Karna Parva: Chapter 53

ಕರ್ಣ ಪರ್ವ

೫೩

ಕರ್ಣಪುತ್ರ ಸುಷೇಣನ ವಧೆ

ಉತ್ತಮೌಜಸನಿಂದ ಕರ್ಣನ ಮಗ ಸುಷೇಣನ ವಧೆ (೧-೧೪).

08053001 ಸಂಜಯ ಉವಾಚ|

08053001a ತೇಷಾಮನೀಕಾನಿ ಬೃಹದ್ಧ್ವಜಾನಿ

         ರಣೇ ಸಮೃದ್ಧಾನಿ ಸಮಾಗತಾನಿ|

08053001c ಗರ್ಜಂತಿ ಭೇರೀನಿನದೋನ್ಮುಖಾನಿ

         ಮೇಘೈರ್ಯಥಾ ಮೇಘಗಣಾಸ್ತಪಾಂತೇ||

ಸಂಜಯನು ಹೇಳಿದನು: “ಬೇಸಗೆಯ ಕೊನೆಯಲ್ಲಿ ಮೇಘಗಣಗಳು ಹೇಗೆ ಸೇರಿಕೊಳ್ಳುವವೋ ಹಾಗೆ ದೊಡ್ಡ ದೊಡ್ಡ ಧ್ವಜಗಳನ್ನುಳ್ಳ ಅವರ ಸಮೃದ್ಧ ಸೇನೆಗಳು ಭೇರೀನಿನಾದಗಳನ್ನು ಮಾಡುತ್ತಾ ಗರ್ಜಿಸುತ್ತಾ ರಣದಲ್ಲಿ ಬಂದು ಸೇರಿದವು.

08053002a ಮಹಾಗಜಾಭ್ರಾಕುಲಮಸ್ತ್ರತೋಯಂ

         ವಾದಿತ್ರನೇಮೀತಲಶಬ್ದವಚ್ಚ|

08053002c ಹಿರಣ್ಯಚಿತ್ರಾಯುಧವೈದ್ಯುತಂ ಚ

         ಮಹಾರಥೈರಾವೃತಶಬ್ದವಚ್ಚ||

ಮಹಾಗಜಗಳ ಸಮೂಹಗಳು ಮೇಘಗಳಂತಿದ್ದವು. ರಣವಾದ್ಯಗಳ ಮತ್ತು ರಥಚಕ್ರಗಳ ಶಬ್ಧವು ಗುಡುಗಿನ ಶಬ್ಧಗಳಂತಿದ್ದವು. ಮಹಾರಥರಿಂದ ಪ್ರಯೋಗಿಸಲ್ಪಟ್ಟ ಬಂಗಾರದ ಬಣ್ಣಗಳ ಆಯುಧಗಳು ಶಬ್ಧಮಾಡಿ ಮಿಂಚಿನಂತೆ ಹೊಳೆಯುತ್ತಿದ್ದವು.

08053003a ತದ್ಭೀಮವೇಗಂ ರುಧಿರೌಘವಾಹಿ

         ಖಡ್ಗಾಕುಲಂ ಕ್ಷತ್ರಿಯಜೀವವಾಹಿ|

08053003c ಅನಾರ್ತವಂ ಕ್ರೂರಮನಿಷ್ಟವರ್ಷಂ

         ಬಭೂವ ತತ್ಸಂಹರಣಂ ಪ್ರಜಾನಾಂ||

ಆ ಭೀಮವೇಗದಿಂದ ಬೀಳುತ್ತಿದ್ದ, ರಕ್ತದ ಪ್ರವಾಹವನ್ನೇ ಹರಿಸುತ್ತಿದ್ದ, ಕ್ಷತ್ರಿಯರ ಜೀವವನ್ನು ಹರಿಸುತ್ತಿದ್ದ ಆ ಖಡ್ಗಗಳ ಕ್ರೂರವಾದ ಅನಿಷ್ಟ ವೃಷ್ಟಿಯು ಆರ್ತರಾದ ಪ್ರಜೆಗಳ ಸಂಹಾರಕವಾಗಿತ್ತು.

