ದ್ರೋಣ ಪರ್ವ: ಘಟೋತ್ಕಚವಧ ಪರ್ವ
೧೩೬
ಅರ್ಜುನನು ಕೌರವ ಸೇನೆಯನ್ನು ಪಲಾಯನಗೊಳಿಸಿದುದು (೧-೧೯).
07136001 ಸಂಜಯ ಉವಾಚ|
07136001a ತತೋ ಯುಧಿಷ್ಠಿರಶ್ಚೈವ ಭೀಮಸೇನಶ್ಚ ಪಾಂಡವಃ|
07136001c ದ್ರೋಣಪುತ್ರಂ ಮಹಾರಾಜ ಸಮಂತಾತ್ಪರ್ಯವಾರಯನ್||
ಸಂಜಯನು ಹೇಳಿದನು: “ಮಹಾರಾಜ! ಆಗ ಯುಧಿಷ್ಠಿರನೂ ಪಾಂಡವ ಭೀಮಸೇನನೂ ದ್ರೋಣಪುತ್ರನನ್ನು ಎಲ್ಲಕಡೆಗಳಿಂದ ಮುತ್ತಿಗೆ ಹಾಕಿದರು.
07136002a ತತೋ ದುರ್ಯೋಧನೋ ರಾಜಾ ಭಾರದ್ವಾಜೇನ ಸಂವೃತಃ|
07136002c ಅಭ್ಯಯಾತ್ಪಾಂಡವಾನ್ಸಂಖ್ಯೇ ತತೋ ಯುದ್ಧಮವರ್ತತ|
07136002e ಘೋರರೂಪಂ ಮಹಾರಾಜ ಭೀರೂಣಾಂ ಭಯವರ್ಧನಂ||
ಆಗ ರಾಜಾ ದುರ್ಯೋಧನನು ಭಾರದ್ವಾಜನಿಂದ ಸುತ್ತುವರೆಯಲ್ಪಟ್ಟು ಪಾಂಡವರನ್ನು ಆಕ್ರಮಣಿಸಿದನು. ಮಹಾರಾಜ! ಆಗ ರಣದಲ್ಲಿ ಹೇಡಿಗಳ ಭಯವನ್ನು ಹೆಚ್ಚಿಸುವ ಘೋರರೂಪದ ಯುದ್ಧವು ನಡೆಯಿತು.
07136003a ಅಂಬಷ್ಠಾನ್ಮಾಲವಾನ್ವಂಗಾಂ ಶಿಬೀಂಸ್ತ್ರೈಗರ್ತಕಾನಪಿ|
07136003c ಪ್ರಾಹಿಣೋನ್ಮೃತ್ಯುಲೋಕಾಯ ಗಣಾನ್ಕ್ರುದ್ಧೋ ಯುಧಿಷ್ಠಿರಃ||
ಕ್ರುದ್ಧ ಯುಧಿಷ್ಠಿರನು ಅಂಬಷ್ಠರನ್ನೂ, ಮಾಲವರನ್ನೂ, ವಂಗರನ್ನೂ, ಶಿಬಿಗಳನ್ನೂ, ತೈಗರ್ತರ ಗಣಗಳನ್ನೂ ಮೃತ್ಯುಲೋಕಕ್ಕೆ ಕಳುಹಿಸಿದನು.
07136004a ಅಭೀಷಾಹಾಂ ಶೂರಸೇನಾನ್ ಕ್ಷತ್ರಿಯಾನ್ಯುದ್ಧದುರ್ಮದಾನ್|
07136004c ನಿಕೃತ್ಯ ಪೃಥಿವೀಂ ಚಕ್ರೇ ಭೀಮಃ ಶೋಣಿತಕರ್ದಮಾಂ||
ಭೀಮನು ಅಭೀಷಾಹರನ್ನೂ, ಶೂರಸೇನರನ್ನೂ, ಯುದ್ಧದುರ್ಮದ ಕ್ಷತ್ರಿಯರನ್ನೂ ಸಂಹರಿಸಿ ಪೃಥ್ವಿಯನ್ನು ರಕ್ತ ಮಾಂಸಗಳಿಂದ ತೋಯಿಸಿದನು.
