ದ್ರೋಣ ಪರ್ವ: ಜಯದ್ರಥವಧ ಪರ್ವ
೯೦
ಕೃತವರ್ಮನ ಪರಾಕ್ರಮ (೧-೫೦).
07090001 ಸಂಜಯ ಉವಾಚ|
07090001a ಆತ್ಮಾಪರಾಧಾತ್ಸಂಭೂತಂ ವ್ಯಸನಂ ಭರತರ್ಷಭ|
07090001c ಪ್ರಾಪ್ಯ ಪ್ರಾಕೃತವದ್ವೀರ ನ ತ್ವಂ ಶೋಚಿತುಮರ್ಹಸಿ||
ಸಂಜಯನು ಹೇಳಿದನು: “ತಾನೇ ಮಾಡಿದ ಅಪರಾಧದಿಂದ ಹುಟ್ಟಿದ ವ್ಯಸನವನ್ನು ಪಡೆದು ವೀರನಾದ ನೀನು ಸಾಮಾನ್ಯರಂತೆ ಶೋಕಿಸಕೂಡದು.
07090002a ತವ ನಿರ್ಗುಣತಾಂ ಜ್ಞಾತ್ವಾ ಪಕ್ಷಪಾತಂ ಸುತೇಷು ಚ|
07090002c ದ್ವೈಧೀಭಾವಂ ತಥಾ ಧರ್ಮೇ ಪಾಂಡವೇಷು ಚ ಮತ್ಸರಂ|
07090002e ಆರ್ತಪ್ರಲಾಪಾಂಶ್ಚ ಬಹೂನ್ಮನುಜಾಧಿಪಸತ್ತಮ||
07090003a ಸರ್ವಲೋಕಸ್ಯ ತತ್ತ್ವಜ್ಞಃ ಸರ್ವಲೋಕಗುರುಃ ಪ್ರಭುಃ|
07090003c ವಾಸುದೇವಸ್ತತೋ ಯುದ್ಧಂ ಕುರೂಣಾಮಕರೋನ್ಮಹತ್||
ಮನುಜಾಧಿಪಸತ್ತಮ! ನಿನ್ನ ನಿರ್ಗುಣತೆಗಳನ್ನು ತಿಳಿದು, ಮಕ್ಕಳಲ್ಲಿ ಪಕ್ಷಪಾತಮಾಡುತ್ತಿರುವೆಯೆಂದು, ಧರ್ಮದ ಕುರಿತು ನಿನ್ನ ದ್ವಂದ್ವವಿದೆಯೆಂದು, ಪಾಂಡವರಲ್ಲಿ ಅಸೂಯೆಯಿದೆಯೆಂದು, ಬಹಳ ಆರ್ತಪ್ರಲಾಪಮಾಡುತ್ತೀಯೆಂದು ಸರ್ವಲೋಕಗಳ ತತ್ತ್ವಜ್ಞ ಸರ್ವಲೋಕಗಳ ಗುರು ಪ್ರಭು ವಾಸುದೇವನು ಕುರುಗಳ ಈ ಮಹಾ ಯುದ್ಧವನ್ನು ರಚಿಸಿದ್ದಾನೆ.
07090004a ಆತ್ಮಾಪರಾಧಾತ್ಸುಮಹಾನ್ಪ್ರಾಪ್ತಸ್ತೇ ವಿಪುಲಃ ಕ್ಷಯಃ|
07090004c ನ ಹಿ ತೇ ಸುಕೃತಂ ಕಿಂ ಚಿದಾದೌ ಮಧ್ಯೇ ಚ ಭಾರತ|
07090004e ದೃಶ್ಯತೇ ಪೃಷ್ಠತಶ್ಚೈವ ತ್ವನ್ಮೂಲೋ ಹಿ ಪರಾಜಯಃ||
ಭಾರತ! ನಿನ್ನದೇ ಮಹಾ ಅಪರಾಧದಿಂದ ಈ ವಿಪುಲ ಕ್ಷಯವು ನಡೆಯುತ್ತಿರುವುದು. ನೀನು ಆದಿಯುಲ್ಲಾಗಲೀ ಮಧ್ಯದಲ್ಲಿಯಾಗಲೀ ಒಂದಿಷ್ಟೂ ಒಳ್ಳೆಯ ಕೆಲಸವನ್ನು ಮಾಡಿರದೇ ಇರುವುದರಿಂದ ಅಂತ್ಯದಲ್ಲಿ ಇದನ್ನು ನೋಡುತ್ತಿದ್ದೀಯೆ. ಪರಾಜಯಕ್ಕೆ ನೀನೇ ಕಾರಣ.
07090005a ತಸ್ಮಾದದ್ಯ ಸ್ಥಿರೋ ಭೂತ್ವಾ ಜ್ಞಾತ್ವಾ ಲೋಕಸ್ಯ ನಿರ್ಣಯಂ|
07090005c ಶೃಣು ಯುದ್ಧಂ ಯಥಾ ವೃತ್ತಂ ಘೋರಂ ದೇವಾಸುರೋಪಮಂ||
ಆದುದರಿಂದ ಇಂದು ಲೋಕದ ನಿರ್ಣಯವನ್ನು ಅರ್ಥಮಾಡಿಕೊಂಡು ಸ್ಥಿರನಾಗಿದ್ದುಕೊಂಡು ದೇವಾಸುರರ ಯುದ್ಧದಂತೆ ನಡೆಯುತ್ತಿರುವ ಘೋರ ಯುದ್ಧವು ನಡೆದಹಾಗೆ ಕೇಳು.
