Karna Parva: Chapter 48

ಕರ್ಣ ಪರ್ವ

೪೮

ಕರ್ಣನು ಕುಶಲನಾಗಿರುವನೆಂದು ಕೇಳಿ ಕ್ರುದ್ಧನಾದ ಯುಧಿಷ್ಠಿರನು “ದ್ವೈತವನದಲ್ಲಿಯೇ ನೀನು ಕರ್ಣನೊಡನೆ ಯುದ್ಧಮಾಡಲು ಸಮರ್ಥನಿಲ್ಲ! ಎಂದು ಹೇಳಿದ್ದರೆ ಈ ಯುದ್ಧಕ್ಕೇ ನಾನು ನಿಶ್ಚಯಿಸುತ್ತಿರಲಿಲ್ಲ!” ಎಂದು ಮೊದಲಾಗಿ ಅರ್ಜುನನನ್ನು ನಿಂದಿಸಿ ಅವನ ಗಾಂಡೀವವನ್ನು ಅಪಮಾನಿಸಿದುದು (೧-೧೫).

08048001 ಸಂಜಯ ಉವಾಚ|

08048001a ಶ್ರುತ್ವಾ ಕರ್ಣಂ ಕಲ್ಯಮುದಾರವೀರ್ಯಂ

         ಕ್ರುದ್ಧಃ ಪಾರ್ಥಃ ಫಲ್ಗುನಸ್ಯಾಮಿತೌಜಾಃ|

08048001c ಧನಂಜಯಂ ವಾಕ್ಯಮುವಾಚ ಚೇದಂ

         ಯುಧಿಷ್ಠಿರಃ ಕರ್ಣಶರಾಭಿತಪ್ತಃ||

ಸಂಜಯನು ಹೇಳಿದನು: “ಉದಾರವೀರ್ಯ ಕರ್ಣನು ಕುಶಲನಾಗಿರುವನೆಂದು ಕೇಳಿ ಅಮಿತೌಜಸ ಪಾರ್ಥನು ಫಲ್ಗುನನ ಮೇಲೆ  ಕ್ರುದ್ಧನಾದನು. ಕರ್ಣನ ಶರಗಳಿಂದ ಅಭಿತಪ್ತನಾಗಿದ್ದ ಯುಧಿಷ್ಠಿರನು ಧನಂಜಯನಿಗೆ ಈ ಮಾತುಗಳನ್ನಾಡಿದನು:

08048002a ಇದಂ ಯದಿ ದ್ವೈತವನೇ ಹ್ಯವಕ್ಷ್ಯಃ

         ಕರ್ಣಂ ಯೋದ್ಧುಂ ನ ಪ್ರಸಹೇ ನೃಪೇತಿ|

08048002c ವಯಂ ತದಾ ಪ್ರಾಪ್ತಕಾಲಾನಿ ಸರ್ವೇ

         ವೃತ್ತಾನ್ಯುಪೈಷ್ಯಾಮ ತದೈವ ಪಾರ್ಥ||

“ಪಾರ್ಥ! “ನೃಪನೇ! ಕರ್ಣನೊಡನೆ ಯುದ್ಧಮಾಡಲು ನಾನು ಸಮರ್ಥನಿಲ್ಲ!” ಎಂದು ನೀನು ದ್ವೈತವನದಲ್ಲಿಯೇ ಹೇಳಿದ್ದಿದ್ದರೆ ಆಗ ನಾವು ಸಮಯೋಚಿತವಾದುದೇನೆಂದು ನಿಶ್ಚಯಿಸಿ ಅದರಂತೆಯೇ ನಡೆದುಕೊಳ್ಳುತ್ತಿದ್ದೆವು!

08048003a ಮಯಿ ಪ್ರತಿಶ್ರುತ್ಯ ವಧಂ ಹಿ ತಸ್ಯ

         ಬಲಸ್ಯ ಚಾಪ್ತಸ್ಯ ತಥೈವ ವೀರ|

08048003c ಆನೀಯ ನಃ ಶತ್ರುಮಧ್ಯಂ ಸ ಕಸ್ಮಾತ್

         ಸಮುತ್ಕ್ಷಿಪ್ಯ ಸ್ಥಂಡಿಲೇ ಪ್ರತ್ಯಪಿಂಷ್ಠಾಃ||

ವೀರ! ಅವನ ಬಲವನ್ನೂ ಆಪ್ತರನ್ನೂ ವಧಿಸುತ್ತೇನೆಂದು ನನಗೆ ಹೇಳಿ ಈಗ ನಮ್ಮನ್ನು ಶತ್ರುಗಳ ಮಧ್ಯದಲ್ಲಿ ತಂದು ಕಠಿಣವಾದ ರಣಾಂಗಣದಲ್ಲಿ ಉರುಳಿಸಿ ಸಮ್ಮರ್ದಿತರಾಗುವಂತೆ ಏಕೆ ಮಾಡಿದೆ?

