|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ: ಜಯದ್ರಥವಧ ಪರ್ವ
೬೧
ಅಭಿಮನ್ಯುವಿನ ವಧೆಯ ಮರುದಿನದ ಯುದ್ಧದ ಕುರಿತು ಧೃತರಾಷ್ಟ್ರನು ಸಂಜಯನನ್ನು ಪ್ರಶ್ನಿಸುತ್ತಾ ಶೋಕಿಸುವುದು (೧-೫೧).
07061001 ಧೃತರಾಷ್ಟ್ರ ಉವಾಚ|
07061001a ಶ್ವೋಭೂತೇ ಕಿಮಕಾರ್ಷುಸ್ತೇ ದುಃಖಶೋಕಸಮನ್ವಿತಾಃ|
07061001c ಅಭಿಮನ್ಯೌ ಹತೇ ತತ್ರ ಕೇ ವಾಯುಧ್ಯಂತ ಮಾಮಕಾಃ||
ಧೃತರಾಷ್ಟ್ರನು ಹೇಳಿದನು: “ಅಭಿಮನ್ಯುವಿನ ವಧೆಯ ಮರುದಿನ ದುಃಖಶೋಕಸಮನ್ವಿತರಾದ ಅವರು ಏನು ಮಾಡಿದರು? ನಮ್ಮವರಲ್ಲಿ ಯಾರು ಅಲ್ಲಿ ಅವರೊಂದಿಗೆ ಯುದ್ಧ ಮಾಡಿದರು?
07061002a ಜಾನಂತಸ್ತಸ್ಯ ಕರ್ಮಾಣಿ ಕುರವಃ ಸವ್ಯಸಾಚಿನಃ|
07061002c ಕಥಂ ತತ್ಕಿಲ್ಬಿಷಂ ಕೃತ್ವಾ ನಿರ್ಭಯಾ ಬ್ರೂಹಿ ಮಾಮಕಾಃ||
ಸವ್ಯಸಾಚಿಯ ಸಾಧನೆಗಳನ್ನು ತಿಳಿದಿದ್ದ ನಮ್ಮವರು ಅಂಥಹ ಪಾಪಕೃತ್ಯವನ್ನು ಮಾಡಿಯೂ ಹೇಗೆ ನಿರ್ಭಯರಾಗಿದ್ದರು ಹೇಳು!
07061003a ಪುತ್ರಶೋಕಾಭಿಸಂತಪ್ತಂ ಕ್ರುದ್ಧಂ ಮೃತ್ಯುಮಿವಾಂತಕಂ|
07061003c ಆಯಾಂತಂ ಪುರುಷವ್ಯಾಘ್ರಂ ಕಥಂ ದದೃಶುರಾಹವೇ||
ಪುತ್ರಶೋಕಾಭಿಸಂತಪ್ತನಾಗಿ ಕ್ರುದ್ಧನಾಗಿ ಮೃತ್ಯು-ಅಂತಕನಂತೆ ಯುದ್ಧಕ್ಕೆ ಬರುತ್ತಿದ್ದ ಆ ಪುರುಷವ್ಯಾಘ್ರನನ್ನು ಹೇಗೆ ನೋಡಿದರು?
07061004a ಕಪಿರಾಜಧ್ವಜಂ ಸಂಖ್ಯೇ ವಿಧುನ್ವಾನಂ ಮಹದ್ಧನುಃ|
07061004c ದೃಷ್ಟ್ವಾ ಪುತ್ರಪರಿದ್ಯೂನಂ ಕಿಮಕುರ್ವಂತ ಮಾಮಕಾಃ||
ಕಪಿರಾಜನ ಧ್ವಜವುಳ್ಳ, ಮಹಾಧನುಸ್ಸನ್ನು ಟೇಂಕರಿಸುತ್ತಿದ್ದ ಆ ಶತ್ರುವನ್ನು ನೋಡಿ ನನ್ನ ಮಕ್ಕಳು ಏನು ಮಾಡಿದರು?
07061005a ಕಿಂ ನು ಸಂಜಯ ಸಂಗ್ರಾಮೇ ವೃತ್ತಂ ದುರ್ಯೋಧನಂ ಪ್ರತಿ|
07061005c ಪರಿದೇವೋ ಮಹಾನತ್ರ ಶ್ರುತೋ ಮೇ ನಾಭಿನಂದನಂ||
ಸಂಜಯ! ಸಂಗ್ರಾಮದಲ್ಲಿ ದುರ್ಯೋಧನನ ಕಡೆಯಲ್ಲಿ ಏನಾಯಿತು? ಅಲ್ಲಿ ಮಹಾ ಪರಿವೇದನೆಯಿದ್ದಂತಿದೆ! ಅವರ ಹರ್ಷದ ಕೂಗು ನನಗೆ ಕೇಳಿಸುತ್ತಿಲ್ಲ!
07061006a ಬಭೂವುರ್ಯೇ ಮನೋಗ್ರಾಹ್ಯಾಃ ಶಬ್ದಾಃ ಶ್ರುತಿಸುಖಾವಹಾಃ|
07061006c ನ ಶ್ರೂಯಂತೇಽದ್ಯ ತೇ ಸರ್ವೇ ಸೈಂಧವಸ್ಯ ನಿವೇಶನೇ||
ಕೇಳಿದರೆ ಸುಖವನ್ನು ನೀಡುವ, ಮನಸ್ಸಿಗೆ ಹಿಡಿಯುವ ಶಬ್ಧಗಳು ಆಗುತ್ತಿದ್ದವು. ಇಂದು ಅವೆಲ್ಲವೂ ಸೈಂಧವನ ಮನೆಯಿಂದ ಕೇಳಿಬರುತ್ತಿಲ್ಲವಲ್ಲ!
