Drona Parva: Chapter 83

ದ್ರೋಣ ಪರ್ವ: ಜಯದ್ರಥವಧ ಪರ್ವ

೮೩

ದ್ರೌಪದೇಯರು ಸೋಮದತ್ತಿಯ ಮಗ ಶಲನನ್ನು ವಧಿಸಿದುದು (೧-೧೨). ಭೀಮಸೇನನಿಂದ ಬಕನ ತಮ್ಮ ಅಲಂಬುಸನ ಪರಾಜಯ (೧೩-೩೯).

07083001 ಸಂಜಯ ಉವಾಚ|

07083001a ದ್ರೌಪದೇಯಾನ್ಮಹೇಷ್ವಾಸಾನ್ಸೌಮದತ್ತಿರ್ಮಹಾಯಶಾಃ|

07083001c ಏಕೈಕಂ ಪಂಚಭಿರ್ವಿದ್ಧ್ವಾ ಪುನರ್ವಿವ್ಯಾಧ ಸಪ್ತಭಿಃ||

ಸಂಜಯನು ಹೇಳಿದನು: “ಮಹಾಯಶಸ್ವಿ ಸೌಮದತ್ತಿ (ಶಲ) ಯು ಮಹೇಷ್ವಾಸ ದ್ರೌಪದೇಯರು ಒಬ್ಬೊಬ್ಬರನ್ನೂ ಐದೈದು ಬಾಣಗಳಿಂದ ಹೊಡೆದು ಪುನಃ ಏಳರಿಂದ ಗಾಯಗೊಳಿಸಿದನು.

07083002a ತೇ ಪೀಡಿತಾ ಭೃಶಂ ತೇನ ರೌದ್ರೇಣ ಸಹಸಾ ವಿಭೋ|

07083002c ಪ್ರಮೂಢಾ ನೈವ ವಿವಿದುರ್ಮೃಧೇ ಕೃತ್ಯಂ ಸ್ಮ ಕಿಂ ಚನ||

ವಿಭೋ! ರೌದ್ರನಾದ ಅವನಿಂದ ಒಮ್ಮೆಲೇ ತುಂಬಾ ಪೀಡಿತರಾದ ಅವರು ಯುದ್ಧದಲ್ಲಿ ಏನು ಮಾಡಬೇಕೆಂದು ತಿಳಿಯದೇ ಸ್ವಲ್ಪ ಹೊತ್ತು ವಿಮೂಢರಾದರು.

07083003a ನಾಕುಲಿಸ್ತು ಶತಾನೀಕಃ ಸೌಮದತ್ತಿಂ ನರರ್ಷಭಂ|

07083003c ದ್ವಾಭ್ಯಾಂ ವಿದ್ಧ್ವಾನದದ್ಧೃಷ್ಟಃ ಶರಾಭ್ಯಾಂ ಶತ್ರುತಾಪನಃ||

ಶತ್ರುತಾಪನ ನಾಕುಲಿ ಶತಾನೀಕನಾದರೋ ನರರ್ಷಭ ಸೌಮದತ್ತಿಯನ್ನು ಎರಡು ಬಾಣಗಳಿಂದ ಪ್ರಹರಿಸಿ ಹೃಷ್ಟನಾಗಿ ನಾದಗೈದನು.

07083004a ತಥೇತರೇ ರಣೇ ಯತ್ತಾಸ್ತ್ರಿಭಿಸ್ತ್ರಿಭಿರಜಿಹ್ಮಗೈಃ|

07083004c ವಿವ್ಯಧುಃ ಸಮರೇ ತೂರ್ಣಂ ಸೌಮದತ್ತಿಮಮರ್ಷಣಂ||

ಆಗ ಇತರರು ಸಮರದಲ್ಲಿ ತಕ್ಷಣವೇ ಮೂರು ಮೂರು ಜಿಹ್ಮಗಗಳಿಂದ ಪ್ರಯತ್ನಪಟ್ಟು ಅಸಹನಶೀಲ ಸೌಮದತ್ತಿಯನ್ನು ಹೊಡೆದರು.

