ಸಭಾ ಪರ್ವ: ದ್ಯೂತ ಪರ್ವ
Contents
Toggle೬೩
ದ್ರೌಪದೀ ವರಲಾಭ
ಕರ್ಣನು ದ್ರೌಪದಿಗೆ ಧಾರ್ತರಾಷ್ಟ್ರರ ಮನೆಯಲ್ಲಿ ದಾಸಿಯಾಗಿರೆಂದೂ ಬೇರೆ ಯಾರನ್ನಾದರೂ ಪತಿಯನ್ನಾಗಿ ಆರಿಸಿಕೊಳ್ಳಬೇಕೆಂದೂ ಚುಚ್ಚಿ ನುಡಿಯುವುದು (೧-೫). ಭೀಮನು ಯುಧಿಷ್ಠಿರನ ಮೇಲೆ ಕುಪಿತನಾಗುವುದು (೬-೭). ಮಾತನಾಡದೇ ಕುಳಿತಿದ್ದ ಯುಧಿಷ್ಠಿರನನ್ನು ದುರ್ಯೋಧನನು ಪಶ್ನಿಸಿ (೮-೯) ತನ್ನ ಎಡತೊಡೆಯನ್ನು ದ್ರೌಪದಿಗೆ ತೋರಿಸುವುದು (೧೦-೧೩). ಭೀಮನು ಕ್ರೋಧದಿಂದ ಆ ತೊಡೆಯನ್ನು ಒಡೆಯುವುದಾಗಿ ಪ್ರತಿಜ್ಞೆಮಾಡುವುದು (೧೩-೧೫). ಸಭಾಸದರು ಪ್ರಶ್ನೆಗೆ ಉತ್ತರ ಕೊಡಬೇಕೆಂದು ವಿದುರನು ಕೇಳಿಕೊಳ್ಳುವುದು (೧೬-೧೯). ದುರ್ಯೋಧನನು ಪುನಃ ಪ್ರಶ್ನಿಸಲು ಅರ್ಜುನನು ಉತ್ತರಿಸಿವುದು (೨೦-೨೧). ಅರಮನೆಯಲ್ಲಿ ದುಃಶಕುನಗಳು ಕಾಣಿಸಿಕೊಳ್ಳುವುದು (೨೨-೨೪). ಧೃತರಾಷ್ಟ್ರನು ದ್ರೌಪದಿಗೆ ವರಗಳನ್ನು ನೀಡುವುದು (೨೫-೩೬).
02063001 ಕರ್ಣ ಉವಾಚ|
02063001a ತ್ರಯಃ ಕಿಲೇಮೇ ಅಧನಾ ಭವಂತಿ
ದಾಸಃ ಶಿಷ್ಯಶ್ಚಾಸ್ವತಂತ್ರಾ ಚ ನಾರೀ|
02063001c ದಾಸಸ್ಯ ಪತ್ನೀ ತ್ವಂ ಧನಮಸ್ಯ ಭದ್ರೇ
ಹೀನೇಶ್ವರಾ ದಾಸಧನಂ ಚ ದಾಸೀ||
ಕರ್ಣನು ಹೇಳಿದನು: “ದಾಸ, ಶಿಷ್ಯ ಮತ್ತು ಅಸ್ವತಂತ್ರ ನಾರಿ - ಈ ಮೂವರು ಅಧನರು. ಭದ್ರೇ! ದಾಸನ ಪತ್ನಿಯಾದ ನೀನು ಇವನ ಧನ. ಹೀನೇಶ್ವರಳಾದ ದಾಸಿಯೇ! ನೀನು ದಾಸಧನ.
02063002a ಪ್ರವಿಶ್ಯ ಸಾ ನಃ ಪರಿಚಾರೈರ್ಭಜಸ್ವ
ತತ್ತೇ ಕಾರ್ಯಂ ಶಿಷ್ಟಮಾವೇಶ್ಯ ವೇಶ್ಮ|
02063002c ಈಶಾಃ ಸ್ಮ ಸರ್ವೇ ತವ ರಾಜಪುತ್ರಿ
ಭವಂತಿ ತೇ ಧಾರ್ತರಾಷ್ಟ್ರಾ ನ ಪಾರ್ಥಾಃ||
ಇವನ ಮನೆಯನ್ನು ಪ್ರವೇಶಿಸಿ ಪರಿಚಾರ ಸೇವೆಗಳನ್ನು ಮಾಡು. ಅದೊಂದು ಕಾರ್ಯವು ಉಳಿದುಕೊಂಡಿದೆ. ರಾಜಪುತ್ರಿ! ಈಗ ಈ ಎಲ್ಲ ಧಾರ್ತರಾಷ್ಟ್ರರೂ ನಿನ್ನ ಒಡೆಯರು. ಪಾರ್ಥರಲ್ಲ.
