ಶಲ್ಯಪರ್ವ: ಗದಾಯುದ್ಧ ಪರ್ವ
೬೪
ಕೃಪ-ಅಶ್ವತ್ಥಾಮ-ಕೃತವರ್ಮರು ದುರ್ಯೋಧನನು ಹತನಾದುದನ್ನು ಕೇಳಿ ರಣರಂಗಕ್ಕೆ ಬಂದು ಅವನನ್ನು ನೋಡಿದುದು (೧-೧೦). ಅಶ್ವತ್ಥಾಮನ ವಾಕ್ಯ (೧೧-೧೯). ದುರ್ಯೋಧನ ವಾಕ್ಯ (೨೦-೩೦). ಅಶ್ವತ್ಥಾಮನಿಗೆ ಕುರುಸೇನಾಪತ್ಯದ ಅಭಿಷೇಕ (೩೧-೪೩).
09064001 ಸಂಜಯ ಉವಾಚ
09064001a ವಾತಿಕಾನಾಂ ಸಕಾಶಾತ್ತು ಶ್ರುತ್ವಾ ದುರ್ಯೋಧನಂ ಹತಂ|
09064001c ಹತಶಿಷ್ಟಾಸ್ತತೋ ರಾಜನ್ಕೌರವಾಣಾಂ ಮಹಾರಥಾಃ||
09064002a ವಿನಿರ್ಭಿನ್ನಾಃ ಶಿತೈರ್ಬಾಣೈರ್ಗದಾತೋಮರಶಕ್ತಿಭಿಃ|
09064002c ಅಶ್ವತ್ಥಾಮಾ ಕೃಪಶ್ಚೈವ ಕೃತವರ್ಮಾ ಚ ಸಾತ್ವತಃ||
09064002e ತ್ವರಿತಾ ಜವನೈರಶ್ವೈರಾಯೋಧನಮುಪಾಗಮನ್||
ಸಂಜಯನು ಹೇಳಿದನು: “ರಾಜನ್! ವಾರ್ತಾವಾಹಿಗಳಿಂದ ದುರ್ಯೋಧನನು ಹತನಾದನೆಂದು ಕೇಳಿ ಹತರಾಗದೇ ಉಳಿದಿದ್ದ ಆದರೆ ನಿಶಿತ ಬಾಣಗಳಿಂದ, ಗದೆ-ತೋಮರ-ಶಕ್ತಿಗಳ ಹೊಡೆತದಿಂದ ಗಾಯಗೊಂಡಿದ್ದ ಕೌರವರ ಮಹಾರಥರು – ಅಶ್ವತ್ಥಾಮ, ಕೃಪ ಮತ್ತು ಸಾತ್ವತ ಕೃತವರ್ಮರು – ತ್ವರೆಮಾಡಿ ವೇಗಶಾಲೀ ಕುದುರೆಗಳೊಂದಿಗೆ ರಣರಂಗವನ್ನು ತಲುಪಿದರು.
09064003a ತತ್ರಾಪಶ್ಯನ್ಮಹಾತ್ಮಾನಂ ಧಾರ್ತರಾಷ್ಟ್ರಂ ನಿಪಾತಿತಂ|
09064003c ಪ್ರಭಗ್ನಂ ವಾಯುವೇಗೇನ ಮಹಾಶಾಲಂ ಯಥಾ ವನೇ||
ಅಲ್ಲಿ ಅವರು ಚಂಡಮಾರುತದಿಂದ ವನದಲ್ಲಿ ಮುರಿದುಬಿದ್ದ ಮಹಾಶಾಲ ವೃಕ್ಷದಂತೆ ಕೆಳಗೆ ಬಿದ್ದಿದ್ದ ಮಹಾತ್ಮ ಧಾರ್ತರಾಷ್ಟ್ರನನ್ನು ನೋಡಿದರು.
09064004a ಭೂಮೌ ವಿವೇಷ್ಟಮಾನಂ ತಂ ರುಧಿರೇಣ ಸಮುಕ್ಷಿತಂ|
09064004c ಮಹಾಗಜಮಿವಾರಣ್ಯೇ ವ್ಯಾಧೇನ ವಿನಿಪಾತಿತಂ||
ಅರಣ್ಯದಲ್ಲಿ ವ್ಯಾಧನಿಂದ ಕೆಳಗುರುಳಿಸಲ್ಪಟ್ಟ ಮಹಾಗಜದಂತೆ ಅವನು ರಕ್ತದಲ್ಲಿ ತೋಯ್ದುಹೋಗಿ ನೆಲದಮೇಲೆ ಚಡಪಡಿಸುತ್ತಿದ್ದನು.
09064005a ವಿವರ್ತಮಾನಂ ಬಹುಶೋ ರುಧಿರೌಘಪರಿಪ್ಲುತಂ|
09064005c ಯದೃಚ್ಚಯಾ ನಿಪತಿತಂ ಚಕ್ರಮಾದಿತ್ಯಗೋಚರಂ||
ರಕ್ತದ ಕೋಡಿಯಲ್ಲಿಯೇ ಮುಳುಗಿ ಹೋಗಿ ಪ್ರಾಣಸಂಕಟದಿಂದ ಹೊರಳಾಡುತ್ತಿದ್ದ ಅವನು ತನ್ನ ಇಚ್ಛೆಯಿಂದಲೇ ಕೆಳಗೆ ಬಿದ್ದಿದ್ದ ಸೂರ್ಯನ ಚಕ್ರದಂತೆ ಕಾಣುತ್ತಿದ್ದನು.