07083005a ಸ ತಾನ್ಪ್ರತಿ ಮಹಾರಾಜ ಚಿಕ್ಷಿಪೇ ಪಂಚ ಸಾಯಕಾನ್|

07083005c ಏಕೈಕಂ ಹೃದಿ ಚಾಜಘ್ನೇ ಏಕೈಕೇನ ಮಹಾಯಶಾಃ||

ಮಹಾರಾಜ! ಆ ಮಹಾಯಶನೂ ಕೂಡ ಅವುಗಳಿಗೆ ಪ್ರತಿಯಾಗಿ ಐದು ಸಾಯಕಗಳನ್ನು ಪ್ರಯೋಗಿಸಿ ಒಂದೊಂದರಿಂದ ಒಬ್ಬೊಬ್ಬರ ಹೃದಯವನ್ನೂ ಹೊಡೆದನು.

07083006a ತತಸ್ತೇ ಭ್ರಾತರಃ ಪಂಚ ಶರೈರ್ವಿದ್ಧಾ ಮಹಾತ್ಮನಾ|

07083006c ಪರಿವಾರ್ಯ ರಥೈರ್ವೀರಂ ವಿವ್ಯಧುಃ ಸಾಯಕೈರ್ಭೃಶಂ||

ಆ ಮಹಾತ್ಮನ ಶರಗಳಿಂದ ಗಾಯಗೊಂಡ ಆ ಐವರು ಸಹೋದರರು ರಥಗಳಿಂದ ಆ ವೀರನ ರಥವನ್ನು ಸುತ್ತುವರೆದು ಸಾಯಕಗಳಿಂದ ಬಹುವಾಗಿ ಅವನನ್ನು ಪ್ರಹರಿಸಿದರು.

07083007a ಆರ್ಜುನಿಸ್ತು ಹಯಾಂಸ್ತಸ್ಯ ಚತುರ್ಭಿರ್ನಿಶಿತೈಃ ಶರೈಃ|

07083007c ಪ್ರೇಷಯಾಮಾಸ ಸಂಕ್ರುದ್ಧೋ ಯಮಸ್ಯ ಸದನಂ ಪ್ರತಿ||

ಆರ್ಜುನಿಯಾದರೋ ಸಂಕ್ರುದ್ಧನಾಗಿ ಅವನ ಕುದುರೆಗಳನ್ನು ನಾಲ್ಕು ನಿಶಿತ ಶರಗಳಿಂದ ಯಮಸದನಕ್ಕೆ ಕಳುಹಿಸಿಕೊಟ್ಟನು.

07083008a ಭೈಮಸೇನಿರ್ಧನುಶ್ಚಿತ್ತ್ವಾ ಸೌಮದತ್ತೇರ್ಮಹಾತ್ಮನಃ|

07083008c ನನಾದ ಬಲವನ್ನಾದಂ ವಿವ್ಯಾಧ ಚ ಶಿತೈಃ ಶರೈಃ||

ಭೈಮಸೇನಿಯು ಮಹಾತ್ಮ ಸೌಮದತ್ತಿಯ ಧನುಸ್ಸನ್ನು ಕತ್ತರಿಸಿ ನಿಶಿತ ಶರಗಳಿಂದ ಅವನನ್ನು ಹೊಡೆದು ಜೋರಾಗಿ ಸಿಂಹನಾದಗೈದನು.

07083009a ಯೌಧಿಷ್ಠಿರೋ ಧ್ವಜಂ ತಸ್ಯ ಚಿತ್ತ್ವಾ ಭೂಮಾವಪಾತಯತ್|

07083009c ನಾಕುಲಿಶ್ಚಾಶ್ವಯಂತಾರಂ ರಥನೀಡಾದಪಾಹರತ್||

ಯುಧಿಷ್ಠಿರನ ಮಗನು ಅವನ ಧ್ವಜವನ್ನು ತುಂಡರಿಸಿ ಬೀಳಿಸಿದನು. ನಕುಲನ ಮಗನು ಅವನ ಸಾರಥಿಯನ್ನು ರಥದಿಂದ ಕೆಳಗೆ ಉರುಳಿಸಿದನು.