08053004a ರಥಾನ್ಸಸೂತಾನ್ಸಹಯಾನ್ಗಜಾಂಶ್ಚ

         ಸರ್ವಾನರೀನ್ಮೃತ್ಯುವಶಂ ಶರೌಘೈಃ|

08053004c ನಿನ್ಯೇ ಹಯಾಂಶ್ಚೈವ ತಥಾ ಸಸಾದೀನ್

         ಪದಾತಿಸಂಘಾಂಶ್ಚ ತಥೈವ ಪಾರ್ಥಃ||

ಅಲ್ಲಿ ಪಾರ್ಥನು ಶರೌಘಗಳಿಂದ ಸಾರಥಿಗಳೊಂದಿಗೆ ರಥಗಳನ್ನೂ, ಸವಾರಿಗಳೊಂದಿಗೆ ಆನೆಗಳನ್ನೂ, ಸವಾರರೊಂದಿಗೆ ಕುದುರೆಗಳನ್ನೂ ಮತ್ತು ಪದಾತಿ ಸಂಘಗಳನ್ನೂ ಮೃತ್ಯುವಶರನ್ನಾಗಿ ಮಾಡಿದನು.

08053005a ಕೃಪಃ ಶಿಖಂಡೀ ಚ ರಣೇ ಸಮೇತೌ

         ದುರ್ಯೋಧನಂ ಸಾತ್ಯಕಿರಭ್ಯಗಚ್ಚತ|

08053005c ಶ್ರುತಶ್ರವಾ ದ್ರೋಣಸುತೇನ ಸಾರ್ಧಂ

         ಯುಧಾಮನ್ಯುಶ್ಚಿತ್ರಸೇನೇನ ಚಾಪಿ||

ರಣದಲ್ಲಿ ಕೃಪನು ಶಿಖಂಡಿಯೊಡನೆಯೂ, ದುರ್ಯೋಧನನು ಸಾತ್ಯಕಿಯೊಡನೆಯೂ, ಶ್ರುತಶ್ರವನು ದ್ರೋಣಸುತನೊಡನೆಯೂ ಮತ್ತು ಯುಧಾಮನ್ಯುವು ಚಿತ್ರಸೇನನೊಡನೆಯೂ ಯುದ್ಧಮಾಡುತ್ತಿದ್ದರು.

08053006a ಕರ್ಣಸ್ಯ ಪುತ್ರಸ್ತು ರಥೀ ಸುಷೇಣಂ

         ಸಮಾಗತಃ ಸೃಂಜಯಾಂಶ್ಚೋತ್ತಮೌಜಾಃ|

08053006c ಗಾಂದಾರರಾಜಂ ಸಹದೇವಃ ಕ್ಷುಧಾರ್ತೋ

         ಮಹರ್ಷಭಂ ಸಿಂಹ ಇವಾಭ್ಯಧಾವತ್||

ಕರ್ಣನ ಪುತ್ರ ರಥೀ ಸುಷೇಣನನ್ನು ಸೃಂಜಯ ಉತ್ತಮೌಜಸನು ಎದುರಾದನು. ಹಸಿದ ಸಿಂಹವು ಮಹಾ ಹೋರಿಯನ್ನು ಹೇಗೋ ಹಾಗೆ ಸಹದೇವನು ಗಾಂಧಾರರಾಜನನ್ನು ಆಕ್ರಮಣಿಸಿದನು.

08053007a ಶತಾನೀಕೋ ನಾಕುಲಿಃ ಕರ್ಣಪುತ್ರಂ

         ಯುವಾ ಯುವಾನಂ ವೃಷಸೇನಂ ಶರೌಘೈಃ|

08053007c ಸಮಾರ್ದಯತ ಕರ್ಣಸುತಶ್ಚ ವೀರಃ

         ಪಾಂಚಾಲೇಯಂ ಶರವರ್ಷೈರನೇಕೈಃ||

ನಾಕುಲಿ ಯುವ ಶತಾನೀಕನು ಕರ್ಣಪುತ್ರ ಯುವ ವೃಷಸೇನನನ್ನು ಶರೌಘಗಳಿಂದ ಪ್ರಹರಿಸಿದನು. ವೀರ ಕರ್ಣಸುತನೂ ಕೂಡ ಪಾಂಚಾಲಿಯ ಆ ಮಗನನ್ನು ಅನೇಕ ಶರವರ್ಷಗಳಿಂದ ಪ್ರಹರಿಸಿದನು.