09064006a ಮಹಾವಾತಸಮುತ್ಥೇನ ಸಂಶುಷ್ಕಮಿವ ಸಾಗರಂ|
09064006c ಪೂರ್ಣಚಂದ್ರಮಿವ ವ್ಯೋಮ್ನಿ ತುಷಾರಾವೃತಮಂಡಲಂ||
ಮೇಲೆದ್ದ ಭಿರುಗಾಳಿಯಿಂದ ಒಣಗಿದ ಸಾಗರದಂತೆ ಮತ್ತು ಹಿಮದಿಂದ ಆವೃತವಾದ ಆಕಾಶಮಂಡಲದಿಂದ ಕೂಡಿದ ಪೂರ್ಣಚಂದ್ರನಂತೆ ದುರ್ಯೋಧನನು ಕಾಣುತ್ತಿದ್ದನು.
09064007a ರೇಣುಧ್ವಸ್ತಂ ದೀರ್ಘಭುಜಂ ಮಾತಂಗಸಮವಿಕ್ರಮಂ|
09064007c ವೃತಂ ಭೂತಗಣೈರ್ಘೋರೈಃ ಕ್ರವ್ಯಾದೈಶ್ಚ ಸಮಂತತಃ||
09064007e ಯಥಾ ಧನಂ ಲಿಪ್ಸಮಾನೈರ್ಭೃತ್ಯೈರ್ನೃಪತಿಸತ್ತಮಂ||
ಮಾತಂಗಸಮ ವಿಕ್ರಮಿಯಾಗಿದ್ದ ಆ ದೀರ್ಘಭುಜ ನೃಪತಿಸತ್ತಮನು ಧೂಳಿನಿಂದ ತುಂಬಿಹೋಗಿದ್ದು, ಧನವನ್ನು ಕಸಿದುಕೊಳ್ಳುವ ಇಚ್ಛೆಯಿಂದ ಸೇವಕರು ಮುತ್ತುವಂತೆ ಸುತ್ತಲೂ ಘೋರ ಭೂತಗಣಗಳಿಂದಲೂ ಮಾಂಸಾಶಿ ಮೃಗ-ಪಕ್ಷಿಗಳಿಂದಲೂ ಆವೃತನಾಗಿದ್ದನು.
09064008a ಭ್ರುಕುಟೀಕೃತವಕ್ತ್ರಾಂತಂ ಕ್ರೋಧಾದುದ್ವೃತ್ತಚಕ್ಷುಷಂ|
09064008c ಸಾಮರ್ಷಂ ತಂ ನರವ್ಯಾಘ್ರಂ ವ್ಯಾಘ್ರಂ ನಿಪತಿತಂ ಯಥಾ||
ಕೆಳಗುರುಳಿ ಸಿಟ್ಟಾದ ವ್ಯಾಘ್ರನಂತಿದ್ದ ಆ ನರವ್ಯಾಘ್ರನ ಕ್ರೋಧದಿಂದ ಗಂಟುಕಟ್ಟಿದ್ದ ಹುಬ್ಬುಗಳು ಬಾಯಿಯವರೆಗೂ ಪ್ರಸರಿಸಿದ್ದವು. ಕಣ್ಣುಗಳು ಹೊರಚಾಚಿದಂತಿದ್ದವು.
09064009a ತೇ ತು ದೃಷ್ಟ್ವಾ ಮಹೇಷ್ವಾಸಾ ಭೂತಲೇ ಪತಿತಂ ನೃಪಂ|
09064009c ಮೋಹಮಭ್ಯಾಗಮನ್ಸರ್ವೇ ಕೃಪಪ್ರಭೃತಯೋ ರಥಾಃ||
ಭೂತಲದಲ್ಲಿ ಬಿದ್ದಿರುವ ಆ ನೃಪನನ್ನು ಕಂಡು ಕೃಪನೇ ಮೊದಲಾದ ಆ ಮಹೇಷ್ವಾಸ ಮಹಾರಥರಿಗೆ ಮೋಹವು ಆವೇಶಗೊಂಡಿತು.
09064010a ಅವತೀರ್ಯ ರಥೇಭ್ಯಸ್ತು ಪ್ರಾದ್ರವನ್ರಾಜಸಂನಿಧೌ|
09064010c ದುರ್ಯೋಧನಂ ಚ ಸಂಪ್ರೇಕ್ಷ್ಯ ಸರ್ವೇ ಭೂಮಾವುಪಾವಿಶನ್||
ರಥದಿಂದ ಕೆಳಗಿಳಿದು ರಾಜಸನ್ನಿಧಿಗೆ ಓಡಿಬಂದು ದುರ್ಯೋಧನನನ್ನು ನೋಡಿ ಎಲ್ಲರೂ ನೆಲದ ಮೇಲೆ ಕುಳಿತುಕೊಂಡರು.
