ಕರ್ಣ ಪರ್ವ
Contents
Toggle೪೦
ನಕುಲ-ಸಹದೇವರು ಮತ್ತು ದುರ್ಯೋಧರರ ನಡುವೆ ಯುದ್ಧ (೧-೧೯). ಧೃಷ್ಟದ್ಯುಮ್ನ-ದುರ್ಯೋಧನರ ಯುದ್ಧ; ದುರ್ಯೋಧನನ ಪರಾಜಯ (೨೦-೩೮). ಕರ್ಣನು ಪಾಂಡವ ಸೇನೆಯನ್ನೂ ಭೀಮಸೇನನು ಕೌರವ ಸೇನೆಯನ್ನೂ ಧ್ವಂಸಗೊಳಿಸಿದುದು (೩೯-೭೭). ಅರ್ಜುನನು ಕೌರವಸೇನೆಯನ್ನು ಪ್ರವೇಶಿಸಿ ಯುದ್ಧಮಾಡುತ್ತಾ ಕಾಂಬೋಜದ ಸುದಕ್ಷಿಣನ ತಮ್ಮನನ್ನು ವಧಿಸಿದುದು (೭೮-೧೦೬). ಅರ್ಜುನ-ಅಶ್ವತ್ಥಾಮರ ಯುದ್ಧ; ಅಶ್ವತ್ಥಾಮನ ಪರಾಜಯ (೧೦೭-೧೩೦).
08040001 ಸಂಜಯ ಉವಾಚ|
08040001a ಭೀಮಸೇನಂ ಸಪಾಂಚಾಲ್ಯಂ ಚೇದಿಕೇಕಯಸಂವೃತಂ|
08040001c ವೈಕರ್ತನಃ ಸ್ವಯಂ ರುದ್ಧ್ವಾ ವಾರಯಾಮಾಸ ಸಾಯಕೈಃ||
ಸಂಜಯನು ಹೇಳಿದನು: “ಪಾಂಚಾಲ್ಯ, ಚೇದಿ-ಕೇಕಯರೊಂದಿಗೆ ಸಂವೃತನಾದ ಭೀಮಸೇನನನ್ನು ಸ್ವಯಂ ವೈಕರ್ತನನು ಸಾಯಕಗಳಿಂದ ಹೊಡೆದು ತಡೆದನು.
08040002a ತತಸ್ತು ಚೇದಿಕಾರೂಷಾನ್ ಸೃಂಜಯಾಂಶ್ಚ ಮಹಾರಥಾನ್|
08040002c ಕರ್ಣೋ ಜಘಾನ ಸಂಕ್ರುದ್ಧೋ ಭೀಮಸೇನಸ್ಯ ಪಶ್ಯತಃ||
ಭೀಮಸೇನನು ನೋಡುತ್ತಿದ್ದಂತೆಯೇ ಕರ್ಣನು ಸಂಕ್ರುದ್ಧನಾಗಿ ಚೇದಿ-ಕರೂಷರನ್ನೂ ಮಹಾರಥ ಸೃಂಜಯರನ್ನೂ ಸಂಹರಿಸಿದನು.
08040003a ಭೀಮಸೇನಸ್ತತಃ ಕರ್ಣಂ ವಿಹಾಯ ರಥಸತ್ತಮಂ|
08040003c ಪ್ರಯಯೌ ಕೌರವಂ ಸೈನ್ಯಂ ಕಕ್ಷಮಗ್ನಿರಿವ ಜ್ವಲನ್||
ಆಗ ಭೀಮಸೇನನು ರಥಸತ್ತಮ ಕರ್ಣನನ್ನು ಬಿಟ್ಟು ಪ್ರಜ್ವಲಿಸುತ್ತಿರುವ ಅಗ್ನಿಯು ಹುಲ್ಲುಮೆದೆಯನ್ನು ಹೊಗುವಂತೆ ಕೌರವ ಸೇನೆಯನ್ನು ಹೊಕ್ಕನು.
08040004a ಸೂತಪುತ್ರೋಽಪಿ ಸಮರೇ ಪಾಂಚಾಲಾನ್ಕೇಕಯಾಂಸ್ತಥಾ|
08040004c ಸೃಂಜಯಾಂಶ್ಚ ಮಹೇಷ್ವಾಸಾನ್ನಿಜಘಾನ ಸಹಸ್ರಶಃ||
ಸೂತಪುತ್ರನಾದರೋ ಸಮರದಲ್ಲಿ ಸಹಸ್ರಾರು ಸಂಖ್ಯೆಗಳಲ್ಲಿ ಮಹೇಷ್ವಾಸ ಪಾಂಚಾಲರನ್ನೂ, ಕೇಕಯರನ್ನೂ, ಸೃಂಜಯರನ್ನೂ ಸಂಹರಿಸಿದನು.
08040005a ಸಂಶಪ್ತಕೇಷು ಪಾರ್ಥಶ್ಚ ಕೌರವೇಷು ವೃಕೋದರಃ|
08040005c ಪಾಂಚಾಲೇಷು ತಥಾ ಕರ್ಣಃ ಕ್ಷಯಂ ಚಕ್ರೂರ್ಮಹಾರಥಾಃ||
ಮಹಾರಥ ಪಾರ್ಥನು ಸಂಶಪ್ತಕರಲ್ಲಿಯೂ, ವೃಕೋದರನು ಕೌರವರಲ್ಲಿಯೂ ಮತ್ತು ಹಾಗೆಯೇ ಮಹಾರಥ ಕರ್ಣನು ಪಾಂಚಾಲರಲ್ಲಿಯೂ ಅತ್ಯಧಿಕ ಕ್ಷಯವನ್ನುಂಟುಮಾಡಿದರು.
08040006a ತೇ ಕ್ಷತ್ರಿಯಾ ದಹ್ಯಮಾನಾಸ್ತ್ರಿಭಿಸ್ತೈಃ ಪಾವಕೋಪಮೈಃ|
08040006c ಜಗ್ಮುರ್ವಿನಾಶಂ ಸಮರೇ ರಾಜನ್ದುರ್ಮಂತ್ರಿತೇ ತವ||
ರಾಜನ್ ನಿನ್ನ ದುರ್ಮಂತ್ರದಿಂದ ಪಾವಕನಂತೆ ಸುಡುತ್ತಿದ್ದ ಆ ಮೂವರಿಂದ ಸಮರದಲ್ಲಿ ಕ್ಷತ್ರಿಯರು ವಿನಾಶಹೊಂದಿದರು.
08040007a ತತೋ ದುರ್ಯೋಧನಃ ಕ್ರುದ್ಧೋ ನಕುಲಂ ನವಭಿಃ ಶರೈಃ|
08040007c ವಿವ್ಯಾಧ ಭರತಶ್ರೇಷ್ಠ ಚತುರಶ್ಚಾಸ್ಯ ವಾಜಿನಃ||
ಭರತಶ್ರೇಷ್ಠ! ಆಗ ಕ್ರುದ್ಧನಾದ ದುರ್ಯೋಧನನು ನಕುಲನನ್ನು ಮತ್ತು ಅವನ ನಾಲ್ಕು ಕುದುರೆಗಳನ್ನು ಒಂಭತ್ತು ಶರಗಳಿಂದ ಹೊಡೆದನು.
08040008a ತತಃ ಪುನರಮೇಯಾತ್ಮಾ ತವ ಪುತ್ರೋ ಜನಾಧಿಪಃ|
08040008c ಕ್ಷುರೇಣ ಸಹದೇವಸ್ಯ ಧ್ವಜಂ ಚಿಚ್ಛೇದ ಕಾಂಚನಂ||
ಪುನಃ ನಿನ್ನ ಅಮೇಯಾತ್ಮ ಪುತ್ರ ಜನಾಧಿಪನು ಕ್ಷುರದಿಂದ ಸಹದೇವನ ಕಾಂಚನ ಧ್ವಜವನ್ನು ಕತ್ತರಿಸಿದನು.
08040009a ನಕುಲಸ್ತು ತತಃ ಕ್ರುದ್ಧಸ್ತವ ಪುತ್ರಂ ತ್ರಿಸಪ್ತಭಿಃ|
08040009c ಜಘಾನ ಸಮರೇ ರಾಜನ್ಸಹದೇವಶ್ಚ ಪಂಚಭಿಃ||
ರಾಜನ್! ಆಗ ಸಮರದಲ್ಲಿ ಕ್ರುದ್ಧನಾಗಿ ನಕುಲನು ಮೂರು ಬಾಣಗಳಿಂದ ಮತ್ತು ಸಹದೇವನು ಐದರಿಂದ ನಿನ್ನ ಪುತ್ರನನ್ನು ಹೊಡೆದರು.
08040010a ತಾವುಭೌ ಭರತಶ್ರೇಷ್ಠೌ ಶ್ರೇಷ್ಠೌ ಸರ್ವಧನುಷ್ಮತಾಂ|
08040010c ವಿವ್ಯಾಧೋರಸಿ ಸಂಕ್ರುದ್ಧಃ ಪಂಚಭಿಃ ಪಂಚಭಿಃ ಶರೈಃ||
ದುರ್ಯೋಧನನು ಸಂಕ್ರುದ್ಧನಾಗಿ ಐದೈದು ಶರಗಳಿಂದ ಸರ್ವಧನುಷ್ಮತರಲ್ಲಿ ಶ್ರೇಷ್ಠ ಆ ಇಬ್ಬರು ಭರತಶ್ರೇಷ್ಠರ ವಕ್ಷಸ್ಥಳಗಳನ್ನು ಪ್ರಹರಿಸಿದನು.
08040011a ತತೋಽಪರಾಭ್ಯಾಂ ಭಲ್ಲಾಭ್ಯಾಂ ಧನುಷೀ ಸಮಕೃಂತತ|
08040011c ಯಮಯೋಃ ಪ್ರಹಸನ್ ರಾಜನ್ವಿವ್ಯಾಧೈವ ಚ ಸಪ್ತಭಿಃ||
ರಾಜನ್! ಬೇರೆ ಭಲ್ಲಗಳೆರಡರಿಂದ ಆ ಯಮಳರ ಧನುಸ್ಸುಗಳನ್ನು ಕತ್ತರಿಸಿ ನಕ್ಕು ಏಳು ಬಾಣಗಳಿಂದ ಅವರನ್ನು ಹೊಡೆದನು.
08040012a ತಾವನ್ಯೇ ಧನುಷೀ ಶ್ರೇಷ್ಠೇ ಶಕ್ರಚಾಪನಿಭೇ ಶುಭೇ|
08040012c ಪ್ರಗೃಹ್ಯ ರೇಜತುಃ ಶೂರೌ ದೇವಪುತ್ರಸಮೌ ಯುಧಿ||
ಆಗ ಅವರಿಬ್ಬರು ಶೂರರೂ ಶಕ್ರಚಾಪಗಳಂತೆ ಶೋಭಿಸುತ್ತಿದ್ದ ಬೇರೆ ಶ್ರೇಷ್ಠ ಧನುಸ್ಸುಗಳನ್ನು ತೆಗೆದುಕೊಂಡು ಯುದ್ಧದಲ್ಲಿ ದೇವಪುತ್ರರಂತೆ ಶೋಭಿಸಿದರು.
08040013a ತತಸ್ತೌ ರಭಸೌ ಯುದ್ಧೇ ಭ್ರಾತರೌ ಭ್ರಾತರಂ ನೃಪ|
08040013c ಶರೈರ್ವವರ್ಷತುರ್ಘೋರೈರ್ಮಹಾಮೇಘೌ ಯಥಾಚಲಂ||
ನೃಪ! ಆಗ ಅವರಿಬ್ಬರು ಸಹೋದರರೂ ಘೋರಮಹಾಮೇಘಗಳು ಪರ್ವತವನ್ನು ಹೇಗೋ ಹಾಗೆ ಯುದ್ಧದಲ್ಲಿ ಅಣ್ಣನನ್ನು ಶರವರ್ಷಗಳಿಂದ ಅಭಿಷೇಚಿಸಿದರು.
08040014a ತತಃ ಕ್ರುದ್ಧೋ ಮಹಾರಾಜ ತವ ಪುತ್ರೋ ಮಹಾರಥಃ|
08040014c ಪಾಂಡುಪುತ್ರೌ ಮಹೇಷ್ವಾಸೌ ವಾರಯಾಮಾಸ ಪತ್ರಿಭಿಃ||
ಮಹಾರಾಜ! ಆಗ ನಿನ್ನ ಪುತ್ರ ಮಹಾರಥನು ಕ್ರುದ್ಧನಾಗಿ ಪತ್ರಿಗಳಿಂದ ಮಹೇಷ್ವಾಸ ಪಾಂಡುಪುತ್ರರನ್ನು ತಡೆದನು.
08040015a ಧನುರ್ಮಂಡಲಮೇವಾಸ್ಯ ದೃಶ್ಯತೇ ಯುಧಿ ಭಾರತ|
08040015c ಸಾಯಕಾಶ್ಚೈವ ದೃಶ್ಯಂತೇ ನಿಶ್ಚರಂತಃ ಸಮಂತತಃ||
ಭಾರತ! ಆಗ ಯುದ್ಧದಲ್ಲಿ ಅವನ ಧನುಸ್ಸು ಮಂಡಲಾಕಾರವಾಗಿ ಕಾಣುತ್ತಿತ್ತು. ಅದರಿಂದ ಒಂದೇಸಮನೆ ಹೊರಬರುತ್ತಿದ್ದ ಸಾಯಕಗಳು ಮಾತ್ರ ಕಾಣುತ್ತಿದ್ದವು.
08040016a ತಸ್ಯ ಸಾಯಕಸಂಚನ್ನೌ ಚಕಾಶೇತಾಂ ಚ ಪಾಂಡವೌ|
08040016c ಮೇಘಚ್ಛನ್ನೌ ಯಥಾ ವ್ಯೋಮ್ನಿ ಚಂದ್ರಸೂರ್ಯೌ ಹತಪ್ರಭೌ||
ಅವನ ಸಾಯಕಗಳ ಗುಂಪುಗಳು ಮೇಘಗಳು ಆಕಾಶವನ್ನು ತುಂಬಿ ಚಂದ್ರ-ಸೂರ್ಯರ ಪ್ರಭೆಗಳನ್ನು ಕುಂದಿಸುವಂತೆ ಆ ಪಾಂಡವರನ್ನು ಕುಂದಿಸಿದವು.