07083010a ಸಾಹದೇವಿಸ್ತು ತಂ ಜ್ಞಾತ್ವಾ ಭ್ರಾತೃಭಿರ್ವಿಮುಖೀಕೃತಂ|

07083010c ಕ್ಷುರಪ್ರೇಣ ಶಿರೋ ರಾಜನ್ನಿಚಕರ್ತ ಮಹಾಮನಾಃ||

ರಾಜನ್! ಮಹಾಮನಸ್ವಿ ಸಹದೇವನ ಮಗನಾದರೋ ತನ್ನ ಸಹೋದರರು ಅವನನ್ನು ಪರಾಙ್ಮುಖಗೊಳಿಸಿದ್ದಾರೆಂದು ತಿಳಿದು ಕ್ಷುರಪ್ರದಿಂದ ಅವನ ಶಿರವನ್ನು ಕತ್ತರಿಸಿದನು.

07083011a ತಚ್ಚಿರೋ ನ್ಯಪತದ್ಭೂಮೌ ತಪನೀಯವಿಭೂಷಿತಂ|

07083011c ಭ್ರಾಜಯಂತಂ ರಣೋದ್ದೇಶಂ ಬಾಲಸೂರ್ಯಸಮಪ್ರಭಂ||

ಬಂಗಾರದಿಂದ ವಿಭೂಷಿತವಾಗಿದ್ದ ಆ ನೃಪತಿಯ ಶಿರವು ಬಾಲಸೂರ್ಯನ ಸಮನಾದ ಪ್ರಭೆಯಿಂದ ರಣಭೂಮಿಯನ್ನು ಪ್ರಕಾಶಗೊಳಿಸುತ್ತಾ ಭೂಮಿಯ ಮೇಲೆ ಬಿದ್ದಿತು.

07083012a ಸೌಮದತ್ತೇಃ ಶಿರೋ ದೃಷ್ಟ್ವಾ ನಿಪತತ್ತನ್ಮಹಾತ್ಮನಃ|

07083012c ವಿತ್ರಸ್ತಾಸ್ತಾವಕಾ ರಾಜನ್ಪ್ರದುದ್ರುವುರನೇಕಧಾ||

ರಾಜನ್! ಕೆಳಗೆಬಿದ್ದ ಸೌಮದತ್ತಿಯ ಶಿರಸ್ಸನ್ನು ನೋಡಿ ನಿನ್ನವರು ಬೆದರಿ ಅನೇಕ ದಾರಿಗಳಲ್ಲಿ ಓಡಿಹೋದರು.

07083013a ಅಲಂಬುಸಸ್ತು ಸಮರೇ ಭೀಮಸೇನಂ ಮಹಾಬಲಂ|

07083013c ಯೋಧಯಾಮಾಸ ಸಂಕ್ರುದ್ಧೋ ಲಕ್ಷ್ಮಣಂ ರಾವಣಿರ್ಯಥಾ||

ಅಲಂಬುಸನಾದರೋ ಸಂಕ್ರುದ್ಧನಾಗಿ ಸಮರದಲ್ಲಿ ರಾವಣಿ ಇಂದ್ರಜಿತುವು ಲಕ್ಷ್ಮಣನನ್ನು ಹೇಗೋ ಹಾಗೆ ಮಹಾಬಲ ಭೀಮಸೇನನೊಂದಿಗೆ ಯುದ್ಧಮಾಡತೊಡಗಿದನು.

07083014a ಸಂಪ್ರಯುದ್ಧೌ ರಣೇ ದೃಷ್ಟ್ವಾ ತಾವುಭೌ ನರರಾಕ್ಷಸೌ|

07083014c ವಿಸ್ಮಯಃ ಸರ್ವಭೂತಾನಾಂ ಪ್ರಹರ್ಷಶ್ಚಾಭವತ್ತದಾ||

ಆ ಇಬ್ಬರು ನರ-ರಾಕ್ಷಸರೂ ರಣದಲ್ಲಿ ಯುದ್ಧಕ್ಕೆ ತೊಡಗಿರುವುದನ್ನು ನೋಡಿ ಸರ್ವಭೂತಗಳಿಗೆ ವಿಸ್ಮಯವೂ ಹರ್ಷವೂ ಉಂಟಾಯಿತು.