09064011a ತತೋ ದ್ರೌಣಿರ್ಮಹಾರಾಜ ಬಾಷ್ಪಪೂರ್ಣೇಕ್ಷಣಃ ಶ್ವಸನ್|
09064011c ಉವಾಚ ಭರತಶ್ರೇಷ್ಠಂ ಸರ್ವಲೋಕೇಶ್ವರೇಶ್ವರಂ||
ಮಹಾರಾಜ! ಆಗ ಕಂಬನಿದುಂಬಿದ ಕಣ್ಣುಗಳಿಂದ ಕೂಡಿದ್ದ ದ್ರೌಣಿಯು ನಿಟ್ಟುಸಿರು ಬಿಡುತ್ತಾ ಸರ್ವ ಲೋಕೇಶ್ವರೇಶ್ವರ ಭರತಶ್ರೇಷ್ಠನಿಗೆ ಹೀಗೆಂದನು:
09064012a ನ ನೂನಂ ವಿದ್ಯತೇಽಸಹ್ಯಂ ಮಾನುಷ್ಯೇ ಕಿಂ ಚಿದೇವ ಹಿ|
09064012c ಯತ್ರ ತ್ವಂ ಪುರುಷವ್ಯಾಘ್ರ ಶೇಷೇ ಪಾಂಸುಷು ರೂಷಿತಃ||
“ಪುರುಷವ್ಯಾಘ್ರ! ನಿನ್ನಂತವನೇ ಕೆಸರಿನಲ್ಲಿ ಹೊರಳಾಡುತ್ತಿರುವಂತಾಯಿತೆಂದರೆ ಮನುಷ್ಯನಿಗೆ ಸಹಿಸಲಾಗದಂತಹುದು ಕಿಂಚಿತ್ತೂ ಇಲ್ಲವೆಂದಾಯಿತಲ್ಲವೇ?
09064013a ಭೂತ್ವಾ ಹಿ ನೃಪತಿಃ ಪೂರ್ವಂ ಸಮಾಜ್ಞಾಪ್ಯ ಚ ಮೇದಿನೀಂ|
09064013c ಕಥಮೇಕೋಽದ್ಯ ರಾಜೇಂದ್ರ ತಿಷ್ಠಸೇ ನಿರ್ಜನೇ ವನೇ||
ರಾಜೇಂದ್ರ! ಹಿಂದೆ ನೃಪತಿಯಾಗಿ ಇಡೀ ಮೇದಿನಿಗೇ ಆಜ್ಞೆನೀಡುತ್ತಿದ್ದ ನೀನು ಇಂದು ಏಕಾಂಗಿಯಾಗಿ ನಿರ್ಜನ ವನದಲ್ಲಿ ಹೇಗಿರುವೆ?
09064014a ದುಃಶಾಸನಂ ನ ಪಶ್ಯಾಮಿ ನಾಪಿ ಕರ್ಣಂ ಮಹಾರಥಂ|
09064014c ನಾಪಿ ತಾನ್ಸುಹೃದಃ ಸರ್ವಾನ್ಕಿಮಿದಂ ಭರತರ್ಷಭ||
ಭರತರ್ಷಭ! ದುಃಶಾಸನನನ್ನು ಕಾಣುತ್ತಿಲ್ಲ. ಮಹಾರಥ ಕರ್ಣನೂ ಕಾಣುತ್ತಿಲ್ಲ. ಸರ್ವ ಸುಹೃದ್ಗಣಗಳನ್ನೂ ಕಾಣುತ್ತಿಲ್ಲ! ಇದೇನಾಗಿಹೋಯಿತು?
09064015a ದುಃಖಂ ನೂನಂ ಕೃತಾಂತಸ್ಯ ಗತಿಂ ಜ್ಞಾತುಂ ಕಥಂ ಚನ|
09064015c ಲೋಕಾನಾಂ ಚ ಭವಾನ್ಯತ್ರ ಶೇತೇ ಪಾಂಸುಷು ರೂಷಿತಃ||
ಕೆಸರಿನಲ್ಲಿ ಹೊರಳಾಡುತ್ತಾ ನೀನು ಮಲಗಿರುವುದನ್ನು ನೋಡಿದರೆ ಕೃತಾಂತನು ಲೋಕಗಳನ್ನು ನಡೆಸುವ ಮತ್ತು ದುಃಖವನ್ನು ತಂದೊಡ್ಡುವ ಬಗೆಯನ್ನು ಅರಿತುಕೊಳ್ಳುವುದು ಕಷ್ಟಸಾಧ್ಯ ಎಂದೆನಿಸುತ್ತದೆ.
09064016a ಏಷ ಮೂರ್ಧಾವಸಿಕ್ತಾನಾಮಗ್ರೇ ಗತ್ವಾ ಪರಂತಪಃ|
09064016c ಸತೃಣಂ ಗ್ರಸತೇ ಪಾಂಸುಂ ಪಶ್ಯ ಕಾಲಸ್ಯ ಪರ್ಯಯಂ||
ಮೂರ್ಧಾಭಿಷಿಕ್ತರಾದ ರಾಜರ ಮುಂದಾಳುವಾಗಿದ್ದ ಈ ಪರಂತಪನು ಹುಲ್ಲಿನೊಂದಿಗೆ ಮಿಶ್ರಣವಾಗಿರುವ ಧೂಳನ್ನು ತಿನ್ನುತ್ತಿದ್ದಾನೆ! ಕಾಲದ ವೈಪರೀತ್ಯವನ್ನಾದರೂ ನೋಡಿ!
09064017a ಕ್ವ ತೇ ತದಮಲಂ ಚತ್ರಂ ವ್ಯಜನಂ ಕ್ವ ಚ ಪಾರ್ಥಿವ|
09064017c ಸಾ ಚ ತೇ ಮಹತೀ ಸೇನಾ ಕ್ವ ಗತಾ ಪಾರ್ಥಿವೋತ್ತಮ||
ಪಾರ್ಥಿವ! ನಿನ್ನ ಆ ಅಮಲ ಚತ್ರವೆಲ್ಲಿ? ನಿನ್ನ ಆ ಚಾಮರವೆಲ್ಲಿ? ಪಾರ್ಥಿವೋತ್ತಮ! ನಿನ್ನ ಆ ಮಹಾಸೇನೆಯು ಎಲ್ಲಿ ಹೋಯಿತು?