08053008a ರಥರ್ಷಭಃ ಕೃತವರ್ಮಾಣಮಾರ್ಚ್ಚನ್

         ಮಾದ್ರೀಪುತ್ರೋ ನಕುಲಶ್ಚಿತ್ರಯೋಧೀ|

08053008c ಪಾಂಚಾಲಾನಾಮಧಿಪೋ ಯಾಜ್ಞಸೇನಿಃ

         ಸೇನಾಪತಿಂ ಕರ್ಣಮಾರ್ಚ್ಚತ್ಸಸೈನ್ಯಂ||

ಚಿತ್ರಯೋಧೀ ಮಾದ್ರೀಪುತ್ರ ನಕುಲನು ರಥರ್ಷಭ ಕೃತವರ್ಮನನ್ನು ಆಕ್ರಮಣಿಸಿದನು. ಪಾಂಚಾಲರ ಅಧಿಪ ಯಾಜ್ಞಸೇನಿ ಧೃಷ್ಟದ್ಯುಮ್ನನು ಸೇನೆಯೊಡನೆ ಸೇನಾಪತಿ ಕರ್ಣನನ್ನು ಆಕ್ರಮಣಿಸಿದನು.

08053009a ದುಃಶಾಸನೋ ಭಾರತ ಭಾರತೀ ಚ

         ಸಂಶಪ್ತಕಾನಾಂ ಪೃತನಾ ಸಮೃದ್ಧಾ|

08053009c ಭೀಮಂ ರಣೇ ಶಸ್ತ್ರಭೃತಾಂ ವರಿಷ್ಠಂ

         ತದಾ ಸಮಾರ್ಚ್ಚತ್ತಮಸಹ್ಯವೇಗಂ||

ಭಾರತ! ದುಃಶಾಸನನು ಬಾರತೀ ಮತ್ತು ಸಂಶಪ್ತಕರ ಸಮೃದ್ಧ ಸೇನೆಗಳೊಂದಿಗೆ ರಣದಲ್ಲಿ ಅಸಹ್ಯವೇಗಿ ಶಸ್ತ್ರಭೃತರಲ್ಲಿ ವರಿಷ್ಠ ಭೀಮನನ್ನು ಆಕ್ರಮಣಿಸಿದನು.

08053010a ಕರ್ಣಾತ್ಮಜಂ ತತ್ರ ಜಘಾನ ಶೂರಸ್

         ತಥಾಚ್ಚಿನಚ್ಚೋತ್ತಮೌಜಾಃ ಪ್ರಸಃಯ|

08053010c ತಸ್ಯೋತ್ತಮಾಂಗಂ ನಿಪಪಾತ ಭೂಮೌ

         ನಿನಾದಯದ್ಗಾಂ ನಿನದೇನ ಖಂ ಚ||

ಆಗ ಶೂರ ಉತ್ತಮೌಜಸನು ಬಲವನ್ನುಪಯೋಗಿಸಿ ಕರ್ಣಾತ್ಮಜನ ಶಿರವನ್ನು ಭೂಮಿಗೆ ಕೆಡವಿ ಜೋರಾಗಿ ಗರ್ಜಿಸಿ ಭೂಮ್ಯಾಕಾಶಗಳನ್ನು ಮೊಳಗಿಸಿದನು.

08053011a ಸುಷೇಣಶೀರ್ಷಂ ಪತಿತಂ ಪೃಥಿವ್ಯಾಂ

         ವಿಲೋಕ್ಯ ಕರ್ಣೋಽಥ ತದಾರ್ತರೂಪಃ|

08053011c ಕ್ರೋಧಾದ್ಧಯಾಂಸ್ತಸ್ಯ ರಥಂ ಧ್ವಜಂ ಚ

         ಬಾಣೈಃ ಸುಧಾರೈರ್ನಿಶಿತೈರ್ನ್ಯಕೃಂತತ್||

ಸುಷೇಣನ ಶಿರವು ಭೂಮಿಯ ಮೇಲೆ ಬಿದ್ದುದನ್ನು ನೋಡಿ ಆರ್ತರೂಪನಾದ ಕರ್ಣನು ಕ್ರೋಧದಿಂದ ಉತ್ತಮೌಜಸನ ಕುದುರೆಗಳನ್ನೂ, ರಥವನ್ನೂ, ಧ್ವಜವನ್ನೂ ಹರಿತ ಮೊಲಗುಗಳುಳ್ಳ ನಿಶಿತ ಬಾಣಗಳಿಂದ ಕತ್ತರಿಸಿದನು.