07061007a ಸ್ತುವತಾಂ ನಾದ್ಯ ಶ್ರೂಯಂತೇ ಪುತ್ರಾಣಾಂ ಶಿಬಿರೇ ಮಮ|
07061007c ಸೂತಮಾಗಧಸಂಘಾನಾಂ ನರ್ತಕಾನಾಂ ಚ ಸರ್ವಶಃ||
ಇಂದು ನನ್ನ ಪುತ್ರರ ಶಿಬಿರದಲ್ಲಿ ಎಲ್ಲಿಂದಲೂ ಸೂತ-ಮಾಗಧರ ಗುಂಪುಗಳು ಸ್ತುತಿಸುವ ಮತ್ತು ನರ್ತಕರ ಶಬ್ಧಗಳು ಕೇಳಿಬರುತ್ತಿಲ್ಲ!
07061008a ಶಬ್ದೇನ ನಾದಿತಾಭೀಕ್ಷ್ಣಮಭವದ್ಯತ್ರ ಮೇ ಶ್ರುತಿಃ|
07061008c ದೀನಾನಾಮದ್ಯ ತಂ ಶಬ್ದಂ ನ ಶೃಣೋಮಿ ಸಮೀರಿತಂ||
ಮೊದಲು ಆ ನಾದ ಶಬ್ಧಗಳು ನನಗೆ ಒಂದೇಸಮನೆ ಕೇಳಿಬರುತ್ತಿದ್ದವು. ಆದರೆ ಇಂದು ದೀನರಾಗಿರುವ ಅವರ ಶಿಬಿರಗಳಿಂದ ಆ ಶಬ್ಧವನ್ನು ನಾನು ಕೇಳುತ್ತಿಲ್ಲ.
07061009a ನಿವೇಶನೇ ಸತ್ಯಧೃತೇಃ ಸೋಮದತ್ತಸ್ಯ ಸಂಜಯ|
07061009c ಆಸೀನೋಽಹಂ ಪುರಾ ತಾತ ಶಬ್ದಮಶ್ರೌಷಮುತ್ತಮಂ||
ಮಗೂ! ಸಂಜಯ! ಸತ್ಯಧೃತ ಸೋಮದತ್ತನ ಮನೆಯಿಂದ ಹಿಂದೆ ಉತ್ತಮ ಶಬ್ಧವು ಕೇಳಿಬರುತ್ತಿತ್ತು.
07061010a ತದದ್ಯ ಹೀನಪುಣ್ಯೋಽಹಮಾರ್ತಸ್ವರನಿನಾದಿತಂ|
07061010c ನಿವೇಶನಂ ಹತೋತ್ಸಾಹಂ ಪುತ್ರಾಣಾಂ ಮಮ ಲಕ್ಷಯೇ||
ಆದರೆ ಇಂದು ಪುಣ್ಯವನ್ನು ಕಳೆದುಕೊಂಡಿರುವ ನಾನು ಆರ್ತಸ್ವರವನ್ನು ಕೇಳುತ್ತಿದ್ದೇನೆ. ನನ್ನ ಮಕ್ಕಳ ಮನೆಗಳು ಹತಾಶವಾಗಿವೆಯೆಂದು ನನಗೆ ಕಾಣುತ್ತಿವೆ.
07061011a ವಿವಿಂಶತೇರ್ದುರ್ಮುಖಸ್ಯ ಚಿತ್ರಸೇನವಿಕರ್ಣಯೋಃ|
07061011c ಅನ್ಯೇಷಾಂ ಚ ಸುತಾನಾಂ ಮೇ ನ ತಥಾ ಶ್ರೂಯತೇ ಧ್ವನಿಃ||
ವಿವಿಂಶತಿ, ದುರ್ಮುಖ, ಚಿತ್ರಸೇನ, ವಿಕರ್ಣ ಮತ್ತು ನನ್ನ ಇತರ ಮಕ್ಕಳ ಮನೆಗಳಿಂದಲೂ ನನಗೆ ಅಂಥಹ ಧ್ವನಿಯು ಕೇಳಿಸುತ್ತಿಲ್ಲ.
07061012a ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾ ಯಂ ಶಿಷ್ಯಾಃ ಪರ್ಯುಪಾಸತೇ|
07061012c ದ್ರೋಣಪುತ್ರಂ ಮಹೇಷ್ವಾಸಂ ಪುತ್ರಾಣಾಂ ಮೇ ಪರಾಯಣಂ||
07061013a ವಿತಂಡಾಲಾಪಸಂಲಾಪೈರ್ಹುತಯಾಚಿತವಂದಿತೈಃ|
07061013c ಗೀತೈಶ್ಚ ವಿವಿಧೈರಿಷ್ಟೈ ರಮತೇ ಯೋ ದಿವಾನಿಶಂ||
07061014a ಉಪಾಸ್ಯಮಾನೋ ಬಹುಭಿಃ ಕುರುಪಾಂಡವಸಾತ್ವತೈಃ|
07061014c ಸೂತ ತಸ್ಯ ಗೃಹೇ ಶಬ್ಧೋ ನಾದ್ಯ ದ್ರೌಣೇರ್ಯಥಾ ಪುರಾ||
ಸೂತ! ಯಾರನ್ನು ಬ್ರಾಹ್ಮಣ-ಕ್ಷತ್ರಿಯ-ವೈಶ್ಯ ಶಿಷ್ಯರು ಉಪಾಸಿಸುತ್ತಿದ್ದರೋ ಆ ದ್ರೋಣಪುತ್ರ, ಮಹೇಷ್ವಾಸ, ನನ್ನ ಮಕ್ಕಳಲ್ಲಿ ನಿರತನಾಗಿರುವ, ಯಾರು ಹಗಲು-ರಾತ್ರಿ ವಾದ-ವಿವಾದ, ಆಲಾಪ-ಸಲ್ಲಾಪಗಳಲ್ಲಿ, ವಿವಿಧ ಇಷ್ಟ ಗೀತಗಳಿಂದ ರಮಿಸುತ್ತಿದ್ದ, ಅನೇಕ ಕುರು-ಪಾಂಡವ-ಸಾತ್ವತರಿಂದ ಗೌರವಿಸಲ್ಪಡುವ ಆ ದ್ರೌಣಿಯ ಮನೆಯಿಂದ ಮೊದಲಿನಂತೆ ಆ ಶಬ್ಧಗಳು ಕೇಳಿಬರುತ್ತಿಲ್ಲ.