07083015a ಆರ್ಷ್ಯಶೃಂಗಿಂ ತತೋ ಭೀಮೋ ನವಭಿರ್ನಿಶಿತೈಃ ಶರೈಃ|

07083015c ವಿವ್ಯಾಧ ಪ್ರಹಸನ್ರಾಜನ್ರಾಕ್ಷಸೇಂದ್ರಮಮರ್ಷಣಂ||

ರಾಜನ್! ಆಗ ಭೀಮನು ಜೋರಾಗಿ ನಗುತ್ತಾ ಒಂಭತ್ತು ನಿಶಿತ ಶರಗಳಿಂದ ಅಸಹನಶೀಲ ರಾಕ್ಷಸೇಂದ್ರ ಆರ್ಷ್ಯಶೃಂಗಿಯನ್ನು ಹೊಡೆದನು.

07083016a ತದ್ರಕ್ಷಃ ಸಮರೇ ವಿದ್ಧಂ ಕೃತ್ವಾ ನಾದಂ ಭಯಾವಹಂ|

07083016c ಅಭ್ಯದ್ರವತ್ತತೋ ಭೀಮಂ ಯೇ ಚ ತಸ್ಯ ಪದಾನುಗಾಃ||

ಸಮರದಲ್ಲಿ ಪ್ರಹೃತನಾದ ಆ ರಾಕ್ಷಸನು ಭಯಾನಕವಾಗಿ ಗರ್ಜನೆ ಮಾಡುತ್ತಾ ಭೀಮ ಮತ್ತು ಅವನ ಅನುಯಾಯಿಗಳ ಮೇಲೆ ಎರಗಿದನು.

07083017a ಸ ಭೀಮಂ ಪಂಚಭಿರ್ವಿದ್ಧ್ವಾ ಶರೈಃ ಸನ್ನತಪರ್ವಭಿಃ|

07083017c ಭೀಮಾನುಗಾಂ ಜಘಾನಾಶು ರಥಾಂಸ್ತ್ರಿಂಶದರಿಂದಮಃ|

07083017e ಪುನಶ್ಚತುಃಶತಾನ್ ಹತ್ವಾ ಭೀಮಂ ವಿವ್ಯಾಧ ಪತ್ರಿಣಾ||

ಆ ಅರಿಂದಮನು ಭೀಮನನ್ನು ಐದು ಸನ್ನತಪರ್ವ ಶರಗಳಿಂದ ಹೊಡೆದು ಭೀಮನನ್ನು ಅನುಸರಿಸಿ ಬಂದಿದ್ದ ಮುನ್ನೂರು ರಥಿಕರನ್ನು ಸಂಹರಿಸಿದನು. ಪುನಃ ನಾಲ್ಕುನೂರು ಮಂದಿಯನ್ನು ಸಂಹರಿಸಿ ಭೀಮನನ್ನು ಪತ್ರಿಗಳಿಂದ ಹೊಡೆದನು.

07083018a ಸೋಽತಿವಿದ್ಧಸ್ತದಾ ಭೀಮೋ ರಾಕ್ಷಸೇನ ಮಹಾಬಲಃ|

07083018c ನಿಷಸಾದ ರಥೋಪಸ್ಥೇ ಮೂರ್ಚಯಾಭಿಪರಿಪ್ಲುತಃ||

ಹಾಗೆ ರಾಕ್ಷಸನಿಂದ ಗಾಯಗೊಂಡ ಮಹಾಬಲ ಭೀಮನು ಒಂದು ಕ್ಷಣ ಮೂರ್ಛೆಹೋಗಿ ರಥದಲ್ಲಿಯೇ ಒರಗಿದನು.

07083019a ಪ್ರತಿಲಭ್ಯ ತತಃ ಸಂಜ್ಞಾಂ ಮಾರುತಿಃ ಕ್ರೋಧಮೂರ್ಚಿತಃ|

07083019c ವಿಕೃಷ್ಯ ಕಾರ್ಮುಕಂ ಘೋರಂ ಭಾರಸಾಧನಮುತ್ತಮಂ|

07083019e ಅಲಂಬುಸಂ ಶರೈಸ್ತೀಕ್ಷ್ಣೈರರ್ದಯಾಮಾಸ ಸರ್ವತಃ||

ಆಗ ಪುನಃ ಸಂಜ್ಞೆಗಳನ್ನು ಪಡೆದುಕೊಂಡು ಮಾರುತಿಯು ಕ್ರೋಧಮೂರ್ಛಿತನಾಗಿ, ಭಾರವನ್ನು ಹೊರಬಲ್ಲ ಉತ್ತಮ ಘೋರ ಕಾರ್ಮುಕವನ್ನು ಎಳೆದು ತೀಕ್ಷ್ಣ ಶರಗಳಿಂದ ಅಲಂಬುಸನನ್ನು ಎಲ್ಲಕಡೆಗಳಿಂದ ಹೊಡೆಯತೊಡಗಿದನು.

