ದ್ರೋಣ ಪರ್ವ: ಪ್ರತಿಜ್ಞಾ ಪರ್ವ
೫೩
ಕೌರವ ಶಿಬಿರದಲ್ಲಿ ನಡೆದುದನ್ನು ವರದಿ ಮಾಡುತ್ತಾ ಕೃಷ್ಣನು “ಒಟ್ಟಿಗೇ ಆ ನರವ್ಯಾಘ್ರರನ್ನು ಜಯಿಸುವುದು ಶಕ್ಯವಿಲ್ಲವೆನಿಸುತ್ತದೆ” ಎಂದು ಅರ್ಜುನನಿಗೆ ಹೇಳಿದುದು (೧-೩೦). ಅರ್ಜುನನ ಧೈರ್ಯಯುಕ್ತ ಮಾತುಗಳು (೩೧-೫೩).
07053001 ಸಂಜಯ ಉವಾಚ|
07053001a ಪ್ರತಿಜ್ಞಾತೇ ತು ಪಾರ್ಥೇನ ಸಿಂಧುರಾಜವಧೇ ತದಾ|
07053001c ವಾಸುದೇವೋ ಮಹಾಬಾಹುರ್ಧನಂಜಯಮಭಾಷತ||
ಸಂಜಯನು ಹೇಳಿದನು: “ಪಾರ್ಥನು ಸಿಂಧುರಾಜನ ವಧೆಯ ಪ್ರತಿಜ್ಞೆಯನ್ನು ಮಾಡಲು ಮಹಾಬಾಹು ವಾಸುದೇವನು ಧನಂಜಯನಿಗೆ ಹೇಳಿದನು:
07053002a ಭ್ರಾತೄಣಾಂ ಮತಮಾಜ್ಞಾಯ ತ್ವಯಾ ವಾಚಾ ಪ್ರತಿಶ್ರುತಂ|
07053002c ಸೈಂಧವಂ ಶ್ವೋಽಸ್ಮಿ ಹಂತೇತಿ ತತ್ಸಾಹಸತಮಂ ಕೃತಂ||
“ಸಹೋದರರ ಅಭಿಪ್ರಾಯಗಳನ್ನು ತಿಳಿಯದೆಯೇ ನೀನು “ನಾಳೆ ಸೈಂಧವನನ್ನು ಕೊಲ್ಲುತ್ತೇನೆ!” ಎಂದು ಅತಿಸಾಹಸ ಕಾರ್ಯವನ್ನು ಮಾತಿನ ಮೂಲಕ ಕೇಳಿಸಿಬಿಟ್ಟೇ!
07053003a ಅಸಮ್ಮಂತ್ರ್ಯ ಮಯಾ ಸಾರ್ಧಮತಿಭಾರೋಽಯಮುದ್ಯತಃ|
07053003c ಕಥಂ ನು ಸರ್ವಲೋಕಸ್ಯ ನಾವಹಾಸ್ಯಾ ಭವೇಮಹಿ||
ನನ್ನೊಡನೆ ಕೂಡ ವಿಚಾರಿಸದೇ ನೀನು ಅತಿಭಾರವಾದ ಈ ಕಾರ್ಯವನ್ನು ವಹಿಸಿಕೊಂಡಿರುವೆ. ಈಗ ನಾವು ಸರ್ವಲೋಕದ ಅಪಹಾಸ್ಯಕ್ಕೆ ಒಳಗಾಗದಂತೆ ಹೇಗೆ ಮುಂದುವರೆಯಬೇಕು?
07053004a ಧಾರ್ತರಾಷ್ಟ್ರಸ್ಯ ಶಿಬಿರೇ ಮಯಾ ಪ್ರಣಿಹಿತಾಶ್ಚರಾಃ|
07053004c ತ ಇಮೇ ಶೀಘ್ರಮಾಗಮ್ಯ ಪ್ರವೃತ್ತಿಂ ವೇದಯಂತಿ ನಃ||
ಧಾರ್ತರಾಷ್ಟ್ರನ ಶಿಬಿರಕ್ಕೆ ನಾನು ಕಳುಹಿಸಿದ ಚರರು ಶೀಘ್ರವಾಗಿ ಬಂದು ಅಲ್ಲಿ ನಡೆದುದನ್ನು ನನಗೆ ತಿಳಿಸಿದ್ದಾರೆ.
07053005a ತ್ವಯಾ ವೈ ಸಂಪ್ರತಿಜ್ಞಾತೇ ಸಿಂಧುರಾಜವಧೇ ತದಾ|
07053005c ಸಿಂಹನಾದಃ ಸವಾದಿತ್ರಃ ಸುಮಹಾನಿಹ ತೈಃ ಶ್ರುತಃ||
ನೀನು ಸಿಂಧುರಾಜವಧೆಯ ಪ್ರತಿಜ್ಞೆ ಮಾಡಿದಾಗ ಇಲ್ಲಿ ಆದ ಮಹಾ ಸಿಂಹನಾದವನ್ನು ಅವರು ಕೇಳಿದರು.
07053006a ತೇನ ಶಬ್ದೇನ ವಿತ್ರಸ್ತಾ ಧಾರ್ತರಾಷ್ಟ್ರಾಃ ಸಸೈಂಧವಾಃ|
07053006c ನಾಕಸ್ಮಾತ್ಸಿಂಹನಾದೋಽಯಮಿತಿ ಮತ್ವಾ ವ್ಯವಸ್ಥಿತಾಃ||
ಆ ಶಬ್ಧದಿಂದ ಭಯಗೊಂಡ ಸೈಂಧವನೊಂದಿಗೆ ಧಾರ್ತರಾಷ್ಟ್ರರು ಇದು ಅಕಸ್ಮಾತ್ತಾಗಿ ಕೇಳಿಬಂದ ಸಿಂಹನಾದವಲ್ಲವೆಂದು ಅಭಿಪ್ರಾಯಪಟ್ಟು ಒಟ್ಟು ಗೂಡಿದರು.
07053007a ಸುಮಹಾಂ ಶಬ್ದಸಂಪಾತಃ ಕೌರವಾಣಾಂ ಮಹಾಭುಜ|
07053007c ಆಸೀನ್ನಾಗಾಶ್ವಪತ್ತೀನಾಂ ರಥಘೋಷಶ್ಚ ಭೈರವಃ||
ಮಹಾಭುಜ! ಕೌರವರ ಸೇನೆಗಳಲ್ಲಿಯೂ ಆನೆ-ಕುದುರೆ-ಪದಾತಿಗಳ ಮತ್ತು ರಥಘೋಷದ ಭೈರವ ಶಬ್ಧವು ಕೇಳಿಬಂದಿತು.