07061015a ದ್ರೋಣಪುತ್ರಂ ಮಹೇಷ್ವಾಸಂ ಗಾಯನಾ ನರ್ತಕಾಶ್ಚ ಯೇ|
07061015c ಅತ್ಯರ್ಥಮುಪತಿಷ್ಠಂತಿ ತೇಷಾಂ ನ ಶ್ರೂಯತೇ ಧ್ವನಿಃ||
ಮಹೇಷ್ವಾಸ ದ್ರೋಣಪುತ್ರನನ್ನು ಗಾಯಕರು ಮತ್ತು ನರ್ತಕರು ಅನೇಕ ಸಂಖ್ಯೆಗಳಲ್ಲಿ ಸೇವೆಗೈಯುತ್ತಿದ್ದರು. ಅವರ ಧ್ವನಿಯೂ ಕೇಳಿ ಬರುತ್ತಿಲ್ಲ.
07061016a ವಿಂದಾನುವಿಂದಯೋಃ ಸಾಯಂ ಶಿಬಿರೇ ಯೋ ಮಹಾಧ್ವನಿಃ|
07061016c ಶ್ರೂಯತೇ ಸೋಽದ್ಯ ನ ತಥಾ ಕೇಕಯಾನಾಂ ಚ ವೇಶ್ಮಸು||
ಸಾಯಂಕಾಲ ವಿಂದಾನುವಿಂದರ ಶಿಬಿರದಲ್ಲಿ ಮತ್ತು ಹಾಗೆಯೇ ಕೇಕಯರ ಮನೆಯಲ್ಲಿ ಯಾವ ಮಹಾಧ್ವನಿಯು ಕೇಳಿಬರುತ್ತಿತ್ತೋ ಅದು ಇಂದು ಕೇಳಿಬರುತ್ತಿಲ್ಲ.
07061017a ನಿತ್ಯಪ್ರಮುದಿತಾನಾಂ ಚ ತಾಲಗೀತಸ್ವನೋ ಮಹಾನ್|
07061017c ನೃತ್ಯತಾಂ ಶ್ರೂಯತೇ ತಾತ ಗಣಾನಾಂ ಸೋಽದ್ಯ ನ ಧ್ವನಿಃ||
ಅಯ್ಯಾ! ನಿತ್ಯವೂ ಚಪ್ಪಾಳೆ-ಗೀತಗಳ ಮಹಾ ಧ್ವನಿಯೊಂದಿಗೆ ಸಂತೋಷಪಡುತ್ತಿದ್ದ, ಕೇಳುತ್ತಾ ಕುಣಿಯುತ್ತಿದ್ದ ಆ ಗಣಗಳ ಧ್ವನಿಯು ಇಂದು ಕೇಳಿಸುತ್ತಿಲ್ಲ.
07061018a ಸಪ್ತತಂತೂನ್ವಿತನ್ವಾನಾ ಯಮುಪಾಸಂತಿ ಯಾಜಕಾಃ|
07061018c ಸೌಮದತ್ತಿಂ ಶ್ರುತನಿಧಿಂ ತೇಷಾಂ ನ ಶ್ರೂಯತೇ ಧ್ವನಿಃ||
ಯಾರನ್ನು ಏಳು ಎಳೆಗಳನ್ನು ಹಾಸುವ ಯಾಜಕರು ಉಪಾಸಿಸುತ್ತಾರೋ ಆ ಶ್ರುತನಿಧಿ ಸೌಮದತ್ತಿಯ ಮನೆಯಿಂದ ಧ್ವನಿಯು ಕೇಳಿಬರುತ್ತಿಲ್ಲ.
07061019a ಜ್ಯಾಘೋಷೋ ಬ್ರಹ್ಮಘೋಷಶ್ಚ ತೋಮರಾಸಿರಥಧ್ವನಿಃ|
07061019c ದ್ರೋಣಸ್ಯಾಸೀದವಿರತೋ ಗೃಹೇ ತನ್ನ ಶೃಣೋಮ್ಯಹಂ||
ದ್ರೋಣನ ಮನೆಯಲ್ಲಿ ಅವಿರತವಾಗಿ ಕೇಳಿಬರುತ್ತಿದ್ದ ಶಿಂಜಿನಿಯ ಟೇಂಕಾರ, ಬ್ರಹ್ಮಘೋಷ ಮತ್ತು ಖಡ್ಗ-ತೋಮರಗಳ ಧ್ವನಿಯು ನನಗೆ ಕೇಳುತ್ತಿಲ್ಲ.
07061020a ನಾನಾದೇಶಸಮುತ್ಥಾನಾಂ ಗೀತಾನಾಂ ಯೋಽಭವತ್ಸ್ವನಃ|
07061020c ವಾದಿತ್ರನಾದಿತಾನಾಂ ಚ ಸೋಽದ್ಯ ನ ಶ್ರೂಯತೇ ಮಹಾನ್||
ಅಲ್ಲಿ ನಡೆಯುತ್ತಿದ್ದ ನಾನಾದೇಶಗಳ ಗೀತೆಗಳ ಮತ್ತು ವಾದ್ಯವನ್ನು ನುಡಿಸುವವರ ಮಹಾನ್ ಧ್ವನಿಯು ಉಂಟಾಗುತ್ತಿತ್ತು. ಅವು ಇಂದು ಕೇಳುತ್ತಿಲ್ಲ.