07083020a ಸ ವಿದ್ಧೋ ಬಹುಭಿರ್ಬಾಣೈರ್ನೀಲಾಂಜನಚಯೋಪಮಃ|

07083020c ಶುಶುಭೇ ಸರ್ವತೋ ರಾಜನ್ಪ್ರದೀಪ್ತ ಇವ ಕಿಂಶುಕ||

ರಾಜನ್! ಅಂಜನದ ರಾಶಿಯಂತೆ ನೀಲ ಮೈವರ್ಣದ ಅವನು ಅನೇಕ ಬಾಣಗಳಿಂದ ಗಾಯಗೊಂಡು ಕುಂಶುಕದ ಮರದಂತೆ ಎಲ್ಲಕಡೆಗಳಲ್ಲಿ ಶೋಭಿಸಿದನು.

07083021a ಸ ವಧ್ಯಮಾನಃ ಸಮರೇ ಭೀಮಚಾಪಚ್ಯುತೈಃ ಶರೈಃ|

07083021c ಸ್ಮರನ್ಭ್ರಾತೃವಧಂ ಚೈವ ಪಾಂಡವೇನ ಮಹಾತ್ಮನಾ||

07083022a ಘೋರಂ ರೂಪಮಥೋ ಕೃತ್ವಾ ಭೀಮಸೇನಮಭಾಷತ|

ಭೀಮಸೇನನ ಚಾಪದಿಂದ ಬಿಡಲ್ಪಟ್ಟ ಶರಗಳಿಂದ ಗಾಯಗೊಂಡ ಅವನು ಮಹಾತ್ಮ ಪಾಂಡವನಿಂದಾದ ತನ್ನ ಸಹೋದರನ ವಧೆಯನ್ನು ಸ್ಮರಿಸಿಕೊಂಡು, ಘೋರರೂಪವನ್ನು ತಾಳಿ ಭೀಮಸೇನನಿಗೆ ಹೇಳಿದನು:

07083022c ತಿಷ್ಠೇದಾನೀಂ ರಣೇ ಪಾರ್ಥ ಪಶ್ಯ ಮೇಽದ್ಯ ಪರಾಕ್ರಮಂ||

07083023a ಬಕೋ ನಾಮ ಸುದುರ್ಬುದ್ಧೇ ರಾಕ್ಷಸಪ್ರವರೋ ಬಲೀ|

07083023c ಪರೋಕ್ಷಂ ಮಮ ತದ್ವೃತ್ತಂ ಯದ್ಭ್ರಾತಾ ಮೇ ಹತಸ್ತ್ವಯಾ||

“ಪಾರ್ಥ! ಈ ರಣದಲ್ಲಿ ನಿಲ್ಲು! ಇಂದು ನನ್ನ ಪರಾಕ್ರಮವನ್ನು ನೋಡು! ಸುದುರ್ಬುದ್ಧೇ! ನನ್ನ ಪರೋಕ್ಷದಲ್ಲಿ ನನ್ನ ಸಹೋದರ ಬಕನೆಂಬ ಹೆಸರಿನ ಬಲಶಾಲೀ ರಾಕ್ಷಸಪ್ರವರನನ್ನು ಸಂಹರಿಸಿದ್ದೀಯೆ!”

07083024a ಏವಮುಕ್ತ್ವಾ ತತೋ ಭೀಮಮಂತರ್ಧಾನಗತಸ್ತದಾ|

07083024c ಮಹಾತಾ ಶರವರ್ಷೇಣ ಭೃಶಂ ತಂ ಸಮವಾಕಿರತ್||

ಭೀಮನಿಗೆ ಹೀಗೆ ಹೇಳಿ ಅವನು ಅಂತರ್ಧಾನನಾಗಿ ಮಹಾ ಶರವರ್ಷಗಳಿಂದ ಅವನನ್ನು ತುಂಬಾ ಮುಸುಕಿ ಹಾಕಿದನು.