02063003a ಅನ್ಯಂ ವೃಣೀಷ್ವ ಪತಿಮಾಶು ಭಾಮಿನಿ
ಯಸ್ಮಾದ್ದಾಸ್ಯಂ ನ ಲಭಸೇ ದೇವನೇನ|
02063003c ಅನವದ್ಯಾ ವೈ ಪತಿಷು ಕಾಮವೃತ್ತಿರ್
ನಿತ್ಯಂ ದಾಸ್ಯೇ ವಿದಿತಂ ವೈ ತವಾಸ್ತು||
ಭಾಮಿನಿ! ನಿನ್ನ ಸ್ವಾತಂತ್ರ್ಯವನ್ನು ಪಣವನ್ನಾಗಿಡದಂಥಹ ಬೇರೆ ಯಾರನ್ನಾದರೂ ನಿನ್ನ ಪತಿಯನ್ನಾಗಿ ಆರಿಸಿಕೋ. ಪತಿಯ ಸೇವೆ ಮಾಡುವುದು ಅನವದ್ಯವಲ್ಲ. ನಿನ್ನನ್ನು ನಿತ್ಯ ದಾಸಿಯಾಗಿ ತಿಳಿಯುತ್ತೇವೆ.
02063004a ಪರಾಜಿತೋ ನಕುಲೋ ಭೀಮಸೇನೋ
ಯುಧಿಷ್ಠಿರಃ ಸಹದೇವೋಽರ್ಜುನಶ್ಚ|
02063004c ದಾಸೀಭೂತಾ ಪ್ರವಿಶ ಯಾಜ್ಞಸೇನಿ
ಪರಾಜಿತಾಸ್ತೇ ಪತಯೋ ನ ಸಂತಿ||
ನಕುಲ, ಭೀಮಸೇನ, ಯುಧಿಷ್ಠಿರ, ಸಹದೇವ ಮತ್ತು ಅರ್ಜುನರು ಪರಾಜಿತರಾಗಿದ್ದಾರೆ. ಯಾಜ್ಞಸೇನೆ! ದಾಸಿಯಾಗಿ ಒಳಗೆ ಬಾ. ಪರಾಜಿತರಾದವರು ನಿನ್ನ ಪತಿಗಳಾಗಿ ಉಳಿದಿಲ್ಲ.
02063005a ಪ್ರಯೋಜನಂ ಚಾತ್ಮನಿ ಕಿಂ ನು ಮನ್ಯತೇ
ಪರಾಕ್ರಮಂ ಪೌರುಷಂ ಚೇಹ ಪಾರ್ಥಃ|
02063005c ಪಾಂಚಾಲ್ಯಸ್ಯ ದ್ರುಪದಸ್ಯಾತ್ಮಜಾಮಿಮಾಂ
ಸಭಾಮಧ್ಯೇ ಯೋಽತಿದೇವೀದ್ಗ್ಲಹೇಷು||
ಪಾರ್ಥನ ಪರಾಕ್ರಮ-ಪೌರುಷವೆಲ್ಲ ಅವನ ಸ್ವಂತ ಪ್ರಯೋಜನಕ್ಕೇ ಬರುತ್ತಿಲ್ಲ. ಪಾಂಚಾಲ ದ್ರುಪದನ ಈ ಮಗಳನ್ನು ಸಭಾಮಧ್ಯದಲ್ಲಿ ಜೂಜಿನ ಪಣವನ್ನಾಗಿಟ್ಟು ಕಳೆದುಕೊಂಡ!””
02063006 ವೈಶಂಪಾಯನ ಉವಾಚ|
02063006a ತದ್ವೈ ಶ್ರುತ್ವಾ ಭೀಮಸೇನೋಽತ್ಯಮರ್ಷೀ
ಭೃಶಂ ನಿಶಶ್ವಾಸ ತದಾರ್ತರೂಪಃ|
02063006c ರಾಜಾನುಗೋ ಧರ್ಮಪಾಶಾನುಬದ್ಧೋ
ದಹನ್ನಿವೈನಂ ಕೋಪವಿರಕ್ತದೃಷ್ಟಿಃ||
ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಅತಿಕುಪಿತನಾದ ಭೀಮಸೇನನು ಸಹಿಸಲಾಗದೇ ನಿಟ್ಟುಸಿರು ಬಿಡುತ್ತಾ ಆರ್ತರೂಪಿ ಧರ್ಮಪಾಶಗಳಿಂದ ಬದ್ಧ ರಾಜನನ್ನು ಸುಡುತ್ತಿರುವನೋ ಎನ್ನುವಂತೆ ಕೋಪವಿರಕ್ತ ದೃಷ್ಠಿಯಿಂದ ನೋಡಿದನು.
02063007 ಭೀಮ ಉವಾಚ|
02063007a ನಾಹಂ ಕುಪ್ಯೇ ಸೂತಪುತ್ರಸ್ಯ ರಾಜನ್ನ್
ಏಷ ಸತ್ಯಂ ದಾಸಧರ್ಮಃ ಪ್ರವಿಷ್ಟಃ|
02063007c ಕಿಂ ವಿದ್ವಿಷೋ ವಾದ್ಯ ಮಾಂ ಧಾರಯೇಯುರ್
ನಾದೇವೀಸ್ತ್ವಂ ಯದ್ಯನಯಾ ನರೇಂದ್ರ||
ಭೀಮನು ಹೇಳಿದನು: “ರಾಜನ್! ನಾನು ಸೂತಪುತ್ರನ ಮೇಲೆ ಕುಪಿತನಾಗಿಲ್ಲ. ಯಾಕೆಂದರೆ ನಾವು ದಾಸಧರ್ಮವನ್ನು ಪಡೆದಿರುವುದು ಸತ್ಯ. ನರೇಂದ್ರ! ಆದರೆ ನೀನು ಅವಳನ್ನು ಪಣವಾಗಿ ಎಸೆಯದಿದ್ದರೆ ನನ್ನನ್ನು ಈ ರೀತಿ ಇವರು ಬಂಧನದಲ್ಲಿಡಲು ಸಾಧ್ಯವಾಗುತ್ತಿತ್ತೇ?””