07090006a ಪ್ರವಿಷ್ಟೇ ತವ ಸೈನ್ಯಂ ತು ಶೈನೇಯೇ ಸತ್ಯವಿಕ್ರಮೇ|
07090006c ಭೀಮಸೇನಮುಖಾಃ ಪಾರ್ಥಾಃ ಪ್ರತೀಯುರ್ವಾಹಿನೀಂ ತವ||
ಸತ್ಯವಿಕ್ರಮ ಶೈನೇಯನು ನಿನ್ನ ಸೇನೆಯನ್ನು ಪ್ರವೇಶಿಸಿದ ನಂತರ ಭೀಮಸೇನ ಪ್ರಮುಖರಾದ ಪಾರ್ಥರು ನಿನ್ನ ಸೇನೆಯನ್ನು ಆಕ್ರಮಣಿಸಿದರು.
07090007a ಆಗಚ್ಚತಸ್ತಾನ್ಸಹಸಾ ಕ್ರುದ್ಧರೂಪಾನ್ಸಹಾನುಗಾನ್|
07090007c ದಧಾರೈಕೋ ರಣೇ ಪಾಂಡೂನ್ಕೃತವರ್ಮಾ ಮಹಾರಥಃ||
ಅನುಗರೊಂದಿಗೆ ಕ್ರುದ್ಧರಾಗಿ ಒಮ್ಮೆಲೇ ಎರಗಿದ ಪಾಂಡವರನ್ನು ರಣದಲ್ಲಿ ಮಹಾರಥ ಕೃತವರ್ಮನು ಒಬ್ಬನೇ ಎದುರಿಸಿದನು.
07090008a ಯಥೋದ್ವೃತ್ತಂ ಧಾರಯತೇ ವೇಲಾ ವೈ ಸಲಿಲಾರ್ಣವಂ|
07090008c ಪಾಂಡುಸೈನ್ಯಂ ತಥಾ ಸಂಖ್ಯೇ ಹಾರ್ದಿಕ್ಯಃ ಸಮವಾರಯತ್||
ಉಕ್ಕಿಬರುವ ಸಾಗರದ ನೀರನ್ನು ದಡವು ತಡೆಹಿಡಿಯುವಂತೆ ಹಾರ್ದಿಕ್ಯನು ಪಾಂಡುಸೇನೆಯನ್ನು ರಣದಲ್ಲಿ ತಡೆಹಿಡಿದನು.
07090009a ತತ್ರಾದ್ಭುತಮಮನ್ಯಂತ ಹಾರ್ದಿಕ್ಯಸ್ಯ ಪರಾಕ್ರಮಂ|
07090009c ಯದೇನಂ ಸಹಿತಾಃ ಪಾರ್ಥಾ ನಾತಿಚಕ್ರಮುರಾಹವೇ||
ಆಹವದಲ್ಲಿ ಪಾರ್ಥರು ಒಟ್ಟಿಗೇ ಅತಿಕ್ರಮಿಸಲಾಗದ ಹಾರ್ದಿಕ್ಯನ ಪರಾಕ್ರಮವನ್ನು ನಾವು ಅದ್ಭುತವೆಂದೇ ಪರಿಗಣಿಸಿದೆವು.
07090010a ತತೋ ಭೀಮಸ್ತ್ರಿಭಿರ್ವಿದ್ಧ್ವಾ ಕೃತವರ್ಮಾಣಮಾಯಸೈಃ|
07090010c ಶಂಖಂ ದಧ್ಮೌ ಮಹಾಬಾಹುರ್ಹರ್ಷಯನ್ಸರ್ವಪಾಂಡವಾನ್||
ಆಗ ಮಹಾಬಾಹು ಭೀಮನು ಕೃತವರ್ಮನನ್ನು ಮೂರು ಆಯಸಗಳಿಂದ ಹೊಡೆದು ಪಾಂಡವರನ್ನು ಹರ್ಷಗೊಳಿಸುತ್ತಾ ಶಂಖವನ್ನು ಊದಿದನು.
07090011a ಸಹದೇವಸ್ತು ವಿಂಶತ್ಯಾ ಧರ್ಮರಾಜಶ್ಚ ಪಂಚಭಿಃ|
07090011c ಶತೇನ ನಕುಲಶ್ಚಾಪಿ ಹಾರ್ದಿಕ್ಯಂ ಸಮವಿಧ್ಯತ||
ಸಹದೇವನು ಇಪ್ಪತ್ತರಿಂದ, ಧರ್ಮರಾಜನು ಐದರಿಂದ, ನಕುಲನು ನೂರರಿಂದ ಹಾರ್ದಿಕ್ಯನನ್ನು ಹೊಡೆದರು.
07090012a ದ್ರೌಪದೇಯಾಸ್ತ್ರಿಸಪ್ತತ್ಯಾ ಸಪ್ತಭಿಶ್ಚ ಘಟೋತ್ಕಚಃ|
07090012c ಧೃಷ್ಟದ್ಯುಮ್ನಸ್ತ್ರಿಭಿಶ್ಚಾಪಿ ಕೃತವರ್ಮಾಣಮಾರ್ದಯತ್|
07090012e ವಿರಾಟೋ ದ್ರುಪದಶ್ಚೈವ ಯಾಜ್ಞಸೇನಿಶ್ಚ ಪಂಚಭಿಃ||
ದ್ರೌಪದೇಯರು ಎಪ್ಪತ್ಮೂರರಿಂದ, ಘಟೋತ್ಕಚನು ಎಪ್ಪತ್ತರಿಂದ ಮತ್ತು ಧೃಷ್ಟದ್ಯುಮ್ನನು ಮೂರರಿಂದ, ವಿರಾಟ ಮತ್ತು ಯಾಜ್ಞಸೇನಿ ದ್ರುಪದರು ಐದರಿಂದ ಕೃತವರ್ಮನನ್ನು ಹೊಡೆದರು.