08040017a ತೇ ತು ಬಾಣಾ ಮಹಾರಾಜ ಹೇಮಪುಂಖಾಃ ಶಿಲಾಶಿತಾಃ|
08040017c ಆಚ್ಚಾದಯನ್ದಿಶಃ ಸರ್ವಾಃ ಸೂರ್ಯಸ್ಯೇವಾಂಶವಸ್ತದಾ||
ಮಹಾರಾಜ! ಆ ಹೇಮಪುಂಖ ಶಿಲಾಶಿತ ಬಾಣಗಳು ಸೂರ್ಯನ ಕಿರಣಗಳಂತೆ ಸರ್ವ ದಿಕ್ಕುಗಳನ್ನೂ ಆಚ್ಛಾದಿಸಿದವು.
08040018a ಬಾಣಭೂತೇ ತತಸ್ತಸ್ಮಿನ್ಸಂಛನ್ನೇ ಚ ನಭಸ್ತಲೇ|
08040018c ಯಮಾಭ್ಯಾಂ ದದೃಶೇ ರೂಪಂ ಕಾಲಾಂತಕಯಮೋಪಮಂ||
ನಭಸ್ತಲವೂ ಬಾಣಮಯವಾಗಿ ಮುಚ್ಚಿಹೋಗಲು ಯಮಳರಿಗೆ ದುರ್ಯೋಧನನ ರೂಪವು ಕಾಲಾಂತಕ ಯಮನಂತೆಯೇ ತೋರಿತು.
08040019a ಪರಾಕ್ರಮಂ ತು ತಂ ದೃಷ್ಟ್ವಾ ತವ ಸೂನೋರ್ಮಹಾರಥಾಃ|
08040019c ಮೃತ್ಯೋರುಪಾಂತಿಕಂ ಪ್ರಾಪ್ತೌ ಮಾದ್ರೀಪುತ್ರೌ ಸ್ಮ ಮೇನಿರೇ||
ನಿನ್ನ ಮಗನ ಆ ಪರಾಕ್ರಮವನ್ನು ನೋಡಿ ಮಾದ್ರಿಪುತ್ರರಿಗೆ ಮೃತ್ಯುವು ಸಮೀಪವಾಯಿತೆಂದೇ ಮಹಾರಥರು ಭಾವಿಸಿದರು.
08040020a ತತಃ ಸೇನಾಪತೀ ರಾಜನ್ಪಾಂಡವಸ್ಯ ಮಹಾತ್ಮನಃ|
08040020c ಪಾರ್ಷತಃ ಪ್ರಯಯೌ ತತ್ರ ಯತ್ರ ರಾಜಾ ಸುಯೋಧನಃ||
ರಾಜನ್! ಆಗ ಪಾಂಡವರ ಸೇನಾಪತಿ ಮಹಾತ್ಮ ಪಾರ್ಷತ ಧೃಷ್ಟದ್ಯುಮ್ನನು ರಾಜಾ ಸುಯೋಧನನಿದ್ದಲ್ಲಿಗೆ ಆಗಮಿಸಿದನು.
08040021a ಮಾದ್ರೀಪುತ್ರೌ ತತಃ ಶೂರೌ ವ್ಯತಿಕ್ರಮ್ಯ ಮಹಾರಥೌ|
08040021c ಧೃಷ್ಟದ್ಯುಮ್ನಸ್ತವ ಸುತಂ ತಾಡಯಾಮಾಸ ಸಾಯಕೈಃ||
ಮಹಾರಥ ಶೂರ ಮಾದ್ರೀಪುತ್ರರೀರ್ವರನ್ನೂ ದಾಟಿ ಮುಂದೆ ಹೋಗಿ ಧೃಷ್ಟದ್ಯುಮ್ನನು ಸಾಯಕಗಳಿಂದ ನಿನ್ನ ಮಗನನ್ನು ಪ್ರಹರಿಸಿದನು.
08040022a ತಮವಿಧ್ಯದಮೇಯಾತ್ಮಾ ತವ ಪುತ್ರೋಽತ್ಯಮರ್ಷಣಃ|
08040022c ಪಾಂಚಾಲ್ಯಂ ಪಂಚವಿಂಶತ್ಯಾ ಪ್ರಹಸ್ಯ ಪುರುಷರ್ಷಭ||
ಪುರುಷರ್ಷಭ! ನಿನ್ನ ಮಗ ಅಮೇಯಾತ್ಮ ಅಸಹನಶೀಲ ಮಗನು ನಗುತ್ತಲೇ ಪಾಂಚಾಲ್ಯನನ್ನು ಇಪ್ಪತ್ತೈದು ಬಾಣಗಳಿಂದ ಪ್ರಹರಿಸಿದನು.
08040023a ತತಃ ಪುನರಮೇಯಾತ್ಮಾ ಪುತ್ರಸ್ತೇ ಪೃಥಿವೀಪತೇ|
08040023c ವಿದ್ಧ್ವಾ ನನಾದ ಪಾಂಚಾಲ್ಯಂ ಷಷ್ಟ್ಯಾ ಪಂಚಭಿರೇವ ಚ||
ಪುನಃ ನಿನ್ನ ಪುತ್ರ ಅಮೇಯಾತ್ಮ ಪೃಥಿವೀಪತಿಯು ಪಾಂಚಾಲ್ಯನನ್ನು ಅರವತ್ತೈದು ಬಾಣಗಳಿಂದ ಹೊಡೆದು ಗರ್ಜಿಸಿದನು.
08040024a ಅಥಾಸ್ಯ ಸಶರಂ ಚಾಪಂ ಹಸ್ತಾವಾಪಂ ಚ ಮಾರಿಷ|
08040024c ಕ್ಷುರಪ್ರೇಣ ಸುತೀಕ್ಷ್ಣೇನ ರಾಜಾ ಚಿಚ್ಛೇದ ಸಂಯುಗೇ||
ಮಾರಿಷ! ಆಗ ಸಂಯುಗದಲ್ಲಿ ರಾಜಾ ದುರ್ಯೋಧನನು ಸುತೀಕ್ಷ್ಣ ಕ್ಷುರಪ್ರದಿಂದ ಶರಯುಕ್ತವಾದ ಅವನ ಧನುಸ್ಸನ್ನೂ ಕೈಚೀಲವನ್ನೂ ಕತ್ತರಿಸಿದನು.
08040025a ತದಪಾಸ್ಯ ಧನುಶ್ಛಿನ್ನಂ ಪಾಂಚಾಲ್ಯಃ ಶತ್ರುಕರ್ಶನಃ|
08040025c ಅನ್ಯದಾದತ್ತ ವೇಗೇನ ಧನುರ್ಭಾರಸಹಂ ನವಂ||
ತುಂಡಾದ ಧನುಸ್ಸನ್ನು ಬಿಸುಟು ಶತ್ರುಕರ್ಶನ ಪಾಂಚಾಲ್ಯನು ವೇಗದಿಂದ ಇನ್ನೊಂದು ಭಾರವನ್ನು ಸಹಿಸುವ ಹೊಸ ಧನುಸ್ಸನ್ನು ಕೈಗೆತ್ತಿಕೊಂಡನು.
08040026a ಪ್ರಜ್ವಲನ್ನಿವ ವೇಗೇನ ಸಂರಂಭಾದ್ರುಧಿರೇಕ್ಷಣಃ|
08040026c ಅಶೋಭತ ಮಹೇಷ್ವಾಸೋ ಧೃಷ್ಟದ್ಯುಮ್ನಃ ಕೃತವ್ರಣಃ||
ತುಂಬಾಗಾಯಗೊಂಡಿದ್ದ, ಕೋಪದಿಂದ ಕಣ್ಣುಗಳು ಕೆಂಪಾಗಿದ್ದ ಮಹೇಷ್ವಾಸ ಧೃಷ್ಟದ್ಯುಮ್ನನು ವೇಗದಿಂದ ಪ್ರಜ್ವಲಿಸುತ್ತಿರುವ ಅಗ್ನಿಯಂತೆಯೇ ಶೋಭಿಸಿದನು.
08040027a ಸ ಪಂಚದಶ ನಾರಾಚಾಂ ಶ್ವಸತಃ ಪನ್ನಗಾನಿವ|
08040027c ಜಿಘಾಂಸುರ್ಭರತಶ್ರೇಷ್ಠಂ ಧೃಷ್ಟದ್ಯುಮ್ನೋ ವ್ಯವಾಸೃಜತ್||
ಭರತಶ್ರೇಷ್ಠ ದುರ್ಯೋಧನನನ್ನು ಸಂಹರಿಸಲೋಸುಗ ಧೃಷ್ಟದ್ಯುಮ್ನನು ಪನ್ನಗಗಳಂತೆ ಭುಸುಗುಡುತ್ತಿರುವ ಹದಿನೈದು ನಾರಾಚಗಳನ್ನು ಪ್ರಯೋಗಿಸಿದನು.
08040028a ತೇ ವರ್ಮ ಹೇಮವಿಕೃತಂ ಭಿತ್ತ್ವಾ ರಾಜ್ಞಃ ಶಿಲಾಶಿತಾಃ|
08040028c ವಿವಿಶುರ್ವಸುಧಾಂ ವೇಗಾತ್ಕಂಕಬರ್ಹಿಣವಾಸಸಃ||
ರಣಹದ್ದಿನ ರೆಕ್ಕೆಗಳೇ ವಸ್ತ್ರಗಳಾಗಿದ್ದ ಆ ಶಿಲಾಶಿತ ಬಾಣಗಳು ರಾಜನ ಸುವರ್ಣಮಯ ಕವಚವನ್ನು ಭೇದಿಸಿ ವೇಗವಾಗಿ ನೆಲವನ್ನು ಹೊಕ್ಕವು.
08040029a ಸೋಽತಿವಿದ್ಧೋ ಮಹಾರಾಜ ಪುತ್ರಸ್ತೇಽತಿವ್ಯರಾಜತ|
08040029c ವಸಂತೇ ಪುಷ್ಪಶಬಲಃ ಸಪುಷ್ಪ ಇವ ಕಿಂಶುಕಃ||
ಮಹಾರಾಜ! ಅತಿಯಾಗಿ ಗಾಯಗೊಂಡ ನಿನ್ನ ಮಗನು ವಸಂತದಲ್ಲಿ ಹೂಬಿಟ್ಟ ಮುತ್ತುಗದ ಮರದಂತೆಯೇ ತೋರಿದನು.
08040030a ಸ ಚಿನ್ನವರ್ಮಾ ನಾರಾಚೈಃ ಪ್ರಹಾರೈರ್ಜರ್ಜರಚ್ಚವಿಃ|
08040030c ಧೃಷ್ಟದ್ಯುಮ್ನಸ್ಯ ಭಲ್ಲೇನ ಕ್ರುದ್ಧಶ್ಚಿಚ್ಛೇದ ಕಾರ್ಮುಕಂ||
ನಾರಾಚಗಳ ಪ್ರಹಾರದಿಂದ ಕವಚವು ಛಿದ್ರವಾಗಲು ದುರ್ಯೋಧನನ ಶರೀರವು ಜರ್ಜರಿತವಾಯಿತು. ಆಗ ಅವನು ಕ್ರುದ್ಧನಾಗಿ ಭಲ್ಲದಿಂದ ಧೃಷ್ಟದ್ಯುಮ್ನನ ಕಾರ್ಮುಕವನ್ನು ತುಂಡರಿಸಿದನು.
08040031a ಅಥೈನಂ ಛಿನ್ನಧನ್ವಾನಂ ತ್ವರಮಾಣೋ ಮಹೀಪತಿಃ|
08040031c ಸಾಯಕೈರ್ದಶಭೀ ರಾಜನ್ ಭ್ರುವೋರ್ಮಧ್ಯೇ ಸಮಾರ್ದಯತ್||
ರಾಜನ್! ಕೂಡಲೇ ಆ ಮಹೀಪತಿಯು ತ್ವರೆಮಾಡಿ ಧನುಸ್ಸು ತುಂಡಾಗಿದ್ದ ಧೃಷ್ಟದ್ಯುಮ್ನನ ಹುಬ್ಬುಗಳ ಮಧ್ಯೆ ಹತ್ತು ಸಾಯಕಗಳನ್ನು ಪ್ರಹರಿಸಿದನು.
08040032a ತಸ್ಯ ತೇಽಶೋಭಯನ್ವಕ್ತ್ರಂ ಕರ್ಮಾರಪರಿಮಾರ್ಜಿತಾಃ|
08040032c ಪ್ರಫುಲ್ಲಂ ಚಂಪಕಂ ಯದ್ವದ್ಭ್ರಮರಾ ಮಧುಲಿಪ್ಸವಃ||
ಮಧುವನ್ನಪೇಕ್ಷಿಸುವ ದುಂಬಿಗಳು ಅರಳಿದ ತಾವರೆಯನ್ನು ಹೇಗೋ ಹಾಗೆ ಕಮ್ಮಾರನಿಂದ ಹದಗೊಳಿಸಿದ್ದ ಆ ಬಾಣಗಳು ಧೃಷ್ಟದ್ಯುಮ್ನನ ಮುಖವನ್ನು ಶೋಭೆಗೊಳಿಸಿದವು.
08040033a ತದಪಾಸ್ಯ ಧನುಶ್ಛಿನ್ನಂ ಧೃಷ್ಟದ್ಯುಮ್ನೋ ಮಹಾಮನಾಃ|
08040033c ಅನ್ಯದಾದತ್ತ ವೇಗೇನ ಧನುರ್ಭಲ್ಲಾಂಶ್ಚ ಷೋಡಶ||
ಆಗ ಮಹಾಮನಸ್ವಿ ಧೃಷ್ಟದ್ಯುಮ್ನನು ತುಂಡಾದ ಧನುಸ್ಸನ್ನು ಬಿಸುಟು ವೇಗದಿಂದ ಇನ್ನೊಂದು ಧನುಸ್ಸನ್ನೂ ಹದಿನಾರು ಭಲ್ಲಗಳನ್ನೂ ಎತ್ತಿಕೊಂಡನು.