02063008 ವೈಶಂಪಾಯನ ಉವಾಚ|
02063008a ರಾಧೇಯಸ್ಯ ವಚಃ ಶ್ರುತ್ವಾ ರಾಜಾ ದುರ್ಯೋಧನಸ್ತದಾ|
02063008c ಯುಧಿಷ್ಠಿರಮುವಾಚೇದಂ ತೂಷ್ಣೀಂಭೂತಮಚೇತಸಂ||
ವೈಶಂಪಾಯನನು ಹೇಳಿದನು: “ರಾಧೇಯನ ಮಾತುಗಳನ್ನು ಕೇಳಿದ ರಾಜ ದುರ್ಯೋಧನನು ಜೀವವಿಲ್ಲದವನಂತೆ ಸುಮ್ಮನೆ ಕುಳಿತಿದ್ದ ಯುಧಿಷ್ಠಿರನಿಗೆ ಹೇಳಿದನು:
02063009a ಭೀಮಾರ್ಜುನೌ ಯಮೌ ಚೈವ ಸ್ಥಿತೌ ತೇ ನೃಪ ಶಾಸನೇ|
02063009c ಪ್ರಶ್ನಂ ಪ್ರಬ್ರೂಹಿ ಕೃಷ್ಣಾಂ ತ್ವಮಜಿತಾಂ ಯದಿ ಮನ್ಯಸೇ||
“ನೃಪ! ಭೀಮಾರ್ಜುನರು ಮತ್ತು ಯಮಳರು ನಿನ್ನ ಶಾಸನವನ್ನು ಅನುಸರಿಸುತ್ತಾರೆ. ಪ್ರಶ್ನೆಗೆ ಉತ್ತರಿಸು. ನಾವು ಕೃಷ್ಣೆಯನ್ನು ಗೆದ್ದಿದ್ದೇವೆ ಎಂದು ನಿನಗನಿಸುತ್ತದೆಯೇ?”
02063010a ಏವಮುಕ್ತ್ವಾ ಸ ಕೌಂತೇಯಮಪೋಹ್ಯ ವಸನಂ ಸ್ವಕಂ|
02063010c ಸ್ಮಯನ್ನಿವೈಕ್ಷತ್ಪಾಂಚಾಲೀಮೈಶ್ವರ್ಯಮದಮೋಹಿತಃ||
ಈ ರೀತಿ ಕೌಂತೇಯನಿಗೆ ಹೇಳಿ ಆ ಐಶ್ವರ್ಯಮದಮೋಹಿತನು ತನ್ನ ವಸ್ತ್ರವನ್ನು ಮೇಲೆತ್ತಿ ಕರೆಯುವ ದೃಷ್ಠಿಯಿಂದ ದ್ರೌಪದಿಯತ್ತ ನೋಡಿದನು.
02063011a ಕದಲೀದಂಡಸದೃಶಂ ಸರ್ವಲಕ್ಷಣಪೂಜಿತಂ|
02063011c ಗಜಹಸ್ತಪ್ರತೀಕಾಶಂ ವಜ್ರಪ್ರತಿಮಗೌರವಂ||
02063012a ಅಭ್ಯುತ್ಸ್ಮಯಿತ್ವಾ ರಾಧೇಯಂ ಭೀಮಮಾಧರ್ಷಯನ್ನಿವ|
02063012c ದ್ರೌಪದ್ಯಾಃ ಪ್ರೇಕ್ಷಮಾಣಾಯಾಃ ಸವ್ಯಮೂರುಮದರ್ಶಯತ್||
ರಾಧೇಯನೊಂದಿಗೆ ಚೇಷ್ಟೆಯಾಡುತ್ತಾ ಭೀಮಸೇನನನ್ನು ಸಿಟ್ಟಿಗೇಳಿಸಲು, ಅವನು ಬಾಳೆಯದಿಂಡಿನಂತಿದ್ದ, ಸರ್ವಲಕ್ಷಣಪೂಜಿತ, ಆನೆಯ ಸೊಂಡಿಲಿನಂತಿದ್ದ, ವಜ್ರಪ್ರತಿಮ, ಗೌರವಯುಕ್ತ ತನ್ನ ಎಡ ತೊಡೆಯನ್ನು ದ್ರೌಪದಿಗೆ ತೋರಿಸಿದನು.