07090013a ಶಿಖಂಡೀ ಚಾಪಿ ಹಾರ್ದಿಕ್ಯಂ ವಿದ್ಧ್ವಾ ಪಂಚಭಿರಾಶುಗೈಃ|
07090013c ಪುನರ್ವಿವ್ಯಾಧ ವಿಂಶತ್ಯಾ ಸಾಯಕಾನಾಂ ಹಸನ್ನಿವ||
ಶಿಖಂಡಿಯೂ ಕೂಡ ಹಾರ್ದಿಕ್ಯನನ್ನು ಐದು ಆಶುಗಗಳಿಂದ ಹೊಡೆದು ಪುನಃ ನಗುತ್ತಾ ಅವನ ಮೇಲೆ ಇಪ್ಪತ್ತು ಸಾಯಕಗಳನ್ನು ಪ್ರಯೋಗಿಸಿದನು.
07090014a ಕೃತವರ್ಮಾ ತತೋ ರಾಜನ್ಸರ್ವತಸ್ತಾನ್ಮಹಾರಥಾನ್|
07090014c ಏಕೈಕಂ ಪಂಚಭಿರ್ವಿದ್ಧ್ವಾ ಭೀಮಂ ವಿವ್ಯಾಧ ಸಪ್ತಭಿಃ|
07090014e ಧನುರ್ಧ್ವಜಂ ಚ ಸಮ್ಯತ್ತೋ ರಥಾದ್ಭೂಮಾವಪಾತಯತ್||
ರಾಜನ್! ಆಗ ಕೃತವರ್ಮನು ಸುತ್ತುವರೆದಿದ್ದ ಆ ಒಬ್ಬೊಬ್ಬ ಮಹಾರಥರನ್ನೂ ಐದೈದು ಬಾಣಗಳಿಂದ ಹೊಡೆದು ಭೀಮನನ್ನು ಏಳರಿಂದ ಹೊಡೆದನು. ಅವನ ಧ್ವಜವನ್ನೂ ಧನುಸ್ಸನ್ನೂ ರಥದಿಂದ ಭೂಮಿಗೆ ಬೀಳಿಸಿದನು.
07090015a ಅಥೈನಂ ಚಿನ್ನಧನ್ವಾನಂ ತ್ವರಮಾಣೋ ಮಹಾರಥಃ|
07090015c ಆಜಘಾನೋರಸಿ ಕ್ರುದ್ಧಃ ಸಪ್ತತ್ಯಾ ನಿಶಿತೈಃ ಶರೈಃ||
ಆಗ ಮಹಾರಥ ಕೃತವರ್ಮನು ಕ್ರುದ್ಧನಾಗಿ ತ್ವರೆಮಾಡಿ ಧನುಸ್ಸನ್ನು ಕಳೆದುಕೊಂಡಿದ್ದ ಭೀಮಸೇನನ ಎದೆಗೆ ಎಪ್ಪತ್ತು ನಿಶಿತ ಬಾಣಗಳಿಂದ ಹೊಡೆದನು.
07090016a ಸ ಗಾಢವಿದ್ಧೋ ಬಲವಾನ್ ಹಾರ್ದಿಕ್ಯಸ್ಯ ಶರೋತ್ತಮೈಃ|
07090016c ಚಚಾಲ ರಥಮಧ್ಯಸ್ಥಃ ಕ್ಷಿತಿಕಂಪೇ ಯಥಾಚಲಃ||
ಬಲವಾನ್ ಹಾರ್ದಿಕ್ಯನ ಉತ್ತಮ ಶರಗಳಿಂದ ಆಳವಾಗಿ ಗಾಯಗೊಂಡ ರಥದ ಮಧ್ಯದಲ್ಲಿದ್ದ ಭೀಮನು ಭೂಕಂಪದಲ್ಲಿ ಪರ್ವತದಂತೆ ನಡುಗಿದನು.
07090017a ಭೀಮಸೇನಂ ತಥಾ ದೃಷ್ಟ್ವಾ ಧರ್ಮರಾಜಪುರೋಗಮಾಃ|
07090017c ವಿಸೃಜಂತಃ ಶರಾನ್ಘೋರಾನ್ಕೃತವರ್ಮಾಣಮಾರ್ದಯನ್||
ಭೀಮಸೇನನು ಹಾಗಾದುದನ್ನು ನೋಡಿ ಧರ್ಮರಾಜನೇ ಮೊದಲಾದವರು ಕೃತವರ್ಮನ ಮೇಲೆ ಘೋರ ಬಾಣಗಳನ್ನು ಪ್ರಯೋಗಿಸಿದರು.
07090018a ತಂ ತಥಾ ಕೋಷ್ಠಕೀಕೃತ್ಯ ರಥವಂಶೇನ ಮಾರಿಷ|
07090018c ವಿವ್ಯಧುಃ ಸಾಯಕೈರ್ಹೃಷ್ಟಾ ರಕ್ಷಾರ್ಥಂ ಮಾರುತೇರ್ಮೃಧೇ||
ಮಾರಿಷ! ಅವರು ಮಾರುತಿಯನ್ನು ರಕ್ಷಿಸಲೋಸುಗ ಹೃಷ್ಟರಾಗಿ ಕೃತವರ್ಮನನ್ನು ರಥಸಮೂಹಗಳ ಮಧ್ಯೆ ಸೇರಿಸಿಕೊಂಡು ಸಾಯಕಗಳಿಂದ ಅವನನ್ನು ಹೊಡೆದರು.