08040034a ತತೋ ದುರ್ಯೋಧನಸ್ಯಾಶ್ವಾನ್ ಹತ್ವಾ ಸೂತಂ ಚ ಪಂಚಭಿಃ|
08040034c ಧನುಶ್ಚಿಚ್ಛೇದ ಭಲ್ಲೇನ ಜಾತರೂಪಪರಿಷ್ಕೃತಂ||
ಆಗ ಅವನು ಐದು ಭಲ್ಲಗಳಿಂದ ದುರ್ಯೋಧನನ ಕುದುರೆಗಳನ್ನೂ ಸಾರಥಿಯನ್ನು ಸಂಹರಿಸಿ ಆರನೆಯದರಿಂದ ಅವನ ಸುವರ್ಣಪರಿಷ್ಕೃತ ಧನುಸ್ಸನ್ನು ತುಂಡರಿಸಿದನು.
08040035a ರಥಂ ಸೋಪಸ್ಕರಂ ಚತ್ರಂ ಶಕ್ತಿಂ ಖಡ್ಗಂ ಗದಾಂ ಧ್ವಜಂ|
08040035c ಭಲ್ಲೈಶ್ಚಿಚ್ಚೇದ ನವಭಿಃ ಪುತ್ರಸ್ಯ ತವ ಪಾರ್ಷತಃ||
ಪಾರ್ಷತನು ಉಳಿದ ಒಂಭತ್ತು ಭಲ್ಲಗಳಿಂದ ಯುದ್ಧಸಾಮಗ್ರಿಗಳಿಂದ ಯುಕ್ತವಾಗಿದ್ದ ನಿನ್ನ ಮಗನ ರಥ, ಚತ್ರ, ಶಕ್ತಿ, ಖಡ್ಗ, ಗದೆ ಮತ್ತು ಧ್ವಜಗಳನ್ನು ತುಂಡರಿಸಿದನು.
08040036a ತಪನೀಯಾಂಗದಂ ಚಿತ್ರಂ ನಾಗಂ ಮಣಿಮಯಂ ಶುಭಂ|
08040036c ಧ್ವಜಂ ಕುರುಪತೇಶ್ಛಿನ್ನಂ ದದೃಶುಃ ಸರ್ವಪಾರ್ಥಿವಾಃ||
ಚಿನ್ನದ ಅಂಗದಗಳಿಂದ ಶೋಭಿಸುತ್ತಿದ್ದ ಆ ಮಣಿಮಯ, ನಾಗದ ಚಿಹ್ನೆಯುಳ್ಳ ಕುರುಪತಿಯ ಧ್ವಜವು ತುಂಡಾಗಿದ್ದುದನ್ನು ಸರ್ವ ಪಾರ್ಥಿವರೂ ನೋಡಿದರು.
08040037a ದುರ್ಯೋಧನಂ ತು ವಿರಥಂ ಛಿನ್ನಸರ್ವಾಯುಧಂ ರಣೇ|
08040037c ಭ್ರಾತರಃ ಪರ್ಯರಕ್ಷಂತ ಸೋದರ್ಯಾ ಭರತರ್ಷಭ||
ಭರತರ್ಷಭ! ರಣದಲ್ಲಿ ವಿರಥನಾಗಿದ್ದ, ಸರ್ವಾಯುಧಗಳನ್ನೂ ಕಳೆದುಕೊಂಡಿದ್ದ ಆಣ್ಣ ದುರ್ಯೋಧನನನ್ನು ಸಹೋದರರು ಪರಿರಕ್ಷಿಸುತ್ತಿದ್ದರು.
08040038a ತಮಾರೋಪ್ಯ ರಥೇ ರಾಜನ್ದಂಡಧಾರೋ ಜನಾಧಿಪಂ|
08040038c ಅಪೋವಾಹ ಚ ಸಂಭ್ರಾಂತೋ ಧೃಷ್ಟದ್ಯುಮ್ನಸ್ಯ ಪಶ್ಯತಃ||
ರಾಜನ್! ಧೃಷ್ಟದ್ಯುಮ್ನನು ನೋಡುತ್ತಿದ್ದಂತೆಯೇ ಸಂಭ್ರಾಂತನಾಗಿದ್ದ ಜನಾಧಿಪ ದುರ್ಯೋಧನನನ್ನು ದಂಡಧಾರನು ತನ್ನ ರಥದಲ್ಲಿ ಏರಿಸಿಕೊಂಡನು.
08040039a ಕರ್ಣಸ್ತು ಸಾತ್ಯಕಿಂ ಜಿತ್ವಾ ರಾಜಗೃದ್ಧೀ ಮಹಾಬಲಃ|
08040039c ದ್ರೋಣಹಂತಾರಮುಗ್ರೇಷುಂ ಸಸಾರಾಭಿಮುಖಂ ರಣೇ||
ರಾಜನ ಹಿತಾಕಾಂಕ್ಷೀ ಮಹಾಬಲ ಕರ್ಣನಾದರೋ ಸಾತ್ಯಕಿಯನ್ನು ಗೆದ್ದು ರಣದಲ್ಲಿ ಉಗ್ರ ದ್ರೋಣಹಂತಾರ ಧೃಷ್ಟದ್ಯುಮ್ನನನ್ನು ಎದುರಿಸಿ ಹೋದನು.
08040040a ತಂ ಪೃಷ್ಠತೋಽಭ್ಯಯಾತ್ತೂರ್ಣಂ ಶೈನೇಯೋ ವಿತುದಂ ಶರೈಃ|
08040040c ವಾರಣಂ ಜಘನೋಪಾಂತೇ ವಿಷಾಣಾಭ್ಯಾಮಿವ ದ್ವಿಪಃ||
ಒಂದು ಆನೆಯು ಇನ್ನೊಂದು ಆನೆಯ ಹಿಂಭಾಗವನ್ನು ದಂತಗಳಿಂದ ತಿವಿಯುವಂತೆ ಶೈನೇಯನು ವೇಗವಾಗಿ ಶರಗಳಿಂದ ಕರ್ಣನನ್ನು ಪೀಡಿಸುತ್ತಾ ಅವನ ಹಿಂದೆಯೇ ಹೋದನು.
08040041a ಸ ಭಾರತ ಮಹಾನಾಸೀದ್ಯೋಧಾನಾಂ ಸುಮಹಾತ್ಮನಾಂ|
08040041c ಕರ್ಣಪಾರ್ಷತಯೋರ್ಮಧ್ಯೇ ತ್ವದೀಯಾನಾಂ ಮಹಾರಣಃ||
ಭಾರತ! ಆಗ ಮಹಾರಣದಲ್ಲಿ ಕರ್ಣ-ಪಾರ್ಷತರ ಮಧ್ಯೆ ಮತ್ತು ನಿನ್ನಕಡೆಯ ಮಹಾತ್ಮ ಯೋಧರ ಮಹಾಯುದ್ಧವು ನಡೆಯಿತು.
08040042a ನ ಪಾಂಡವಾನಾಮಸ್ಮಾಕಂ ಯೋಧಃ ಕಶ್ಚಿತ್ಪರಾಙ್ಮುಖಃ|
08040042c ಪ್ರತ್ಯದೃಶ್ಯತ ಯತ್ಕರ್ಣಃ ಪಾಂಚಾಲಾಂಸ್ತ್ವರಿತೋ ಯಯೌ||
ಪಾಂಡವರ ಮತ್ತು ನಮ್ಮವರ ಯಾವ ಯೋಧನೂ ಪರಾಂಙ್ಮುಖನಾದುದು ತೋರಲಿಲ್ಲ. ಆಗ ಕರ್ಣನು ತ್ವರೆಮಾಡಿ ಪಾಂಚಾಲರನ್ನು ಆಕ್ರಮಣಿಸಿದನು.
08040043a ತಸ್ಮಿನ್ ಕ್ಷಣೇ ನರಶ್ರೇಷ್ಠ ಗಜವಾಜಿನರಕ್ಷಯಃ|
08040043c ಪ್ರಾದುರಾಸೀದುಭಯತೋ ರಾಜನ್ಮಧ್ಯಂಗತೇಽಹನಿ||
ನರಶ್ರೇಷ್ಠ! ರಾಜನ್! ಮಧ್ಯಾಹ್ನದ ಆ ಸಮಯದಲ್ಲಿ ಎರಡೂ ಪಕ್ಷಗಳಲ್ಲಿ ಆನೆ-ಕುದುರೆ-ಮನುಷ್ಯರ ವಿನಾಶವು ನಡೆಯಿತು.
08040044a ಪಾಂಚಾಲಾಸ್ತು ಮಹಾರಾಜ ತ್ವರಿತಾ ವಿಜಿಗೀಷವಃ|
08040044c ಸರ್ವತೋಽಭ್ಯದ್ರವನ್ಕರ್ಣಂ ಪತತ್ರಿಣ ಇವ ದ್ರುಮಂ||
ಮಹಾರಾಜ! ಜಯವನ್ನು ಬಯಸಿದ ಪಾಂಚಾಲರಾದರೋ ತ್ವರೆಮಾಡಿ ಪಕ್ಷಿಗಳು ವೃಕ್ಷವನ್ನು ಹೇಗೋ ಹಾಗೆ ಕರ್ಣನನ್ನು ಎಲ್ಲಕಡೆಗಳಿಂದ ಆಕ್ರಮಣಿಸಿದರು.
08040045a ತೇಷಾಮಾಧಿರಥಿಃ ಕ್ರುದ್ಧೋ ಯತಮಾನಾನ್ಮನಸ್ವಿನಃ|
08040045c ವಿಛಿನ್ವನ್ನೇವ ಬಾಣಾಗ್ರೈಃ ಸಮಾಸಾದಯದಗ್ರತಃ||
ಕ್ರುದ್ಧನಾದ ಆಧಿರಥಿಯು ಪ್ರಯತ್ನಪಡುತ್ತಿದ್ದ ಆ ಮನಸ್ವಿಗಳನ್ನು ಅಯ್ದಾಯ್ದುಕೊಂಡು ಬಾಣಾಗ್ರಗಳಿಂದ ಸಂಹರಿಸಲು ಉಪಕ್ರಮಿಸಿದನು.
08040046a ವ್ಯಾಘ್ರಕೇತುಂ ಸುಶರ್ಮಾಣಂ ಶಂಕುಂ ಚೋಗ್ರಂ ಧನಂಜಯಂ|
08040046c ಶುಕ್ಲಂ ಚ ರೋಚಮಾನಂ ಚ ಸಿಂಹಸೇನಂ ಚ ದುರ್ಜಯಂ||
08040047a ತೇ ವೀರಾ ರಥವೇಗೇನ ಪರಿವವ್ರುರ್ನರೋತ್ತಮಂ|
08040047c ಸೃಜಂತಂ ಸಾಯಕಾನ್ಕ್ರುದ್ಧಂ ಕರ್ಣಮಾಹವಶೋಭಿನಂ||
ವ್ಯಾಘ್ರಕೇತು, ಸುಶರ್ಮ, ಶಂಕು, ಉಗ್ರ, ಧನಂಜಯ, ಶುಕ್ಲ, ರೋಚಮಾನ, ಸಿಂಹಸೇನ ಮತ್ತು ದುರ್ಜಯ – ಈ ವೀರರು ರಥವೇಗದಿಂದ ಕ್ರುದ್ಧನಾಗಿ ಸಾಯಕಗಳನ್ನು ಪ್ರಯೋಗಿಸುತ್ತಿದ್ದ ಆಹವಶೋಭೀ ನರೋತ್ತಮ ಕರ್ಣನನ್ನು ಸುತ್ತುವರೆದರು.
08040048a ಯುಧ್ಯಮಾನಾಂಸ್ತು ತಾನ್ ಶೂರಾನ್ಮನುಜೇಂದ್ರಃ ಪ್ರತಾಪವಾನ್|
08040048c ಅಷ್ಟಾಭಿರಷ್ಟೌ ರಾಧೇಯೋ ನ್ಯಹನನ್ನಿಶಿತೈಃ ಶರೈಃ||
ಯುದ್ಧಮಾಡುತ್ತಿದ್ದ ಆ ಎಂಟು ಶೂರರನ್ನು ಮನುಜೇಂದ್ರ ಪ್ರತಾಪವಾನ್ ರಾಧೇಯನು ಎಂಟು ನಿಶಿತ ಶರಗಳಿಂದ ಸಂಹರಿಸಿದನು.
08040049a ಅಥಾಪರಾನ್ಮಹಾರಾಜ ಸೂತಪುತ್ರಃ ಪ್ರತಾಪವಾನ್|
08040049c ಜಘಾನ ಬಹುಸಾಹಸ್ರಾನ್ಯೋಧಾನ್ಯುದ್ಧವಿಶಾರದಃ||
ಮಹಾರಾಜ! ಪ್ರತಾಪವಾನ್ ಯುದ್ಧವಿಶಾರದ ಸೂತಪುತ್ರನು ಇನ್ನೂ ಅನೇಕ ಸಹಸ್ರಾರು ಯೋಧರನ್ನು ಸಂಹರಿಸಿದನು.