07136005a ಯೌಧೇಯಾರಟ್ಟರಾಜನ್ಯಾನ್ಮದ್ರಕಾಂಶ್ಚ ಗಣಾನ್ಯುಧಿ|
07136005c ಪ್ರಾಹಿಣೋನ್ಮೃತ್ಯುಲೋಕಾಯ ಕಿರೀಟೀ ನಿಶಿತೈಃ ಶರೈಃ||
ಕಿರೀಟಿಯು ಯುದ್ಧದಲ್ಲಿ ನಿಶಿತ ಶರಗಳಿಂದ ಯೌಧೇಯರನ್ನೂ, ಅಟ್ಟರಾಜರನ್ನೂ, ಮತ್ತು ಮದ್ರಕ ಗಣಗಳನ್ನೂ ಮೃತ್ಯುಲೋಕಕ್ಕೆ ಕಳುಹಿಸಿದನು.
07136006a ಪ್ರಗಾಢಮಂಜೋಗತಿಭಿರ್ನಾರಾಚೈರಭಿಪೀಡಿತಾಃ|
07136006c ನಿಪೇತುರ್ದ್ವಿರದಾ ಭೂಮೌ ದ್ವಿಶೃಂಗಾ ಇವ ಪರ್ವತಾಃ||
ವೇಗವಾಗಿ ಹೋಗುತ್ತಿರುವ ನಾರಾಚಗಳಿಂದ ಗಾಡವಾಗಿ ಪೀಡಿತ ಆನೆಗಳು ಎರಡು ಶೃಂಗಗಳುಳ್ಳ ಪರ್ವತಗಳಂತೆ ಭೂಮಿಯ ಮೇಲೆ ಬಿದ್ದವು.
07136007a ನಿಕೃತ್ತೈರ್ಹಸ್ತಿಹಸ್ತೈಶ್ಚ ಲುಠಮಾನೈಸ್ತತಸ್ತತಃ|
07136007c ರರಾಜ ವಸುಧಾ ಕೀರ್ಣಾ ವಿಸರ್ಪದ್ಭಿರಿವೋರಗೈಃ||
ಕತ್ತರಿಸಲ್ಪಟ್ಟು ಅಲ್ಲಲ್ಲಿ ಬಿದ್ದು ವಿಲವಿಲ ಒದ್ದಾಡುತ್ತಿದ್ದ ಆನೆಗಳ ಸೊಂಡಿಲುಗಳಿಂದ ತುಂಬಿದ ರಣಭೂಮಿಯು ಹರಿದುಹೋಗುತ್ತಿದ್ದ ಸರ್ಪಗಳಿಂದ ತುಂಬಿಕೊಂಡಿದೆಯೋ ಎಂಬಂತೆ ಕಾಣುತ್ತಿತ್ತು.
07136008a ಕ್ಷಿಪ್ತೈಃ ಕನಕಚಿತ್ರೈಶ್ಚ ನೃಪಚ್ಚತ್ರೈಃ ಕ್ಷಿತಿರ್ಬಭೌ|
07136008c ದ್ಯೌರಿವಾದಿತ್ಯಚಂದ್ರಾದ್ಯೈರ್ಗ್ರಹೈಃ ಕೀರ್ಣಾ ಯುಗಕ್ಷಯೇ||
ತುಂಡಾಗಿ ಕೆಳಗೆ ಬಿದ್ದಿದ್ದ ಕನಕ ಚಿತ್ರಗಳಿಂದ ಅಲಂಕೃತಗೊಂಡಿದ್ದ ರಾಜರ ಚತ್ರಗಳಿಂದ ಭೂಮಿಯು ಯುಗಾಂತದಲ್ಲಿ ಸೂರ್ಯ ಚಂದ್ರ ಮತ್ತು ಇತರ ಗ್ರಹಗಳು ಚೆಲ್ಲಿದ ಆಕಾಶದಂತೆ ತೋರುತ್ತಿತ್ತು.
07136009a ಹತ ಪ್ರಹರತಾಭೀತಾ ವಿಧ್ಯತ ವ್ಯವಕೃಂತತ|
07136009c ಇತ್ಯಾಸೀತ್ತುಮುಲಃ ಶಬ್ದಃ ಶೋಣಾಶ್ವಸ್ಯ ರಥಂ ಪ್ರತಿ||
ಶೋಣಿತಾಶ್ವ ದ್ರೋಣನ ರಥದ ಬಳಿ “ಭಯವಿಲ್ಲದೇ ಸಂಹರಿಸಿ! ಹೊಡೆಯಿರಿ! ಬಾಣಗಳಿಂದ ಕತ್ತರಿಸಿರಿ!” ಎಂಬ ತುಮುಲ ಕೂಗುಗಳು ಕೇಳಿಬಂದವು.