07090019a ಪ್ರತಿಲಭ್ಯ ತತಃ ಸಂಜ್ಞಾಂ ಭೀಮಸೇನೋ ಮಹಾಬಲಃ|
07090019c ಶಕ್ತಿಂ ಜಗ್ರಾಹ ಸಮರೇ ಹೇಮದಂಡಾಮಯಸ್ಮಯೀಂ|
07090019e ಚಿಕ್ಷೇಪ ಚ ರಥಾತ್ತೂರ್ಣಂ ಕೃತವರ್ಮರಥಂ ಪ್ರತಿ||
ಆಗ ಮಹಾಬಲ ಭೀಮಸೇನನು ಪುನಃ ಪ್ರಜ್ಞೆಯನ್ನು ಪಡೆದು ಸುವರ್ಣಮಯ ದಂಡದಿಂದ ಕೂಡಿದ ಲೋಹಮಹವಾಗಿದ್ದ ಶಕ್ತಿಯನ್ನು ಸಮರದಲ್ಲಿ ಕೈಗೆತ್ತಿಕೊಂಡು ಶೀಘ್ರವಾಗಿ ತನ್ನ ರಥದಿಂದ ಕೃತವರ್ಮನ ರಥದ ಕಡೆ ಎಸೆದನು.
07090020a ಸಾ ಭೀಮಭುಜನಿರ್ಮುಕ್ತಾ ನಿರ್ಮುಕ್ತೋರಗಸನ್ನಿಭಾ|
07090020c ಕೃತವರ್ಮಾಣಮಭಿತಃ ಪ್ರಜಜ್ವಾಲ ಸುದಾರುಣಾ||
ಭೀಮನ ಭುಜದಿಂದ ಹೊರಟ ಪೊರೆಬಿಟ್ಟ ಸರ್ಪದಂತಿದ್ದ ಆ ಸುದಾರುಣ ಶಕ್ತ್ಯಾಯುಧವು ಪ್ರಜ್ವಲಿಸುತ್ತಾ ಕೃತವರ್ಮನ ಸಮೀಪಕ್ಕೆ ಬಂದಿತು.
07090021a ತಾಮಾಪತಂತೀಂ ಸಹಸಾ ಯುಗಾಂತಾಗ್ನಿಸಮಪ್ರಭಾಂ|
07090021c ದ್ವಾಭ್ಯಾಂ ಶರಾಭ್ಯಾಂ ಹಾರ್ದಿಕ್ಯೋ ನಿಚಕರ್ತ ದ್ವಿಧಾ ತದಾ||
ತನ್ನ ಮೇಲೆ ರಭಸದಿಂದ ಬೀಳಲಿದ್ದ ಪ್ರಳಯಕಾಲದ ಅಗ್ನಿಯ ಪ್ರಭೆಗೆ ಸಮನಾಗಿದ್ದ ಆ ಶಕ್ತಿಯನ್ನು ಹಾರ್ದಿಕ್ಯನು ಎರಡು ಬಾಣಗಳಿಂದ ಎರಡಾಗಿ ಕತ್ತರಿಸಿದನು.
07090022a ಸಾ ಚಿನ್ನಾ ಪತಿತಾ ಭೂಮೌ ಶಕ್ತಿಃ ಕನಕಭೂಷಣಾ|
07090022c ದ್ಯೋತಯಂತೀ ದಿಶೋ ರಾಜನ್ಮಹೋಲ್ಕೇವ ದಿವಶ್ಚ್ಯುತಾ|
07090022e ಶಕ್ತಿಂ ವಿನಿಹತಾಂ ದೃಷ್ಟ್ವಾ ಭೀಮಶ್ಚುಕ್ರೋಧ ವೈ ಭೃಶಂ||
ರಾಜನ್! ಕತ್ತರಿಸಲ್ಪಟ್ಟ ಆ ಕನಕಭೂಷಣ ಶಕ್ತಿಯು ದಿವದಿಂದ ಚ್ಯುತಗೊಂಡ ಮಹಾ ಉಲ್ಕೆಯಂತೆ ದಿಕ್ಕುಗಳನ್ನು ಬೆಳಗಿಸುತ್ತಾ ಭೂಮಿಯ ಮೇಲೆ ಬಿದ್ದಿತು. ಶಕ್ತಿಯು ವಿನಾಶವಾದುದನ್ನು ಕಂಡು ಭೀಮನು ತುಂಬಾ ಕುಪಿತನಾದನು.
07090023a ತತೋಽನ್ಯದ್ಧನುರಾದಾಯ ವೇಗವತ್ಸುಮಹಾಸ್ವನಂ|
07090023c ಭೀಮಸೇನೋ ರಣೇ ಕ್ರುದ್ಧೋ ಹಾರ್ದಿಕ್ಯಂ ಸಮವಾರಯತ್||
ಆಗ ರಣದಲ್ಲಿ ಕ್ರುದ್ಧನಾದ ಭೀಮಸೇನನು ಮಹಾಶಬ್ಧವುಳ್ಳ ವೇಗವತ್ತಾದ ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಹಾರ್ದಿಕ್ಯನನ್ನು ಹೊಡೆದನು.