07061021a ಯದಾ ಪ್ರಭೃತ್ಯುಪಪ್ಲವ್ಯಾಚ್ಚಾಂತಿಮಿಚ್ಚಂ ಜನಾರ್ದನಃ|
07061021c ಆಗತಃ ಸರ್ವಭೂತಾನಾಮನುಕಂಪಾರ್ಥಮಚ್ಯುತಃ||
07061022a ತತೋಽಹಮಬ್ರುವನ್ಸೂತ ಮಂದಂ ದುರ್ಯೋಧನಂ ತದಾ|
07061022c ವಾಸುದೇವೇನ ತೀರ್ಥೇನ ಪುತ್ರ ಸಂಶಾಮ್ಯ ಪಾಂಡವೈಃ||
ಸೂತ! ಸರ್ವಭೂತಗಳ ಮೇಲಿನ ಅನುಕಂಪದಿಂದಾಗಿ ಶಾಂತಿಯನ್ನು ಇಚ್ಛಿಸಿ ಉಪಪ್ಲವದಿಂದ ಹೊರಟು ಅಚ್ಯುತ ಜನಾರ್ದನನು ಬಂದಾಗ ನಾನು ಮಂದಬುದ್ಧಿ ದುರ್ಯೋಧನನಿಗೆ ಹೇಳಿದ್ದೆ: “ಪುತ್ರ! ವಾಸುದೇವನ ಮೂಲಕ ಪಾಂಡವರೊಂದಿಗೆ ಶಾಂತಿಯನ್ನು ಪಾಲಿಸು!
07061023a ಕಾಲಪ್ರಾಪ್ತಮಹಂ ಮನ್ಯೇ ಮಾ ತ್ವಂ ದುರ್ಯೋಧನಾತಿಗಾಃ|
07061023c ಶಮೇ ಚೇದ್ಯಾಚಮಾನಂ ತ್ವಂ ಪ್ರತ್ಯಾಖ್ಯಾಸ್ಯಸಿ ಕೇಶವಂ|
07061023e ಹಿತಾರ್ಥಮಭಿಜಲ್ಪಂತಂ ನ ತಥಾಸ್ತ್ಯಪರಾಜಯಃ||
ಸಮಯವು ಬಂದೊದಗಿದೆ ಎಂದು ನನಗನ್ನಿಸುತ್ತದೆ. ನನ್ನನ್ನು ಮೀರಿ ನಡೆಯಬೇಡ! ಶಾಂತಿಯನ್ನು ಯಾಚಿಸುತ್ತಿರುವ, ನಮ್ಮ ಹಿತಕ್ಕಾಗಿ ಮಾತನಾಡುತ್ತಿರುವ ಕೇಶವನನ್ನು ದೂರಮಾಡಿದರೆ ನಿನಗೆ ಪರಾಜಯವೇ ಸರಿ!”
07061024a ಪ್ರತ್ಯಾಚಷ್ಟ ಸ ದಾಶಾರ್ಹಂ ಋಷಭಂ ಸರ್ವಧನ್ವಿನಾಂ|
07061024c ಅನುನೇಯಾನಿ ಜಲ್ಪಂತಮನಯಾನ್ನಾನ್ವಪದ್ಯತ||
ಆದರೆ ಅವನು ಒಳ್ಳೆಯದನ್ನೇ ಹೇಳುತ್ತಿದ್ದ ಸರ್ವಧನ್ವಿಗಳಿಗೆ ವೃಷಭನಂತಿದ್ದ ದಾಶಾರ್ಹನನ್ನು ತಿರಸ್ಕರಿಸಿದನು. ಹೀಗೆ ತನಗೆ ಆಪತ್ತನ್ನೇ ತಂದುಕೊಂಡನು.
07061025a ತತೋ ದುಃಶಾಸನಸ್ಯೈವ ಕರ್ಣಸ್ಯ ಚ ಮತಂ ದ್ವಯೋಃ|
07061025c ಅನ್ವವರ್ತತ ಹಿತ್ವಾ ಮಾಂ ಕೃಷ್ಟಃ ಕಾಲೇನ ದುರ್ಮತಿಃ||
ಸಾವಿನಿಂದ ಸೆಳೆಯಲ್ಪಟ್ಟು ಆ ದುರ್ಮತಿಯು ನನ್ನನ್ನು ತಿರಸ್ಕರಿಸಿ ದುಃಶಾಸನ ಮತ್ತು ಕರ್ಣ ಈ ಇಬ್ಬರ ಮತವನ್ನು ಅನುಸರಿಸಿದನು.
07061026a ನ ಹ್ಯಹಂ ದ್ಯೂತಮಿಚ್ಚಾಮಿ ವಿದುರೋ ನ ಪ್ರಶಂಸತಿ|
07061026c ಸೈಂಧವೋ ನೇಚ್ಚತೇ ದ್ಯೂತಂ ಭೀಷ್ಮೋ ನ ದ್ಯೂತಮಿಚ್ಚತಿ||
ನಾನು ದ್ಯೂತವನ್ನು ಬಯಸಿರಲಿಲ್ಲ! ವಿದುರನೂ ಅದು ಬೇಡವೆಂದು ಹೇಳಿದ್ದನು. ಸೈಂಧವನು ದ್ಯೂತವನ್ನು ಬಯಸಿರಲಿಲ್ಲ. ಭೀಷ್ಮನೂ ದ್ಯೂತವನ್ನು ಬಯಸಿರಲ್ಲ.