07053008a ಅಭಿಮನ್ಯುವಧಂ ಶ್ರುತ್ವಾ ಧ್ರುವಮಾರ್ತೋ ಧನಂಜಯಃ|
07053008c ರಾತ್ರೌ ನಿರ್ಯಾಸ್ಯತಿ ಕ್ರೋಧಾದಿತಿ ಮತ್ವಾ ವ್ಯವಸ್ಥಿತಾಃ||
ಅಭಿಮನ್ಯುವಿನ ವಧೆಯನ್ನು ಕೇಳಿ ಆರ್ತನಾದ ಧನಂಜಯನು ನಿಶ್ಚಯವಾಗಿ ಕ್ರೋಧದಿಂದ ರಾತ್ರಿಯೇ ಯುದ್ಧಕ್ಕೆ ಹೊರಡುತ್ತಾನೆ ಎಂದು ಯೋಚಿಸಿ ಅವರು ಸನ್ನದ್ಧರಾಗಿದ್ದರು.
07053009a ತೈರ್ಯತದ್ಭಿರಿಯಂ ಸತ್ಯಾ ಶ್ರುತಾ ಸತ್ಯವತಸ್ತವ|
07053009c ಪ್ರತಿಜ್ಞಾ ಸಿಂಧುರಾಜಸ್ಯ ವಧೇ ರಾಜೀವಲೋಚನ||
ರಾಜೀವಲೋಚನ! ಆಗ ಅವರು ಸತ್ಯವತನಾದ ನೀನು ಸಿಂಧುರಾಜನ ವಧೆಯ ಕುರಿತು ಮಾಡಿದ ಪ್ರತಿಜ್ಞೆಯ ಸತ್ಯವನ್ನು ಕೇಳಿ ತಿಳಿದುಕೊಂಡರು.
07053010a ತತೋ ವಿಮನಸಃ ಸರ್ವೇ ತ್ರಸ್ತಾಃ ಕ್ಷುದ್ರಮೃಗಾ ಇವ|
07053010c ಆಸನ್ಸುಯೋಧನಾಮಾತ್ಯಾಃ ಸ ಚ ರಾಜಾ ಜಯದ್ರಥಃ||
07053011a ಅಥೋತ್ಥಾಯ ಸಹಾಮಾತ್ಯೈರ್ದೀನಃ ಶಿಬಿರಮಾತ್ಮನಃ|
07053011c ಆಯಾತ್ಸೌವೀರಸಿಂಧೂನಾಮೀಶ್ವರೋ ಭೃಶದುಃಖಿತಃ||
ಆಗ ಸುಯೋಧನ ಮತ್ತು ಅವನ ಅಮಾತ್ಯರು ಕ್ಷುದ್ರಮೃಗಗಳಂತೆ ಭಯಗೊಂಡು ವಿಮನಸ್ಕರಾಗಿ ಕುಳಿತುಕೊಂಡರು. ಆಗ ದೀನ ಸೌವೀರ ಸಿಂಧುಗಳ ಒಡೆಯ ರಾಜಾ ಜಯದ್ರಥನು ತುಂಬಾ ದುಃಖಿತನಾಗಿ ಎದ್ದು ಅಮಾತ್ಯರೊಡಗೂಡಿ ತನ್ನ ಶಿಬಿರಕ್ಕೆ ತೆರಳಿದನು.
07053012a ಸ ಮಂತ್ರಕಾಲೇ ಸಮ್ಮಂತ್ರ್ಯ ಸರ್ವಾ ನೈಃಶ್ರೇಯಸೀಃ ಕ್ರಿಯಾಃ|
07053012c ಸುಯೋಧನಮಿದಂ ವಾಕ್ಯಮಬ್ರವೀದ್ರಾಜಸಂಸದಿ||
ಅವನು ಯೋಚಿಸಬೇಕಾದ ಸಮಯದಲ್ಲಿ ಶ್ರೇಯಸ್ಸುಂಟುಮಾಡುವ ಎಲ್ಲ ಕ್ರಿಯೆಗಳ ಕುರಿತು ಮಂತ್ರಾಲೋಚನೆ ಮಾಡಿ ರಾಜಸಂಸದಿಗೆ ಬಂದು ಸುಯೋಧನನಿಗೆ ಈ ಮಾತನ್ನಾಡಿದನು:
07053013a ಮಾಮಸೌ ಪುತ್ರಹಂತೇತಿ ಶ್ವೋಽಭಿಯಾತಾ ಧನಂಜಯಃ|
07053013c ಪ್ರತಿಜ್ಞಾತೋ ಹಿ ಸೇನಾಯಾ ಮಧ್ಯೇ ತೇನ ವಧೋ ಮಮ||
“ತನ್ನ ಮಗನನ್ನು ಕೊಂದವನು ನಾನು ಎಂದು ತಿಳಿದು ಧನಂಜಯನು ನಾಳೆ ಯುದ್ಧದಲ್ಲಿ ನನ್ನನ್ನು ಎದುರಿಸುವನಿದ್ದಾನೆ. ಅವನ ಸೇನೆಯ ಮಧ್ಯೆ ನನ್ನನ್ನು ವಧಿಸುವ ಪ್ರತಿಜ್ಞೆಯನ್ನೂ ಮಾಡಿದ್ದಾನೆ.
07053014a ತಾಂ ನ ದೇವಾ ನ ಗಂಧರ್ವಾ ನಾಸುರೋರಗರಾಕ್ಷಸಾಃ|
07053014c ಉತ್ಸಹಂತೇಽನ್ಯಥಾ ಕರ್ತುಂ ಪ್ರತಿಜ್ಞಾಂ ಸವ್ಯಸಾಚಿನಃ||
ಸವ್ಯಸಾಚಿಯ ಪ್ರತಿಜ್ಞೆಯನ್ನು ದೇವತೆಗಳಾಗಲೀ, ಗಂಧರ್ವರಾಗಲೀ, ಅಸುರ-ಉರಗ-ರಾಕ್ಷಸರಾಗಲೀ ಸುಳ್ಳುಮಾಡಲು ಉತ್ಸುಕರಾಗಿಲ್ಲ.