07090024a ಅಥೈನಂ ಪಂಚಭಿರ್ಬಾಣೈರಾಜಘಾನ ಸ್ತನಾಂತರೇ|
07090024c ಭೀಮೋ ಭೀಮಬಲೋ ರಾಜಂಸ್ತವ ದುರ್ಮಂತ್ರಿತೇನ ಹ||
ರಾಜನ್! ನಿನ್ನ ದುರ್ಮಂತ್ರದಿಂದಾಗಿ ಅತಿ ಬಲಶಾಲಿಯಾಗಿರುವ ಭೀಮನು ಐದು ಬಾಣಗಳಿಂದ ಅವನ ವಕ್ಷಸ್ಥಳಕ್ಕೆ ಹೊಡೆದನು.
07090025a ಭೋಜಸ್ತು ಕ್ಷತಸರ್ವಾಂಗೋ ಭೀಮಸೇನೇನ ಮಾರಿಷ|
07090025c ರಕ್ತಾಶೋಕ ಇವೋತ್ಫುಲ್ಲೋ ವ್ಯಭ್ರಾಜತ ರಣಾಜಿರೇ||
ಮಾರಿಷ! ಭೋಜನಾದರೋ ಭೀಮಸೇನನಿಂದ ಸರ್ವಾಂಗಗಳಲ್ಲಿಯೂ ಗಾಯಗೊಂಡು ಕೆಂಪು ಹೂಬಿಟ್ಟ ಅಶೋಕವೃಕ್ಷದಂತೆ ರಣಾಜಿರದಲ್ಲಿ ಪ್ರಕಾಶಿಸಿದನು.
07090026a ತತಃ ಕ್ರುದ್ಧಸ್ತ್ರಿಭಿರ್ಬಾಣೈರ್ಭೀಮಸೇನಂ ಹಸನ್ನಿವ|
07090026c ಅಭಿಹತ್ಯ ದೃಢಂ ಯುದ್ಧೇ ತಾನ್ಸರ್ವಾನ್ಪ್ರತ್ಯವಿಧ್ಯತ||
07090027a ತ್ರಿಭಿಸ್ತ್ರಿಭಿರ್ಮಹೇಷ್ವಾಸೋ ಯತಮಾನಾನ್ಮಹಾರಥಾನ್|
07090027c ತೇಽಪಿ ತಂ ಪ್ರತ್ಯವಿಧ್ಯಂತ ಸಪ್ತಭಿಃ ಸಪ್ತಭಿಃ ಶರೈಃ||
ಆಗ ಕ್ರುದ್ಧನಾದ ಕೃತವರ್ಮನು ನಗುತ್ತಿರುವನೋ ಎಂಬಂತೆ ಭೀಮಸೇನನನ್ನು ದೃಢವಾಗಿ ಪ್ರಹರಿಸಿದನು. ಹಾಗೆಯೇ ತನ್ನೊಡನೆ ಪ್ರಯತ್ನಪಟ್ಟು ಯುದ್ಧಮಾಡುತ್ತಿದ್ದ ಆ ಎಲ್ಲ ಮಹಾರಥರನ್ನು ಮೂರು ಮೂರು ಬಾಣಗಳಿಂದ ಹೊಡೆದನು. ಅವರೂ ಕೂಡ ತಿರುಗಿ ಅವನನ್ನು ಏಳೇಳು ಬಾಣಗಳಿಂದ ಹೊಡೆದರು.
07090028a ಶಿಖಂಡಿನಸ್ತತಃ ಕ್ರುದ್ಧಃ ಕ್ಷುರಪ್ರೇಣ ಮಹಾರಥಃ|
07090028c ಧನುಶ್ಚಿಚ್ಚೇದ ಸಮರೇ ಪ್ರಹಸನ್ನಿವ ಭಾರತ||
ಭಾರತ! ಅನಂತರ ಆ ಮಹಾರಥನು ಕ್ರುದ್ಧನಾಗಿ ನಗುತ್ತಾ ಕ್ಷುರಪ್ರದಿಂದ ಶಿಖಂಡಿಯ ಧನುಸ್ಸನ್ನು ತುಂಡರಿಸಿದನು.
07090029a ಶಿಖಂಡೀ ತು ತತಃ ಕ್ರುದ್ಧಶ್ಚಿನ್ನೇ ಧನುಷಿ ಸತ್ವರಂ|
07090029c ಅಸಿಂ ಜಗ್ರಾಹ ಸಮರೇ ಶತಚಂದ್ರಂ ಚ ಭಾಸ್ವರಂ||
ಭಾರವುಳ್ಳ ಧನುಸ್ಸು ತುಂಡಾಗಲು ಕ್ರುದ್ಧನಾದ ಶಿಖಂಡಿಯು ಸಮರದಲ್ಲಿ ನೂರುಚಂದ್ರಗಳಂತೆ ಹೊಳೆಯುತ್ತಿದ್ದ ಖಡ್ಗವನ್ನು ಕೈಯಲ್ಲಿ ತೆಗೆದುಕೊಂಡನು.
07090030a ಭ್ರಾಮಯಿತ್ವಾ ಮಹಾಚರ್ಮ ಚಾಮೀಕರವಿಭೂಷಿತಂ|
07090030c ತಮಸಿಂ ಪ್ರೇಷಯಾಮಾಸ ಕೃತವರ್ಮರಥಂ ಪ್ರತಿ||
ಸುವರ್ಣಭೂಷಿತ ವಿಶಾಲ ಗುರಾಣಿಯನ್ನು ತಿರುಗಿಸುತ್ತಾ ಕತ್ತಿಯನ್ನು ಕೃತವರ್ಮನ ರಥದ ಕಡೆ ಎಸೆದನು.