08048004a ಅನ್ವಾಶಿಷ್ಮ ವಯಮರ್ಜುನ ತ್ವಯಿ

         ಯಿಯಾಸವೋ ಬಹು ಕಲ್ಯಾಣಮಿಷ್ಟಂ|

08048004c ತನ್ನಃ ಸರ್ವಂ ವಿಫಲಂ ರಾಜಪುತ್ರ

         ಫಲಾರ್ಥಿನಾಂ ನಿಚುಲ ಇವಾತಿಪುಷ್ಪಃ||

ಅರ್ಜುನ! ಕಲ್ಯಾಣಕರ ಅನೇಕ ಇಷ್ಟಗಳನ್ನು ಪೂರೈಸುವೆಯೆಂದು ನಾವು ನಿನ್ನಮೇಲೆ ಬಹಳಷ್ಟು ಆಸೆಗಳನ್ನಿಟ್ಟುಕೊಂಡು ಬಂದಿದ್ದೆವು. ರಾಜಪುತ್ರ! ಆದರೆ ಫಲಾರ್ಥಿಗಳಿಗೆ ವೃಕ್ಷವು ಕೇವಲ ಪುಷ್ಪಗಳನ್ನಿತ್ತಂತೆ ಅವೆಲ್ಲವೂ ನಿಷ್ಫಲವಾಗಿಹೋಯಿತು!

08048005a ಪ್ರಚ್ಛಾದಿತಂ ಬಡಿಶಮಿವಾಮಿಷೇಣ

         ಪ್ರಚ್ಛಾದಿತೋ ಗವಯ ಇವಾಪವಾಚಾ|

08048005c ಅನರ್ಥಕಂ ಮೇ ದರ್ಶಿತವಾನಸಿ ತ್ವಂ

         ರಾಜ್ಯಾರ್ಥಿನೋ ರಾಜ್ಯರೂಪಂ ವಿನಾಶಂ||

ಮೀನನ್ನು ಹಿಡಿಯುವ ಗಾಳವು ಮಾಂಸದ ತುಂಡಿನಿಂದ ಆಚ್ಛಾದಿತವಾಗಿರುವಂತೆ, ಘೋರವಿಷವು ಅನ್ನದಿಂದ ಮುಚ್ಚಲ್ಪಟ್ಟಿರುವಂತೆ, ರಾಜ್ಯಾರ್ಥಿಯಾದ ನನಗೆ ರಾಜ್ಯರೂಪದ ಅನರ್ಥಕ ವಿನಾಶವನ್ನು ನೀನು ತೋರಿಸಿಕೊಟ್ಟಿರುವೆ!

08048006a ಯತ್ತತ್ಪೃಥಾಂ ವಾಗುವಾಚಾಂತರಿಕ್ಷೇ

         ಸಪ್ತಾಹಜಾತೇ ತ್ವಯಿ ಮಂದಬುದ್ಧೌ|

08048006c ಜಾತಃ ಪುತ್ರೋ ವಾಸವವಿಕ್ರಮೋಽಯಂ

         ಸರ್ವಾಂ ಶೂರಾಂ ಶಾತ್ರವಾಂ ಜೇಷ್ಯತೀತಿ||

ಮಂದಬುದ್ಧಿಯೇ! ನೀನು ಹುಟ್ಟಿದ ಏಳನೆಯ ದಿನದಂದು ಅಂತರಿಕ್ಷದ ವಾಣಿಯು ಪೃಥೆಗೆ ಇದನ್ನು ಹೇಳಿತ್ತಂತೆ: “ಹುಟ್ಟಿದ ಈ ಮಗನು ವಾಸವನಂತೆ ವಿಕ್ರಮಿಯಾಗುತ್ತಾನೆ. ಎಲ್ಲ ಶೂರರನ್ನೂ ಶತ್ರುಗಳನ್ನೂ ಜಯಿಸುತ್ತಾನೆ!