07053015a ತೇ ಮಾಂ ರಕ್ಷತ ಸಂಗ್ರಾಮೇ ಮಾ ವೋ ಮೂರ್ಧ್ನಿ ಧನಂಜಯಃ|
07053015c ಪದಂ ಕೃತ್ವಾಪ್ನುಯಾಲ್ಲಕ್ಷ್ಯಂ ತಸ್ಮಾದತ್ರ ವಿಧೀಯತಾಂ||
ಆದುದರಿಂದ ನೀವೆಲ್ಲರೂ ಸಂಗ್ರಾಮದಲ್ಲಿ ನನ್ನನ್ನು ರಕ್ಷಿಸಬೇಕು. ನಿಮ್ಮ ನೆತ್ತಿಯ ಮೇಲೆ ಕಾಲಿಟ್ಟು ಧನಂಜಯನು ತನ್ನ ಗುರಿಯನ್ನು ಹೊಡೆಯಲು ಬಿಡಬೇಡಿ!
07053016a ಅಥ ರಕ್ಷಾ ನ ಮೇ ಸಂಖ್ಯೇ ಕ್ರಿಯತೇ ಕುರುನಂದನ|
07053016c ಅನುಜಾನೀಹಿ ಮಾಂ ರಾಜನ್ಗಮಿಷ್ಯಾಮಿ ಗೃಹಾನ್ಪ್ರತಿ||
ಕುರುನಂದನ! ಯುದ್ಧದಲ್ಲಿ ನೀನು ನನ್ನನ್ನು ರಕ್ಷಿಸಲಾರೆ ಎಂದಾದರೆ ರಾಜನ್! ನನಗೆ ಅನುಜ್ಞೆಯನ್ನು ನೀಡು. ನಾನು ನನ್ನ ಮನೆಗೆ ಹೋಗುತ್ತೇನೆ.”
07053017a ಏವಮುಕ್ತಸ್ತ್ವವಾಕ್ಶೀರ್ಷೋ ವಿಮನಾಃ ಸ ಸುಯೋಧನಃ|
07053017c ಶ್ರುತ್ವಾಭಿಶಪ್ತವಂತಂ ತ್ವಾಂ ಧ್ಯಾನಂ ಏವಾನ್ವಪದ್ಯತ||
ಹೀಗೆ ಹೇಳಲು ಸುಯೋಧನನು ವಿಮನಸ್ಕನಾಗಿ ತಲೆತಗ್ಗಿಸಿ ಯೋಚಿಸಿದನು. ಅವನು ಹೀಗೆ ಶಪಿತನಾದುದನ್ನು ಕೇಳಿ ಸುಮ್ಮನಾಗಿ ಯೋಚಿಸತೊಡಗಿದನು.
07053018a ತಮಾರ್ತಮಭಿಸಂಪ್ರೇಕ್ಷ್ಯ ರಾಜಾ ಕಿಲ ಸ ಸೈಂಧವಃ|
07053018c ಮೃದು ಚಾತ್ಮಹಿತಂ ಚೈವ ಸಾಪೇಕ್ಷಮಿದಮುಕ್ತವಾನ್||
ರಾಜನು ದುಃಖಿತನಾಗಿರುವುದನ್ನು ನೋಡಿ ಸೈಂಧವನು ತನಗೆ ಒಳ್ಳೆಯದಾಗುವ ರೀತಿಯಲ್ಲಿ ಮೃದುವಾಗಿ ಹೀಗೆ ಹೇಳಿದನು:
07053019a ನಾಹಂ ಪಶ್ಯಾಮಿ ಭವತಾಂ ತಥಾವೀರ್ಯಂ ಧನುರ್ಧರಂ|
07053019c ಯೋಽರ್ಜುನಸ್ಯಾಸ್ತ್ರಮಸ್ತ್ರೇಣ ಪ್ರತಿಹನ್ಯಾನ್ಮಹಾಹವೇ||
“ಮಹಾಹವದಲ್ಲಿ ಅರ್ಜುನನ ಅಸ್ತ್ರಗಳನ್ನು ಅಸ್ತ್ರಗಳಿಂದ ಪ್ರತಿಯಾಗಿ ಹೊಡೆಯಬಲ್ಲ, ಅವನಷ್ಟು ವೀರ್ಯವಂತನಾದ ಧನುರ್ಧರನನ್ನು ನಿನ್ನ ಕಡೆಯವರಲ್ಲಿ ಯಾರನ್ನೂ ನಾನು ಕಾಣುತ್ತಿಲ್ಲ.
07053020a ವಾಸುದೇವಸಹಾಯಸ್ಯ ಗಾಂಡೀವಂ ಧುನ್ವತೋ ಧನುಃ|
07053020c ಕೋಽರ್ಜುನಸ್ಯಾಗ್ರತಸ್ತಿಷ್ಠೇತ್ಸಾಕ್ಷಾದಪಿ ಶತಕ್ರತುಃ||
ವಾಸುದೇವನನ್ನು ಸಹಾಯಕನಾಗಿ ಪಡೆದಿರುವ, ಗಾಂಡೀವ ಧನುಸ್ಸನ್ನು ಟೇಂಕರಿಸುವ ಅರ್ಜುನನ ಎದುರು ಸಾಕ್ಷಾತ್ ಶತಕ್ರತುವೇ ನಿಲ್ಲದಿರುವಾಗ ಬೇರೆ ಯಾರಿಗೆ ತಾನೇ ಇದು ಸಾಧ್ಯ?
07053021a ಮಹೇಶ್ವರೋಽಪಿ ಪಾರ್ಥೇನ ಶ್ರೂಯತೇ ಯೋಧಿತಃ ಪುರಾ|
07053021c ಪದಾತಿನಾ ಮಹಾತೇಜಾ ಗಿರೌ ಹಿಮವತಿ ಪ್ರಭುಃ||
ಹಿಂದೆ ಹಿಮಾಲಯ ಗಿರಿಯಲ್ಲಿ ಮಹಾತೇಜಸ್ವಿ ಪ್ರಭೂ ಮಹೇಶ್ವರನೂ ಕೂಡ ಪಾರ್ಥನೊಂದಿಗೆ ನಿಂತೇ ಯುದ್ಧಮಾಡಿದನೆಂದು ಕೇಳಿದ್ದೇವೆ.