07061027a ಶಲ್ಯೋ ಭೂರಿಶ್ರವಾಶ್ಚೈವ ಪುರುಮಿತ್ರೋ ಜಯಸ್ತಥಾ|
07061027c ಅಶ್ವತ್ಥಾಮಾ ಕೃಪೋ ದ್ರೋಣೋ ದ್ಯೂತಂ ನೇಚ್ಚಂತಿ ಸಂಜಯ||
ಸಂಜಯ! ಶಲ್ಯ-ಭೂರಿಶ್ರವರೂ, ಪುರುಮಿತ್ರ-ಜಯರೂ, ಅಶ್ವತ್ಥಾಮ-ಕೃಪರೂ ದ್ರೋಣರೂ ದ್ಯೂತವನ್ನು ಇಚ್ಛಿಸಿರಲಿಲ್ಲ.
07061028a ಏತೇಷಾಂ ಮತಮಾಜ್ಞಾಯ ಯದಿ ವರ್ತೇತ ಪುತ್ರಕಃ|
07061028c ಸಜ್ಞಾತಿಮಿತ್ರಃ ಸಸುಹೃಚ್ಚಿರಂ ಜೀವೇದನಾಮಯಃ||
ಒಂದುವೇಳೆ ನನ್ನ ಮಗನು ಇವರೆಲ್ಲರ ಅಭಿಪ್ರಾಯವನ್ನು ತಿಳಿದುಕೊಂಡು ನಡೆದುಕೊಂಡಿದ್ದರೆ ಜ್ಞಾತಿಮಿತ್ರರೊಂದಿಗೆ, ಸುಹೃದರೊಂದಿಗೆ ದೀರ್ಘಕಾಲ ಆರೋಗ್ಯವಾಗಿ ಜೀವಿಸಬಹುದಾಗಿತ್ತು.
07061029a ಶ್ಲಕ್ಷ್ಣಾ ಮಧುರಸಂಭಾಷಾ ಜ್ಞಾತಿಮಧ್ಯೇ ಪ್ರಿಯಂವದಾಃ|
07061029c ಕುಲೀನಾಃ ಸಮ್ಮತಾಃ ಪ್ರಾಜ್ಞಾಃ ಸುಖಂ ಪ್ರಾಪ್ಸ್ಯಂತಿ ಪಾಂಡವಾಃ||
ಮೃದುವಾಗಿ ಮಧುರವಾಗಿ ಮಾತನಾಡುವ, ಕುಟುಂಬದವರೊಡನೆ ಪ್ರಿಯವಾಗಿ ಮಾತನಾಡುವ, ಕುಲೀನರೂ, ಸಮ್ಮತರೂ, ಪ್ರಾಜ್ಞರೂ ಆದ ಪಾಂಡವರು ಸುಖವನ್ನು ಪಡೆಯುತ್ತಾರೆ.
07061030a ಧರ್ಮಾಪೇಕ್ಷೋ ನರೋ ನಿತ್ಯಂ ಸರ್ವತ್ರ ಲಭತೇ ಸುಖಂ|
07061030c ಪ್ರೇತ್ಯಭಾವೇ ಚ ಕಲ್ಯಾಣಂ ಪ್ರಸಾದಂ ಪ್ರತಿಪದ್ಯತೇ||
ಧರ್ಮಾಪೇಕ್ಷನಾದ ಮನುಷ್ಯನು ಸದಾ ಸರ್ವತ್ರ ಸುಖವನ್ನು ಪಡೆಯುತ್ತಾನೆ. ಅವನು ಸಾವಿನ ನಂತರವೂ ಕಲ್ಯಾಣ ಪ್ರಸಾದವನ್ನು ಪಡೆಯುತ್ತಾನೆ.
07061031a ಅರ್ಹಂತ್ಯರ್ಧಂ ಪೃಥಿವ್ಯಾಸ್ತೇ ಭೋಕ್ತುಂ ಸಾಮರ್ಥ್ಯಸಾಧನಾಃ|
07061031c ತೇಷಾಮಪಿ ಸಮುದ್ರಾಂತಾ ಪಿತೃಪೈತಾಮಹೀ ಮಹೀ||
ಅವರು ಈ ಪೃಥ್ವಿಯನ್ನು ಭೋಗಿಸಲು ಸಾಮರ್ಥ್ಯರಾಗಿದ್ದಾರೆ ಮತ್ತು ಅವರಲ್ಲಿ ಇದಕ್ಕೆ ಸಾಧನವೂ ಇದೆ. ಸಮುದ್ರಾಂತವಾಗಿರುವ ಈ ಭೂಮಿಯು ಅವರ ಪಿತೃ-ಪಿತಾಮಹರದ್ದೂ ಹೌದು.
07061032a ನಿಯುಜ್ಯಮಾನಾಃ ಸ್ಥಾಸ್ಯಂತಿ ಪಾಂಡವಾ ಧರ್ಮವರ್ತ್ಮನಿ|
07061032c ಸಂತಿ ನೋ ಜ್ಞಾತಯಸ್ತಾತ ಯೇಷಾಂ ಶ್ರೋಷ್ಯಂತಿ ಪಾಂಡವಾಃ||
ಅಯ್ಯಾ! ನಿಯೋಜಿಸಿದ ಕೆಲಸಗಳನ್ನು ಪಾಂಡವರು ಮಾಡಿ ಧರ್ಮದಲ್ಲಿಯೇ ನಡೆದುಕೊಳ್ಳುತ್ತಾರೆ. ನನಗಿದ್ದ ಜ್ಞಾತಿಬಾಂಧವರನ್ನು ಕೂಡ ಪಾಂಡವರು ಕೇಳುತ್ತಾರೆ.