02063013a ವೃಕೋದರಸ್ತದಾಲೋಕ್ಯ ನೇತ್ರೇ ಉತ್ಫಾಲ್ಯ ಲೋಹಿತೇ|
02063013c ಪ್ರೋವಾಚ ರಾಜಮಧ್ಯೇ ತಂ ಸಭಾಂ ವಿಶ್ರಾವಯನ್ನಿವ||
ಅದನ್ನು ನೋಡಿದ ವೃಕೋದರನು ತನ್ನ ಕೆಂಪು ಕಣ್ಣುಗಳನ್ನು ಅರಳಿಸಿ ಸಭೆಯಲ್ಲಿದ್ದ ರಾಜರೆಲ್ಲರಿಗೂ ಕೇಳುವ ಹಾಗೆ ಕೂಗಿ ಹೇಳಿದನು:
02063014a ಪಿತೃಭಿಃ ಸಹ ಸಾಲೋಕ್ಯಂ ಮಾ ಸ್ಮ ಗಚ್ಛೇದ್ವೃಕೋದರಃ|
02063014c ಯದ್ಯೇತಮೂರುಂ ಗದಯಾ ನ ಭಿಂದ್ಯಾಂ ತೇ ಮಹಾಹವೇ||
“ಮಹಾಯುದ್ಧದಲ್ಲಿ ನಾನು ಇವನ ಆ ತೊಡೆಯನ್ನು ಗದೆಯಿಂದ ಹೊಡೆದು ತುಂಡುಮಾಡದಿದ್ದರೆ ಈ ವೃಕೋದರನು ತನ್ನ ಪಿತೃಗಳ ಲೋಕವನ್ನು ಸೇರದಿರಲಿ!”
02063015a ಕ್ರುದ್ಧಸ್ಯ ತಸ್ಯ ಸ್ರೋತೋಭ್ಯಃ ಸರ್ವೇಭ್ಯಃ ಪಾವಕಾರ್ಚಿಷಃ|
02063015c ವೃಕ್ಷಸ್ಯೇವ ವಿನಿಶ್ಚೇರುಃ ಕೋಟರೇಭ್ಯಃ ಪ್ರದಹ್ಯತಃ||
ಅವನು ಈ ರೀತಿ ಹೇಳುತ್ತಿದ್ದಂತೆ ಪೊಳ್ಳು ಮರದ ಕೊಟರೆಯಿಂದ ಹೇಗೋ ಹಾಗೆ ಆ ಕೃದ್ಧನ ದೇಹದ ಎಲ್ಲ ರಂಧ್ರಗಳಿಂದ ಬೆಂಕಿಯು ಹೊರಬಿದ್ದಿತು.
02063016 ವಿದುರ ಉವಾಚ|
02063016a ಪರಂ ಭಯಂ ಪಶ್ಯತ ಭೀಮಸೇನಾದ್
ಬುಧ್ಯಧ್ವಂ ರಾಜ್ಞೋ ವರುಣಸ್ಯೇವ ಪಾಶಾತ್|
02063016c ದೈವೇರಿತೋ ನೂನಮಯಂ ಪುರಸ್ತಾತ್
ಪರೋಽನಯೋ ಭರತೇಷೂದಪಾದಿ||
ವಿದುರನು ಹೇಳಿದನು: “ರಾಜರೇ! ಈ ಮಹಾ ಭಯಂಕರ ಭೀಮಸೇನನನ್ನು ನೋಡಿ! ಇವನು ವರುಣನ ಪಾಶದಂತೆಯೇ ತೋರುತ್ತಿದ್ದಾನೆ. ಇದು ಈ ಪುರಾತನ ಭರತವಂಶಕ್ಕೆ ದೈವವು ಮೊದಲೇ ನೀಡಿದ ಒಂದು ದುರ್ಭಾಗ್ಯವಾಗಿರಬಹುದು.
02063017a ಅತಿದ್ಯೂತಂ ಕೃತಮಿದಂ ಧಾರ್ತರಾಷ್ಟ್ರಾ
ಯೇಽಸ್ಯಾಂ ಸ್ತ್ರಿಯಂ ವಿವದಧ್ವಂ ಸಭಾಯಾಂ|
02063017c ಯೋಗಕ್ಷೇಮೋ ದೃಶ್ಯತೇ ವೋ ಮಹಾಭಯಃ
ಪಾಪಾನ್ಮಂತ್ರಾನ್ಕುರವೋ ಮಂತ್ರಯಂತಿ||
ಧಾರ್ತರಾಷ್ಟ್ರರೇ! ಸಭೆಯಲ್ಲಿ ಈ ಸ್ತ್ರೀಗಾಗಿ ನಡೆಸಿದ ನಿಮ್ಮ ಅತಿದ್ಯೂತವನ್ನು ಸಾಕುಮಾಡಿ. ಕುರುಗಳೇ! ಪಾಪವನ್ನು ಯೋಜಿಸಿ ಕಾರ್ಯಗತಗೊಳಿಸಿದ ನಿಮ್ಮ ಯೋಗಕ್ಷೇಮಕ್ಕೆ ಮಹಾಭಯವೊಂದು ಗೋಚರವಾಗುತ್ತಿದೆ.