07053022a ದಾನವಾನಾಂ ಸಹಸ್ರಾಣಿ ಹಿರಣ್ಯಪುರವಾಸಿನಾಂ|
07053022c ಜಘಾನೇಕರಥೇನೈವ ದೇವರಾಜಪ್ರಚೋದಿತಃ||
ದೇವರಾಜನಿಂದ ಉತ್ತೇಜಿತನಾದ ಅವನು ಒಬ್ಬನೇ ರಥದಲ್ಲಿ ಹಿರಣ್ಯಪುರವಾಸಿನೀ ಸಹಸ್ರಾರು ದಾನವರನ್ನು ಸಂಹರಿಸಿದನು.
07053023a ಸಮಾಯುಕ್ತೋ ಹಿ ಕೌಂತೇಯೋ ವಾಸುದೇವೇನ ಧೀಮತಾ|
07053023c ಸಾಮರಾನಪಿ ಲೋಕಾಂಸ್ತ್ರೀನ್ನಿಹನ್ಯಾದಿತಿ ಮೇ ಮತಿಃ||
ಧೀಮತ ವಾಸುದೇವನಿಂದೊಡಗೂಡಿ ಕೌಂತೇಯನು ಅಮರರೊಂದಿಗೆ ಈ ಮೂರು ಲೋಕಗಳನ್ನೂ ನಾಶಗೊಳಿಸಬಲ್ಲ ಎಂದು ನನಗನ್ನಿಸುತ್ತದೆ.
07053024a ಸೋಽಹಮಿಚ್ಚಾಮ್ಯನುಜ್ಞಾತುಂ ರಕ್ಷಿತುಂ ವಾ ಮಹಾತ್ಮನಾ|
07053024c ದ್ರೋಣೇನ ಸಹಪುತ್ರೇಣ ವೀರೇಣ ಯದಿ ಮನ್ಯಸೇ||
ಆದುದರಿಂದ ನೀನು ತಿಳಿದಂತೆ ನನಗೆ ಹೋಗಲು ಅನುಜ್ಞೆಯನ್ನು ನೀಡು ಅಥವಾ ವೀರ ಪುತ್ರನೊಂದಿಗೆ ಮಹಾತ್ಮ ದ್ರೋಣನು ನನ್ನನ್ನು ರಕ್ಷಿಸಲಿ.”
07053025a ಸ ರಾಜ್ಞಾ ಸ್ವಯಮಾಚಾರ್ಯೋ ಭೃಶಮಾಕ್ರಂದಿತೋಽರ್ಜುನ|
07053025c ಸಂವಿಧಾನಂ ಚ ವಿಹಿತಂ ರಥಾಶ್ಚ ಕಿಲ ಸಜ್ಜಿತಾಃ||
ಅರ್ಜುನ! ಆಗ ಸ್ವಯಂ ರಾಜನು ತುಂಬಾ ಕಳವಳಗೊಂಡು ಆಚಾರ್ಯನೊಂದಿಗೆ ಒಪ್ಪಂದವನ್ನು ಮಾಡಿಕೊಂಡು ರಥಗಳನ್ನು ಸಜ್ಜುಗೊಳಿಸಲು ಆದೇಶವಿತ್ತಿದ್ದಾನೆ.
07053026a ಕರ್ಣೋ ಭೂರಿಶ್ರವಾ ದ್ರೌಣಿರ್ವೃಷಸೇನಶ್ಚ ದುರ್ಜಯಃ|
07053026c ಕೃಪಶ್ಚ ಮದ್ರರಾಜಶ್ಚ ಷಡೇತೇಽಸ್ಯ ಪುರೋಗಮಾಃ||
ಕರ್ಣ, ಭೂರಿಶ್ರವ, ದ್ರೌಣಿ, ವೃಷಸೇನ, ದುರ್ಜಯ ಮತ್ತು ಮದ್ರರಾಜ ಈ ಆರು ಮಂದಿ ಎದುರಿರುತ್ತಾರೆ.
07053027a ಶಕಟಃ ಪದ್ಮಪಶ್ಚಾರ್ಧೋ ವ್ಯೂಹೋ ದ್ರೋಣೇನ ಕಲ್ಪಿತಃ|
07053027c ಪದ್ಮಕರ್ಣಿಕಮಧ್ಯಸ್ಥಃ ಸೂಚೀಪಾಶೇ ಜಯದ್ರಥಃ|
07053027e ಸ್ಥಾಸ್ಯತೇ ರಕ್ಷಿತೋ ವೀರೈಃ ಸಿಂಧುರಾಡ್ಯುದ್ಧದುರ್ಮದೈಃ||
ಅರ್ಧ ಶಕಟ ಮತ್ತೊಂದು ಅರ್ಧ ಪದ್ಮಾಕಾರದ ವ್ಯೋಹವನ್ನು ದ್ರೋಣನು ಕಲ್ಪಿಸಿದ್ದಾನೆ. ಪದ್ಮಕರ್ಣಿಕದ ಮಧ್ಯದಲ್ಲಿ ಸೂಜಿಭಾಗದಲ್ಲಿ ಜಯದ್ರಥನಿರುತ್ತಾನೆ. ಹೀಗೆ ಸಿಂಧುರಾಜನು ಯುದ್ಧದುರ್ಮದ ವೀರರಿಂದ ರಕ್ಷಿಸಲ್ಪಟ್ಟಿದ್ದಾನೆ.
07053028a ಧನುಷ್ಯಸ್ತ್ರೇ ಚ ವೀರ್ಯೇ ಚ ಪ್ರಾಣೇ ಚೈವ ತಥೋರಸಿ|
07053028c ಅವಿಷಹ್ಯತಮಾ ಹ್ಯೇತೇ ನಿಶ್ಚಿತಾಃ ಪಾರ್ಥ ಷಡ್ರಥಾಃ|
07053028e ಏತಾನಜಿತ್ವಾ ಸಗಣಾನ್ನೈವ ಪ್ರಾಪ್ಯೋ ಜಯದ್ರಥಃ||
ಪಾರ್ಥ! ಧನುಸ್ಸು, ಅಸ್ತ್ರ, ವೀರ್ಯ, ಪ್ರಾಣ ಮತ್ತು ಹುಟ್ಟಿನಲ್ಲಿ ಹೆಚ್ಚಿನವರಾದ ಈ ಷಡ್ರಥರನ್ನು ಸುಲಭವಾಗಿ ಗೆಲ್ಲಲಾರೆವು ಎನ್ನುವುದು ಖಂಡಿತ. ಸೇನೆಗಳೊಂದಿಗೆ ಇವರನ್ನು ಗೆಲ್ಲದೇ ಜಯದ್ರಥನನ್ನು ನಾವು ತಲುಪಲಾರೆವು.