08040050a ವಿಷ್ಣುಂ ಚ ವಿಷ್ಣುಕರ್ಮಾಣಂ ದೇವಾಪಿಂ ಭದ್ರಮೇವ ಚ|
08040050c ದಂಡಂ ಚ ಸಮರೇ ರಾಜಂಶ್ಚಿತ್ರಂ ಚಿತ್ರಾಯುಧಂ ಹರಿಂ||
08040051a ಸಿಂಹಕೇತುಂ ರೋಚಮಾನಂ ಶಲಭಂ ಚ ಮಹಾರಥಂ|
08040051c ನಿಜಘಾನ ಸುಸಂಕ್ರುದ್ಧಶ್ಚೇದೀನಾಂ ಚ ಮಹಾರಥಾನ್||
ರಾಜನ್! ಸಂಕ್ರುದ್ಧನಾಗಿದ್ದ ಅವನು ಸಮರದಲ್ಲಿ ಚೇದಿದೇಶದ ವಿಷ್ಣು, ವಿಷ್ಣುಕರ್ಮ, ದೇವಾಪಿ, ಭದ್ರ, ದಂಡ, ಚಿತ್ರ, ಚಿತ್ರಾಯುಧ, ಹರಿ, ಸಿಂಹಕೇತು, ರೋಚಮಾನ, ಮತ್ತು ಮಹಾರಥ ಶಲಭರನ್ನೂ ಸಂಹರಿಸಿದನು.
08040052a ತೇಷಾಮಾದದತಃ ಪ್ರಾಣಾನಾಸೀದಾಧಿರಥೇರ್ವಪುಃ|
08040052c ಶೋಣಿತಾಭ್ಯುಕ್ಷಿತಾಂಗಸ್ಯ ರುದ್ರಸ್ಯೇವೋರ್ಜಿತಂ ಮಹತ್||
ಅವರ ಪ್ರಾಣಗಳನ್ನು ಹೀರಿಕೊಳ್ಳುತ್ತಿದ್ದ ಮತ್ತು ಅಂಗಾಂಗಗಳು ರಕ್ತಸಿಕ್ತವಾಗಿದ್ದ ಆ ರಾಧೇಯನ ಶರೀರವು ರುದ್ರನ ವಿಶಾಲ ಶರೀರದಂತೆ ಕಾಣುತ್ತಿತ್ತು.
08040053a ತತ್ರ ಭಾರತ ಕರ್ಣೇನ ಮಾತಂಗಾಸ್ತಾಡಿತಾಃ ಶರೈಃ|
08040053c ಸರ್ವತೋಽಭ್ಯದ್ರವನ್ಭೀತಾಃ ಕುರ್ವಂತೋ ಮಹದಾಕುಲಂ||
ಭಾರತ! ಅಲ್ಲಿ ಕರ್ಣನ ಶರಗಳಿಂದ ಪ್ರಹರಿಸಲ್ಪಟ್ಟ ಆನೆಗಳು ಭಯಗೊಂಡು ಎಲ್ಲಕಡೆ ಓಡಿಹೋಗುತ್ತಾ ಮಹಾ ವ್ಯಾಕುಲವನ್ನುಂಟುಮಾಡುತ್ತಿದ್ದವು.
08040054a ನಿಪೇತುರುರ್ವ್ಯಾಂ ಸಮರೇ ಕರ್ಣಸಾಯಕಪೀಡಿತಾಃ|
08040054c ಕುರ್ವಂತೋ ವಿವಿಧಾನ್ನಾದಾನ್ವಜ್ರನುನ್ನಾ ಇವಾಚಲಾಃ||
ಸಮರದಲ್ಲಿ ಕರ್ಣನ ಸಾಯಕಗಳಿಂದ ಪೀಡಿತ ಆನೆಗಳು ವಿವಿಧ ಕೂಗುಗಳನ್ನು ಕೂಗುತ್ತಾ ವಜ್ರಾಹತ ಪರ್ವತಗಳಂತೆ ಭೂಮಿಯ ಮೇಲೆ ಬೀಳುತ್ತಿದ್ದವು.
08040055a ಗಜವಾಜಿಮನುಷ್ಯೈಶ್ಚ ನಿಪತದ್ಭಿಃ ಸಮಂತತಃ|
08040055c ರಥೈಶ್ಚಾವಗತೈರ್ಮಾರ್ಗೇ ಪರ್ಯಸ್ತೀರ್ಯತ ಮೇದಿನೀ||
ಕರ್ಣನು ಹೋಗುತ್ತಿದ್ದ ಮಾರ್ಗಗಳಲ್ಲಿ ಎಲ್ಲಕಡೆಗಳಲ್ಲಿ ಆನೆ-ಕುದುರೆ-ಮನುಷ್ಯರು ಮತ್ತು ರಥಗಳು ಬಿದ್ದು ರಣಭೂಮಿಯನ್ನು ತುಂಬುತ್ತಿದ್ದವು.
08040056a ನೈವ ಭೀಷ್ಮೋ ನ ಚ ದ್ರೋಣೋ ನಾಪ್ಯನ್ಯೇ ಯುಧಿ ತಾವಕಾಃ|
08040056c ಚಕ್ರುಃ ಸ್ಮ ತಾದೃಶಂ ಕರ್ಮ ಯಾದೃಶಂ ವೈ ಕೃತಂ ರಣೇ||
ಕರ್ಣನು ರಣದಲ್ಲಿ ಮಾಡಿದಂಥ ಸಾಹಸಕರ್ಮವನ್ನು ನಿನ್ನಕಡೆಯ ಯಾರೂ – ಭೀಷ್ಮನಾಗಲೀ, ದ್ರೋಣನಾಗಲೀ ಅಥವಾ ಇನ್ಯಾರೇ ಆಗಲೀ – ಯುದ್ಧದಲ್ಲಿ ಮಾಡಿದುದನ್ನು ನಾನು ನೋಡಿರಲಿಲ್ಲ.
08040057a ಸೂತಪುತ್ರೇಣ ನಾಗೇಷು ರಥೇಷು ಚ ಹಯೇಷು ಚ|
08040057c ನರೇಷು ಚ ನರವ್ಯಾಘ್ರ ಕೃತಂ ಸ್ಮ ಕದನಂ ಮಹತ್||
ನರವ್ಯಾಘ್ರ ಸೂತಪುತ್ರನು ಆನೆಗಳು, ರಥಗಳು, ಕುದುರೆಗಳು ಮತ್ತು ಮನುಷ್ಯರೊಂದಿಗೆ ಮಹಾಕದನವಾಡಿದನು.
08040058a ಮೃಗಮಧ್ಯೇ ಯಥಾ ಸಿಂಹೋ ದೃಶ್ಯತೇ ನಿರ್ಭಯಶ್ಚರನ್|
08040058c ಪಾಂಚಾಲಾನಾಂ ತಥಾ ಮಧ್ಯೇ ಕರ್ಣೋಽಚರದಭೀತವತ್||
ಮೃಗಗಳ ಮಧ್ಯದಲ್ಲಿ ಸಿಂಹವು ನಿರ್ಭಯವಾಗಿ ಸಂಚರಿಸುವಂತೆ ಪಾಂಚಾಲರ ಮಧ್ಯದಲ್ಲಿ ಕರ್ಣನು ಭೀತಿಯಿಲ್ಲದೇ ಸಂಚರಿಸುತ್ತಿದ್ದನು.
08040059a ಯಥಾ ಮೃಗಗಣಾಂಸ್ತ್ರಸ್ತಾನ್ಸಿಂಹೋ ದ್ರಾವಯತೇ ದಿಶಃ|
08040059c ಪಾಂಚಾಲಾನಾಂ ರಥವ್ರಾತಾನ್ಕರ್ಣೋ ದ್ರಾವಯತೇ ತಥಾ||
ಭಯಗೊಂಡ ಮೃಗಗಣಗಳನ್ನು ಸಿಂಹವು ಹೇಗೆ ದಿಕ್ಕಾಪಾಲಾಗಿ ಓಡಿಸುವುದೋ ಹಾಗೆ ಕರ್ಣನು ಪಾಂಚಾಲರ ರಥಸಮೂಹಗಳನ್ನು ಓಡಿಸುತ್ತಿದ್ದನು.
08040060a ಸಿಂಹಾಸ್ಯಂ ಚ ಯಥಾ ಪ್ರಾಪ್ಯ ನ ಜೀವಂತಿ ಮೃಗಾಃ ಕ್ವ ಚಿತ್|
08040060c ತಥಾ ಕರ್ಣಮನುಪ್ರಾಪ್ಯ ನ ಜೀವಂತಿ ಮಹಾರಥಾಃ||
ಸಿಂಹನಿಗೆ ಸಿಲುಕಿದ ಮೃಗಗಳು ಹೇಗೆ ಜೀವಂತವಾಗಿರುವುದಿಲ್ಲವೋ ಹಾಗೆ ಕರ್ಣನಿಗೆ ಸಿಲುಕಿದ ಮಹಾರಥರು ಜೀವದಿಂದಿರುತ್ತಿರಲಿಲ್ಲ.
08040061a ವೈಶ್ವಾನರಂ ಯಥಾ ದೀಪ್ತಂ ದಹ್ಯಂತೇ ಪ್ರಾಪ್ಯ ವೈ ಜನಾಃ|
08040061c ಕರ್ಣಾಗ್ನಿನಾ ರಣೇ ತದ್ವದ್ದಗ್ಧಾ ಭಾರತ ಸೃಂಜಯಾಃ||
ಭಾರತ! ಪ್ರಜ್ವಲಿಸುತ್ತಿರುವ ವೈಶ್ವಾನರನಿಗೆ ಸಿಲುಕಿದ ಜನರು ಹೇಗೆ ಸುಟ್ಟುಹೋಗುವರೋ ಹಾಗೆ ರಣದಲ್ಲಿ ಕರ್ಣಾಗ್ನಿಯಿಂದ ಸೃಂಜಯರು ದಹಿಸಿಹೋಗುತ್ತಿದ್ದರು.
08040062a ಕರ್ಣೇನ ಚೇದಿಷ್ವೇಕೇನ ಪಾಂಚಾಲೇಷು ಚ ಭಾರತ|
08040062c ವಿಶ್ರಾವ್ಯ ನಾಮ ನಿಹತಾ ಬಹವಃ ಶೂರಸಮ್ಮತಾಃ||
ಭಾರತ! ಕರ್ಣನು ತನ್ನ ಹೆಸರನ್ನು ಹೇಳಿಕೊಂಡು ಅನೇಕ ಶೂರಸಮ್ಮತ ಚೇದಿ-ಕೇಕಯ-ಪಾಂಚಾಲರನ್ನು ಸಂಹರಿಸಿದನು.
08040063a ಮಮ ಚಾಸೀನ್ಮನುಷ್ಯೇಂದ್ರ ದೃಷ್ಟ್ವಾ ಕರ್ಣಸ್ಯ ವಿಕ್ರಮಂ|
08040063c ನೈಕೋಽಪ್ಯಾಧಿರಥೇರ್ಜೀವನ್ಪಾಂಚಾಲ್ಯೋ ಮೋಕ್ಷ್ಯತೇ ಯುಧಿ||
ಮನುಷ್ಯೇಂದ್ರ! ಕರ್ಣನ ವಿಕ್ರಮವನ್ನು ನೋಡಿ ಒಬ್ಬ ಪಾಂಚಲ್ಯನೂ ಯುದ್ಧದಲ್ಲಿ ಆಧಿರಥಿಯಿಂದ ಜೀವಸಹಿತ ಉಳಿಯಲಾರನು ಎಂದು ಭಾವಿಸಿದೆನು.
08040064a ಪಾಂಚಾಲಾನ್ವಿಧಮನ್ಸಂಖ್ಯೇ ಸೂತಪುತ್ರಃ ಪ್ರತಾಪವಾನ್|
08040064c ಅಭ್ಯಧಾವತ ಸಂಕ್ರುದ್ಧೋ ಧರ್ಮಪುತ್ರಂ ಯುಧಿಷ್ಠಿರಂ||
ಯುದ್ಧದಲ್ಲಿ ಪಾಂಚಾಲರನ್ನು ಸದೆಬಡಿದು ಪ್ರತಾಪವಾನ್ ಸೂತಪುತ್ರನು ಸಂಕ್ರುದ್ಧನಾಗಿ ಧರ್ಮಪುತ್ರ ಯುಧಿಷ್ಠಿರನನ್ನು ಆಕ್ರಮಣಿಸಿದನು.
08040065a ಧೃಷ್ಟದ್ಯುಮ್ನಶ್ಚ ರಾಜಾನಂ ದ್ರೌಪದೇಯಾಶ್ಚ ಮಾರಿಷ|
08040065c ಪರಿವವ್ರುರಮಿತ್ರಘ್ನಂ ಶತಶಶ್ಚಾಪರೇ ಜನಾಃ||
ಮಾರಿಷ! ಆಗ ಧೃಷ್ಟದ್ಯುಮ್ನ, ದ್ರೌಪದೇಯರು ಮತ್ತು ನೂರಾರು ಇತರರು ಅಮಿತ್ರಘ್ನ ರಾಜ ಯುಧಿಷ್ಠಿರನನ್ನು ಸುತ್ತುವರೆದರು.
08040066a ಶಿಖಂಡೀ ಸಹದೇವಶ್ಚ ನಕುಲೋ ನಾಕುಲಿಸ್ತಥಾ|
08040066c ಜನಮೇಜಯಃ ಶಿನೇರ್ನಪ್ತಾ ಬಹವಶ್ಚ ಪ್ರಭದ್ರಕಾಃ||
08040067a ಏತೇ ಪುರೋಗಮಾ ಭೂತ್ವಾ ಧೃಷ್ಟದ್ಯುಮ್ನಸ್ಯ ಸಂಯುಗೇ|
08040067c ಕರ್ಣಮಸ್ಯಂತಮಿಷ್ವಸ್ತ್ರೈರ್ವಿಚೇರುರಮಿತೌಜಸಃ||
ಶಿಖಂಡೀ, ಸಹದೇವ, ನಕುಲ, ಶತಾನೀಕ, ಜನಮೇಜಯ, ಸಾತ್ಯಕಿ ಮತ್ತು ಅನೇಕ ಪ್ರಭದ್ರಕರು ಧೃಷ್ಟದ್ಯುಮ್ನನನ್ನು ಮುಂದಿರಿಸಿಕೊಂಡು ಯುದ್ಧದಲ್ಲಿ ಅಮಿತೌಜಸ ಕರ್ಣನನ್ನು ಅಸ್ತ್ರ-ಶಸ್ತ್ರಗಳಿಂದ ಪ್ರಹರಿಸುತ್ತಾ ಸಂಚರಿಸುತ್ತಿದ್ದರು.