02063018a ಇಮಂ ಧರ್ಮಂ ಕುರವೋ ಜಾನತಾಶು
ದುರ್ದೃಷ್ಟೇಽಸ್ಮಿನ್ಪರಿಷತ್ಸಂಪ್ರದುಷ್ಯೇತ್|
02063018c ಇಮಾಂ ಚೇತ್ಪೂರ್ವಂ ಕಿತವೋಽಗ್ಲಹೀಷ್ಯದ್
ಈಶೋಽಭವಿಷ್ಯದಪರಾಜಿತಾತ್ಮಾ||
ಕುರುಗಳೇ! ಬೇಗನೆ ಇದರ ಕುರಿತು ಧರ್ಮವು ಏನು ಹೇಳುತ್ತದೆ ಎನ್ನುವುದನ್ನು ನಿರ್ಧಾರಮಾಡಿ. ಆ ನಿರ್ಧಾರವು ಸರಿಯಾಗಿರದಿದ್ದರೆ ಈ ಸಭೆಯು ಅನುಭವಿಸುತ್ತದೆ. ಈ ಜೂಜುಗಾರನು ತಾನು ಪರಾಜಿತನಾಗುವುದರ ಮೊದಲೇ ಇವಳನ್ನು ಪಣವನ್ನಾಗಿಟ್ಟಿದ್ದರೆ ಅವನು ಅವಳ ಒಡೆಯನಾಗಿರುತ್ತಿದ್ದನು.
02063019a ಸ್ವಪ್ನೇ ಯಥೈತದ್ಧಿ ಧನಂ ಜಿತಂ ಸ್ಯಾತ್
ತದೇವಂ ಮನ್ಯೇ ಯಸ್ಯ ದೀವ್ಯತ್ಯನೀಶಃ|
02063019c ಗಾಂಧಾರಿಪುತ್ರಸ್ಯ ವಚೋ ನಿಶಮ್ಯ
ಧರ್ಮಾದಸ್ಮಾತ್ಕುರವೋ ಮಾಪಯಾತ||
ಯಾವುದರ ಮೇಲೆ ತನಗೆ ಒಡೆತನವೇ ಇಲ್ಲವೋ ಅದನ್ನು ಪಣವಾಗಿಟ್ಟು ಗೆದ್ದೆನೆಂದರೆ ಕನಸಿನಲ್ಲಿ ಗೆದ್ದ ಪಣವೂ ಧನವಾಗಿರುತ್ತಿತ್ತು. ಕುರುಗಳೇ! ಗಾಂಧಾರಿಪುತ್ರನ ಮಾತುಗಳನ್ನು ಕೇಳಿದ ನೀವು ಇದರ ಕುರಿತಾದ ಧರ್ಮನಿರ್ಣಯವನ್ನು ಹೇಳಿ.”
02063020 ದುರ್ಯೋಧನ ಉವಾಚ|
02063020a ಭೀಮಸ್ಯ ವಾಕ್ಯೇ ತದ್ವದೇವಾರ್ಜುನಸ್ಯ
ಸ್ಥಿತೋಽಹಂ ವೈ ಯಮಯೋಶ್ಚೈವಮೇವ|
02063020c ಯುಧಿಷ್ಠಿರಂ ಚೇತ್ಪ್ರವದಂತ್ಯನೀಶಂ
ಅಥೋ ದಾಸ್ಯಾನ್ಮೋಕ್ಷ್ಯಸೇ ಯಾಜ್ಞಸೇನಿ||
ದುರ್ಯೋಧನನು ಹೇಳಿದನು: “ಭೀಮನ ವಾಕ್ಯ, ಹಾಗೆಯೇ ಅರ್ಜುನನ ಮತ್ತು ಯಮಳರ ಮಾತಿನಂತೆ ನಾವು ನಡೆದುಕೊಳ್ಳೋಣ. ಒಂದು ವೇಳೆ ಯುಧಿಷ್ಠಿರನು ಅವರ ಒಡೆಯನಾಗಿರಲಿಲ್ಲ ಎಂದು ಅವರು ಹೇಳಿದರೆ, ಯಾಜ್ಞಸೇನಿ! ನೀನು ದಾಸತ್ವದಿಂದ ಮುಕ್ತಳಾಗುತ್ತೀಯೆ.”
02063021 ಅರ್ಜುನ ಉವಾಚ|
02063021a ಈಶೋ ರಾಜಾ ಪೂರ್ವಮಾಸೀದ್ಗ್ಲಹೇ ನಃ
ಕುಂತೀಪುತ್ರೋ ಧರ್ಮರಾಜೋ ಮಹಾತ್ಮಾ|
02063021c ಈಶಸ್ತ್ವಯಂ ಕಸ್ಯ ಪರಾಜಿತಾತ್ಮಾ
ತಜ್ಜಾನೀಧ್ವಂ ಕುರವಃ ಸರ್ವ ಏವ||
ಅರ್ಜುನನು ಹೇಳಿದನು: “ನಮ್ಮನ್ನು ಪಣವನ್ನಾಗಿ ಇಡುವುದಕ್ಕೆ ಮೊದಲು ರಾಜ ಮಹಾತ್ಮ ಕುಂತೀಪುತ್ರ ಧರ್ಮರಾಜನು ನಮ್ಮ ಒಡೆಯನಾಗಿದ್ದನು. ಆದರೆ ತನ್ನನ್ನು ತಾನೇ ಕಳೆದುಕೊಂಡವನು ಯಾರ ಒಡೆಯ? ಇದನ್ನೇ ನೀವು ಸರ್ವ ಕುರುಗಳೂ ನಿರ್ಧಾರ ಮಾಡಬೇಕು.””