07053029a ತೇಷಾಂ ಏಕೈಕಶೋ ವೀರ್ಯಂ ಷಣ್ಣಾಂ ತ್ವಮನುಚಿಂತಯ|
07053029c ಸಹಿತಾ ಹಿ ನರವ್ಯಾಘ್ರಾ ನ ಶಕ್ಯಾ ಜೇತುಮಂಜಸಾ||
ಆ ಆರರಲ್ಲಿ ಒಬ್ಬೊಬ್ಬರ ವೀರ್ಯದ ಕುರಿತೂ ಯೋಚಿಸು. ಒಟ್ಟಿಗೇ ಆ ನರವ್ಯಾಘ್ರರನ್ನು ಜಯಿಸುವುದು ಶಕ್ಯವಿಲ್ಲವೆನಿಸುತ್ತದೆ.
07053030a ಭೂಯಶ್ಚ ಚಿಂತಯಿಷ್ಯಾಮಿ ನೀತಿಮಾತ್ಮಹಿತಾಯ ವೈ|
07053030c ಮಂತ್ರಜ್ಞೈಃ ಸಚಿವೈಃ ಸಾರ್ಧಂ ಸುಹೃದ್ಭಿಃ ಕಾರ್ಯಸಿದ್ಧಯೇ||
ಇನ್ನೊಮ್ಮೆ ನಾವು ಕಾರ್ಯಸಿದ್ಧಿಗಾಗಿ ಮತ್ತು ನಮ್ಮ ಹಿತದ ನೀತಿಯ ಕುರಿತು ಸಚಿವರೊಂದಿಗೆ ಮತ್ತು ಸುಹೃದಯರೊಂದಿಗೆ ಮಂತ್ರಾಲೋಚನೆ ಮಾಡಬೇಕೆಂದು ಯೋಚಿಸುತ್ತಿದ್ದೇನೆ.”
07053031 ಅರ್ಜುನ ಉವಾಚ|
07053031a ಷಡ್ರಥಾನ್ಧಾರ್ತರಾಷ್ಟ್ರಸ್ಯ ಮನ್ಯಸೇ ಯಾನ್ಬಲಾಧಿಕಾನ್|
07053031c ತೇಷಾಂ ವೀರ್ಯಂ ಮಮಾರ್ಧೇನ ನ ತುಲ್ಯಮಿತಿ ಲಕ್ಷಯೇ||
ಅರ್ಜುನನು ಹೇಳಿದನು: “ಯಾರ ಬಲವು ಅಧಿಕವೆಂದು ನೀನು ಅಭಿಪ್ರಾಯಪಡುತ್ತಿದ್ದೀಯೋ ಧಾರ್ತರಾಷ್ಟ್ರನ ಆ ಷಡ್ರಥರ ವೀರ್ಯವು ನನ್ನ ಅರ್ಧಕ್ಕೂ ಸಮನಿಲ್ಲ ಎಂದು ನನಗನ್ನಿಸುತ್ತದೆ.
07053032a ಅಸ್ತ್ರಮಸ್ತ್ರೇಣ ಸರ್ವೇಷಾಮೇತೇಷಾಂ ಮಧುಸೂದನ|
07053032c ಮಯಾ ದ್ರಕ್ಷ್ಯಸಿ ನಿರ್ಭಿನ್ನಂ ಜಯದ್ರಥವಧೈಷಿಣಾ||
ಮಧುಸೂದನ! ಜಯದ್ರಥನನ್ನು ವಧಿಸಲು ಬಯಸಿದ ನಾನು ಅವರೆಲ್ಲರ ಅಸ್ತ್ರಗಳನ್ನೂ ಅಸ್ತ್ರಗಳಿಂದ ತುಂಡುಮಾಡುವುದನ್ನು ನೀನು ನೋಡುವೆಯಂತೆ!
07053033a ದ್ರೋಣಸ್ಯ ಮಿಷತಃ ಸೋಽಹಂ ಸಗಣಸ್ಯ ವಿಲಪ್ಯತಃ|
07053033c ಮೂರ್ಧಾನಂ ಸಿಂಧುರಾಜಸ್ಯ ಪಾತಯಿಷ್ಯಾಮಿ ಭೂತಲೇ||
ಸೇನೆಗಳೊಂದಿಗೆ ದ್ರೋಣನು ನೋಡುತ್ತಾ ವಿಲಪಿಸಲು ನಾನು ಸಿಂಧುರಾಜನ ರುಂಡವನ್ನು ನೆಲಕ್ಕುರುಳಿಸುತ್ತೇನೆ!
07053034a ಯದಿ ಸಾಧ್ಯಾಶ್ಚ ರುದ್ರಾಶ್ಚ ವಸವಶ್ಚ ಸಹಾಶ್ವಿನಃ|
07053034c ಮರುತಶ್ಚ ಸಹೇಂದ್ರೇಣ ವಿಶ್ವೇದೇವಾಸ್ತಥಾಸುರಾಃ||
07053035a ಪಿತರಃ ಸಹಗಂಧರ್ವಾಃ ಸುಪರ್ಣಾಃ ಸಾಗರಾದ್ರಯಃ|
07053035c ದ್ಯೌರ್ವಿಯತ್ಪೃಥಿವೀ ಚೇಯಂ ದಿಶಶ್ಚ ಸದಿಗೀಶ್ವರಾಃ||
07053036a ಗ್ರಾಮ್ಯಾರಣ್ಯಾನಿ ಭೂತಾನಿ ಸ್ಥಾವರಾಣಿ ಚರಾಣಿ ಚ|
07053036c ತ್ರಾತಾರಃ ಸಿಂಧುರಾಜಸ್ಯ ಭವಂತಿ ಮಧುಸೂದನ||
07053037a ತಥಾಪಿ ಬಾಣೈರ್ನಿಹತಂ ಶ್ವೋ ದ್ರಷ್ಟಾಸಿ ರಣೇ ಮಯಾ|
ಒಂದುವೇಳೆ ಸಾಧ್ಯರೂ, ರುದ್ರರೂ, ಅಶ್ವಿನಿಗಳೊಡನೆ ವಸುಗಳೂ, ಇಂದ್ರನೊಂದಿಗೆ ಮರುತರೂ, ವಿಶ್ವೇದೇವರೂ, ಹಾಗೆಯೇ ಅಸುರರೂ, ಗಂಧರ್ವರೊಡನೆ ಪಿತೃಗಳೂ, ಸುಪರ್ಣರೂ, ಸಾಗರ-ಪರ್ವತಗಳೂ, ಆಕಾಶ, ಭೂಮಿ, ದಿಕ್ಪಾಲಕರೊಂದಿಗೆ ದಿಕ್ಕುಗಳೂ, ಗ್ರಾಮ-ಅರಣ್ಯಗಳೂ, ಸ್ಥಾವರ-ಚರ ಭೂತಗಳೂ ಸಿಂಧುರಾಜನನ್ನು ರಕ್ಷಿಸಲು ಬಂದರೂ, ಮಧುಸೂದನ, ನಾಳೆ ರಣದಲ್ಲಿ ನನ್ನ ಬಾಣಗಳಿಂದ ಅವನು ಹತನಾಗುವುದನ್ನು ನೀನು ನೋಡುತ್ತೀಯೆ!