07090031a ಸ ತಸ್ಯ ಸಶರಂ ಚಾಪಂ ಚಿತ್ತ್ವಾ ಸಂಖ್ಯೇ ಮಹಾನಸಿಃ|
07090031c ಅಭ್ಯಗಾದ್ಧರಣೀಂ ರಾಜಂಶ್ಚ್ಯುತಂ ಜ್ಯೋತಿರಿವಾಂಬರಾತ್||
ರಾಜನ್! ಆ ಮಹಾಖಡ್ಗವು ಶರದೊಂದಿಗೆ ಅವನ ಧನುಸ್ಸನ್ನು ತುಂಡರಿಸಿ ಅಂಬರದಿಂದ ಬಿದ್ದ ನಕ್ಷತ್ರದೋಪಾದಿಯಲ್ಲಿ ಭೂಮಿಯ ಮೇಲೆ ಬಿದ್ದಿತು.
07090032a ಏತಸ್ಮಿನ್ನೇವ ಕಾಲೇ ತು ತ್ವರಮಾಣಾ ಮಹಾರಥಾಃ|
07090032c ವಿವ್ಯಧುಃ ಸಾಯಕೈರ್ಗಾಢಂ ಕೃತವರ್ಮಾಣಮಾಹವೇ||
ಇದೇ ಸಮಯದಲ್ಲಿ ಮಹಾರಥರು ಆಹವದಲ್ಲಿ ತ್ವರೆಮಾಡಿ ಕೃತವರ್ಮನನ್ನು ಸಾಯಕಗಳಿಂದ ಗಾಢವಾಗಿ ಹೊಡೆದರು.
07090033a ಅಥಾನ್ಯದ್ಧನುರಾದಾಯ ತ್ಯಕ್ತ್ವಾ ತಚ್ಚ ಮಹದ್ಧನುಃ|
07090033c ವಿಶೀರ್ಣಂ ಭರತಶ್ರೇಷ್ಠ ಹಾರ್ದಿಕ್ಯಃ ಪರವೀರಹಾ||
07090034a ವಿವ್ಯಾಧ ಪಾಂಡವಾನ್ಯುದ್ಧೇ ತ್ರಿಭಿಸ್ತ್ರಿಭಿರಜಿಹ್ಮಗೈಃ|
07090034c ಶಿಖಂಡಿನಂ ಚ ವಿವ್ಯಾಧ ತ್ರಿಭಿಃ ಪಂಚಭಿರೇವ ಚ||
ಭರತಶ್ರೇಷ್ಠ! ಪರವೀರಹ ಹಾರ್ದಿಕ್ಯನು ತುಂಡಾದ ಧನುಸ್ಸನ್ನು ತೊರೆದು ಇನ್ನೊಂದು ಮಹಾ ಧನುಸ್ಸನ್ನು ತೆಗೆದುಕೊಂಡು ಯುದ್ಧದಲ್ಲಿ ಪಾಂಡವರನ್ನು ಮೂರು ಮೂರು ಜಿಹ್ಮಗಗಳಿಂದ ಹೊಡೆದನು. ಶಿಖಂಡಿಯನ್ನು ಮೂರು ಮತ್ತು ಐದು ಬಾಣಗಳಿಂದ ಹೊಡೆದನು.
07090035a ಧನುರನ್ಯತ್ಸಮಾದಾಯ ಶಿಖಂಡೀ ತು ಮಹಾಯಶಾಃ|
07090035c ಅವಾರಯತ್ಕೂರ್ಮನಖೈರಾಶುಗೈರ್ಹೃದಿಕಾತ್ಮಜಂ||
ಮಹಾಯಶಸ್ವೀ ಶಿಖಂಡಿಯಾದರೋ ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಆಮೆಯ ಉಗುರಿನಂತೆ ಮೊನಚಾದ ಆಶುಗಗಳಿಂದ ಹಾರ್ದಿಕಾತ್ಮಜನನ್ನು ಹೊಡೆದನು.
07090036a ತತಃ ಕ್ರುದ್ಧೋ ರಣೇ ರಾಜನ್ ಹೃದಿಕಸ್ಯಾತ್ಮಸಂಭವಃ|
07090036c ಅಭಿದುದ್ರಾವ ವೇಗೇನ ಯಾಜ್ಞಸೇನಿಂ ಮಹಾರಥಂ||
07090037a ಭೀಷ್ಮಸ್ಯ ಸಮರೇ ರಾಜನ್ಮೃತ್ಯೋರ್ಹೇತುಂ ಮಹಾತ್ಮನಃ|
07090037c ವಿದರ್ಶಯನ್ಬಲಂ ಶೂರಃ ಶಾರ್ದೂಲ ಇವ ಕುಂಜರಂ||
ರಾಜನ್! ಆಗ ಹೃದಿಕನ ಆತ್ಮಸಂಭವ ಶೂರನು ರಣದಲ್ಲಿ ಕ್ರುದ್ಧನಾಗಿ ವೇಗದಿಂದ ಆನೆಯನ್ನು ಆಕ್ರಮಣಿಸುವ ಸಿಂಹದಂತೆ ಸಮರದಲ್ಲಿ ಮಹಾತ್ಮ ಭೀಷ್ಮನ ಮೃತ್ಯುವಿಗೆ ಕಾರಣನಾದ ಮಹಾರಥ ಯಾಜ್ಞಸೇನಿಯನ್ನು ಆಕ್ರಮಣಿಸಿದನು.