08048007a ಅಯಂ ಜೇತಾ ಖಾಂಡವೇ ದೇವಸಂಘಾನ್

         ಸರ್ವಾಣಿ ಭೂತಾನ್ಯಪಿ ಚೋತ್ತಮೌಜಾಃ|

08048007c ಅಯಂ ಜೇತಾ ಮದ್ರಕಲಿಂಗಕೇಕಯಾನ್

         ಅಯಂ ಕುರೂನ್ ಹಂತಿ ಚ ರಾಜಮಧ್ಯೇ||

ಇವನು ಖಾಂಡವದಲ್ಲಿ ದೇವಸಂಘಗಳನ್ನೂ ಉತ್ತಮೌಜಸ ಎಲ್ಲ ಭೂತಗಳನ್ನೂ ಜಯಿಸುತ್ತಾನೆ! ಇವನು ರಾಜಮಧ್ಯದಲ್ಲಿ ಮದ್ರ-ಕಲಿಂಗ-ಕೇಕಯರನ್ನೂ ಕುರುಗಳನ್ನೂ ಸಂಹರಿಸುತ್ತಾನೆ!

08048008a ಅಸ್ಮಾತ್ಪರೋ ನ ಭವಿತಾ ಧನುರ್ಧರೋ

         ನ ವೈ ಭೂತಃ ಕಶ್ಚನ ಜಾತು ಜೇತಾ|

08048008c ಇಚ್ಚನ್ನಾರ್ಯಃ ಸರ್ವಭೂತಾನಿ ಕುರ್ಯಾದ್

         ವಶೇ ವಶೀ ಸರ್ವಸಮಾಪ್ತವಿದ್ಯಃ||

ಇವನಿಗಿಂತ ಹೆಚ್ಚಿನ ಧನುರ್ಧರನು ಯಾರೂ ಮುಂದೆ ಇರುವುದಿಲ್ಲ! ಹಿಂದೆ ಇರಲಿಲ್ಲ! ಹುಟ್ಟಿದ ಯಾರೂ ಇವನನ್ನು ಜಯಿಸಲಾರರು! ಸರ್ವವಿದ್ಯೆಗಳನ್ನೂ ಸಮಾಪ್ತಿಗೊಳಿಸಿದ ಈ ಆರ್ಯನು ಬಯಸಿದರೆ ಸರ್ವಭೂತಗಳನ್ನೂ ತನ್ನ ವಶದಲ್ಲಿರಿಸಿಕೊಳ್ಳಬಹುದು!

08048009a ಕಾಂತ್ಯಾ ಶಶಾಂಕಸ್ಯ ಜವೇನ ವಾಯೋಃ

         ಸ್ಥೈರ್ಯೇಣ ಮೇರೋಃ ಕ್ಷಮಯಾ ಪೃಥಿವ್ಯಾಃ|

08048009c ಸೂರ್ಯಸ್ಯ ಭಾಸಾ ಧನದಸ್ಯ ಲಕ್ಷ್ಮ್ಯಾ

         ಶೌರ್ಯೇಣ ಶಕ್ರಸ್ಯ ಬಲೇನ ವಿಷ್ಣೋಃ||

ಇವನು ಕಾಂತಿಯಲ್ಲಿ ಶಶಾಂಕನಂತೆ, ವೇಗದಲ್ಲಿ ವಾಯುವಿನಂತೆ, ಸ್ಥೈರ್ಯದಲ್ಲಿ ಮೇರುವಿನಂತೆ, ಕ್ಷಮೆಯಲ್ಲಿ ಪೃಥ್ವಿಯಂತೆ, ಪ್ರಕಾಶದಲ್ಲಿ ಸೂರ್ಯನಂತೆ, ಸಂಪತ್ತಿನಲ್ಲಿ ಕುಬೇರನಂತೆ, ಶೌರ್ಯದಲ್ಲಿ ಶಕ್ರನಂತೆ ಮತ್ತು ಬಲದಲ್ಲಿ ವಿಷ್ಣುವಿನಂತೆ.