07083025a ಭೀಮಸ್ತು ಸಮರೇ ರಾಜನ್ನದೃಶ್ಯೇ ರಾಕ್ಷಸೇ ತದಾ|

07083025c ಆಕಾಶಂ ಪೂರಯಾಮಾಸ ಶರೈಃ ಸನ್ನತಪರ್ವಭಿಃ||

ರಾಜನ್! ರಾಕ್ಷಸನು ಅದೃಶ್ಯನಾಗಲು ಭೀಮನಾದರೋ ಆಕಾಶವನ್ನು ಸನ್ನತಪರ್ವ ಶರಗಳಿಂದ ತುಂಬಿಬಿಟ್ಟನು.

07083026a ಸ ವಧ್ಯಮಾನೋ ಭೀಮೇನ ನಿಮೇಷಾದ್ರಥಮಾಸ್ಥಿತಃ|

07083026c ಜಗಾಮ ಧರಣೀಂ ಕ್ಷುದ್ರಃ ಖಂ ಚೈವ ಸಹಸಾಗಮತ್||

ಭೀಮನಿಂದ ಹೊಡೆಯಲ್ಪಟ್ಟ ಆ ಕ್ಷುದ್ರನು ಆಕಾಶವನ್ನೇರಿದ್ದರೂ ನಿಮಿಷಮಾತ್ರದಲ್ಲಿ ಭೂಮಿಗಿಳಿದು ಒಮ್ಮೆಲೇ ರಥವನ್ನೇರಿದನು.

07083027a ಉಚ್ಚಾವಚಾನಿ ರೂಪಾಣಿ ಚಕಾರ ಸುಬಹೂನಿ ಚ|

07083027c ಉಚ್ಚಾವಚಾಸ್ತಥಾ ವಾಚೋ ವ್ಯಾಜಹಾರ ಸಮಂತತಃ||

ಪುನಃ ಮೇಲೇರಿ ಅನೇಕ ರೂಪಗಳನ್ನು ಧರಿಸಿ, ಜೋರಾಗಿ ಗರ್ಜಿಸುತ್ತಾ, ಎಲ್ಲಾಕಡೆ ಸಂಚರಿಸುತ್ತಿದ್ದನು.

07083028a ತೇನ ಪಾಂಡವಸೈನ್ಯಾನಾಂ ಮೃದಿತಾ ಯುಧಿ ವಾರಣಾಃ|

07083028c ಹಯಾಶ್ಚ ಬಹವೋ ರಾಜನ್ಪತ್ತಯಶ್ಚ ತಥಾ ಪುನಃ|

07083028e ರಥೇಭ್ಯೋ ರಥಿನಃ ಪೇತುಸ್ತಸ್ಯ ನುನ್ನಾಃ ಸ್ಮ ಸಾಯಕೈಃ||

ರಾಜನ್! ಅವನ ಸಾಯಕಗಳಿಂದ ಯುದ್ಧದಲ್ಲಿ ಪಾಂಡವಸೇನೆಯ ಅನೇಕ ಆನೆಗಳು, ಕುದುರೆಗಳು ಮತ್ತು ಪದಾತಿಗಳು ಹತವಾದವು; ರಥಗಳಿಂದ ರಥಿಗಳು ಕೆಳಗುರುಳಿದರು.