07090038a ತೌ ದಿಶಾಗಜಸಂಕಾಶೌ ಜ್ವಲಿತಾವಿವ ಪಾವಕೌ|
07090038c ಸಮಾಸೇದತುರನ್ಯೋನ್ಯಂ ಶರಸಂಘೈರರಿಂದಮೌ||
ದಿಗ್ಗಜಗಳಂತಿದ್ದ, ಅಗ್ನಿಗಳಂತೆ ಪ್ರಜ್ವಲಿಸುತ್ತಿದ್ದ ಆ ಇಬ್ಬರು ಅರಿಂದಮರೂ ಅನ್ಯೋನ್ಯರನ್ನು ಶರಸಂಘಗಳಿಂದ ಸಂಘರ್ಷಿಸಿದರು.
07090039a ವಿಧುನ್ವಾನೌ ಧನುಃಶ್ರೇಷ್ಠೇ ಸಂದಧಾನೌ ಚ ಸಾಯಕಾನ್|
07090039c ವಿಸೃಜಂತೌ ಚ ಶತಶೋ ಗಭಸ್ತೀನಿವ ಭಾಸ್ಕರೌ||
ತಮ್ಮ ತಮ್ಮ ಶ್ರೇಷ್ಠ ಧನುಸ್ಸುಗಳನ್ನು ಟೇಂಕರಿಸುತ್ತಾ ಸಾಯಕಗಳನ್ನು ಹೂಡುತ್ತಾ ಇಬ್ಬರು ಸೂರ್ಯರು ತಮ್ಮ ತಮ್ಮ ಕಿರಣಗಳನ್ನು ಪಸರಿಸುವಂತೆ ನೂರಾರು ಬಾಣಗಳನ್ನು ಪರಸ್ಪರರ ಮೇಲೆ ಸುರಿಸಿದರು.
07090040a ತಾಪಯಂತೌ ಶರೈಸ್ತೀಕ್ಷ್ಣೈರನ್ಯೋನ್ಯಂ ತೌ ಮಹಾರಥೌ|
07090040c ಯುಗಾಂತಪ್ರತಿಮೌ ವೀರೌ ರೇಜತುರ್ಭಾಸ್ಕರಾವಿವ||
ಆ ಇಬ್ಬರು ಅಪ್ರತಿಮ ವೀರ ಮಹಾರಥರು ತೀಕ್ಷ್ಣ ಶರಗಳಿಂದ ಅನ್ಯೋನ್ಯರನ್ನು ಸಂತಾಪಗೊಳಿಸುತ್ತಾ ಪ್ರಳಯಕಾಲದ ಭಾಸ್ಕರರಂತೆ ಪ್ರಕಾಶಿಸಿದರು.
07090041a ಕೃತವರ್ಮಾ ತು ರಭಸಂ ಯಾಜ್ಞಸೇನಿಂ ಮಹಾರಥಂ|
07090041c ವಿದ್ಧ್ವೇಷೂಣಾಂ ತ್ರಿಸಪ್ತತ್ಯಾ ಪುನರ್ವಿವ್ಯಾಧ ಸಪ್ತಭಿಃ||
ಕೃತವರ್ಮನಾದರೋ ಮಹಾರಥ ಯಾಜ್ಞಸೇನಿಯನ್ನು ರಭಸದಿಂದ ಎಪ್ಪತ್ಮೂರು ಬಾಣಗಳಿಂದ ಹೊಡೆದು ಪುನಃ ಏಳು ಬಾಣಗಳಿಂದ ಹೊಡೆದನು.
07090042a ಸ ಗಾಢವಿದ್ಧೋ ವ್ಯಥಿತೋ ರಥೋಪಸ್ಥ ಉಪಾವಿಶತ್|
07090042c ವಿಸೃಜನ್ಸಶರಂ ಚಾಪಂ ಮೂರ್ಚಯಾಭಿಪರಿಪ್ಲುತಃ||
ಅದರಿಂದ ವಿಪರೀತವಾಗಿ ಗಾಯಗೊಂಡ ಶಿಖಂಡಿಯು ವ್ಯಥಿತನಾಗಿ ರಥದಲ್ಲಿ ಆಸನದ ಪಕ್ಕಕ್ಕೆ ಜರುಗಿ ಕುಳಿತನು. ಧನುರ್ಬಾಣಗಳನ್ನು ಬಿಟ್ಟು ಮೂರ್ಛಿತನಾದನು.
07090043a ತಂ ವಿಷಣ್ಣಂ ರಥೇ ದೃಷ್ಟ್ವಾ ತಾವಕಾ ಭರತರ್ಷಭ|
07090043c ಹಾರ್ದಿಕ್ಯಂ ಪೂಜಯಾಮಾಸುರ್ವಾಸಾಂಸ್ಯಾದುಧುವುಶ್ಚ ಹ||
ಭರತರ್ಷಭ! ರಥದಲ್ಲಿ ವಿಷಣ್ಣನಾಗಿದ್ದ ಶಿಖಂಡಿಯನ್ನು ನೋಡಿ ನಿನ್ನವರು ಹಾರ್ದಿಕ್ಯನನ್ನು ಗೌರವಿಸಿ ಅಂಗವಸ್ತ್ರಗಳನ್ನು ಮೇಲಕ್ಕೆ ಹಾರಿಸಿದರು.
07090044a ಶಿಖಂಡಿನಂ ತಥಾ ಜ್ಞಾತ್ವಾ ಹಾರ್ದಿಕ್ಯಶರಪೀಡಿತಂ|
07090044c ಅಪೋವಾಹ ರಣಾದ್ಯಂತಾ ತ್ವರಮಾಣೋ ಮಹಾರಥಂ||
ಶಿಖಂಡಿಯು ಹಾರ್ದಿಕ್ಯನ ಶರಗಳಿಂದ ಹಾಗೆ ಪೀಡಿತನಾದುದನ್ನು ಕಂಡು ಅವನ ಸಾರಥಿಯು ಆ ಮಹಾರಥನನ್ನು ತ್ವರೆಮಾಡಿ ರಣದಿಂದ ದೂರಕ್ಕೆ ಕೊಂಡೊಯ್ದನು.