08048010a ತುಲ್ಯೋ ಮಹಾತ್ಮಾ ತವ ಕುಂತಿ ಪುತ್ರೋ

         ಜಾತೋಽದಿತೇರ್ವಿಷ್ಣುರಿವಾರಿಹಂತಾ|

08048010c ಸ್ವೇಷಾಂ ಜಯಾಯ ದ್ವಿಷತಾಂ ವಧಾಯ

         ಖ್ಯಾತೋಽಮಿತೌಜಾಃ ಕುಲತಂತುಕರ್ತಾ||

ಕುಂತೀ! ನಿನ್ನ ಈ ಮಹಾತ್ಮ ಮಗನು ಅದಿತಿಯಲ್ಲಿ ಹುಟ್ಟಿದ ಅರಿಹಂತ ವಿಷ್ಣುವಿನ ಸಮನಾಗಿದ್ದಾನೆ! ತನ್ನವರಿಗೆ ಜಯವನ್ನು ತರಲು ಮತ್ತು ಶತ್ರುಗಳನ್ನು ವಧಿಸಲು ಇವನು ಹುಟ್ಟಿದ್ದಾನೆ. ಅಮಿತೌಜಸನೆಂದು ವಿಖ್ಯಾತನಾಗುತ್ತಾನೆ. ಕುಲವನ್ನು ಉದ್ಧರಿಸುತ್ತಾನೆ!”

08048011a ಇತ್ಯಂತರಿಕ್ಷೇ ಶತಶೃಂಗಮೂರ್ಧ್ನಿ

         ತಪಸ್ವಿನಾಂ ಶೃಣ್ವತಾಂ ವಾಗುವಾಚ|

08048011c ಏವಂವಿಧಂ ತ್ವಾಂ ತಚ್ಚ ನಾಭೂತ್ತವಾದ್ಯ

         ದೇವಾ ಹಿ ನೂನಮನೃತಂ ವದಂತಿ||

ಹೀಗೆ ಶತಶೃಂಗದ ಶಿಖರದಲ್ಲಿರುವ ತಪಸ್ವಿಗಳಿಗೆ ಕೇಳುವಂತೆ ಅಂತರಿಕ್ಷದ ವಾಣಿಯು ಹೇಳಿತ್ತು. ಆದರೆ ಅದು ಹೇಳಿದಂತೆ ನೀನು ನಡೆಸಿಕೊಡಲಿಲ್ಲ! ದೇವತೆಗಳೂ ನಿಶ್ಚಿತವಾಗಿ ಸುಳ್ಳುಹೇಳಿರಬಹುದು!

08048012a ತಥಾಪರೇಷಾಂ ಋಷಿಸತ್ತಮಾನಾಂ

         ಶ್ರುತ್ವಾ ಗಿರಂ ಪೂಜಯತಾಂ ಸದೈವ|

08048012c ನ ಸನ್ನತಿಂ ಪ್ರೈಮಿ ಸುಯೋಧನಸ್ಯ

         ನ ತ್ವಾ ಜಾನಾಮ್ಯಾಧಿರಥೇರ್ಭಯಾರ್ತಂ||

ಈ ಮಾತುಗಳನ್ನು ಕೇಳಿ ಇತರ ಋಷಿಸತ್ತಮರೂ ಸದೈವ ನಿನ್ನನ್ನು ಗೌರವಿಸುತ್ತಿದ್ದರು. ಆದುದರಿಂದ ನಾನು ಸುಯೋಧನನೊಡನೆ ಪ್ರೇಮದಿಂದ ಸಂಧಿಮಾಡಿಕೊಳ್ಳಲಿಲ್ಲ! ನೀನು ಆಧಿರಥನಿಗೆ ಹೆದರುತ್ತೀಯೆಂದು ನನಗೆ ತಿಳಿದಿರಲಿಲ್ಲ!