07083029a ಶೋಣಿತೋದಾಂ ರಥಾವರ್ತಾಂ ಹಸ್ತಿಗ್ರಾಹಸಮಾಕುಲಾಂ|

07083029c ಚತ್ರಹಂಸಾಂ ಕರ್ದಮಿನೀಂ ಬಾಹುಪನ್ನಗಸಂಕುಲಾಂ||

07083030a ನದೀಂ ಪ್ರವರ್ತಯಾಮಾಸ ರಕ್ಷೋಗಣಸಮಾಕುಲಾಂ|

07083030c ವಹಂತೀಂ ಬಹುಧಾ ರಾಜಂಶ್ಚೇದಿಪಾಂಚಾಲಸೃಂಜಯಾನ್||

ರಾಜನ್! ಆ ರಾಕ್ಷಸನು ರಕ್ತವೇ ನೀರಾದ, ರಥಗಳೇ ಸುಳಿಗಳಾಗಿರುವ, ಆನೆಗಳೇ ಮೊಸಳೆಗಳ ಸಮಾಕುಲಗಳಂತಿರುವ, ಚತ್ರಗಳೇ ಹಂಸಗಳಂತಿರುವ, ಕೆಸರಿರುವ, ಬಾಹುಗಳೇ ಹಾವುಗಳ ಸಂಕುಲಗಳಂತಿರುವ, ಅನೇಕ ಚೇದಿ-ಪಾಂಚಾಲ-ಸೃಂಜಯರು ತೇಲುತ್ತಿರುವ ನದಿಯನ್ನೇ ಹರಿಸಿದನು.

07083031a ತಂ ತಥಾ ಸಮರೇ ರಾಜನ್ವಿಚರಂತಮಭೀತವತ್|

07083031c ಪಾಂಡವಾ ಭೃಶಸಂವಿಗ್ನಾಃ ಪ್ರಾಪಶ್ಯಂಸ್ತತ್ಸ್ಯ ವಿಕ್ರಮಂ||

ರಾಜನ್! ಹೀಗೆ ಸಮರದಲ್ಲಿ ಭೀತಿಯಿಲ್ಲದೇ ಸಂಚರಿಸುತ್ತಿದ್ದ ಅವನ ವಿಕ್ರಮವನ್ನು ಪಾಂಡವರು ತುಂಬಾ ಸಂವಿಗ್ನರಾಗಿ ನೋಡತೊಡಗಿದರು.

07083032a ತಾವಕಾನಾಂ ತು ಸೈನ್ಯಾನಾಂ ಪ್ರಹರ್ಷಃ ಸಮಜಾಯತ|

07083032c ವಾದಿತ್ರನಿನದಶ್ಚೋಗ್ರಃ ಸುಮಹಾಽಲ್ಲೋಮಹರ್ಷಣ||

ನಿನ್ನವರ ಸೇನೆಗಳಲ್ಲಂತೂ ತುಂಬಾ ಹರ್ಷದ ವಾದ್ಯದ ಜೋರಾದ ಧ್ವನಿಯು, ಲೋಮಹರ್ಷಣ ಮಹಾಧ್ವನಿಯು ಹುಟ್ಟಿಕೊಂಡಿತು.

07083033a ತಂ ಶ್ರುತ್ವಾ ನಿನದಂ ಘೋರಂ ತವ ಸೈನ್ಯಸ್ಯ ಪಾಂಡವಃ|

07083033c ನಾಮೃಷ್ಯತ ಯಥಾ ನಾಗಸ್ತಲಶಬ್ದಂ ಸಮೀರಿತಂ||

ನಿನ್ನ ಸೇನೆಯ ಆ ಘೋರ ನಿನಾದವನ್ನು ಕೇಳಿ ಚಪ್ಪಾಳೆಯ ಶಬ್ಧವನ್ನು ಆನೆಗಳು ಸಹಿಸಿಕೊಳ್ಳಲಾರದಂತೆ ಪಾಂಡವನು ಸಹಿಸಿಕೊಳ್ಳಲಿಲ್ಲ.

07083034a ತತಃ ಕ್ರೋಧಾಭಿತಾಮ್ರಾಕ್ಷೋ ನಿರ್ದಹನ್ನಿವ ಪಾವಕಃ|

07083034c ಸಂದಧೇ ತ್ವಾಷ್ಟ್ರಮಸ್ತ್ರಂ ಸ ಸ್ವಯಂ ತ್ವಷ್ಟೇವ ಮಾರಿಷ||

ಮಾರಿಷ! ಆಗ ಕ್ರೋಧದಿಂದ ಕಣ್ಣುಗಳು ಕೆಂಪಾದ ಅವನು ಸುಡುತ್ತಿರುವ ಪಾವಕನಂತೆ, ಸ್ವಯಂ ತ್ವಷ್ಟನಂತೆ ತ್ವಾಷ್ಟ್ರ ಅಸ್ತ್ರವನ್ನು ಹೂಡಿದನು.