08040068a ತಾಂಸ್ತತ್ರಾಧಿರಥಿಃ ಸಂಖ್ಯೇ ಚೇದಿಪಾಂಚಾಲಪಾಂಡವಾನ್|
08040068c ಏಕೋ ಬಹೂನಭ್ಯಪತದ್ಗರುತ್ಮನ್ಪನ್ನಗಾನಿವ||
ಗರುಡನು ಸರ್ಪಗಳ ಮೇಲೆ ಬೀಳುವಂತೆ ಯುದ್ಧದಲ್ಲಿ ಆಧಿರಥಿ ಕರ್ಣನು ಒಬ್ಬನೇ ಅನೇಕ ಚೇದಿ-ಪಾಂಚಾಲ-ಪಾಂಡವರ ಮೇಲೆ ಎರಗಿದನು.
08040069a ಭೀಮಸೇನಸ್ತು ಸಂಕ್ರುದ್ಧಃ ಕುರೂನ್ಮದ್ರಾನ್ಸಕೇಕಯಾನ್|
08040069c ಏಕಃ ಸಂಖ್ಯೇ ಮಹೇಷ್ವಾಸೋ ಯೋಧಯನ್ಬಹ್ವಶೋಭತ||
ಸಂಕ್ರುದ್ಧನಾಗಿದ್ದ ಮಹೇಷ್ವಾಸ ಭೀಮಸೇನನಾದರೋ ಒಂಟಿಯಾಗಿ ಕೇಕಯರೊಂದಿಗೆ ಯುದ್ಧದಲ್ಲಿ ಕುರು-ಮದ್ರರನ್ನು ಎದುರಿಸುತ್ತಾ ಬಹಳವಾಗಿ ಶೋಭಿಸಿದನು.
08040070a ತತ್ರ ಮರ್ಮಸು ಭೀಮೇನ ನಾರಾಚೈಸ್ತಾಡಿತಾ ಗಜಾಃ|
08040070c ಪ್ರಪತಂತೋ ಹತಾರೋಹಾಃ ಕಂಪಯಂತಿ ಸ್ಮ ಮೇದಿನೀಂ||
ಭೀಮನ ನಾರಾಚಗಳಿಂದ ಮರ್ಮಗಳು ಭೇದಿಸಲ್ಪಟ್ಟ ಆನೆಗಳು ಹತರಾದ ಗಜಾರೋಹಿಗಳೊಡನೆ ಮೇದಿನಿಯನ್ನೇ ನಡುಗಿಸುತ್ತಾ ಕೆಳಗೆ ಬೀಳುತ್ತಿದ್ದವು.
08040071a ವಾಜಿನಶ್ಚ ಹತಾರೋಹಾಃ ಪತ್ತಯಶ್ಚ ಗತಾಸವಃ|
08040071c ಶೇರತೇ ಯುಧಿ ನಿರ್ಭಿನ್ನಾ ವಮಂತೋ ರುಧಿರಂ ಬಹು||
ಹತಗೊಂಡ ಕುದುರೆಗಳೂ, ಕುದುರೆ ಸವಾರರೂ, ಜೀವತೊರೆದ ಪದಾತಿಗಳು ಯುದ್ಧದಲ್ಲಿ ನಿರ್ಭಿನ್ನರಾಗಿ ಬಹಳ ರಕ್ತವನ್ನು ಕಾರುತ್ತಾ ಮಲಗಿದ್ದರು.
08040072a ಸಹಸ್ರಶಶ್ಚ ರಥಿನಃ ಪತಿತಾಃ ಪತಿತಾಯುಧಾಃ|
08040072c ಅಕ್ಷತಾಃ ಸಮದೃಶ್ಯಂತ ಭೀಮಾದ್ಭೀತಾ ಗತಾಸವಃ||
ಸಹಸ್ರಾರು ರಥಿಗಳು ಬಿದ್ದಿದ್ದರು. ಅವರ ಆಯುಧಗಳೂ ಬಿದ್ದಿದ್ದವು. ಕ್ಷತ-ವಿಕ್ಷತರಾದ ಅವರು ಭೀಮನ ಭಯದಿಂದಲೇ ಪ್ರಾಣಗಳನ್ನು ತೊರೆದಂತೆ ತೋರುತ್ತಿದ್ದರು.
08040073a ರಥಿಭಿರ್ವಾಜಿಭಿಃ ಸೂತೈಃ ಪತ್ತಿಭಿಶ್ಚ ತಥಾ ಗಜೈಃ|
08040073c ಭೀಮಸೇನಶರಚ್ಚಿನ್ನೈರಾಸ್ತೀರ್ಣಾ ವಸುಧಾಭವತ್||
ಭೀಮಸೇನನ ಶರಗಳಿಂದ ನಾಶಗೊಂಡ ರಥಿಗಳು, ಕುದುರೆಗಳು, ಸಾರಥಿಗಳು, ಪದಾತಿಗಳು ಮತ್ತು ಆನೆಗಳಿಂದ ಯುದ್ಧಭೂಮಿಯು ತುಂಬಿಹೋಗಿತ್ತು.
08040074a ತತ್ಸ್ತಂಭಿತಮಿವಾತಿಷ್ಠದ್ಭೀಮಸೇನಬಲಾರ್ದಿತಂ|
08040074c ದುರ್ಯೋಧನಬಲಂ ರಾಜನ್ನಿರುತ್ಸಾಹಂ ಕೃತವ್ರಣಂ||
ರಾಜನ್! ಭೀಮಸೇನನ ಬಲದಿಂದ ಪೀಡಿತಗೊಂಡು ಗಾಯಗೊಂಡಿದ್ದ ದುರ್ಯೋಧನನ ಸೇನೆಯು ನಿರುತ್ಸಾಹಗೊಂಡು ಸ್ತಬ್ಧವಾಗಿ ನಿಂತುಬಿಟ್ಟಿತ್ತು.
08040075a ನಿಶ್ಚೇಷ್ಟಂ ತುಮುಲೇ ದೀನಂ ಬಭೌ ತಸ್ಮಿನ್ಮಹಾರಣೇ|
08040075c ಪ್ರಸನ್ನಸಲಿಲಃ ಕಾಲೇ ಯಥಾ ಸ್ಯಾತ್ಸಾಗರೋ ನೃಪ||
ನೃಪ! ಭರತವಿಲ್ಲದ ಸಮಯದಲ್ಲಿ ಸಮುದ್ರವು ಪ್ರಶಾಂತವಾಗಿರುವಂತೆ ಆ ತುಮುಲ ಮಹಾರಣವು ದೀನವೂ ನಿಶ್ಚೇಷ್ಟವೂ ಆಗಿದ್ದಿತು.
08040076a ಮನ್ಯುವೀರ್ಯಬಲೋಪೇತಂ ಬಲಾತ್ಪರ್ಯವರೋಪಿತಂ|
08040076c ಅಭವತ್ತವ ಪುತ್ರಸ್ಯ ತತ್ಸೈನ್ಯಮಿಷುಭಿಸ್ತದಾ|
08040076e ರುಧಿರೌಘಪರಿಕ್ಲಿನ್ನಂ ರುಧಿರಾರ್ದ್ರಂ ಬಭೂವ ಹ||
ಆ ಸಮಯದಲ್ಲಿ ಕೂಡ ನಿನ್ನ ಮಗನ ಸೇನೆಯು ಕೋಪ, ವೀರ್ಯ, ಬಲಗಳಿಂದ ಕೂಡಿತ್ತು. ಆದರೆ ಅದರ ದರ್ಪವು ಉಡುಗಿಹೋಗಿತ್ತು. ರಕ್ತವು ಸೋರಿ ಅದೇ ರಕ್ತದಿಂದಲೇ ಸೇನೆಯು ತೋಯ್ದುಹೋಯಿತು.
08040077a ಸೂತಪುತ್ರೋ ರಣೇ ಕ್ರುದ್ಧಃ ಪಾಂಡವಾನಾಮನೀಕಿನೀಂ|
08040077c ಭೀಮಸೇನಃ ಕುರೂಂಶ್ಚಾಪಿ ದ್ರಾವಯನ್ಬಹ್ವಶೋಭತ||
ರಣದಲ್ಲಿ ಕ್ರುದ್ಧನಾದ ಸೂತಪುತ್ರನು ಪಾಂಡವ ಸೇನೆಯನ್ನು ಮತ್ತು ಭೀಮಸೇನನು ಕುರುಸೇನೆಯನ್ನು ಪಲಾಯನಗೊಳಿಸುತ್ತಾ ಬಹಳವಾಗಿ ಶೋಭಿಸಿದರು.
08040078a ವರ್ತಮಾನೇ ತಥಾ ರೌದ್ರೇ ಸಂಗ್ರಾಮೇಽದ್ಭುತದರ್ಶನೇ|
08040078c ನಿಹತ್ಯ ಪೃತನಾಮಧ್ಯೇ ಸಂಶಪ್ತಕಗಣಾನ್ ಬಹೂನ್||
08040079a ಅರ್ಜುನೋ ಜಯತಾಂ ಶ್ರೇಷ್ಠೋ ವಾಸುದೇವಮಥಾಬ್ರವೀತ್|
ಹಾಗೆ ನೋಡಲು ಅದ್ಭುತವಾಗಿದ್ದ ಆ ರೌದ್ರ ಸಂಗ್ರಾಮವು ನಡೆಯುತ್ತಿರಲು ಸೇನಾಮಧ್ಯದಲ್ಲಿ ಅನೇಕ ಸಂಶಪ್ತಕಗಣಗಳನ್ನು ಸಂಹರಿಸಿ ಜಯಿಗಳಲ್ಲಿ ಶ್ರೇಷ್ಠ ಅರ್ಜುನನು ವಾಸುದೇವನಿಗೆ ಹೇಳಿದನು:
08040079c ಪ್ರಭಗ್ನಂ ಬಲಮೇತದ್ಧಿ ಯೋತ್ಸ್ಯಮಾನಂ ಜನಾರ್ದನ||
08040080a ಏತೇ ಧಾವಂತಿ ಸಗಣಾಃ ಸಂಶಪ್ತಕಮಹಾರಥಾಃ|
08040080c ಅಪಾರಯಂತೋ ಮದ್ಬಾಣಾನ್ಸಿಂಹಶಬ್ದಾನ್ಮೃಗಾ ಇವ||
“ಜನಾರ್ದನ! ಯುದ್ಧಮಾಡುತ್ತಿರುವವರ ಸೇನೆಯು ಭಗ್ನವಾಯಿತೆಂದೇ ತಿಳಿ! ಇಗೋ! ಸಿಂಹಗರ್ಜನೆಯನ್ನು ಜಿಂಕೆಗಳು ಹೇಗೋ ಹಾಗೆ ನನ್ನ ಬಾಣಗಳನ್ನು ಸಹಿಸಲಾರದೇ ಸಂಶಪ್ತಕ ಮಹಾರಥರು ಸೇನೆಗಳೊಡನೆ ಓಡಿ ಹೋಗುತ್ತಿದ್ದಾರೆ!
08040081a ದೀರ್ಯತೇ ಚ ಮಹತ್ಸೈನ್ಯಂ ಸೃಂಜಯಾನಾಂ ಮಹಾರಣೇ|
08040081c ಹಸ್ತಿಕಕ್ಷ್ಯೋ ಹ್ಯಸೌ ಕೃಷ್ಣ ಕೇತುಃ ಕರ್ಣಸ್ಯ ಧೀಮತಃ|
08040081e ದೃಶ್ಯತೇ ರಾಜಸೈನ್ಯಸ್ಯ ಮಧ್ಯೇ ವಿಚರತೋ ಮುಹುಃ||
ಕೃಷ್ಣ! ಆನೆಯನ್ನು ಕಟ್ಟುವ ಹಗ್ಗದ ಚಿಹ್ನೆಯುಳ್ಳ ಧೀಮತ ಕರ್ಣನು ಮಹಾರಣದಲ್ಲಿ ಸೃಂಜಯರ ಮಹಾಸೇನೆಯನ್ನು ಸೀಳುತ್ತಾ ರಾಜಸೈನ್ಯದ ಮಧ್ಯೆ ಅತ್ತಿತ್ತ ಸಂಚರಿಸುತ್ತಿರುವುದು ಕಾಣುತ್ತಿದೆ.
08040082a ನ ಚ ಕರ್ಣಂ ರಣೇ ಶಕ್ತಾ ಜೇತುಮನ್ಯೇ ಮಹಾರಥಾಃ|
08040082c ಜಾನೀತೇ ಹಿ ಭವಾನ್ಕರ್ಣಂ ವೀರ್ಯವಂತಂ ಪರಾಕ್ರಮೇ||
ರಣದಲ್ಲಿ ಕರ್ಣನನ್ನು ಗೆಲ್ಲಲು ಅನ್ಯ ಮಹಾರಥರು ಶಕ್ತರಿಲ್ಲ. ವೀರ್ಯವಂತ ಕರ್ಣನ ಪರಾಕ್ರಮವನ್ನು ನೀನು ತಿಳಿದುಕೊಂಡಿರುವೆ!
08040083a ತತ್ರ ಯಾಹಿ ಯತಃ ಕರ್ಣೋ ದ್ರಾವಯತ್ಯೇಷ ನೋ ಬಲಂ|
08040084a ವರ್ಜಯಿತ್ವಾ ರಣೇ ಯಾಹಿ ಸೂತಪುತ್ರಂ ಮಹಾರಥಂ|
08040084c ಶ್ರಮೋ ಮಾ ಬಾಧತೇ ಕೃಷ್ಣ ಯಥಾ ವಾ ತವ ರೋಚತೇ||
ಕೃಷ್ಣ! ನಮ್ಮ ಸೇನೆಗಳನ್ನು ಎಲ್ಲಿ ಕರ್ಣನು ಓಡಿಸುತ್ತಿರುವನೋ ಅಲ್ಲಿಗೆ ಕೊಂಡೊಯ್ಯಿ! ನಿನಗೆ ಶ್ರಮವಾಗದಿದ್ದರೆ ಅಥವಾ ನಿನಗೆ ಇಷ್ಟವಾದರೆ ಈ ರಣರಂಗವನ್ನು ಬಿಟ್ಟು ಮಹಾರಥ ಸೂತಪುತ್ರನಿರುವಲ್ಲಿಗೆ ಕರೆದೊಯ್ಯಿ!”