09064018a ದುರ್ವಿಜ್ಞೇಯಾ ಗತಿರ್ನೂನಂ ಕಾರ್ಯಾಣಾಂ ಕಾರಣಾಂತರೇ|
09064018c ಯದ್ವೈ ಲೋಕಗುರುರ್ಭೂತ್ವಾ ಭವಾನೇತಾಂ ದಶಾಂ ಗತಃ||
ಲೋಕಗುರುವಾಗಿದ್ದ ನಿನಗೆ ಈ ದಶೆಯುಂಟಾಯಿತೆಂದರೆ ಆಗು ಹೋಗುಗಳ ಕಾರಣಗಳನ್ನು ತಿಳಿದುಕೊಳ್ಳುವುದು ಕಷ್ಟವೆಂದಾಯಿತಲ್ಲವೇ?
09064019a ಅಧ್ರುವಾ ಸರ್ವಮರ್ತ್ಯೇಷು ಧ್ರುವಂ ಶ್ರೀರುಪಲಕ್ಷ್ಯತೇ|
09064019c ಭವತೋ ವ್ಯಸನಂ ದೃಷ್ಟ್ವಾ ಶಕ್ರವಿಸ್ಪರ್ಧಿನೋ ಭೃಶಂ||
ಸಂಪತ್ತಿನಲ್ಲಿ ಶಕ್ರನೊಡನೆ ಕೂಡ ಸ್ಪರ್ಧಿಸುವಂತಿದ್ದ ನಿನಗೇ ಈ ವ್ಯಸನವುಂಟಾಯಿತೆಂದರೆ ಸರ್ವ ಮನುಷ್ಯರಲ್ಲಿ ಸಂಪತ್ತು ಅನಿಶ್ಚಿತವಾದುದು ಎನ್ನುವುದು ನಿಶ್ಚಯ!”
09064020a ತಸ್ಯ ತದ್ವಚನಂ ಶ್ರುತ್ವಾ ದುಃಖಿತಸ್ಯ ವಿಶೇಷತಃ|
09064020c ಉವಾಚ ರಾಜನ್ಪುತ್ರಸ್ತೇ ಪ್ರಾಪ್ತಕಾಲಮಿದಂ ವಚಃ||
09064021a ವಿಮೃಜ್ಯ ನೇತ್ರೇ ಪಾಣಿಭ್ಯಾಂ ಶೋಕಜಂ ಬಾಷ್ಪಮುತ್ಸೃಜನ್|
09064021c ಕೃಪಾದೀನ್ಸ ತದಾ ವೀರಾನ್ಸರ್ವಾನೇವ ನರಾಧಿಪಃ||
ರಾಜನ್! ವಿಶೇಷವಾಗಿ ದುಃಖಿತನಾಗಿದ್ದ ಅವನ ಆ ಮಾತನ್ನು ಕೇಳಿ ನಿನ್ನ ಮಗ ನರಾಧಿಪನು ಶೋಕದಿಂದ ಉಕ್ಕಿಬರುತ್ತಿದ್ದ ಕಣ್ಣೀರನ್ನು ಎರಡೂ ಕೈಗಳಿಂದ ಒರೆಸಿಕೊಳ್ಳುತ್ತಾ ಕೃಪನೇ ಮೊದಲಾದ ಆ ಸರ್ವ ವೀರರಿಗೆ ಸಮಯಕ್ಕೆ ತಕ್ಕುದಾದ ಈ ಮಾತನ್ನಾಡಿದನು:
09064022a ಈದೃಶೋ ಮರ್ತ್ಯಧರ್ಮೋಽಯಂ ಧಾತ್ರಾ ನಿರ್ದಿಷ್ಟ ಉಚ್ಯತೇ|
09064022c ವಿನಾಶಃ ಸರ್ವಭೂತಾನಾಂ ಕಾಲಪರ್ಯಾಯಕಾರಿತಃ||
“ಕಾಲದ ಉರುಳುವಿಕೆಯಿಂದ ಸರ್ವಭೂತಗಳ ವಿನಾಶವಾಗುತ್ತದೆ. ಇದೇ ಮನುಷ್ಯಧರ್ಮವೆಂದೂ ಇದನ್ನು ಧಾತಾರನೇ ನಿರ್ಧರಿಸಿದ್ದಾನೆಂದೂ ಹೇಳುತ್ತಾರೆ.
09064023a ಸೋಽಯಂ ಮಾಂ ಸಮನುಪ್ರಾಪ್ತಃ ಪ್ರತ್ಯಕ್ಷಂ ಭವತಾಂ ಹಿ ಯಃ|
09064023c ಪೃಥಿವೀಂ ಪಾಲಯಿತ್ವಾಹಮೇತಾಂ ನಿಷ್ಠಾಮುಪಾಗತಃ||
ಅದೇ ವಿನಾಶವನ್ನು ನಾನು ನಿಮ್ಮ ಸಮಕ್ಷಮದಲ್ಲಿ ಹೊಂದಿದ್ದೇನೆ. ಪೃಥ್ವಿಯನ್ನು ಪಾಲಿಸುತ್ತಿದ್ದ ನಾನು ಈ ಪರಿಸ್ಥಿತಿಯನ್ನು ಹೊಂದಿದ್ದೇನೆ.