02063022 ವೈಶಂಪಾಯನ ಉವಾಚ|
02063022a ತತೋ ರಾಜ್ಞೋ ಧೃತರಾಷ್ಟ್ರಸ್ಯ ಗೇಹೇ
ಗೋಮಾಯುರುಚ್ಚೈರ್ವ್ಯಾಹರದಗ್ನಿಹೋತ್ರೇ|
02063022c ತಂ ರಾಸಭಾಃ ಪ್ರತ್ಯಭಾಷಂತ ರಾಜನ್
ಸಮಂತತಃ ಪಕ್ಷಿಣಶ್ಚೈವ ರೌದ್ರಾಃ||
ವೈಶಂಪಾಯನನು ಹೇಳಿದನು: “ರಾಜನ್! ಆಗ ಅಲ್ಲಿ ರಾಜ ಧೃತರಾಷ್ಟ್ರನ ಗೃಹದ ಅಗ್ನಿಹೋತ್ರದ ಬಳಿ ನರಿಯೊಂದು ಕೂಗಿತು. ಅದಕ್ಕೆ ಪ್ರತ್ಯುತ್ತರವಾಗಿ ಕತ್ತೆಗಳು ಒದರಿದವು. ಅದೇ ಸಮಯದಲ್ಲಿ ಎಲ್ಲಕಡೆಗಳಿಂದ ಪಕ್ಷಿಗಳ ರೋದನವು ಕೇಳಿಬಂದಿತು.
02063023a ತಂ ಚ ಶಬ್ಧಂ ವಿದುರಸ್ತತ್ತ್ವವೇದೀ
ಶುಶ್ರಾವ ಘೋರಂ ಸುಬಲಾತ್ಮಜಾ ಚ|
02063023c ಭೀಷ್ಮದ್ರೋಣೌ ಗೌತಮಶ್ಚಾಪಿ ವಿದ್ವಾನ್
ಸ್ವಸ್ತಿ ಸ್ವಸ್ತೀತ್ಯಪಿ ಚೈವಾಹುರುಚ್ಚೈಃ||
ಆ ಘೋರ ಶಬ್ಧವನ್ನು ತತ್ವವಾದಿ ವಿದುರನು ಕೇಳಿದನು. ಹಾಗೆಯೇ ಸುಬಲಾತ್ಮಜನೂ, ಭೀಷ್ಮ-ದ್ರೋಣರೂ, ಮತ್ತು ವಿದ್ವಾನ್ ಗೌತಮನೂ ಕೇಳಿದರು. ಅವರು ಜೋರಾಗಿ “ಸ್ವಸ್ತಿ! ಸ್ವಸ್ತಿ!” ಎಂದು ಕೂಗಿದರು.
02063024a ತತೋ ಗಾಂಧಾರೀ ವಿದುರಶ್ಚೈವ ವಿದ್ವಾಂಸ್
ತಮುತ್ಪಾತಂ ಘೋರಮಾಲಕ್ಷ್ಯ ರಾಜ್ಞೇ|
02063024c ನಿವೇದಯಾಮಾಸತುರಾರ್ತವತ್ತದಾ
ತತೋ ರಾಜಾ ವಾಕ್ಯಮಿದಂ ಬಭಾಷೇ||
ವಿದ್ವಾಂಸ ವಿದುರ ಮತ್ತು ಗಾಂಧಾರಿ ಇಬ್ಬರೂ ಆ ಘೋರ ಉತ್ಪಾತಗಳು ತೋರಿದುದನ್ನು ತಕ್ಷಣವೇ ರಾಜನಿಗೆ ಹೇಳಿದ ನಂತರ ರಾಜನು ಈ ಮಾತುಗಳನ್ನಾಡಿದನು:
02063025a ಹತೋಽಸಿ ದುರ್ಯೋಧನ ಮಂದಬುದ್ಧೇ
ಯಸ್ತ್ವಂ ಸಭಾಯಾಂ ಕುರುಪುಂಗವಾನಾಂ|
02063025c ಸ್ತ್ರಿಯಂ ಸಮಾಭಾಷಸಿ ದುರ್ವಿನೀತ
ವಿಶೇಷತೋ ದ್ರೌಪದೀಂ ಧರ್ಮಪತ್ನೀಂ||
“ಮಂದಬುದ್ಧಿ! ದುರ್ಯೋಧನ! ಕುರುಪುಂಗವರ ಈ ಸಭೆಯಲ್ಲಿ ಸರಿಯಾಗಿಯೇ ಮಾತನಾಡುತ್ತಿರುವ ಸ್ತ್ರೀಯೊಂದಿಗೆ ಅದರಲ್ಲೂ ವಿಶೇಷವಾಗಿ ಧರ್ಮನ ಪತ್ನಿ ದ್ರೌಪದಿಯೊಂದಿಗೆ ಕೆಟ್ಟದ್ದಾಗಿ ವರ್ತಿಸಿದ್ದುದರಿಂದ ಸೋತವನು ನೀನೇ!”