07053037c ಸತ್ಯೇನ ತೇ ಶಪೇ ಕೃಷ್ಣ ತಥೈವಾಯುಧಮಾಲಭೇ||
07053038a ಯಶ್ಚ ಗೋಪ್ತಾ ಮಹೇಷ್ವಾಸಸ್ತಸ್ಯ ಪಾಪಸ್ಯ ದುರ್ಮತೇಃ|
07053038c ತಮೇವ ಪ್ರಥಮಂ ದ್ರೋಣಮಭಿಯಾಸ್ಯಾಮಿ ಕೇಶವ||
ಕೃಷ್ಣ! ನನ್ನ ಆಯುಧವನ್ನು ಮುಟ್ಟಿಕೊಂಡು ಸತ್ಯವಾಗಿ ನಾನು ಈ ಶಪಥವನ್ನು ಮಾಡುತ್ತಿದ್ದೇನೆ. ಕೇಶವ! ಆ ಪಾಪಿ ದುರ್ಮತಿ ಮಹೇಷ್ವಾಸನ ರಕ್ಷಕನಾಗಿರುವ ದ್ರೋಣನನ್ನೇ ಮೊಟ್ಟಮೊದಲಿಗೆ ಎದುರಿಸುತ್ತೇನೆ.
07053039a ತಸ್ಮಿನ್ದ್ಯೂತಮಿದಂ ಬದ್ಧಂ ಮನ್ಯತೇ ಸ್ಮ ಸುಯೋಧನಃ|
07053039c ತಸ್ಮಾತ್ತಸ್ಯೈವ ಸೇನಾಗ್ರಂ ಭಿತ್ತ್ವಾ ಯಾಸ್ಯಾಮಿ ಸೈಂಧವಂ||
ಇವನೇ ದ್ಯೂತದ ಪಣವೆಂದು ಸುಯೋಧನನು ತಿಳಿದಿದ್ದಾನೆ. ಆದುದರಿಂದ ಅವನ ಸೇನೆಯ ಅಗ್ರಭಾಗವನ್ನು ಭೇದಿಸಿಯೇ ನಾನು ಸೈಂಧವನನ್ನು ಕೊಲ್ಲುತ್ತೇನೆ.
07053040a ದ್ರಷ್ಟಾಸಿ ಶ್ವೋ ಮಹೇಷ್ವಾಸಾನ್ನಾರಾಚೈಸ್ತಿಗ್ಮತೇಜನೈಃ|
07053040c ಶೃಂಗಾಣೀವ ಗಿರೇರ್ವಜ್ರೈರ್ದಾರ್ಯಮಾಣಾನ್ಮಯಾ ಯುಧಿ||
ವಜ್ರದಿಂದ ಗಿರಿಶೃಂಗಗಳನ್ನು ಸೀಳುವಂತೆ ಆ ಮಹೇಷ್ವಾಸರನ್ನು ನಾಳೆ ಯುದ್ಧದಲ್ಲಿ ನನ್ನ ತಿಗ್ಮತೇಜಸ್ವೀ ನಾರಾಚಗಳಿಂದ ಸೀಳುವುದನ್ನು ನೀನು ನೋಡುವೆ!
07053041a ನರನಾಗಾಶ್ವದೇಹೇಭ್ಯೋ ವಿಸ್ರವಿಷ್ಯತಿ ಶೋಣಿತಂ|
07053041c ಪತದ್ಭ್ಯಃ ಪತಿತೇಭ್ಯಶ್ಚ ವಿಭಿನ್ನೇಭ್ಯಃ ಶಿತೈಃ ಶರೈಃ||
ನಿಶಿತ ಶರಗಳಿಂದ ಒಡೆದು ಕೆಳಗೆ ಬೀಳುವ ಮತ್ತು ಬಿದ್ದ ಆನೆ, ಕುದುರೆ ಮತ್ತು ನರರ ಶರೀರಗಳಿಂದ ರಕ್ತವು ಹರಿಯುತ್ತದೆ.
07053042a ಗಾಂಡೀವಪ್ರೇಷಿತಾ ಬಾಣಾ ಮನೋನಿಲಸಮಾ ಜವೇ|
07053042c ನೃನಾಗಾಶ್ವಾನ್ವಿದೇಹಾಸೂನ್ಕರ್ತಾರಶ್ಚ ಸಹಸ್ರಶಃ||
ಗಾಂಡೀವದಿಂದ ಪ್ರಯೋಗಿಸಲ್ಪಟ್ಟ, ಮನಸ್ಸು ಮತ್ತು ವಾಯುವೇಗಗಳನ್ನುಳ್ಳ ಬಾಣಗಳು ಸಹಸ್ರಾರು ನರ-ಆನೆ-ಕುದುರೆಗಳ ದೇಹಗಳನ್ನು ಕತ್ತರಿಸಲಿವೆ.
07053043a ಯಮಾತ್ಕುಬೇರಾದ್ವರುಣಾದ್ರುದ್ರಾದಿಂದ್ರಾಚ್ಚ ಯನ್ಮಯಾ|
07053043c ಉಪಾತ್ತಮಸ್ತ್ರಂ ಘೋರಂ ವೈ ತದ್ದ್ರಷ್ಟಾರೋ ನರಾ ಯುಧಿ||
ಯಮ, ಕುಬೇರ, ವರುಣ, ರುದ್ರ ಮತ್ತು ಇಂದ್ರರಿಂದ ನಾನು ಯಾವ ಅಸ್ತ್ರಗಳನ್ನು ಪಡೆದಿದ್ದೆನೋ ಆ ಘೋರ ಅಸ್ತ್ರಗಳನ್ನು ನರರು ನಾಳೆ ಯುದ್ಧದಲ್ಲಿ ನೋಡಲಿದ್ದಾರೆ.