09064024a ದಿಷ್ಟ್ಯಾ ನಾಹಂ ಪರಾವೃತ್ತೋ ಯುದ್ಧೇ ಕಸ್ಯಾಂ ಚಿದಾಪದಿ|
09064024c ದಿಷ್ಟ್ಯಾಹಂ ನಿಹತಃ ಪಾಪೈಶ್ಚಲೇನೈವ ವಿಶೇಷತಃ||
ಒಳ್ಳೆಯದಾಯಿತು! ನಾನು ಯುದ್ಧದಿಂದ ಎಂದೂ ಹಿಂದೆಸರಿಯಲಿಲ್ಲ! ಒಳ್ಳೆಯದಾಯಿತು! ಪಾಪಿಷ್ಟರು ನನ್ನನ್ನು ಮೋಸದಿಂದಲೇ ಕೊಂದರು!
09064025a ಉತ್ಸಾಹಶ್ಚ ಕೃತೋ ನಿತ್ಯಂ ಮಯಾ ದಿಷ್ಟ್ಯಾ ಯುಯುತ್ಸತಾ|
09064025c ದಿಷ್ಟ್ಯಾ ಚಾಸ್ಮಿ ಹತೋ ಯುದ್ಧೇ ನಿಹತಜ್ಞಾತಿಬಾಂಧವಃ||
ಒಳ್ಳೆಯದಾಯಿತು! ನಾನು ನಿತ್ಯವೂ ಉತ್ಸಾಹದಿಂದಲೇ ಯುದ್ಧಮಾಡಿದೆ! ಒಳ್ಳೆಯದಾಯಿತು! ನನ್ನ ಜ್ಞಾತಿಬಾಂಧವರೆಲ್ಲರೂ ಯುದ್ಧದಲ್ಲಿ ಹತನಾದ ನಂತರವೇ ನಾನು ಹತನಾದೆನು!
09064026a ದಿಷ್ಟ್ಯಾ ಚ ವೋಽಹಂ ಪಶ್ಯಾಮಿ ಮುಕ್ತಾನಸ್ಮಾಜ್ಜನಕ್ಷಯಾತ್|
09064026c ಸ್ವಸ್ತಿಯುಕ್ತಾಂಶ್ಚ ಕಲ್ಯಾಂಶ್ಚ ತನ್ಮೇ ಪ್ರಿಯಮನುತ್ತಮಂ||
ಒಳ್ಳೆಯದಾಯಿತು! ಈ ಜನಕ್ಷಯಯುದ್ಧದಿಂದ ಮುಕ್ತರಾಗಿರುವ ನಿಮ್ಮನ್ನು ನಾನು ನೋಡುತ್ತಿದ್ದೇನೆ! ಕುಶಲರಾಗಿರುವಿರಿ ಮತ್ತು ಕಾರ್ಯಸಮರ್ಥರಾಗಿದ್ದೀರಿ ಎಂದು ನೋಡಿ ಅತ್ಯಂತ ಸಂತೋಷವೂ ಆಗಿದೆ.
09064027a ಮಾ ಭವಂತೋಽನುತಪ್ಯಂತಾಂ ಸೌಹೃದಾನ್ನಿಧನೇನ ಮೇ|
09064027c ಯದಿ ವೇದಾಃ ಪ್ರಮಾಣಂ ವೋ ಜಿತಾ ಲೋಕಾ ಮಯಾಕ್ಷಯಾಃ||
ನನ್ನ ನಿಧನದ ಕುರಿತು ಸ್ನೇಹಭಾವದಿಂದ ನೀವು ಪರಿತಪಿಸಬೇಕಾಗಿಲ್ಲ! ವೇದಗಳಿಗೆ ಪ್ರಮಾಣವಿದೆಯೆಂದಾದರೆ ನಾನು ಅಕ್ಷಯ ಲೋಕಗಳನ್ನು ಗೆದ್ದುಕೊಂಡಿದ್ದೇನೆ!
09064028a ಮನ್ಯಮಾನಃ ಪ್ರಭಾವಂ ಚ ಕೃಷ್ಣಸ್ಯಾಮಿತತೇಜಸಃ|
09064028c ತೇನ ನ ಚ್ಯಾವಿತಶ್ಚಾಹಂ ಕ್ಷತ್ರಧರ್ಮಾತ್ಸ್ವನುಷ್ಠಿತಾತ್||
ಅಮಿತತೇಜಸ್ವಿ ಕೃಷ್ಣನ ಪ್ರಭಾವವನ್ನು ತಿಳಿದುಕೊಂಡಿದ್ದರೂ ಅವನ ಪ್ರೇರಣೆಗೆ ಬಾರದೇ ನಾನು ಕ್ಷತ್ರಧರ್ಮದಲ್ಲಿಯೇ ನಿರತನಾಗಿದ್ದೆ!
09064029a ಸ ಮಯಾ ಸಮನುಪ್ರಾಪ್ತೋ ನಾಸ್ಮಿ ಶೋಚ್ಯಃ ಕಥಂ ಚನ|
09064029c ಕೃತಂ ಭವದ್ಭಿಃ ಸದೃಶಮನುರೂಪಮಿವಾತ್ಮನಃ|
09064029e ಯತಿತಂ ವಿಜಯೇ ನಿತ್ಯಂ ದೈವಂ ತು ದುರತಿಕ್ರಮಂ||
ಆ ಕ್ಷತ್ರಧರ್ಮದ ಫಲವನ್ನು ನಾನು ಪಡೆದುಕೊಂಡಿದ್ದೇನೆ. ಅದರಲ್ಲಿ ಶೋಕಿಸುವಂತಾದ್ದು ಏನೂ ಇಲ್ಲ. ನೀವು ನಿಮಗೆ ಅನುರೂಪವಾದ ರೀತಿಗಳಲ್ಲಿ ಯುದ್ಧಮಾಡಿರುವಿರಿ! ನಿತ್ಯವೂ ನನ್ನ ವಿಜಯಕ್ಕೆ ಪ್ರಯತ್ನಿಸಿದರೂ ದೈವವನ್ನು ಅತಿಕ್ರಮಿಸಲು ಯಾರಿಗೂ ಸಾಧ್ಯವಿಲ್ಲ!”