08048013a ತ್ವಷ್ಟ್ರಾ ಕೃತಂ ವಾಹಮಕೂಜನಾಕ್ಷಂ

         ಶುಭಂ ಸಮಾಸ್ಥಾಯ ಕಪಿಧ್ವಜಂ ತ್ವಂ|

08048013c ಖಡ್ಗಂ ಗೃಹೀತ್ವಾ ಹೇಮಚಿತ್ರಂ ಸಮಿದ್ಧಂ

         ಧನುಶ್ಚೇದಂ ಗಾಂಡಿವಂ ತಾಲಮಾತ್ರಂ|

08048013e ಸ ಕೇಶವೇನೋಃಯಮಾನಃ ಕಥಂ ನು

         ಕರ್ಣಾದ್ಭೀತೋ ವ್ಯಪಯಾತೋಽಸಿ ಪಾರ್ಥ||

ತ್ವಷ್ಟನಿಂದ ನಿನ್ನ ರಥವು ನಿರ್ಮಿಸಲ್ಪಟ್ಟಿದೆ ಮತ್ತು ಅದರ ಚಕ್ರಗಳು ಸ್ವಲ್ಪವೂ ಶಬ್ಧಮಾಡುವುದಿಲ್ಲ! ನಿನ್ನ ಧ್ವಜದಲ್ಲಿ ಶುಭ ಕಪಿಯು ನೆಲೆಸಿದ್ದಾನೆ! ಹೇಮಚಿತ್ರಗಳಿರುವ ಖಡ್ಗವನ್ನೂ ನಾಲ್ಕು ಮೊಳ ಉದ್ದದ ಗಾಂಡೀವಧನುಸ್ಸನ್ನೂ ನೀನು ಹಿಡಿದು ಸನ್ನದ್ಧನಾಗಿರುವೆ! ಈ ಕೇಶವನೇ ನಿನ್ನ ಸಾರಥಿಯಾಗಿರುವಾಗ ಪಾರ್ಥ! ನೀನೇಕೆ ಕರ್ಣನಿಗೆ ಹೆದರಿ ಹೊರಟು ಬಂದೆ?

08048014a ಧನುಶ್ಚೈತತ್ಕೇಶವಾಯ ಪ್ರದಾಯ

         ಯಂತಾಭವಿಷ್ಯಸ್ತ್ವಂ ರಣೇ ಚೇದ್ದುರಾತ್ಮನ್|

08048014c ತತೋಽಹನಿಷ್ಯತ್ಕೇಶವಃ ಕರ್ಣಮುಗ್ರಂ

         ಮರುತ್ಪತಿರ್ವೃತ್ರಮಿವಾತ್ತವಜ್ರಃ||

ದುರಾತ್ಮನ್! ಈ ಧನುಸ್ಸನ್ನು ಕೇಶವನಿಗೆ ಕೊಟ್ಟುಬಿಡು! ರಣದಲ್ಲಿ ನೀನು ಅವನ ಸಾರಥಿಯಾಗು! ಆಗ ಕೇಶವನು ಇಂದ್ರನು ವಜ್ರಾಯುಧವನ್ನು ಹಿಡಿದು ವೃತ್ರನನ್ನು ಸಂಹರಿಸಿದಂತೆ ಉಗ್ರನಾದ ಕರ್ಣನನ್ನು ಸಂಹರಿಸುತ್ತಾನೆ!

08048015a ಮಾಸೇಽಪತಿಷ್ಯಃ ಪಂಚಮೇ ತ್ವಂ ಪ್ರಕೃಚ್ಚ್ರೇ

         ನ ವಾ ಗರ್ಭೋಽಪ್ಯಭವಿಷ್ಯಃ ಪೃಥಾಯಾಃ|

08048015c ತತ್ತೇ ಶ್ರಮೋ ರಾಜಪುತ್ರಾಭವಿಷ್ಯನ್

         ನ ಸಂಗ್ರಾಮಾದಪಯಾತುಂ ದುರಾತ್ಮನ್||

ನೀನು ಗರ್ಭದ ಐದನೆಯ ತಿಂಗಳಿನಲ್ಲಿಯೇ ಗರ್ಭಪಾತವಾಗಿ ಹೋಗಬೇಕಾಗಿದ್ದಿತು! ಅಥವಾ ಪೃಥೆಯ ಗರ್ಭದಲ್ಲಿಯೇ ಇರಬಾರದಾಗಿತ್ತು! ದುರಾತ್ಮನ್! ರಾಜಪುತ್ರ! ಆಗ ನೀನು ಸಂಗ್ರಾಮದಿಂದ ಓಡಿಬರುವ ಶ್ರಮವನ್ನು ಪಡಬೇಕಾಗುತ್ತಿರಲಿಲ್ಲ!””

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಯುಧಿಷ್ಠಿರಕ್ರೋಧವಾಕ್ಯೇ ಅಷ್ಠಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಯುಧಿಷ್ಠಿರಕ್ರೋಧವಾಕ್ಯ ಎನ್ನುವ ನಲ್ವತ್ತೆಂಟನೇ ಅಧ್ಯಾಯವು.

Image result for indian motifs

Comments are closed.