07136010a ದ್ರೋಣಸ್ತು ಪರಮಕ್ರುದ್ಧೋ ವಾಯವ್ಯಾಸ್ತ್ರೇಣ ಸಮ್ಯುಗೇ|
07136010c ವ್ಯಧಮತ್ತಾನ್ಯಥಾ ವಾಯುರ್ಮೇಘಾನಿವ ದುರತ್ಯಯಃ||
ದ್ರೋಣನಾದರೋ ಸಂಯುಗದಲ್ಲಿ ಪರಮ ಕ್ರುದ್ಧನಾಗಿ ವಾಯವ್ಯಾಸ್ತ್ರದಿಂದ ಅಸಾಧ್ಯ ಚಂಡಮಾರುತವು ಮೇಘಗಳನ್ನು ಚದುರಿಸುವಂತೆ ಶತ್ರುಸೇನೆಯನ್ನು ಧ್ವಂಸಗೊಳಿಸಿದನು.
07136011a ತೇ ಹನ್ಯಮಾನಾ ದ್ರೋಣೇನ ಪಾಂಚಾಲಾಃ ಪ್ರಾದ್ರವನ್ಭಯಾತ್|
07136011c ಪಶ್ಯತೋ ಭೀಮಸೇನಸ್ಯ ಪಾರ್ಥಸ್ಯ ಚ ಮಹಾತ್ಮನಃ||
ಭೀಮಸೇನ ಮತ್ತು ಮಹಾತ್ಮ ಪಾರ್ಥರು ನೋಡುತ್ತಿದ್ದಂತೆಯೇ ದ್ರೋಣನಿಂದ ಸಂಹರಿಸಲ್ಪಡುತ್ತಿದ್ದ ಪಾಂಚಾಲರು ಭಯದಿಂದ ಪಲಾಯನಗೈದರು.
07136012a ತತಃ ಕಿರೀಟೀ ಭೀಮಶ್ಚ ಸಹಸಾ ಸಮ್ನ್ಯವರ್ತತಾಂ|
07136012c ಮಹತಾ ರಥವಂಶೇನ ಪರಿಗೃಹ್ಯ ಬಲಂ ತವ||
ಆಗ ತಕ್ಷಣವೇ ಕಿರೀಟೀ ಮತ್ತು ಭೀಮರು ದೊಡ್ಡ ರಥಸೈನ್ಯದೊಂದಿಗೆ ನಿನ್ನ ಸೇನೆಯನ್ನು ಹಿಡಿದು ಆಕ್ರಮಣಿಸಿದರು.
07136013a ಬೀಭತ್ಸುರ್ದಕ್ಷಿಣಂ ಪಾರ್ಶ್ವಮುತ್ತರಂ ತು ವೃಕೋದರಃ|
07136013c ಭಾರದ್ವಾಜಂ ಶರೌಘಾಭ್ಯಾಂ ಮಹದ್ಭ್ಯಾಮಭ್ಯವರ್ಷತಾಂ||
ಎಡಗಡೆಯಿಂದ ಬೀಭತ್ಸುವೂ ಬಲಗಡೆಯಿಂದ ವೃಕೋದರನೂ ಮಹಾ ಶರಸಮೂಹಗಳನ್ನು ಭಾರದ್ವಾಜನ ಮೇಲೆ ಸುರಿಸಿದರು.
07136014a ತೌ ತದಾ ಸೃಂಜಯಾಶ್ಚೈವ ಪಾಂಚಾಲಾಶ್ಚ ಮಹಾರಥಾಃ|
07136014c ಅನ್ವಗಚ್ಚನ್ಮಹಾರಾಜ ಮತ್ಸ್ಯಾಶ್ಚ ಸಹ ಸೋಮಕೈಃ||
ಮಹಾರಾಜ! ಆಗ ಅವರಿಬ್ಬರನ್ನೂ ಸೃಂಜಯರು, ಮಹಾರಥ ಪಾಂಚಾಲರು, ಸೋಮಕರೊಂದಿಗೆ ಮತ್ಸ್ಯರು ಅನುಸರಿಸಿ ಹೋದರು.