02063026a ಏವಮುಕ್ತ್ವಾ ಧೃತರಾಷ್ಟ್ರೋ ಮನೀಷೀ
ಹಿತಾನ್ವೇಷೀ ಬಾಂಧವಾನಾಮಪಾಯಾತ್|
02063026c ಕೃಷ್ಣಾಂ ಪಾಂಚಾಲೀಮಬ್ರವೀತ್ಸಾಂತ್ವಪೂರ್ವಂ
ವಿಮೃಶ್ಯೈತತ್ಪ್ರಜ್ಞಯಾ ತತ್ತ್ವಬುದ್ಧಿಃ||
ಹೀಗೆ ಹೇಳಿದ ಮನೀಷಿ ಧೃತರಾಷ್ಟ್ರನು ಬಾಂಧವ ಪತ್ನಿ ಕೃಷ್ಣಾ ಪಾಂಚಾಲಿಯನ್ನು ಸಂತವಿಸುವ ಉದ್ದೇಶದಿಂದ ಪ್ರಜ್ಞೆಯ ತತ್ವಬುದ್ಧಿಯನ್ನು ಸೂಚಿಸುವ ಮಾತುಗಳನ್ನಾಡಿದನು.
02063027 ಧೃತರಾಷ್ಟ್ರ ಉವಾಚ|
02063027a ವರಂ ವೃಣೀಷ್ವ ಪಾಂಚಾಲಿ ಮತ್ತೋ ಯದಭಿಕಾಂಕ್ಷಸಿ|
02063027c ವಧೂನಾಂ ಹಿ ವಿಶಿಷ್ಟಾ ಮೇ ತ್ವಂ ಧರ್ಮಪರಮಾ ಸತೀ||
ಧೃತರಾಷ್ಟ್ರನು ಹೇಳಿದನು: “ಪಾಂಚಾಲಿ! ಪರಮ ಧಾರ್ಮಿಕ ಸತಿಯಾದ ನೀನು ನನ್ನ ಸೊಸೆಯಂದಿರಲ್ಲಿಯೇ ವಿಶಿಷ್ಠಳಾಗಿದ್ದೀಯೆ. ನನ್ನಿಂದ ನೀನು ಬಯಸುವ ವರವನ್ನು ಪಡೆ.”
02063028 ದ್ರೌಪದ್ಯುವಾಚ|
02063028a ದದಾಸಿ ಚೇದ್ವರಂ ಮಹ್ಯಂ ವೃಣೋಮಿ ಭರತರ್ಷಭ|
02063028c ಸರ್ವಧರ್ಮಾನುಗಃ ಶ್ರೀಮಾನದಾಸೋಽಸ್ತು ಯುಧಿಷ್ಠಿರಃ||
ದ್ರೌಪದಿಯು ಹೇಳಿದಳು: “ಭರತರ್ಷಭ! ವರವೊಂದನ್ನು ನನಗೆ ಕೊಡುವುದಾದರೆ ಸರ್ವಧರ್ಮಾನುಗ ಶ್ರೀಮಾನ್ ಯುಧಿಷ್ಠಿರನು ಅದಾಸನಾಗಲಿ.
02063029a ಮನಸ್ವಿನಮಜಾನಂತೋ ಮಾ ವೈ ಬ್ರೂಯುಃ ಕುಮಾರಕಾಃ|
02063029c ಏಷ ವೈ ದಾಸಪುತ್ರೇತಿ ಪ್ರತಿವಿಂಧ್ಯಂ ತಮಾಗತಂ||
ತಿಳಿಯದವರು ಮನಸ್ವಿ ಪ್ರತಿವಿಂಧ್ಯನನ್ನು “ಇಗೋ ಇವನು ದಾಸಪುತ್ರ!” ಎಂದು ಕರೆಯದಂತಾಗದಿರಲಿ!
02063030a ರಾಜಪುತ್ರಃ ಪುರಾ ಭೂತ್ವಾ ಯಥಾ ನಾನ್ಯಃ ಪುಮಾನ್ಕ್ವ ಚಿತ್|
02063030c ಲಾಲಿತೋ ದಾಸಪುತ್ರತ್ವಂ ಪಶ್ಯನ್ನಶ್ಯೇದ್ಧಿ ಭಾರತ||
ಭಾರತ! ಈ ವರೆಗೆ ಬೇರೆ ಯಾವ ಪುರುಷನೂ ಅವನಂತೆ ಲಾಲಿತನಾಗಿಲ್ಲ. ಅವನು ತನ್ನ ದಾಸಪುತ್ರತ್ವವನ್ನು ನೋಡಿ ಸತ್ತೇಹೋಗುತ್ತಾನೆ!”
02063031 ಧೃತರಾಷ್ಟ್ರ ಉವಾಚ|
02063031a ದ್ವಿತೀಯಂ ತೇ ವರಂ ಭದ್ರೇ ದದಾಮಿ ವರಯಸ್ವ ಮಾಂ|
02063031c ಮನೋ ಹಿ ಮೇ ವಿತರತಿ ನೈಕಂ ತ್ವಂ ವರಮರ್ಹಸಿ||
ಧೃತರಾಷ್ಟ್ರನು ಹೇಳಿದನು: “ಭದ್ರೇ! ನಾನು ನಿನಗೆ ಎರಡನೇ ವರವನ್ನು ಕೊಡುತ್ತೇನೆ. ಕೇಳಿಕೋ. ನೀನು ಒಂದೇ ಒಂದು ವರಕ್ಕೆ ಅರ್ಹಳಲ್ಲ ಎಂದು ನನ್ನ ಮನಸ್ಸು ಹೇಳುತ್ತಿದೆ.”
