: “ಪುತ್ರ! ನೀನು ಹೇಳಿದಂತೆ ನಾನು ಅನೇಕ ಪುರುಷರನ್ನು ಸೃಷ್ಟಿಸಿದ್ದೇನೆ. ಆದರೆ ಅವರನ್ನು ಹೀಗೆ ಧ್ಯಾನದ ಮೂಲಕ ನೋಡಬೇಕಾದುದೇನೂ ಇಲ್ಲ.
12338024e ಆಧಾರಂ ತು ಪ್ರವಕ್ಷ್ಯಾಮಿ ಏಕಸ್ಯ ಪುರುಷಸ್ಯ ತೇ||
12338025a ಬಹೂನಾಂ ಪುರುಷಾಣಾಂ ಸ ಯಥೈಕಾ ಯೋನಿರುಚ್ಯತೇ|
ನಾನು ನಿನಗೆ ಎಲ್ಲಕ್ಕೂ ಆಧಾರಭೂತನಾಗಿರುವ, ಅನೇಕ ಪುರುಷರಿಗೂ ಉತ್ಪತ್ತಿಸ್ಥಾನನಾಗಿರುವ ಏಕಮಾತ್ರ ಪುರುಷನ ಕುರಿತು ಹೇಳುತ್ತಿದ್ದೇನೆ.
12338025c ತಥಾ ತಂ ಪುರುಷಂ ವಿಶ್ವಂ ಪರಮಂ ಸುಮಹತ್ತಮಮ್|
12338025e ನಿರ್ಗುಣಂ ನಿರ್ಗುಣಾ ಭೂತ್ವಾ ಪ್ರವಿಶಂತಿ ಸನಾತನಮ್||
ಎಲ್ಲವೂ ನಿರ್ಗುಣವಾಗಿ ಆ ವಿಶ್ವ ಪರಮ ಮಹತ್ತತ್ತ್ವ ನಿರ್ಗುಣ ಸನಾತನ ಪುರುಷನನ್ನು ಸೇರುತ್ತವೆ.”
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ದ್ವೈಪಾಯನೋತ್ಪತ್ತೌ ಅಷ್ಟತ್ರಿಂಶಾಧಿಕತ್ರಿಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ದ್ವೈಪಾಯನೋತ್ಪತ್ತಿ ಎನ್ನುವ ಮುನ್ನೂರಾಮೂವತ್ತೆಂಟನೇ ಅಧ್ಯಾಯವು.