07061033a ಶಲ್ಯಸ್ಯ ಸೋಮದತ್ತಸ್ಯ ಭೀಷ್ಮಸ್ಯ ಚ ಮಹಾತ್ಮನಃ|
07061033c ದ್ರೋಣಸ್ಯಾಥ ವಿಕರ್ಣಸ್ಯ ಬಾಹ್ಲಿಕಸ್ಯ ಕೃಪಸ್ಯ ಚ||
07061034a ಅನ್ಯೇಷಾಂ ಚೈವ ವೃದ್ಧಾನಾಂ ಭರತಾನಾಂ ಮಹಾತ್ಮನಾಂ|
07061034c ತ್ವದರ್ಥಂ ಬ್ರುವತಾಂ ತಾತ ಕರಿಷ್ಯಂತಿ ವಚೋ ಹಿತಂ||
ಅಯ್ಯಾ! ಶಲ್ಯ, ಸೋಮದತ್ತ, ಮಹಾತ್ಮ ಭೀಷ್ಮ, ದ್ರೋಣ, ವಿಕರ್ಣ, ಬಾಹ್ಲಿಕ, ಕೃಪ ಮತ್ತು ಇತರ ಮಹಾತ್ಮಾ ಭಾರತ ವೃದ್ಧರ, ಅವರ ಒಳಿತಿಗಾಗಿ ಹೇಳುವ ಹಿತ ವಚನಗಳಂತೆಯೇ ಮಾಡುತ್ತಾರೆ.
07061035a ಕಂ ವಾ ತ್ವಂ ಮನ್ಯಸೇ ತೇಷಾಂ ಯಸ್ತ್ವಾ ಬ್ರೂಯಾದತೋಽನ್ಯಥಾ|
07061035c ಕೃಷ್ಣೋ ನ ಧರ್ಮಂ ಸಂಜಹ್ಯಾತ್ಸರ್ವೇ ತೇ ಚ ತ್ವದನ್ವಯಾಃ||
ನಾನು ಹೇಳಿದುದಕ್ಕೆ ವಿರೋಧವಾಗಿ ಹೇಳುವ ಬೇರೆ ಯಾರನ್ನಾದರೂ ನೀನು ಕೇಳಿದ್ದೀಯಾ? ಇಲ್ಲವೇ ಇಲ್ಲ. ಏಕೆಂದರೆ ಅವರೆಲ್ಲರೂ ಧರ್ಮದಲ್ಲಿಯೇ ನಡೆಯುವ ಕೃಷ್ಣನನ್ನು ಅನುಸರಿಸುತ್ತಾರೆ.
07061036a ಮಯಾಪಿ ಚೋಕ್ತಾಸ್ತೇ ವೀರಾ ವಚನಂ ಧರ್ಮಸಂಹಿತಂ|
07061036c ನಾನ್ಯಥಾ ಪ್ರಕರಿಷ್ಯಂತಿ ಧರ್ಮಾತ್ಮಾನೋ ಹಿ ಪಾಂಡವಾಃ||
ಧರ್ಮಯುಕ್ತವಾದ ಮಾತನ್ನು ನಾನೇ ಹೇಳಿದರೂ ಆ ವೀರರು ನನ್ನ ಮಾತನ್ನು ಖಂಡಿತವಾಗಿ ತಿರಸ್ಕರಿಸುವುದಿಲ್ಲ. ಏಕೆಂದರೆ ಪಾಂಡವರು ಧರ್ಮಾತ್ಮರು.
07061037a ಇತ್ಯಹಂ ವಿಲಪನ್ಸೂತ ಬಹುಶಃ ಪುತ್ರಮುಕ್ತವಾನ್|
07061037c ನ ಚ ಮೇ ಶ್ರುತವಾನ್ಮೂಢೋ ಮನ್ಯೇ ಕಾಲಸ್ಯ ಪರ್ಯಯಂ||
ಸೂತ! ಹೀಗೆ ನಾನು ವಿಲಪಿಸುತ್ತಾ ಮಗನಿಗೆ ಬಹಳಷ್ಟನ್ನು ಹೇಳಿದ್ದೆನು. ಆದರೆ ಆ ಮೂಢನು ನನ್ನನ್ನು ಕೇಳಿಸಿಕೊಳ್ಳಲಿಲ್ಲ. ಇದು ಕಾಲದ ವೈಪರೀತ್ಯವೆಂದೇ ಭಾವಿಸುತ್ತೇನೆ.
07061038a ವೃಕೋದರಾರ್ಜುನೌ ಯತ್ರ ವೃಷ್ಣಿವೀರಶ್ಚ ಸಾತ್ಯಕಿಃ|
07061038c ಉತ್ತಮೌಜಾಶ್ಚ ಪಾಂಚಾಲ್ಯೋ ಯುಧಾಮನ್ಯುಶ್ಚ ದುರ್ಜಯಃ||
07061039a ಧೃಷ್ಟದ್ಯುಮ್ನಶ್ಚ ದುರ್ಧರ್ಷಃ ಶಿಖಂಡೀ ಚಾಪರಾಜಿತಃ|
07061039c ಅಶ್ಮಕಾಃ ಕೇಕಯಾಶ್ಚೈವ ಕ್ಷತ್ರಧರ್ಮಾ ಚ ಸೌಮಕಿಃ||
07061040a ಚೈದ್ಯಶ್ಚ ಚೇಕಿತಾನಶ್ಚ ಪುತ್ರಃ ಕಾಶ್ಯಸ್ಯ ಚಾಭಿಭುಃ|
07061040c ದ್ರೌಪದೇಯಾ ವಿರಾಟಶ್ಚ ದ್ರುಪದಶ್ಚ ಮಹಾರಥಃ|
07061040e ಯಮೌ ಚ ಪುರುಷವ್ಯಾಘ್ರೌ ಮಂತ್ರೀ ಚ ಮಧುಸೂದನಃ||
07061041a ಕ ಏತಾಂ ಜಾತು ಯುಧ್ಯೇತ ಲೋಕೇಽಸ್ಮಿನ್ವೈ ಜಿಜೀವಿಷುಃ|
ಎಲ್ಲಿ ವೃಕೋದರ-ಅರ್ಜುನರು, ವೃಷ್ಣಿವೀರ ಸಾತ್ಯಕಿ, ಪಾಂಚಾಲ್ಯ ಉತ್ತಮೌಜ, ದುರ್ಜಯ ಯುಧಾಮನ್ಯು, ದುರ್ಧರ್ಷ ಧೃಷ್ಟದ್ಯುಮ್ನ, ಅಪರಾಜಿತ ಶಿಖಂಡೀ, ಅಶ್ಮಕರು, ಕೇಕಯರು, ಕ್ಷತ್ರಧರ್ಮ, ಸೌಮಕಿ, ಚೈದ್ಯ, ಚೇಕಿತಾನ, ಕಾಶ್ಯನ ಮಗ ಅಭಿಭು, ದ್ರೌಪದೇಯರು, ವಿರಾಟ, ಮಹಾರಥ ದ್ರುಪದ, ಪುರುಷವ್ಯಾಘ್ರರಾದ ಯಮಳರು, ಮತ್ತು ಮಂತ್ರಿ ಮಧುಸೂದನರಿರುವರೋ ಅವರೊಡನೆ ಈ ಲೋಕದಲ್ಲಿ ಜೀವಿಸ ಬಯಸುವ ಯಾರುತಾನೇ ಯುದ್ಧಮಾಡಿಯಾರು?