07083035a ತತಃ ಶರಸಹಸ್ರಾಣಿ ಪ್ರಾದುರಾಸನ್ಸಮಂತತಃ|

07083035c ತೈಃ ಶರೈಸ್ತವ ಸೈನ್ಯಸ್ಯ ವಿದ್ರಾವಃ ಸುಮಹಾನಭೂತ್||

ಆಗ ಸಾವಿರಾರು ಶರಗಳು ಸುತ್ತಲೂ ಹೊರಬಂದು ಹರಡಿಕೊಂಡವು. ಆ ಶರಗಳಿಂದಾಗಿ ನಿನ್ನ ಸೈನ್ಯವು ಓಡಿಹೋಯಿತು. ಅದೊಂದು ಅತಿ ದೊಡ್ಡದಾಗಿತ್ತು.

07083036a ತದಸ್ತ್ರಂ ಪ್ರೇಷಿತಂ ತೇನ ಭೀಮಸೇನೇನ ಸಂಯುಗೇ|

07083036c ರಾಕ್ಷಸಸ್ಯ ಮಹಾಮಾಯಾಂ ಹತ್ವಾ ರಾಕ್ಷಸಮಾರ್ದಯತ್||

ಸಂಯುಗದಲ್ಲಿ ಆ ಅಸ್ತ್ರವನ್ನು ಪ್ರಯೋಗಿಸಿ ಭೀಮಸೇನನು ರಾಕ್ಷಸನ ಮಹಾಮಾಯೆಯನ್ನು ನಾಶಗೊಳಿಸಿ ರಾಕ್ಷಸನನ್ನು ಪೀಡಿಸಿದನು.

07083037a ಸ ವಧ್ಯಮಾನೋ ಬಹುಧಾ ಭೀಮಸೇನೇನ ರಾಕ್ಷಸಃ|

07083037c ಸಂತ್ಯಜ್ಯ ಸಮ್ಯುಗೇ ಭೀಮಂ ದ್ರೋಣಾನೀಕಮುಪಾದ್ರವತ್||

ಭೀಮಸೇನನಿಂದ ಬಹಳವಾಗಿ ವಧಿಸಲ್ಪಟ್ಟ ರಾಕ್ಷಸನು ಸಂಯುಗದಲ್ಲಿ ಭೀಮನನ್ನು ಬಿಟ್ಟು ದ್ರೋಣನ ಸೇನೆಯ ಕಡೆ ಓಡಿ ಹೋದನು.

07083038a ತಸ್ಮಿಂಸ್ತು ನಿರ್ಜಿತೇ ರಾಜನ್ರಾಕ್ಷಸೇಂದ್ರೇ ಮಹಾತ್ಮನಾ|

07083038c ಅನಾದಯನ್ಸಿಂಹನಾದೈಃ ಪಾಂಡವಾಃ ಸರ್ವತೋದಿಶಂ||

ರಾಜನ್! ಹೀಗೆ ಆ ರಾಕ್ಷಸೇಂದ್ರನನ್ನು ಮಹಾತ್ಮನು ಸೋಲಿಸಲು ಪಾಂಡವರು ಎಲ್ಲ ದಿಕ್ಕುಗಳಲ್ಲಿ ಸಿಂಹನಾದಗೈದರು.

07083039a ಅಪೂಜಯನ್ಮಾರುತಿಂ ಚ ಸಂಹೃಷ್ಟಾಸ್ತೇ ಮಹಾಬಲಂ|

07083039c ಪ್ರಹ್ರಾದಂ ಸಮರೇ ಜಿತ್ವಾ ಯಥಾ ಶಕ್ರಂ ಮರುದ್ಗಣಾಃ||

ಸಮರದಲ್ಲಿ ಪ್ರಹ್ರಾದನನ್ನು ಗೆದ್ದ ಶಕ್ರನನ್ನು ಮರುದ್ಗಣಗಳು ಹೇಗೋ ಹಾಗೆ ಸಂತೋಷದಿಂದ ಆ ಮಹಾಬಲ ಮಾರುತಿಯನ್ನು ಗೌರವಿಸಿದರು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಅಲಂಬುಷಪರಾಜಯೇ ತ್ರ್ಯಾಶೀತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಅಲಂಬುಷಪರಾಜಯ ಎನ್ನುವ ಎಂಭತ್ಮೂರನೇ ಅಧ್ಯಾಯವು.

Related image

Comments are closed.