08040085a ಏತಚ್ಛೃತ್ವಾ ಮಹಾರಾಜ ಗೋವಿಂದಃ ಪ್ರಹಸನ್ನಿವ|
08040085c ಅಬ್ರವೀದರ್ಜುನಂ ತೂರ್ಣಂ ಕೌರವಾಂ ಜಹಿ ಪಾಂಡವ||
ಮಹಾರಾಜ! ಇದನ್ನು ಕೇಳಿ ಗೋವಿಂದನು ನಸುನಗುತ್ತಾ “ಪಾಂಡವ! ಬೇಗನೇ ಕೌರವರನ್ನು ಸಂಹರಿಸು!” ಎಂದು ಅರ್ಜುನನಿಗೆ ಹೇಳಿದನು.
08040086a ತತಸ್ತವ ಮಹತ್ಸೈನ್ಯಂ ಗೋವಿಂದಪ್ರೇರಿತಾ ಹಯಾಃ|
08040086c ಹಂಸವರ್ಣಾಃ ಪ್ರವಿವಿಶುರ್ವಹಂತಃ ಕೃಷ್ಣಪಾಂಡವೌ||
ಅನಂತರ ಗೋವಿಂದಪ್ರೇರಿತ ಹಂಸವರ್ಣದ ಕುದುರೆಗಳು ಕೃಷ್ಣ-ಪಾಂಡವರನ್ನು ಹೊತ್ತು ನಿನ್ನ ಮಹಾ ಸೇನೆಯನ್ನು ಪ್ರವೇಶಿಸಿದವು.
08040087a ಕೇಶವಪ್ರಹಿತೈರಶ್ವೈಃ ಶ್ವೇತೈಃ ಕಾಂಚನಭೂಷಣೈಃ|
08040087c ಪ್ರವಿಶದ್ಭಿಸ್ತವ ಬಲಂ ಚತುರ್ದಿಶಮಭಿದ್ಯತ||
ಕೇಶವನಿಂದ ನಡೆಸಲ್ಪಟ್ಟ ಕಾಂಚನಭೂಷಿತ ಶ್ವೇತಹಯಗಳು ಪ್ರವೇಶಿಸುತ್ತಿದ್ದಂತೆಯೇ ನಿನ್ನ ಸೇನೆಯು ನಾಲ್ಕು ದಿಕ್ಕುಗಳಿಗೂ ಚದುರಿತು.
08040088a ತೌ ವಿದಾರ್ಯ ಮಹಾಸೇನಾಂ ಪ್ರವಿಷ್ಟೌ ಕೇಶವಾರ್ಜುನೌ|
08040088c ಕ್ರುದ್ಧೌ ಸಂರಂಭರಕ್ತಾಕ್ಷೌ ವ್ಯಭ್ರಾಜೇತಾಂ ಮಹಾದ್ಯುತೀ||
ಕ್ರುದ್ಧರಾಗಿದ್ದ, ಕೋಪದಿಂದ ಕಣ್ಣುಗಳು ಕೆಂಪಾಗಿದ್ದ ಮಹಾದ್ಯುತೀ ಕೇಶವಾರ್ಜುನರು ಆ ಮಹಾಸೇನೆಯನ್ನು ಸೀಳಿ ಪ್ರವೇಶಿಸಿ ಬಹಳವಾಗಿ ರಾರಾಜಿಸಿದರು.
08040089a ಯುದ್ಧಶೌಂಡೌ ಸಮಾಹೂತಾವರಿಭಿಸ್ತೌ ರಣಾಧ್ವರಂ|
08040089c ಯಜ್ವಭಿರ್ವಿಧಿನಾಹೂತೌ ಮಖೇ ದೇವಾವಿವಾಶ್ವಿನೌ||
ಋತ್ವಿಜರಿಂದ ವಿಧಿವತ್ತಾಗಿ ಅಹ್ವಾನಿಸಲ್ಪಟ್ಟ ಅಶ್ವಿನೀ ದೇವತೆಗಳಂತೆ ಯುದ್ಧಕ್ಕೆ ಆಹ್ವಾನಿಸಲ್ಪಟ್ಟ ಆ ಇಬ್ಬರು ಯುದ್ಧಶೌಂಡರೂ ರಣಾಧ್ವರವನ್ನು ಪ್ರವೇಶಿಸಿದರು.
08040090a ಕ್ರುದ್ಧೌ ತೌ ತು ನರವ್ಯಾಘ್ರೌ ವೇಗವಂತೌ ಬಭೂವತುಃ|
08040090c ತಲಶಬ್ಧೇನ ರುಷಿತೌ ಯಥಾ ನಾಗೌ ಮಹಾಹವೇ||
ಮಹಾಹವದಲ್ಲಿ ಚಪ್ಪಾಳೆ ಶಬ್ಧಗಳನ್ನು ಕೇಳಿ ರೋಷಗೊಂಡ ಮದ್ದಾನೆಗಳಂತೆ ಆ ಇಬ್ಬರು ನರವ್ಯಾಘ್ರರೂ ಕ್ರುದ್ಧರಾಗಿ ವೇಗವಾಗಿ ಕುರುಸೇನೆಯನ್ನು ಪ್ರವೇಶಿಸಿದರು.
08040091a ವಿಗಾಹನ್ಸ ರಥಾನೀಕಮಶ್ವಸಂಘಾಂಶ್ಚ ಫಲ್ಗುನಃ|
08040091c ವ್ಯಚರತ್ಪೃತನಾಮಧ್ಯೇ ಪಾಶಹಸ್ತ ಇವಾಂತಕಃ||
ಮಹಾರಾಜ! ಫಲ್ಗುನನು ಆ ರಥಸೇನೆ-ಅಶ್ವಸೇನೆಗಳನ್ನು ಭೇದಿಸಿ ಒಳನುಗ್ಗಿ ಪಾಶಹಸ್ತ ಅಂತಕನಂತೆ ಸೇನಾಮಧ್ಯದಲ್ಲಿ ಸಂಚರಿಸುತ್ತಿದ್ದನು.
08040092a ತಂ ದೃಷ್ಟ್ವಾ ಯುಧಿ ವಿಕ್ರಾಂತಂ ಸೇನಾಯಾಂ ತವ ಭಾರತ|
08040092c ಸಂಶಪ್ತಕಗಣಾನ್ಭೂಯಃ ಪುತ್ರಸ್ತೇ ಸಮಚೋದಯತ್||
ಭಾರತ! ನಿನ್ನ ಸೇನೆಗಳ ಮಧ್ಯದಲ್ಲಿ ಅವನ ಯುದ್ಧವಿಕ್ರಮವನ್ನು ಕಂಡು ನಿನ್ನ ಮಗನು ಸಂಶಪ್ತಕಗಣಗಳನ್ನು ಪುನಃ ಪ್ರಚೋದಿಸಿದನು.
08040093a ತತೋ ರಥಸಹಸ್ರೇಣ ದ್ವಿರದಾನಾಂ ತ್ರಿಭಿಃ ಶತೈಃ|
08040093c ಚತುರ್ದಶಸಹಸ್ರೈಶ್ಚ ತುರಗಾಣಾಂ ಮಹಾಹವೇ||
08040094a ದ್ವಾಭ್ಯಾಂ ಶತಸಹಸ್ರಾಭ್ಯಾಂ ಪದಾತೀನಾಂ ಚ ಧನ್ವಿನಾಂ|
08040094c ಶೂರಾಣಾಂ ನಾಮಲಬ್ಧಾನಾಂ ವಿದಿತಾನಾಂ ಸಮಂತತಃ|
08040094e ಅಭ್ಯವರ್ತಂತ ತೌ ವೀರೌ ಚಾದಯಂತೋ ಮಹಾರಥಾಃ||
ಆಗ ಮಹಾಹವದಲ್ಲಿ ಆ ಮಹಾರಥ ಸಂಶಪ್ತಕರು ಸಾವಿರ ರಥಗಳು, ಮೂರು ನೂರು ಆನೆಗಳು, ಹದಿನಾಲ್ಕು ಸಾವಿರ ಕುದುರೆಗಳು ಮತ್ತು ಎರಡು ಲಕ್ಷ ಶೂರ ಧನ್ವಿ ಯುದ್ಧನಿಪುಣ ಪದಾತಿಗಳೊಂದಿಗೆ ಗರ್ಜಿಸುತ್ತಾ ಆ ಇಬ್ಬರು ವೀರರನ್ನು ಮುತ್ತಿಗೆ ಹಾಕಿ ಆಕ್ರಮಣಿಸಿದರು.
08040095a ಸ ಛಾದ್ಯಮಾನಃ ಸಮರೇ ಶರೈಃ ಪರಬಲಾರ್ದನಃ|
08040095c ದರ್ಶಯನ್ರೌದ್ರಮಾತ್ಮಾನಂ ಪಾಶಹಸ್ತ ಇವಾಂತಕಃ|
08040095e ನಿಘ್ನನ್ಸಂಶಪ್ತಕಾನ್ಪಾರ್ಥಃ ಪ್ರೇಕ್ಷಣೀಯತರೋಽಭವತ್||
ಹಾಗೆ ಸಮರದಲ್ಲಿ ಶರಗಳಿಂದ ಆಚ್ಛಾದಿತನಾದ ಪರಬಲಾರ್ದನ ಪಾರ್ಥನು ಪಾಶಹಸ್ತ ಅಂತಕನಂತೆ ರೌದ್ರರೂಪವನ್ನು ತಾಳಿ ಸಂಶಪ್ತಕರನ್ನು ಸಂಹರಿಸುತ್ತಾ ಪ್ರೇಕ್ಷಣೀಯನಾದನು.
08040096a ತತೋ ವಿದ್ಯುತ್ಪ್ರಭೈರ್ಬಾಣೈಃ ಕಾರ್ತಸ್ವರವಿಭೂಷಿತೈಃ|
08040096c ನಿರಂತರಮಿವಾಕಾಶಮಾಸೀನ್ನುನ್ನೈಃ ಕಿರೀಟಿನಾ||
ಆಗ ಕಿರೀಟಿಯಿಂದ ನಿರಂತರವಾಗಿ ಪ್ರಯೋಗಿಸಲ್ಪಟ್ಟ ಸುವರ್ಣವಿಭೂಷಿತ ವಿದ್ಯುತ್ ಪ್ರಭೆಯ ಬಾಣಗಳಿಂದ ಸ್ವಲ್ಪವೂ ಸ್ಥಳವಿಲ್ಲದಂತೆ ಆಕಾಶವು ತುಂಬಿಹೋಯಿತು.
08040097a ಕಿರೀಟಿಭುಜನಿರ್ಮುಕ್ತೈಃ ಸಂಪತದ್ಭಿರ್ಮಹಾಶರೈಃ|
08040097c ಸಮಾಚ್ಛನ್ನಂ ಬಭೌ ಸರ್ವಂ ಕಾದ್ರವೇಯೈರಿವ ಪ್ರಭೋ||
ಪ್ರಭೋ! ಕಿರೀಟಿಯ ಭುಜಗಳಿಂದ ಹೊರಟ ಆ ಮಹಾಶರಗಳಿಂದ ತುಂಬಿಹೋಗಿದ್ದ ಆ ಪ್ರದೇಶವು ಸರ್ಪಗಳಿಂದ ತುಂಬಿರುವುದೋ ಎನ್ನುವಂತೆ ಕಾಣುತ್ತಿತ್ತು.
08040098a ರುಕ್ಮಪುಂಖನ್ಪ್ರಸನ್ನಾಗ್ರಾಂ ಶರಾನ್ಸನ್ನತಪರ್ವಣಃ|
08040098c ಅದರ್ಶಯದಮೇಯಾತ್ಮಾ ದಿಕ್ಷು ಸರ್ವಾಸು ಪಾಂಡವಃ||
ಅಮೇಯಾತ್ಮ ಪಾಂಡವನು ರುಕ್ಮಪುಂಖಗಳ ಪ್ರಸನ್ನಾಗ್ರ ಸನ್ನತಪರ್ವ ಶರಗಳನ್ನು ಎಲ್ಲದಿಕ್ಕುಗಳಲ್ಲಿಯೂ ಸುರಿಸಿದನು.
08040099a ಹತ್ವಾ ದಶ ಸಹಸ್ರಾಣಿ ಪಾರ್ಥಿವಾನಾಂ ಮಹಾರಥಃ|
08040099c ಸಂಶಪ್ತಕಾನಾಂ ಕೌಂತೇಯಃ ಪ್ರಪಕ್ಷಂ ತ್ವರಿತೋಽಭ್ಯಯಾತ್||
ಹತ್ತು ಸಾವಿರ ಸಂಶಪ್ತಕ ಪಾರ್ಥಿವರನ್ನು ಸಂಹರಿಸಿ ಮಹಾರಥ ಕೌಂತೇಯನು ತ್ವರೆಮಾಡಿ ಶತ್ರುಸೇನೆಯ ಕಡೆ ಧಾವಿಸಿದನು.
08040100a ಪ್ರಪಕ್ಷಂ ಸ ಸಮಾಸಾದ್ಯ ಪಾರ್ಥಃ ಕಾಂಬೋಜರಕ್ಷಿತಂ|
08040100c ಪ್ರಮಮಾಥ ಬಲಾದ್ಬಾಣೈರ್ದಾನವಾನಿವ ವಾಸವಃ||
ಶತ್ರುಪಕ್ಷವನ್ನು ಹೊಕ್ಕು ಪಾರ್ಥನು ವಾಸವನು ದಾನವ ಸೇನೆಯನ್ನು ಹೇಗೋ ಹಾಗೆ ಬಾಣಗಳಿಂದ ಕಾಂಬೋಜರಕ್ಷಿತ ಸೇನೆಯನ್ನು ಮಥಿಸಿದನು.