07061041c ದಿವ್ಯಮಸ್ತ್ರಂ ವಿಕುರ್ವಾಣಾನ್ಸಂಹರೇಯುರರಿಂದಮಾಃ||
07061042a ಅನ್ಯೋ ದುರ್ಯೋಧನಾತ್ಕರ್ಣಾಚ್ಚಕುನೇಶ್ಚಾಪಿ ಸೌಬಲಾತ್|
07061042c ದುಃಶಾಸನಚತುರ್ಥಾನಾಂ ನಾನ್ಯಂ ಪಶ್ಯಾಮಿ ಪಂಚಮಂ||
ದಿವ್ಯಾಸ್ತ್ರಗಳನ್ನು ಪ್ರಯೋಗಿಸಿ ಸಂಹರಿಸುವ ಈ ಅರಿಂದಮರನ್ನು ಎದುರಿಸಲು ದುರ್ಯೋಧನ, ಕರ್ಣ, ಶಕುನಿ ಸೌಬಲ ಮತ್ತು ದುಃಶಾಸನ ಈ ನಾಲ್ಕುಮಂದಿಯನ್ನು ಬಿಟ್ಟು ಬೇರೆ ಯಾವ ಐದನೆಯವನನ್ನೂ ನಾನು ಕಾಣೆನು.
07061043a ಯೇಷಾಮಭೀಶುಹಸ್ತಃ ಸ್ಯಾದ್ವಿಷ್ವಕ್ಸೇನೋ ರಥೇ ಸ್ಥಿತಃ|
07061043c ಸನ್ನದ್ಧಶ್ಚಾರ್ಜುನೋ ಯೋದ್ಧಾ ತೇಷಾಂ ನಾಸ್ತಿ ಪರಾಜಯಃ||
ಯಾರಕಡೆ ವಿಷ್ವಕ್ಸೇನನೇ ಚಾವಟಿಯನ್ನು ಹಿಡಿದು ರಥದಲ್ಲಿರುವನೋ, ಯಾರ ಯೋಧನು ಸನ್ನದ್ಧನಾದ ಅರ್ಜುನನೋ ಅವರಿಗೆ ಪರಾಜಯವೆನ್ನುವುದು ಇಲ್ಲ.
07061044a ತೇಷಾಂ ಮಮ ವಿಲಾಪಾನಾಂ ನ ಹಿ ದುರ್ಯೋಧನಃ ಸ್ಮರೇತ್|
07061044c ಹತೌ ಹಿ ಪುರುಷವ್ಯಾಘ್ರೌ ಭೀಷ್ಮದ್ರೋಣೌ ತ್ವಮಾತ್ಥ ಮೇ||
ಆ ನನ್ನ ವಿಲಾಪಗಳು ದುರ್ಯೋಧನನಿಗೆ ನೆನಪೂ ಇಲ್ಲ. ಪುರುಷವ್ಯಾಘ್ರರಾದ ಭೀಷ್ಮ-ದ್ರೋಣರು ಹತರಾದರೆಂದು ನನಗೆ ಹೇಳಿದೆ.
07061045a ತೇಷಾಂ ವಿದುರವಾಕ್ಯಾನಾಮುಕ್ತಾನಾಂ ದೀರ್ಘದರ್ಶಿನಾಂ|
07061045c ದೃಷ್ಟ್ವೇಮಾಂ ಫಲನಿರ್ವೃತ್ತಿಂ ಮನ್ಯೇ ಶೋಚಂತಿ ಪುತ್ರಕಾಃ||
ದೂರದೃಷ್ಟಿಯ ವಿದುರನು ಹೇಳಿದ ಆ ಮಾತುಗಳು ಫಲವನ್ನು ನೀಡುತ್ತಿರುವುದನ್ನು ಕಂಡು ನನ್ನ ಮಕ್ಕಳು ಶೋಕಿಸುತ್ತಿರಬಹುದೆಂದು ಅನಿಸುತ್ತಿದೆ.
07061046a ಹಿಮಾತ್ಯಯೇ ಯಥಾ ಕಕ್ಷಂ ಶುಷ್ಕಂ ವಾತೇರಿತೋ ಮಹಾನ್|
07061046c ಅಗ್ನಿರ್ದಹೇತ್ತಥಾ ಸೇನಾಂ ಮಾಮಿಕಾಂ ಸ ಧನಂಜಯಃ||
ಛಳಿಗಾಲದ ಕೊನೆಯಲ್ಲಿ ಒಣಗಿದ ಹುಲ್ಲುರಾಶಿಯನ್ನು ಭಿರುಗಾಳಿಯ ಸಹಾಯದಿಂದ ಅಗ್ನಿಯು ಹೇಗೆ ದಹಿಸುತ್ತಾನೋ ಹಾಗೆ ಆ ಧನಂಜಯನು ನನ್ನ ಸೇನೆಯನ್ನು ದಹಿಸುತ್ತಿದ್ದಾನೆ.