07090045a ಸಾದಿತಂ ತು ರಥೋಪಸ್ಥೇ ದೃಷ್ಟ್ವಾ ಪಾರ್ಥಾಃ ಶಿಖಂಡಿನಂ|
07090045c ಪರಿವವ್ರೂ ರಥೈಸ್ತೂರ್ಣಂ ಕೃತವರ್ಮಾಣಮಾಹವೇ||
ರಥದಲ್ಲಿ ಒರಗಿದ್ದ ಶಿಖಂಡಿಯನ್ನು ನೋಡಿದ ಪಾರ್ಥರು ತಕ್ಷಣವೇ ಆಹವದಲ್ಲಿ ರಥಗಳಿಂದ ಕೃತವರ್ಮನನ್ನು ಸುತ್ತುವರೆದರು.
07090046a ತತ್ರಾದ್ಭುತಂ ಪರಂ ಚಕ್ರೇ ಕೃತವರ್ಮಾ ಮಹಾರಥಃ|
07090046c ಯದೇಕಃ ಸಮರೇ ಪಾರ್ಥಾನ್ವಾರಯಾಮಾಸ ಸಾನುಗಾನ್||
ಅಲ್ಲಿ ಮಹಾರಥ ಕೃತವರ್ಮನು ಸಮರದಲ್ಲಿ ಒಬ್ಬನೇ ಅನುಯಾಯಿಗಳೊಡನಿದ್ದ ಪಾರ್ಥರನ್ನು ತಡೆದು ಪರಮ ಅದ್ಭುತ ಕೃತ್ಯವನ್ನೆಸಗಿದನು.
07090047a ಪಾರ್ಥಾನ್ಜಿತ್ವಾಜಯಚ್ಚೇದೀನ್ಪಾಂಚಾಲಾನ್ಸೃಂಜಯಾನಪಿ|
07090047c ಕೇಕಯಾಂಶ್ಚ ಮಹಾವೀರ್ಯಾನ್ಕೃತವರ್ಮಾ ಮಹಾರಥಃ||
ಮಹಾರಥ ಕೃತವರ್ಮನು ಚೇದಿ-ಪಾಂಚಾಲ-ಸೃಂಜಯ-ಕೇಕಯ ಮಹಾವೀರ್ಯರನ್ನು ಸೋಲಿಸಿ ಪಾರ್ಥರನ್ನೂ ಗೆದ್ದನು.
07090048a ತೇ ವಧ್ಯಮಾನಾಃ ಸಮರೇ ಹಾರ್ದಿಕ್ಯೇನ ಸ್ಮ ಪಾಂಡವಾಃ|
07090048c ಇತಶ್ಚೇತಶ್ಚ ಧಾವಂತೋ ನೈವ ಚಕ್ರುರ್ಧೃತಿಂ ರಣೇ||
ಸಮರದಲ್ಲಿ ಹಾರ್ದಿಕ್ಯನಿಂದ ವಧಿಸಲ್ಪಡುತ್ತಿದ್ದ ಪಾಂಡವ ಯೋಧರು ರಣಾಂಗಣದಲ್ಲಿ ನಿಲ್ಲುವ ಮನಸ್ಸು ಮಾಡದೇ ಇಲ್ಲಿಂದಲ್ಲಿಗೆ ಓಡುತ್ತಿದ್ದರು.
07090049a ಜಿತ್ವಾ ಪಾಂಡುಸುತಾನ್ಯುದ್ಧೇ ಭೀಮಸೇನಪುರೋಗಮಾನ್|
07090049c ಹಾರ್ದಿಕ್ಯಃ ಸಮರೇಽತಿಷ್ಠದ್ವಿಧೂಮ ಇವ ಪಾವಕಃ||
ಭೀಮಸೇನನ ನಾಯಕತ್ವದಲ್ಲಿದ್ದ ಪಾಂಡುಸುತರನ್ನು ಯುದ್ಧದಲ್ಲಿ ಗೆದ್ದು ಹಾರ್ದಿಕ್ಯನು ರಣದಲ್ಲಿ ಹೊಗೆಯಿಲ್ಲದ ಬೆಂಕಿಯಂತೆ ಪ್ರಕಾಶಿಸಿದನು.
07090050a ತೇ ದ್ರಾವ್ಯಮಾಣಾಃ ಸಮರೇ ಹಾರ್ದಿಕ್ಯೇನ ಮಹಾರಥಾಃ|
07090050c ವಿಮುಖಾಃ ಸಮಪದ್ಯಂತ ಶರವೃಷ್ಟಿಭಿರರ್ದಿತಾಃ||
ಸಮರದಲ್ಲಿ ಹಾರ್ದಿಕ್ಯನಿಂದ ಪಲಾಯನಗೊಳಿಸಲ್ಪಟ್ಟ ಆ ಮಹಾರಥರು ಅವನ ಶರವೃಷ್ಟಿಯಿಂದ ಪೀಡಿತರಾಗಿ ವಿಮುಖರಾದರು."
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಾತ್ಯಕಿಪ್ರವೇಶೇ ಕೃತವರ್ಮಪರಾಕ್ರಮೇ ನವತಿತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಾತ್ಯಕಿಪ್ರವೇಶೇ ಕೃತವರ್ಮಪರಾಕ್ರಮ ಎನ್ನುವ ತೊಂಭತ್ತನೇ ಅಧ್ಯಾಯವು.