08040101a ಪ್ರಚಿಚ್ಛೇದಾಶು ಭಲ್ಲೈಶ್ಚ ದ್ವಿಷತಾಮಾತತಾಯಿನಾಂ|
08040101c ಶಸ್ತ್ರಪಾಣೀಂಸ್ತಥಾ ಬಾಹೂಂಸ್ತಥಾಪಿ ಚ ಶಿರಾಂಸ್ಯುತ||
ಆ ದ್ವೇಷೀ ಆತತಾಯಿನರ ಶಸ್ತ್ರಗಳನ್ನೂ, ಕೈಗಳನ್ನೂ, ಬಾಹುಗಳನ್ನೂ ಮತ್ತು ಶಿರಗಳನ್ನೂ ಅರ್ಜುನನು ಭಲ್ಲಗಳಿಂದ ತುಂಡರಿಸಿದನು.
08040102a ಅಂಗಾಂಗಾವಯವೈಶ್ಛಿನ್ನೈರ್ವ್ಯಾಯುಧಾಸ್ತೇಽಪತನ್ ಕ್ಷಿತೌ||
08040102c ವಿಷ್ವಗ್ವಾತಾಭಿಸಂಭಗ್ನಾ ಬಹುಶಾಖಾ ಇವ ದ್ರುಮಾಃ|
ಭಿರುಗಾಳಿಗೆ ಸಿಲುಕಿ ಉರುಳಿದ ಬಹುಶಾಖೆಗಳುಳ್ಳ ವೃಕ್ಷಗಳಂತೆ ಶತ್ರು ಯೋಧರು ಅಂಗಾಗಗಳು ತುಂಡಾಗಿ ನಿರಾಯುಧರಾಗಿ ಭೂಮಿಯ ಮೇಲೆ ಬಿದ್ದರು.
08040103a ಹಸ್ತ್ಯಶ್ವರಥಪತ್ತೀನಾಂ ವ್ರಾತಾನ್ನಿಘ್ನಂತಮರ್ಜುನಂ|
08040103c ಸುದಕ್ಷಿಣಾದವರಜಃ ಶರವೃಷ್ಟ್ಯಾಭ್ಯವೀವೃಷತ್||
ಆನೆ-ಕುದುರೆ-ರಥ-ಪದಾತಿಗಳನ್ನು ಭಿರುಗಾಳಿಯಂತೆ ಸಂಹರಿಸುತ್ತಿದ್ದ ಅರ್ಜುನನನ್ನು ಕಾಂಬೋಜರಾಜ ಸುದಕ್ಷಿಣನ ತಮ್ಮನು ಶರವೃಷ್ಟಿಯಿಂದ ಅಭಿಷೇಚಿಸಿದನು.
08040104a ಅಸ್ಯಾಸ್ಯತೋಽರ್ಧಚಂದ್ರಾಭ್ಯಾಂ ಸ ಬಾಹೂ ಪರಿಘೋಪಮೌ|
08040104c ಪೂರ್ಣಚಂದ್ರಾಭವಕ್ತ್ರಂ ಚ ಕ್ಷುರೇಣಾಭ್ಯಹನಚ್ಛಿರಃ||
ಅರ್ಜುನನು ಅವನ ಪರಿಘೋಪಮ ಬಾಹುಗಳನ್ನು ಎರಡು ಅರ್ಧಚಂದ್ರಗಳಿಂದ ತುಂಡರಿಸಿ ಕ್ಷುರದಿಂದ ಪೂರ್ಣಚಂದ್ರನಂತಿರುವ ಮುಖವುಳ್ಳ ಅವನ ಶಿರವನ್ನು ಅಪಹರಿಸಿದನು.
08040105a ಸ ಪಪಾತ ತತೋ ವಾಹಾತ್ಸ್ವಲೋಹಿತಪರಿಸ್ರವಃ|
08040105c ಮನಃಶಿಲಾಗಿರೇಃ ಶೃಂಗಂ ವಜ್ರೇಣೇವಾವದಾರಿತಂ||
ಆಗ ವಜ್ರಾಯುಧಪ್ರಹಾರದಿಂದ ಒಡೆದು ಕೆಳಗೆ ಬಿದ್ದ ಮನಃಶಿಲ ಗಿರಿಯ ಶಿಖರದಂತೆ ಅವನು ತನ್ನದೇ ರಕ್ತದಲ್ಲಿ ತೋಯ್ದು ರಥದಿಂದ ಕೆಳಕ್ಕೆ ಬಿದ್ದನು.
08040106a ಸುದಕ್ಷಿಣಾದವರಜಂ ಕಾಂಬೋಜಂ ದದೃಶುರ್ಹತಂ|
08040106c ಪ್ರಾಂಶುಂ ಕಮಲಪತ್ರಾಕ್ಷಮತ್ಯರ್ಥಂ ಪ್ರಿಯದರ್ಶನಂ|
08040106e ಕಾಂಚನಸ್ತಂಭಸಂಕಾಶಂ ಭಿನ್ನಂ ಹೇಮಗಿರಿಂ ಯಥಾ||
ಕಮಲಪತ್ರಾಕ್ಷ ಪ್ರಿಯದರ್ಶನ ಕಾಂಚನ ಸ್ಥಂಭದಂತೆ ಉನ್ನತನಾಗಿದ್ದ ಕಾಂಬೋಜ ಸುದಕ್ಷಿಣನ ಕಡೆಯ ತಮ್ಮನು ಹತನಾದುದನ್ನು ಎಲ್ಲರೂ ನೋಡಿದರು.
08040107a ತತೋಽಭವತ್ಪುನರ್ಯುದ್ಧಂ ಘೋರಮದ್ಭುತದರ್ಶನಂ|
08040107c ನಾನಾವಸ್ಥಾಶ್ಚ ಯೋಧಾನಾಂ ಬಭೂವುಸ್ತತ್ರ ಯುಧ್ಯತಾಂ||
ಆಗ ಪುನಃ ನೋಡಲು ಅದ್ಭುತವಾಗಿದ್ದ ಘೋರ ಯುದ್ಧವು ಪ್ರಾರಂಭವಾಯಿತು. ಅಲ್ಲಿ ಯುದ್ಧಮಾಡುತ್ತಿದ್ದ ಯೋಧರು ನಾನಾವಸ್ಥೆಗಳಿಗೀಡಾದರು.
08040108a ಏತೇಷ್ವಾವರ್ಜಿತೈರಶ್ವೈಃ ಕಾಂಬೋಜೈರ್ಯವನೈಃ ಶಕೈಃ|
08040108c ಶೋಣಿತಾಕ್ತೈಸ್ತದಾ ರಕ್ತಂ ಸರ್ವಮಾಸೀದ್ವಿಶಾಂ ಪತೇ||
ವಿಶಾಂಪತೇ! ಒಂದೊಂದೇ ಬಾಣದಿಂದ ಹತರಾಗಿ ರಕ್ತಸಿಕ್ತ ಕಾಂಬೋಜ, ಯವನ ಮತ್ತು ಶಕರಿಂದ ಹಾಗೂ ಕುದುರೆಗಳಿಂದ ಸರ್ವವೂ ರಕ್ತಮಯವಾಯಿತು.
08040109a ರಥೈ ರಥಾಶ್ವಸೂತೈಶ್ಚ ಹತಾರೋಹೈಶ್ಚ ವಾಜಿಭಿಃ|
08040109c ದ್ವಿರದೈಶ್ಚ ಹತಾರೋಹೈರ್ಮಹಾಮಾತ್ರೈರ್ಹತದ್ವಿಪೈಃ|
08040109e ಅನ್ಯೋನ್ಯೇನ ಮಹಾರಾಜ ಕೃತೋ ಘೋರೋ ಜನಕ್ಷಯಃ||
ಮಹಾರಾಜ! ಕುದುರೆ-ಸಾರಥಿಗಳು ಹತರಾದ ರಥಗಳಿಂದಲೂ, ಸವಾರರು ಹತರಾದ ಕುದುರೆಗಳಿಂದಲೂ, ಮಾವುತರು ಹತರಾದ ಆನೆಗಳಿಂದಲೂ ಅನ್ಯೋನ್ಯರಿಂದ ಹತಗೊಂಡ ಮಹಾಕಾಯದ ಆನೆಗಳಿಂದಲೂ ಘೋರ ಜನಕ್ಷಯವು ನಡೆಯಿತು.
08040110a ತಸ್ಮಿನ್ಪ್ರಪಕ್ಷೇ ಪಕ್ಷೇ ಚ ವಧ್ಯಮಾನೇ ಮಹಾತ್ಮನಾ|
08040110c ಅರ್ಜುನಂ ಜಯತಾಂ ಶ್ರೇಷ್ಠಂ ತ್ವರಿತೋ ದ್ರೌಣಿರಾಯಯೌ||
ಸೇನೆಯ ಪಕ್ಷ-ಪ್ರಪಕ್ಷಗಳೆರಡನ್ನೂ ವಧಿಸುತ್ತಿದ್ದ ವಿಜಯಿಗಳಲ್ಲಿ ಶ್ರೇಷ್ಠ ಮಹಾತ್ಮ ಅರ್ಜುನನನ್ನು ದ್ರೌಣಿಯು ತ್ವರೆಮಾಡಿ ಆಕ್ರಮಣಿಸಿದನು.
08040111a ವಿಧುನ್ವಾನೋ ಮಹಚ್ಛಾಪಂ ಕಾರ್ತಸ್ವರವಿಭೂಷಿತಂ|
08040111c ಆದದಾನಃ ಶರಾನ್ಘೋರಾನ್ಸ್ವರಶ್ಮೀನಿವ ಭಾಸ್ಕರಃ||
ಸುವರ್ಣ ವಿಭೂಷಿತ ಮಹಾಧನುಸ್ಸನ್ನು ಟೇಂಕರಿಸುತ್ತಾ ಅವನು ಭಾಸ್ಕರನು ತನ್ನ ಕಿರಣಗಳನ್ನು ಹೇಗೋ ಹಾಗೆ ಘೋರ ಶರಗಳನ್ನು ಪುಂಖಾನುಪುಂಖವಾಗಿ ಪ್ರಯೋಗಿಸಿದನು.
08040112a ತೈಃ ಪತದ್ಭಿರ್ಮಹಾರಾಜ ದ್ರೌಣಿಮುಕ್ತೈಃ ಸಮಂತತಃ|
08040112c ಸಂಚಾದಿತೌ ರಥಸ್ಥೌ ತಾವುಭೌ ಕೃಷ್ಣಧನಂಜಯೌ||
ಮಹಾರಾಜ! ದ್ರೌಣಿಯಿಂದ ಬಿಡಲ್ಪಟ್ಟ ಆ ಶರಗಳು ರಥದಲ್ಲಿದ್ದ ಕೃಷ್ಣ-ಧನಂಜಯರಿಬ್ಬರನ್ನೂ ಎಲ್ಲಕಡೆಗಳಿಂದ ಮುಚ್ಚಿಬಿಟ್ಟವು.
08040113a ತತಃ ಶರಶತೈಸ್ತೀಕ್ಷ್ಣೈರ್ಭಾರದ್ವಾಜಃ ಪ್ರತಾಪವಾನ್|
08040113c ನಿಶ್ಚೇಷ್ಟೌ ತಾವುಭೌ ಚಕ್ರೇ ಯುದ್ಧೇ ಮಾಧವಪಾಂಡವೌ||
ಆಗ ಪ್ರತಾಪವಾನ್ ಭಾರದ್ವಾಜನು ಯುದ್ಧದಲ್ಲಿ ನೂರು ತೀಕ್ಷ್ಣ ಶರಗಳಿಂದ ಮಾಧವ-ಪಾಂಡವರಿಬ್ಬರನ್ನೂ ನಿಶ್ಚೇಷ್ಟರನ್ನಾಗಿ ಮಾಡಿದನು.
08040114a ಹಾಹಾಕೃತಮಭೂತ್ಸರ್ವಂ ಜಂಗಮಂ ಸ್ಥಾವರಂ ತಥಾ|
08040114c ಚರಾಚರಸ್ಯ ಗೋಪ್ತಾರೌ ದೃಷ್ಟ್ವಾ ಸಂಚಾದಿತೌ ಶರೈಃ||
ಚರಾಚರಗಳೆಲ್ಲವನ್ನೂ ರಕ್ಷಿಸುವ ಅವರಿಬ್ಬರೂ ಶರಗಳಿಂದ ಮುಚ್ಚಿಹೋದುದನ್ನು ನೋಡಿ ಸ್ಥಾವರ-ಜಂಗಮಗಳಲ್ಲಿ ಹಾಹಾಕಾರವುಂಟಾಯಿತು.
08040115a ಸಿದ್ಧಚಾರಣಸಂಘಾಶ್ಚ ಸಂಪೇತುರ್ವೈ ಸಮಂತತಃ|
08040115c ಚಿಂತಯಂತೋ ಭವೇದದ್ಯ ಲೋಕಾನಾಂ ಸ್ವಸ್ತ್ಯಪೀತ್ಯಹ||
“ಇಂದು ಲೋಕಗಳು ಉಳಿಯುವವೇ?” ಎಂದು ಚಿಂತಿಸುತ್ತಾ ಸಿದ್ಧ-ಚಾರಣ ಸಂಘಗಳು ಎಲ್ಲಕಡೆಗಳಿಂದ ಬಂದು ಅಲ್ಲಿ ಸೇರಿದವು.
08040116a ನ ಮಯಾ ತಾದೃಶೋ ರಾಜನ್ದೃಷ್ಟಪೂರ್ವಃ ಪರಾಕ್ರಮಃ|
08040116c ಸಂಜಜ್ಞೇ ಯಾದೃಶೋ ದ್ರೌಣೇಃ ಕೃಷ್ಣೌ ಸಂಚಾದಯಿಷ್ಯತಃ||
ರಾಜನ್! ಯುದ್ಧದಲ್ಲಿ ಕೃಷ್ಣಾರ್ಜುನರನ್ನು ಆ ರೀತಿ ಆಚ್ಛಾದಿಸಿದ ದ್ರೌಣಿಯ ಪರಾಕ್ರಮವನ್ನು ನಾನು ಇದರ ಹಿಂದೆ ಎಂದೂ ನೋಡಿರಲಿಲ್ಲ.