07061047a ಆಚಕ್ಷ್ವ ತದ್ಧಿ ನಃ ಸರ್ವಂ ಕುಶಲೋ ಹ್ಯಸಿ ಸಂಜಯ|
07061047c ಯದುಪಾಯಾತ್ತು ಸಾಯಾಹ್ನೇ ಕೃತ್ವಾ ಪಾರ್ಥಸ್ಯ ಕಿಲ್ಬಿಷಂ|
07061047e ಅಭಿಮನ್ಯೌ ಹತೇ ತಾತ ಕಥಮಾಸೀನ್ ಮನೋ ಹಿ ವಃ||
ಸಂಜಯ! ನೀನು ಕುಶಲನಾಗಿದ್ದೀಯೆ. ಅಲ್ಲಿ ನಡೆದುದೆಲ್ಲವನ್ನೂ ನನಗೆ ಹೇಳು. ಆ ಸಾಯಂಕಾಲ ಪಾರ್ಥನಿಗೆ ದುಃಖವನ್ನು ಕೊಟ್ಟು ಏನಾಯಿತು? ಅಯ್ಯಾ! ಅಭಿಮನ್ಯುವು ಹತನಾದ ನಂತರ ನಿನ್ನ ಮನಸ್ಸು ಹೇಗಿದ್ದಿತು?
07061048a ನ ಜಾತು ತಸ್ಯ ಕರ್ಮಾಣಿ ಯುಧಿ ಗಾಂಡೀವಧನ್ವನಃ|
07061048c ಅಪಕೃತ್ವಾ ಮಹತ್ತಾತ ಸೋಢುಂ ಶಕ್ಷ್ಯಂತಿ ಮಾಮಕಾಃ||
ಅಯ್ಯಾ! ಗಾಂಡೀವಧನ್ವಿಯನ್ನು ಅಪಮಾನಿಸಿ ನನ್ನವರು ಯುದ್ಧದಲ್ಲಿ ಅವನ ಮಹಾ ಕರ್ಮಗಳನ್ನು ತಡೆದುಕೊಳ್ಳಲು ಶಕ್ಯರಾಗಿಲ್ಲ.
07061049a ಕಿಂ ನು ದುರ್ಯೋಧನಃ ಕೃತ್ಯಂ ಕರ್ಣಃ ಕೃತ್ಯಂ ಕಿಮಬ್ರವೀತ್|
07061049c ದುಃಶಾಸನಃ ಸೌಬಲಶ್ಚ ತೇಷಾಮೇವಂ ಗತೇ ಅಪಿ|
07061049e ಸರ್ವೇಷಾಂ ಸಮವೇತಾನಾಂ ಪುತ್ರಾಣಾಂ ಮಮ ಸಂಜಯ||
ದುರ್ಯೋಧನನು ಏನು ಮಾಡಿದನು? ಕರ್ಣನು ಏನು ಹೇಳಿ ಮಾಡಿದನು? ದುಃಶಾಸನ ಮತ್ತು ಸೌಬಲರು ಏನು ಮಾಡಿದರು? ಅಲ್ಲಿ ಸೇರಿದ್ದ ನನ್ನ ಪುತ್ರರೆಲ್ಲರೂ ಏನು ಮಾಡಿದರು?
07061050a ಯದ್ವೃತ್ತಂ ತಾತ ಸಂಗ್ರಾಮೇ ಮಂದಸ್ಯಾಪನಯೈರ್ಭೃಶಂ|
07061050c ಲೋಭಾನುಗತದುರ್ಬುದ್ಧೇಃ ಕ್ರೋಧೇನ ವಿಕೃತಾತ್ಮನಃ||
07061051a ರಾಜ್ಯಕಾಮಸ್ಯ ಮೂಢಸ್ಯ ರಾಗೋಪಹತಚೇತಸಃ|
07061051c ದುರ್ನೀತಂ ವಾ ಸುನೀತಂ ವಾ ತನ್ಮಮಾಚಕ್ಷ್ವ ಸಂಜಯ||
ಅಯ್ಯಾ ಸಂಜಯ! ಸಂಗ್ರಾಮದಲ್ಲಿ ಆ ಮಂದಬುದ್ಧಿ, ತುಂಬಾ ಅನ್ಯಾಯಗಳನ್ನು ಮಾಡಿರುವ, ಲೋಭಿ, ದುರ್ಬುದ್ಧಿ, ಕ್ರೋಧದಿಂದ ಮನಸ್ಸನ್ನು ವಿಕಾರಮಾಡಿಕೊಂಡಿರುವ, ರಾಜ್ಯಕಾಮಿ, ಮೂಢ, ಆಸೆಯಿಂದ ಚೇತನವನ್ನೇ ಕಳೆದುಕೊಂಡಿರುವ ಅವನು ಏನನ್ನು - ಸರಿಯಾಗಿರಲಿ ಅಥವಾ ತಪ್ಪಾಗಿರಲಿ – ಮಾಡಿದನು ಎಂದು ನನಗೆ ಹೇಳು.”
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಧೃತರಾಷ್ಟ್ರವಾಕ್ಯೇ ಏಕಷಷ್ಠಿತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಧೃತರಾಷ್ಟ್ರವಾಕ್ಯ ಎನ್ನುವ ಅರವತ್ತೊಂದನೇ ಅಧ್ಯಾಯವು.