09064030a ಏತಾವದುಕ್ತ್ವಾ ವಚನಂ ಬಾಷ್ಪವ್ಯಾಕುಲಲೋಚನಃ|
09064030c ತೂಷ್ಣೀಂ ಬಭೂವ ರಾಜೇಂದ್ರ ರುಜಾಸೌ ವಿಹ್ವಲೋ ಭೃಶಂ||
ಹೀಗೆ ಹೇಳಿ ಪ್ರಾಣಪ್ರಯಾಣದಿಂದ ತುಂಬಾ ವಿಹ್ವಲನಾಗಿದ್ದ ರಾಜೇಂದ್ರನು, ಕಣ್ಣೀರು ಮತ್ತು ವ್ಯಾಕುಲಗಳು ಅವನ ಕಣ್ಣುಗಳನ್ನು ತುಂಬಿರಲು, ಸುಮ್ಮನಾದನು.
09064031a ತಥಾ ತು ದೃಷ್ಟ್ವಾ ರಾಜಾನಂ ಬಾಷ್ಪಶೋಕಸಮನ್ವಿತಂ|
09064031c ದ್ರೌಣಿಃ ಕ್ರೋಧೇನ ಜಜ್ವಾಲ ಯಥಾ ವಹ್ನಿರ್ಜಗತ್ ಕ್ಷಯೇ||
ಹಾಗೆ ಬಾಷ್ಪಶೋಕಸಮನ್ವಿತನಾದ ರಾಜನನ್ನು ನೋಡಿ ದ್ರೌಣಿಯು ಜಗತ್ ಕ್ಷಯದಲ್ಲಿ ವಹ್ನಿಯು ಹೇಗೋ ಹಾಗೆ ಕ್ರೋಧದಿಂದ ಪ್ರಜ್ವಲಿಸಿದನು.
09064032a ಸ ತು ಕ್ರೋಧಸಮಾವಿಷ್ಟಃ ಪಾಣೌ ಪಾಣಿಂ ನಿಪೀಡ್ಯ ಚ|
09064032c ಬಾಷ್ಪವಿಹ್ವಲಯಾ ವಾಚಾ ರಾಜಾನಮಿದಮಬ್ರವೀತ್||
ಅವನಾದರೋ ಕೈಯಿಂದ ಕೈಯನ್ನು ಉಜ್ಜಿಕೊಳ್ಳುತ್ತಾ ರಾಜನಿಗೆ ಈ ಬಾಷ್ಪವಿಹ್ವಲ ಮಾತುಗಳನ್ನಾಡಿದನು:
09064033a ಪಿತಾ ಮೇ ನಿಹತಃ ಕ್ಷುದ್ರೈಃ ಸುನೃಶಂಸೇನ ಕರ್ಮಣಾ|
09064033c ನ ತಥಾ ತೇನ ತಪ್ಯಾಮಿ ಯಥಾ ರಾಜಂಸ್ತ್ವಯಾದ್ಯ ವೈ||
“ಆ ಕ್ಷುದ್ರರು ಅತ್ಯಂತ ಕ್ರೂರಕರ್ಮದಿಂದ ನನ್ನ ತಂದೆಯನ್ನು ಸಂಹರಿಸಿದಾಗಲೂ ಇಂದು ನಿನ್ನ ಈ ಪರಿಸ್ಥಿತಿಯನ್ನು ನೋಡಿ ಪರಿತಾಪಪಡುವಷ್ಟು ಪರಿತಪಿಸಿರಲಿಲ್ಲ.
09064034a ಶೃಣು ಚೇದಂ ವಚೋ ಮಹ್ಯಂ ಸತ್ಯೇನ ವದತಃ ಪ್ರಭೋ|
09064034c ಇಷ್ಟಾಪೂರ್ತೇನ ದಾನೇನ ಧರ್ಮೇಣ ಸುಕೃತೇನ ಚ||
ಪ್ರಭೋ! ನಾನು ಪೂರೈಸಿದ ಇಷ್ಟಿಗಳ, ದಾನ-ಧರ್ಮ ಮತ್ತು ಸುಕೃತಗಳ ಮೇಲೆ ಆಣೆಯನ್ನಿಟ್ಟು ಹೇಳುವ ಈ ನನ್ನ ಸತ್ಯವಚನವನ್ನು ಕೇಳು!
09064035a ಅದ್ಯಾಹಂ ಸರ್ವಪಾಂಚಾಲಾನ್ವಾಸುದೇವಸ್ಯ ಪಶ್ಯತಃ|
09064035c ಸರ್ವೋಪಾಯೈರ್ಹಿ ನೇಷ್ಯಾಮಿ ಪ್ರೇತರಾಜನಿವೇಶನಂ|
09064035e ಅನುಜ್ಞಾಂ ತು ಮಹಾರಾಜ ಭವಾನ್ಮೇ ದಾತುಮರ್ಹತಿ||
ಇಂದು ನಾನು ವಾಸುದೇವನು ನೋಡುತ್ತಿದ್ದಂತೆಯೇ ಸರ್ವಪಾಂಚಾಲರನ್ನು ಸರ್ವೋಪಾಯಗಳನ್ನು ಬಳಸಿ ಪ್ರೇತರಾಜನ ನಿವೇಶನಕ್ಕೆ ಕಳುಹಿಸುತ್ತೇನೆ. ಮಹಾರಾಜ! ನೀನು ನನಗೆ ಅನುಜ್ಞೆಯನ್ನು ನೀಡಬೇಕು!”