07053044a ಬ್ರಾಹ್ಮೇಣಾಸ್ತ್ರೇಣ ಚಾಸ್ತ್ರಾಣಿ ಹನ್ಯಮಾನಾನಿ ಸಂಯುಗೇ|
07053044c ಮಯಾ ದ್ರಷ್ಟಾಸಿ ಸರ್ವೇಷಾಂ ಸೈಂಧವಸ್ಯಾಭಿರಕ್ಷಿಣಾಂ||
ಸೈಂಧವನನ್ನು ರಕ್ಷಿಸುವವರೆಲ್ಲರೂ ಸಂಯುಗದಲ್ಲಿ ಅಸ್ತ್ರಗಳು ನನ್ನ ಬ್ರಹ್ಮಾಸ್ತ್ರದಿಂದ ನಾಶವಾಗುವುದನ್ನು ನೋಡಲಿದ್ದಾರೆ.
07053045a ಶರವೇಗಸಮುತ್ಕೃತ್ತೈ ರಾಜ್ಞಾಂ ಕೇಶವ ಮೂರ್ಧಭಿಃ|
07053045c ಆಸ್ತೀರ್ಯಮಾಣಾಂ ಪೃಥಿವೀಂ ದ್ರಷ್ಟಾಸಿ ಶ್ವೋ ಮಯಾ ಯುಧಿ||
ಕೇಶವ! ನಾಳೆ ಯುದ್ಧದಲ್ಲಿ ನನ್ನ ಶರವೇಗದಿಂದ ರಾಜರ ರುಂಡಗಳು ತುಂಡಾಗಿ ಭೂಮಿಯ ಮೇಲೆ ಚೆಲ್ಲಿ ಬೀಳುವುದನ್ನು ನೀನು ನೋಡಲಿರುವೆ.
07053046a ಕ್ರವ್ಯಾದಾಂಸ್ತರ್ಪಯಿಷ್ಯಾಮಿ ದ್ರಾವಯಿಷ್ಯಾಮಿ ಶಾತ್ರವಾನ್|
07053046c ಸುಹೃದೋ ನಂದಯಿಷ್ಯಾಮಿ ಪಾತಯಿಷ್ಯಾಮಿ ಸೈಂಧವಂ||
ಕ್ರವ್ಯಾದಗಳನ್ನು ತೃಪ್ತಿಪಡಿಸುತ್ತೇನೆ. ಶತ್ರುಗಳನ್ನು ಓಡಿಸುತ್ತೇನೆ. ಸ್ನೇಹಿತರನ್ನು ಸಂತೋಷಗೊಳಿಸುತ್ತೇನೆ. ಸೈಂಧವನನ್ನು ಉರುಳಿಸುತ್ತೇನೆ.
07053047a ಬಹ್ವಾಗಸ್ಕೃತ್ಕುಸಂಬಂಧೀ ಪಾಪದೇಶಸಮುದ್ಭವಃ|
07053047c ಮಯಾ ಸೈಂಧವಕೋ ರಾಜಾ ಹತಃ ಸ್ವಾಂ ಶೋಚಯಿಷ್ಯತಿ||
ಬಹಳಷ್ಟು ಕೆಟ್ಟದ್ದನ್ನು ಮಾಡಿರುವ, ಕೆಟ್ಟ ಸಂಬಂಧೀ, ಪಾಪದೇಶದಲ್ಲಿ ಹುಟ್ಟಿದ ರಾಜ ಸೈಂಧವನು ನನ್ನಿಂದ ಹತನಾಗಿ ತಾನೇ ಶೋಕಿಸುವವನಿದ್ದಾನೆ.
07053048a ಸರ್ವಕ್ಷೀರಾನ್ನಭೋಕ್ತಾರಃ ಪಾಪಾಚಾರಾ ರಣಾಜಿರೇ|
07053048c ಮಯಾ ಸರಾಜಕಾ ಬಾಣೈರ್ನುನ್ನಾ ನಂಕ್ಷ್ಯಂತಿ ಸೈಂಧವಾಃ||
ಸದಾ ಕ್ಷೀರಾನ್ನವನ್ನೇ ಉಣ್ಣುತ್ತಾ ಬಂದ ಆ ಪಾಪಾಚಾರೀ ಸೈಂಧವನು ರಾಜರೊಂದಿಗೆ ರಣದಲ್ಲಿ ನನ್ನ ಬಾಣಗಳಿಂದ ಸಾಯುತ್ತಾನೆ.
07053049a ತಥಾ ಪ್ರಭಾತೇ ಕರ್ತಾಸ್ಮಿ ಯಥಾ ಕೃಷ್ಣ ಸುಯೋಧನಃ|
07053049c ನಾನ್ಯಂ ಧನುರ್ಧರಂ ಲೋಕೇ ಮಂಸ್ಯತೇ ಮತ್ಸಮಂ ಯುಧಿ||
ಕೃಷ್ಣ! ನಾಳೆ ಬೆಳಿಗ್ಗೆ ಯುದ್ಧದಲ್ಲಿ ನನ್ನ ಸರಿಸಮನಾದ ಧನುರ್ಧರನು ಬೇರೆ ಯಾರೂ ಇಲ್ಲ ಎಂದು ಸುಯೋಧನನು ಯೋಚಿಸುವಂತೆ ಮಾಡುತ್ತೇನೆ.
07053050a ಗಾಂಡೀವಂ ಚ ಧನುರ್ದಿವ್ಯಂ ಯೋದ್ಧಾ ಚಾಹಂ ನರರ್ಷಭ|
07053050c ತ್ವಂ ಚ ಯಂತಾ ಹೃಷೀಕೇಶ ಕಿಂ ನು ಸ್ಯಾದಜಿತಂ ಮಯಾ||
ನರರ್ಷಭ! ಹೃಷೀಕೇಶ! ದಿವ್ಯ ಗಾಂಡೀವ ಧನುಸ್ಸಿನೊಡನೆ ಯುದ್ಧಮಾಡುವ ಮತ್ತು ನೀನೇ ಸಾರಥಿಯಾಗಿರುವ ನನ್ನನ್ನು ಯಾರುತಾನೇ ಗೆದ್ದಾರು?