07136015a ತಥೈವ ತವ ಪುತ್ರಸ್ಯ ರಥೋದಾರಾಃ ಪ್ರಹಾರಿಣಃ|
07136015c ಮಹತ್ಯಾ ಸೇನಯಾ ಸಾರ್ಧಂ ಜಗ್ಮುರ್ದ್ರೋಣರಥಂ ಪ್ರತಿ||
ಹಾಗೆಯೇ ರಥೋದಾರ ಪ್ರಹಾರಿ ನಿನ್ನ ಪುತ್ರರೂ ಕೂಡ ಮಹಾ ಸೇನೆಯೊಂದಿಗೆ ದ್ರೋಣನ ರಥದ ಕಡೆ ಬಂದರು.
07136016a ತತಃ ಸಾ ಭರತೀ ಸೇನಾ ವಧ್ಯಮಾನಾ ಕಿರೀಟಿನಾ|
07136016c ತಮಸಾ ನಿದ್ರಯಾ ಚೈವ ಪುನರೇವ ವ್ಯದೀರ್ಯತ||
ಆಗ ಕಿರೀಟಿಯಿಂದ ಸಂಹರಿಸಲ್ಪಡುತ್ತಿದ್ದ ಆ ಭಾರತೀ ಸೇನೆಯು ನಿದ್ರೆ ಮತ್ತು ಕತ್ತಲೆಗಳಿಂದಾಗಿ ಪುನಃ ಭಗ್ನವಾಗಿ ಹೋಯಿತು.
07136017a ದ್ರೋಣೇನ ವಾರ್ಯಮಾಣಾಸ್ತೇ ಸ್ವಯಂ ತವ ಸುತೇನ ಚ|
07136017c ನ ಶಕ್ಯಂತೇ ಮಹಾರಾಜ ಯೋಧಾ ವಾರಯಿತುಂ ತದಾ||
ಮಹಾರಾಜ! ಓಡಿಹೋಗುತ್ತಿದ್ದವರನ್ನು ದ್ರೋಣ ಮತ್ತು ಸ್ವಯಂ ನಿನ್ನ ಮಗನು ತಡೆಯಲು ಪ್ರಯತ್ನಿಸಿದರೂ ಆ ಯೋಧರನ್ನು ತಡೆಯಲು ಅವರು ಶಕ್ಯರಾಗಲಿಲ್ಲ.
07136018a ಸಾ ಪಾಂಡುಪುತ್ರಸ್ಯ ಶರೈರ್ದಾರ್ಯಮಾಣಾ ಮಹಾಚಮೂಃ|
07136018c ತಮಸಾ ಸಂವೃತೇ ಲೋಕೇ ವ್ಯದ್ರವತ್ಸರ್ವತೋಮುಖೀ||
ಪಾಂಡುಪುತ್ರನ ಶರಗಳಿಂದ ಇರಿಯಲ್ಪಡುತ್ತಿದ್ದ ಆ ಮಹಾಸೇನೆಯು ಕತ್ತಲೆಯಿಂದ ಆವರಿಸಲ್ಪಟ್ಟಿದ್ದ ಆ ಲೋಕದಲ್ಲಿ ಸರ್ವತೋಮುಖಿಯಾಗಿ ಓಡಿಹೋಯಿತು.
07136019a ಉತ್ಸೃಜ್ಯ ಶತಶೋ ವಾಹಾಂಸ್ತತ್ರ ಕೇ ಚಿನ್ನರಾಧಿಪಾಃ|
07136019c ಪ್ರಾದ್ರವಂತ ಮಹಾರಾಜ ಭಯಾವಿಷ್ಟಾಃ ಸಮಂತತಃ||
ಮಹಾರಾಜ! ಕೆಲವು ನರಾಧಿಪರು ನೂರಾರು ವಾಹನಗಳನ್ನು ಅಲ್ಲಿಯೇ ಬಿಟ್ಟು ಭಯಾವಿಷ್ಟರಾಗಿ ಎಲ್ಲಕಡೆ ಓಡಿಹೋದರು.”
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಸಂಕುಲಯುದ್ಧೇ ಷಟ್ತ್ರಿಂಶಾಧಿಕಶತತಮೋಽಧ್ಯಾಯಃ ||
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಸಂಕುಲಯುದ್ಧ ಎನ್ನುವ ನೂರಾಮೂವತ್ತಾರನೇ ಅಧ್ಯಾಯವು.