09064036a ಇತಿ ಶ್ರುತ್ವಾ ತು ವಚನಂ ದ್ರೋಣಪುತ್ರಸ್ಯ ಕೌರವಃ|
09064036c ಮನಸಃ ಪ್ರೀತಿಜನನಂ ಕೃಪಂ ವಚನಮಬ್ರವೀತ್||
09064036e ಆಚಾರ್ಯ ಶೀಘ್ರಂ ಕಲಶಂ ಜಲಪೂರ್ಣಂ ಸಮಾನಯ||
ಮನಸ್ಸಿಗೆ ಸಂತೋಷವನ್ನುಂಟುಮಾಡಿದ ದ್ರೋಣಪುತ್ರನ ಆ ಮಾತನ್ನು ಕೇಳಿ ಕೌರವನು ಕೃಪನಿಗೆ “ಆಚಾರ್ಯ! ಶೀಘ್ರವಾಗಿ ಜಲಪೂರ್ಣ ಕಲಶವನ್ನು ತರಿಸಿ!” ಎಂದು ಹೇಳಿದನು.
09064037a ಸ ತದ್ವಚನಮಾಜ್ಞಾಯ ರಾಜ್ಞೋ ಬ್ರಾಹ್ಮಣಸತ್ತಮಃ|
09064037c ಕಲಶಂ ಪೂರ್ಣಮಾದಾಯ ರಾಜ್ಞೋಂಽತಿಕಮುಪಾಗಮತ್||
ರಾಜನ ಆ ಮಾತನ್ನು ಕೇಳಿ ಬ್ರಾಹ್ಮಣಸತ್ತಮನು ಪೂರ್ಣಕಲಶವನ್ನು ಹಿಡಿದು ರಾಜನ ಬಳಿಬಂದನು.
09064038a ತಮಬ್ರವೀನ್ಮಹಾರಾಜ ಪುತ್ರಸ್ತವ ವಿಶಾಂ ಪತೇ|
09064038c ಮಮಾಜ್ಞಯಾ ದ್ವಿಜಶ್ರೇಷ್ಠ ದ್ರೋಣಪುತ್ರೋಽಭಿಷಿಚ್ಯತಾಂ|
09064038e ಸೇನಾಪತ್ಯೇನ ಭದ್ರಂ ತೇ ಮಮ ಚೇದಿಚ್ಚಸಿ ಪ್ರಿಯಂ||
ಮಹಾರಾಜ! ವಿಶಾಂಪತೇ! ಅವನಿಗೆ ನಿನ್ನ ಮಗನು ಹೇಳಿದನು: “ದ್ವಿಜಶ್ರೇಷ್ಠ! ನಿಮಗೆ ಮಂಗಳವಾಗಲಿ! ನನಗೆ ಪ್ರಿಯವಾದುದನ್ನು ಬಯಸುವಿರಾದರೆ ನನ್ನ ಆಜ್ಞೆಯಂತೆ ದ್ರೋಣಪುತ್ರನನ್ನು ಸೇನಾಪತ್ಯದಿಂದ ಅಭಿಷೇಕಿಸಿರಿ!
09064039a ರಾಜ್ಞೋ ನಿಯೋಗಾದ್ಯೋದ್ಧವ್ಯಂ ಬ್ರಾಹ್ಮಣೇನ ವಿಶೇಷತಃ|
09064039c ವರ್ತತಾ ಕ್ಷತ್ರಧರ್ಮೇಣ ಹ್ಯೇವಂ ಧರ್ಮವಿದೋ ವಿದುಃ||
ರಾಜನ ನಿಯೋಗದಂತೆ ಯುದ್ಧಮಾಡಬೇಕು! ಅದರಲ್ಲೂ ವಿಶೇಷವಾಗಿ ಕ್ಷತ್ರಧರ್ಮದಿಂದ ವರ್ತಿಸುವ ಬ್ರಾಹ್ಮಣನು ಹೀಗೇ ಮಾಡಬೇಕೆಂದು ಧರ್ಮವಿದರು ತಿಳಿಸುತ್ತಾರೆ.”
09064040a ರಾಜ್ಞಸ್ತು ವಚನಂ ಶ್ರುತ್ವಾ ಕೃಪಃ ಶಾರದ್ವತಸ್ತತಃ|
09064040c ದ್ರೌಣಿಂ ರಾಜ್ಞೋ ನಿಯೋಗೇನ ಸೇನಾಪತ್ಯೇಽಭ್ಯಷೇಚಯತ್||
ರಾಜನ ಮಾತನ್ನು ಕೇಳಿ ಶಾರದ್ವತ ಕೃಪನು ರಾಜನ ನಿಯೋಗದಂತೆ ದ್ರೌಣಿಯನ್ನು ಸೇನಾಪತಿಯಾಗಿ ಅಭಿಷೇಕಿಸಿದನು.