08040117a ದ್ರೌಣೇಸ್ತು ಧನುಷಃ ಶಬ್ದಮಹಿತತ್ರಾಸನಂ ರಣೇ|
08040117c ಅಶ್ರೌಷಂ ಬಹುಶೋ ರಾಜನ್ಸಿಂಹಸ್ಯ ನದತೋ ಯಥಾ||
ರಾಜನ್! ಸಿಂಹದ ಗರ್ಜನೆಯಂತೆ ರಣದಲ್ಲಿ ಶತ್ರುಗಳನ್ನು ಭಯಗೊಳಿಸುತ್ತಿದ್ದ ದ್ರೌಣಿಯ ಧನುಸ್ಸಿನ ಟೇಂಕಾರ ಶಬ್ಧವನ್ನು ಬಹುಷಃ ಯಾರೂ ಕೇಳಿರಲಿಲ್ಲ.
08040118a ಜ್ಯಾ ಚಾಸ್ಯ ಚರತೋ ಯುದ್ಧೇ ಸವ್ಯದಕ್ಷಿಣಮಸ್ಯತಃ|
08040118c ವಿದ್ಯುದಂಬುದಮಧ್ಯಸ್ಥಾ ಭ್ರಾಜಮಾನೇವ ಸಾಭವತ್||
ಮೋಡಗಳ ಮಧ್ಯೆ ಪ್ರಕಾಶಿಸುವ ಮಿಂಚಿನಂತೆ ಯುದ್ಧದಲ್ಲಿ ಎಡ-ಬಲಗಳಲ್ಲಿ ಬಾಣಗಳನ್ನು ಹೊರಹಾಕುತ್ತಿದ್ದ ಅವನ ಶಿಂಜನಿಯು ಪ್ರಕಾಶಿಸುತ್ತಿತ್ತು.
08040119a ಸ ತಥಾ ಕ್ಷಿಪ್ರಕಾರೀ ಚ ದೃಢಹಸ್ತಶ್ಚ ಪಾಂಡವಃ|
08040119c ಸಮ್ಮೋಹಂ ಪರಮಂ ಗತ್ವಾ ಪ್ರೈಕ್ಷತ ದ್ರೋಣಜಂ ತತಃ||
ಅಗ ದ್ರೋಣಜನನ್ನು ನೋಡಿ ಕ್ಷಿಪ್ರಕಾರೀ ದೃಢಹಸ್ತ ಪಾಂಡವ ಅರ್ಜುನನೂ ಕೂಡ ಪರಮ ವಿಮೂಢನಾದನು.
08040120a ಸ ವಿಕ್ರಮಂ ಹೃತಂ ಮೇನೇ ಆತ್ಮನಃ ಸುಮಹಾತ್ಮನಾ|
08040120c ತಥಾಸ್ಯ ಸಮರೇ ರಾಜನ್ವಪುರಾಸೀತ್ಸುದುರ್ದೃಶಂ||
ಮಹಾತ್ಮ ಅಶ್ವತ್ಥಾಮನಿಂದ ತನ್ನ ವಿಕ್ರಮವು ಕುಂದುಗೊಂಡಿತೆಂದೇ ಅವನು ತಿಳಿದುಕೊಂಡನು. ರಾಜನ್! ಆಗ ಸಮರದಲ್ಲಿ ಅಶ್ವತ್ಥಾಮನ ಭಯಂಕರ ಮುಖವನ್ನು ನೋಡಲೂ ಸಾಧ್ಯವಾಗುತ್ತಿರಲಿಲ್ಲ.
08040121a ದ್ರೌಣಿಪಾಂಡವಯೋರೇವಂ ವರ್ತಮಾನೇ ಮಹಾರಣೇ|
08040121c ವರ್ಧಮಾನೇ ಚ ರಾಜೇಂದ್ರ ದ್ರೋಣಪುತ್ರೇ ಮಹಾಬಲೇ|
08040121e ಹೀಯಮಾನೇ ಚ ಕೌಂತೇಯೇ ಕೃಷ್ಣಂ ರೋಷಃ ಸಮಭ್ಯಯಾತ್||
ರಾಜೇಂದ್ರ! ಮಹಾರಣದಲ್ಲಿ ದ್ರೌಣಿ ಮತ್ತು ಪಾಂಡವ ಇಬ್ಬರೂ ಈ ರೀತಿ ವರ್ತಿಸುತ್ತಿರುವುದನ್ನು, ಮಹಾಬಲ ದ್ರೋಣಪುತ್ರನು ವರ್ಧಿಸುತ್ತಿರುವುದನ್ನೂ ಮತ್ತು ಕೌಂತೇಯನು ಕ್ಷೀಣನಾಗುತ್ತಿರುವುದನ್ನು ನೋಡಿ ಕೃಷ್ಣನಿಗೆ ಮಹಾರೋಷವುಂಟಾಯಿತು.
08040122a ಸ ರೋಷಾನ್ನಿಃಶ್ವಸನ್ರಾಜನ್ನಿರ್ದಹನ್ನಿವ ಚಕ್ಷುಷಾ|
08040122c ದ್ರೌಣಿಂ ಹ್ಯಪಶ್ಯತ್ಸಂಗ್ರಾಮೇ ಫಲ್ಗುನಂ ಚ ಮುಹುರ್ಮುಹುಃ||
ರಾಜನ್! ರೋಷದಿಂದ ಭುಸುಗುಟ್ಟುತ್ತಾ, ಕಣ್ಣಿನಿಂದಲೇ ಸುಟ್ಟುಬಿಡುವನೋ ಎನ್ನುವಂತೆ ಅವನು ಸಂಗ್ರಾಮದಲ್ಲಿ ದ್ರೌಣಿಯನ್ನು ಮತ್ತು ಫಲ್ಗುನನನ್ನು ಪದೇ ಪದೇ ನೋಡುತ್ತಿದ್ದನು.
08040123a ತತಃ ಕ್ರುದ್ಧೋಽಬ್ರವೀತ್ಕೃಷ್ಣಃ ಪಾರ್ಥಂ ಸಪ್ರಣಯಂ ತದಾ|
08040123c ಅತ್ಯದ್ಭುತಮಿದಂ ಪಾರ್ಥ ತವ ಪಶ್ಯಾಮಿ ಸಂಯುಗೇ|
08040123e ಅತಿಶೇತೇ ಹಿ ಯತ್ರ ತ್ವಾ ದ್ರೋಣಪುತ್ರೋಽದ್ಯ ಭಾರತ||
ಆಗ ಕ್ರುದ್ಧನಾಗಿದ್ದರೂ ಕೃಷ್ಣನು ಪ್ರೀತಿಯಿಂದ ಪಾರ್ಥನಿಗೆ ಹೇಳಿದನು: “ಪಾರ್ಥ! ಈ ಯುದ್ಧದಲ್ಲಿ ನಿನ್ನ ಅತಿ ಅದ್ಭುತವರ್ತನೆಯನ್ನು ನೋಡುತ್ತಿದ್ದೇನೆ! ಭಾರತ! ಇಂದು ದ್ರೋಣಪುತ್ರನು ನಿನ್ನನ್ನು ಮೀರಿ ಯುದ್ಧಮಾಡುತ್ತಿದ್ದಾನೆ!
08040124a ಕಚ್ಚಿತ್ತೇ ಗಾಂಡಿವಂ ಹಸ್ತೇ ರಥೇ ತಿಷ್ಠಸಿ ಚಾರ್ಜುನ|
08040124c ಕಚ್ಚಿತ್ಕುಶಲಿನೌ ಬಾಹೂ ಕಚ್ಚಿದ್ವೀರ್ಯಂ ತದೇವ ತೇ||
ಅರ್ಜುನ! ಗಾಂಡೀವವನ್ನು ಕೈಯಲ್ಲಿ ಹಿಡಿದೇ ರಥದಲ್ಲಿ ನಿಂತಿರುವೆಯಲ್ಲವೇ? ನಿನ್ನ ಬಾಹುಗಳು ಕುಶಲವಾಗಿವೆ ತಾನೇ? ನಿನ್ನ ಶರೀರದಲ್ಲಿ ವೀರ್ಯವಿದೆ ತಾನೇ?”
08040125a ಏವಮುಕ್ತಸ್ತು ಕೃಷ್ಣೇನ ಕ್ಷಿಪ್ತ್ವಾ ಭಲ್ಲಾಂಶ್ಚತುರ್ದಶ|
08040125c ತ್ವರಮಾಣಸ್ತ್ವರಾಕಾಲೇ ದ್ರೌಣೇರ್ಧನುರಥಾಚ್ಚಿನತ್|
08040125e ಧ್ವಜಂ ಚತ್ರಂ ಪತಾಕಾಂ ಚ ರಥಂ ಶಕ್ತಿಂ ಗದಾಂ ತಥಾ||
ಕೃಷ್ಣನು ಹೀಗೆ ಹೇಳಿದೊಡನೆಯೇ ಅರ್ಜುನನು ಹದಿನಾಲ್ಕು ಭಲ್ಲಗಳನ್ನು ಕೈಗೆತ್ತಿಕೊಂಡು ಅವಸರದ ಸಮಯದಲ್ಲಿ ತ್ವರೆಮಾಡಿ ದ್ರೌಣಿಯ ರಥ, ಧ್ವಜ, ಚತ್ರ, ಪತಾಕ, ಶಕ್ತಿ ಮತ್ತು ಗದೆಗಳನ್ನು ಕತ್ತರಿಸಿದನು.
08040126a ಜತ್ರುದೇಶೇ ಚ ಸುಭೃಶಂ ವತ್ಸದಂತೈರತಾಡಯತ್|
08040126c ಸ ಮೂರ್ಚ್ಚಾಂ ಪರಮಾಂ ಗತ್ವಾ ಧ್ವಜಯಷ್ಟಿಂ ಸಮಾಶ್ರಿತಃ||
ಅವನ ಜತ್ರುದೇಶ – ಕುತ್ತಿಗೆಯ ಎಲುಬುಪ್ರದೇಶ – ವನ್ನು ವತ್ಸದಂತಗಳಿಂದ ಜೋರಾಗಿ ಹೊಡೆಯಲು ಅಶ್ವತ್ಥಾಮನು ಪರಮ ಮೂರ್ಛಿತನಾಗಿ ಧ್ವಜಸ್ತಂಭವನ್ನು ಹಿಡಿದು ಕುಳಿತುಬಿಟ್ಟನು.
08040127a ತಂ ವಿಸಂಜ್ಞಂ ಮಹಾರಾಜ ಕಿರೀಟಿಭಯಪೀಡಿತಂ|
08040127c ಅಪೋವಾಹ ರಣಾತ್ಸೂತೋ ರಕ್ಷಮಾಣೋ ಧನಂಜಯಾತ್||
ಮಹಾರಾಜ! ಕಿರೀಟಿಯ ಭಯದಿಂದ ಪೀಡಿತನಾಗಿ ಮೂರ್ಛಿತನಾದ ಅವನನ್ನು ರಕ್ಷಿಸಲೋಸುಗ ಅವನ ಸಾರಥಿಯು ಧನಂಜಯನಿರುವ ರಣಭೂಮಿಯಿಂದ ಕರೆದುಕೊಂಡು ಹೋದನು.
08040128a ಏತಸ್ಮಿನ್ನೇವ ಕಾಲೇ ತು ವಿಜಯಃ ಶತ್ರುತಾಪನಃ|
08040128c ನ್ಯವಧೀತ್ತಾವಕಂ ಸೈನ್ಯಂ ಶತಶೋಽಥ ಸಹಸ್ರಶಃ|
08040128e ಪಶ್ಯತಸ್ತವ ಪುತ್ರಸ್ಯ ತಸ್ಯ ವೀರಸ್ಯ ಭಾರತ||
ಭಾರತ! ಇದೇ ಸಮಯದಲ್ಲಿ ಶತ್ರುತಾಪನ ವಿಜಯ ಅರ್ಜುನನು ನಿನ್ನ ವೀರ ಪುತ್ರನು ನೋಡುತ್ತಿದ್ದಂತೆಯೇ ನಿನ್ನ ಸೇನೆಯನ್ನು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ವಧಿಸಿದನು.
08040129a ಏವಮೇಷ ಕ್ಷಯೋ ವೃತ್ತಸ್ತಾವಕಾನಾಂ ಪರೈಃ ಸಹ|
08040129c ಕ್ರೂರೋ ವಿಶಸನೋ ಘೋರೋ ರಾಜನ್ದುರ್ಮಂತ್ರಿತೇ ತವ||
ರಾಜನ್! ಹೀಗೆ ನಿನ್ನ ದುರಾಲೋಚನೆಗಳಿಂದಾಗಿ ಶತ್ರುಗಳಿಂದ ನಿನ್ನವರ ಕ್ರೂರ, ಘೋರ ವಿನಾಶಕರ ಕ್ಷಯವು ನಡೆಯಿತು.
08040130a ಸಂಶಪ್ತಕಾಂಶ್ಚ ಕೌಂತೇಯಃ ಕುರೂಂಶ್ಚಾಪಿ ವೃಕೋದರಃ|
08040130c ವಸುಷೇಣಂ ಚ ಪಾಂಚಾಲಃ ಕೃತ್ಸ್ನೇನ ವ್ಯಧಮದ್ರಣೇ||
ಕೌಂತೇಯನು ಸಂಶಪ್ತಕರನ್ನೂ, ವೃಕೋದರನು ಕುರುಗಳನ್ನೂ, ಪಾಂಚಾಲ್ಯನು ವಸುಷೇಣನನ್ನೂ ರಣದಲ್ಲಿ ಸಂಹರಿಸತೊಡಗಿದರು.”
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲಯುದ್ಧೇ ಚತ್ವಾರಿಂಶೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲಯುದ್ಧ ಎನ್ನುವ ನಲ್ವತ್ತನೇ ಅಧ್ಯಾಯವು.