02063032 ದ್ರೌಪದ್ಯುವಾಚ|
02063032a ಸರಥೌ ಸಧನುಷ್ಕೌ ಚ ಭೀಮಸೇನಧನಂಜಯೌ|
02063032c ನಕುಲಂ ಸಹದೇವಂ ಚ ದ್ವಿತೀಯಂ ವರಯೇ ವರಂ||
ದ್ರೌಪದಿಯು ಹೇಳಿದಳು: “ನನ್ನ ಎರಡನೆಯ ವರವಾಗಿ ನಾನು ರಥ-ಧನುಸ್ಸುಗಳೊಂದಿಗೆ ಭೀಮಸೇನ, ಧನಂಜಯ ಮತ್ತು ನಕುಲ ಸಹದೇವರನ್ನು ಕೇಳಿಕೊಳ್ಳುತ್ತೇನೆ.”
02063033 ಧೃತರಾಷ್ಟ್ರ ಉವಾಚ|
02063033a ತೃತೀಯಂ ವರಯಾಸ್ಮತ್ತೋ ನಾಸಿ ದ್ವಾಭ್ಯಾಂ ಸುಸತ್ಕೃತಾ|
02063033c ತ್ವಂ ಹಿ ಸರ್ವಸ್ನುಷಾಣಾಂ ಮೇ ಶ್ರೇಯಸೀ ಧರ್ಮಚಾರಿಣೀ||
ಧೃತರಾಷ್ಟ್ರನು ಹೇಳಿದನು: “ಮೂರನೆಯ ವರವನ್ನೂ ಕೇಳು. ನೀನು ಎರಡೇ ಎರಡು ವರಗಳಿಂದ ಸುಸತ್ಕೃತಳಾದೆಯೆಂದು ಅನಿಸುವುದಿಲ್ಲ. ಧರ್ಮಚಾರಿಣಿಯಾದ ನೀನು ನನ್ನ ಎಲ್ಲ ಸೊಸೆಯಂದಿರಲ್ಲಿ ಶ್ರೇಯಸಿ.”
02063034 ದ್ರೌಪದ್ಯುವಾಚ|
02063034a ಲೋಭೋ ಧರ್ಮಸ್ಯ ನಾಶಾಯ ಭಗವನ್ನಾಹಮುತ್ಸಹೇ|
02063034c ಅನರ್ಹಾ ವರಮಾದಾತುಂ ತೃತೀಯಂ ರಾಜಸತ್ತಮ||
ದ್ರೌಪದಿಯು ಹೇಳಿದಳು: “ಭಗವನ್! ಲೋಭವು ಧರ್ಮವನ್ನು ನಾಶಪಡಿಸುತ್ತದೆ. ರಾಜಸತ್ತಮ! ನಾನು ಮೂರನೆಯ ವರವನ್ನು ಪಡೆಯಲು ಅನರ್ಹಳು.
02063035a ಏಕಮಾಹುರ್ವೈಶ್ಯವರಂ ದ್ವೌ ತು ಕ್ಷತ್ರಸ್ತ್ರಿಯಾ ವರೌ|
02063035c ತ್ರಯಸ್ತು ರಾಜ್ಞೋ ರಾಜೇಂದ್ರ ಬ್ರಾಹ್ಮಣಸ್ಯ ಶತಂ ವರಾಃ||
ರಾಜನ್! ವೈಶ್ಯೆಯ ಪತ್ನಿಗೆ ಒಂದೇ ವರ, ಕ್ಷತ್ರಿಯನ ಪತ್ನಿಗೆ ಎರಡು ವರಗಳು, ರಾಜನ ಪತ್ನಿಗೆ ಮೂರು ವರಗಳು ಮತ್ತು ಬ್ರಾಹ್ಮಣನ ಪತ್ನಿಗೆ ನೂರು ವರಗಳೆಂದು ಹೇಳುತ್ತಾರೆ.
02063036a ಪಾಪೀಯಾಂಸ ಇಮೇ ಭೂತ್ವಾ ಸಂತೀರ್ಣಾಃ ಪತಯೋ ಮಮ|
02063036c ವೇತ್ಸ್ಯಂತಿ ಚೈವ ಭದ್ರಾಣಿ ರಾಜನ್ಪುಣ್ಯೇನ ಕರ್ಮಣಾ||
ರಾಜನ್! ಪಾಪೀಯಸರಾಗಿದ್ದ ನನ್ನ ಪತಿಗಳು ಈಗ ಪಾರಾಗಿದ್ದಾರೆ. ಇನ್ನು ಮುಂದೆ ಅವರೇ ತಮ್ಮ ಪುಣ್ಯ ಕರ್ಮಗಳಿಂದ ಒಳ್ಳೆಯದನ್ನು ಹೊಂದುತ್ತಾರೆ!”
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದ್ಯೂತಪರ್ವಣಿ ದ್ರೌಪದೀವರಲಾಭೇ ತ್ರಿಷಷ್ಟಿತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದ್ಯೂತಪರ್ವದಲ್ಲಿ ದ್ರೌಪದೀವರಲಾಭ ಎನ್ನುವ ಅರವತ್ಮೂರನೆಯ ಅಧ್ಯಾಯವು.