09064041a ಸೋಽಭಿಷಿಕ್ತೋ ಮಹಾರಾಜ ಪರಿಷ್ವಜ್ಯ ನೃಪೋತ್ತಮಂ|
09064041c ಪ್ರಯಯೌ ಸಿಂಹನಾದೇನ ದಿಶಃ ಸರ್ವಾ ವಿನಾದಯನ್||
ಮಹಾರಾಜ! ಹಾಗೆ ಅಭಿಷಿಕ್ತನಾದ ಅಶ್ವತ್ಥಾಮನು ನೃಪೋತ್ತಮನನ್ನು ಆಲಂಗಿಸಿ ಸರ್ವ ದಿಶಗಳಲ್ಲಿಯೂ ಪ್ರತಿಧ್ವನಿಯಾಗುವಂತೆ ಸಿಂಹನಾದ ಮಾಡುತ್ತಾ ಹೊರಟುಹೋದನು.
09064042a ದುರ್ಯೋಧನೋಽಪಿ ರಾಜೇಂದ್ರ ಶೋಣಿತೌಘಪರಿಪ್ಲುತಃ|
09064042c ತಾಂ ನಿಶಾಂ ಪ್ರತಿಪೇದೇಽಥ ಸರ್ವಭೂತಭಯಾವಹಾಂ||
ರಾಜೇಂದ್ರ! ರಕ್ತದಿಂದ ತೋಯ್ದುಹೋಗಿದ್ದ ದುರ್ಯೋಧನನಾದರೋ ಸರ್ವಭೂತಗಳಿಗೂ ಭಯಂಕರವಾಗಿದ್ದ ಆ ರಾತ್ರಿಯನ್ನು ಅಲ್ಲಿಯೇ ಕಳೆದನು.
09064043a ಅಪಕ್ರಮ್ಯ ತು ತೇ ತೂರ್ಣಂ ತಸ್ಮಾದಾಯೋಧನಾನ್ನೃಪ|
09064043c ಶೋಕಸಂವಿಗ್ನಮನಸಶ್ಚಿಂತಾಧ್ಯಾನಪರಾಭವನ್||
ನೃಪ! ಅಲ್ಲಿಂದ ಶೀಘ್ರವಾಗಿ ಹೊರಟುಹೋದ ಅವರು ಶೋಕಸಂವಿಗ್ನಮನಸ್ಕರಾಗಿ ಚಿಂತಾಧ್ಯಾನಪರರಾದರು.”
ಇತಿ ಶ್ರೀಮಹಾಭಾರತೇ ಶಲ್ಯ ಪರ್ವಣಿ ಗದಾಯುದ್ಧ ಪರ್ವಣಿ ಅಶ್ವತ್ಥಾಮಸೈನಾಪತ್ಯಾಭಿಷೇಕೇ ಚತುಃಷಷ್ಟಿತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಲ್ಯ ಪರ್ವದಲ್ಲಿ ಗದಾಯುದ್ಧ ಪರ್ವದಲ್ಲಿ ಅಶ್ವತ್ಥಾಮಸೈನಾಪತ್ಯಾಭಿಷೇಕ ಎನ್ನುವ ಅರವತ್ನಾಲ್ಕನೇ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಶಲ್ಯ ಪರ್ವಣಿ ಗದಾಯುದ್ಧ ಪರ್ವಃ|
ಇದು ಶ್ರೀ ಮಹಾಭಾರತದಲ್ಲಿ ಶಲ್ಯ ಪರ್ವದಲ್ಲಿ ಗದಾಯುದ್ಧ ಪರ್ವವು.
ಇತಿ ಶ್ರೀ ಮಹಾಭಾರತೇ ಶಲ್ಯ ಪರ್ವಃ|
ಇದು ಶ್ರೀ ಮಹಾಭಾರತದಲ್ಲಿ ಶಲ್ಯ ಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-೯/೧೮, ಉಪಪರ್ವಗಳು-೭೭/೧೦೦, ಅಧ್ಯಾಯಗಳು-೧೨೮೩/೧೯೯೫, ಶ್ಲೋಕಗಳು-೪೮೫೦೮/೧೯೯೫
ಸ್ವಸ್ತಿಪ್ರಜಾಭ್ಯಃ ಪರಿಪಾಲಯಂತಾಮ್
ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾಃ|
ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ
ಲೋಕಾಃ ಸಮಸ್ತಾಃ ಸುಖಿನೋ ಭವಂತು||
ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ|
ದೇಶೋಽಯಂ ಕ್ಷೋಭರಹಿತೋ ಬ್ರಾಹ್ಮಣಾಃ ಸಂತು ನಿರ್ಭಯಾಃ||
ಅಪುತ್ರಾಃ ಪುತ್ರಿಣಃ ಸಂತು ಪುತ್ರಿಣಃ ಸಂತು ಪೌತ್ರಿಣಃ|
ಅಧನಾಃ ಸಧನಾಃ ಸಂತು ಜೀವಂತು ಶರದಾಂ ಶತಮ್||
ಕಾಯೇನ ವಾಚಾ ಮನಸೇಂದ್ರಿಯೈರ್ವಾ
ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್|
ಕರೋಮಿ ಯದ್ಯತ್ಸಕಲಂ ಪರಸ್ಮೈ
ನಾರಾಯಣಾಯೇತಿ ಸಮರ್ಪಯಾಮಿ||
ಯದಕ್ಷರಪದಭ್ರಷ್ಟಂ ಮಾತ್ರಾಹೀನಂ ತು ಯದ್ಭವೇತ್|
ತತ್ಸರ್ವಂ ಕ್ಷಮ್ಯತಾಂ ದೇವ ನಾರಾಯಣ ನಮೋಽಸ್ತು ತೇ||
|| ಹರಿಃ ಓಂ ಕೃಷ್ಣಾರ್ಪಣಮಸ್ತು ||