07053051a ಯಥಾ ಹಿ ಲಕ್ಷ್ಮ ಚಂದ್ರೇ ವೈ ಸಮುದ್ರೇ ಚ ಯಥಾ ಜಲಂ|
07053051c ಏವಮೇತಾಂ ಪ್ರತಿಜ್ಞಾಂ ಮೇ ಸತ್ಯಾಂ ವಿದ್ಧಿ ಜನಾರ್ದನ||
ಜನಾರ್ದನ! ಚಂದ್ರನಲ್ಲಿ ಲಕ್ಷ್ಮಿಯಿರುವಂತೆ ಮತ್ತು ಸಮುದ್ರದಲ್ಲಿ ನೀರಿರುವಂತೆ ನನ್ನ ಪ್ರತಿಜ್ಞೆಯಲ್ಲಿಯೂ ಸತ್ಯವಿದೆಯೆಂದು ತಿಳಿ.
07053052a ಮಾವಮಂಸ್ಥಾ ಮಮಾಸ್ತ್ರಾಣಿ ಮಾವಮಂಸ್ಥಾ ಧನುರ್ದೃಢಂ|
07053052c ಮಾವಮಂಸ್ಥಾ ಬಲಂ ಬಾಹ್ವೋರ್ಮಾವಮಂಸ್ಥಾ ಧನಂಜಯಂ||
ನನ್ನ ಅಸ್ತ್ರಗಳನ್ನು ಅವಮಾನಿಸಬೇಡ! ನನ್ನ ದೃಢ ಧನುಸ್ಸನ್ನು ಅವಮಾನಿಸಬೇಡ! ನನ್ನ ಬಾಹುಗಳ ಬಲವನ್ನು ಅವಮಾನಿಸಬೇಡ! ಈ ಧನಂಜಯನನ್ನು ಅವಮಾನಿಸಬೇಡ!
07053053a ಯಥಾ ಹಿ ಯಾತ್ವಾ ಸಂಗ್ರಾಮೇ ನ ಜೀಯೇ ವಿಜಯಾಮಿ ಚ|
07053053c ತೇನ ಸತ್ಯೇನ ಸಂಗ್ರಾಮೇ ಹತಂ ವಿದ್ಧಿ ಜಯದ್ರಥಂ||
ಸೋಲನ್ನಪ್ಪದೇ ವಿಜಯಿಯಾಗುವ ಹಾಗೆ ನಾನು ಸಂಗ್ರಾಮವನ್ನು ಪ್ರವೇಶಿಸುತ್ತೇನೆ. ಅದೇ ಸತ್ಯದಿಂದ ಸಂಗ್ರಾಮದಲ್ಲಿ ಜಯದ್ರಥನನ್ನು ಕೊಲ್ಲುತ್ತೇನೆ ಎಂದು ತಿಳಿ.
07053054a ಧ್ರುವಂ ವೈ ಬ್ರಾಹ್ಮಣೇ ಸತ್ಯಂ ಧ್ರುವಾ ಸಾಧುಷು ಸನ್ನತಿಃ|
07053054c ಶ್ರೀರ್ಧ್ರುವಾ ಚಾಪಿ ದಕ್ಷೇಷು ಧ್ರುವೋ ನಾರಾಯಣೇ ಜಯಃ||
ಬ್ರಾಹ್ಮಣರಲ್ಲಿ ಸತ್ಯವು ನಿಶ್ಚಿತವಾದುದು. ಸಾಧುಗಳಲ್ಲಿ ಸನ್ನತಿಯು ನಿಶ್ಚಿತವಾದುದು. ದಕ್ಷರಲ್ಲಿ ಸಂಪತ್ತು ನಿಶ್ಚಿತವಾದುದು. ಮತ್ತು ನಾರಾಯಣನಲ್ಲಿ ಜಯವು ನಿಶ್ಚಿತವಾದುದು.””
07053055 ಸಂಜಯ ಉವಾಚ|
07053055a ಏವಮುಕ್ತ್ವಾ ಹೃಷೀಕೇಶಂ ಸ್ವಯಮಾತ್ಮಾನಮಾತ್ಮನಾ|
07053055c ಸಂದಿದೇಶಾರ್ಜುನೋ ನರ್ದನ್ವಾಸವಿಃ ಕೇಶವಂ ಪ್ರಭುಂ||
ಸಂಜಯನು ಹೇಳಿದನು: “ಹೀಗೆ ಹೃಷೀಕೇಶನಿಗೆ ಮತ್ತು ಸ್ವಯಂ ತಾನೇ ತನಗೆ ಹೇಳಿಕೊಂಡು ವಾಸವಿ ಅರ್ಜುನನು ಗಾಢ ಧ್ವನಿಯಲ್ಲಿ ಮತ್ತೊಮ್ಮೆ ಪ್ರಭು ಕೇಶವನಿಗೆ ಹೇಳಿದನು:
07053056a ಯಥಾ ಪ್ರಭಾತಾಂ ರಜನೀಂ ಕಲ್ಪಿತಃ ಸ್ಯಾದ್ರಥೋ ಮಮ|
07053056c ತಥಾ ಕಾರ್ಯಂ ತ್ವಯಾ ಕೃಷ್ಣ ಕಾರ್ಯಂ ಹಿ ಮಹದುದ್ಯತಂ||
“ಕೃಷ್ಣ! ರಾತ್ರಿಯು ಕಳೆದು ಪ್ರಭಾತದಲ್ಲಿಯೇ ನನ್ನ ರಥವನ್ನು ಸಿದ್ಧಗೊಳಿಸಬೇಕು. ನಾವು ವಹಿಸಿಕೊಂಡಿರುವ ಕಾರ್ಯವು ಮಹತ್ತರವಾದುದು!””
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಪ್ರತಿಜ್ಞಾ ಪರ್ವಣಿ ಅರ್ಜುನವಾಕ್ಯೇ ತ್ರಿಪಂಚಾಶತ್ತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಪ್ರತಿಜ್ಞಾ ಪರ್ವದಲ್ಲಿ ಅರ್ಜುನವಾಕ್ಯ ಎನ್ನುವ ಐವತ್ಮೂರನೇ ಅಧ್ಯಾಯವು.