08053012a ಸ ತೂತ್ತಮೌಜಾ ನಿಶಿತೈಃ ಪೃಷತ್ಕೈರ್

         ವಿವ್ಯಾಧ ಖಡ್ಗೇನ ಚ ಭಾಸ್ವರೇಣ|

08053012c ಪಾರ್ಷ್ಣಿಂ ಹಯಾಂಶ್ಚೈವ ಕೃಪಸ್ಯ ಹತ್ವಾ

         ಶಿಖಂಡಿವಾಹಂ ಸ ತತೋಽಭ್ಯರೋಹತ್||

ಆ ಉತ್ತಮೌಜಸನಾದರೋ ನಿಶಿತ ಪೃಷತ್ಕಗಳಿಂದ ಮತ್ತು ಹೊಳೆಯುತ್ತಿರುವ ಖಡ್ಗದಿಂದ ಕೃಪನ ಪಾರ್ಷ್ಣಿಯನ್ನೂ ಕುದುರೆಗಳನ್ನೂ ಸಂಹರಿಸಿ ಶಿಖಂಡಿಯ ರಥವನ್ನೇರಿದನು.

08053013a ಕೃಪಂ ತು ದೃಷ್ಟ್ವಾ ವಿರಥಂ ರಥಸ್ಥೋ

         ನೈಚ್ಚಚ್ಚರೈಸ್ತಾಡಯಿತುಂ ಶಿಖಂಡೀ|

08053013c ತಂ ದ್ರೌಣಿರಾವಾರ್ಯ ರಥಂ ಕೃಪಂ ಸ್ಮ

         ಸಮುಜ್ಜಹ್ರೇ ಪಂಕಗತಾಂ ಯಥಾ ಗಾಂ||

ಕೃಪನು ವಿರಥನಾಗಿರುವುದನ್ನು ನೋಡಿ ರಥಸ್ಥನಾಗಿದ್ದ ಶಿಖಂಡಿಯು ಶರಗಳಿಂದ ಅವನನ್ನು ಪ್ರಹರಿಸಲು ಇಚ್ಛಿಸಲಿಲ್ಲ. ಆಗ ದ್ರೌಣಿಯು ಕೆಸರಿನಲ್ಲಿ ಸಿಲುಕಿಕೊಂಡಿರುವ ಹಸುವನ್ನು ಹೇಗೋ ಹಾಗೆ ಕೃಪನ ರಥವನ್ನು ಎತ್ತಿ ಉದ್ಧರಿಸಿದನು.

08053014a ಹಿರಣ್ಯವರ್ಮಾ ನಿಶಿತೈಃ ಪೃಷತ್ಕೈಸ್

         ತವಾತ್ಮಜಾನಾಮನಿಲಾತ್ಮಜೋ ವೈ|

08053014c ಅತಾಪಯತ್ಸೈನ್ಯಮತೀವ ಭೀಮಃ

         ಕಾಲೇ ಶುಚೌ ಮಧ್ಯಗತೋ ಯಥಾರ್ಕಃ||

ಆಗ ಬಂಗಾರದ ಕವಚವನ್ನು ಧರಿಸಿದ್ದ ಅನಿಲಾತ್ಮಜ ಭೀಮನು ಮಧ್ಯಾಹ್ನದಲ್ಲಿಶುಚಿ ಆಗಸದಲ್ಲಿರುವ ಸೂರ್ಯನಂತೆ ನಿಶಿತ ಬಾಣಗಳಿಂದ ನಿನ್ನ ಮಕ್ಕಳನ್ನು ಸಂಕಟಕ್ಕೀಡುಮಾಡಿದನು.”  

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲದ್ವಂದ್ವಯುದ್ಧೇ ತ್ರಿಪಂಚಾಶತ್ತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲದ್ವಂದ್ವಯುದ್ಧ ಎನ್ನುವ ಐವತ್ಮೂರನೇ ಅಧ್ಯಾಯವು.

Related image

Comments are closed.